ಭಾವ ಭೈರಾಗಿ
ಕವಿತೆ | ಮನದಲೆ ಬೆಂದು ಬಡವಾದೆ ಏಕೆ?
ನುಂಗಿ ನೀರು ಕುಡಿವ
ರಾಜಕಾರಣಿಗಳ ಕಂಡು ಕಲಿಯಬಾರದಿತ್ತೇ?
ನುಂಗದೆ ನೀರು ಕುಡಿದು ಏಕೆ ದೂರಹೋದೆ
ಬಡವರ ಬಂಧುವಾದೆ ನೀನೇಕೆ ಬೆಂದುಹೋದೆ
ಸದ್ಗುಣ ಸಂಪನ್ನನಾಗಿ
ಸಂಪತ್ತು ಗಳಿಸಿ
ಸದ್ದು ಮಾಡದೆ ಎದ್ದು ಹೋದೆ ಏಕೆ?
ಹಗರಣವ ಹಂಚಿಕೊಳ್ಳದೆ
ಮನದಲೆ ಬೆಂದು ಬಡವಾದೆ ಏಕೆ?
ಹಲವರ ಕಣ್ಣೀರೊರೆಸಿದ ನೀನೇ
ಎಲ್ಲರ ಕಣ್ಣೀರ ಕೋಡಿ ಹರಿಸಿದೆ ಏಕೆ?
ಹವಾಲ, ಐಟಿಗಳ ಗಂಧವರಿಯದ ನನಗೆ
ನೀನು ಹೋದ ಬಗೆಯ ಕಂಡು
ನನಗೇಕೋ ಕೋಪ ಬರುತಿದೆ, ಸಿದ್ದಾರ್ಥ
– ಬಿ ಆರ್ ಮಹಾಲಕ್ಷ್ಮಿ ರಾಜಣ್ಣ
ಮೇಲು ಹುಲುವತ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243