Connect with us

ದಿನದ ಸುದ್ದಿ

ಆತ್ಮಕತೆ | ಭದ್ರಾವತಿಯಲ್ಲಿ ಮತ್ತೆ ಪ್ರೊ.ಬಿ. ಕೃಷ್ಣಪ್ಪನವರ ಭೇಟಿ

Published

on

  • ರುದ್ರಪ್ಪ ಹನಗವಾಡಿ

1968ರಲ್ಲಿ ಕೃಷ್ಣಪ್ಪ ಅವರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪಿಯುಸಿ ಓದುವಾಗ ಕಂಡಿದ್ದ ನಾನು ಅವರನ್ನು ಮತ್ತೆ ಭೇಟಿಯಾಗಿದ್ದು, ನಾನು ಮೈಸೂರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದಾಗ ಈ ಸಮಯದಲ್ಲಿ ಸಮಾಜವಾದಿ ಯುವಜನ ಸಭಾ ಮತ್ತು ಜಾತಿ ವಿನಾಶ ಸಮ್ಮೇಳನ ಮತ್ತು ಬೂಸಾ ಗಲಾಟೆ ಸಂದರ್ಭದಲ್ಲಿ ಅವರು ಮೈಸೂರಿಗೆ ಬಂದಾಗ ಸಿಗುತ್ತಿದ್ದೆ.

ಮಾದೇವ, ರಾಜಶೇಖರ ಕೋಟಿ, ನೆಲಮನೆ ದೇವೇಗೌಡ, ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್ ಇನ್ನು ಅನೇಕರು ಸೇರಿ ಜಾತಿ ವಿನಾಶ, ಸಮಾಜವಾದ, ರೈತ ಸಂಘ ಆ ಕಾಲದಲ್ಲಿನ ಸಾರ್ವಜನಿಕ ಜೀವನದಲ್ಲಿದ್ದ ಭ್ರಷ್ಟಾಚಾರ, ವಿಶ್ವವಿದ್ಯಾಲಯದಲ್ಲಿನ ಜಾತೀಯತೆ ಎಲ್ಲವೂ ಚರ್ಚೆಗೆ ಬರುತ್ತಿದ್ದವು. ಮಹೇಶ, ನಾನು, ಭಕ್ತ, ಅರ್ಕೇಶ ಸಾಮಾನ್ಯವಾಗಿ ಕೇಳುಗರಾಗಿರುತ್ತಿದ್ದೆವು. ಮತ್ತೆ ಆ ಕ್ಷಣದಲ್ಲಿ ಆ ಸಂಘಟನೆಗಳ ಸಮಿತಿಯವರು ವಹಿಸಿದ ಕೆಲಸಗಳಿಗೆ ಸಜ್ಜಾಗಿರುತ್ತಿದ್ದೆವು.

ನಾನು ಬಿಆರ್‌ಪಿಗೆ ಬಂದಾಗ ಕೃಷ್ಣಪ್ಪನವರು ಅದಾಗಲೇ ಭದ್ರಾವತಿಯಲ್ಲಿದ್ದು, ತಮ್ಮ ಅಂತರ್‌ಜಾತಿ ಮದುವೆಯ ಕಾರಣದಿಂದಲೂ, ಸಮಾಜವಾದಿ ಹೋರಾಟಗಳಿಂದಲೂ, ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಪರಿಚಿತರಾಗಿದ್ದರು ಕೃಷ್ಣಪ್ಪ ಅವರ ಜೊತೆ, ಸಮಾಜವಾದಿಗಳಾಗಿದ್ದ ಶಿವಮೊಗ್ಗದ ಮುನೀರ್,
ನಿಸಾರ್ ಅಹಮದ್, ದಿವಾಕರ ಹೆಗ್ಗಡೆ, ರೈತ ಸಂಘದ ಎನ್.ಡಿ. ಸುಂದರೇಶ್, ಬಿ. ರಾಜಣ್ಣ, ಎಂ. ಚಂದ್ರಶೇಖರಯ್ಯ, ಎನ್. ಗಿರಿಯಪ್ಪ, ಡುಮ್ಮ ರಾಜಣ್ಣ ಎಂಬೆಲ್ಲ ಇನ್ನೂ ಅನೇಕ ಸ್ನೇಹಿತರಿದ್ದರು. ಅರ‍್ಯಾರೂ ಒಂದು ಜಾತಿಯ, ಇಲ್ಲವೇ ಒಂದು ಕಸುಬಿನವರಾಗಿರಲಿಲ್ಲ. ಕೃಷ್ಣಪ್ಪನವರ ಸಮಾಜವಾದಿ ಚಿಂತನೆಯಲ್ಲಿ ತೀವ್ರ ಆಸಕ್ತಿಯಿಂದ ಪಾಲ್ಗೊಂಡ ಎಲ್ಲ ಜಾತಿಯಿಂದ ಬಂದ ಸ್ನೇಹಿತರಾಗಿದ್ದರು. ನಾನು ಬಿಆರ್‌ಪಿಯಿಂದ ಬಿಡುವಿನ ಸಮಯದಲ್ಲಿ ಭದ್ರಾವತಿಗೆ ಕೃಷ್ಣಪ್ಪನವರನ್ನು ನೋಡಲು ಹೋಗುತ್ತಿದ್ದೆ. ಆಗ ಭದ್ರಾವತಿಯ ಸಮಾಜವಾದಿ ಗೆಳೆಯರನೇಕರು ಪರಿಚಯವಾಗಿ, ನನಗೂ ಅವರುಗಳು ಕೂಡ ಆತ್ಮೀಯ ಗೆಳೆಯರಾದರು.

ಕೃಷ್ಣಪ್ಪನವರ ಶ್ರೀಮತಿ ಇಂದಿರಾ ಅವರು ಅದಾಗಲೇ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಯಾಗಿ ತಾಲ್ಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣಪ್ಪನವರ ಮನೆಯಲ್ಲಿ ಅವರ ತಂದೆ ಬಸಜ್ಜ, ತಾಯಿ ಚೌಡಮ್ಮನವರ ಜೊತೆ ತಂಗಿ ರೇಣುಕ ಮತ್ತು ಹಿರಿಯ ತಂಗಿಯ ಮಕ್ಕಳಾದ ಮೈತ್ರೇಯಿ, ಶಿವು ಮತ್ತು ತಮ್ಮ ತಿಪ್ಪೇಶಿ ಕೂಡ ಇದ್ದು ಅವರೆಲ್ಲ ವಿವಿಧ ತರಗತಿಗಳಲ್ಲಿ ಓದುತ್ತಿದ್ದರು. ಕೃಷ್ಣಪ್ಪ ಅವರ ಮನೆಯೊಂದು ಮಿನಿ ಹಾಸ್ಟೆಲ್ ತರ ಇತ್ತು.
ಭದ್ರಾ ಕಾಲೇಜಿನಲ್ಲಿ ಶಿಸ್ತಿನ ಅಧ್ಯಾಪಕರಾಗಿದ್ದ ಕೃಷ್ಣಪ್ಪನವರು ಬಿಡುವಿನ ಸಮಯದಲ್ಲಿ ಸಮಾಜದಲ್ಲಿನ ಅಂಧ ಶ್ರದ್ಧೆ ಮತ್ತು ಮೌಢ್ಯಗಳ ಬಗ್ಗೆ, ಸಾಮಾಜಿಕ ಅಸಮಾನತೆಗಳ ಬಗ್ಗೆ ಮಿತ್ರರೊಡನೆ ಒಡಗೂಡಿ, ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಅವರ ಹೋರಾಟಗಳನ್ನು ಕ್ರಮವಾಗಿ ಜೋಡಿಸಿದರೆ ಅದೊಂದು ಪ್ರಮುಖ ಬೃಹತ್ ಗ್ರಂಥವಾಗಿ ರೂಪುಗೊಳ್ಳುತ್ತದೆ. (ಇಂದಿರಾ ಕೃಷ್ಣಪ್ಪ ಬರೆದ ಕೃತಿ ‘ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಕೃಷ್ಣಪ್ಪ’ ಪುಸ್ತಕದಲ್ಲಿ ಸಂಕ್ಷಿಪ್ತ ಹೋರಾಟದ ವಿವರಗಳು ಇವೆ.)

ನನಗೆ ಮೈಸೂರಿನ ಹೋರಾಟದ ಗೆಳೆಯರ ಜೊತೆಗೆ ಕೃಷ್ಣಪ್ಪನವರ ಒಡನಾಟ ಮತ್ತು ಹೋರಾಟದ ಸಂಪರ್ಕ ದೊರೆತದ್ದು ಒಂದು ಸುವರ್ಣ ಅವಕಾಶವೆಂದೇ ಭಾವಿಸಿದ್ದೇನೆ. ನಮ್ಮಿಬ್ಬರ ಸಂಬಂಧ, ನನ್ನ ಮದುವೆ, ಮಕ್ಕಳು, ನಂತರ ನನ್ನೂರು ಕೇರಿಗಳಿಗೆ ವಿಸ್ತಾರಗೊಂಡು ಎರಡು ಮನೆತನಗಳ ಕಥನದಲ್ಲಿ ಒಬ್ಬರಿಗೊಬ್ಬರು ಸೇರಿ ಹೋಗಿದ್ದೇವೆ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿಯ ಬಾಡ ವೃತ್ತದ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಓದಲು ಹಾಗೂ ಬರೆಯಲು ಚೆನ್ನಾಗಿ ಬಲ್ಲವರಾಗಿರಬೇಕು ,ಅರ್ಜಿದಾರರು ಖಾಲಿ ಇರುವ ಗ್ರಾಮಸಹಾಯಕ ಹುದ್ದೆಯ ವೃತ್ತದ ನಿವಾಸಿಯಾಗಿರಬೇಕು ಮತ್ತು ಕೇಂದ್ರ ಸ್ಥಾನದಲ್ಲಿಯೇ ವಾಸವಾಗಿರಬೇಕು. ಗ್ರಾಮಸಹಾಯಕ ತಳವಾರರು, ತೋಟೆಗಳು, ನೀರುಗಂಟೆಗಳು ವಾಲಿಕರ್ಸ್, ಮಹರಸ್, ಬಾರಿಕರಸ್, ವೀರಾಡಿಗಳು, ಬಲೂತಿದಾರಸ್ ತಳಿಯಾರಿಸ್ ವೆಟಿಸ್, ಕುಲುವಡಿಸ್, ಉರ್‍ಗಾನಿಸ್ ಕುಟುಂಬದವರಿಗೆ ಆದ್ಯತೆ ನೀಡಲಾಗುವುದು, ಅರ್ಜಿದಾರರು 25 ವರ್ಷ ವಯೋಮಾನದವರಾಗಿರಬೇಕು. ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನವಾಗಿರುತ್ತದೆ.

ಅರ್ಜಿಯೊಂದಿಗೆ ಜನ್ಮ ದಿನಾಂಕ (ವರ್ಗಾವಣೆ ಪತ್ರ, ಎಸ್.ಎಸ್.ಎಲ್ ಸಿ ಅಂಕಪಟ್ಟಿ ಲಗತ್ತಿಸುವುದು ), ವಾಸಸ್ಥಳ ದೃಢೀಕರಣ, (ಸಂಬಂಧಿಸಿದ ಉಪತಹಸೀಲ್ದಾರರಿಂದ ) ಪಡೆದ ಪತ್ರ ಲಗತ್ತಿಸುವುದು, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ, ಪಡಿತರ ಚೀಟಿ, ವ್ಯಾಸಾಂಗ ಪೂರೈಸಿದ ಬಗ್ಗೆ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಚೇರಿ ಸಲ್ಲಿಸಬೇಕೆಂದು ತಹಶೀಲ್ದಾರ್ ಡಾ.ಅಶ್ವಥ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಕಲಚೇತನರಿಗೆ ರಾಷ್ಟ್ರಪ್ರಶಸ್ತಿ ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ, ಸಂಸ್ಥೆಗಳಿಗೆ 2024ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ವೆಬ್‍ಸೈಟ್ ವಿಳಾಸ: www.depwd.gov.in & www.awards.gov.in ರಲ್ಲಿ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಸಂಯೋಜಕರನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣ : ಸಚಿವ ನಿತಿನ್ ಗಡ್ಕರಿ

Published

on

ಸುದ್ದಿದಿನಡೆಸ್ಕ್:ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಚುನಾವಣೆ ಸಂದರ್ಭದಲ್ಲಿ ಅಪ ಪ್ರಚಾರ ಮಾಡಲಾಗಿತ್ತು. ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಿಸಿದ, ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. 1975ರಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳಿಗೆ ದೇಶ ಸಾಕ್ಷಿಯಾಗಿದೆ. ಬೆಂಗಳೂರಿನ ಸೆರೆಮನೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಸಮಾಜವಾದಿ ಮುಖಂಡ ಜಾರ್ಜ್ ಫರ್ನಾಂಡಿಸ್ ಮೊದಲಾದವರನ್ನು ಇರಿಸಲಾಗಿತ್ತು ಎಂದು ವಿವರಿಸಿದರು.

ತುರ್ತು ಪರಿಸ್ಥಿತಿಯ ವಿರುದ್ಧ ಭಾರತೀಯ ಜನಸಂಘ ಹೋರಾಡಿ ಪ್ರಜಾಸತ್ತೆಯನ್ನು ಉಳಿಸುವ ಕೆಲಸ ಮಾಡಿತ್ತು. ಪ್ರಜಾತಂತ್ರವು ೪ ಸ್ಥಂಭಗಳ ಮೇಲೆ ನಿಂತಿದೆ. ಇವೆಲ್ಲವುಗಳ ಬಗ್ಗೆ ಸಂವಿಧಾನದಲ್ಲಿ ಬರೆಯಲಾಗಿದೆ. ಸಂವಿಧಾನವನ್ನು ಕಡೆಗಣಿಸಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿತ್ತು ಎಂದು ಟೀಕಿಸಿದರು.

ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಮಾಡಿದ ಭಾಷಣವನ್ನು ಅವರು ಉಲ್ಲೇಖಿಸಿ. ಮುಂದೆ ಹಿಂದುಸ್ತಾನದ ಜನರ ಶತಮಾನ ಬರಲಿದೆ ಎಂದು ಅವರು ಹೇಳಿದ್ದನ್ನು ನೆನಪಿಸಿದರು. 10 ಕೋಟಿಗೂ ಅಡುಗೆ ಅನಿಲ ಸಂಪರ್ಕ ನೀಡಿರುವುದು ನಮ್ಮ ಸರ್ಕಾರದ ಸಾಧನೆಯಾಗಿದೆ.
ಚೆನ್ನೈ- ಬೆಂಗಳೂರು ಹೆದ್ದಾರಿ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಪ್ರಾರಂಭವಾಗಿ ಶ್ರೀ ಪರಂಬೂರಿಗೆ ತಲುಪುವ 258ಕಿಲೋಮೀಟರ್ ಉದ್ದದ ಹೆದ್ದಾರಿಗೆ 18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳನ್ನು ನಾವು ಬಲಪಡಿಸಬೇಕಿದೆ. ಸ್ವದೇಶಿ, ಸ್ವಾವಲಂಬನೆ ಮೂಲಕ ಅಭಿವೃದ್ಧಿ ಕಡೆ ನಾವು ಗಮನ ಕೊಡುತ್ತಿದ್ದೇವೆ. ಸಮಸ್ಯೆಗಳನ್ನು ಸವಾಲನ್ನಾಗಿ ಪರಿವರ್ತನೆ ಮಾಡಿಕೊಂಡು ಮುನ್ನಡೆಯೋಣ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending