ದಿನದ ಸುದ್ದಿ
ನಾಲ್ಕು ದಿನಗಳಲ್ಲಿ 2ನೇ ಸಲ ‘ಐಪಿಎಸ್ ಅಧಿಕಾರಿ ರೂಪಾ’ರಿಂದ ವಂಚನೆ ದೂರು ಸಲ್ಲಿಕೆ..!
ಸುದ್ದಿದಿನ, ಬೆಂಗಳೂರು : ‘ಡಿ_ರೂಪಾ_ಐಪಿಎಸ್’ ಹೆಸರಿನಲ್ಲಿ ‘ಇನ್ಸ್ಟಾಗ್ರಾಂ’ನಲ್ಲಿ ನಕಲಿ ಖಾತೆ ತೆರೆದಿದ್ದ ಅಪರಿಚಿತರು, ‘ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ’ ಎಂಬ ಪೋಸ್ಟ್ ಹಾಕಿದ್ದರು. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ‘ನಾನು ಯಾವುದೇ ಇನ್ಸ್ಟಾಗ್ರಾಂ ಖಾತೆ ಹೊಂದಿಲ್ಲ. ಯಾರೂ ಹಣ ಹಾಕಬೇಡಿ’ ಎಂದು ಟ್ವೀಟ್ ಮೂಲಕ ರೂಪಾ ಸ್ಪಷ್ಟಪಡಿಸಿದ್ದರು.ಈ ಸಂಬಂಧ 2018ರ ಡಿ.30ರಂದು ಸೈಬರ್ ಕ್ರೈಂ ಠಾಣೆಗೂ ದೂರು ನೀಡಿದ್ದರು ರೂಪಾ.
ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಹೆಸರಿನಲ್ಲಿ ವಂಚನೆ ಮಾಡಿದ್ದು, ಮಹಿಳೆಯೊಬ್ಬರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಲಖನೌ ಪೊಲೀಸರಿಗೆ ಕರೆಮಾಡಿನಾನು ಗೃಹರಕ್ಷಕದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಖನೌಗೆ ಬರುತ್ತಿದ್ದೇನೆ.ಡಿ.29ರಿಂದ ಜ.3ರವರೆಗೆ ಹೋಟೆಲ್ನಲ್ಲಿ ರೂಂ ಬುಕ್ ಮಾಡಿ ಎಂದು ಹೇಳಿದ್ದರು ಆ ಮಹಿಳೆ.
This is not my account. I'm not on Instagram. This is brought to my notice only now. Will complain to Cyber crime police station @CIDKarnataka . Meanwhile request those on @instagram to report this issue https://t.co/DBYNDzzTog
— D Roopa IPS (@D_Roopa_IPS) December 28, 2018
ಅವರ ಮಾತನ್ನು ನಂಬಿದ್ದ ಅಧಿಕಾರಿ, ರೂಂ ಬುಕ್ ಮಾಡಿದ್ದರು. ಈ ಬಗ್ಗೆ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ರೂಪಾಗೆ ಕರೆ ಮಾಡಿ ವಿಚಾರಿಸಿದಾಗ ಕೃತ್ಯ ಬಯಲಾಗಿದೆ. ನಾನು ರೂಂ ಬುಕ್ ಮಾಡುವಂತೆ ಯಾರಿಗೂ ಕರೆ ಮಾಡಿಲ್ಲವಲ್ಲ ಎಂದಿದ್ದ ರೂಪಾ. ಯಾರೋ ನಿಮ್ಮ ಹೆಸರು ಹೇಳಿಕೊಂಡು 9449990544 ಸಂಖ್ಯೆಯಿಂದ ಕರೆ ಮಾಡಿದ್ದರು ಎಂದಿದ್ದರು ತ್ರಿಪಾಠಿ. ಬಳಿಕ ಆ ಸಂಖ್ಯೆಗೆ ಕರೆ ಮಾಡಿದ್ದ ಅಧಿಕಾರಿ ರೂಪಾ ಅವರು ಆ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಬನಶಂಕರಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ ರೂಪಾ.
Posted by We Support D Roopa IPS on Saturday, 29 December 2018
ಮೊಬೈಲ್ ಸಂಖ್ಯೆಯ ಮೂಲ ಪತ್ತೆ ಹಚ್ಚಿರುವ ಪೊಲೀಸರು ಮಂಗಳೂರಿನ ಬಲ್ಮಠದಲ್ಲಿರುವ ಚಿರಾಗ್’ ಅಪಾರ್ಟ್ಮೆಂಟ್ ನಿವಾಸಿ ಮಹಿಳೆಯ ನಂಬರ್ ಅದಾಗಿತ್ತು, ಆದರೆ ತಿಂಗಳ ಹಿಂದೆಯೇ ನನ್ನ ಮೊಬೈಲ್ ಕಳೆದುಹೋಗಿತ್ತು ಎಂದಿರೋ ಮಹಿಳೆ, ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರು ಕೊಟ್ಟಿದಾಗಿ ಹೇಳಿದ್ದಾರೆ.
Gave complaint to cyber crime police to register FIR for the Instagram fraud @BlrCityPolice. I sincerely hope @instagram deactivates this account also. pic.twitter.com/6b6GpCQX9A
— D Roopa IPS (@D_Roopa_IPS) December 29, 2018
ಎಫ್ಐಆರ್ ಹಾಗೂ ದೂರು ಸ್ವೀಕೃತಿ ಅರ್ಜಿಯನ್ನು ಬಿಎಸ್ಎನ್ಎಲ್ ಕಚೇರಿಗೆ ಸಲ್ಲಿಸಿ, ಅದೇ ಸಂಖ್ಯೆಯ ಹೊಸ ಸಿಮ್ ಖರೀದಿಸಿದ್ದೇನೆ’ ಎಂದು ಹೇಳಿಕೆ ಕೊಟ್ಟಿದ್ದಾರೆ ಮಹಿಳೆ. ಆದರೆ, ಕರೆ ಹೋದ ದಿನ ಆ ಮೊಬೈಲ್ ಸಂಖ್ಯೆಯನ್ನು ಅದೇ ಮಹಿಳೆ ಬಳಸುತ್ತಿದ್ದರೋ? ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಎಸ್.ಆರ್.ಶೀತಲ್ಗೆ ಮೂರು ಚಿನ್ನದ ಪದಕಗಳು

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್ನಲ್ಲಿ ಮೇ 15ರಂದು ನಡೆದ 59ನೇ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಸ್.ಬಿ.ರುದ್ರಕುಮಾರ್ ಇವರ ಪುತ್ರಿಯಾದ ಎಸ್.ಆರ್. ಶೀತಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
2023-24ನೇ ಸಾಲಿನಲ್ಲಿ 10,000 ಅಂಕಗಳಿಗೆ ಸರಾಸರಿ 9.104 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಯಾಂಕಿತರಾಗಿರುವ ಎಸ್.ಆರ್. ಶೀತಲ್ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಚಿನ್ನದ ಪದಕ ಹಾಗೂ ಡಾ.ಆರ್.ರಾಮಯ್ಯ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ

ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ
1.ಪೌಷ್ಟಿಕತೆಯ ಸಮತೋಲನ
ಆರೋಗ್ಯಕರ ಡಯಟ್ನಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ಗಳು (ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಕೊಬ್ಬು) ಮತ್ತು ಮೈಕ್ರೋನ್ಯೂಟ್ರಿಯೆಂಟ್ಗಳು (ವಿಟಮಿನ್ಗಳು, ಖನಿಜಗಳು) ಸಮತೋಲನವಿರಬೇಕು. ಉದಾಹರಣೆಗೆ, ಭಾರತೀಯ ಆಹಾರದಲ್ಲಿ ರಾಗಿ, ಜೋಳ, ಕ್ವಿನೋವಾ, ದ್ವಿದಳ ಧಾನ್ಯಗಳು, ಮತ್ತು ಸೊಪ್ಪುಗಳು ಸಮತೋಲಿತ ಆಹಾರವನ್ನು ಒದಗಿಸುತ್ತವೆ.
ಗ್ಲೈಸೆಮಿಕ್ ಇಂಡೆಕ್ಸ್ (GI) : ಕಡಿಮೆ GI ಆಹಾರಗಳಾದ ಓಟ್ಸ್, ಕಂದು ಅಕ್ಕಿ, ಮತ್ತು ಕಾಳುಗಳು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತವೆ, ಇದು ಡಯಾಬಿಟೀಸ್ ನಿರ್ವಹಣೆಗೆ ಸಹಾಯಕವಾಗಿದೆ.
2. ಸ್ಥಳೀಯ ಮತ್ತು ಋತುಮಾನದ ಆಹಾರಗಳ ಆಯ್ಕೆ
ಕರ್ನಾಟಕದಂತಹ ಪ್ರದೇಶಗಳಲ್ಲಿ, ರಾಗಿ ರೊಟ್ಟಿ, ತರಕಾರಿ ಸಾಂಬಾರ್, ಕೋಸಂಬರಿ, ಮತ್ತು ಒಣಗಿದ ಹಣ್ಣುಗಳು (ಬಾದಾಮಿ, ಗೋಡಂಬಿ) ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಆಯ್ಕೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ತಾಜಾತನವನ್ನು ಖಾತ್ರಿಪಡಿಸುತ್ತವೆ.
ಋತುಮಾನದ ಹಣ್ಣುಗಳು : ಮಾವಿನಹಣ್ಣು, ಜಾಮೂನ್, ದಾಳಿಂಬೆ ಇತ್ಯಾದಿಗಳು ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.
3. ಗಟ್ ಹೆಲ್ತ್ (ಕರುಳಿನ ಆರೋಗ್ಯ)
ಆರೋಗ್ಯಕರ ಕರುಳು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಮೊಸರು, ಮಜ್ಜಿಗೆ, ಒಣಗಿದ ಹಣ್ಣುಗಳು, ಮತ್ತು ಫೈಬರ್ ಶ್ರೀಮಂತ ಆಹಾರಗಳಾದ ತರಕಾರಿಗಳು ಮತ್ತು ಧಾನ್ಯಗಳು ಪ್ರೋಬಯಾಟಿಕ್ಗಳು ಮತ್ತು ಪ್ರಿಬಯಾಟಿಕ್ಗಳನ್ನು ಒದಗಿಸುತ್ತವೆ. ಉದಾಹರಣೆ: ರಾಗಿ ಮತ್ತು ತರಕಾರಿಗಳಿಂದ ತಯಾರಿಸಿದ ಖಿಚಡಿ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
4. ಸಂಸ್ಕರಿತ ಆಹಾರದಿಂದ ದೂರ
ಸಂಸ್ಕರಿತ ಆಹಾರಗಳು (ಚಿಪ್ಸ್, ಸಕ್ಕರೆಯಿಂದ ಕೂಡಿದ ಪಾನೀಯಗಳು, ಫಾಸ್ಟ್ ಫುಡ್) ದೀರ್ಘಕಾಲೀನವಾಗಿ ಒಬೇಸಿಟಿ, ಡಯಾಬಿಟೀಸ್, ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇವುಗಳ ಬದಲಿಗೆ ತಾಜಾ, ಗೃಹ ತಯಾರಿಕೆಯ ಆಹಾರವನ್ನು ಆದ್ಯತೆ ನೀಡಿ.
5. ವೈಯಕ್ತಿಕಗೊಳಿಸಿದ ಡಯಟ್
ವಯಸ್ಸು, ಲಿಂಗ, ದೈಹಿಕ ಚಟುವಟಿಕೆ, ಮತ್ತು ಆರೋಗ್ಯ ಸ್ಥಿತಿಗೆ ತಕ್ಕಂತೆ ಡಯಟ್ ರೂಪಿಸಿ. ಉದಾಹರಣೆಗೆ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು ಬೇಕಾಗುತ್ತವೆ, ಆದರೆ ವಯಸ್ಸಾದವರಿಗೆ ಕಡಿಮೆ ಕ್ಯಾಲೋರಿ ಆದರೆ ವಿಟಮಿನ್ಗಳ ಶ್ರೀಮಂತ ಆಹಾರ ಸೂಕ್ತವಾಗಿರುತ್ತದೆ.
6. ಹೈಡ್ರೇಷನ್ ಮತ್ತು ಜೀವನಶೈಲಿ
ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ತೆಂಗಿನೀರು, ಮಜ್ಜಿಗೆ, ಅಥವಾ ಗಿಡಮೂಲಿಕೆ ಚಹಾವನ್ನು ಸೇವಿಸಿ. ಆರೋಗ್ಯಕರ ಡಯಟ್ನ ಜೊತೆಗೆ, 30 ನಿಮಿಷಗಳ ದೈಹಿಕ ಚಟುವಟಿಕೆ (ಯೋಗ, ವಾಕಿಂಗ್, ಅಥವಾ ಜಿಮ್) ಮತ್ತು 7-8 ಗಂಟೆಗಳ ನಿದ್ರೆಯನ್ನು ಸಂಯೋಜಿಸಿ.
ನಿರ್ದಿಷ್ಟ ಆರೋಗ್ಯಕರ ಡಯಟ್ ಯೋಜನೆ
ಬೆಳಗಿನ ಉಪಾಹಾರ:ರಾಗಿ ದೋಸೆ + ಚಟ್ನಿ, ಅಥವಾ ಓಟ್ಸ್ ಉಪ್ಮಾ + ತರಕಾರಿಗಳು. ಮಧ್ಯಾಹ್ನದ ತಿಂಡಿ: ತೆಂಗಿನೀರು ಅಥವಾ ಮೊಸರು + ಒಂದು ಹಣ್ಣು (ಸೀಬೆ, ಬಾಳೆಹಣ್ಣು).
ಮಧ್ಯಾಹ್ನದ ಊಟ: ಕಂದು ಅಕ್ಕಿ, ಸಾಂಬಾರ್, ಪಾಲಕ್ ಸೊಪ್ಪಿನ ಪಲ್ಯ, ಮತ್ತು ಕೋಸಂಬರಿ. ಸಂಜೆಯ ತಿಂಡಿ: ಬೇಯಿಸಿದ ಕಾಳುಗಳು (ಕಡಲೆಕಾಯಿ, ಕಡಲೆ) ಅಥವಾ ಒಣಗಿದ ಹಣ್ಣುಗಳು.ರಾತ್ರಿಯ ಊಟ: ರಾಗಿ ರೊಟ್ಟಿ + ತರಕಾರಿ ಕೂಟು, ಅಥವಾ ಜೋಳದ ರೊಟ್ಟಿ + ಮೊಸರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೇ 22 | ಇಂದಿನ ಅಡಿಕೆ ದರ

ಇಂದು, ಮೇ 22, 2025 ರಂದು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಹೀಗಿವೆ (ಪ್ರತಿ ಕ್ವಿಂಟಾಲ್ಗೆ ರೂಪಾಯಿಗಳಲ್ಲಿ):
ಶಿವಮೊಗ್ಗ ಮಾರುಕಟ್ಟೆ:
ರಾಶಿ: ₹48,169 (ಕನಿಷ್ಠ) – ₹58,099 (ಗರಿಷ್ಠ), ಮೋಡಲ್ ಬೆಲೆ: ₹55,869
ಸರಕು: ₹60,399 (ಕನಿಷ್ಠ) – ₹92,510 (ಗರಿಷ್ಠ), ಮೋಡಲ್ ಬೆಲೆ: ₹77,009
ಬೆಟ್ಟೆ: ₹51,319 (ಕನಿಷ್ಠ) – ₹58,219 (ಗರಿಷ್ಠ), ಮೋಡಲ್ ಬೆಲೆ: ₹57,989
ಗೊರಬಲು: ₹15,499 (ಕನಿಷ್ಠ) – ₹30,699 (ಗರಿಷ್ಠ), ಮೋಡಲ್ ಬೆಲೆ: ₹28,429
ಚನ್ನಗಿರಿ ಮಾರುಕಟ್ಟೆ (ದಾವಣಗೆರೆ):
ರಾಶಿ: ₹41,199 (ಕನಿಷ್ಠ) – ₹59,312 (ಗರಿಷ್ಠ), ಮೋಡಲ್ ಬೆಲೆ: ₹57,767
ಸಾಗರ ಮಾರುಕಟ್ಟೆ (ಶಿವಮೊಗ್ಗ):
ಚಾಲಿ: ₹35,699 (ಕನಿಷ್ಠ) – ₹37,141 (ಗರಿಷ್ಠ), ಮೋಡಲ್ ಬೆಲೆ: ₹36,699
ಬಿಳೆಗೋಟು: ₹21,611 (ಕನಿಷ್ಠ) – ₹25,587 (ಗರಿಷ್ಠ), ಮೋಡಲ್ ಬೆಲೆ: ₹24,111
ಕೆಂಪುಗೋಟು: ₹17,599 (ಕನಿಷ್ಠ) – ₹27,499 (ಗರಿಷ್ಠ), ಮೋಡಲ್ ಬೆಲೆ: ₹24,919
ರಾಶಿ: ₹22,899 (ಕನಿಷ್ಠ) – ₹57,470 (ಗರಿಷ್ಠ), ಮೋಡಲ್ ಬೆಲೆ: ₹56,621
ಕುಮಟಾ ಮಾರುಕಟ್ಟೆ (ಉತ್ತರ ಕನ್ನಡ):
ಚಿಪ್ಪು: ₹11,199 (ಕನಿಷ್ಠ) – ₹26,919 (ಗರಿಷ್ಠ), ಮೋಡಲ್ ಬೆಲೆ: ₹24,549
ಕೋಕಾ: ₹6,899 (ಕನಿಷ್ಠ) – ₹22,189 (ಗರಿಷ್ಠ), ಮೋಡಲ್ ಬೆಲೆ: ₹20,429
ಹಣ್ಣು: ₹32,589 (ಕನಿಷ್ಠ) – ₹42,500 (ಗರಿಷ್ಠ), ಮೋಡಲ್ ಬೆಲೆ: ₹39,729
ಚಿತ್ರದುರ್ಗ ಮಾರುಕಟ್ಟೆ:
ರಾಶಿ: ₹52,449 (ಕನಿಷ್ಠ) – ₹52,899 (ಗರಿಷ್ಠ), ಮೋಡಲ್ ಬೆಲೆ: ₹52,679
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ಅಂಕಣ5 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೇ..?
-
ದಿನದ ಸುದ್ದಿ3 days ago
ಇಂದಿನ ಅಡಿಕೆ ದರ ಪಟ್ಟಿ
-
ದಿನದ ಸುದ್ದಿ4 days ago
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ