ಭಾವ ಭೈರಾಗಿ

ಕವಿತೆ | ನೀನು

Published

on

 

ಸೆಯ ತನಕ
ಮುಪ್ಪಿನ ಲ್ಲಿ ಮುಗಿಯದ ತೂಕ
ಕನಸಿನಲ್ಲಿ ಕರೆಯದೆ ಬರುವುದು
ಕಾಯುತ್ತಲಿ‌ ಇರುವುದು
ಪ್ರೀತಿಯಲ್ಲಿ ಕೊಗುವುದು
ಬಡಿತದಲ್ಲಿ ತಿಳಿಸುವುದು
ಭಾವನೆಗಳ ಪಾತ್ರವನ್ನು

ಸಾಹಿತ್ಯದ ಸಂದೇಶದಲ್ಲಿ
ನಿನ್ನ ‌ಹುಡುಕಿ ಕೊಂಡು ಬರುವ
ಸಂಗಾತಿ ಮನದ ಶಾಂತಿ
ಪದ ಒಂದು ಧಮನಿ
ಕವಿತೆ ಮೌನ ನೀನು
‌‌ಬರೆಯುವ ಹೊಸ ರೀತಿ ನೀನು
ಬಿಳಿಯ ಹಾಳೆಯಲ್ಲಿ
ಸುಂದರ ಲೇಖನಿ ಬರೆಯುವ
ಸಾಹಿತ್ಯದ ಹೂವು ಕೊಂಚ ನೀನು

ಬದುಕಿನಲ್ಲಿ ನಾವಿಕ
ಕೆಲಸದಲ್ಲಿ ಸೇವಕ
ಪ್ರೀತಿ ಪ್ರೇಮದ ಮಾಲಿಕ
ಒಗ್ಗೂಡಿಸಿ ಬಾಳುವ ಸೈನಿಕ
ಎಷ್ಟೇ ಕಷ್ಟ ಬಂದರು ಹೊಳಪು ‌
ಬರುವ ನಕ್ಷತ್ರ ನೀನು

ಬೆಳಕಾಗಿ ಬರುವ
ಬಯಕೆಯ ತರುವ‌
ನಿನಗಾಗಿ ಕಾಯುವ
ಮನದಲ್ಲಿ ಕರಗುವ
‌‌ಬೆಳಕಿನ ಹುಳು‌ನೀನು
ಪ್ರಜ್ವಲಿಸುವ ದೀಪ ವಾಗಿ ಬಾ
ಭೂಮಿ ತಾಯಿಯ ಮಣ್ಣಿನ
ಮಗನಾಗಿ ಹುಟ್ಟು
ಅಸಿದು ಬಂದವರಿಗೆ
ಅನ್ನ ಹಾಕುವ ವ್ಯಕ್ತಿ ‌ಯಾಗು ನೀನು

ನಿನ್ನ ಗೆ ನೀನೇ ‌ಸಾಟಿ
ಬದುಕಿನಲ್ಲಿ ಚಾಟಿ
ನಿನ್ನ ಮಾತು ಬಲು‌ಗಾಟಿ
ಖಾಲಿಯಾಗುವುದು ಕವಿತೆ ಸಾಲಿನ‌‌ ಪದಗಳು
ಕಾಯುವುದು ನಿನ್ನ ಕೊಂಚ ಉತ್ತರಕ್ಕೆ
‌‌ಬೇಗ ಶರಣಗಿ
ಬದುಕಿನ ‌ದಿಕ್ಕನ್ನೇ ಬದಲಾಯಿಸು ನೀನು
ಬದಲಾಯಿಸು ನೀನು

ಚೈತ್ರ ಕುಮಾರಿ ಕೆ. ಎಂ
‌‌ಗೊಲ್ಲರಹಳ್ಳಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version