ದಿನದ ಸುದ್ದಿ
ವೈದ್ಯರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ ‘ಮೂವರು ವರದಿಗಾರರ’ ಬಂಧನ..!
ಸುದ್ದಿದಿನ,ವಿಜಯಪುರ : ನಗರದ ಖಾಸಗಿ ವೈದ್ಯರೊಬ್ಬರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 10 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ಆಗಿ ವರದಿಗಾರರಾದ ಪ್ರಸನ್ನ ದೇಶಪಾಂಡೆ, ರವಿ ಬಿಸನಾಳ, ಬಸವರಾಜು ಅರೆಸ್ಟ್ ಆಗಿದ್ದಾರೆ.
ಖ್ಯಾತ ವೈದ್ಯ ಡಾ.ವೋಸ್ವಾಲ್ ಅವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಇವರು, ಸೋನೊಗ್ರಫಿ ಕ್ಲಿನಿಕ್ ವೈದ್ಯ ಕಿರಣ್ ವೋಸ್ವಾಲ್ಗೆ ಬ್ಲ್ಯಾಕ್ಮೇಲ್ ಮಾಡಿದ್ದರು. ಈ ವೈದ್ಯ ಲಿಂಗ ಪತ್ತೆ ಹಚ್ಚಿ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗಿದ್ದ ಆರೋಪ ಹೊತ್ತಿದ್ದಾರೆ.
ಈ ಮೂವರು ವರದಿಗಾರರ ಮೇಲೆ ಎಫ್ಐಆರ್ ದಾಖಲಿಸಿ ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ APMC ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾ ಎಸ್ಪಿ ಪ್ರಕಾಶ್ ಅಮೃತ್ ನಿಕ್ಕಂ ಅವರು ಮಾಹಿತಿ ನೀಡಿದ್ದಾರೆ.
ವೈದ್ಯರ ಮೇಲೆಯಾಕಿಲ್ಲ ಕೇಸ್..?
ಪೊಲೀಸರೇ ವರದಿಗಾರರ ಮೇಲೆ ಎಫ್ಐಆರ್ ಹಾಕಿ ಅರೆಸ್ಟ್ ಮಾಡಿದ್ದು, ಆರೋಪ ಹೊತ್ತ ಡಾಕ್ಟರ್ ಮೇಲೆ ಯಾಕೆ ಎಫ್ಐಆರ್ ದಾಖಲಿಸಿಲ್ಲ. ಡಾ.ಕಿರಣ್ ವೋಸ್ವಾಲ್ ಮೇಲೆ ಲಿಂಗಪತ್ತೆಯ ಗಂಭೀರ ಆರೋಪ ಇದೆ.
ಲಿಂಗ ಪತ್ತೆ ಮಾಡಿ ನೂರಾರು ಹೆಣ್ಣು ಶಿಶುಗಳ ಹತ್ಯೆ ಆರೋಪ ಎದುರಿಸುತ್ತಿದ್ದಾರೆ.ವರದಿಗಾರರ ಮೇಲಿನ ಎಫ್ಐಆರ್ ಅನ್ನು ನಾವು ಸ್ವಾಗತಿಸುತ್ತೇವೆ. ಗಂಭೀರ ಆರೋಪ ಹೊತ್ತಿರೋ ವೈದ್ಯರ ಮೇಲೆ ಎಫ್ಐಆರ್ ಹಾಕದೇ ಇರೋದ್ಯಾಕೆ..? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401