ಭಾವ ಭೈರಾಗಿ

ಕವಿತೆ | ಯುಗಾದಿ

Published

on

  • ಡಾ.ಸತೀಶಕುಮಾರ ಹೊಸಮನಿ,ನಿರ್ದೇಶಕರು,ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು

ಬಾಳಿನಲಿ ಯುಗಾದಿ ಬೇಕು
ಕತ್ತಲೆಯನು ಕಳೆಯಬೇಕು
ಬೆಳದಿಂಗಳು ಮೂಡಬೇಕು
ರಾತ್ರಿ ಹಗಲು ಆಗಬೇಕು

ಎಲ್ಲೆಲ್ಲಿಯೂ ಬೆಳಕು ಚೆಲ್ಲಿ
ಸಂತೋಷದಿ ನಗೆಯ ಚೆಲ್ಲಿ
ಹಣತೆ ಹಚ್ಚಿ ಬೆಳಗೋಣ
ಬೆಳಕಿನಲಿ ಬಾಳೋಣ

ಕಷ್ಟವೆಂದು ಬಾರದಿರಲಿ
ನಮ್ಮ ಬಾಳ ಪಯಣದಿ
ಜಗವೆಲ್ಲವು ಬೆಳಗುತಿರಲಿ
ನಿತ್ಯ ನಮ್ಮ ನಯನದಿ

ಎಲ್ಲಿ ಬೆಳಕು ಅಲ್ಲಿ ಯುಗಾದಿ
ಅಲ್ಲಿ ಸುಖದ ಸಾಗರ
ಎಲ್ಲಿ ದೀಪ ಅಲ್ಲಿ ಬೆಳಕು
ಬದುಕು ಸುಖದ ಆಗರ

ಬೆಳಕ ಬಿತ್ತಿ ಬೆಳಕ ಬೆಳೆದು
ಬೆಳಕು ನಮ್ಮ ಚೇತನ
ಬೆಳಕಿಗೆ ಬದುಕು ಸವೆಸಿ
ಯುಗಾದಿ ನಿತ್ಯ ನೂತನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version