ಭಾವ ಭೈರಾಗಿ

ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

Published

on

  • ನೇತ್ರಾವತಿ ಸಿ.ಎಂ (ನೆಲ್ಲಿಕಟ್ಟೆ)

ಕಾದಂಬರಿ :ಸ್ವಪ್ನದಲ್ಲಿ ಸೊರಗಿದ ಪ್ರೀತಿ
ಲೇಖಕ : ಶ್ರೀಧರ್(ಕೆ. ಸಿರಿ)


ಆತ್ಮೀಯ ಗೆಳೆಯರು ಅದ ಕೆ.ಶ್ರೀಧರ್(ಕೆ. ಸಿರಿ)ರಚಿಸಿದ “ಸ್ವಪ್ನದಲ್ಲಿ ಸೊರಗಿದ ಪ್ರೀತಿ” ಅದ್ಭುತ ಶೀರ್ಷಿಕೆಯಿಂದಲೇ ಎಲ್ಲರ ಕಣ್ಮನ ಸೆಳೆಯುವ, ತಲ್ಲಣಗೊಂಡ ಮನಸ್ಸೊಂದರ ಪ್ರಾಮಾಣಿಕ ಪ್ರೀತಿ ಅನಾವರಣಗೊಂಡಿದೆ.ಈ ಪುಸ್ತಕದಲ್ಲಿ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುವ ಮತ್ತೊಂದು ವಸ್ತುವೆಂದರೆ ಪ್ರೇಮ !.

ಈ ಪ್ರೇಮವು ರಮ್ಯವಾಗಿಯೂ ಇರದೆ ವಿರಹವನ್ನು ಅಲ್ಪವಿರಾಮವನ್ನು ಕಾಣುತ್ತದೆ.ಗುರಿ ಮತ್ತು ಪ್ರೀತಿ ಎರಡರ ಪ್ರಾಮುಖ್ಯತೆಯನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತನ್ನದೇ ಭಾಷೆಯನ್ನು ಇಲ್ಲಿ ಬಿಂಬಿಸಿದ್ದಾರೆ. ಹದಿಹರೆಯದಲ್ಲಿ ಹುಟ್ಟಿದ ಪ್ರೀತಿಯು ತನ್ನ ಜೀವನದ ಗುರಿಯನ್ನು ಬದಲಾಯಿಸಿ ಬಿಟ್ಟಿದೆ.

ಇಲ್ಲಿ ಪ್ರೀತಿ ಮತ್ತು ಪ್ರೇಮ ಎನ್ನುವ ಹೆಸರಿನಿಂದ ವ್ಯಕ್ತವಾದ ವ್ಯಕ್ತಿತ್ವಗಳು, ಪ್ರೀತಿ ಮತ್ತು ಪ್ರೇಮ್ ಎರಡು ಹೃದಯಗಳಲ್ಲಿ ಹುಟ್ಟಿದ ಪ್ರೀತಿಯು, ಪ್ರೀತಿ ತನ್ನ ಪ್ರೀತಿಯನ್ನು ಪ್ರೇಮದೊಂದಿಗೆ ವ್ಯಕ್ತಪಡಿಸುವ ಪರಿಯೂ ಇಲ್ಲಿ ಅವಳ ಹುಚ್ಚುಮನಸ್ಸಿನ ಸ್ವಚ್ಛ ಪ್ರೀತಿಯ ಹಿಂದೆ ಬಿದ್ದು ಅವಳ ಜೀವನವನ್ನೆಲ್ಲಾ ಏಳು ವರ್ಷಗಳ ಪ್ರೀತಿಯ ಕಾಯುವಲ್ಲಿ ಜೀವನ ಗುರಿಯನ್ನೇ ಮರೆತು ಪ್ರೀತಿಯ ಜೀವನದ ಮುಖ್ಯವೆಂದು ಪ್ರೇಮ ಪ್ರೀತಿಗೆ ಹಗಲು-ಇರುಳು ಮುಗ್ಧ ಮನಸ್ಸಿನ ಪೆದ್ದು ಹುಡುಗಿ ತನ್ನ ಆಸೆ ಆಕಾಂಕ್ಷೆ ಪ್ರೇಮ್ ಅವನ ಪ್ರೀತಿಗೆ ಅವನಿಗೆ ಪರಿಪರಿಯಾಗಿ ಹಂಬಲಿಸುವ ಪ್ರೀತಿ ಒಂದು ಕಡೆಯಾದರೆ.

ಪ್ರೇಮ ಕಷ್ಟದಾ ಕುಟುಂಬದಲ್ಲಿ ಬೆಳೆಯುತ್ತಿದ್ದ. ಹುಡುಗ ತನ್ನ ತಂದೆ-ತಾಯಿಯ ಜೀವನ ನಡೆಸುವ ಒಂದು ಹೊತ್ತಿನ ತುತ್ತಿಗೆ ಶ್ರಮಪಡುವ ತಂದೆತಾಯಿಯನ್ನು ಪ್ರತಿದಿನ ನೋಡುತ್ತಿದ್ದ. ಪ್ರೇಮ್ ತಾನು ಜೀವನದಲ್ಲಿ ಓದಿ ಕುಟುಂಬವನ್ನು ನಡೆಸುವ ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಛಲ ಹೊಂದಿದ್ದ ಹುಡುಗ. ಪ್ರೀತಿ ತನ್ನ ಪ್ರೇಮ್ ಗೆ ಪ್ರೀತಿಯ ಬಗ್ಗೆ ವ್ಯಕ್ತಪಡಿಸಿದಾಗ, ಪ್ರೇಮ್ ನಲ್ಲಿದ್ದ ಭಾವನೆಗಳು, ಪ್ರೀತಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ.

ಪ್ರೀತಿಯನ್ನು ನಿಂದಿಸುತ್ತಾನೆ. ಅಪ್ಪ ಹೇಳಿದ ಮಾತು ಮನಸ್ಸಿನಲ್ಲಿ ಬೆಂಬಿಡದೆ ಕಾಡಿದಾಗ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಎನ್ನುವ ಯೋಚನೆಯಲ್ಲಿ ತೊಡಗಿಕೊಂಡವನು.
ಮನುಷ್ಯ ಭಾವನೆಗಳ ಜೀವಿ ಭಾವನೆಗಳು ಇಲ್ಲದೆ ಮನುಷ್ಯನು ಇರಲಾರ ಪ್ರೀತಿಯು ಜೀವನದ ಬಹು ಮುಖ್ಯವಾದ ಅಂಶವಾಗಿದೆ.

ಇದನ್ನೂ ಓದಿ | ಆನೆಗಳು ಓಡೋದನ್ನು, ನಡೆಯೋದನ್ನ ನೋಡಿದ್ದೇವೆ..! ಮಲಗೋದು ಹೇಗೆ? ಇಲ್ಲಿದೆ ಅಪರೂಪದ ಚಿತ್ರ..!

ಆನೆಗಳು ಓಡೋದನ್ನು, ನಡೆಯೋದನ್ನ ನೋಡಿದ್ದೇವೆ..! ಮಲಗೋದು ಹೇಗೆ? ಇಲ್ಲಿದೆ ಅಪರೂಪದ ಚಿತ್ರ..!

ಇಲ್ಲಿ ಪ್ರೇಮ್ ವಿದ್ಯಾಭ್ಯಾಸ ಮುಗಿಸಿ ಅಧಿಕಾರದೊಂದಿಗೆ ಪ್ರೀತಿಯನ್ನು, ಪ್ರೀತಿಗೆ ಹೇಳಿಕೊಳ್ಳಲು ಕುಟುಂಬದೊಂದಿಗೆ ಅವಳನ್ನು ಭೇಟಿ ಮಾಡಲು ಹೋದಾಗ ನಿಜಕ್ಕೂ ಕಾದಂಬರಿ ಓದುಗರ ಮನಸಲ್ಲಿ ಮೌನವು ಆವರಿಸುತ್ತದೆ. ತನ್ನದೇ ಪ್ರೀತಿಯನ್ನು ವ್ಯಕ್ತಪಡಿಸಲಾಗದೆ, ಗುರಿಯ ಕಡೆಗೆ ಹೊತ್ತು ನೀಡಿದ್ದ ಪ್ರೇಮ್ ಅಂದು ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಪರಿ. ವರ್ಷಗಳಿಂದ ಪ್ರೇಮ್ ಕಾಯುತ್ತಿದ್ದ ಪ್ರೀತಿಯು ಅವನ ನೆನಪಿನಲ್ಲಿ ಪ್ರಾಣತ್ಯಾಗ ಮಾಡುತ್ತಾಳೆ.

ಪ್ರೇಮ್ ತನ್ನ ಪ್ರೀತಿಯನ್ನು ಕಳೆದುಕೊಂಡ ಮೇಲೆ ಜೀವನದ ದಿಕ್ಕಿ ಬದಲಾದ ಹಾಗೆ ಪರಿಪರಿಸುತ್ತನೆ . ಈ ಜಗದ ನಿಯಮವೇ ಹಾಗೆ ಸತ್ತುಹೋದವರು ನೆನಪುಗಳು ಮಾತ್ರ ಜೀವನವನ್ನು ಕಟ್ಟಿಕೊಳ್ಳುವುದು ಹಾಗೆಯೇ ಪ್ರೇಮ್ ಪಾರ್ವತಿಯೊಂದಿಗೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲುಇಡುವುದರ ಮೂಲಕ ಪ್ರೀತಿಯನ್ನು ಪಾರ್ವತಿಯ ರೂಪದಲ್ಲಿ ನೋಡುತ್ತಾ ಜೀವಿಸುತ್ತಾನೆ.

ಒಟ್ಟಾರೆ ಈ ಸ್ವಪ್ನದಲ್ಲಿ ಸೊರಗಿದ ಪ್ರೀತಿ ಇತ್ತೀಚಿನ ಹದಿಹರೆಯದ ಯುವಮನಸ್ಸುಗಳು ಗುರಿ ಆದರ್ಶವನ್ನು ಕೈಗೆತ್ತಿಕೊಂಡರೆ ಏನು ಬೇಕಾದರೂ ನಿಶ್ಚಲದಿಂದ ಸಾಧಿಸಬಹುದು ಎಂಬುದನ್ನು ಕೆ ಸಿರಿ ಅವರು ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version