ಭಾವ ಭೈರಾಗಿ

ಕವಿತೆ | ಇದರ ಮರ್ಮವೇನೆಂದು ಹೇಳಬಲ್ಲಿರಾ ?

Published

on

 

ಕ್ಷಿಯೊಂದನ್ನ ಕಣ್ಣುಗಳು ದಿಟ್ಟಿಸಿ ನೋಡುವಾಗ
ಮನಸ್ಸಿನೊಳಗೆ ಗಹನವಾದೊಂದು ವಿಷಯ ಆವರಿಸಿರಲು
ಆ ಪಕ್ಷಿಯು ಇರುವಲ್ಲೇ ಮಾಯವಾಗಿತ್ತು.

ತಪ್ಪಿಸಿಕೊಂಡು ಓಡೋಡಿ ಬರುವಾಗ ಭೂತವೊಂದು
ಥಟ್ಟನೆ ಕಣ್ಣೆದುರಿಗೆ ಬಂದು ನಿಂತಾಗ
ಭಯಭೀತವಾದ ಮನಸ್ಸಿಗೆ ಭೂತ ಕಾಣಿಸದಂತಾಯಿತ್ತು.

ಹಸಿದ ಹೆಬ್ಬುಲಿಗೆ ನವಜಾತ ಕರುವೊಂದು ಸಿಲುಕಿಕೊಂಡಾಗ
ಕರುವಿನ ಮುಗ್ಧತೆಯನ್ನ ಕಂಡ ಹೆಬ್ಬುಲಿಗೆ
ತನ್ನ ಹಸಿವಿನ ಅರಿವೇ ಇಲ್ಲದಂತಾಯಿತ್ತು.

ಹಸಿವೆಯಿಂದ ಕಂದಮ್ಮವೊಂದು ಎಡೆಬಿಡದೆ ಅಳುತಿರಲು
ತನ್ನ ಮೊಲೆವಾಲು ಬತ್ತಿಹೋಗಿರುವುದ ಕಂಡ ತಾಯಿಯ
ನಿತ್ಯದ ಜೋಗುಳ ಹಾಡಿಗೆ ಕಂದಮ್ಮನ ಹಸಿವು ಮಾಯವಾಗಿತ್ತು.

ತನ್ನ ಸೌಂದರ್ಯ, ಸುವಾಸನೆಯಿಂದ ಎಲ್ಲರನು ಆಕರ್ಷಿಸುತ್ತಿರಲು
ಪುಷ್ಪವೊಂದು ತನ್ನ ದುರ್ಬಲತೆಯ ಬಗ್ಗೆ ಚಿಂತಿಸುವಾಗ
ಅದರ ದುರ್ಬಲತೆಯೇ ಪುಷ್ಪವನ್ನ ಅವಿನಾಶವಾಗಿಸಿತ್ತು.

ತ್ರಿನೇಶ್ವರ್
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version