Connect with us

ದಿನದ ಸುದ್ದಿ

ಆನೆಗಳು ಓಡೋದನ್ನು, ನಡೆಯೋದನ್ನ ನೋಡಿದ್ದೇವೆ..! ಮಲಗೋದು ಹೇಗೆ? ಇಲ್ಲಿದೆ ಅಪರೂಪದ ಚಿತ್ರ..!

Published

on

  • ಜಿರೊಟುಜೆನ್ ಶಾರದಾ

15 ಆನೆಗಳಿರುವ ಏಶಿಯನ್ ಆನೆ (ಏಶಿಯಾಟಿಕ್ ಎಲಿಫಂಟ್, ಬದುಕುಳಿದಿರುವ ಜೀನಸ್ ಎಲಿಫಸ್ ತಳಿ ) ತಂಡ ಸುಮಾರು 500 ಕಿಮೀ ಕ್ರಮಿಸಿದ ಮೇಲೆ ಆರಾಮಾಗಿ ವಿಶ್ರಮಿಸುತ್ತಿರುವ ಚಿತ್ರವನ್ನು ,ವಿಡಿಯೋಗಳನ್ನು ಚೀನಾ ಇತ್ತೀಚೆಗೆ ಬಿಡುಗಡೆ ಮಾಡಿದೆ. ಕಳೆದೊಂದು ವಾರದಿಂದ ಚೀನಾ ಸೊಶಿಯಲ್ ಮಿಡಿಯಾ ತುಂಬೆಲ್ಲಾ ವಿಶ್ವದ ಗಮನ ಸೆಳೆದಿರುವ ಈ ಆನೆಗಳದ್ದೇ ಸುದ್ದಿ.

ಬಿಬಿಸಿ ನ್ಯೂಸ್ , ದಿ ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ವಿಶ್ವ ಮಾಧ್ಯಮ ಈ ಆನೆಗಳ ವರದಿ ಮಾಡಿವೆ. “ಅಲೆದಾಡುವ ಆನೆಗಳು” ಎಂದು ಚೀನಾ ಜನತೆ ಇದನ್ನು ಹೆಸರಿಸಿದ್ದು ಇಲ್ಲಿನ ಸರಕಾರ ಈ ಆನೆಗಳ ರಕ್ಷಣೆಗೆ 500 ಜನರನ್ನು 14 ದ್ರೋಣ್ ಕ್ಯಾಮೆರಾಗಳನ್ನು ನೇಮಿಸಿದೆ.

ಈ ರೀತಿಯ ಆನೆ ಹಿಂಡೊಂದು ಮೊದಲ ಬಾರಿ ಸತತ 15 ತಿಂಗಳು ಐದನೂರು ಕಿಮಿ ಕ್ರಮಿಸಿದ್ದನ್ನು ಚೀನಾ ದಾಖಲು ಮಾಡಿದೆ. ಸಾಮಾನ್ಯವಾಗಿ ಆನೆಗಳು ತಾವಿರುವ ಪ್ರದೇಶದಿಂದ ಹೊರ ಹೋಗುವುದು ಕಡಿಮೆ. ಎಲ್ಲಿಂದ ಪ್ರಯಾಣವನ್ನು ಈ ಆನೆಗಳು ಆರಂಭಿಸಿದ್ದವೋ ಗೊತ್ತಿಲ್ಲ (ಒಂದು ಮಾಹಿತಿ ಪ್ರಕಾರ ಲಾವೊಸ್/ಮ್ಯಾನ್ಮಾರ್ -ಚೀನಾ ಗಡಿಯಿಂದ ಹೊರಟಿರಬಹುದು ಎಂಬುದು) ಆದರೆ ಜಿಯಾಂಗ್ ಪಟ್ಟಣ ಬಳಿಯ ಹಳ್ಳಿಯೊಂದರ ಅರಣ್ಯ ಪ್ರದೇಶದಲ್ಲಿ ಈ ಹಿಂಡು ಮಲಗಿ ವಿಶ್ರಾಂತಿ ಪಡೆದಿದೆ.

ಈ ಪ್ರದೇಶದಲ್ಲಿ ವಿಪರೀತ ಮಳೆ ಇದ್ದು, ಮಳೆ ನಿಂತ ಬಳಿಕ ನಿದ್ದೆಗೆ ಮೊರೆ ಹೋಗಿವೆ. ಸಾಮಾನ್ಯವಾಗಿ ಆನೆಗಳನ್ನು ಕಾಲೇಜಿಗೆ ಹೋಗುವ ಹುಡುಗರಿಗೆ ಹೊಲಿಸಲಾಗುತ್ತದೆ. ಸೂರ್ಯೋದಯದ ವೇಳೆ ನಿದ್ದೆ ಮಾಡುವ ಇವುಗಳು ಸಾಯಂಕಾಲದ ಹೊತ್ತಿಗೆ ಬ್ರೆಕ್ ಪಾಸ್ಟ್, ಮಧ್ಯಾಹ್ನದ ಊಟ’ ಎಲ್ಲವನ್ನು “ಬ್ರಂಚ್” ರೂಪದಲ್ಲಿ ಒಟ್ಟಿಗೆ ಮುಗಿಸಿ ರಾತ್ರಿ ಅಂಡಲೆಯುತ್ತವೆ.

ಅಲೆದಾಡುವ ಆನೆಗಳ ಈ ಹಿಂಡಿನಲ್ಲಿ ಒಟ್ಟು 15 ಆನೆಗಳಿದ್ದು ಮೂರು ಮರಿ ಆನೆಗಳು. ಒಂದು ಗಂಡು ಆನೆ ಮಾತ್ರ ಗುಂಪಿನಿಂದ 4 ಕಿಮಿ ಮುಂದೆ ಇದ್ದು ಗುಂಪಿನ ಉಸ್ತುವಾರಿ ಹೊತ್ತಿದೆ ಎಂದು ಯುನಾನ್ ಅರಣ್ಯ ಅಗ್ನಿಶಾಮಕದಳ ತಿಳಿಸಿದೆ. ದಟ್ಟ ಅರಣ್ಯ ಪ್ರದೇಶ, ಹಳ್ಳಿ, ಗುಡ್ಡಗಾಡು ಪಟ್ಟಣಗಳನ್ನು ಕ್ರಮಿಸಿ ಹೋಗುವ ಇವುಗಳು ರಸ್ತೆ ದಾಟುವಾಗ ಚೀನಾ ಸರಕಾರ ಸಂಪೂರ್ಣ ರಕ್ಷಣೆ ನೀಡಿದೆ. ತಾವು ನಡೆಸಿದ ಪರೇಡ್ ವೇಳೆ ಈ ಆನೆಗಳು ಮಿಲಿಯನ್ ಡಾಲರ್ ಮೌಲ್ಯದ ಆಹಾರ ಧಾನ್ಯಗಳನ್ನು ತಿಂದು ಮುಗಿಸಿವೆ.

ಕಬ್ಬು ಮತ್ತು ಆಲ್ಕೊಹಾಲ್ ನ ಮತ್ತು-ಗಮ್ಮತ್ತಿನ ಈ ಆನೆಗಳ ಆಟಾಟೋಪಕ್ಕೆ ಈಗ ಎಲ್ಲಿಲ್ಲದ ಪ್ರಚಾರ. ಶೆಹನ್ ಶಾ ಸ್ಟೈಲ್ ನಲ್ಲಿ ಪಟ್ಟಣಕ್ಕೆ ಬರುವ ಈ ಆನೆಗಳು ಕಟ್ಟಡಗಳನ್ನು ಗುಮ್ಮಿ ದಾಂಧಲೆ ಮಾಡಿವೆ. ಸೊಂಡಿಲುಗಳನ್ನು ಬಾಗಿಲು ಮತ್ತು ಕಿಟಕಿಯೊಳಗೆ ತೂರಿಸಿವೆ. ಜನವಸತಿ ತುಂಬಾ ಇರುವ ತುನ್ಮಿಂಗ್ ನಗರಕ್ಕೂ ಈ ಆನೆಗಳು ಭೇಟಿ ನೀಡಿವೆ.

ಮನುಷ್ಯ ನಿರ್ಮಿತ ನಗರ ಪ್ರದೇಶದ ಗಟರ್ ನಲ್ಲಿ ಬಿದ್ದ ಮರಿ ಆನೆಯನ್ನು ತಾಯಿ ಆನೆ ಎತ್ತಿದ್ದು ಈಗ ಚೀನಾ ಸೊಶಿಯಲ್ ಮಿಡಿಯಾ ತುಂಬ ವೈರಲ್. ಜನರಿಗೆ ಪುಳಕ, ತಳಮಳ.
ಆನೆಗಳು ಬರುವ ದಾರಿಯಲ್ಲಿ ಜನ ಮೆಕ್ಕೆಜೋಳ, ಬಾಳೆಹಣ್ಣು ಮತ್ತು ಅನಾನಸು ಇಟ್ಟಿದ್ದಾರೆ. ಮೊದಲ ಎರಡನ್ನು ಮುಗಿಸಿರುವ ಆನೆಗಳು ಕೊನೆಯದನ್ನು ಮೂಸಿಯೂ ನೋಡಿಲ್ಲ.

ಆಲ್ಕೊಹಾಲ್ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸಿರುವ ಇವು ಹಳ್ಳಿಗಳು ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಆಲ್ಕೊಹಾಲ್ ತುಂಬಿಸಿರುವ ದೊಡ್ಡ ದೊಡ್ಡ ಬ್ಯಾರಲ್ ಗಳಿಟ್ಟ ಪ್ರದೇಶಕ್ಕೆ ಬಂದು ಗಡದ್ದಾಗಿ ಕುಡಿದು, ತೇಕಿವೆ. ಮರಿ ಆನೆಯೊಂದು ಗಂಟಲು ಪೂರ್ತಿ ಕುಡಿದು ಥೇಟ್ ಮನುಷ್ಯರಂತೆ ತೂರಾಡಿ ದಾರಿ ತಪ್ಪಿಸಿಕೊಂಡು ಮತ್ತು ಪೂರ್ತಿ ಇಳಿದ ಮೇಲೆ ಮಾರನೆ ದಿನ ತನ್ನ ತಂಡವನ್ನು ಸೇರಿದೆ.

ಚೀನಾ ಸುದ್ದಿ ವಾಹಿನಿಗಳು ಈ ಆನೆಗಳಿಗಾಗಿ ಸ್ಪೆಶಲ್ ಬುಲೆಟಿನ್ ಮಾಡಿವೆ. ಆರಂಭದಲ್ಲಿ ಆನೆಗಳನ್ನು ನೈರುತ್ಯದೆಡೆಗೆ ತಿರುಗಿಸುವ ವಿಫಲ ಯತ್ನ ನಡೆಯಿತು. ಆದರೆ ಕೊನೆಯಲ್ಲಿ 500 ಕಿಮೀ ಕ್ರಮಿಸಿದ ಬಳಿಕ ಬಹುಶ: ತಾವು ಬಂದಂಥ ಮೂಲ ನೈರುತ್ಯ ಯುನಾನ್ ಪ್ರಾಂತ್ಯದ ಕ್ಷುವಾನ್ಬನ್ನಾದ ಮೆಂಗ್ಯಾಂಜಿ ಸಂರಕ್ಷಿತ ಉದ್ಯಾನವನಕ್ಕೆ ಮರಳಬಹುದು ಎಂಬುದು ಇಲ್ಲಿನ ಅಧಿಕಾರಿಗಳ ಅಭಿಪ್ರಾಯ. ಈ ತಳಿ (ಏಶಿಯನ್ ಆನೆ) ಭಾರತೀಯ ಉಪಖಂಡ ಮತ್ತು ಆಗ್ನೇಯ ಏಶಿಯಾದಲ್ಲಿ ಕಂಡು ಬರುವ ಸಂರಕ್ಷಿತ ಪ್ರಾಣಿ. ಪಶ್ಚಿಮದಲ್ಲಿ ಭಾರತ ಉತ್ತರದಲ್ಲಿ ನೇಪಾಳ, ದಕ್ಷಿಣದಲ್ಲಿ ಸುಮಾತ್ರಾ, ಪೂರ್ವದಲ್ಲಿ ಬೊರ್ನಿಯೊದಲ್ಲಿ ಇವು ಹರಡಿಕೊಂಡಿವೆ. ಜೀವಿತಾವಧಿ 48 ವರ್ಷ. ಗಂಡು ಆನೆ 4000 ಕೆಜಿ ಹೆಣ್ಣು ಆನೆ 2700 ಕೆಜಿ ಇರುತ್ತದೆ.

ವಿಶ್ವದ ಗಮನ ಸೆಳೆದಿರುವ ಈ ಆನೆಗಳು ಯಾವಾಗ ಮತ್ತು ಏಕೆ ಈ ರೀತಿಯ ಟ್ರೆಕ್ಕಿಂಗ್ ಗೆ ಇಳಿದಿರಬಹುದು ಎಂಬುದು ಈಗಲೂ ನಿಗೂಢ. ಅನನುಭವಿ ಆನೆಯೇನಾದರೂ ಹಿಂಡಿನ ನೇತೃತ್ವ ವಹಿಸಿದ್ದರಿಂದ ಈ ರೀತಿ ಆಗಿರಬಹುದೇ ಅಥವಾ ವಾಸಿಸಲು ಬೇರೆಯದೇ ಮನೆ ಹುಡುಕುವ ಯೋಚನೆ ಈ ಆನೆಗಳಿಗೆ ಬಂದಿರಬಹುದೇ ಎಂಬುದು ತಜ್ಞರನ್ನು ಕಾಡಿದೆ. ವಿಜ್ಞಾನಿಗಳ ಪ್ರಕಾರ ಆನೆಗಳು ಇಷ್ಟೊಂದು ದೂರ ಪ್ರಯಾಣ ಮಾಡಿದ್ದು ಇದೇ ಮೊದಲು.
“ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು” ಎಂದು ಈ ಆನೆಗಳಿಗೂ ಅನ್ನಿಸಿರಬಹುದೇ?
ಚೀನಾದಲ್ಲೆಲ್ಲ ಈಗ “ಅಲೆದಾಡುವ ಆನೆಗಳು ಬರುತ್ತಿವೆ. ದಾರಿ ಬಿಡಿ..”

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

Published

on

ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್ ಸೇರಿದಂತೆ ವಿವಿಧ ಅಂಚೆ ಸೇವೆಗಳನ್ನು ಮನೆಯಿಂದಲೇ ಬುಕ್ ಮಾಡುವ ಅವಕಾಶವನ್ನು ಪಡೆಯಬಹುದು. ಇದರ ಮೂಲಕ ಅಂಚೆ ಕಚೇರಿಯಲ್ಲಿ ಸಾಲಿನಲ್ಲಿ ನಿಲುವ ಅನಿವಾರ್ಯತೆ ಕಡಿಮೆಯಾಗುತ್ತದೆ ಹಾಗೂ ಸಮಯದ ಉಳಿತಾಯವಾಗುತ್ತದೆ.

ಸೇವೆಯನ್ನು ಈ ಮೂಲಕ https://app.indiapost.gov.in/customer.selfservice/home ಪೂರ್ಣಗೊಳಿಸಿದ ನಂತರ ಸೃಷ್ಟಿಯಾಗುವ ಲೇಬಲ್, ಕ್ಯೂಆರ್ ಅನ್ನು ಮುದ್ರಿಸಿ ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಸ್ಪೀಡ್ ಫೆÇೀಸ್ಟ್, ಪಾರ್ಸೆಲ್ ಅನ್ನು ಬುಕ್ಕಿಂಗ್ ಸಂಖ್ಯೆಯ ಮೂಲಕ ಹಸ್ತಾಂತರಿಸಬಹುದು. ಸಾರ್ವಜನಿಕರು ಈ ನವೀನ ಡಿಜಿಟಲ್ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 26 ಕೊನೆಯ ದಿನವಾಗಿದೆ.

ವಿಶೇಷ ಘಟಕ ಯೋಜನೆಯಡಿ 12 ತಿಂಗಳ ಅಪ್ರೆಂಟಿಸ್ ತರಬೇತಿಗಾಗಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸಿರುವ ಹಾಗೂ ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರುವ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ನೀಡುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಎಂದು ನಮೂದಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ಆಯ್ಕೆಯಾಗಿ ತರಬೇತಿಗೆ ಹಾಜರಾಗುವ ಸಂದರ್ಭದಲ್ಲಿ ಮೂಲ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಪದವಿಯ ಎಲ್ಲ ವರ್ಷಗಳ ಅಂಕಪಟ್ಟಿಗಳು, ಸ್ನಾತ್ತಕೋತ್ತರ ಪದವಿಯ ಎಲ್ಲ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿಯನ್ನು ನಿರೀಕ್ಷಿಸಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ತರಬೇತಿಯ ಅವಧಿ ವೇಳೆ ಮಾಹೆಯಾನ 15,000 ರೂಗಳ ಶಿಷ್ಯ ವೇತನ ನೀಡಲಾಗುವುದು. ತರಬೇತಿಯು 2026 ರ ಜನವರಿಯಿಂದ ಡಿಸೆಂಬರ್‍ವರೆಗೆ 12 ತಿಂಗಳ ಅವಧಿಯದಾಗಿದ್ದು, ತಾತ್ಕಾಲಿಕವಾಗಿರುತ್ತದೆ. ತರಬೇತಿ ಮುಗಿದ ನಂತರ ಮುಂದುವರೆಸಲು ಅಥವಾ ಖಾಯಂಗೊಳಿಸಲು ಯಾವುದೇ ಅವಕಾಶ ಇರುವುದಿಲ್ಲ.

ತರಬೇತಿಯ ಅವಧಿಯಲ್ಲಿ ತರಬೇತಾರ್ಥಿಗಳು ಬೇರೆ ಉದ್ಯೋಗ ಮಾಡುವಂತಿಲ್ಲ. ತರಬೇತಿಯ ಅವಧಿಯ ಮಧ್ಯದಲ್ಲಿ ಬಿಟ್ಟು ಹೋದರೆ, ಮೂಲ ದಾಖಲಾತಿಗಳನ್ನು ಅವಧಿಗೆ ಮುನ್ನ ಹಿಂದಿರುಗಿಸುವುದಿಲ್ಲ. ಒಮ್ಮೆ ಫಲಾನುಭವಿಯಾದವರನ್ನು ಈ ಯೋಜನೆಯಡಿ ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಅವಕಾಶವಿರುವುದಿಲ್ಲ ಹಾಗೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.

ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಇಲ್ಲಿ, ಮೊ.9480841218 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending