ಸಿನಿ ಸುದ್ದಿ
ಕೆಜಿಎಫ್ ಸಿನಿಮಾ ವಿಮರ್ಶೆ, ಸ್ವೀಕೃತಿ, ನಿರಾಕರಣೆಗಳ ಸುತ್ತ..!
- ಸಂಜ್ಯೋತಿ ವಿ.ಕೆ, ಸಿನೆಮಾ ನಿರ್ದೇಶಕಿ,ಬೆಂಗಳೂರು
‘Otherwise ಜೀವಪರ’ವಾಗಿರುವಂತವರಿಗೂ ಒಂದು ಸಿನಿಮಾದ ಮನುಷ್ಯವಿರೋಧಿ ಧೋರಣೆಗಳು ಏನೂ ಅಳುಕಿಲ್ಲದೆ ಮನಸನ್ನು ರಂಜಿಸುತ್ತೆ (entertainment!!) ಅನ್ನೋದಾದ್ರೆ This is high time to ask ourselves ‘ಏನಾಗಿದೆ ನಮಗೆ?’ ಅಂತ..
ಸಿನಿಮಾ ನಮ್ಮನ್ನು ನಗಿಸಲಿ, ಅಳಿಸಲಿ, ವಿಷಲ್ ಹೊಡಸಲಿ.. but not for wrong reasons..! ಹುಡುಗೀನ ಎತ್ತಾಕೊಂಡು ಬಂದು ಸರಕಿನ ಹಾಗೆ treat ಮಾಡೋದು ಒಬ್ಬ ಹುಡುಗನಿಗೆ ಥ್ರಿಲ್ ಕೊಡುತ್ತೆ ಅಂದ್ರೆ ಅದು ಆತನ ಒಳಗಿನ misogynyಯನ್ನ ಉದ್ದೀಪಿಸ್ತಾ ಇದೆ ಅಂತಲೇ. N the authentication of such misogyny in the cinema by his favorite ‘star’ will surely make him more misogynist.
ಒಬ್ಬ ಬಡ ಹುಡುಗ ಕಷ್ಟ ಪಟ್ಟು ಉನ್ನತಿಗೆ ಏರುವ ಬದಲು, ಸಮಾಜಕಂಟಕ ಮಾಫಿಯಾ ದೊರೆಯಾಗಿ ಬೆಳೆಯುವುದನ್ನು authenticate ಮಾಡುವ ಸಿನಿಮಾ ಪ್ರೇಕ್ಷಕನೊಬ್ಬನನ್ನು entertain ಮಾಡ್ತಿದೆ ಎಂದರೆ ಅದು ಆತನ ಬಡತನ ಅಸಹಾಯಕತೆಯ ಮೂಲದಿಂದ ಹೊರಟಿರಬಹುದು, ಆದರೆ ಆತನನ್ನು ಯಾವ ದಿಕ್ಕಿನಲ್ಲಿ ಯೋಚಿಸಲು ಉದ್ದೀಪಿಸಬಹುದೆಂಬುದನ್ನು ಅರಿಯಲು psychology professor ಆಗಬೇಕಾದ ಅಗತ್ಯ ಖಂಡಿತ ಇಲ್ಲ.
ಹೆಚ್ಚು ಹೆಚ್ಚು ಜನರು ಇಂತದನ್ನು ಮೆಚ್ಚುತ್ತಿದ್ದಾರೆಂಬುದು (ಗಳಿಕೆ?) ನಮಗೆ ಆತಂಕ ತರಬೇಕೇ ಹೊರತು ಖುಷಿಯನ್ನಲ್ಲ. This alone can never be the criterion for success and specially when economic success comes with such wrong means, we have all the more reasons to doubt it and reject to call it as success.
And, This is not a debate about commercial film Vs Art film (Keeping aside my own reservations about such classification for time being)
The major questions are;
1. Huge fan following ಇರುವ ಒಬ್ಬ ‘ಹೀರೋ’ ತೆರೆ ಮೇಲೆ ಏನನ್ನು authenticate ಮಾಡಬಹುದು/ಬಾರದು ಎಂಬುದು ಯಾವುದೇ ಮಾಧ್ಯಮದಲ್ಲಿ ಇರಬೇಕಾದ ಕನಿಷ್ಟ ಸಾಮಾಜಿಕ ಜವಾಬ್ದಾರಿ. ಅದನ್ನು ತಪ್ಪಿ ನಡೆದಾಗ ಅದರ ಬಗ್ಗೆ ಚರ್ಚಿಸುವುದು, ವಿಮರ್ಶಿಸುವುದು, ಖಂಡಿಸುವುದು ಇವೆಲ್ಲವೂ ಆ ಕಲೆಯ ಬಗೆಗೆ ಆಸಕ್ತಿ ಹೊಂದಿರುವವರ ಹಕ್ಕು ಮತ್ತು ಕರ್ತವ್ಯ. ಅಷ್ಟೇ ಏಕೆ ಸಿನಿಮಾದ ಬಗೆಗೆ ಆಸಕ್ತಿ ಇಲ್ಲವಾದರೂ ಸಮಾಜದ ಆಗುಹೋಗಿನ ಬಗೆಗೆ ಕಾಳಜಿಯುಳ್ಳ ಯಾರಾದರೂ ಮಾಡಬಹುದಾದ (infact ಮಾಡಬೇಕಾದ) ಕೆಲಸವಿದು.
‘ಕಬೀರ್ ಸಿಂಗ್’ನ ನಾಯಕ ಪಾತ್ರದ ಬಗೆಗೆ, ‘ಪದ್ಮಾವತ್’ನ ನಿರ್ದೇಶಕನ ಧೋರಣೆಯ ಬಗೆಗೆ ಮತ್ತು ಆ ಸಿನಿಮಾದ ಬಗೆಗೆ, ತನ್ನ ಸಿನಿಮಾ ಒಂದರಲ್ಲಿ ಮಹಿಳಾ ಇನ್ಸ್ಪೆಕ್ಟರ್ ಗೆ ‘ಝಾಡಿಸಿ ಒದ್ದರೆ ಮುಟ್ಟಿನ ರಕ್ತ ಚೆಲ್ಲಬೇಕು’ ಅನ್ನೋ ಸಂಭಾಷಣೆಯನ್ನ ಯಾವುದೇ ಅಳುಕಿಲ್ಲದೆ ಹೇಳಿದ ‘ಮೇರು ನಟ’ ಮುಮ್ಮುಟ್ಟಿಯ ಬಗೆಗೆ, SRK ‘ಮೈ ಹೂ ನಾ’ ದಲ್ಲಿ ಸಂಜನಾ ಎಂಬ ಪಾತ್ರ ಮತ್ತು ‘ಕುಚ್ ಕುಚ್ ಹೋತಾ ಹೈ’ನ ಕಜೋಲ್ ಪಾತ್ರ ಚಿತ್ರಗಳಲ್ಲಿನ ಹೆಣ್ಣು ಪಾತ್ರಧಾರಿಗಳ patriarchal ಸಿದ್ಧಮಾದರಿಗೆ ಒಪ್ಪಿತವಾಗುವ ಮೇಕ್ ಓವರ್’ ಬಗೆಗೆ, ‘ಕಲ್ ಹೋ ನ ಹೋ’ ನಲ್ಲಿ ಪ್ರೀತಿ ಝಿಂತಾಳ ಪಾತ್ರವನ್ನು ‘ಚಶ್ಮಿಶ್’ ಎಂದು ಕರೆಯುವುದರ ಬಗೆಗೆ … ಇಂತವುಗಳ ಬಗೆಗೆಗೆಲ್ಲ ನಡೆದ ವಿಮರ್ಶೆಗಳು ನಡೆಯಲೇ ಬಾರದಿತ್ತೇ? (in btw I love Sharukh!)
ಅದರಿಂದ ಆ ನಟ/ನಿರ್ದೇಶಕರು ನಾಶವಾಗಿ ಹೋದರೇ? ಇಲ್ಲ. ಬದಲಿಗೆ ಇಂತ ಚರ್ಚೆ ವಿಮರ್ಶೆಗಳು ಒಟ್ಟಾರೆ ಬಾಲಿವುಡ್’ನ ಮತ್ತು ಇತರ ಸಿನಿಮಾರಂಗಗಳ ಧೋರಣೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ. ಸುಮಾರು ಜನರಿಗೂ ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯದ ಅರಿವುಂಟಾಗಿದೆ. (ಎಲ್ಲವೂ ಸಂಪೂರ್ಣ ಬದಲಾಗಿಹೋಗಿದೆಯೆಂದಲ್ಲ, ಬದಲಾವಣೆಯ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ ಎಂಬುದು ಮುಖ್ಯ)
ಆದರೆ ಇಲ್ಲಿ ನಮ್ಮಲ್ಲಿ, ‘ಖರಾಬು…’ ಹಾಡಿನ ಬಗೆಗೆ, ಅದರಲ್ಲಿನ misogyny ಬಗೆಗೆ ನಡೆದ ವಿಮರ್ಶೆಯನ್ನು ಯಾವ ರೀತಿ ಸ್ವೀಕರಿಸಲಾಯಿತು? ನೆನಪಿದೆಯೇ??
2. ಮೇಕಿಂಗು (?!), ಮಣ್ಣು ಮಸಿ ಅನ್ನೋ ಹೆಸರಲ್ಲಿ ಒಂದು ಸಿನಿಮಾ ಜಾತೀಯತೆ, misogyny, ಫ್ಯಾಸಿಸಂ, ರೌಡಿಸಂ ಇತ್ಯಾದಿಗಳನ್ನ authenticate ಮಾಡೋದನ್ನ ಒಪ್ಪುತೀವಿ ಅಂದ್ರೆ there is something seriously wrong with our senses. (By the way I like Yash. )
3. ಹಾಗಾದರೆ ನಟ/ನಟಿಯರು ‘negative shade’ ಇರುವ ಪಾತ್ರಗಳನ್ನು ಮಾಡಲೇ ಬಾರದೇ? ಎಂದರೆ ಅದು ಹಾಗಲ್ಲ. ಆ negative ಅನ್ನು ನಿರ್ದೇಶಕ ಮತ್ತು ನಟ/ಟಿ negative ಎಂದು ತೋರಿಸುತ್ತಾ ಅದರ ಬಗೆಗೆ ಒಂದು ನಿರಾಕರಣೆಯನ್ನು ನೋಡುಗರ ಮನಸಿನಲ್ಲಿ ಹುಟ್ಟಿಸುತ್ತಿದ್ದಾರೆಯೇ ಅಥವಾ ಆ negative ನ ಬಗೆಗೆ ಒಂದು ಮೃದು ಧೋರಣೆಯನ್ನೋ, ರಮ್ಯತೆಯನ್ನೋ ಹುಟ್ಟುಹಾಕುತ್ತಾ ಅದನ್ನು ವೈಭವೀಕರಿಸುತ್ತಾ ನೋಡುಗರಲ್ಲಿ ಅದಕ್ಕೊಂದು ಮಾನ್ಯತೆ ತಂದು ಕೊಡುತ್ತಿದ್ದಾರೆಯೇ ಎಂಬುದು ಮುಖ್ಯವಾಗುತ್ತದೆ. (ಕಬೀರ್ ಸಿಂಗ್, ಪದ್ಮಾವತ್…)
3. ಸಿನಿಮಾ ಮಾಧ್ಯಮದ ಅಗಾಧ influenceನ ಅರಿವಿಲ್ಲದ (?) ಹುಂಬರು ಮಾತ್ರವೇ ‘ಸಿನಿಮಾ ಸಿನಿಮಾ ಅಷ್ಟೆ’ ಅಂತ ಉಡಾಫೆ ಮಾತಾಡಬಹುದು.
4. ಕನ್ನಡ ಸಿನಿಮಾ ರಂಗದ ಮೇರು ನಟ ಡಾ.ರಾಜ್’ಕುಮಾರ್ ಅವರು ಪಾತ್ರಗಳ ಆಯ್ಕೆಯ ಬಗೆಗೆ ಹೊಂದಿದ್ದ ಧೋರಣೆ ಒಂದು ಮಾದರಿಯಾಗಬೇಕು. (ಅವರ ಅರಿವಿಗೆ ದಕ್ಕಿದಷ್ಟನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅದರಾಚೆಗೂ ಅವರ ಕೆಲವು ಸಿನಿಮಾಗಳಲ್ಲಿ misogyny, patriarchy ಗಳು ಢಾಳಾಗಿ ಇರುವುದು ನಿಜವೇ. ಆದರೆ ಅವುಗಳ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಲು ಬರುವುದಿಲ್ಲ. ಒಂದು ಒಟ್ಟಾರೆ ಸಮಾಜ ಬದಲಾವಣೆಯ ಯಾವ ಹಂತದಲ್ಲಿದೆ ಎಂಬುದರ influence ಸಹಾ ಅಲ್ಲಿ ಕೆಲಸ ಮಾಡುತ್ತಿರುತ್ತದೆ.)
5. ಬಹಳಷ್ಟು ಜನ ಮೆಚ್ಚಿರುವ/ ಇಷ್ಟಪಟ್ಟಿರುವ ಸಿನಿಮಾದ ಬಗೆಗೆ ಮಾತಾಡಬೇಡಿ ಎನ್ನುವುದು (ಕೆಲವು ಉಗ್ರ ಅಭಿಮಾನಿಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಎಲ್ಲರೂ ಇಷ್ಟ ಪಟ್ಟಿರುವ’ ಎಂದೇ announce ಮಾಡಿದ್ದಾರೆ! ಇಲ್ಲಿ ಈ ಸಿನಿಮಾದ ಬಗೆಗೆ ವಿಮರ್ಶಾತ್ಮಕವಾಗಿ ಮಾತಾಡುತ್ತಿರುವವರೂ ಸೇರಿದಂತೆ ಇನ್ನೂ ಅನೇಕರು ಅವರ ಆ ‘ಎಲ್ಲರೂ’ ಒಳಗೆ ಬರುತ್ತಿಲ್ಲವೆಂಬುದನ್ನೂ ಕಣೆಗಣಿಸಿ.. ಇರಲಿ, ಒದೊಂದು ಜೋಶ್.) ಈಗ ಭಾರತವನ್ನು ಮುಸುಕಿರುವ ‘ಬಹುಸಂಖ್ಯಾತವಾದದ reflection ಆಗಿ ಕಾಣುವುದಿಲ್ಲವೇ?
6. ಹೀಗೆ ವಿಮರ್ಶಿಸುತ್ತಿರುವವರು ಇಂತಹ ಜೀವವಿರೋಧಿ ಧೋರಣೆಗಳನ್ನು ಪ್ರತಿಪಾದಿಸುತ್ತಿರುವ ಸಿನಿಮಾವನ್ನು ಬಹುದೊಡ್ಡ ಮಟ್ಟದಲ್ಲಿ ಜನರು ಮೆಚ್ಚುವುದನ್ನು ಆತಂಕದಿಂದ ನೋಡುವುದು ಸಹಜ. ‘ಸಿನಿಮಾವನ್ನು ಮೆಚ್ಚುವವರ ಬಗೆಗೇಕೆ ಬರೆಯುತ್ತೀರಿ?’ ಎಂದು ಕೇಳುವುದರಲ್ಲಿಯೇ ಸಮಸ್ಯೆಯಿದೆ. (Until it is too personal!)
7. ಕೊನೆಯದಾಗಿ ನನ್ನ ಒಂದು ವೈಯಕ್ತಿಕ ಅಭಿಪ್ರಾಯ.
ಹೀಗೆ ಈ ಸಿನಿಮಾದ ಬಗೆಗೆ ವಿಮರ್ಶಾತ್ಮಕವಾಗಿ ಪ್ರಮುಖವಾಗಿ ಬರೆಯುತ್ತಿರುವ ಕೆಲವರು ಕೆಲ ಬೇರೆ ಸಂದರ್ಭಗಳಲ್ಲಿ ಅವರ ಕೆಲವು ನಿಲುವುಗಳನ್ನು ಬಹಳ forcefull ಆಗಿ ಪ್ರತಿಪಾದಿಸಲು ಪ್ರಯತ್ನಿಸಿದ್ದು (it’s not the correctness or otherwise of the subject itself but the way they tried to do it) ಮತ್ತು ಆಗ ಅಂತಹ ನಿಲುವುಗಳನ್ನು ಒಪ್ಪದವರಿರಲಿ, ಅನುಮಾನವುಳ್ಳವರನ್ನೂ ಕಿಚಾಯಿಸುವ ವ್ಯಂಗ್ಯ ಅಥವಾ ಒಂದು ತೆರನಾದ judgemental classificationಗೆ ದೂಡುವಂತೆ ನಡೆದುಕೊಂಡದ್ದರ ಬಗೆಗೆ ನನಗೂ objectionಗಳಿವೆ. ಅಂತಹ ಸಂದರ್ಭಗಳಲ್ಲಿ ಆದ ಅನುಭವದ ಕಹಿಯಿಂದ ಕೆಲವರು ಇವರ ಈ ಸಿನಿಮಾ ಕುರಿತ ವಿಮರ್ಶೆಯನ್ನು ನಿರಾಕರಿಸುವಂತೆಯೂ ನನಗೆ ಕಂಡಿತು. (That’s my opinion..) ಅದು ನನ್ನೊಬ್ಬ ಬಹಳ sensible ಆದ ಗೆಳತಿಯ ಪ್ರತಿಕ್ರಿಯೆ ನೋಡಿ ಅನಿಸಿದ್ದು.. ಇರಲಿ.
8. ಈ ವಿಮರ್ಶೆಗಳು ನಿಮಗೆ ಒಪ್ಪಿತವಾಗಲೇ ಬೇಕಂತಿಲ್ಲ. ಆದರೆ ಹಾಗೆ ವಿಮರ್ಶಿಸುತ್ತಿರುವವರ credibility ಬಹುತೇಕ ಗೊತ್ತಿರುವುದರಿಂದ (ನಮ್ಮ ನಮ್ಮಲ್ಲೇ) ಅದನ್ನು ಕೇಳಿಸಿಕೊಳ್ಳುವ, ಒಮ್ಮೆ ಅದರ ಬಗೆಗೆ ಯೋಚಿಸಿ ನೋಡುವ, ಸಾಧ್ಯವಾದರೆ ಆರೋಗ್ಯಕರವಾಗಿ ಚರ್ಚಿಸುವಷ್ಟು ಸಹನೆ ಇರಲಿ. ಅದರಾಚೆಗೂ ಅವರ ವಿಚಾರ ಒಪ್ಪಿತವಾಗದಿದ್ದಲ್ಲಿ ನಿರಾಕರಿಸುವ ಆಯ್ಕೆ , ಹಕ್ಕೂ ಎರಡೂ ಇದ್ದೇ ಇರುತ್ತದೆ. ಆದರೆ ಇಂತಹ ಸಾಮಾನ್ಯ ವಿಷಯಗಳೂ ನಮ್ಮನ್ನು ಗುಂಪುಗಳಾಗಿ ಒಡೆಯದಿರಲಿ. Sorry if the last paragraph is sounding too preachy. If so you can please ignore it.
Do you know the first 4 Tamil words learnt by the director @prashanth_neel ? 😀#KGF2InCinemas @TheNameIsYash @VKiragandur @hombalefilms @HombaleGroup @duttsanjay @TandonRaveena @SrinidhiShetty7 @prabhu_sr @AnjanaVJ #KGF2 #KGFChapter2 pic.twitter.com/S8psqNXeF3
— DreamWarriorPictures (@DreamWarriorpic) April 19, 2022
(ಸಂಜ್ಯೋತಿ ವಿ.ಕೆ. ಅವರ ಫೇಸ್ಬುಕ್ ಬರಹ)
ಬೆಂಗಳೂರಿನ ಸಂಜ್ಯೋತಿ ವಿ.ಕೆ., ಎಂಬಿಎ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ‘ನಕ್ಷತ್ರದ ಧೂಳು’ ಏಕವ್ಯಕ್ತಿ ನಾಟಕ ರಾಜ್ಯದ ಹಲವೆಡೆ ಪ್ರದರ್ಶನ ಕಂಡಿದೆ. ಕೆಲಕಾಲ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಸಿನೆಮಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ ‘ಅನಲ‘ ಕಿರುಚಿತ್ರವು ರಾಜ್ಯ ಸರಕಾರ ನೀಡುವ 2016ನೇ ಸಾಲಿನ ‘ಅತ್ಯುತ್ತಮ ಕಿರುಚಿತ್ರ ರಾಜ್ಯಪ್ರಶಸ್ತಿ‘ ಪಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ
~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ
ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

