ಭಾವ ಭೈರಾಗಿ

ಕವಿತೆ | ಅಕ್ಷರ ಮಾಂತ್ರಿಕ

Published

on

  • ಡಾ.ಗಿರೀಶ್ ಮೂಗ್ತಿಹಳ್ಳಿ

ತಾರೆಯ ಮೀರಿದ
ಪ್ರೀತಿಯ ತೋರಿದ
ಮನದಲಿ ಊರಿದ
ದೊರೆ ನೀವು;
ಓದಿಗೆ ಒಲಿದು
ಛಲದಲಿ ಚಲಿಸಿ
ಬಂಧನ ಬಿಡಿಸಿದ
ಬರೆ ನೀವು.

ಬದುಕಿನ ಕಡಲಿಗೆ
ನಾವಿಕ ನೀವು
ಹಾಕುವ ಹುಟ್ಟಿಗೆ ಅಲಂಕಾರ ;
ಒಡಲಿನ ಹಸಿವಿಗೆ
ಬಾಳಿನ ಕುಲುಮೆಗೆ
ವಿದ್ಯಾ ಉಷ್ಣವೇ ಉಪಕಾರ.

ಅಕ್ಷರ ಮಂತ್ರಕೆ
ಸಾವಿರದ ತಂತ್ರಕೆ
ಅಷ್ಟದಿಕ್ಕಿಗೂ
ನಿಮ್ಮದೆ ಕಾವು;
ಬದುಕಿನ ದಾರಿಗೆ
ಬೆಳಕಿನ ದೀವಿಗೆ
ಇಷ್ಟದ ಬದುಕಿಗೆ
ತೋರಣ ಮಾವು.

ಕೋಟಿ ವಿದ್ಯೆಗೆ
ಮೈತ್ರಿ ನೀವು
ಸಾಟಿ ಯಾರು ನಿಮಗಿನ್ನು;
ದಾಟಿ ದಾಟಿ
ಎಲ್ಲೆಯ ದಾಟಿ
ಸಾಗರದಾಚೆಯ ಸಿರಿ ನೀವು.

ಅಕ್ಷರ ಅಕ್ಷರ
ಅಕ್ಷಯ ಸಾಗರ
ಸಾಗುತ ಸಾಗಲಿ ಬಹುದೂರ
ಬಿತ್ತರ ಬಿತ್ತರ
ಬಾನಿನ ನೇಸರ
ಬೀಗುತ ಬರಲಿ ಬಹದ್ದೂರ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version