ಭಾವ ಭೈರಾಗಿ
ಕವಿತೆ | ಸ್ವತ್ತು ಈ ಹೊತ್ತು
- ಗಂಗಾಧರ ಬಿ ಎಲ್ ನಿಟ್ಟೂರ್
ಗತ್ತೋ ಗತ್ತು ಕೊಡಲು ಇ ಸ್ವತ್ತು
ಹೋದಂತೆ ಆಡುವರು ತಮ್ಮಪ್ಪನ ಸ್ವತ್ತು
ದುಡ್ಡು ಕೀಳಲು ನಾನಾ ಮಸಲತ್ತು.
ಕಾಡಿದೆ ಮನುಕುಲಕೆ ಮಾಯಾವಿ ವಿಪತ್ತು
ದುಡಿದವರ ಬಾಯಿಗಿಲ್ಲ ಕೈಗೆ ಬಂದ ತುತ್ತು
ಕುಳಿತಿಹನು ಶ್ರಮಿಕ ಕೈ ಹೊತ್ತು
ನೆತ್ತಿ ಉರಿ ಆಡಳಿತಕ್ಕೇನು ಗೊತ್ತು ?
ವೃಥಾ ಒಡ್ಡಿದರೆ ಆಪತ್ತು ನೌಕರಿಗೆ ಕುತ್ತು
ರೊಚ್ಚಿಗೆಬ್ಬಿಸಲು ಗೂಸಾ ಗ್ಯಾರೆಂಟಿ ಬಿತ್ತು
ರುಚಿಸಬೇಕೇ ನಿಷ್ಠೆಯ ತಾಕತ್ತು !
ಮಧ್ಯ ಪ್ರವೇಶಿಸಲಿ ಇಲಾಖೆ ಎಚ್ಚೆತ್ತು
ತೋರಲಿ ಕಾಳಜಿಯ ಕಸರತ್ತು
ನಾಯಕರ ಕಳಕಳಿಗೆ ತುರ್ತು ಈ ಹೊತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243