Connect with us

ದಿನದ ಸುದ್ದಿ

ಆತ್ಮಕತೆ | ಕೇಂದ್ರದಲ್ಲಿ ಮೂಡಿ ಮಡಿದವರು

Published

on

  • ರುದ್ರಪ್ಪ ಹನಗವಾಡಿ

ಮನಸ್ಸಿನಲ್ಲಿ ಉಳಿದು ಹೋದ ಆರೋಗ್ಯವಂತ ವಿದ್ಯಾರ್ಥಿಗಳ ಕಿರುಚಿತ್ರಣ

ಯಶೋದ

ಈಗ್ಗೆ ಸುಮಾರು 8 ವರ್ಷಗಳಿಂದ ಅಧ್ಯಾಪಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಈ ಅವಧಿಯಲ್ಲಿ ನಾವು ಸಂಪರ್ಕಿಸಿದ ವಿದ್ಯಾರ್ಥಿಗಳು ಹಲವು ನೂರು ಸಂಖ್ಯೆಗಳಿಗೆ ಮೀರಬಹುದು. ಹಲ ಕೆಲವರು ನಮ್ಮಿಂದ ಕಲಿತವರಿದ್ದರೆ, ಮತ್ತೆ ಕೆಲವರು ಇವರದೇನು ಎಂಬ ಮಾತಿರಬಹುದು. ಹೀಗೆ ಪ್ರತಿವರ್ಷವೂ ಬಂದು ಹೋಗುವ, ಹಲವು ಹತ್ತಾರು ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಅವರ ವಿಶೇಷ ಗುಣಗಳಿಗೆ, ಸಾಮರ್ಥ್ಯಕ್ಕೆ ಹೆಸರಾಗಿ ಹಲವರು ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಹಾಗೆ ಉಳಿದು ನಿಜ ಬದುಕಿನಲ್ಲಿ ಅಳಿದು ಹೋದ ಕೆಲವು ವಿದ್ಯಾರ್ಥಿಗಳ ನೆನಪು ಮಾಡಿಕೊಳ್ಳುವುದೇ ಈ ಲೇಖನದ ಉದ್ದೇಶ.

1981ನೇ ವರ್ಷ ನನ್ನ ಬದುಕಿನಲ್ಲಿ ಅನೇಕ ಘಟನಾವಳಿಗಳಿಂದ ಕೂಡಿದ ವರ್ಷ. ಮೇ ತಿಂಗಳಲ್ಲೊಂದು ದಿನ ನಮ್ಮ ಊರಿಗೆ ಹೋಗಿ, ಅಲ್ಲಿನ ತರಲೆಗಳನ್ನೆಲ್ಲ ತಲೆಯಲ್ಲಿ ತುಂಬಿಕೊAಡು ಅವ್ವ ಕೊಟ್ಟ ಸಣ್ಣಪುಟ್ಟ ಸಾಮಾನುಗಳನ್ನು ಕಟ್ಟಿಕೊಂಡು ಮೂರು ಮೈಲು ನಡೆದು. ಶಿವಮೊಗ್ಗದ ಬಸ್ಸು ಹಿಡಿದು ಪ್ರಾಜೆಕ್ಟ್ ತಲುಪುವ ವೇಳೆಗೆ ನನಗೆ ಸಾಕೋ ಸಾಕಾಗಿ ಹೋಗಿತ್ತು. ಹಲವು ಆತಂಕಗಳನ್ನು ಪಾರುಮಾಡಿಕೊಂಡು ನಮಗಾಗಿದ್ದ ಮಗ, ಹೆಂಡತಿಯನ್ನು ನೋಡೋ ಕಾತರದಲ್ಲಿ ದಣಿವು ಕರಗುತ್ತಿತ್ತು. ಮನೆಯೊಳಗೆ ಕಾಲಿಡುತ್ತಿದ್ದಂತೆ ಮಗನ ಆಟ-ಪಾಟ, ತನ್ನ ನೌಕರಿ ವಿಷಯ ಹೇಳುತ್ತಿದ್ದೆ.

ನನ್ನಾಕೆ `ಶಿವಮೊಗ್ಗದಲ್ಲೇನಾದರು ಕಾಫಿ ಕುಡಿದಿದ್ದೀರಾ?’ ಎಂದು ಕೇಳಿದಳು. ನನಗೆ ಅದ್ಯಾವ ದೊಡ್ಡ ಪ್ರಶ್ನೆ ಎಂದು ಉತ್ತರಿಸುವ ಗೋಜಿಗೆ ಹೋಗದೆ ಆರಾಮವಾಗಿ ಕೂರುವ ಹಂಚಿಕೆಯಲ್ಲಿದ್ದೆ. ಇಪ್ಪತ್ನಾಲ್ಕು ಗಂಟೆಗಳೂ ತಾನೊಬ್ಬಳೇ ಸಹಿಸಿಕೊಂಡು ಹಿಂಸೆಪಟ್ಟುದನ್ನು ಒಮ್ಮೆಲೆ ಕಣ್ಣೀರ ಕೋಡಿಯಲ್ಲಿ ಉಸುರಿದಳು. `ಯಶೋದÀ ಬೆಂಗಳೂರಲ್ಲಿ ತೀರಿ ಹೋದಳಂತೆ, ನಿಮಗೆ ಫೋನ್ ಮಾಡಿದ್ದರು’ ಎಂದಾಗ ನನಗೆ ಅಸಾಧ್ಯ ಸಂಕಟದೊಡನೆ ದಿಗ್ಭçಮೆಯಾಯಿತು. ಹತ್ತಿರದ ಮನೆಯವರಿಂದ ಸೈಕಲ್ ಪಡೆದು ಅವಳ ಶವ ತಂದ ಹಳ್ಳಿಯ ಕಡೆಗೆ ವೇಗವಾಗಿ ಹೊರಟೆ.

1977-78ರ ಈ ಕೇಂದ್ರದ ಪ್ರಾರಂಭದ ದಿನಗಳಲ್ಲಿ ಅಭಿನಯಿಸಲಾದ ಅನೇಕ ನಾಟಕಗಳಲ್ಲಿ ಸ್ಫೂರ್ತಿಯನ್ನು ವೈವಿಧ್ಯತೆಯನ್ನು ತಂದು ಕೊಟ್ಟ ಇವಳು ಅಭಿನಯ ಕಲೆಯಲ್ಲಿ ನಿಷ್ಣಾತಳಾಗಿದ್ದಳು. ಅರ್ಥಶಾಸ್ತçದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಕರ್ನಾಟಕದ ಮುಖ್ಯ ಸಂಶೋಧನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದ ಇವಳ ಸಾವು, ನಮ್ಮ ಕೇಂದ್ರದಿAದ ಹಾರಿಬಿಟ್ಟ ಹಕ್ಕಿಯ ರೆಕ್ಕೆ ಮುರಿದು ಬೆಂಕಿಗೆ ಬಿದ್ದಷ್ಟು ನೋವು ತಂದಿತ್ತು.

ವಿದ್ಯಾರ್ಥಿ ದೆಸೆಯಿಂದಲೂ ಉದಾತ್ತ ಗುಣಗಳನ್ನು ಬೆಳೆಸಿಕೊಂಡಿದ್ದ ಯಶೋದ ನ್ಯಾಯಕ್ಕಾಗಿ ಯಾರ ನಿಷ್ಠುರವನ್ನೂ ಲೆಕ್ಕಿಸದ, ನೇರ ಮನಸ್ಸಿನ ಸರಳ ಸುಂದರ ಹುಡುಗಿ. ನಮ್ಮ ಅನೇಕ ಹುಡುಗ-ಹುಡುಗಿಯರಲ್ಲಿ ಕಾಣಸಿಗದ, ಆರೋಗ್ಯಕರ ಮನಸ್ಸಿನ ಈ ಹುಡುಗಿಗೆ ಅನಾರೋಗ್ಯವು ಇಷ್ಟು ಬೇಗ ಸಾವು ತರುವುದೆಂದು ಯಾರು ತಾನೆ ಊಹಿಸಿದ್ದರು? ನನ್ನ ಮಗನನ್ನು ನೋಡಲು ಬರುವೆ ಎಂದು ಕಾಗದ ಬರೆದಿದ್ದು, ಇವಳು ಕೊನೆಗೆ ಮಾಂಸದ ಮುದ್ದೆಯಾಗಿ ಅವಳ ಊರಲ್ಲಿ ನೋಡಿ, ನನ್ನ ವಿದ್ಯಾರ್ಥಿನಿಯಾಗಿ ಓಡಾಡುತ್ತಿದ್ದವಳು ಇವಳೇ ಎಂದು ಯೋಚನೆಯಲ್ಲಿ ಮುಳುಗುವಂತೆ ಮಾಡಿ ಮರೆಯಾದಳು.

ಬಷೀರ್ ಅಹಮದ್

ಬಷೀರ್ ಅಹಮದ್ ಎಂಬ ವಿದ್ಯಾರ್ಥಿ ಓದು ಮುಗಿಸಿ ಹೋದ ನಂತರ, ಆತನ ಶಿಸ್ತನ್ನು ಹೋಲುವ ವಿದ್ಯಾರ್ಥಿಗಳು ನಮ್ಮ ಕೇಂದ್ರಕ್ಕೆ ಬಂದಿಲ್ಲವೆಂದೇ ಹೇಳಬೇಕು. ವಿನಯ ವಿದ್ಯಾಭ್ಯಾಸದ ಲಕ್ಷಣ ಎನ್ನುವ ರೀತಿಯಂತೆ ಈತನ ನಡವಳಿಕೆ.

ಕನ್ನಡವನ್ನು ಸರಾಗವಾಗಿ ಮಾತನಾಡಲಾರದವನಾಗಿದ್ದ ಈತ ನನ್ನನ್ನು ಹಲವು ಬಾರಿ ಕಾಡಿ ಕನ್ನಡವನ್ನು ಕಲಿತದ್ದುಂಟು. ಅವನ ಮಧುರವಾದ ಕಂಠದಿಂದ ಕನ್ನಡ ಹಾಡುಗಳನ್ನು ಹಾಡಿಸಲು ನಾನು ಕನ್ನಡ ಪದ್ಯಗಳನ್ನು ವಿವರಿಸಿ ಬರೆದುಕೊಡುತ್ತಿದ್ದೆ. ಅವನಿಗೆ ಇದ್ದ ಅಪಾರ ಶ್ರದ್ಧೆಯಿಂದಾಗಿ ಸುಲಲಿತವಾಗಿ ಕನ್ನಡ ಮಾತಾಡುವುದರ ಜೊತೆಗೆ, ಕನ್ನಡ ಹಾಡುಗಳನ್ನು ಹಾಡಿ ನಮ್ಮ ಕೇಂದ್ರದ ಮತ್ತು ನಮ್ಮ ಈ ಪರಿಸರದ ಜನರ ಹೃದಯದಲ್ಲಿ ಈಗಲೂ ಗುಂಯ್‌ಗುಡುತ್ತಿದ್ದಾನೆ.

ಕೇಂದ್ರದಿಂದ ಎಂ.ಎ., ಪಾಸು ಮಾಡಿಕೊಂಡು ಹೋದ ಮೇಲೆ ಬೆಂಗಳೂರಿನಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿರುವಾಗ ಮತ್ತೆ ಪ್ರಾಜೆಕ್ಟ್ಗೆ ಬಂದಿದ್ದನು. ಆತನ ಕಂಠ ಮಾಧರ‍್ಯವನ್ನು ಸವಿಯಲು, ಮನೆಗೆ ತಿಂಡಿ ತಿನ್ನಲು ಬನ್ನಿ ಎಂದು ಆಹ್ವಾನಿಸಿದೆ. ಆತ, ತಿಂಡಿ ತಿನ್ನಲು ಬೇರೊಬ್ಬ ಅಧ್ಯಾಪಕರು ಕರೆದಿದ್ದಾರೆ, ನಿಮ್ಮ ಮನೆಗೆ ಊಟಕ್ಕೇನೆ ಬರುವೆ ಸಾರ್, ಅಂದಾಗ ಸಂತೋಷದಿAದ ಕರೆದೊಯ್ದೆ. ಜೊತೆಗೆ ಮಾತುಕತೆ ಹೀಗೆ ನಡೆದಿತ್ತು. ಪುಳಿಚಾರು ಊಟ ಕಣಯ್ಯಾ ಎಂದಾಗ, ಮುಂದಿನ ಸಾರಿ ನಾನೆ ಬಂದು ಬಿರಿಯಾನಿ ಮಾಡುವೆ ಎಂದು ಹೇಳಿದ. ಬಿರಿಯಾನಿ ಮಾಡಿ ಉಣ್ಣುವ ದಿನ ಬರುವ ಮುನ್ನವೇ ಜಾಂಡೀಸ್ ಬಂದು ಬಷೀರ್ ಇನ್ನಿಲ್ಲವಾದ. ಸತ್ತ ಹಲವು ದಿನಗಳ ನಂತರ ಬಂದ ಪತ್ರದಿಂದ ಸಂಕಟವಾಯಿತು.

ಈಗ ಯಾವ ಸಭೆ ಸಮಾರಂಭಗಳಲ್ಲಿ ಯಾರು ಹಾಡು ಹೇಳಿದರೂ ಬಷೀರ್‌ನ ನೆನಪು ಬಂದು ಕಣ್ಣು ತೇವವಾಗುತ್ತದೆ. ಕಡುಬಡತನದಿಂದ ಬಂದು ಅಪಾರ ಸ್ವಾಭಿಮಾನಿಯಾಗಿ ಬೆಳೆದು ಅಧ್ಯಾಪಕರೆಲ್ಲರ ವಿಶ್ವಾಸ ಗಳಿಸಿ ನಿಗರ್ವಿಯಾಗಿದ್ದ ಬಷೀರ್ ಅಹಮದ್ ಹಲವು ಆಸೆಗಳನ್ನಿಟ್ಟುಕೊಂಡು ಹಗಲಿರುಳು ದುಡಿಯುತ್ತಿದ್ದ. ಸಾಮಾನ್ಯ ರೋಗವೊಂದು ಅವನ ಆಸೆಗಳಿಗೆ, ಅವನ ಸಾಮರ್ಥ್ಯಗಳಿಗೆ ಇತಿಶ್ರೀ ಹಾಡುವುದೆಂದು ಯಾರು ತಾನೆ ನಂಬಿದ್ದರು?

ಗೋಪಾಲಸ್ವಾಮಿ

ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು, ಗೋಪಾಲಸ್ವಾಮಿ ನೋಡಲು ಪೀಚಲು. ಇವನೆಂತಹ ಹುಡುಗ ಎಂದು ಯಾರಾದರೂ ಕಡೆಗಣಿಸಬಹುದಾಗಿದ್ದ ಈತ ಮನದೊಳಗೆ ಅಗಾಧ ಬಾಂಬನ್ನೇ ಇಟ್ಟುಕೊಂಡಿದ್ದು ಸಿಡಿಸಲಾಗುವ ಮುನ್ನವೇ ನೆನಪಾಗಿ ಹೋದನು.

ಕನ್ನಡ ಎಂ.ಎ., ಗೆ ಬಂದು ಸೇರಿದಾಗ ಸಂಘಟನೆ, ಬಂಡಾಯ ಎಂದು ಹಲವು ಹತ್ತು ರೀತಿಯ ಹೋರಾಟದಲ್ಲಿ ಹಲವು ಬಾರಿ ಪೋಲೀಸ್ ಏಟು ತಿಂದು ಈ ದೇಶದ ಜಡ್ಡುಗಟ್ಟಿದ ಸಮಾಜದ ನಿರ್ಲಜ್ಜ ಅಸಮಾನತೆಯನ್ನು ಧಿಕ್ಕರಿಸಿದ ಈತನಿಗೆ ಸ್ವಂತ ಆಸೆಗಳು ದೂರ. ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ.

ಸಾಮಾನ್ಯ ಖಾಯಿಲೆಯೆಂದು ಮೆಗ್ಗಾನ್ ಆಸ್ಪತ್ರೆ ಸೇರಿದ. ಈತನ ಹಣಕಾಸಿನ ಸಮಸ್ಯೆಗೆ ವಿದ್ಯಾರ್ಥಿಗಳು ಅಧ್ಯಾಪಕರು ಹಣ ಸೇರಿಸಿಕೊಟ್ಟರು. ವಿದ್ಯಾರ್ಥಿ ಜೀವನದುದ್ದಕ್ಕೂ ಹೋರಾಟದ ಬದುಕಿನಲ್ಲಿ ಏಟು ತಿಂದು ಅಪರೂಪದ ವ್ಯಕ್ತಿಯ ಬದುಕು ಬೆಳಗುವ ಮುನ್ನವೇ ನಂದಿಹೋಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ

Published

on

ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ

Published

on

ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.

ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ

Published

on

ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.

ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.

ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.

ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.

ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.

ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.

ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.

ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.

ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending