ಸಿನಿ ಸುದ್ದಿ
ಜಂಟಲ್ಮನ್ ಕರ್ಣನಲ್ಲ ; ಕುಂಬಕರ್ಣ..!
- ಮಾಸ್ತಿ
ಚೆನ್ನಾಗಿ ನಿದ್ದೆ ಮಾಡಿದ್ರೆ ಯಾವುದೇ ಖಾಯಿಲೆನಾದ್ರೂ ವಾಸಿ ಆಗುತ್ತೆ ಅದ್ರೆ ಮಲಗಿರೋದೇ ಖಾಯಿಲೆ ಆದ್ರೆ ?
ಡಾಕ್ಟ್ರು ಹೇಳ್ತಾರೆ ಇವನಿಗೆ ಮಾರಕ ಖಾಯಿಲೆ ಇದೆ ದಿನದ ಇಪ್ಪತ್ನಾಲ್ಕು ತಾಸಲ್ಲಿ ಬರೋಬ್ಬರಿ ಹದಿನೆಂಟು ತಾಸು ಮಲಗಿರ್ತಾನೆ ಬರೀ ಆರು ತಾಸು ಮಾತ್ರ ಎದ್ದಿರ್ತಾನೆ ಅಂತ , ಆಗೊಬ್ಬ ಕೇಳ್ತಾನೆ ಅಲಾರಂ ಇಟ್ರು ಎದ್ದೇಳಲ್ವಾ ಅಂತ ? ಅದಕ್ಕೆ ಡಾಕ್ಟರ್ ‘ ಅಲಾರಂ ಅಲ್ಲ ಅಲ್ಲಾ ರಾಮ್ ಇಬ್ರು ಬಂದ್ರು ಇವನು ಎದ್ದೇಳಲ್ಲ !.
ಇದನ್ನ ಮಾರಕ ಖಾಯಿಲೆ ಅಂತೇಳೋ ಬದಲು ಮಂಪರು ಖಾಯಿಲೆ ಅಂತನ್ನಬಹುದು .ಬರೀ ಆರು ತಾಸಲ್ಲಿ ಅವನು ರೆಡಿಯಾಗ್ಬೇಕು ಕೆಲಸಕ್ಕೋಗ್ಬೇಕು ತಿನ್ನಬೇಕು ಟ್ರೀಟ್ಮೆಂಟ್ ತಗೋಬೇಕು ಒಂದಾ ಎರಡಾ, ಇವನಿಗೊಂದು ಸಣ್ಣ ಕುಟುಂಬ , ಇದರ ಮದ್ಯೆ ಇವನದೊಂದು ಲವ್ ಸ್ಟೋರಿ , ಸಮಯ ಒದಗಿಸಲಕ್ಕಾಗದೇ ಕೆಲಸ ಬಿಡ್ತಾನೆ , ಬಾಸ್ ಕೇಳ್ತಾನೆ ಅಲ್ಲಯ್ಯ ಯಾರಾದ್ರೂ ಲವ್ ಗೋಸ್ಕರ ಕೆಲಸ ಬಿಡ್ತಾರ ? ಅದಕ್ಕೆ ಹೀರೋ ಹೇಳ್ತಾನೆ ಲವ್ಗೋಸ್ಕರ ಪ್ರಾಣಾನೇ ಬಿಡ್ತಾರೆ ಅಂತದ್ರಲ್ಲಿ ಕೆಲಸ ಬಿಟ್ರೆ ಏನು ?. ದೇವರೇ ಅನ್ಯಾಯವೆಸಗಿರುವ ಈ ರೋಗಿಯ ಬದುಕಿನಲ್ಲಿ ಎದುರಾಗುವ ಸವಾಲುಗಳೇನು ಅದನ್ನವನು ಎದುರಿಸುವ ರೀತಿ ಏನು ಇದೇ ಈ ಸಿನಿಮಾದ ತಿರುಳು.
ಜಡೇಶ್ ಕುಮಾರ್ ಹಂಪಿ ವಯಸ್ಸಲ್ಲಿ ಅಂತಹ ಹಿರಿಯನಲ್ಲದಿದ್ದರೂ ಈ ತರಹದ ಮೆಚ್ಯೂರ್ಡ್ ಥ್ರಿಲ್ಲಿಂಗ್ ಸ್ಟೋರಿ ಮಾಡಿಕೊಂಡು ಚೆಂದದ ಸಿನಿಮಾ ಮಾಡಿದ್ದಾರೆ, ಅದಕ್ಕೆ ಅವರ ಗುರುಗಳಾದ ಗುರುದೇಶ್ಪಾಂಡೆ ಅವರೇ ಹಣ ಹೂಡಿದ್ದಾರೆ, ಪ್ರಜ್ವಲ್ ಈ ಸಿನಿಮಾದಲ್ಲಿ ತುಂಬಾನೇ ಚೆನ್ನಾಗಿ ಕಾಣ್ತಾರೆ, ಪಾತ್ರದಲ್ಲಿ ಮಲಗಿದ್ರೂ ಪಾತ್ರಪೋಷಣೆಯಲ್ಲಿ ಮಿಂದೆದ್ದಿದ್ದಾರೆ, ಪಾತ್ರದಲ್ಲಿ ಮಾಗಿದ್ದಾರೆ ಪಾತ್ರಕ್ಕಾಗಿ ಬಾಗಿದ್ದಾರೆ.
ನಿಶ್ವಿಕ ಅಪರೂಪದ ಅಲಾರಂ ಪೀಸ್ನಂತೆ ಸುಂದರವಾಗಿ, ಇಂಚರದಷ್ಟೇ ಇಂಪಾಗಿ ಸದ್ದು ಮಾಡುತ್ತಾರೆ. ಆರೂರು ಸುಧಾಕರ್ ಶೆಟ್ಟರ ಸಿನಿಮಾಟೋಗ್ರಫಿ ನೂರೂರಿನವರನ್ನು ಒಪ್ಪಿಸುವಂತಿದೆ, ತಾಂತ್ರಿಕತೆ ಉತ್ಕೃಷ್ಟವಾಗಿದೆ, ಅವರೇನು ಅಂತೇಳಲು ಸೆಲ್ಫಿ ಫೈಟ್ನಲ್ಲಿ ಅವರು ಮಾಡಿರುವ ಲೈಟಿಂಗ್ ಮತ್ತು ಕ್ಯಾಮರಾವನ್ನಾಡಿಸಿರುವ ರೀತಿಯೇ ಉದಾಹರಣೆ, ಸಾಹಸದಲ್ಲಾಗಲೀ ಸಂಗೀತದಲ್ಲಾಗಲಿ , ಹಾಸ್ಯದಲ್ಲಾಗಲಿ ಲಾಸ್ಯದಲ್ಲಾಗಲೀ, ಗಾತ್ರದ ಕ್ಯಾಮರಾವನ್ನು ಪಾತ್ರವನ್ನಾಗಿಸಿದ್ದಾರೆ.
ಸಿಕ್ಕ ಸಮಯದಲ್ಲೇ ಕತ್ತಲನ್ನೂತು ಬೆಳಕನ್ನು ಬೆಳೆದಿದ್ದಾರೆಂದರೆ ಸೋಜಿಗವಲ್ಲ. ಅಜನೀಶರ ಸಂಗೀತ ನಿಜಕ್ಕೂ ನಿದ್ದೆಕತೆಯಲ್ಲೂ ಲಾಲಿ ಹಾಡಿಸುತ್ತೆ, ಮಂಪರಲ್ಲೂ ಮನರಂಜಿಸುತ್ತೆ, ಹಿನ್ನೆಲೆಸಂಗೀತದಲ್ಲಿ ನಿಮ್ಮಿಂದೆ ನಾನಿದೀನಿ ಅಂತ ಧೈರ್ಯ ತುಂಬುತ್ತೆ , ಸಂಚಿತ್ ಹೆಗ್ಗಡೆಯೆಂಬ ” ಉಸಿರಾಡುವ ಮೈಕು ” ಕಿವಿಗಲ್ಲ ಮನಸ್ಸಿಗಿಡಿಸುವಂತಾಡಿದ್ದಾನೆ.
ಬರುವ ಎಲ್ಲಾ ಪಾತ್ರಗಳೂ ಅವಶ್ಯಕಥೆಯ ಹಾಗೂ ಜಡೇಶರ ಕಥೆಯ ಚೌಕಟ್ಟಿನಲ್ಲೇ ಇದೆ. ಸಂಚಾರಿ ವಿಜಯ್ ಖಾಕಿ ತೊಟ್ಟು ಖಡಕ್ ಪಾತ್ರದಲ್ಲಿ ಕಾಣಿಸಿದ್ದಾರೆ. ಮನೆಯಲ್ಲೊಂದು ಮಗು ಇದ್ದರೆ ಎಂಥಾವ್ರಿಗೂ ಮನೆ ಕಡೆ ಹೋಗ್ಬೇಕನ್ನಿಸುತ್ತದೆ ಹಾಗೆಯೇ ಬೇಬಿ ಅರಾಧ್ಯ ಎಂಬ ಆರು ವರುಷದ ಮಗು ಒಂದು ಪಾತ್ರ ಮಾಡಿದೆ ನಿಜಕ್ಕೂ ಆ ಪುಟ್ಟ ಪಾತ್ರಕ್ಕೆ ಈ ಹುಡುಗಿ ದೊಡ್ಡ ಮೆರಗು ತುಂಬಿದ್ದಾಳೆ. ಭಾವುಕಳಾದರಂತೂ ನಿರ್ಭಾವುಕರ ಕಣ್ಣಲ್ಲಿಯೂ ನೀರು ತುಂಬಿಸುತ್ತಾಳೆ .
ಕಿರುತೆರೆಯ ನಟ ಅರ್ಜುನ್ ಹಿರಿತೆರೆಯಲ್ಲಿ ಆರ್ಭಟಿಸಿದ್ದಾರೆ. ಅನಿಲ್ ಯಾದವ್ ಚಿಕ್ಕ ಪಾತ್ರವನ್ನು ಚೊಕ್ಕವಾಗಿಸಿದ್ದರೆ ಪ್ರಶಾಂತ್ ಪಾತ್ರವನ್ನು ಸಿದ್ದಿಸಿದ್ದಾರೆ. ಮಿಕ್ಕಂತೆ ಜಡೇಶ್ ವೆಂಕಿಯ ಸಂಕಲನವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಜಂಟಲ್ಮನ್ ಅಂದ್ರೆ ಸಂಭಾವಿತ, ಸಭ್ಯಸ್ಥ , ಸುಸಂಸ್ಕೃತ. ನಂಬಿ ಈ ಸಿನಿಮಾ ಸಹ ಇವುಗಳಷ್ಟೇ ಅರ್ಥಗರ್ಭಿತವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು
ಮದ್ಯಾಹ್ನದ ಸುದ್ದಿಮುಖ್ಯಾಂಶಗಳು
- ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಹಾಲಿವುಡ್ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ
ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್
ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243