Connect with us

ಭಾವ ಭೈರಾಗಿ

ಸೋಲೆಂಬ ಸ್ನೇಹಿತನ ಸಾಂಗತ್ಯವೀರಬೇಕು ನೀವೇನಂತೀರಿ..!

Published

on

ನಾನು ಕೂಡ ಒಬ್ಬ ಓದುಗ,ವಿದ್ಯಾರ್ಥಿ ಈ ಲೇಖನದಲ್ಲಿ ಹೇಳಹೊರಟಿರುವುದು ಸಾಧನೆಗೆ ಸಾಕ್ಷಿ ಆಗಬಲ್ಲ ಸೋಲಿನ ಸಾಂಗತ್ಯದ ಸಹವಾಸದ ಬಗ್ಗೆ.ಏನಿದು ಸೋಲಿನ ಸಹವಾಸ ಬಯಸಬೇಕು ಎನ್ನುತ್ತಿದ್ದಾರೆ,ಅಂತ ಆಶ್ಚರ್ಯವಾಗುತ್ತಿದ್ದಿರಾ…..! ಹೌದು ಪ್ರತಿ ಸೋಲು ಕೂಡ ಸಾಧಕನಿಗೆ ಸಾಹಸದ ಮಾರ್ಗ ಕಲ್ಪಿಸಿ ಕೊಡುವಂತಹದ್ದು.ಅದನ್ನು ನಾವೆಲ್ಲರೂ ಒಪ್ಪಲೇಬೇಕು ಯಾಕೆಂದರೆ, ನೆನಪಿರಲಿ ಯಾವ ಗುರಿಸಾಧನೆಯೂ ಮನುಷ್ಯನ ಪ್ರಯತ್ನಕ್ಕಿಂತ ಮುಗಿಲಿಲ್ಲ. ಯಾವ ಪ್ರಯತ್ನ ಅಥವಾ ಸಾಧನೆಯು ಸತತ ಅಭ್ಯಾಸವಿಲ್ಲದೆ ಯಶಸ್ವಿಯಾಗಲಾರದು. ಹಾಗೆಯೇ ಈ ಮಾತನ್ನು ಕೂಡಾ ಗಮನಿಸಬೇಕು ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು, ಸೋಲುಗಳಿಲ್ಲದ ಸಾಧನೆ ಆದರೆ ಪ್ರಯತ್ನ ಮಾತ್ರ ಕಡಿಮೆಯೇ ಹೀಗಾಗಿ ಅದು ಅಸಾಧ್ಯ ಎಂದು ಗೊತ್ತಿದ್ದರೂ,ನಾವು ನಮಗೆ ಬಂದ ಸೋಲನ್ನು ಇಷ್ಟಪಡುವುದಿಲ್ಲವೇಕೇ? ಆದರೆ ನನ್ನ ಈ ಪುಟ್ಟ ಜೀವನದಲ್ಲಿ ಅನುಭವಕ್ಕೆ ಬಂದಿರುವ ಪ್ರಕಾರ ಸೋಲುಗಳು ಸಮಸ್ಯೆಗಳು ಮಾರುವೇಷದಲ್ಲಿ ಬಂದು ನಿಲ್ಲುವ ಸುವರ್ಣ ಅವಕಾಶಗಳು ಎನಿಸುತ್ತದೆ.

ಆದರೆ ನೆನಪಿರಲಿ ಸೋಲುಗಳನ್ನು ಸಮಸ್ಯೆಗಳನ್ನು ಅವಕಾಶ ಎಂದು ನೋಡಿದವರು ಇಂದು ಜಗತ್ತಿನಲ್ಲಿ ಸಾಧಕರಾಗಿದ್ದಾರೆ,ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಸೋಲುಗಳನ್ನು ಶಪಿಸುತ್ತಲೇ ಕುಳಿತರೆ ಸಾಧನೆಗೆ ಸಮಾಧಿ ಸೃಷ್ಟಿಸಿದಂತಾಗುತ್ತದೆ. ಅದರ ಬದಲಾಗಿ ಸೋಲುಗಳನ್ನು ಪ್ರೀತಿಸಿ ಅದಕ್ಕೆ ಕಾರಣ ಗುರುತಿಸಿ ಮತ್ತೆ ಸಾಧನೆಗೆ ಸಿದ್ಧವಾದರೆ ಅದಕ್ಕಿಂತ ಮಿಗಿಲಾದ ಸಾಧನೆ ಸಂತೋಷ ಸಾಧಕನಿಗೆ ಬೇರೊಂದಿಲ್ಲ. ನಮ್ಮೆಲ್ಲರಲ್ಲೂ ಅಪಾರವಾದ ಸಾಮರ್ಥ್ಯ ಅಡಗಿದೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ.ಈ ಸಾಮರ್ಥ್ಯದ ಬಲದಿಂದ ನಮಗೇನು ಬೇಕೋ ಅದನ್ನು ಸಾಧಿಸಲು ಸಾಧ್ಯ. ಬದುಕಿನಲ್ಲಿ ಯಾವುದೋ ಒಂದು ಸೋಲು ಸಮಸ್ಯೆ ನಮ್ಮನ್ನ ಕಾಡುತ್ತಿದ್ದರೆ, ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರಂತೆ ಕೂಡುವ ಅಗತ್ಯವೇ ಇಲ್ಲ.ಕಾರಣ ಅದೊಂದು ವೇಷಮರೆಸಿಕೊಂಡು ಬಂದಂತಹ ಸುವರ್ಣಾವಕಾಶ ಎಂದುಕೊಳ್ಳಬೇಕಷ್ಟೇ.. ನಿಜ ಅದೊಂದು ಸಮಸ್ಯೆ ಎಂದು ಆರಂಭದಲ್ಲಿ ಎನಿಸಿಕೊಳ್ಳುತ್ತದೆ ಅನಿಸುತ್ತದೆ ನಿಜ.ಆ ಸಮಯಕ್ಕೆ ಬಂದ ಇದೊಂದು ಅನಿವಾರ್ಯ ಸ್ಥಿತಿ ಎಂದುಕೊಂಡು ಮರೆತು ಬಿಡಬೇಕು. ಬದುಕಿನಲ್ಲಿ ಸೋಲುಗಳೇ ಇಲ್ಲದೆ ಹೋದರೆ ಸಾಧನೆಗೆ ಬೆಲೆ ಇರುವುದಿಲ್ಲವಲ್ಲ. ಬದುಕಿಗೆ ಅರ್ಥವೇ ಇರುವುದಿಲ್ಲ ಎಂಬುವುದನ್ನು ಗಮನಿಸಬೇಕು.

ಬದುಕಿನಲ್ಲಿ ಸೋಲಿನ ಭಯ ಯಾವತ್ತೂ ಬೇಡ ಒಂದು ವೇಳೆ ನಿಮಗೆ ಆ ಭಯವಿದ್ದರೆ ಸೋಲಿಗೆ ಒಂದು ಮಾತನ್ನು ಹೇಳಿಬಿಡಿ “ನನ್ನ ಹಿಂದೆ ನಡೆಯಬೇಡ ನಾನು ನಿನ್ನನ್ನು ಮುನ್ನಡೆಸದಿರಬಹುದು, ಹಾಗೆ ನನ್ನ ಮುಂದೆ ನಡೆಯಬೇಡ ನಾನು ನಿನ್ನನ್ನು ಹಿಂಬಾಲಿಸದೆ ಇರಬಹುದು ನನ್ನ ಜೊತೆಯಲ್ಲಿಯೇ ನಡೆ ಮತ್ತು ನನ್ನ ಸ್ನೇಹಿತನಾಗು ಸಾಧನೆಗೆ ಸಾಕ್ಷಿಯಾಗು” ಆಗಲಾದರೂ ಸೋಲು ನಿಮ್ಮ ಸ್ನೇಹಿತನೇಂಬ ಬಲವಾದ ನಂಬಿಕೆ ಬರಬಹುದು ನಿಮಗೆ.ಅದರಿಂದಾಗಿಯಾದರು ನಿಮ್ಮ ಸತತ ಸಾಧನೆ ಸಾಗಬಲ್ಲದು ಅಲ್ವೇ….!

ಈ ಲೇಖನ ಬರೆಯಲು ಕಾರಣವೊಂದಿದೆ ಇತ್ತೀಚಿಗೆ ನಡೆದ ಕೆಲವು ಪರೀಕ್ಷೆಗಳಲ್ಲಿ ಗೆಲುವಿನ ದಡದಿಂದ ದೂರ ಉಳಿದ ಸ್ನೇಹಿತನೊಬ್ಬ ಕರೆ ಮಾಡಿ ಸೋಲು ತಂದ ಸಂಕಷ್ಟಗಳ ಬಗೆಗೆ ಸಂವಾದ ನಡೆಸಿಯೇ ಬಿಟ್ಟ ನಮ್ಮಿಬ್ಬರ ಮಾತುಗಳು ಮುಂದುವರೆದು ಕೊನೆಗೆ ಮೌನ ಆವರಿಸಿಬಿಟ್ಟಿತ್ತು. ತದನಂತರ ಏಕಾಂಗಿಯಾಗಿ ಮೌನ ತಾಳಿದ ನನ್ನ ಮನಸ್ಸು ಸೋತು ಸಾಧನೆಗೈದ ಸಾಧಕರತ್ತ ಚಿತ್ತ ಹರಿಸಿ ಸಾಧನೆಗೆ ಪ್ರತಿ ಸೋಲು ಕೂಡ ಸಾಕ್ಷಿ ಆಗಬಲ್ಲದು ಎಂಬ ಬರಹಕ್ಕೆ ಮುನ್ನುಡಿ ಹಾಡಿತ್ತು ಅದರದೇ ಆದ ಒಂದು ಪುಟ್ಟ ಸಂದೇಶವನ್ನು ನಿಮಗೆ ತಲುಪಿಸುವ ಹಂಬಲದಿಂದ ಇದನ್ನು ಅಕ್ಷರ ಪುಟಕ್ಕೆ ಆಹ್ವಾನ ನೀಡಿ ಬಿಟ್ಟೆ.ಕೊನೆಯಲ್ಲಿ ಹೇಳುವುದು ಇಷ್ಟೇ “ನಿನ್ನನ್ನು ನೀನು ನಂಬದೆ ಹೋದರೆ ಮುಕ್ಕೋಟಿ ದೇವತೆಗಳನ್ನು ನಂಬಿದರು ಪ್ರಯೋಜನವಿಲ್ಲ”.ಹಾಗಾಗಿ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಲಿ ಪ್ರತಿ ನಿಮ್ಮ ಸೋಲು ಕೂಡ ಹೊಸದೊಂದು ಸಾಧನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಹಾಗೆಯೇ ಸೋತು ಸಾಧಿಸುವ, ಸಾಧಿಸಿದ ಸಾಧನೆಗೆ ಸಿದ್ಧವಾದ ಹೃದಯಗಳಿಗೆ, ಮನಸ್ಸುಗಳಿಗೆ ನನದಿಷ್ಟು ಸಲಾಂ ಇದಕ್ಕೆ ನೀವೇನಂತೀರಿ ಅನುಭವಕ್ಕೋಂದಿಷ್ಟು ನೆನಪುಗಳು ಇರಲಿ ಅದು ನಮಗೂ ನಿಮಗೂ ಬದುಕಿಗೆ ಬೆಳಕು ನೀಡುವಂತಿರಲಿ ಮತ್ತೆ ಭೇಟಿಯಾಗೋಣ…….

ಸಂಗಮೇಶ.ಹತ್ತರಕಿಹಾಳ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಗಾಯದ ಬೆಳಕು

Published

on

  • ಕಾವ್ಯ ಎಂ ಎನ್, ಶಿವಮೊಗ್ಗ

ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..

ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.

ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.

ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…

ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.

ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ನಾನೊಲಿದೆನಯ್ಯಾ

Published

on

  • ರಮ್ಯ ಕೆ ಜಿ, ಮೂರ್ನಾಡು

ಲೆಯುತ್ತಿದೆ ಈ ರೂಹು
ನನ್ನೊಳಗಿಂದ ಚಿಗಿದು
ನಿನ್ನ ತುದಿಬೆರಳಲಿ ಕುಣಿದು
ಗಾಳಿತುಟಿಯ ಸೋಕಿದಾಕ್ಷಣ
ಬೆವೆತು,
ಮಳೆ ಹೊಯ್ಯಿಸಿ
ಮಣ್ಣ ಘಮದೊಳಗೆ
ಲೀನವಾಗುವಂತೆ.

ಹೊಳೆಯುತ್ತದೆ ನಿನ್ನ
ಕಣ್ಣಬೊಂಬೆಯೊಳಗೆ,
ಎಷ್ಟೋ ನೋವು ಕುಡಿದ
ನದಿಯೆದೆಯೊಳಗೆ,
ನೆನಪ ಮೀಟುವ ಘಳಿಗೆಗೆಲ್ಲ
ಪಾರಿಜಾತದ ಪರಿಮಳವುಳಿವಂತೆ.

ಕಲೆಯುತ್ತದೆ ಮತ್ತೆ,
ನಿನ್ನ ಮಾತು ಜೀವವಾಗುವಂತೆ
ನಗೆಬೆಳಕು ಕೈಹಿಡಿದು
ಜೊತೆ ನಡೆಯುವಂತೆ
ಅನಂತ ಬಾನು-
ಪ್ರೇಮಗಡಲಿಗೆ ಬಾಗುವಂತೆ
ತಿರುವುಗಳಲಿ ಹೊರಳಿ,
ಕವಲಾಗುವಾಗ
ಹಾಡೊಂದು ಕಾಡುವಂತೆ
ಜಪಮಣಿ ಎಣಿಸುವ
ಬೆರಳು, ಲೆಕ್ಕ ಮರೆತು
ಉಸಿರ ಪಲುಕನು
ಚಿತ್ರವಾಗಿಸುವಂತೆ.

ಕವಯಿತ್ರಿ : ರಮ್ಯ ಕೆ.ಜಿ,ಮೂರ್ನಾಡು

ಕವಿತೆ : ರಮ್ಯ ಕೆ ಜಿ, ಮೂರ್ನಾಡು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending