ದಿನದ ಸುದ್ದಿ
ದೆಹಲಿ, ಹರಿಯಾಣ ಸೇರಿ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರ

ಸುದ್ದಿದಿನ ಡೆಸ್ಕ್ : ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತು ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ.
ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮೇಲ್ವಿಚಾರಣೆ ಮುಂದುವರಿಸಲು ಮತ್ತು ಕೋವಿಡ್ನ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ.
ಸೋಂಕಿನ ಹರಡುವಿಕೆ ನಿಯಂತ್ರಿಸಲು, ಕಟ್ಟುನಿಟ್ಟಾದ ನಿಗಾ ವಹಿಸುವುದು ಮತ್ತು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕೆ ಮತ್ತು ಕೋವಿಡ್ ನಿಯಮಾವಳಿಗಳ ಸೂಕ್ತ ಅನುಸರಣೆಯ ಐದು ಹಂತದ ಕಾರ್ಯತಂತ್ರಕ್ಕೆ ಕೇಂದ್ರ ಒತ್ತು ನೀಡಿದೆ.
ಯಾವುದೇ ಹಂತದಲ್ಲಿ ಸಡಿಲಿಕೆ ಉಂಟಾದರೂ, ಸಾಂಕ್ರಾಮಿಕ ನಿರ್ವಹಣೆ ಸಫಲತೆ ಕಾಣದು ಹಾಗಾಗಿ ನಿಯಮಿತ ಮೇಲ್ವಿಚಾರಣೆ ಹಾಗೂ ತ್ವರಿತ ಅನುಸರಣಾ ಕ್ರಮಕ್ಕೆ ಒತ್ತು ನೀಡುವಂತೆ ಸರ್ಕಾರ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
15 ಸಾಧಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ

ಸುದ್ದಿದಿನಡೆಸ್ಕ್:ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025 ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಸಾಧಕರಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2023ನೇ ಸಾಲಿನ ಪ್ರಶಸ್ತಿಯನ್ನು ಮೈಸೂರಿನ ಹರಿಹರಾನಂದ ಸ್ವಾಮಿ ಅವರ ಸಮಾಜ ಸೇವೆಗೆ, ಪತ್ರಿಕೋದ್ಯಮದಲ್ಲಿನ ಸೇವೆಗೆ ಬೆಂಗಳೂರಿನ ಇಂದೂಧರ ಹೊನ್ನಾಪುರ, ಸರ್ಕಾರಿ ಸೇವೆಯಲ್ಲಿ ಉತ್ತಮ ಆಡಳಿತ ನಿರ್ಹಿಸಿದ ದಾವಣಗೆರೆಯ ರುದ್ರಪ್ಪ ಹನಗವಾಡಿ ,ಸೀತವ್ವ ಜೋಡಟ್ಟಿ ಬೆಳಗಾವಿ ದೇವದಾಸಿ ವಿಮೋಚನೆ, ಕೆ. ಪುಂಡಲೀಕರಾವ್ ಶೆಟ್ಟಿ ಬಾ ಬೀದರ್ ಸಮಾಜ ಸೇವೆ/ರಾಜಕೀಯ.
2024 ನೇ ಸಾಲಿನ ಪ್ರಶಸ್ತಿಯನ್ನು ಶ್ರೀಧರ ಕಲಿವೀರ ಬೆಂಗಳೂರು ಹೋರಾಟ, ಮಲ್ಲಾಜಮ್ಮ ಮಂಡ್ಯ ಸಮಾಜ ಸೇವೆ/ರಾಜಕೀಯ, ರಾಮದೇವ ರಾಕೆ ಬೆಂಗಳೂರು ಪತ್ರಿಕೋದ್ಯಮ, ವೈ.ಬಿ. ಹಿಮ್ಮಡಿ ಬೆಳಗಾವಿ ಸಾಹಿತ್ಯ/ಸಮಾಜ ಸೇವೆ,ಲಕ್ಷ್ಮೀಪತಿ ಕೋಲಾರ ಕೋಲಾರ ಸಾಹಿತ್ಯ/ಸಂಘಟನೆ.
2025ನೇ ಸಾಲಿನ ಪ್ರಶಸ್ತಿಯನ್ನು ದತ್ತಾತ್ರೇಯ ಇಕ್ಕಳಗಿ ಕಲಬುರಗಿ ಪ್ರಕಾಶನ, ಮಾವಳ್ಳಿ ಶಂಕರ್ ಬೆಂಗಳೂರು ಹೋರಾಟ, ಎಫ್.ಹೆಚ್. ಜಕ್ಕಪ್ಪನವರ್ ಧಾರವಾಡ ಹೋರಾಟ, ಹೊನ್ನೂರು ಗೌರಮ್ಮ ಚಾಮರಾಜನಗರ ಜನಪದ ಕಲೆ, ಈರಪ್ಪ ಹಾಸನ ದಲಿತ ಹೋರಾಟಕ್ಕೆ ನೀಡಿ ಗೌರವಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ

ಸುದ್ದಿದಿನಡೆಸ್ಕ್:ನಗರದ ರುದ್ರಪ್ಪ ಹನಗವಾಡಿ ಅವರಿಗೆ 2023ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಲಭಿಸಿದೆ.
ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025 ನೇ ಸಾಲಿನ
ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಸಾಧಕರಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಿರು ಪರಿಚಯ
ಕೆ.ಎ.ಎಸ್ ಅಧಿಕಾರಿ ನಿವೃತ್ತಿ ಹೊಂದಿರುವ ರುದ್ರಪ್ಪ ಹನಗವಾಡಿ ಅವರು ದಾವಣಗೆರೆ ಜಿಲ್ಲೆಯ, ಹರಿಹರ ತಾಲೂಕಿನ ಹನಗವಾಡಿ ಗ್ರಾಮ 1951ರಲ್ಲಿ ಜನಿಸಿದರು.1974 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ), ಸ್ನಾತಕೋತ್ತರ ಪದವಿ ಪಡೆದರು. ನಂತರ 1974 – 1983ರ ವರೆಗೆ ಬಿ.ಆರ್.ಪಿ. ಕೇಂದ್ರದ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಆಡಳಿತ ಸೇವೆ 1983 – 2011, ತಹಸೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದರು.ಮೈಸೂರು, ಟಿ.ನರಸೀಪುರ, ನಂಜನಗೂಡು, ಚಾಮರಾಜನಗರ, ಸೊರಬ, ರಾಮನಗರ, ತರೀಕೆರೆ, ಬೆಂಗಳೂರು ಇತ್ಯಾದಿ ಜಿಲ್ಲೆಗಳಲ್ಲಿ ಸೇವೆಸಲ್ಲಿಸಿದರು. 2011 ರಲ್ಲಿ ಕರ್ನಾಟಕ ಆಡಳಿತ ಸೇವೆಯಿಂದ ನಿವೃತ್ತಿಹೊಂದಿದರು.ನಂತರ ಹನಗವಾಡಿ ಗ್ರಾಮದಲ್ಲಿನ ಜಮೀನಿನಲ್ಲಿ ರೈತನಾಗಿ ಕಾಯಕದಲ್ಲಿ ತೊಡಗಿದ್ದಾರೆ.
ತಮ್ಮನ್ನು ಸಾಹಿತ್ಯ, ಕಲೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ಓದುವುದು, ಬರೆಯುವುದು, ಕವನ, ಲೇಖನ, ಜೀವನ ಚಿತ್ರಣ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ, ಹಾಡುಗಾರಿಕೆ, ಜಾನಪದ, ಭಾವಗೀತೆ, ಕವನ ವಾಚನ ಪವೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸೇವಾ ಕ್ಷೇತ್ರ
ಟ್ರಸ್ಟಿ, ಐಎಸಿಐಡಿ ಟ್ರಸ್ಟ್ (ರಿ), ಬೆಂಗಳೂರು,ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ನ ಟ್ರಸ್ಟಿ, ಮಾನವ ಮಂಟಪ ಟ್ರಸ್ಟ್ ಟ್ರಸ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ರಾಜ್ಯ ಸಮಿತಿ ಸದಸ್ಯ, ಆಜೀವ ಸದಸ್ಯ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ, ಸದಸ್ಯ, ಹಿಮೋಪೋಲಿಯಾ ಸೊಸೈಟಿ ಆಫ್ ಇಂಡಿಯಾ, ಯು. ಭೂಪತಿ ಸ್ಮಾರಕ ಟ್ರಸ್ಟ್ನ ಸಲಹಾ ಸಮಿತಿ ಸದಸ್ಯ, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಕಲಾಮಂಡಳಿ, ಬೆಂಗಳೂರು
ಹೋರಾಟಗಳು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸುವ ಹೋರಾಟ, ಸಭೆ, ಸಮಾರಂಭಗಳಲ್ಲಿ ಭಾಗಿ, ಚಂದ್ರಗುತ್ತಿ ಬೆತ್ತಲೆ ಸೇವೆ ಮತ್ತು ಮೂಢನಂಬಿಕೆಗಳ ವಿರುದ್ಧದ ಹಾಗೂ ಜನಪರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಸಾಹಿತ್ಯ – ರಚಿಸಿದ ಕೃತಿಗಳು
ಸೆಳೆತ : ಕವನ ಸಂಕಲನ – 2010,ಊರು ಬಳಗ – ಕವನಸಂಕಲನ 2013,ಎಲೆ ಮುಗುಳ ಬೆಳಕು : 2021, ಋಣದ ಗಣಿ : ಆತ್ಮ ಚರಿತ್ರೆ 2021, ಕರ್ನಾಟಕ ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ.
ಸುದ್ದಿದಿನ ಕನ್ನಡ ವೆಬ್ ಪೋರ್ಟಲ್ ನಲ್ಲಿ ಇವರ ಆತ್ಮಕತೆಯಾದ ‘ಋಣದ ಗಣಿ’ ಆಯ್ದ ಭಾಗಗಳು ಪ್ರಕಟಗೊಂಡಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ

- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸುದ್ದಿದಿನ,ಬಳ್ಳಾರಿ:ನಗರದ ಗೋಲ್ಡ್ ಸ್ಮಿತ್ ರಸ್ತೆಯ ಕುಂಬಾರ ಓಣಿ ಬಳಿಯ ವಾಸವಿ ಸ್ವಗೃಹ ಹೋಮ್ ನೀಡ್ ಎಂಬ ಅಂಗಡಿ ತೆರೆದು ಅಲ್ಲಿಗೆ ಬಂದ ಗ್ರಾಹಕರಿಂದ ಚೀಟಿ ರೂಪದಲ್ಲಿ ಹಣ ಪಡೆದು ತಿಂಗಳಿಗೆ ಶೇ.25 ರಷ್ಟು ಲಾಭ ನೀಡುವುದಾಗಿ ವಂಚಿಸುತ್ತಿದ್ದ ವಿಶ್ವನಾಥ ಎಂಬ ವ್ಯಕ್ತಿಯನ್ನು ಬ್ರೂಸ್ ಪೇಟೆ ಪೊಲೀಸರು ಬಂಧಿಸಿದ್ದರು.
ಚೀಟಿ ವ್ಯವಹಾರ ಮಾಡಿ ಮೋಸ
ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದರು ಎಂದು ವಾಸವಿ ಸ್ವಗೃಹ ಹೋಮ್ ನೀಡ್ ಅಂಗಡಿಯ ಮಾಲಿಕ ಟಿ.ವಿಶ್ವನಾಥ(58)ರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿ 19,38,500 ರೂ. ಮತ್ತು ಗ್ರಾಹಕರು ಆಪಾದಿತನಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗು ವ್ಯವಹಾರಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಂಡಿದ್ದರು.
ಗ್ಯಾನಪ್ಪ ನೀಟಿದ ದೂರಿನಿಂದ ಪೊಲೀಸರು ಎಂಟ್ರಿ
ಸಹಕಾರ ಸಂಘಗಳ ಸಹಾಯಕ ನಿಬಂಧಕ ಗ್ಯಾನಪ್ಪ ನೀಡಿದ ದೂರಿನನ್ವಯ ಕಳೆದ ಆರು ತಿಂಗಳಿಂದಲೂ ಸರ್ಕಾರದಿಂದ ಅಥವಾ ಮಂಜೂರು ಮಾಡುವ ಯಾವುದೇ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದ್ದೇಶದಿಂದ, ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡುತ್ತಿದ್ದ ವಿಶ್ವನಾಥ ವಿರುದ್ಧ ಆರೋಪ ಕೇಳಿಬಂತು.ಆಗ ಪೊಲೀಸರು ಎಂಟ್ರಿ ಆಗಿದ್ದಾರೆ.ಗಣಿನಾಡು ಬಳ್ಖಾರಿ ನಗರದಲ ಇಂತ ವ್ಯವಹಾರಗಳು ಬಹಳ ನಡೆಯುತ್ತೇವೆ ನಿಧಾನಗತಿಯಲ್ಲಿ ಮೋಸ ಹೋದ ಮೇಲೆ ಬೆಳಕಿಗೆ ಬರುತ್ತವೆ.
ಮೋಸಕ್ಕೆ ಬಲಿಯಾಗುವ ಜನರು
ಗಣಿನಾಡು ಬಳ್ಳಾರಿ ನಗರದಲ್ಲಿ ಜನರು ಆಸೆ,ಅತಿಆಸೆಯಿಂದ ಬೇಗ ಹಣವನ್ನು ಸಂಪಾದನೆ ಮಾಡಬಹುದು ಎಂದು ಈ ಮಾರ್ಗಗಳನ್ನು ಅನುಸರಿಸ ಮೋಸ ಹೋಗುತ್ತಾರೆ. ಟಿ.ವಿಶ್ವನಾಥ ಗ್ರಾಹಕರೊಂದಿಗೆ ನಿಶ್ಚಿತ ಅವದಿಗೆ ನಿಯತಕಾಲಿಕ ಕಂತುಗಳ ರೂಪದಲ್ಲಿ ಹಣದ ನಿಶ್ಚಿತ ಹಣವನ್ನು ಕೊಡಲು ಒಪ್ಪಿ ಚೀಟಿ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.ಆದರೆ ಸಾರ್ವಜನಿಕರಿಂದ ನೊಂದವರಿಂದ ದೂರ ಬಾರದ ಹಿನ್ನೆಲೆಯಲ್ಲಿ ಆತನಿಗೆ ವಿಚಾರಣೆ ಮಾಡಿ ಠಾಣಾ ಬೇಲ್ ನೀಡಿ ನೋಟಿಸ್ ಕೊಟ್ಟು ಕಳುಹಿಸಲಾಗಿತ್ತು.
ಪೊಲೀಸರ ಪಾತ್ರ ಏನು ?
ಈ ಹಿಂದೆ ಗಣಿನಾಡು ಬಳ್ಳಾರ ನಗರದ ವಿವಿಧ ಠಾಣೆಗೆ ಸಂಬಂಧಿಸಿದಂತೆ ಹಣಕಾಸಿನ ವಿಚಾರವಾಗಿ ಮೋಸ ಮಾಡಿದ ಘಟನೆಗಳು ನಡೆದಿದೆ. ಆದರೆ ಮೋಸ ಮಾಡಿದ ವ್ಯಕ್ತಿಗಳಿಂದ ಮೋಸಕ್ಕೆ ಒಳಗಾದ ಜನರಿಗೆ ಹಣವನ್ನು ಕೊಡಿಸಿಲ್ಲ ಎನ್ನುವ ಆರೋಪ ಸಹ ಇದೆ. ಇಲ್ಲಿ ಪೊಲೀಸ್ ಇಲಾಖೆಯ ಪಾತ್ರ ಏನು ? ಎನ್ನುವ ಅಂಶ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.
ಬಳಿಕ ವಿಶ್ವನಾಥ ಗ್ರಾಹಕರಿಗೆ ಮೊನ್ನೆ ನಿಮ್ಮ ಹಣ ವಾಪಾಸ್ ಕೊಡುವೆ ಅಂಗಡಿ ಬಳಿ ಬನ್ನಿ ಎಂದಿದ್ದರು. ಆದರೆ ನಿನ್ನೆ ವಿಶ್ವನಾಥ ಅಂಗಡಿ ಬಳಿ ತೆರಳಿದ ನೂರಾರು ಗ್ರಾಹಕರಿಗೆ ಬಿಗ್ ಶಾಕ್ ಕಾದಿತ್ತು. ವಿಶ್ವನಾಥ ಎಸ್ಕೇಪ್ ಆಗಿದ್ದ ಇದನ್ನ ಕಂಡ ಗ್ರಾಹಕರು ಕಣ್ಣೀರಾಕಿ ಬ್ರೂಸ್ ಪೇಟೆ ಪೋಲಿಸ್ ಠಾಣೆ ಬಳಿ ಜಮಾಯಿಸಿದ್ದಾರೆ. ಪೋಲಿಸ ಮುಂದೆ ತಾವು ಕಟ್ಟಿದ ಹಣದ ಬಗ್ಗೆ ವಿವರಿಸಿ ಠಾಣೆಯಲ್ಲಿ ಒಬ್ಬರಾಗಿ ಬರೆಸುತ್ತ ನಿಂತಿದ್ದಾರೆ.
ಶಾಸಕ ಭರತ್ ರೆಡ್ಡಿ ಭರವಸೆ
ಎಲ್ಲರೂ ಕಟ್ಟಿದ ಹಣ ಎರಡು ಕೋಟಿ ದಾಟುವ ಸಂಭವವಿದೆ ಎನ್ನಲಾಗುತ್ತಿದೆ. ನೊಂದ ಜನ ಠಾಣೆಯಿಂದ ನಿನ್ನೆ ಮದ್ಯಾಹ್ನ ಶಾಸಕ ನಾರಾ ಭರತ್ ರೆಡ್ಡಿ ಕಛೇರಿಗೆ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನರು ಕಣ್ಣೀರು ನೋಡದ ಶಾಸಕರು ನಾನೇ ಠಾಣೆಗೆ ಬರುವೆ ಎಂದು ಹೇಳಿ ಮಂಗಳವಾರ ಸಂಜೆ ಶಾಸಕ ನಾರಾ ಭರತ್ ರೆಡ್ಡಿ ಬ್ರೂಸ್ ಪೇಟೆ ಠಾಣೆಗೆ ಭೇಟಿ ನೀಡಿ ನ್ಯಾಯ ಕೊಡಿಸಿ ಆರೋಪಿಯನ್ನು ಕೊಡಲೇ ಬಂಧಿಸಿ ಎಂದು ಇನ್ಸ್ ಪೆಕ್ಟರ್ ಮಹಾಂತೇಶ್ ಗೆ ಸೂಚಿಸಿ ಜನರಿಗೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಜನರು ಬುದ್ಧಿವಂತರಾಗಿ
ಮನೆಯಲ್ಲಿ ಹಣ ಇದೆ ಎಂದು ಆಸೆ,ಅತಿಆಸೆಗೆ ಒಳಗಾಗದೇ ಗೊತ್ತಿಲ್ಲದ ಇರುವ ವ್ಯಕ್ತಿಗಳಿಗೆ ಕೊಟ್ಟಿ ಮೋಸ ಹೋಗಬಾರದು ಎನ್ನುವುದು ನಮ್ಮ ಆಸೆಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ6 days ago
ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ
-
ದಿನದ ಸುದ್ದಿ5 days ago
ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ
-
ದಿನದ ಸುದ್ದಿ6 days ago
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
-
ಅಂಕಣ3 days ago
ಕವಿತೆ | ಚಳಿಗಾಲದ ಎರಡು ಜೀವರಸಗಳು
-
ದಿನದ ಸುದ್ದಿ3 days ago
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
-
ದಿನದ ಸುದ್ದಿ3 days ago
ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ3 days ago
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ : ಅನುದಾನ ಬಿಡುಗಡೆಗೆ ಆರ್. ಅಶೋಕ್ ಒತ್ತಾಯ