ಭಾವ ಭೈರಾಗಿ
ಕವಿತೆ | ಎದೆಯಾಚೆಗಿನ ತಲ್ಲಣ
- ಎಸ್. ರಾಜುಕವಿ ಸೂಲೇನಹಳ್ಳಿ
ರಸ್ತೆಯ ಇಕ್ಕೆಲಗಳಲ್ಲಿ ಯಾರದ್ದೋ ಜಾಗದಲ್ಲಿ
ಪರದೆಯ ಕಟ್ಟಿ ಬದುಕು
ಸಾಗಿಸುವ ಕುಟುಂಬಗಳು
ಕೂಗುಗಳಿವೆ ಕೇಳುವವರಿಲ್ಲ
ಚೆಂದದ ಯೋಜನೆಗಳಿವೆ
ಲೆಕ್ಕಕ್ಕೆ ಸೇರಿ ಮಧ್ಯದಲಿ
ಭಕ್ಷಕರ ಕೈ ಸೇರುತ್ತಿವೆ
ಇವಕ್ಕೆ ಕೈ ಚಾಚುವರೇ ಅಧಿಕ
ಪಿಂಚಣಿಗಾಗಿ ವರ್ಷದ ವೇತನ
ಅಡವಿಟ್ಟ ಜೀವಗಳಿಗೆ ತನ್ನಯ
ಉಸಿರು ನಿಲ್ಲುವಂತೆ ಮಾಡುವ
ದುರ್ಬಲ ವ್ಯವಸ್ಥೆ ಹಾಹಾಕಾರಿ
ಮಾನವರೇ ಎಲ್ಲ ಮರೆತಿಹರು
ಸೌಲಭ್ಯಗಳ ಹೆಸರೊಳಗೆ
ಹದ್ದಿನ ರೀತಿ ತಿನ್ನುವ ಶೂರರು
ಯಾರಿಗೆ ನ್ಯಾಯ ದೇವತೆಯೇ
ಕಣ್ಣೀರು ಹಾಕುತಿಹಳು ಶಿವನೇ
ಎಂತಹ ಕ್ರೂರ ಸ್ಥಿತಿ ಬಂದಿದೆ
ಹಸುಗೂಸು ಕಂದಮ್ಮಗಳ
ಮೇಲೆ ಮಾರಣಹೋಮ
ಬಲತ್ಕಾರಗಳು ಖಂಡಿಸುವರಿಲ್ಲ
ಸೂರಿಗಾಗಿ ಬಡಿದಾಡುವವರೇ
ಸಂಪತ್ತಿನ ಹುಚ್ಚುತನ
ಪ್ರೇಮವ ದೂರ ತಳ್ಳಿತು
ಯಾತಕ್ಕಾಗಿ ಈ ರೋದನೆ
ಇರುವುದೊಂದೇ ಜೀವ
ಯಾರಿಗೆ ಯಾರಿಲ್ಲ ಶೂನ್ಯವೇ
ಬಾಲ್ಯದಿ ಸುಖವ ಕಾಣದ
ಪುಟಾಣಿಗಳು ದುಡಿದು
ನಲುಗುತ್ತಿವೆ ಸಂತೈಸುವರಿಲ್ಲ
ಏನಿದು ಮುಜುಗರವು
ಅತಿಯಾದ ಧನದ ದಾಹಕ್ಕೆ
ಬಲಿಗಳಾಗಿ ಮಣ್ಣು ಸೇರಿತಿಹರು
ವಿನಾಶವೇ ಎಲ್ಲೆಡೆ ಪಸರಿದೆ
ಎಂದೂ ಈ ಘನ ಘೋರ
ಕೃತ್ಯಗಳಿಗೆ ಮುಕ್ತಿ ದೊರೆವದು
ಸರ್ವರಲಿ ಸಮಾನತೆ ಎದ್ದು ಹಂಬಲಿಸುವ ತನಕ ಸಿಗದು
ಅವರವರ ಪಾಲಿನದ್ದು ಕೊಡುವ ಆದೇಶಗಳು
ನೀತಿ ನಿಯತ್ತಿನಿಂದ ಪಾಲಿಸುವ
ಕಟ್ಟು ನಿಟ್ಟಿನ ಕ್ರಮ ಬಂದರಷ್ಟೇ
ನನ್ನ ಕಳ ಕಳಿ ಸಲ್ಲುವುದು
(ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ
ಮೊ: 9741566313)
ಸುದ್ದಿದಿನ.ಕಾಂ|ವಾಟ್ಸಾಪ್|9980346243