Connect with us

ದಿನದ ಸುದ್ದಿ

ಬುದ್ಧ ಹುಟ್ಟಿದ ನಾಡು ಭಾರತ ಅರ್ಥಾತ್ ಜಂಬೂ ದ್ವೀಪ

Published

on

  • ಶಿವಸ್ವಾಮಿ ಬೌದ್ಧ ಉಪಾಸಕರು

India is the Land of Buddha ” “Buddhism is Future religion in the world” ಬೌದ್ಧ ಧಮ್ಮವು ವಿಶ್ವದ ಮುಂದಿನ ಭವಿಷ್ಯದ ಧರ್ಮವಾಗಲಿದೆ ಎಂಬ ಡಾ.ಬಾಬಾಸಾಹೇಬರ ಆಶಯ ಸತ್ಯವಾಗುತ್ತಿದೆ. ಬುದ್ಧ ಹುಟ್ಟಿದ ನಾಡು ಭಾರತದ 97% ಜನರು ಮೂಲದಲ್ಲಿ ಬೌದ್ಧ ಧಮ್ಮದವರಾಗಿದ್ದರೆಂಬುದು ಪ್ರಕೃತಿಯಷ್ಟೇ ಸತ್ಯ.

ಬುದ್ಧ ಭಾರತವೆಂಬ ಜಂಬೂ ದ್ವೀಪದಲ್ಲಿ ಜನಿಸಿದರು, ಜಂಬೂ ದ್ವೀಪವೆಂದರೆ ಈಗಿನ ಆಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಭೂತನ್, ಬಾ0ಗ್ಲಾದೇಶ, ಶ್ರೀಲಂಕಾ, ಬರ್ಮಾಕ್ಕೆ ಹೊಂದಿಕೊಂಡಿರುವ ಏಷ್ಯಾಖಂಡದ ಬಹುಭಾಗವೇ ಆಗಿದೆ. ಇಂದೂ ಜಗತ್ತಿನ 38 ರಾಷ್ತ್ರಗಳಲ್ಲಿ ಬೌದ್ಧ ಧಮ್ಮ ಪ್ರತಿಯೊಬ್ಬರ ಮನ ಮನೆಗಳನ್ನು ಪ್ರವೇಶಿಸಿ, ಪ್ರಜ್ವಲಿಸಿ ಬೆಳಕಾಗಿ ನಿಂತಿದೆ. ಒಂದು ಜ್ಞಾನದ ಜ್ಯೋತಿಯಿಂದ ಮತ್ತೊಂದು ಜ್ಞಾನದ ಜ್ಯೋತಿಯನ್ನು ಬೆಳಗಲು ಸಾಧ್ಯವೇ ಹೊರತು, ಅಜ್ಞಾನದಿಂದ ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಅರಿತ ಬುದ್ಧ ಅಂಧಕಾರದಲ್ಲಿ ಮುಳುಗಿದ್ದ ಈ ಜಗತ್ತಿಗೆ ಸುಜ್ಞಾನದ ಬೆಳಕನ್ನು ನೀಡಿದ.

ಭಾರತದಲ್ಲೇ ಹುಟ್ಟಿದ ಬೌದ್ಧಧಮ್ಮ ಮನೋವ್ಯಾಧಿಯ ವೈದಿಕತ್ವದ ಅಟ್ಟಹಾಸಕ್ಕೆ ಸಿಕ್ಕಿ ನಲುಗಿ, ಭಾರತದಾಚೆಯ ರಾಷ್ಟ್ರಗಲ್ಲಿ ನೆಲೆಯಾಗಿ ಬುದ್ಧ ಮತ್ತು ಆತನ ಧಮ್ಮವನ್ನು ಅಲ್ಲಿನ ಜನ ಸ್ವೀಕರಿಸಿದ್ದಾರೆ ಈ ಕಾರಣಕ್ಕೆ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ವಿಶ್ವಮಾನ್ಯತೆ ಪಡೆದು ಬೆಳೆಯುತ್ತಾ, ಬೆಳೆಗುತ್ತಾ ಬರುತಿದೆ.

ಕ್ರಿ ಪೊ 6 ನೇ ಶತಮಾನದಲ್ಲಿ ಜನಿಸಿದ ಗೌತಮರು ಬೋಧಿಯನ್ನು ಪಡೆದು ಬುದ್ಧರಾದಾಗ ಇಲ್ಲಿನ ಶ್ರೇಣೀಕೃತ ಜಾತಿವ್ಯವಸ್ಥೆಯಡಿ ಸಿಕ್ಕಿ ಶೂದ್ರಾತಿಶೂದ್ರರು ಪ್ರಾಣಿ ಪಕ್ಷಿಗಳಿಗಿಂತಲೂ ಕಡೆಯಾಗಿ ಜೀವನ ನಡೆಸುತಿದ್ದರು ಇದಕ್ಕೆಲ್ಲ ಅಜ್ಞಾನದ ಜಾತಿವ್ಯವಸ್ಥೆಯೇ ಕಾರಣವೆಂದು ಅರಿತ ಬುದ್ಧರು ಇದಕ್ಕೆ ಪರಿಹಾರವಾಗಿ ಸರ್ವರಿಗೂ ಒಳಿತನ್ನು ಮಾಡುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವೆಂಬ ಮಧ್ಯಮ ಆದಿಯ ಮೂಲಕ ಅಂದಿನ ಜನಸಾಮಾನ್ಯರ ಆಡುಭಾಷೆ ಪಾಳಿಯಲ್ಲಿ ತಿಳಿಸುತ್ತಾ, ಮೌಡ್ಯದಿಂದ ಜನರನ್ನು ಮುಕ್ತಗೊಳಿಸುತ್ತಾ ಸುಮಾರು 40 ವರುಷಗಳ ಕಾಲ ಕಾಲುನಡಿಗೆಯಲ್ಲಿಯೇ ಭಾರತವನ್ನು ಸುತ್ತಾಡಿ ತಮ್ಮ ಅಪಾರ ಶಿಸ್ಯವೃಂದದ ಭಿಕ್ಖುಗಳ ಮೂಲಕ ಜನರಿಗೆ ಬೋಧಿಸಿದ ಪರಿಣಾಮವಾಗಿ ಇಲ್ಲಿನ ಮೂಲನಿವಾಸಿ ನಾಗಜನರು ಜಾಗೃತರಾಗಿ ಅಟ್ಟಹಾಸವನ್ನು ಮೆಟ್ಟಿನಿಂತು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಚಂದ್ರಗುಪ್ತ ಮೌರ್ಯನಿಂದಿಡಿದು ಅಶೋಕ ಚಕ್ರವರ್ತಿ, ಕೊನೆಯ ದೊರೆ ಬೃಹದ್ರತ ಮೌರ್ಯನತನಕ ಸುಮಾರು 150 ವರ್ಷಗಳ ಕಾಲ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಿಗೆ ಭದ್ರಬುನಾದಿ ಹಾಕಿ ಆಳ್ವಿಕೆ ಮಾಡಿದರು.

ಸಾಮ್ರಾಟ್ ಅಶೋಕ ಚಕ್ರವರ್ತಿ ಶೋಕವಿಲ್ಲದ ಸಾಮ್ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದ ಜಗತ್ತಿನ ಮೊದಲ ದೊರೆ, ಕಾಳಿಂಗ ಯುದ್ಧದಲ್ಲಿ ಗೆದ್ದರೂ ಅಶೋಕನು ಅಲ್ಲಿನ ಅಪಾರ ಸಾವು ನೋವುಗಳನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿ ಖಡ್ಗವನ್ನು ತ್ಯಜಿಸಿ ಬೌದ್ಧ ಭಿಕ್ಖು ಉಪಗುಪ್ತನ ಉಪದೇಶಕ್ಕೆ ಮಾರುಹೋಗಿ ಬುದ್ಧ ಧಮ್ಮವೊಂದೇ ಬಹುಜನರನ್ನು ಕಾಪಾಡುವ ಸತ್ಯದ ಮಾರ್ಗವಾಗಿದೆ ಎಂದೂ ಬೌದ್ಧ ಧಮ್ಮ ಸ್ವೀಕಾರ ಮಾಡಿ, ಬೌದ್ಧ ಧಮ್ಮವನ್ನೇ ತನ್ನ ಧಮ್ಮವಾಗಿ ಘೋಷಿಸಿದ.

‘ದಿಗ್ವಿಜಯಕ್ಕಿಂತಲೂ ಧಮ್ಮವಿಜಯವೇ’ ಮೇಲೆಂದು ಇಡೀ ಜಗತ್ತಿಗೆ ಸಾರಿ, ಖಡ್ಗವನ್ನು ತ್ಯೆಜಿಸಿದ ದಿನವೇ ಬುದ್ಧ ಧಮ್ಮವನ್ನು ಸ್ವೀಕರಿಸಿ, ಧಮ್ಮದ ಮೇಲೆ ವಿಜಯ ಸಾದಿಸಿದ ನೆನಪಿಗಾಗಿ ವಿಜಯ ದಶಮಿ ಎಂದೂ ಘೋಷಣೆ ಮಾಡಿ ಧಮ್ಮಅಶೋಕನಾದ ಅಶೋಕನು ತನ್ನಿಬ್ಬರೂ ಮಕ್ಕಳನ್ನು ಧಮ್ಮ ಪ್ರಸಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದ, ಧಮ್ಮ ಪ್ರಚಾರಕ್ಕಾಗಿ ಧಮ್ಮ ದೂತರೆಂಬ ಹೊಸ ಶಾಖೆಯನ್ನು ತೆರೆದು ಧಮ್ಮದೂತರನ್ನು ಇತರೆ ದೇಶಗಳಿಗೆ ಕಳುಹಿಸಿ, ಸುಮಾರು 84000 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ಕಟ್ಟಿಸಿ ಬೌದ್ಧ ಸಾಮ್ರಾಟನಾಗಿ ವಿಜೃಂಭಿಸಿದ.

ಭಾರತದಲ್ಲಿ ಹುಟ್ಟಿದ ಬೌದ್ಧ ಧಮ್ಮವನ್ನು ಭಾರತದಿಂದಲೇ ಓಡಿಸಿದ ಮನುವಾದಿಗಳಿಗೆ ಮರ್ಮಘಾತ ನೀಡಿದ ಬಾಬಾಸಾಹೇಬರು ಕಣ್ಮರೆಯಾಗಿದ್ದ ಭಾರತೀಯರ ಮೂಲ ಧಮ್ಮವನ್ನು ಮತ್ತೆ!ಅದೇ ವಿಜಯ ದಶಮಿಯದಿನದಂದೆ ನಾಗಪುರದ ದೀಕ್ಷಾಭೂಮಿಯಲ್ಲಿ ದಿನಾಂಕ 14-10-1956 ರಂದು ಸುಮಾರು 10 ಲಕ್ಷ ಅನುಯಾಯಿಗಳೊಂದಿಗೆ “ಬುದ್ಧ ನಡೆಗೆ ಮರಳಿ ಮನೆಗೆ”ಹೋಗುವುದರ ಮೂಲಕ ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ನೀಡುವುದರ ಮೂಲಕ ಮತ್ತೊಮ್ಮೆ ಭಾರತದಲ್ಲಿ ಬೌದ್ಧ ಧಮ್ಮವನ್ನು ಮರು ಸ್ಥಾಪನೆ ಮಾಡಿದರು.

ಜೈನ ಧರ್ಮದ ಅತಿಯಾದ ಅಹಿಂಸಾ ಪಾಲನೆಯಿಂದ ಬೇಸತ್ತು ರೈತರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಹುಳ ಹುಪ್ಪಟಗಳಿಂದ ರಕ್ಷಿಸಿಕೊಳ್ಳಲು ಕೀಟನಾಶಕಗಳನ್ನು ಸಿಂಪಡಿಸುತ್ತಿರಲಿಲ್ಲ ಅದಕ್ಕೆ ರೈತಾಪಿ ವರ್ಗವು ಭಗವಾನ್ ಬುದ್ಧರ ಸರಳವಾದ ಮಧ್ಯಮ ಮಾರ್ಗವೇ ಲೇಸೆಂದು ಇಡೀ ರೈತ ಸಮುದಾಯವೇ ಬೌದ್ಧರಾದರು ಎಂದೂ ಖ್ಯಾತ ಸಂಶೋಧಕರಾದ ಕೆ ಎಸ್ ಭಗವಾನ್ ರವರು “ಭಾರತದ ರೈತರೆಲ್ಲರೂ ಬೌದ್ಧರೇ”ಆಗಿದ್ದರು ಎಂದೂ ಒಂದು ಪುಸ್ತಕವನ್ನೇ ಬರೆದು ಭಾರತ ಬೌದ್ಧಮಯವಾಗಿತ್ತು ಎಂಬುದಕ್ಕೆ ಪುಷ್ಟಿ ನೀಡಿದ್ದಾರೆ.

ಮೊನ್ನೆ ಅಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬುದ್ಧನ ನಾಡಾಗಿತ್ತು ಎಂಬುದನ್ನು ಖಚಿತಪಡಿಸುತ್ತಿವೆ, ಅಯೋಧ್ಯಯ ಮೂಲ ಹೆಸರು ಸಾಕೇತ್ ನಗರವಾಗಿ ಕ್ರಿಸ್ತ ಪೂರ್ವದಲ್ಲಿಯೇ ಒಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು, ಕ್ರಿಸ್ತ ಶಕ 1 ನೇ ಶತಮಾನದಲ್ಲಿ ಶುಂಗರ ಆಡಳಿತ ಕಾಲದಲ್ಲಿ ಸಾಕೇತನಗರದ ಹೆಸರನ್ನು ಬದಲಾವಣೆ ಮಾಡಿ ಅಯೋಧ್ಯ ವೆಂದು ಮರು ನಾಮಕರಣ ಮಾಡಲಾಯಿತು ಎನ್ನುತ್ತಾರೆ ಇತಿಹಾಸಕಾರರು.

ಲಿಪಿಯೇ ಇರದಿದ್ದ ಮೌಖಿಕ ಭಾಷೆಯಾಗಿದ್ದ ಸಂಸ್ಕೃತಕ್ಕೆ ದೇವನಾಗರಿ ಲಿಪಿ ಆಳವಡಿಸ್ಸಿದ್ದು, ಹಾಗೆಯೇ ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತ ಬರೆದದ್ದು ಶುಂಗ ವಂಶದ ಕಾಲದಲ್ಲೇ ಅದಕ್ಕೆ ಮುಂಚೆಯೇ ಚಂದ್ರ ಗುಪ್ತ ಮೌರ್ಯ, ಅಶೋಕ ಚಕ್ರವರ್ತಿ ಹಲವು ಅರಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಸಾಕೇತನಗರದ ಹೆಸರು ಮತ್ತು ಬ್ರಾಹ್ಮ್ಮಿ ಲಿಪಿಯಲ್ಲಿದ್ದ ಪಾಳಿ ಮತ್ತು ಪ್ರಾಕೃತಗಳ ಬಗ್ಗೆ ಉಲ್ಲೇಖಿಸಿದ್ದಾರೆಯೇ ಹೊರತು ಸಂಸ್ಕೃತ ಮತ್ತು ಅಯೋಧ್ಯಯ ಬಗ್ಗೆ ಎಲ್ಲಿಯೂ ಧಾಖಲಿಸಿಲ್ಲ, ಕ್ರಿಸ್ತ ಪೂರ್ವ 2 ನೇ ಶತಮಾನದಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾಕೇತ ಎಂಬ ಬೌದ್ಧ ಶಿಕ್ಷಣ ಕೇಂದ್ರವಿತ್ತೆಂದು ಹೇಳಿದ್ಧಾನೆ ಆದ್ದರಿಂದ ಆಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬೌದ್ಧ ರಾಷ್ಟ್ರವಾಗಿತ್ತೆಂದು ಸಾರಿ ಸಾರಿ ಹೇಳುತ್ತಿವೆ.

ಇತ್ತೀಚಿನ ದಿನಮಾನಗಳಲ್ಲಿ ಹಲವು ರಾಷ್ಟ್ರಗಳು ಭಗವಾನ್ ಬುದ್ಧರ ಮಾನವಿಯಾ ಗುಣಗಳ ಸದ್ಧಮ್ಮದೆಡೆಗೆ ಆಕರ್ಷಿತರಾಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಬೌದ್ಧ ಧಮ್ಮವು ವಿಶ್ವದ ಭವಿಷ್ಯದ ಧಮ್ಮವಾಗಲಿದೆ, “Buddhism is Future religion in tha world” ಎಂಬ ಬಾಬಾಸಾಹೇಬರ ಸತ್ಯವಾಗುತ್ತಿದೆ, ಮೊನ್ನೆ ಮೊನ್ನೆ ಇಂಗ್ಲೆಂಡ್ ನಲ್ಲಿ 148 ವರ್ಷದ ಕ್ರೈಸ್ತಧರ್ಮದ ಹಳೆಯ ಚೆರ್ಚನ್ನೇ ಬುದ್ಧನ ವಿಹಾರವಾಗಿ ಅಲ್ಲಿನ ಬುದ್ಧರ ಅನುಯಾಯಿಗಳು ಪರಿವರ್ತಿಸಿದ್ದಾರೆ, ಹಲವು ರಾಷ್ಟ್ರಗಳು ಭವಿಷ್ಯದಲ್ಲಿ ಬುದ್ಧರ ವೈಜ್ಞಾನಿಕ ತತ್ವಗಳಿಗೆ ಮಾರುಹೋಗಿ ಬುದ್ಧ ಧಮ್ಮವನ್ನೇ ಒಪ್ಪಿ ಅಪ್ಪಿಕೊಳ್ಳುವುದರೊಂದಿಗೆ ಅದನ್ನನುಸರಿಸುವ ಒಂದು ಜಾಗತಿಕ ದೊಡ್ಡ ಜನರ ಧಮ್ಮವಾಗುವುದರಲ್ಲಿ ಅನುಮಾನವೇ ಇಲ್ಲಾ! ಮಹಾಕಾರುಣಿಕ ಬುದ್ಧರು ಜನಿಸಿ 2564 ವರ್ಷಗಳಾದರೂ ಬುದ್ಧರ ಕರುಣೆ ಪ್ರೀತಿ ವಿಶ್ವಮೈತ್ರಿ ಯ ಬುದ್ಧಭಾರತವೆಂಬ ಮಾರ್ಗವು ಇಡೀ ವಿಶ್ವಕ್ಕೆ ದಾರಿ ದೀಪವಾಗಿ ವಿಶ್ವದ ಗುರುವಾಗುವುದರಲ್ಲಿ ಸಂಶಯವಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.

ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.

4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್

Published

on

ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು “ಸ್ವಾಮಿ ವಿವೇಕಾನಂದ ಮತ್ತು ಯುವಜನತೆ” ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.

“ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ” ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.

ಶ್ರೀ ಎ. ಜಯಪ್ಪ ಅವರು ಎನ್‌.ಎಸ್‌.ಎಸ್‌. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್‌. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.

ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

Published

on

ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.

ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.

ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending