ಭಾವ ಭೈರಾಗಿ
ಕವಿತೆ | ಒಡಲ ಕಿಚ್ಚು
- ಜರೀನಾ.ಬಿ.ಎನ್ ನವಿಲೇಹಾಳ್
ಧರ್ಮ ಯಾವುದಾದರೇನು
ತಾಯಿ ಮಡಿಲು ಮೊದಲಿಲ್ಲಿ
ಕರ್ಮಧಾತ ಕೊಟ್ಟ ಜನನಿ
ಒಡಲ ಕಿಚ್ಚು ಸುಡದೆ ಬಿಡದು
ರಾಜಕೀಯ ಕುತಂತ್ರದಲ್ಲಿ
ಅತಂತ್ರ ತುಂಬಿ ಕುಣಿದಿದೆ
ಮುಸ್ಲೀಮ್ ಉಗ್ರ ಧರ್ಮವೆಂದು
ಹಗೆತನವು ಹರಡಿದೆ
ಯಾರದೊಬ್ಬರ ತಪ್ಪಿಗಾಗಿ
ಸರ್ವರೊಬ್ಬರ ಕುಣಿಕೆಯಿಲ್ಲಿ
ಕಾಣದಿರುವ ಕೈಗಳಿಂದ
ಜನರ ಮರಣ ಹೋಮವಿಲ್ಲಿ
ಮುಂಬೈ,ಆಗ್ರ,ಅಯೋಧ್ಯೆಯೆಲ್ಲ
ತಾಯಿ ದೇಹದಂಗಗಳು
ಸುಟ್ಟೊಡನೆ ಛಿದ್ರ-ಛಿದ್ರ
ಹೆತ್ತ ತಾಯಿ ಪ್ರೇಮದೊಡಲು
ಓ ನನ್ನ ಬಾಂಧವ ಕೈಯ ಮುಗಿದು ಬೇಡುವೆ
ಬೇಡ ರಕ್ತಧೋಕುಳಿ
ಗೂಡಿನಲ್ಲೇ ಬೀಡು ಬಿಟ್ಟು
ನಾಡ ಕಟ್ಟ ಬಯಸುವ
ನನ್ನದೊಂದು ಕಳಕಳಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243