ಭಾವ ಭೈರಾಗಿ

ಕವಿತೆ | ಬೆಳಕು ಕತ್ತಲ ನಡುವೆ

Published

on

 

  • ಮೂಲ – ಗನ್ವರ್(ನಾರ್ವೆಯನ್ ಕವಿ), ಕನ್ನಡಕ್ಕೆ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ

ಬೆಳಕು ನುಗ್ಗುತ್ತದೆ
ತೆರೆದ ರೂಮಿನೊಳಕ್ಕೆ
ಮೌನದ ಅಲೆಗಳಂತೆ.
ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ,
ನಾಚುತ್ತ ನೋಡಿವೆ
ನುಗ್ಗುತ್ತಿರುವ ಬೆಳಕಿನತ್ತ
ಏನೋ ನಿರೀಕ್ಷಿಸುತ್ತ

ಹಸಿರು ಎಳೆಗಳ ನಡುವೆ
ಹೆಪ್ಪುಗಟ್ಟಿವೆ ಈಗ
ಆನಂದ ಪಾವಿತ್ರ್ಯ.
ಮುಂದೆ ಬರುತ್ತದೆ ರಾತ್ರಿ
ಮೆಲ್ಲಗೆ ಹಾಡಿಕೊಳ್ಳುತ್ತ
ಏನೋ ಪ್ರತೀಕ್ಷೆಯಲ್ಲಿ ಕಾದಿರುವ ಹೂವುಗಳ
ಕಣ್ಣಿಗೆ ಮುತ್ತಿಡುತ್ತ
ಕಂಪಿಸುತ್ತಿವೆ ಹೂವು
ಕಣ್ಣು ಮುಚ್ಚುತ್ತ.

ಕಿಟಕಿಯಾಚೆಗೆ ಮೇಲೆ
ನೀಲಿಯಾಳಗಳಲ್ಲಿ
ಶಾಂತವಾಗಿ
ಜಾರಿ ಸಾಗುತ್ತಿವೆ ಕಪ್ಪು ಮುಗಿಲು
ಉದ್ದ ಮೆರವಣಿಗೆಯಲ್ಲಿ
ಶವದ ಪೆಟ್ಟಿಗೆಯ ಹಿಂದೆ
ನಡೆವ ವೃದ್ಧರ ಹಾಗೆ
ಭಯವಿರದೆ, ವ್ಯಥೆಯಿರದೆ
ಸಂಧ್ಯಾಶಾಂತಿಯ ತುಂಬಿಕೊಂಡು ಒಳಗೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version