Connect with us

ದಿನದ ಸುದ್ದಿ

ಆತ್ಮಕತೆ | ಕೇಂದ್ರದಲ್ಲಿ ಮೂಡಿ ಮಡಿದವರು

Published

on

  • ರುದ್ರಪ್ಪ ಹನಗವಾಡಿ

ಮನಸ್ಸಿನಲ್ಲಿ ಉಳಿದು ಹೋದ ಆರೋಗ್ಯವಂತ ವಿದ್ಯಾರ್ಥಿಗಳ ಕಿರುಚಿತ್ರಣ

ಯಶೋದ

ಈಗ್ಗೆ ಸುಮಾರು 8 ವರ್ಷಗಳಿಂದ ಅಧ್ಯಾಪಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಈ ಅವಧಿಯಲ್ಲಿ ನಾವು ಸಂಪರ್ಕಿಸಿದ ವಿದ್ಯಾರ್ಥಿಗಳು ಹಲವು ನೂರು ಸಂಖ್ಯೆಗಳಿಗೆ ಮೀರಬಹುದು. ಹಲ ಕೆಲವರು ನಮ್ಮಿಂದ ಕಲಿತವರಿದ್ದರೆ, ಮತ್ತೆ ಕೆಲವರು ಇವರದೇನು ಎಂಬ ಮಾತಿರಬಹುದು. ಹೀಗೆ ಪ್ರತಿವರ್ಷವೂ ಬಂದು ಹೋಗುವ, ಹಲವು ಹತ್ತಾರು ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಅವರ ವಿಶೇಷ ಗುಣಗಳಿಗೆ, ಸಾಮರ್ಥ್ಯಕ್ಕೆ ಹೆಸರಾಗಿ ಹಲವರು ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಹಾಗೆ ಉಳಿದು ನಿಜ ಬದುಕಿನಲ್ಲಿ ಅಳಿದು ಹೋದ ಕೆಲವು ವಿದ್ಯಾರ್ಥಿಗಳ ನೆನಪು ಮಾಡಿಕೊಳ್ಳುವುದೇ ಈ ಲೇಖನದ ಉದ್ದೇಶ.

1981ನೇ ವರ್ಷ ನನ್ನ ಬದುಕಿನಲ್ಲಿ ಅನೇಕ ಘಟನಾವಳಿಗಳಿಂದ ಕೂಡಿದ ವರ್ಷ. ಮೇ ತಿಂಗಳಲ್ಲೊಂದು ದಿನ ನಮ್ಮ ಊರಿಗೆ ಹೋಗಿ, ಅಲ್ಲಿನ ತರಲೆಗಳನ್ನೆಲ್ಲ ತಲೆಯಲ್ಲಿ ತುಂಬಿಕೊAಡು ಅವ್ವ ಕೊಟ್ಟ ಸಣ್ಣಪುಟ್ಟ ಸಾಮಾನುಗಳನ್ನು ಕಟ್ಟಿಕೊಂಡು ಮೂರು ಮೈಲು ನಡೆದು. ಶಿವಮೊಗ್ಗದ ಬಸ್ಸು ಹಿಡಿದು ಪ್ರಾಜೆಕ್ಟ್ ತಲುಪುವ ವೇಳೆಗೆ ನನಗೆ ಸಾಕೋ ಸಾಕಾಗಿ ಹೋಗಿತ್ತು. ಹಲವು ಆತಂಕಗಳನ್ನು ಪಾರುಮಾಡಿಕೊಂಡು ನಮಗಾಗಿದ್ದ ಮಗ, ಹೆಂಡತಿಯನ್ನು ನೋಡೋ ಕಾತರದಲ್ಲಿ ದಣಿವು ಕರಗುತ್ತಿತ್ತು. ಮನೆಯೊಳಗೆ ಕಾಲಿಡುತ್ತಿದ್ದಂತೆ ಮಗನ ಆಟ-ಪಾಟ, ತನ್ನ ನೌಕರಿ ವಿಷಯ ಹೇಳುತ್ತಿದ್ದೆ.

ನನ್ನಾಕೆ `ಶಿವಮೊಗ್ಗದಲ್ಲೇನಾದರು ಕಾಫಿ ಕುಡಿದಿದ್ದೀರಾ?’ ಎಂದು ಕೇಳಿದಳು. ನನಗೆ ಅದ್ಯಾವ ದೊಡ್ಡ ಪ್ರಶ್ನೆ ಎಂದು ಉತ್ತರಿಸುವ ಗೋಜಿಗೆ ಹೋಗದೆ ಆರಾಮವಾಗಿ ಕೂರುವ ಹಂಚಿಕೆಯಲ್ಲಿದ್ದೆ. ಇಪ್ಪತ್ನಾಲ್ಕು ಗಂಟೆಗಳೂ ತಾನೊಬ್ಬಳೇ ಸಹಿಸಿಕೊಂಡು ಹಿಂಸೆಪಟ್ಟುದನ್ನು ಒಮ್ಮೆಲೆ ಕಣ್ಣೀರ ಕೋಡಿಯಲ್ಲಿ ಉಸುರಿದಳು. `ಯಶೋದÀ ಬೆಂಗಳೂರಲ್ಲಿ ತೀರಿ ಹೋದಳಂತೆ, ನಿಮಗೆ ಫೋನ್ ಮಾಡಿದ್ದರು’ ಎಂದಾಗ ನನಗೆ ಅಸಾಧ್ಯ ಸಂಕಟದೊಡನೆ ದಿಗ್ಭçಮೆಯಾಯಿತು. ಹತ್ತಿರದ ಮನೆಯವರಿಂದ ಸೈಕಲ್ ಪಡೆದು ಅವಳ ಶವ ತಂದ ಹಳ್ಳಿಯ ಕಡೆಗೆ ವೇಗವಾಗಿ ಹೊರಟೆ.

1977-78ರ ಈ ಕೇಂದ್ರದ ಪ್ರಾರಂಭದ ದಿನಗಳಲ್ಲಿ ಅಭಿನಯಿಸಲಾದ ಅನೇಕ ನಾಟಕಗಳಲ್ಲಿ ಸ್ಫೂರ್ತಿಯನ್ನು ವೈವಿಧ್ಯತೆಯನ್ನು ತಂದು ಕೊಟ್ಟ ಇವಳು ಅಭಿನಯ ಕಲೆಯಲ್ಲಿ ನಿಷ್ಣಾತಳಾಗಿದ್ದಳು. ಅರ್ಥಶಾಸ್ತçದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಕರ್ನಾಟಕದ ಮುಖ್ಯ ಸಂಶೋಧನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದ ಇವಳ ಸಾವು, ನಮ್ಮ ಕೇಂದ್ರದಿAದ ಹಾರಿಬಿಟ್ಟ ಹಕ್ಕಿಯ ರೆಕ್ಕೆ ಮುರಿದು ಬೆಂಕಿಗೆ ಬಿದ್ದಷ್ಟು ನೋವು ತಂದಿತ್ತು.

ವಿದ್ಯಾರ್ಥಿ ದೆಸೆಯಿಂದಲೂ ಉದಾತ್ತ ಗುಣಗಳನ್ನು ಬೆಳೆಸಿಕೊಂಡಿದ್ದ ಯಶೋದ ನ್ಯಾಯಕ್ಕಾಗಿ ಯಾರ ನಿಷ್ಠುರವನ್ನೂ ಲೆಕ್ಕಿಸದ, ನೇರ ಮನಸ್ಸಿನ ಸರಳ ಸುಂದರ ಹುಡುಗಿ. ನಮ್ಮ ಅನೇಕ ಹುಡುಗ-ಹುಡುಗಿಯರಲ್ಲಿ ಕಾಣಸಿಗದ, ಆರೋಗ್ಯಕರ ಮನಸ್ಸಿನ ಈ ಹುಡುಗಿಗೆ ಅನಾರೋಗ್ಯವು ಇಷ್ಟು ಬೇಗ ಸಾವು ತರುವುದೆಂದು ಯಾರು ತಾನೆ ಊಹಿಸಿದ್ದರು? ನನ್ನ ಮಗನನ್ನು ನೋಡಲು ಬರುವೆ ಎಂದು ಕಾಗದ ಬರೆದಿದ್ದು, ಇವಳು ಕೊನೆಗೆ ಮಾಂಸದ ಮುದ್ದೆಯಾಗಿ ಅವಳ ಊರಲ್ಲಿ ನೋಡಿ, ನನ್ನ ವಿದ್ಯಾರ್ಥಿನಿಯಾಗಿ ಓಡಾಡುತ್ತಿದ್ದವಳು ಇವಳೇ ಎಂದು ಯೋಚನೆಯಲ್ಲಿ ಮುಳುಗುವಂತೆ ಮಾಡಿ ಮರೆಯಾದಳು.

ಬಷೀರ್ ಅಹಮದ್

ಬಷೀರ್ ಅಹಮದ್ ಎಂಬ ವಿದ್ಯಾರ್ಥಿ ಓದು ಮುಗಿಸಿ ಹೋದ ನಂತರ, ಆತನ ಶಿಸ್ತನ್ನು ಹೋಲುವ ವಿದ್ಯಾರ್ಥಿಗಳು ನಮ್ಮ ಕೇಂದ್ರಕ್ಕೆ ಬಂದಿಲ್ಲವೆಂದೇ ಹೇಳಬೇಕು. ವಿನಯ ವಿದ್ಯಾಭ್ಯಾಸದ ಲಕ್ಷಣ ಎನ್ನುವ ರೀತಿಯಂತೆ ಈತನ ನಡವಳಿಕೆ.

ಕನ್ನಡವನ್ನು ಸರಾಗವಾಗಿ ಮಾತನಾಡಲಾರದವನಾಗಿದ್ದ ಈತ ನನ್ನನ್ನು ಹಲವು ಬಾರಿ ಕಾಡಿ ಕನ್ನಡವನ್ನು ಕಲಿತದ್ದುಂಟು. ಅವನ ಮಧುರವಾದ ಕಂಠದಿಂದ ಕನ್ನಡ ಹಾಡುಗಳನ್ನು ಹಾಡಿಸಲು ನಾನು ಕನ್ನಡ ಪದ್ಯಗಳನ್ನು ವಿವರಿಸಿ ಬರೆದುಕೊಡುತ್ತಿದ್ದೆ. ಅವನಿಗೆ ಇದ್ದ ಅಪಾರ ಶ್ರದ್ಧೆಯಿಂದಾಗಿ ಸುಲಲಿತವಾಗಿ ಕನ್ನಡ ಮಾತಾಡುವುದರ ಜೊತೆಗೆ, ಕನ್ನಡ ಹಾಡುಗಳನ್ನು ಹಾಡಿ ನಮ್ಮ ಕೇಂದ್ರದ ಮತ್ತು ನಮ್ಮ ಈ ಪರಿಸರದ ಜನರ ಹೃದಯದಲ್ಲಿ ಈಗಲೂ ಗುಂಯ್‌ಗುಡುತ್ತಿದ್ದಾನೆ.

ಕೇಂದ್ರದಿಂದ ಎಂ.ಎ., ಪಾಸು ಮಾಡಿಕೊಂಡು ಹೋದ ಮೇಲೆ ಬೆಂಗಳೂರಿನಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿರುವಾಗ ಮತ್ತೆ ಪ್ರಾಜೆಕ್ಟ್ಗೆ ಬಂದಿದ್ದನು. ಆತನ ಕಂಠ ಮಾಧರ‍್ಯವನ್ನು ಸವಿಯಲು, ಮನೆಗೆ ತಿಂಡಿ ತಿನ್ನಲು ಬನ್ನಿ ಎಂದು ಆಹ್ವಾನಿಸಿದೆ. ಆತ, ತಿಂಡಿ ತಿನ್ನಲು ಬೇರೊಬ್ಬ ಅಧ್ಯಾಪಕರು ಕರೆದಿದ್ದಾರೆ, ನಿಮ್ಮ ಮನೆಗೆ ಊಟಕ್ಕೇನೆ ಬರುವೆ ಸಾರ್, ಅಂದಾಗ ಸಂತೋಷದಿAದ ಕರೆದೊಯ್ದೆ. ಜೊತೆಗೆ ಮಾತುಕತೆ ಹೀಗೆ ನಡೆದಿತ್ತು. ಪುಳಿಚಾರು ಊಟ ಕಣಯ್ಯಾ ಎಂದಾಗ, ಮುಂದಿನ ಸಾರಿ ನಾನೆ ಬಂದು ಬಿರಿಯಾನಿ ಮಾಡುವೆ ಎಂದು ಹೇಳಿದ. ಬಿರಿಯಾನಿ ಮಾಡಿ ಉಣ್ಣುವ ದಿನ ಬರುವ ಮುನ್ನವೇ ಜಾಂಡೀಸ್ ಬಂದು ಬಷೀರ್ ಇನ್ನಿಲ್ಲವಾದ. ಸತ್ತ ಹಲವು ದಿನಗಳ ನಂತರ ಬಂದ ಪತ್ರದಿಂದ ಸಂಕಟವಾಯಿತು.

ಈಗ ಯಾವ ಸಭೆ ಸಮಾರಂಭಗಳಲ್ಲಿ ಯಾರು ಹಾಡು ಹೇಳಿದರೂ ಬಷೀರ್‌ನ ನೆನಪು ಬಂದು ಕಣ್ಣು ತೇವವಾಗುತ್ತದೆ. ಕಡುಬಡತನದಿಂದ ಬಂದು ಅಪಾರ ಸ್ವಾಭಿಮಾನಿಯಾಗಿ ಬೆಳೆದು ಅಧ್ಯಾಪಕರೆಲ್ಲರ ವಿಶ್ವಾಸ ಗಳಿಸಿ ನಿಗರ್ವಿಯಾಗಿದ್ದ ಬಷೀರ್ ಅಹಮದ್ ಹಲವು ಆಸೆಗಳನ್ನಿಟ್ಟುಕೊಂಡು ಹಗಲಿರುಳು ದುಡಿಯುತ್ತಿದ್ದ. ಸಾಮಾನ್ಯ ರೋಗವೊಂದು ಅವನ ಆಸೆಗಳಿಗೆ, ಅವನ ಸಾಮರ್ಥ್ಯಗಳಿಗೆ ಇತಿಶ್ರೀ ಹಾಡುವುದೆಂದು ಯಾರು ತಾನೆ ನಂಬಿದ್ದರು?

ಗೋಪಾಲಸ್ವಾಮಿ

ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು, ಗೋಪಾಲಸ್ವಾಮಿ ನೋಡಲು ಪೀಚಲು. ಇವನೆಂತಹ ಹುಡುಗ ಎಂದು ಯಾರಾದರೂ ಕಡೆಗಣಿಸಬಹುದಾಗಿದ್ದ ಈತ ಮನದೊಳಗೆ ಅಗಾಧ ಬಾಂಬನ್ನೇ ಇಟ್ಟುಕೊಂಡಿದ್ದು ಸಿಡಿಸಲಾಗುವ ಮುನ್ನವೇ ನೆನಪಾಗಿ ಹೋದನು.

ಕನ್ನಡ ಎಂ.ಎ., ಗೆ ಬಂದು ಸೇರಿದಾಗ ಸಂಘಟನೆ, ಬಂಡಾಯ ಎಂದು ಹಲವು ಹತ್ತು ರೀತಿಯ ಹೋರಾಟದಲ್ಲಿ ಹಲವು ಬಾರಿ ಪೋಲೀಸ್ ಏಟು ತಿಂದು ಈ ದೇಶದ ಜಡ್ಡುಗಟ್ಟಿದ ಸಮಾಜದ ನಿರ್ಲಜ್ಜ ಅಸಮಾನತೆಯನ್ನು ಧಿಕ್ಕರಿಸಿದ ಈತನಿಗೆ ಸ್ವಂತ ಆಸೆಗಳು ದೂರ. ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ.

ಸಾಮಾನ್ಯ ಖಾಯಿಲೆಯೆಂದು ಮೆಗ್ಗಾನ್ ಆಸ್ಪತ್ರೆ ಸೇರಿದ. ಈತನ ಹಣಕಾಸಿನ ಸಮಸ್ಯೆಗೆ ವಿದ್ಯಾರ್ಥಿಗಳು ಅಧ್ಯಾಪಕರು ಹಣ ಸೇರಿಸಿಕೊಟ್ಟರು. ವಿದ್ಯಾರ್ಥಿ ಜೀವನದುದ್ದಕ್ಕೂ ಹೋರಾಟದ ಬದುಕಿನಲ್ಲಿ ಏಟು ತಿಂದು ಅಪರೂಪದ ವ್ಯಕ್ತಿಯ ಬದುಕು ಬೆಳಗುವ ಮುನ್ನವೇ ನಂದಿಹೋಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.

ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.

ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending