ಭಾವ ಭೈರಾಗಿ

ಕವಿತೆ | ಭಾರತ ನಾಡಿನ ಜ್ಞಾನದ ರತುನ

Published

on

 

ಭಾರತ ನಾಡಿನ ಜ್ಞಾನದ ರತುನ
ಕೇಳೋ ಕತೆಯನ್ನ
ನಾ ಹೇಳೋ ಕತೆಯನ್ನ
ನಾಡನು ಕಟ್ಟಿದ ನಾಗ ಕುಲದ
ಭೀಮನ ಕತೆಯನ್ನ
ಜೈ ಭೀಮನ ಕತೆಯನ್ನ

ಮಹಾರಾಷ್ಟ್ರದ ರಾಜ್ಯದಲ್ಲಿ
ಮಹೌ ಎಂಬ ಊರಿನಲ್ಲಿ
ಭೀಮನು ಜನಿಸಿದ್ದ ಜ್ಞಾನದ ರಾಜ್ಯದಿ ಮೆರೆದಿದ್ದ
ಚೌಡರ್ ಕೆರೆಯ ನೀರಿನಲ್ಲಿ
ಕಾಳಾರಾಂ ದೇಗುಲದಲ್ಲಿ
ಕೆಚ್ಚೆದೆ ತೋರಿದ್ದ ಗೆಲುವಿನ ನಗೆಯನು ಬೀರಿದ್ದ
ಹಕ್ಕುಗಳೇ ತಾನಾಗಿ
ನಮ್ಮಯ ದಿಕ್ಕಾಗಿ
ಗಾಂಧೀಜಿಯ ಗರಡಿಯಲಿ
ಒಪ್ಪಂದಕೆ ಸಹಿ ಹಾಕಿ
ಶೋಷಿತ ಸಮತೆಗೆ ನಾಡಿನ ಮಮತೆಗೆ
ಭೀಮನು ಹೆಸರಾದ
ಜೈ ಭೀಮನು ಹೆಸರಾದ

ಮೂವತ್ತೇಳರ ಚುನಾವಣೆಯಲಿ ಮಹಾರಾಷ್ಟ್ರದ ಪ್ರಾಂತ್ಯದಲ್ಲಿ
ಭೀಮನು ಗೆದ್ದಿದ್ದ ಕಾರ್ಮಿಕ ಮಂತ್ರಿಯು ತಾನಾದ
ರಿಸರ್ವ್ ಬ್ಯಾಂಕಿನ ಸ್ಥಾಪನೆಯಲ್ಲಿ
ಭಾಕ್ರಾ ನಂಗಲ್ ಡ್ಯಾಮಿನಲ್ಲಿ
ಜ್ಞಾನವ ಮೆರೆದಿದ್ದ ತನ್ನಯ ಕೌಶಲ ತೋರಿದ್ದ
ಕಾರ್ಮಿಕರ ಹಕ್ಕಾಗಿ
ಬಡವರ ದಿಕ್ಕಾಗಿ
ಮಹಿಳೆಯರ ಉಸಿರಾಗಿ
ರೈತರಿಗೆ ನೆರವಾಗಿ
ಸಮಗ್ರ ಭಾರತ ಕಟ್ಟಲು ಭೀಮ
ಇಟ್ಟನು ಹೆಜ್ಜೆಯನು
ದಿಟ್ಟ ಕೆಚ್ಚೆದೆ ಹೆಜ್ಜೆಯನು

ಸಂವಿಧಾನದ ಚುನಾವಣೆಯಲಿ ಬಂಗಾಳದ ಪ್ರಾಂತ್ಯದಲ್ಲಿ
ಭೀಮನು ಜಯಿಸಿದನು
ಜೈ ಭೀಮನು ಜಯಿಸಿದನು
ಸ್ವಾತಂತ್ರ್ಯದ ಹರುಷದಲ್ಲಿ ದೇಶದ ಖುಷಿಯ ನಿಮಿಷದಲ್ಲಿ
ಮಂತ್ರಿಯು ತಾನಾದ
ಕಾನೂನು ಇಲಾಖೆ ಜೊತೆಯಾದ
ಮೂಲಭೂತ ಹಕ್ಕಾದ ಕರ್ತವ್ಯ ಜೊತೆ ಬೆಸೆದ
ನಿರ್ದೇಶಕ ತತ್ವಗಳ ಪೀಠಿಕೆ ತಾ ಬರೆದ
ಹೆಮ್ಮೆಯ ಪಡೆದ ಸಂವಿಧಾನದ
ಶಿಲ್ಪಿಯು ತಾನಾದ
ಸಂವಿಧಾನವ ತಾ ಬರೆದ

ಹಿಂದೂ ಸಂಹಿತೆ ಮಸೂದೆಯಲ್ಲಿ ಮಹಿಳೆಯರ ಹಕ್ಕುಗಳಲ್ಲಿ
ಭೀಮನು ಮುಳುಗಿದನು
ಜೈ ಭೀಮನು ಮುಳುಗಿದನು
ಬುದ್ಧನ ಧ್ಯಾನದ ಮೈತ್ರಿಯಲ್ಲಿ
ಬುದ್ಧನ ಧಮ್ಮದ ದಿಕ್ಕಿನಲ್ಲಿ
ಭೀಮನು ಚಲಿಸಿದನು ಜೈ ಭೀಮನು ಚಲಿಸಿದನು
ಹತ್ತು ಲಕ್ಷ ಜೊತೆಯಲ್ಲಿ
ಇತಿಹಾಸದ ಕತೆ ಅಲ್ಲಿ
ಬುದ್ಧ ಘೋಷ ಮೊಳಗಿರಲು
ಪ್ರಕೃತಿಯೇ ಮಿನುಗಿರಲು
ಬುದ್ಧನ ಜ್ಞಾನದ ಸತ್ಯದ ಮಾರ್ಗದಿ
ಭೀಮನು ತಾ ನಡೆದ
ಬುದ್ಧನ ಹಿಂದೆಯೇ ತಾ ನಡೆದ.

ರಘೋತ್ತಮ ಹೊ.ಬ

ಈ ಗೀತೆಯ ಗಾಯನದ ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version