ರಾಜಕೀಯ
ಹೆಚ್.ಬಿ. ಮಂಜಪ್ಪ ಮತ್ತು ಲೋಕಸಭಾ ಚುನಾವಣೆ

ಮಾನ್ಯರೆ,
2019 ರ ಲೋಕಸಭಾ ಚುನಾವಣೆ ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನಡೆಯುವ ಈ ಚುನಾವಣೆ ಭಾರತದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ತರವಾದ ಚುನಾವಣೆ ಅನ್ನುವಂತದ್ದು.
ಈ ಚುನಾವಣೆಯಲ್ಲಿ ಕುರುಬರಿಗೆ ಟಿಕೆಟ್ ಕೊಟ್ಟಿದ್ದಾರೆ,ಲಿಗಾಯತರಿಗೆ ಟಿಕೆಟ್ ಕೊಟ್ಟಿದ್ದಾರೆ ಅನ್ನೋದು ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇವತ್ತು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದು ಬೇರ ಬೇರೆ ಕ್ಷೇತ್ತಗಳಲ್ಲಿ ಲಿಂಗಾಯತರಿಗೆ,ನಾಯಕರಿಗೆ,
ದಲಿತರಿಗೆ ಬೇರೆ ಬೇರೆ ಸಮುದಾಯದವರಿಗೆ ಅವಕಾಶ ಸಿಕ್ಕಿರುವಂತದ್ದು ನಮಗೆಲ್ಲಾ ತಿಳಿದಿರುವಂತದ್ದು..
ಜಾತಿ ವ್ಯವಸ್ಥೆ ಅದೊಂದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ
- ಹೆಚ್ ಬಿ ಮಂಜಪ್ಟ ನಮ್ಮ ಪಕ್ಷದ ಅಭ್ಯರ್ಥಿಯೇನು ಕುರುಬರಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದವರೇನಲ್ಲ, ಜಾತಿ ವ್ಯವಸ್ಥೆ ಇದೆ ಅನಿವಾರ್ಯವಾಗಿ ಒಂದು ಜಾತಿಯಲ್ಲಿ ಹುಟ್ಟಿದ್ದಾರೆ.
- ಹೆಚ್ ಬಿ ಮಂಜಪ್ಪ ಒಳ್ಳೆಯ ಮಾತುಗಾರ,ಪ್ರಗತಿ ಪರವಾಗಿ ಚಿಂತನೆ ಮಾಡುವಂತ ನಾಯಕ ದೇಶದ ರೈತರ ಉಳಿವಿಗಾಗಿ,ಅಭಿವೃದ್ಧಿಗಾಗಿ ಇಂತವರ ಆಯ್ಕೆ ಸೂಕ್ತವಾಗಿರುವಂತದ್ದು.ಬಿಜೆಪಿ ಅಭ್ಯರ್ಥಿ ಮಾನ್ಯ ಸಿದ್ದೇಶ್ ರವರ ಚಿಂತನೆ,ವೈಫಲ್ಯಗಳನ್ನ ನಾವು ಜನರಿಗೆ ತಿಳಿಸಬೇಕಾಗುತ್ತದೆ.
- ಬಿಜೆಪಿ ಹೇಳಿ ಕೇಳಿ ವೈದಿಕರ ಪಕ್ಷ, ಸಂವಿಧಾನವನ್ನ ನಾಶ ಮಾಡ್ಲಿಕ್ಕಾಗೀನೆ ಹುಟ್ಟಿದಂತ ಪಕ್ಷ, ಇವತ್ತು ಸಂವಿಧಾನದ ನಾಶ ಅಂದರೆ ಭಾರತದ ಪರಂಪರೆಯ ನಾಶ, ಭಾರತದ ಸಂಸ್ಕೃತಿಯ ನಾಶ,ಲಿಂಗಾಯತರೂ ಸೇರಿದಂತೆ ಎಲ್ಲಾ ಹಿಂದುಳಿದ ದಲಿತ ಅಲ್ಪಸಂಖ್ಯಾತರ ನಾಶ, ಭಾರತದ ದ್ರಾವಿಡ ಸಂಸ್ಕೃತಿಯ ನಾಶ ಅನ್ನುವಂತದ್ದು.
- ಬಿಜೆಪಿಯಲ್ಲಿ ಯಾವ ಲಿಂಗಾಯತರಿಗೂ ಗೌರವ ಇಲ್ಲ,ಕರ್ನಾಟಕದಲ್ಲಿ ಬಿಜೆಪಿಯ ಬಲ ಅಂದರೇ ಲಿಂಗಾಯತರು,ಆರು ಜನ ಸಂಸದರಿದ್ದರೂ ಕೂಡ ಒಬ್ಬರಿಗೂ ಮಂತ್ರಿ ಸ್ಥಾನ ಇಲ್ಲ, ಸ್ವತಃ ಮಾನ್ಯ ಸಿದ್ದೇಶ್ ರವರಿಗೇ ಮಂತ್ರಿ ಸ್ಥಾನ ಕೊಟ್ಟು ಸಡನ್ ಆಗಿ ಕಸಿದ್ಕೊಂಡಂತವರು ಕಾರಣ ಮಾನ್ಯ ಸಿದ್ದೇಶ್ ವೈದಿಕ ಅಲ್ಲ, ಒಬ್ಬ ಶೂದ್ರ ಆ ಕಾರಣಕ್ಕೆ ಅವರಿಗೆ ಬಿಜೆಪಿ ಅವಮಾನಿಸಿದ್ದು.
- ಸ್ವತಃ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೇ ಗೌರವ ಇಲ್ಲ, ಯಡಿಯೂರಪ್ಪ ಲಿಂಗಾಯತ ನಾಯಕನಾಗಿದ್ದಕ್ಕೇ ಬಿಜೆಪಿಯಲ್ಲಿ ಮುಖ್ಯಮಂತ್ರಿಯಿಂದ ಕೆಳಗಿಳಿಸಿದ್ದು,ಮತ್ತೆ ಮುಖ್ಯಮಂತ್ರಿಯಾಗದಂತೆ ತಂತ್ರಗಳನ್ನ ರೂಪಿಸಿದ್ದು. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದಾರೆ ಅನ್ನಬಹುದು, ಅದಕ್ಕಿಂತ ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ ಇದ್ದಾರೆ ಅನ್ನುವಂತದ್ದು.
- ನಮಗೆ ಸಿದ್ದೇಶ್ ಅಭ್ಯರ್ಥಿ ಇರಬಹುದು, ನಮ್ಮ ಮತ ಸಿದ್ದೇಶ್ ವಿರುದ್ಧ ಅಲ್ಲ ಮಾನ್ಯ ನರೇಂದ್ರ ಮೋದಿಯ ವಿರುದ್ಧ,ಬಿಜೆಪಿಯ ವಿರುದ್ಧ ಸಂವಿಧಾನ ನಾಶ ಮಾಡುವವರ ವಿರುದ್ಧ,ಭಾರತೀಯರ ಸಾಂಸ್ಕೃತಿಕ ಬದುಕನ್ನ ನಾಶ ಮಾಡುವವರ ವಿರುದ್ಧ.
- ಸಿದ್ಧರಾಮಯ್ಯ ಕುರುಬ ಸಮುದಾಯದಲ್ಲಿ ಹುಟ್ಟಿದಂತವರು ಇವತ್ತು ಕೇವಲ ಕುರುಬರಿಗೆ ರೈತರ ಸಾಲ ಮನ್ನಾ ಮಾಡ್ಲಿಲ್ಲ,ಕೇವಲ ಕುರುಬರಿಗೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡ್ಲಿಲ್ಲ,ಕೇವಲ ಕುರುಬರ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕೊಡ್ಲಿಲ್ಲ,ಹಾಲು ಮೊಟ್ಟೆ,ಬಟ್ಟೆ ಪುಸ್ತಕ ಕೊಡ್ಲಿಲ್ಲ. ಮಾನ್ಯ ಸಿದ್ಧರಾಮಯ್ಯ ಬಸವ ಜಯಂತಿಯಂದು ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಸವಣ್ಣ ಕಂಡ ಸಮ ಸಮಾಜದ ಉಳಿವಿಗಾಗಿ ಕಾರ್ಯಕ್ರಮ ರೂಪಿಸಿದಂತವರು, ನಾಡಿನದಲಿತರ,ಹಿಂದುಳಿದವರ(ಲಿಂಗಾಯತರೂ ಹಿಂದುಳಿದವರೆ,3rd B ) ಅಲ್ಪಸಂಖ್ಯಾತರ ರೈತರ ಪರವಾಗಿ ಕಾರ್ಯಕ್ರಮ ರುಪಿಸಿದಂತವರು,ರೈತರ ಪರವಾಗಿ,ಮಹಿಳೆಯರ ಪರವಾಗಿ,ವಿದ್ಯಾರ್ಥಿಗಳ ಪರವಾಗಿ ಕಾರ್ಯಕ್ರಮ ಕೊಟ್ಟಂಥವರು.
- ಮಾನ್ಯ ಸಿದ್ಧರಾಮಯ್ಯನಂತಹ ರಾಜಕಾರಣಿ ಕರ್ನಾಟಕದ,ಭಾರತದ ರಾಜಕಾರಣದಲ್ಲಿ ಹುಟ್ಟಿರೋದ್ರಿಂದ್ಲೆ ಇವತ್ತು ಮೋದಿಯಂತವರು,ಬಿಜೆಪಿ ಸಂವಿಧಾನವನ್ನ ಮುಟ್ಲಿಕ್ಕೂ ಕೂಡ ಹೆದರುತ್ತೆ. ಮಾನ್ಯ ಸಿದ್ಧರಾಮಯ್ಯ,ಮಾನ್ಯ ಮಲ್ಲಿಕಾರ್ಜುನ ಖರ್ಗೆ,ಮಾನ್ಯ ಸತೀಶ್ ಜಾರಕಿಹೊಳಿ,ಮಾನ್ಯ ಇಬ್ರಾಹಿಂ ರಂತವರು ಇವತ್ತು ಇರೋದ್ರಿಂದ್ಲೇ ಸಂವಿಧಾನ,ಪ್ರಜಾಪ್ರಭುತ್ವ ಉಳಿದಿರೋದು.
- ಮಾನ್ಯ ಮನ್ ಮೋಹನ್ ಸಿಂಗ್ ಭಾರತ ದೇಶದಲ್ಲಿ ಒಂದು ಕ್ರಾಂತಿಕಾರಿ ಸರ್ಕಾರವನ್ನು ಕೊಟ್ಟಂತವರು, ಭಾರತ ದೇಶದ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಒಬ್ಬ ರೈತ ಪ್ರಧಾನಿಯಾದಂತವರು, ಆದರೆ ಮೋದಿ ಅದಾನಿ,ಅಂಬಾನಿಗಳ ಸಾಲ ಮನ್ನಾ ಮಾಡಿ ಶ್ರೀಮಂತರ,ಕಾರ್ಪೋರೇಟ್ ಕಂಪನಿಗಳ ಪರವಾದ ಪ್ರಧಾನಿಯಾದಂತವರು.
ಜಿ ಎಸ್ ಟಿ
- ಹಿಂದೆ ಬಿಜೆಪಿ, ಮನ್ ಮೋಹನ್ ಸರ್ಕಾರ ಇದ್ದಾಗ ಜಿಎಸ್ಟಿ ಬಡವರ ವಿರುದ್ಧ,ರೈತರ ವಿರುದ್ಧ ಅನ್ನೋ ಕಾರಣಕ್ಕೆ ವಿರೋಧಿಸಿತ್ತು, ಆದರೆ ಮೋದಿ,ಬಿಜೆಪಿ ತನ್ನ ಆಡಳಿತದಲ್ಲಿ ಜಿಎಸ್ಟಿ ಜಾರಿಗೆ ತಂದು ಸಂಪೂರ್ಣವಾಗಿ ಬಡವರ ವಿರುದ್ಧವಾಗಿದೆ, ತಿನ್ನುವ ಅನ್ನಕ್ಕೆ 18 ಪರ್ಸೆಂಟ್ ತೆರಿಗ, ಶ್ರೀಮಂತರು ಉಪಯೋಗಿಸುವ ಬಂಗಾರಕ್ಕೆ 5 ಪರ್ಸೆಂಟ್ ತೆರಿಗೆ.
- ನಮ್ಮ ರಾಹುಲ್ ಗಾಂಧಿ ಈಗಾಗ್ಲೆ ಜನರಿಗೆ ಭರವಸೆ ಕೊಟ್ಟಿದಾರೆ, ನನ್ನ ಸರ್ಕಾರ ಅಧಿಕಾರಕ್ಕೆ ಜಿಎಸ್ ಟಿ ಪರಾಮರ್ಶೆ ಮಾಡ್ತೇನೆ,ಬಡವರ ಪರವಾಗಿ ಜಿಎಸ್ ಟಿ ರೂಪಿಸ್ತೇನೆ ಅನ್ನುವಂತ ಮಾತು, ರೈತರಿಗೆ ಪ್ರತ್ಯೇಕ ಬಜೆಟ್,ಕಡು ಬಡವರ ಖಾತೆಗೆ ವರ್ಷಕ್ಕೆ 72000 ರೂ ಇದು ಕಾಂಗ್ರೆಸ್ ಬದ್ಧತೆ.
- 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅನ್ನುವ ಮೋದಿಯವರೆ, ನಿಮ್ಮವ್ವನ್ನ ಹೋಗಿ ಕೇಳಿ ಕಾಂಗ್ರೆಸ್ ಏನು ಮಾಡಿದೆ ಅಂತ ಆಗ ಅವರು ಹೇಳ್ತಾರೆ. ಹಸಿರು ಕ್ರಾಂತಿ,ಕ್ಷೀರ ಕ್ರಾಂತಿ,ಬ್ಯಾಂಕ್ ರಾಷ್ಟ್ರೀಕರಣ,ಗರೀಬಿ ಹಠಾವೋ, ವೈಜ್ಞಾನಿಕ ಕ್ರಾಂತಿ ಇವೆಲ್ಲಾ ನೀವು ಮಾಡಿದ್ದಾ.
- ನೀವು ಎಷ್ಟು ಡ್ಯಾಂ ಕಟ್ಸಿದೀರಿ,ಎಷ್ಟು ಶಾಲೆ ಕಟ್ಸಿದೀರಿ, ಎಷ್ಟು ಊರಿಗೆ ಕರೆಂಟು ಕೊಟ್ಟದೀರಿ, ಎಷ್ಟು ಬ್ಯಾಂಕ್,ಆಸ್ಪತ್ರೆ,ರೋಡು,ರೈಲು, ವಿಮಾನ ಸೆಟಲೈಟ್ ಬಿಟ್ಟಿದೀರಿ, ಯಾಕೆ ಬೊಗಳೆ ಬಿಡ್ತಾ ಇದೀರಾ, ಜನರೇನೂ ಮೂರ್ಖರಲ್ಲ, ನಿಮ್ಮ ಪ್ರತಿ ಸುಳ್ಳು,ಮೋಸವನ್ನ ಗಮನಿಸ್ತಾ ಇದ್ದಾರೆ.
- ಮಾತೆತ್ತಿದರೆ ನಾನು ಚೌಕೀದಾರ್ ಅಂತಿರ್ತೀರಾ, ಮಾನೊಯ ಮೋದಿಯವರೆ, ರಫೇಲ್ ಫೈಲ್ ಕಳ್ಳತನವಾದಾಗ, ನೀರವ್ ಮೋದಿ ದೇಶ ಬಿಟ್ಟು ಹೋಗುವಾಗ ನೀವೇನ್ ಮಾಡ್ತಿದ್ರಿ, ನಿದ್ದೆ ಮಾಡ್ತಿದ್ರಾ, ಅಥವ ಲಾಲಿಪಾಪ್ ತಿನ್ತಿದ್ರಾ.
- ಪುಲ್ವಾಮ ಧಾಳಿಗೆ, ಸೈನಿಕರ ಸಾವಿಗೆ ನೇರವಾಗಿ ನೀವೇ ಕಾರಣ,18 ಚೆಕ್ ಪೋಸ್ಟ್ ದಾಟಿ ಹೇಗೆ ಉಗ್ರಗಾಮಿಗಳು ನಿಮ್ಮಂತ ದಕ್ಷ,ನಿಷ್ಟಾವಂತ ಚೌಕೀದಾರ ಇದ್ದಾಗ ನುಗ್ತಾರೆ. ಗೋವಾದಿಂದ ಒಂದು ಬಿಯರ್ ಬಾಟಲ್ ತರ್ಲಿಕ್ಕೆ ಸಾಧ್ಯ ಆಗೋದಿಲ್ಲ ಅನ್ನೋದಾದ್ರೆ, ಅದು ಹೇಗೆ ಉಗ್ರಗಾಮಿಗಳು,ಅದು ಹೈಲೀ ಸೆಕ್ಯೂರಿಟಿ ಇರೋ ಏರಿಯಾಕ್ಕೆ ಬರ್ತಾರೆ. ನಾನ್ ಹೇಳ್ತೇನೆ ಕೇಳಿ ಮೋದಿಯವರೆ,ನೀವು ಐದು ವರ್ಷಗಳ ಕಾಲ ಜನರಿಗೆ ಏನೂ ಮಾಡ್ಲಿಲ್ಲ ಆದರೆ ಜನರ ಗಮನ ಬೇರೆಡೆಗೆ ಸೆಳೆದು ನಿಮ್ಮ ವೈಫಲ್ಯ ಮುಚ್ಕೋ ಬೇಕು, ಆ ಮೂಲಕ ಜನರ ಮನಸ್ಸಲ್ಲಿ ಕೋಮುವಾದವನ್ನ ಬಿತ್ತಿ ಮತ್ತೆ ಅಧಿಕಾರಕ್ಕೆ ಬರ್ಬೇಕು ಅನ್ನೋ ಮೋಸದ ಅಜೆಂಡಾ,ಕೋಮುವಾದಿ ಅಜೆಂಡಾ, ಹಿಡನ್ ಅಜೆಂಡಾ ನಿಮ್ದಲ್ವಾ ಮೋದಿ ಸಾಹೇಬ್ರಾ.
- ಅನೇಕ ವಿಷಯಗಳ ಬಗ್ಗೆ ಮಾತ್ನಾಡಬಹುದಾದರೂ ಇಲ್ಲಿ ಎಲ್ಲವನ್ನೂ ಹೇಳೋದಕ್ಕೆ ಸಾಧ್ಯ ಆಗಲಾರದು,ಕೊನೆಗೆ ಒಂದು ಮಾತು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಮುಖ್ಯ ಅಲ್ಲ ಪಕ್ಷ ಮುಖ್ಯ,ಜಾತಿ ಮುಖ್ಯ ಅಲ್ಲ ರಾಷ್ಟ್ರ ಮುಖ್ಯ, ಬಡವರು ರೈತರು ಮುಖ್ಯ ಆ ಕಾರಣಕ್ಕೆ ತಾವು ಭತದಾನ ಮಾಡಿ ಕಾಂಗ್ರೆಸ್ ಗೆ ವೋಟ್ ಕೊಡಿ ಅನ್ನೋ ವಿನಮ್ರ ಮನವಿ ನನ್ನದು.
ವಂದನೆಗಳೊಂದಿಗೆ
–ಉದಯಶಂಕರ ಮಾಗಾನಹಳ್ಳಿ
ಅಧ್ಯಕ್ಷರು
ರವಿ ಯುವಶಕ್ತಿ ಪಡೆ
ಹರಪನಹಳ್ಳಿ
9448649486
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ 34 ಸಾವಿರ ಕೋಟಿ ರೂಪಾಯಿ ಮೀಸಲು : ಸಚಿವ ಡಾ.ಎಚ್.ಸಿ.ಮಹದೇವಪ್ಪ

ಸುದ್ದಿದಿನ, ಹುಬ್ಬಳ್ಳಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ ಒಟ್ಟು 34ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಪರಿಶಿಷ್ಟ ಜಾತಿಗೆ 24 ಸಾವಿರ ಕೋಟಿ ರೂಪಾಯಿ, ಪಂಗಡಕ್ಕೆ 8ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 40 ಇಲಾಖೆಗಳಿಗೆ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ವಿಶೇಷ ಘಟಕ ಯೋಜನೆಯ ಹಣವನ್ನು ಇತರೆ ಯಾವುದೇ ವಿಭಾಗಕ್ಕೂ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನು ವಿನಿಯೋಗಿಸಲಾಗುವುದು ಎಂದು ಡಾ.ಮಹದೇವಪ್ಪ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಮೊತ್ತ ಎಷ್ಟು ಗೊತ್ತಾ?!

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಒಟ್ಟು 1 ಲಕ್ಷ 59 ಸಾವಿರದ 69 ಕೋಟಿ ರೂಪಾಯಿ ಜಿಎಸ್ಟಿ ಆದಾಯ ಸಂಗ್ರಹವಾಗಿದೆ.
35 ಸಾವಿರದ 794ಕೋಟಿ ರೂಪಾಯಿ ಕೇಂದ್ರೀಯ ಜಿಎಸ್ಟಿ, 83ಸಾವಿರದ 251 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಇದು ಒಳಗೊಂಡಿದೆ. 37 ಸಾವಿರದ 581 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಹಾಗೂ 31 ಸಾವಿರದ 408ಕೋಟಿ ರೂಪಾಯಿಗಳನ್ನು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಯಿಂದ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ ಸರ್ಕಾರ ಇತ್ಯರ್ಥ ಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
