Connect with us

ದಿನದ ಸುದ್ದಿ

ಏ. 11 ರಂದು ನೆಲಮಂಗಲದಲ್ಲಿ ಕೆ ಆರ್ ಎಸ್ ಪಕ್ಷದಿಂದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Published

on

ಸುದ್ದಿದಿನ, ಬೆಂಗಳೂರು : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರಾಜ್ಯಾದ್ಯoತ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ವಿರುದ್ದ , ಸರ್ಕಾರಿ ಅದಿಕಾರಿಗಳಿಂದ ಪ್ರಾಮಾಣಿಕ ಜನಸೇವೆ , ಹಾಗೂ ನಾಗರಿಕರ ಅಹವಾಲು ಸ್ವೀಕಾರ , ಜನಜಾಗೃತಿ , ಜನಸ್ಪಂದನ , ಕಾರ್ಯಕ್ರಮವು ಇದೇ ತಿಂಗಳ 11 ರಂದು ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ನಡೆಯಲಿದ್ದು, ಬೆಂಗಳೂರು ಗ್ರಾ , ಜಿಲ್ಲೆ ಯ ಹಾಗೂ ನೆಲಮಂಗಲ ತಾಲೂಕಿನ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ‌.

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಸಹ ನೆಲಮಂಗಲ ತಾಲೂಕು ಘಟಕದ ವತಿಯಿಂದ ಅಧ್ಯಕ್ಷರಾದ ಶ್ರೀ ಯುತ ಅರುಣ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಅವರ ಪದಾಧಿಕಾರಿಗಳ ಮುಂದಾಳತ್ವದಲ್ಲಿ ಮತ್ತು ಶ್ರೀ ರಮೇಶ್ ಜಿ ಏನ್ , ರಾಜ್ಯಜಂಟಿ ಕಾರ್ಯದರ್ಶಿಗಳು ಹಾಗೂ ಚಿಕ್ಕಬಳ್ಳಾಪುರ – ಕೋಲಾರ ಜಿಲ್ಲಾ ಉಸ್ತುವಾರಿಗಳು ಮತ್ತು ಶ್ರೀ ಸೋಣ್ಣಪ್ಪಗೌಡರು ಬೆಟ್ಟಳ್ಳಿ ಬೆ , ಗ್ರಾ , ಜಿಲ್ಲಾ ಉಸ್ತುವಾರಿಗಳು ಹಾಗೂ ಹೊಸಕೋಟೆ ವಿದಾನಸಭಾ ಕ್ಷೆತ್ರದ ಸಂಭಾವ್ಯ ಅಭ್ಯರ್ಥಿಗಳು ಇವರು ಆತಿಥ್ಯ ದಲ್ಲಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ವಾಡುತಿದ್ರು, ಅಸಮರ್ಥ 40% ಕಮಿಷನ್ ಸರ್ಕಾರ, ಎಂದು ಕ್ಯಾತಿ ಗಳಿಸಿರುವ ಬಿಜೆಪಿ ಸರ್ಕಾರವನ್ನ , ಪೊಲೀಸ್ ಠಾಣೆಗಳಲ್ಲಿ ಅಕ್ರಮ ಚಟುವಟಿಕೆಗಳು ಏಗಿಲ್ಲದೆ ನಡೆಯುತ್ತಿದ್ರು , ಸರ್ಕಾರಿ ಅಧಿಕಾರಿಗಳು ಸಾಮಾನ್ಯ ಜನರಿಗೆ ಪ್ರಮಾಣಿಕ ಜನಸೇವೆ ಮಾಡದೆ. ವಿಳಂಬ ದೋರಣೆ , ಇಲ್ಲಸಲ್ಲದ ಸಾಬೂಬು ಹೇಳಿ,ಲಂಚಕ್ಕೆ ಬೇಡಿಕೆ , ಇನ್ನಿತರ ಆಮಿಷಗಳನ್ನ ಪಡೆಯಲು ತಿಂಗಳನು ಗಟ್ಟಲೆ , ಒಬ್ಬೊಬ್ಬರಿಗೆ ವರ್ಷನು ಗಟ್ಟಲೆ ಅರ್ಜಿಗಳನ್ನ ಪೆಂಡಿಂಗ್ ಇಟ್ಟಿರುತ್ತಾರೆ.

ಇನ್ನು ನೂರಾರು ತರದ ಸಮಸ್ಸೆ ಗಳು , ಸರ್ಕಾರ ವತಿಯಿಂದ ಸಿಗಬೇಕಾದ , ಯೋಜನೆಗಳು , ಅನುದಾನಗಳು , ಸಿಗುತ್ತಿಲ್ಲ, ಅಭಿವೃದ್ಧಿ ಕೆಲಸಗಳು ತೀರ ಕುಂಟಿತ ಆಗೋಗಿದೆ ಇದನ್ನ ಪ್ರೆಶ್ನೆ ಮಾಡಬೇಕಾದ , ವಿರೋದ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಗಳು ಕಿಂಚಿತ್ತು ಗಮನ ಕೊಡದೆ ರಾಜಿಕೀಯ ಮಾಡಿಕೊಂಡು , ಒಬ್ಬರಿಗೊಬ್ಬರು ಸಂತೆ ಯಲ್ಲಿ ಕಳ್ಳರ ಗುಂಪು ಇದ್ದಾಗೆ , ಈ ಜೆಸಿಬಿ ಪಕ್ಷಗಳು ಒಂದೆ ಮುಖದ ಮೂರು ನಾಣ್ಯಗಳಿದ್ದಂತೆ ಹೆಸರಿಗೆ ಮಾತ್ರ ಮೂರು ಪಕ್ಷಗಳು ಆದ್ರೆ ಎಲ್ಲರು ಒಂದಾಗಿ ರಾಜಿಕೀಯ ಮಾಡಿಕೊಂಡು ಸಾರ್ವಜಕರಿಗೆ ಸರಿಯಾದ ಸೇವೆ ಕೊಡದೆ ಮುಂದಿನ ವರ್ಷದ ಚುನಾವಣೆಗೆ ಗಮನ ಕೊಟ್ಟು ಅಭಿವೃದ್ಧಿಯನ್ನ ಮಾಡದೆ ಈಗಿನಿಂದಲೇ ಚುನಾವಣಾ ಬ್ಯುಸಿ ಯಲ್ಲಿದ್ದಾರೆ. ಇದನ್ನ ಜನಸಾಮಾನ್ಯರು ಗಂಭೀರ ವಾಗಿ ಯೋಚಿಸಬೇಕಿದೆ ಎಂದು ತಿಳಿಸಲಾಗಿದೆ.

ಇದನ್ನ ಮನಗಂಡ KRS ಪಕ್ಷವು ತಾಲೂಕಿನ ಸಾರ್ವಜನಿಕರಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ ಸ್ವಚ್ಚ , ಪ್ರಾಮಾಣಿಕ , ಹಾಗೂ ಪಾರದರ್ಶಕ ವಾದಂತ ಉತ್ತಮ ರಾಜಿಕೀಯ ವ್ಯವಸ್ಥೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಕ್ಷ ಸೇರ್ಪಡೆ , ಹೋಬಳಿ ಮಟ್ಟದಲ್ಲಿ ಪದಾಧಿಕಾರಿಗಳ ಆಯ್ಕೆ ,ದೇಣಿಗೆ ಸಂಗ್ರಹಣೆ,. ನಡೆಯುತ್ತಿದ್ದು ತಾವುಗಳು ಸಕರಿಸಬೇಕೆಂದು ಮನವಿಮಾಡಿಕೊಳ್ಳುತ್ತಿದೆ.

ಜೊತೆಗೆ ಕೆಲವೇ ತಿಂಗಳುಗಳಲ್ಲಿ ಬರುವ ತಾಲೂಕು ಪಂಚಾಯತ್ (T P) ಹಾಗೂ ಜಿಲ್ಲಾ ಪಂಚಾಯತ್ (Z P) ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬಯಸುವ ಆಸಕ್ತರಿಗೆ ಅಕ್ರಮ ಚುನಾವಣೆ ಪ್ರಚಾರ ಮಾಡದೆ ಮತದಾರರಿಗೆ [ ಹಣ , ತುಂಡು , ಲಿಕ್ಕರ್ , ಕುಕ್ಕರ್ , ಸೇರಿ , ಪಂಚೆ ]ಇನ್ನಿತರ ಅನೇಕ ಆಮಿಷ ಗಳನ್ನ ಒಡ್ಡದೇ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲು ಆಸಕ್ತಿಯುಳ್ಳ ವರಿಗೆ ಪಕ್ಷವು ತರಬೇತಿ ನೀಡಿ ಸ್ಪರ್ದಿಸಲು ಅವಕಾಶ ಮಾಡಿ ಕೊಡುತ್ತಿದೆ. ಇಂತಹ ಅವಕಾಶವನ್ನ ತಾಲೂಕಿನ ಹಾಗೂ ಬೆ, ಗ್ರಾ , ಜಿಲ್ಲಾ ನಾಗರಿಕರು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

  • ಶ್ರೀ ಅರುಣ್
    ಅಧ್ಯಕ್ಷರು
    ನೆಲಮಂಗಲ ತಾಲೂಕು ಕ ರಾ ಪ
    ಮೊಬೈಲ್ – 9900996717
  • ಶ್ರೀ ವೆಂಕಟೇಶ್ ಮೂರ್ತಿ
    ಬೆ, ಗ್ರಾ ಜಿಲ್ಲಾ ಅಧ್ಯಕ್ಷರು ಕ ರಾ ಪ
    ಮೊಬೈಲ್ – 6360063039

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending