Connect with us

ದಿನದ ಸುದ್ದಿ

ಬುದ್ಧ ಹುಟ್ಟಿದ ನಾಡು ಭಾರತ ಅರ್ಥಾತ್ ಜಂಬೂ ದ್ವೀಪ

Published

on

  • ಶಿವಸ್ವಾಮಿ ಬೌದ್ಧ ಉಪಾಸಕರು

India is the Land of Buddha ” “Buddhism is Future religion in the world” ಬೌದ್ಧ ಧಮ್ಮವು ವಿಶ್ವದ ಮುಂದಿನ ಭವಿಷ್ಯದ ಧರ್ಮವಾಗಲಿದೆ ಎಂಬ ಡಾ.ಬಾಬಾಸಾಹೇಬರ ಆಶಯ ಸತ್ಯವಾಗುತ್ತಿದೆ. ಬುದ್ಧ ಹುಟ್ಟಿದ ನಾಡು ಭಾರತದ 97% ಜನರು ಮೂಲದಲ್ಲಿ ಬೌದ್ಧ ಧಮ್ಮದವರಾಗಿದ್ದರೆಂಬುದು ಪ್ರಕೃತಿಯಷ್ಟೇ ಸತ್ಯ.

ಬುದ್ಧ ಭಾರತವೆಂಬ ಜಂಬೂ ದ್ವೀಪದಲ್ಲಿ ಜನಿಸಿದರು, ಜಂಬೂ ದ್ವೀಪವೆಂದರೆ ಈಗಿನ ಆಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಭೂತನ್, ಬಾ0ಗ್ಲಾದೇಶ, ಶ್ರೀಲಂಕಾ, ಬರ್ಮಾಕ್ಕೆ ಹೊಂದಿಕೊಂಡಿರುವ ಏಷ್ಯಾಖಂಡದ ಬಹುಭಾಗವೇ ಆಗಿದೆ. ಇಂದೂ ಜಗತ್ತಿನ 38 ರಾಷ್ತ್ರಗಳಲ್ಲಿ ಬೌದ್ಧ ಧಮ್ಮ ಪ್ರತಿಯೊಬ್ಬರ ಮನ ಮನೆಗಳನ್ನು ಪ್ರವೇಶಿಸಿ, ಪ್ರಜ್ವಲಿಸಿ ಬೆಳಕಾಗಿ ನಿಂತಿದೆ. ಒಂದು ಜ್ಞಾನದ ಜ್ಯೋತಿಯಿಂದ ಮತ್ತೊಂದು ಜ್ಞಾನದ ಜ್ಯೋತಿಯನ್ನು ಬೆಳಗಲು ಸಾಧ್ಯವೇ ಹೊರತು, ಅಜ್ಞಾನದಿಂದ ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಅರಿತ ಬುದ್ಧ ಅಂಧಕಾರದಲ್ಲಿ ಮುಳುಗಿದ್ದ ಈ ಜಗತ್ತಿಗೆ ಸುಜ್ಞಾನದ ಬೆಳಕನ್ನು ನೀಡಿದ.

ಭಾರತದಲ್ಲೇ ಹುಟ್ಟಿದ ಬೌದ್ಧಧಮ್ಮ ಮನೋವ್ಯಾಧಿಯ ವೈದಿಕತ್ವದ ಅಟ್ಟಹಾಸಕ್ಕೆ ಸಿಕ್ಕಿ ನಲುಗಿ, ಭಾರತದಾಚೆಯ ರಾಷ್ಟ್ರಗಲ್ಲಿ ನೆಲೆಯಾಗಿ ಬುದ್ಧ ಮತ್ತು ಆತನ ಧಮ್ಮವನ್ನು ಅಲ್ಲಿನ ಜನ ಸ್ವೀಕರಿಸಿದ್ದಾರೆ ಈ ಕಾರಣಕ್ಕೆ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ವಿಶ್ವಮಾನ್ಯತೆ ಪಡೆದು ಬೆಳೆಯುತ್ತಾ, ಬೆಳೆಗುತ್ತಾ ಬರುತಿದೆ.

ಕ್ರಿ ಪೊ 6 ನೇ ಶತಮಾನದಲ್ಲಿ ಜನಿಸಿದ ಗೌತಮರು ಬೋಧಿಯನ್ನು ಪಡೆದು ಬುದ್ಧರಾದಾಗ ಇಲ್ಲಿನ ಶ್ರೇಣೀಕೃತ ಜಾತಿವ್ಯವಸ್ಥೆಯಡಿ ಸಿಕ್ಕಿ ಶೂದ್ರಾತಿಶೂದ್ರರು ಪ್ರಾಣಿ ಪಕ್ಷಿಗಳಿಗಿಂತಲೂ ಕಡೆಯಾಗಿ ಜೀವನ ನಡೆಸುತಿದ್ದರು ಇದಕ್ಕೆಲ್ಲ ಅಜ್ಞಾನದ ಜಾತಿವ್ಯವಸ್ಥೆಯೇ ಕಾರಣವೆಂದು ಅರಿತ ಬುದ್ಧರು ಇದಕ್ಕೆ ಪರಿಹಾರವಾಗಿ ಸರ್ವರಿಗೂ ಒಳಿತನ್ನು ಮಾಡುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವೆಂಬ ಮಧ್ಯಮ ಆದಿಯ ಮೂಲಕ ಅಂದಿನ ಜನಸಾಮಾನ್ಯರ ಆಡುಭಾಷೆ ಪಾಳಿಯಲ್ಲಿ ತಿಳಿಸುತ್ತಾ, ಮೌಡ್ಯದಿಂದ ಜನರನ್ನು ಮುಕ್ತಗೊಳಿಸುತ್ತಾ ಸುಮಾರು 40 ವರುಷಗಳ ಕಾಲ ಕಾಲುನಡಿಗೆಯಲ್ಲಿಯೇ ಭಾರತವನ್ನು ಸುತ್ತಾಡಿ ತಮ್ಮ ಅಪಾರ ಶಿಸ್ಯವೃಂದದ ಭಿಕ್ಖುಗಳ ಮೂಲಕ ಜನರಿಗೆ ಬೋಧಿಸಿದ ಪರಿಣಾಮವಾಗಿ ಇಲ್ಲಿನ ಮೂಲನಿವಾಸಿ ನಾಗಜನರು ಜಾಗೃತರಾಗಿ ಅಟ್ಟಹಾಸವನ್ನು ಮೆಟ್ಟಿನಿಂತು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಚಂದ್ರಗುಪ್ತ ಮೌರ್ಯನಿಂದಿಡಿದು ಅಶೋಕ ಚಕ್ರವರ್ತಿ, ಕೊನೆಯ ದೊರೆ ಬೃಹದ್ರತ ಮೌರ್ಯನತನಕ ಸುಮಾರು 150 ವರ್ಷಗಳ ಕಾಲ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಿಗೆ ಭದ್ರಬುನಾದಿ ಹಾಕಿ ಆಳ್ವಿಕೆ ಮಾಡಿದರು.

ಸಾಮ್ರಾಟ್ ಅಶೋಕ ಚಕ್ರವರ್ತಿ ಶೋಕವಿಲ್ಲದ ಸಾಮ್ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದ ಜಗತ್ತಿನ ಮೊದಲ ದೊರೆ, ಕಾಳಿಂಗ ಯುದ್ಧದಲ್ಲಿ ಗೆದ್ದರೂ ಅಶೋಕನು ಅಲ್ಲಿನ ಅಪಾರ ಸಾವು ನೋವುಗಳನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿ ಖಡ್ಗವನ್ನು ತ್ಯಜಿಸಿ ಬೌದ್ಧ ಭಿಕ್ಖು ಉಪಗುಪ್ತನ ಉಪದೇಶಕ್ಕೆ ಮಾರುಹೋಗಿ ಬುದ್ಧ ಧಮ್ಮವೊಂದೇ ಬಹುಜನರನ್ನು ಕಾಪಾಡುವ ಸತ್ಯದ ಮಾರ್ಗವಾಗಿದೆ ಎಂದೂ ಬೌದ್ಧ ಧಮ್ಮ ಸ್ವೀಕಾರ ಮಾಡಿ, ಬೌದ್ಧ ಧಮ್ಮವನ್ನೇ ತನ್ನ ಧಮ್ಮವಾಗಿ ಘೋಷಿಸಿದ.

‘ದಿಗ್ವಿಜಯಕ್ಕಿಂತಲೂ ಧಮ್ಮವಿಜಯವೇ’ ಮೇಲೆಂದು ಇಡೀ ಜಗತ್ತಿಗೆ ಸಾರಿ, ಖಡ್ಗವನ್ನು ತ್ಯೆಜಿಸಿದ ದಿನವೇ ಬುದ್ಧ ಧಮ್ಮವನ್ನು ಸ್ವೀಕರಿಸಿ, ಧಮ್ಮದ ಮೇಲೆ ವಿಜಯ ಸಾದಿಸಿದ ನೆನಪಿಗಾಗಿ ವಿಜಯ ದಶಮಿ ಎಂದೂ ಘೋಷಣೆ ಮಾಡಿ ಧಮ್ಮಅಶೋಕನಾದ ಅಶೋಕನು ತನ್ನಿಬ್ಬರೂ ಮಕ್ಕಳನ್ನು ಧಮ್ಮ ಪ್ರಸಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದ, ಧಮ್ಮ ಪ್ರಚಾರಕ್ಕಾಗಿ ಧಮ್ಮ ದೂತರೆಂಬ ಹೊಸ ಶಾಖೆಯನ್ನು ತೆರೆದು ಧಮ್ಮದೂತರನ್ನು ಇತರೆ ದೇಶಗಳಿಗೆ ಕಳುಹಿಸಿ, ಸುಮಾರು 84000 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ಕಟ್ಟಿಸಿ ಬೌದ್ಧ ಸಾಮ್ರಾಟನಾಗಿ ವಿಜೃಂಭಿಸಿದ.

ಭಾರತದಲ್ಲಿ ಹುಟ್ಟಿದ ಬೌದ್ಧ ಧಮ್ಮವನ್ನು ಭಾರತದಿಂದಲೇ ಓಡಿಸಿದ ಮನುವಾದಿಗಳಿಗೆ ಮರ್ಮಘಾತ ನೀಡಿದ ಬಾಬಾಸಾಹೇಬರು ಕಣ್ಮರೆಯಾಗಿದ್ದ ಭಾರತೀಯರ ಮೂಲ ಧಮ್ಮವನ್ನು ಮತ್ತೆ!ಅದೇ ವಿಜಯ ದಶಮಿಯದಿನದಂದೆ ನಾಗಪುರದ ದೀಕ್ಷಾಭೂಮಿಯಲ್ಲಿ ದಿನಾಂಕ 14-10-1956 ರಂದು ಸುಮಾರು 10 ಲಕ್ಷ ಅನುಯಾಯಿಗಳೊಂದಿಗೆ “ಬುದ್ಧ ನಡೆಗೆ ಮರಳಿ ಮನೆಗೆ”ಹೋಗುವುದರ ಮೂಲಕ ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ನೀಡುವುದರ ಮೂಲಕ ಮತ್ತೊಮ್ಮೆ ಭಾರತದಲ್ಲಿ ಬೌದ್ಧ ಧಮ್ಮವನ್ನು ಮರು ಸ್ಥಾಪನೆ ಮಾಡಿದರು.

ಜೈನ ಧರ್ಮದ ಅತಿಯಾದ ಅಹಿಂಸಾ ಪಾಲನೆಯಿಂದ ಬೇಸತ್ತು ರೈತರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಹುಳ ಹುಪ್ಪಟಗಳಿಂದ ರಕ್ಷಿಸಿಕೊಳ್ಳಲು ಕೀಟನಾಶಕಗಳನ್ನು ಸಿಂಪಡಿಸುತ್ತಿರಲಿಲ್ಲ ಅದಕ್ಕೆ ರೈತಾಪಿ ವರ್ಗವು ಭಗವಾನ್ ಬುದ್ಧರ ಸರಳವಾದ ಮಧ್ಯಮ ಮಾರ್ಗವೇ ಲೇಸೆಂದು ಇಡೀ ರೈತ ಸಮುದಾಯವೇ ಬೌದ್ಧರಾದರು ಎಂದೂ ಖ್ಯಾತ ಸಂಶೋಧಕರಾದ ಕೆ ಎಸ್ ಭಗವಾನ್ ರವರು “ಭಾರತದ ರೈತರೆಲ್ಲರೂ ಬೌದ್ಧರೇ”ಆಗಿದ್ದರು ಎಂದೂ ಒಂದು ಪುಸ್ತಕವನ್ನೇ ಬರೆದು ಭಾರತ ಬೌದ್ಧಮಯವಾಗಿತ್ತು ಎಂಬುದಕ್ಕೆ ಪುಷ್ಟಿ ನೀಡಿದ್ದಾರೆ.

ಮೊನ್ನೆ ಅಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬುದ್ಧನ ನಾಡಾಗಿತ್ತು ಎಂಬುದನ್ನು ಖಚಿತಪಡಿಸುತ್ತಿವೆ, ಅಯೋಧ್ಯಯ ಮೂಲ ಹೆಸರು ಸಾಕೇತ್ ನಗರವಾಗಿ ಕ್ರಿಸ್ತ ಪೂರ್ವದಲ್ಲಿಯೇ ಒಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು, ಕ್ರಿಸ್ತ ಶಕ 1 ನೇ ಶತಮಾನದಲ್ಲಿ ಶುಂಗರ ಆಡಳಿತ ಕಾಲದಲ್ಲಿ ಸಾಕೇತನಗರದ ಹೆಸರನ್ನು ಬದಲಾವಣೆ ಮಾಡಿ ಅಯೋಧ್ಯ ವೆಂದು ಮರು ನಾಮಕರಣ ಮಾಡಲಾಯಿತು ಎನ್ನುತ್ತಾರೆ ಇತಿಹಾಸಕಾರರು.

ಲಿಪಿಯೇ ಇರದಿದ್ದ ಮೌಖಿಕ ಭಾಷೆಯಾಗಿದ್ದ ಸಂಸ್ಕೃತಕ್ಕೆ ದೇವನಾಗರಿ ಲಿಪಿ ಆಳವಡಿಸ್ಸಿದ್ದು, ಹಾಗೆಯೇ ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತ ಬರೆದದ್ದು ಶುಂಗ ವಂಶದ ಕಾಲದಲ್ಲೇ ಅದಕ್ಕೆ ಮುಂಚೆಯೇ ಚಂದ್ರ ಗುಪ್ತ ಮೌರ್ಯ, ಅಶೋಕ ಚಕ್ರವರ್ತಿ ಹಲವು ಅರಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಸಾಕೇತನಗರದ ಹೆಸರು ಮತ್ತು ಬ್ರಾಹ್ಮ್ಮಿ ಲಿಪಿಯಲ್ಲಿದ್ದ ಪಾಳಿ ಮತ್ತು ಪ್ರಾಕೃತಗಳ ಬಗ್ಗೆ ಉಲ್ಲೇಖಿಸಿದ್ದಾರೆಯೇ ಹೊರತು ಸಂಸ್ಕೃತ ಮತ್ತು ಅಯೋಧ್ಯಯ ಬಗ್ಗೆ ಎಲ್ಲಿಯೂ ಧಾಖಲಿಸಿಲ್ಲ, ಕ್ರಿಸ್ತ ಪೂರ್ವ 2 ನೇ ಶತಮಾನದಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾಕೇತ ಎಂಬ ಬೌದ್ಧ ಶಿಕ್ಷಣ ಕೇಂದ್ರವಿತ್ತೆಂದು ಹೇಳಿದ್ಧಾನೆ ಆದ್ದರಿಂದ ಆಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬೌದ್ಧ ರಾಷ್ಟ್ರವಾಗಿತ್ತೆಂದು ಸಾರಿ ಸಾರಿ ಹೇಳುತ್ತಿವೆ.

ಇತ್ತೀಚಿನ ದಿನಮಾನಗಳಲ್ಲಿ ಹಲವು ರಾಷ್ಟ್ರಗಳು ಭಗವಾನ್ ಬುದ್ಧರ ಮಾನವಿಯಾ ಗುಣಗಳ ಸದ್ಧಮ್ಮದೆಡೆಗೆ ಆಕರ್ಷಿತರಾಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಬೌದ್ಧ ಧಮ್ಮವು ವಿಶ್ವದ ಭವಿಷ್ಯದ ಧಮ್ಮವಾಗಲಿದೆ, “Buddhism is Future religion in tha world” ಎಂಬ ಬಾಬಾಸಾಹೇಬರ ಸತ್ಯವಾಗುತ್ತಿದೆ, ಮೊನ್ನೆ ಮೊನ್ನೆ ಇಂಗ್ಲೆಂಡ್ ನಲ್ಲಿ 148 ವರ್ಷದ ಕ್ರೈಸ್ತಧರ್ಮದ ಹಳೆಯ ಚೆರ್ಚನ್ನೇ ಬುದ್ಧನ ವಿಹಾರವಾಗಿ ಅಲ್ಲಿನ ಬುದ್ಧರ ಅನುಯಾಯಿಗಳು ಪರಿವರ್ತಿಸಿದ್ದಾರೆ, ಹಲವು ರಾಷ್ಟ್ರಗಳು ಭವಿಷ್ಯದಲ್ಲಿ ಬುದ್ಧರ ವೈಜ್ಞಾನಿಕ ತತ್ವಗಳಿಗೆ ಮಾರುಹೋಗಿ ಬುದ್ಧ ಧಮ್ಮವನ್ನೇ ಒಪ್ಪಿ ಅಪ್ಪಿಕೊಳ್ಳುವುದರೊಂದಿಗೆ ಅದನ್ನನುಸರಿಸುವ ಒಂದು ಜಾಗತಿಕ ದೊಡ್ಡ ಜನರ ಧಮ್ಮವಾಗುವುದರಲ್ಲಿ ಅನುಮಾನವೇ ಇಲ್ಲಾ! ಮಹಾಕಾರುಣಿಕ ಬುದ್ಧರು ಜನಿಸಿ 2564 ವರ್ಷಗಳಾದರೂ ಬುದ್ಧರ ಕರುಣೆ ಪ್ರೀತಿ ವಿಶ್ವಮೈತ್ರಿ ಯ ಬುದ್ಧಭಾರತವೆಂಬ ಮಾರ್ಗವು ಇಡೀ ವಿಶ್ವಕ್ಕೆ ದಾರಿ ದೀಪವಾಗಿ ವಿಶ್ವದ ಗುರುವಾಗುವುದರಲ್ಲಿ ಸಂಶಯವಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭ; ಕೃಷಿ ಚಟುವಟಿಕೆ ಆರಂಭ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ ಒಂದು ವಾರ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಪ್ರತಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಸಮೇತ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ತೀವ್ರತೆ ಹೆಚ್ಚಾಗಲಿದ್ದು, ಇದೇ 20ರ ವರೆಗೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿವೇಳೆ ಹಗುರದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ನಿನ್ನೆ ರಾತ್ರಿ ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು, ಓರ್ವ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ವರ್ಷಧಾರೆ ಉತ್ತಮವಾಗಿದ್ದು, ರೈತರಲ್ಲಿ ಸಂತಸ ಉಂಟುಮಾಡಿದೆ. ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಗೊಂಡಿರುವ ಬಗ್ಗೆ ನಮ್ಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಪರಿಹಾರವನ್ನು ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಹಣ ಪಾವತಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.

ಇದರ ಜತೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿ ವರೆಗೆ ರಾಜ್ಯ ಸರ್ಕಾರದ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಹಾವೇರಿ ಜಿಲ್ಲಿಯಲ್ಲಿ ಒಂದು ಲಕ್ಷ 98 ಸಾವಿರದ 455 ರೈತರಿಗೆ 9 ಹಂತದಲ್ಲಿ 37 ಕೋಟಿ 73 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗದಗ ಜಿಲ್ಲೆಯಲ್ಲಿ ಕಳೆದ ಸಾಲಿನ ಹಂಗಾಮಿನಲ್ಲಿ ಬೆಳೆಹಾನಿಗೆ ಒಂದು ಲಕ್ಷದ 13 ಸಾವಿರದ 328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ.

ರೈತರು ತಮ್ಮ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಸಹಾಯವಾಣಿಯ ಮೂಲಕ ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೇಲ್ಮನೆಯ ಆರು ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಪ್ರಗತಿಯಲ್ಲಿ ; ಕಣದಲ್ಲಿ 103 ಅಭ್ಯರ್ಥಿಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಕಾರ್ಯ ಆರಂಭಗೊಂಡಿದೆ.

ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜತೆಗೆ, ದೊಡ್ಡ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ 24 ನಾಮಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ 18 ನಾಮಪತ್ರಗಳು ಸಲ್ಲಿಕೆಯಾದರೆ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ 11 ನಾಮಪತ್ರಗಳು, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ 7 ನಾಮಪತ್ರಗಳು, ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಿಂದ 12ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 13 ನಾಮಪತ್ರಗಳು ನಿನ್ನೆ ಸಲ್ಲಿಕೆಯಾಗಿದ್ದವು.

ಇದುವರೆಗೆ ಒಟ್ಟು 103 ಅಭ್ಯರ್ಥಿಗಳಿಂದ 156 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ. ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಾಗುವುದು. ನಾಮಪತ್ರ ವಾಪಸ್ ಪಡೆಯಲು ಇದೇ 20ರಂದು ಕೊನೆಯ ದಿನವಾಗಿದೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಜೂನ್ 3 ರಂದು ಮತದಾನ ನಡೆಯಲಿದೆ. ಮತದಾನದ ಸಂಬಂಧ ಚಿತ್ರದುರ್ಗ ಜಿಲ್ಲೆಯ ಮತದಾನ ಕೇಂದ್ರಗಳ ಪಟ್ಟಿಯನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಿಸಿದರು. ಜಿಲ್ಲೆಯಲ್ಲಿ ಒಟ್ಟು 7 ಮತದಾನ ಕೇಂದ್ರಗಳಿವೆ.

ಮೊಳಕಾಲ್ಮೂರು ತಾಲೂಕಿನ ಶಿಕ್ಷಕರ ಮತದಾರರು ಮೊಳಕಾಲ್ಮೂರು ಪಟ್ಟಣದ ತಾಲೂಕು ಆಡಳಿತ ಕೇಂದ್ರದಲ್ಲಿ ಮತ ಚಲಾಯಿಸಬಹುದು. ಚಳ್ಳಕೆರೆ ನಗರದ ಬಿ.ಎಂ.ಜಿ.ಎಚ್.ಎಸ್ ಶಾಲೆ, ಚಿತ್ರದುರ್ಗ ನಗರದ ಬಾಲಕಿಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ 1, ಕೋಠಡಿ 2 ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರಿಯೂರು ನಗರದ ತಾಲೂಕಿನ ಕಚೇರಿಯಲ್ಲಿ, ಹೊಸದುರ್ಗ ಪಟ್ಟಣ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹೊಳಲ್ಕರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮತಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕ ಮತದಾರರು ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 4 ಸಾವಿರದ 615 ಶಿಕ್ಷಕ ಮತದಾರರು ಇದ್ದಾರೆ ಎಂದು ಅವರು ಅಂಕಿ-ಅಂಶ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಶಾಲೆಯಲ್ಲಿನ 7, 8 ಮತ್ತು 9ನೇ ತರಗತಿಗಳಲ್ಲಿನ ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ ಶಾಲೆಗಳಲ್ಲಿ 2024-25ನೇ ಸಾಲಿಗೆ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳನ್ನು ಜಿಲ್ಲಾ ಹಂತದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಸ್ಥಾನಗಳ ವಿವರ ಇಂತಿವೆ

7ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-1, 8 ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-2. ಪ್ರವರ್ಗ-1 ರಲ್ಲಿ ಹೆಣ್ಣು-1, 2ಎ ರಲ್ಲಿ ಹೆಣ್ಣು-1, 3ಬಿ ಯಲ್ಲಿ ಗಂಡು-1 ಹಾಗೂ 9ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-1. ಪ.ವರ್ಗದಲ್ಲಿ ಹೆಣ್ಣು- 5 ಒಟ್ಟು 12 ಸ್ಥಾನಗಳು ಖಾಲಿಯಿರುತ್ತವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಸ್ಥಾನ ಲಭ್ಯವಿರುವುದಿಲ್ಲ.

ಮೇಲ್ಕಾಣಿಸಿದ ಖಾಲಿ ಸ್ಥಾನಗಳನ್ನು ಹೊರತು ಪಡಿಸಿ ಇತರೆ (ಲಿಂಗ, ಜಾತಿ) ಆಸಕ್ತಿಯಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ, ವಸತಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಖಾಲಿಯಾಗಬಹುದಾದ ಸ್ಥಾನಗಳಿಗೆ ಹೆಚ್ಚುವರಿ ಆಯ್ಕೆಪಟ್ಟ(Waiting List) ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದಾಖಲಾತಿಗೆ ಪರಿಗಣಿಸಲಾಗುವುದು.

ಅರ್ಜಿಗಳನ್ನು ಸಮೀಪದ ಮೊರಾರ್ಜಿದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್, ಪ್ರತಿಭಾನ್ವಿತ ಹೆಣ್ಣುಮಕ್ಕಳ ವಸತಿ ಶಾಲೆಗಳಲ್ಲಿ ಮೇ.17 ರಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮೇ.31 ರೊಳಗಾಗಿ ಜಂಟಿ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇಲ್ಲಿ ಕಡ್ಡಾಯವಾಗಿ ಸಲ್ಲಿಸುವುದು. ಜೂನ್ 5ರಂದು ಮೊರಾರ್ಜಿದೇಸಾಯಿ ವಸತಿ ಶಾಲೆ ದೇವರಬೆಳಕೆರೆ, ಹರಿಹರ ತಾಲ್ಲೂಕು ಇಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ.ಕೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending