ದಿನದ ಸುದ್ದಿ
ಮೈಸೂರು ಭಾಗದ ಜನಪದರು ಹೇಳುವಂತೆ ‘ನವರಾತ್ರಿ ಆಯುಧ ಪೂಜೆ ದಸರಾ ಗುಪ್ತ ಹಿನ್ನಲೆ’..!

- ಹ.ರಾ.ಮಹಿಶ
ಆರ್ಯ ವೈದಿಕ ಬ್ರಾಹ್ಮಣ ಪುರುಷರು ನಡೆಸುತ್ತಿದ್ದ “ಗೋಯಜ್ಞ”ಗಳಿಂದ ಬೇಸಾಯ ಯೋಗ್ಯವಾಗಿರುತ್ತಿದ್ದ ಸಾವಿರಾರು ಗೋವುಗಳು ನಿತ್ಯವೂ ಬಲಿಯಾಗುತ್ತಿದ್ದವು..! ಎಷ್ಟೆಂದರೆ ಬರುಬರುತ್ತಾ ಹೊಲಗದ್ದೆಗಳಲ್ಲಿ ಒಕ್ಕಲುತನ ಮಾಡುವ ಒಕ್ಕಲಿಗ ರೈತರಿಗೆ ಉಳಲು ಬಿತ್ತಲು ಮತ್ತು ಗಾಡಿಗೆ ಕಟ್ಟಲು ದನಗಳೇ ಸಿಗದಷ್ಟು ಗೋವುಗಳನ್ನು ಯಜ್ಞದ ಹೆಸರಿನಲ್ಲಿ ತಿಂದುಹಾಕುತ್ತಿದ್ದರು..! ಒಕ್ಕಲಿಗರು ತಮ್ಮ ರಾಜನಾದ ಮಹಿಶನಿಗೆ ಈ ಕುರಿತು ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ರೈತಪರನಾದ ಮಹಿಶಮಹಾರಾಜರು ಪ್ರಾಣಿಗಳ ಮಾರಣಹೋಮವಾಗುತ್ತಿದ್ದ ಯಜ್ಞಯಾಗಗಳನ್ನು ನಿಷೇಧಿಸಿದರು. ಮತ್ತು ಬ್ರಾಹ್ಮಣಪುರುಷರು ಹೊಟ್ಟೆಪಾಡಿಗಾಗಿ ಬೇರೇನಾದರೂ ನ್ಯಾಯಯುತವಾದ ಮಾರ್ಗದಿಂದ ದುಡಿದು ತಿನ್ನುವಂತೆ ಅಪ್ಪಣೆ ಹೊರಡಿಸಿದರು. ನಾಡಿನರೈತರು ಸಮಾಧಾಮದಿಂದ ನಿಟ್ಟುಸಿರು ಬಿಟ್ಟರು..!
ಮುಗ್ಧಜನರ ಮೆದುಳಿಗೆ ಮೌಢ್ಯ ತುಂಬಿ ತೊಟ್ಟು ಬೆವರುಸುರಿಸದೆ ನಿರಾಯಾಸವಾಗಿ ಬದುಕಿಕೊಂಡಿದ್ದ ಆರ್ಯವೈದಿಕ ಬ್ರಾಹ್ಮಣ ಪುರುಷರು ಇದರಿಂದ ಕುದಿಕುದಿದುಕುಪಿತಗೊಂಡರು..! ತಮ್ಮ ಹೊಟ್ಟೆಯ ಮೇಲೆ ಹೊಡೆದ ಮಹಿಶಾಸುರ ಮಹಾರಾಜನನ್ನು ಕೊಲ್ಲಲು ತೀರ್ಮಾನಿಸಿದರು..! ಸ್ವತಃ ಮಹಾಶೂರಧೀರ ಮಹಾಧೈತ್ಯದಾನವನಾದ ಮತ್ತು ಸದಾ ಅಂಗರಕ್ಷಕರೊಂದಿಗಿರುವ ಮಹಾರಾಜರನ್ನು ಕೊಲ್ಲುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಅಗ್ರಹಾರದೊಳಗೆ ಒಂಭತ್ತು ರಾತ್ರಿಗಳು ರಾಜನನ್ನು ಶಕ್ತಿಯಿಂದಲ್ಲದೆ ಯುಕ್ತಿಯಿಂದ ಕೊಲ್ಲುವುದು ಹೇಗೆಂದು ಗುಪ್ತಸಭೆ ಚರ್ಚೆಗಳು ನಡೆದವು ಅದರ ನೆನಪಿಗೇ ಇಂದು ನವರಾತ್ರಿ(ಒಂಭತ್ತು ರಾತ್ರಿ) ಆಚರಣೆ..!!
ಮಹಿಶಾಸುರನ ಕುಟುಂಬಕ್ಕೆ ನಂಬುಗೆಯ ಆಪ್ತಳಾಗಿದ್ದ ಚಾಮುಂಡಿ ಎಂಬ ಮಹಿಳೆಯಿಂದ ಅಂಗರಕ್ಷರಿಲ್ಲದ ಬೆಳಗಿನ ಸೂರ್ಯನಮಸ್ಕಾರದ ವೇಳೆ ಹಾಲಿಗೆ ಮತ್ತು ಬರುವ ವಿಷಬೆರೆಸಿ ಕುಡಿಸುವಂತೆಯೂ ಹಿಂದಿನರಾತ್ರಿಯೇ ನದೀತೀರದಲ್ಲಿ ಕತ್ತಲಿನಲ್ಲಿ ಸುತ್ತಲೂ ಬಗೆಬಗೆ ಆಯುಧಸಮೇತ ಅವಿತು ಕೂತು ಮೂರ್ಛೆಗೊಂಡ ಮಹಿಷನನ್ನು ಕೊಚ್ಚಿ ಕೊಲ್ಲುವಂತೆಯೂ ಈ ಮಹಾಕಾರ್ಯಕ್ಕಾಗಿ ಚಾಮುಂಡಿಯನ್ನು ದೇವತೆಯಂತೆ ಬಿಂಬಿಸಿ ರಾಣಿಯಾಗಿ ಮಾಡುವುದಾಗಿಯೂ ಗುಪ್ತ ಒಪ್ಪಂದವಾಯಿತು..! ಹಾಗಾಗಿ ಆ ಹಿಂದಿನ ರಾತ್ರಿಯೇ ಅಗ್ರಹಾರದಲ್ಲಿದ್ದ ಬ್ರಾಹ್ಮಣರ ಮನೆಯ ಆಯುಧಗಳು ಮಹಿಶಾಸುರನನ್ನು ಕೊಲ್ಲಲು ಪೂರಕವಾಗಿ ಪೂಜೆಗೊಳಗಾದವು..! ಅದರ ನೆನಪಿಗೇ “ಆಯುಧಪೂಜೆ” ಆಚರಣೆ..!!
ಬ್ರಾಹ್ಮಣರ ಮತ್ತು ಚಾಮುಂಡಿ ನಡುವಿನ ಗುಪ್ತಯೋಜನೆಯಂತೆ ಮರುದಿನ ಮುಂಜಾನೆಯೇ ಮಹಿಷಾಸುರಮಹಾರಾಜರನ್ನು ಮೋಸದಿಂದ ಕ್ರೂರವಾಗಿ ಕೊಲ್ಲಲಾಯಿತು..! ರೈತರು ಜನಸಾಮಾನ್ಯ ಪ್ರಜೆಗಳು ತಮ್ಮ ಪ್ರಜಾಪಿತರಾಜರನ್ನು ಕಳೆದುಕೊಂಡು ಅನಾಥರಾದರು..!
ಬ್ರಾಹ್ಮಣರು ವಿಜಯ ಸಾಧಿಸಿದರು. ಆ ಹತ್ತನೇ(ದಶ)ದಿನದ ವಿಜಯ ನೆನಪೇ ಮೈಸೂರು ‘ದಸ’ರಾ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.
ಕೆಎಸ್ಆರ್ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ವಿಜ್ಞಾನಿಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
-
ದಿನದ ಸುದ್ದಿ18 hours ago
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ18 hours ago
ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ
-
ದಿನದ ಸುದ್ದಿ17 hours ago
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ
-
ದಿನದ ಸುದ್ದಿ4 days ago
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ; ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ18 hours ago
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ಇಂಡಿಯಾ ಪ್ರಯಾಣಿಕ ವಿಮಾನ ಪತನ : 242 ಪ್ರಯಾಣಿಕರು ಸಾವು
-
ದಿನದ ಸುದ್ದಿ4 days ago
ಜೂನ್ 9, 2025 ರ ಅಡಿಕೆ ರೇಟು ಹೀಗಿದೆ
-
ದಿನದ ಸುದ್ದಿ18 hours ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ