ಬಹಿರಂಗ

KGF ನ ನಿಜ ರಕ್ತಪಾತ : ಎಲ್ಲರೂ ಓದಲೇ ಬೇಕಾದ ಲೇಖನ..!

Published

on

KGF ಎಂಬ ಸಿನೆಮಾ ಇನ್ನೇನು ತೆರೆಯ ಮೇಲೆ ಬರಲಿದೆ.ಸಿನೆಮಾದ ನಾಯಕ ಯಶ್ ಎಂಬ ಕಾರಣದಿಂದ ಅದಕ್ಕೆ ಭಾರೀ ಪ್ರಚಾರ ಮತ್ತು ನಿರೀಕ್ಷೆ ಎರಡೂ ನಡೆದಿದೆ.ಆದರೆ ಈ ಹೆಸರಿನ ಹಿಂದೆ ದಲಿತರ ರಕ್ತಸಿಕ್ತ ಅಧ್ಯಾಯ ಮತ್ತು ಚಳುವಳಿಯನ್ನು ದಿಟ್ಟವಾಗಿ ಮುನ್ನಡೆಸಿದ ಇತಿಹಾಸ ಇರುವ ವಿಚಾರ ಎಷ್ಟು ಜನರಿಗೆ ಗೊತ್ತಿದೆ?

ಸುಮಾರು ಹದಿಮೂರು ಸಾವಿರ ಅಡಿಗಳಷ್ಟು ಆಳವಿರುವ ಜಗತ್ತಿನ ಏಕೈಕ ಆಳದ ಗಣಿತೋಡಿದ ಅವರು ಎಷ್ಟು ನರಕ ಹಿಂಸೆ ಅನುಭವಿಸಿದರೋ ಯಾರಿಗೆ ಗೊತ್ತು? 1881 ರಿಂದ1930 ರ ಅವಧಿಯಲ್ಲಿ ಜಗತ್ತಿಗೆ ಮೂರುಲಕ್ಷಕ್ಕೂ ಹೆಚ್ಚು ಕಿಲೋಗ್ರಾಂ ತೂಕದ ಚಿನ್ನವನ್ನು ಸಂಪಾದಿಸಿಕೊಟ್ಟ ಅವರ ಶ್ರಮ ಬೆವರಿಗೆ ಸಿಕ್ಕ ಬೆಲೆಯೇನು ಗೊತ್ತಾ 12000 ಕಾರ್ಮಿಕರ ಬಲಿ, ಇದು ಯಾರಿಗೆ ಗೊತ್ತು?

ಹೌದು 1881 ರಲ್ಲಿ ಚಿನ್ನದ ಗಣಿಗಾರಿಕೆ ಕೆಲಸಕ್ಕೆ ಬ್ರಿಟೀಷ್ ಸರ್ಕಾರ ದಲಿತರನ್ನ ಆಯ್ಕೆ ಮಾಡಿತು, ಅದು ಮುಂದಾಲೋಚನೆ ಮಾಡಿ, ಕೇವಲ ಕೂಲಿಗಾಗಿ ಹಗಲು-ರಾತ್ರಿಯನ್ನದೆ ದುಡಿಯುತ್ತಿದ್ದ ಶ್ರಮಿಕವರ್ಗವಾಗಿತ್ತು, ಬೇರೆ ಪ್ರಭಾವಿ ಜನಾಂಗದವರಂತೆ ಯಾವ ಪಾಲನ್ನು ಅಪೇಕ್ಷಿಸದೆ ಇದ್ದ ಕಾರಣ ಅವರಿಗೆ ಇಂತಿಷ್ಟು ಕೂಲಿ ನಿಗದಿಪಡಿಸಿ, ಗಣಿಯ ಸುತ್ತ ವಸತಿ ವ್ಯೆವಸ್ತೆ ಕಲ್ಪಿಸಿ ದುಡಿಸಿಕೊಳ್ಳಲಾಗಿತ್ತು, ಅದು ಯಾವ ಮಟ್ಟದಲ್ಲಿ ಅಂದರೆ ಗಣಿ ಸುತ್ತಲಿನ ಸುಮಾರು 10-15 ಕಿ ಮೀ ಪ್ರದೇಶದಲ್ಲಿ ಬೇರೆ ಜನಾಂಗಗಳ ಪ್ರವೇಶಕ್ಕೆ ಅವಕಾಶವೇ ಇಲ್ಲದ ಮಟ್ಟಿಗೆ ನಿರ್ಭಂಧಿಸಿದ್ದರೂ, ( ಅದನ್ನು ಈಗಲೂ ಸಹ ಕೆಜಿಎಫ್ ಸುತ್ತಲೂ ನೋಡಬಹುದು ಕೋಲಾರದಲ್ಲಿ ಶೇ 85%ರಷ್ಟು ದಲಿತರೆ ವಾಸವಾಗಿರುವುದೂ ಸಹ,)

ಮೊದಮೊದಲು ಎಲ್ಲಾ ಚನ್ನಾಗಿಯೇ ಇತ್ತು, ಮೇಲ್ಪದರದ ಚಿನ್ನವನ್ನೆಲ್ಲ ತೆಗೆದಾಯಿತು, ಆದರೆ ಎರಡನೆ ಹಂತದ ಗಣಿಗಾರಿಕೆಯು ಬಹಳ ಕ್ಲಿಷ್ಟಕರವಾಗಿತ್ತು ಹೆಚ್ಚು ಹಾಳ ತೋಡಿದಂತೆಲ್ಲ ಮಣ್ಣು ಕುಸಿದು ಅಲ್ಲಿನ ಸುಮಾರು ಕಾರ್ಮಿಕರು ಅಸುನೀಗಿದರು, ಈ ಬಗ್ಗೆ ಬ್ರಿಟೀಷ್ ಅಧಿಕಾರಿಗಳು ಮುತುವರ್ಜಿವಹಿಸಿದರೂ ಸಹ ಹೆಚ್ಚು ಏನು ಮಾಡಲಾಗಲಿಲ್ಲ, 13000ಅಡಿ ಆಳದಲ್ಲಿ ಉಸಿರಾಡಲೂ ಗಾಳಿಯೂ ಇಲ್ಲದ ಪರಿಸ್ಥಿತಿಯಲ್ಲೂ ಸಹ ಸೀಮೆಎಣ್ಣೆಯ ಬತ್ತಿಗಳನ್ನು ಬಳಸಿ ಗಣಿತೋಡುತ್ತಿದ್ದರು, ಎಷ್ಟೋಭಾರಿ ಬತ್ತಿ ಕೆಟ್ಟೋದಂತಃ ಸಂಧರ್ಭದಲ್ಲಿ ಆ ಗುಹೆಗಳಿಂದ ಹೊರಬರಲು ಗೊತ್ತಾಗದೆ ಹಲವರು ಹಸುನೀಗಿದ ಉದಾಹರಣೆಗಳೆ ಹೆಚ್ಚು, ಆಗ ಜೀತದಾರರಾಗಿ ದುಡಿಯುತ್ತಿದ್ದ ಪಂಡೀತ್ ಅಯೋಧಿದಾಸರ ತಂದೆಯೂ ಸಹ ಮಣ್ಣುಕುಸಿದು ಮೃತಪಟ್ಟರು ನಂತರ ಈ ಬಗ್ಗೆ ಚಳುವಳಿಗಳು ಹುಟ್ಟಿಕೊಂಡವು ಅಯೋಧಿದಾಸರು ಇದರ ಮುಂಚೂಣಿ ನಾಯಕರಾಗಿ ನಿಂತರು.

ಆದರೆ ಕೂಲಿಯನ್ನೆ ನಂಬಿ ಬದುಕ್ಕಿದ ಶ್ರಮಿಕರನ್ನ ಎದುರಿಸಿ ದುಡಿಸಿಕೊಳ್ಳುತ್ತಿದ್ದರು, ಆಗಲೇ ಅಲ್ಲಿ ಗಣಿಯ ಮಣ್ಣು ಕುಸಿದು 1800 ಜನ ಕಾರ್ಮಿಕರು ಒಟ್ಟಿಗೆ ಮೃತಪಟ್ಟರು, ಇದು ಚಳುವಳಿಗೆ ತೀವ್ರವಾದ ವೇಗವನ್ನು ನೀಡಿದ್ದು ಎಷ್ಟರಮಟ್ಟಿಗೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರರೆ ಕೆಜಿಎಫ್‌ಗೆ ಭೇಟಿನೀಡಿ ಚಳುವಳಿಯಲ್ಲಿ ಭಾಗವಹಿಸಿ ಆಗಿನ ಸರ್ಕಾರಕ್ಕೆ ಹಾಗೂ ಅಲ್ಲಿನ ಆಡಳಿತ ವರ್ಗಕ್ಕೆ ತಾಕಿತು ಮಾಡಿದ್ದರು, ಕಾರ್ಮಿಕರ ಬೇಡಿಕೆಯನ್ನೆಲ್ಲ ಪೂರೈಸಿದ್ದರೂ, ( ನಿಮಗೊಂದು ವಿಚಾರ ತಿಳಿದಿರಲಿ ಭಾರತದಲ್ಲಿ 12 ಗಂಟೆ ಇದ್ದ ದುಡಿಮೆಯ ಅವಧಿಯನ್ನು ರದ್ದುಗೊಳಿಸಿ ಪ್ರಪ್ರಥಮ ಭಾರಿಗೆ ಎಂಟು ಗಂಟೆಗಳ ಅವಧಿ ಮಾತ್ರ ದುಡಿಯಬೇಕೆಂದು, ಹೆಚ್ಚಿನ ಅವಧಿ ಕೆಲಸಕ್ಕೆ ಹೆಚ್ಚು ಕೂಲಿ ಹಾಗೂ ವರ್ಷದ ಆದಾಯದ ಇಂತಿಷ್ಟು ಪ್ರಮಾಣ ಕಾರ್ಮಿಕರಿಗೆ ಬೋನಸ್ ರೂಪದಲ್ಲಿ ಕೊಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದರು, ಮೊದಲ ಕಾನೂನು ಮಂತ್ರಿಯಾದಾಗ ಸ್ವತಃ ಮುತುವರ್ಜಿವಹಿಸಿ ಇದನ್ನು ಜಾರಿಗೊಳಿಸಿದರು )

ಸ್ವತಂತ್ರ ನಂತರ ಈ ಪ್ರದೇಶ ರಾಜಕೀಯ ರೂಪ ಪಡೆದು ಚಿನ್ನದ ಅದಿರು ಮಿಶ್ರಿತ ಕಚ್ಚಾ ಮಣ್ಣಿಗಾಗೆ ಇಲ್ಲಿ ಸಾವಿರಾರು ಜೀವಗಳು ಬಲಿಯಾಗಿದ್ದಾರೆ, ತಮ್ಮ ಪ್ರಭಾವಕ್ಕಾಗಿ ಅಂಡರ್‌ವಲ್ಡ್ರ್ ಮಾಫಿಯಾಗಳು ಬೆಳೆದು ನಿಂತಿವೆ, ಅದು ಎಷ್ಟರ ಮಟ್ಟಿಗೆಂದರೆ ಅಲ್ಲಿನ ಯಾವುದೇ ಪೊಲೀಸ್ ಠಾಣೆಯಲ್ಲೂ ಸಹ ಒಬ್ಬ ಅಧಿಕಾರಿ ಆರು ತಿಂಗಳು ಪೂರೈಸಿದರೆ ದೊಡ್ಡ ಸಾಧನೆ ಎನ್ನುವಷ್ಟರ ಮಟ್ಟಿಗೆ, ಇವರ ಪ್ರಭಾವವಿದೆ, ಕತ್ತಲಾದ ನಂತರ ಇಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಊಹಿಸಲು ಅಸಾಧ್ಯವಾಗಿತ್ತು, ಅದನ್ನು ಕಣ್ಣಾರೆ ಕಂಡು ಬದುಕುಳಿದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರಾ, ಅದು ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದಂತಃ ಉಸಿರು ಕಟ್ಟುವ ವಾತಾವರಣದಲ್ಲಿ ಬದುಕಿದ ಉದಾಹರಣೆಗಳೆಷ್ಟೊ, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದವರೆಷ್ಟೊ ಹಾಗೆ ತಮ್ಮ ಕಣ್ಣಮುಂದೆಯೆ ಬೆಳೆದು ನಿಂತ ಮಕ್ಕಳ ಸಾವುಕಂಡವರೆಷ್ಟೊ, ಈ ಥರಃ ಅಲ್ಲಿನ ರಕ್ತಸಿಕ್ತ ಚರಿತ್ರೆ ಈಗಲೂ ಸಹ ನಡೆಯುತ್ತಿದೆ,

ಈಗೆ ಅವರು ದುಡಿದ ಚಿನ್ನ ಇಂದು ಯಾವ ದೇವರ ಅಥವಾ ದೇವತೆಯ ಅಥವಾ ಹೆಣ್ಣು/ಗಂಡುಗಳ ಮೂರ್ತಿ ಅಥವಾ ದೇಹದ ಮೇಲಿದೆಯೋ ಯಾರಿಗೆ ಗೊತ್ತು?

ಒಟ್ಟಾರೆ ಭದ್ರಾವತಿ ಮತ್ತು ಕೆಜಿಎಫ್ ಗಳಲ್ಲಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದವರು ದಲಿತರು ಎಂಬ ಕಾರಣಕ್ಕಾಗಿ ಮಾಧ್ಯಮಗಳು ಆಸಕ್ತಿ ತೋರಲಿಲ್ಲ, ಅದರಲ್ಲೂ ಶೇ 40% ರಿಂದ 50% ತಮಿಳು ದಲಿತರೂ ಇದ್ದಕಾರಣ ಕನ್ನಡ ಸಂಘಟನೆಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ನೋವಿನ ಮತ್ತು ವಂಚನೆಯ ಇತಿಹಾಸ ಎಷ್ಟು ಜನಕ್ಕೆ ಗೊತ್ತು.

ಜೀತಗಾರರಾಗಿ ಬದುಕಿದ್ದರೂ ಪಂಡಿತ್ ಅಯೋಧಿದಾಸ್ ರವರ ಶ್ರಮ ಮತ್ತು ಬದ್ಧತೆಯ ಕಾರಣದಿಂದ ಬಾಬಾಸಾಹೇಬರ ಪೂರ್ವದಲ್ಲೇ ಕ್ರಾಂತಿ ಹುಟ್ಟುಹಾಕಿ ಅದನ್ನು ಬೆಳೆಸಲು ಮನುವಾದಿಗಳಿಗೆ ಹೆದರದೆ ಎದೆಯೊಡ್ಡಿದ ಇತಿಹಾಸ ದಾಖಲಾಗದೇ ಇರುವುದೇಕೆ? ಸ್ವತಃ ಬಾಬಾಸಾಹೇಬರ ಭೇಟಿ ಬಳಿಕ ಅವರು ನಡೆಸಿದ ಚಳುವಳಿಯನ್ನು ನಡೆಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಲ್ಲಿ ಹುಲಿಯಂತೆಯೇ ಬದುಕಿದ್ದ ಶ್ರೀ ಸಿ.ಎಮ್.ಆರ್ಮುಗಂ,ಅವರ ಬಳಿಕ RPIಯನ್ನು ಪ್ರತಿನಿಧಿಸಿದ ಕನ್ನಡಿಗರಾದ ಭಕ್ತವತ್ಸಲ,ರಾಜೇಂದ್ರ ರವರಂತಹವರನ್ನು ಕೊಟ್ಟ ಸ್ವಾಭಿಮಾನಿ ದಲಿತರ ಇತಿಹಾಸವೇಕೆ ನಮ್ಮವರಿಗೆ ತಿಳಿದಿಲ್ಲ.

ಇಂದು ಕೆಜಿಎಫ್ ಸಿನಿಮಾ ಬಿಡುಗಡೆಯಾಗಲು ಸಿದ್ದವಾಗಿರುವುದರಿಂದ ಈ ಬಗ್ಗೆ ಬರೆಯಬೇಕಾಯಿತು.ಕನ್ನಡಪ್ರಭ ದಲ್ಲಿ ಬಂದಿರುವ ಕೇಶವಮೂರ್ತಿ ಯವರ ಲೇಖನ ಇದಕ್ಕೆ ಕಾರಣವಾಯಿತು. ಸಿನೆಮಾ ಇಂಥಹ ಭೀಕರ ಚರಿತ್ರೆಯನ್ನು ಹೇಳುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಜಿಎಫ್ ನ ನಿಜವಾದ ಇತಿಹಾಸವನ್ನು ನಮ್ಮವರು ದಾಖಲೆ ಮಾಡಲೇಬೇಕಿದೆ.

ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ದ್ರಾವಿಡ ಪರಂಪರೆಯ ತಮಿಳುನಾಡು ಇಂದು ಈ ಚಿತ್ರಕ್ಕೆ ಕೆಂಪುಹಾಸಿನ ಸ್ವಾಗತ ನೀಡುತ್ತಿದ್ದಾರೆಂದರೆ ಅದಕ್ಕೆ ಮುಖ್ಯಕಾರಣವೇ ಈ ಮೂಲನಿವಾಸಿಗಳ ರಕ್ತಸಿಕ್ತ ಚರಿತ್ರೆ, ನನ್ನ ದೃಷ್ಟಿಯಲ್ಲಿ ಇದೊಂದೇ ಆ ಚಿನ್ನದ ಶ್ರಮಿಕ ಪೂರ್ವಜರಿಗೆ ಸಲ್ಲಿಸಬಹುದಾದ ಸಣ್ಣಗೌರವ ಅಷ್ಟೆ,

ಇದರ ಮೇಲೂ ಯಾರಾದರು ಇದಕ್ಕೆ ಮಸಿಬಳಿಯುವ ಕೆಲಸ ಮಾಡಿದರೆ ಅದು ಕೇವಲ ಕಟ್ಟುಕಥೆ, ತಮ್ಮ ಜನಾಂಗದ ಮೇಲಿನ ಕುರುಡು ಪ್ರೀತಿ, ಹಾಗೂ ಇತಿಹಾಸಕ್ಕೆ ಮಾಡಿದ ದ್ರೋಹ, ಸಾಧ್ಯವಾದಷ್ಟು ತಲುಪಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version