ಭಾವ ಭೈರಾಗಿ
ಕವಿತೆ | ರಿವಾಯತ (ಮೊಹರಂ ಪದ)
ಶರಣರು ಶಹೀದರಾದರು
ಯಝೀದ ಕುತಂತ್ರಕೆ
ಕರ್ಬಲ ಕಂಪಿಸಿತು
ಹಜರತ ಹುಸೇನರ ಬಲಿದಾನಕೆ
ನೆತ್ತರು ಹರಿಸಿದರು ನೆಲಕೆ
ಹಸುಗೂಸು ಅಸ್ಗರ ನೆತ್ತಿಹಾರಿದ್ದಿಲ್ಲ
ಮಮ್ಮಲ ಮರುಗಿತು ಭೂಮಿ ರಕ್ತ ಹೀರಲಿಲ್ಲ
ಕಿರುಚಿದರೂ ಗಂಟಲಿಗೆ ನೀರು ಸಿಗಲಿಲ್ಲ
ತಾಯಿಕರುಳಕಂಡು ಸೂರ್ಯಸ್ಥವಾಗಿತಲ್ಲ
ಹರಿಶಿಣ ಮೈಯ ಕಾಸೀಮ ನಡೆದ
ಕರ್ಬಲಕೆ ಜೀವ -ಜೀವದಾಕೆ ಕಬರಿಲ್ಲ
ಹಡೆದಾಕೆ ಅಪ್ಪಣೆ -ಕೈಹಿಡಿದಾಕೆ ಗಪ್ಪನೆ
ಧರ್ಮಯುದ್ಧಕೆ ಪ್ರಾಣ ಬಾಣಕೆ ನೆಟ್ಟು
ಮೈಯ ಹರಿಶಿಣ ಕೆಂಪಾತು ಮದುಮಗನ
ಬಿಟ್ಟ ಕಣ್ಣು ಬಿಟ್ಟಂಗ
ದೋ ರಕಾತ ನಮಾಜ ಯಝೀದ ಅವಾಜ
ಸಿಜದದಾಗ ಕತ್ತಿ ಹಿರಿದನು ಹಜರತ ಹುಸೇನರಿಗೆ
ಪ್ರಾಣ ಬಿಟ್ಟನು ಯಝೀದ ಜನರ ಕೈಯಾಗ
ಶರಣರು ಜೀವಂತ ಜನರ ಮನಸಿನಾಗ.
-ಸನಾವುಲ್ಲ ನವಿಲೇಹಾಳ್
ಸುದ್ದಿದಿನ.ಕಾಂ|ವಾಟ್ಸಾಪ್|9986715401