/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಗದಗ : ತರಳಬಾಳು ಶ್ರೀ ಜಗದ್ಗುರುವರ್ಯರ ಸಾನಿಧ್ಯದಿ ‘ಅಪರಂಜಿ’ ಗ್ರಂಥ ಬಿಡುಗಡೆ

Published

on

ಸುದ್ದಿದಿನ ಡೆಸ್ಕ್ :ಗದುಗಿನ ಶಿವಾನಂದ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್.ಬಿ.ಸಂಶಿ ದಂಪತಿ ಅಭಿನಂದನಾ ಸಮಾರಂಭದಲ್ಲಿ ‘ಅಪರಂಜಿ’ ಗ್ರಂಥ ಬಿಡುಗಡೆಗೊಳಿಸಲಾಯಿತು.

ಗದಗ: ‘ಉತ್ತರ ಕರ್ನಾಟಕದಲ್ಲೇ ಸುಸ
ಜ್ಜಿತ ಆಯುರ್ವೇದ ಆಸ್ಪತ್ರೆ ಸ್ಥಾಪಿಸಿ, ಅದಕ್ಕೆ ವಿಶಿಷ್ಟ ರೂಪ ಕೊಟ್ಟ ಸಂಸ್ಥೆಯ ಅಧ್ಯಕ್ಷ ಎನ್.ಬಿ.ಸಂಶಿ ಅವರ ವ್ಯಕ್ತಿತ್ವ, ಪ್ರಾಮಾಣಿಕತೆ, ನಿಷ್ಠೆಯ ಕಾರ್ಯಶೈಲಿ ಯುವಕರಿಗೆ ಮಾದರಿಯಾಗಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಹೇಳಿದರು.
ಇಲ್ಲಿನ ಕಳಸಾಪುರ ರಸ್ತೆಯಲ್ಲಿರುವ ಶಿವಾನಂದ ಕಲ್ಯಾಣ ಮಂಟಪದಲ್ಲಿ ಶಿವಾನಂದ ವಿದ್ಯಾವರ್ಧಕ ಸಂಸ್ಥೆಯಿಂದ ಭಾನುವಾರ ನಡೆದ ಎಸ್.ಬಿ.ಸಂಶಿ ದಂಪತಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಅಪರಂಜಿ’ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಎಸ್.ಬಿ.ಸಂಶಿ ಅವರು ಈ ಭಾಗದ ಜನರಿಗೆ ಸಾಂಪ್ರದಾಯಿಕ ಆರೋಗ್ಯ ಸೇವೆ ಒದಗಿ
ಸಲು ಆಯುರ್ವೇದ ಕಾಲೇಜು ಆರಂ
ಭಿಸಿ, ದಕ್ಷತೆ ಹಾಗೂ ಪ್ರಾಮಾಣಿಕತೆ
ಯಿಂದ ಕಾರ್ಯನಿರ್ವಹಿಸಿದ್ದಾರೆ’
ಹೇಳಿದರು.

ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಎಸ್.ಬಿ.ಸಂಶಿ ಹಾಗೂ ಸುಭದ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಮಾಜಿ
ಶಾಸಕ ಡಿ.ಆರ್.ಪಾಟೀಲ, ಅಭಿನವ ಶಿವಾನಂದ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ನಿಜಗುಣ ಶ್ರೀ, ಡಾ.ಬಸವರಾಜ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ, ಕೈವಲ್ಯಾನಂದ ಸ್ವಾಮೀಜಿ, ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ನಿಜಾನಂದ ಸ್ವಾಮೀಜಿ, ವಿದ್ಯಾನಂದ ಸ್ವಾಮೀಜಿ, ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಚಿದ್ರೂಪನಾಂದ ಸ್ವಾಮೀಜಿ, ಶಂಕ್ರಣ್ಣ ಸಂಶಿ, ಎಸ್.ಬಿ.ಕೆ.ಗೌಡರ, ಡಾ.ಉಮೇಶ ಪುರದ, ಲಲಿತಾ ಸಂಶಿ, ಸಂಜನಾ ಸಂಶಿ ಅವರು ಎಸ್.ಬಿ.ಸಂಶಿ, ಅಶೋಕ ಸಂಶಿ, ಪ್ರಾಚಾರ್ಯ ಡಾ.ಎಂ.ಸಿ.ಪಾಟೀಲ, ಬಿ.ಎಸ್.ಪಾಟೀಲ, ನಂದಪ್ಪ ಗುಡಸಾಲಿ, ಶಂಕರಣ್ಣ ಸಂಶಿ, ಡಾ.ಎಸ್.ಡಿ.ಯರಗೇರಿ ಈ ಸಂದರ್ಭದಲ್ಲಿ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version