ರಾಜಕೀಯ
ಹೆಚ್.ಬಿ. ಮಂಜಪ್ಪ ಮತ್ತು ಲೋಕಸಭಾ ಚುನಾವಣೆ
ಮಾನ್ಯರೆ,
2019 ರ ಲೋಕಸಭಾ ಚುನಾವಣೆ ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನಡೆಯುವ ಈ ಚುನಾವಣೆ ಭಾರತದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ತರವಾದ ಚುನಾವಣೆ ಅನ್ನುವಂತದ್ದು.
ಈ ಚುನಾವಣೆಯಲ್ಲಿ ಕುರುಬರಿಗೆ ಟಿಕೆಟ್ ಕೊಟ್ಟಿದ್ದಾರೆ,ಲಿಗಾಯತರಿಗೆ ಟಿಕೆಟ್ ಕೊಟ್ಟಿದ್ದಾರೆ ಅನ್ನೋದು ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇವತ್ತು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದು ಬೇರ ಬೇರೆ ಕ್ಷೇತ್ತಗಳಲ್ಲಿ ಲಿಂಗಾಯತರಿಗೆ,ನಾಯಕರಿಗೆ,
ದಲಿತರಿಗೆ ಬೇರೆ ಬೇರೆ ಸಮುದಾಯದವರಿಗೆ ಅವಕಾಶ ಸಿಕ್ಕಿರುವಂತದ್ದು ನಮಗೆಲ್ಲಾ ತಿಳಿದಿರುವಂತದ್ದು..
ಜಾತಿ ವ್ಯವಸ್ಥೆ ಅದೊಂದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ
- ಹೆಚ್ ಬಿ ಮಂಜಪ್ಟ ನಮ್ಮ ಪಕ್ಷದ ಅಭ್ಯರ್ಥಿಯೇನು ಕುರುಬರಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದವರೇನಲ್ಲ, ಜಾತಿ ವ್ಯವಸ್ಥೆ ಇದೆ ಅನಿವಾರ್ಯವಾಗಿ ಒಂದು ಜಾತಿಯಲ್ಲಿ ಹುಟ್ಟಿದ್ದಾರೆ.
- ಹೆಚ್ ಬಿ ಮಂಜಪ್ಪ ಒಳ್ಳೆಯ ಮಾತುಗಾರ,ಪ್ರಗತಿ ಪರವಾಗಿ ಚಿಂತನೆ ಮಾಡುವಂತ ನಾಯಕ ದೇಶದ ರೈತರ ಉಳಿವಿಗಾಗಿ,ಅಭಿವೃದ್ಧಿಗಾಗಿ ಇಂತವರ ಆಯ್ಕೆ ಸೂಕ್ತವಾಗಿರುವಂತದ್ದು.ಬಿಜೆಪಿ ಅಭ್ಯರ್ಥಿ ಮಾನ್ಯ ಸಿದ್ದೇಶ್ ರವರ ಚಿಂತನೆ,ವೈಫಲ್ಯಗಳನ್ನ ನಾವು ಜನರಿಗೆ ತಿಳಿಸಬೇಕಾಗುತ್ತದೆ.
- ಬಿಜೆಪಿ ಹೇಳಿ ಕೇಳಿ ವೈದಿಕರ ಪಕ್ಷ, ಸಂವಿಧಾನವನ್ನ ನಾಶ ಮಾಡ್ಲಿಕ್ಕಾಗೀನೆ ಹುಟ್ಟಿದಂತ ಪಕ್ಷ, ಇವತ್ತು ಸಂವಿಧಾನದ ನಾಶ ಅಂದರೆ ಭಾರತದ ಪರಂಪರೆಯ ನಾಶ, ಭಾರತದ ಸಂಸ್ಕೃತಿಯ ನಾಶ,ಲಿಂಗಾಯತರೂ ಸೇರಿದಂತೆ ಎಲ್ಲಾ ಹಿಂದುಳಿದ ದಲಿತ ಅಲ್ಪಸಂಖ್ಯಾತರ ನಾಶ, ಭಾರತದ ದ್ರಾವಿಡ ಸಂಸ್ಕೃತಿಯ ನಾಶ ಅನ್ನುವಂತದ್ದು.
- ಬಿಜೆಪಿಯಲ್ಲಿ ಯಾವ ಲಿಂಗಾಯತರಿಗೂ ಗೌರವ ಇಲ್ಲ,ಕರ್ನಾಟಕದಲ್ಲಿ ಬಿಜೆಪಿಯ ಬಲ ಅಂದರೇ ಲಿಂಗಾಯತರು,ಆರು ಜನ ಸಂಸದರಿದ್ದರೂ ಕೂಡ ಒಬ್ಬರಿಗೂ ಮಂತ್ರಿ ಸ್ಥಾನ ಇಲ್ಲ, ಸ್ವತಃ ಮಾನ್ಯ ಸಿದ್ದೇಶ್ ರವರಿಗೇ ಮಂತ್ರಿ ಸ್ಥಾನ ಕೊಟ್ಟು ಸಡನ್ ಆಗಿ ಕಸಿದ್ಕೊಂಡಂತವರು ಕಾರಣ ಮಾನ್ಯ ಸಿದ್ದೇಶ್ ವೈದಿಕ ಅಲ್ಲ, ಒಬ್ಬ ಶೂದ್ರ ಆ ಕಾರಣಕ್ಕೆ ಅವರಿಗೆ ಬಿಜೆಪಿ ಅವಮಾನಿಸಿದ್ದು.
- ಸ್ವತಃ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೇ ಗೌರವ ಇಲ್ಲ, ಯಡಿಯೂರಪ್ಪ ಲಿಂಗಾಯತ ನಾಯಕನಾಗಿದ್ದಕ್ಕೇ ಬಿಜೆಪಿಯಲ್ಲಿ ಮುಖ್ಯಮಂತ್ರಿಯಿಂದ ಕೆಳಗಿಳಿಸಿದ್ದು,ಮತ್ತೆ ಮುಖ್ಯಮಂತ್ರಿಯಾಗದಂತೆ ತಂತ್ರಗಳನ್ನ ರೂಪಿಸಿದ್ದು. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದಾರೆ ಅನ್ನಬಹುದು, ಅದಕ್ಕಿಂತ ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ ಇದ್ದಾರೆ ಅನ್ನುವಂತದ್ದು.
- ನಮಗೆ ಸಿದ್ದೇಶ್ ಅಭ್ಯರ್ಥಿ ಇರಬಹುದು, ನಮ್ಮ ಮತ ಸಿದ್ದೇಶ್ ವಿರುದ್ಧ ಅಲ್ಲ ಮಾನ್ಯ ನರೇಂದ್ರ ಮೋದಿಯ ವಿರುದ್ಧ,ಬಿಜೆಪಿಯ ವಿರುದ್ಧ ಸಂವಿಧಾನ ನಾಶ ಮಾಡುವವರ ವಿರುದ್ಧ,ಭಾರತೀಯರ ಸಾಂಸ್ಕೃತಿಕ ಬದುಕನ್ನ ನಾಶ ಮಾಡುವವರ ವಿರುದ್ಧ.
- ಸಿದ್ಧರಾಮಯ್ಯ ಕುರುಬ ಸಮುದಾಯದಲ್ಲಿ ಹುಟ್ಟಿದಂತವರು ಇವತ್ತು ಕೇವಲ ಕುರುಬರಿಗೆ ರೈತರ ಸಾಲ ಮನ್ನಾ ಮಾಡ್ಲಿಲ್ಲ,ಕೇವಲ ಕುರುಬರಿಗೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡ್ಲಿಲ್ಲ,ಕೇವಲ ಕುರುಬರ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕೊಡ್ಲಿಲ್ಲ,ಹಾಲು ಮೊಟ್ಟೆ,ಬಟ್ಟೆ ಪುಸ್ತಕ ಕೊಡ್ಲಿಲ್ಲ. ಮಾನ್ಯ ಸಿದ್ಧರಾಮಯ್ಯ ಬಸವ ಜಯಂತಿಯಂದು ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಸವಣ್ಣ ಕಂಡ ಸಮ ಸಮಾಜದ ಉಳಿವಿಗಾಗಿ ಕಾರ್ಯಕ್ರಮ ರೂಪಿಸಿದಂತವರು, ನಾಡಿನದಲಿತರ,ಹಿಂದುಳಿದವರ(ಲಿಂಗಾಯತರೂ ಹಿಂದುಳಿದವರೆ,3rd B ) ಅಲ್ಪಸಂಖ್ಯಾತರ ರೈತರ ಪರವಾಗಿ ಕಾರ್ಯಕ್ರಮ ರುಪಿಸಿದಂತವರು,ರೈತರ ಪರವಾಗಿ,ಮಹಿಳೆಯರ ಪರವಾಗಿ,ವಿದ್ಯಾರ್ಥಿಗಳ ಪರವಾಗಿ ಕಾರ್ಯಕ್ರಮ ಕೊಟ್ಟಂಥವರು.
- ಮಾನ್ಯ ಸಿದ್ಧರಾಮಯ್ಯನಂತಹ ರಾಜಕಾರಣಿ ಕರ್ನಾಟಕದ,ಭಾರತದ ರಾಜಕಾರಣದಲ್ಲಿ ಹುಟ್ಟಿರೋದ್ರಿಂದ್ಲೆ ಇವತ್ತು ಮೋದಿಯಂತವರು,ಬಿಜೆಪಿ ಸಂವಿಧಾನವನ್ನ ಮುಟ್ಲಿಕ್ಕೂ ಕೂಡ ಹೆದರುತ್ತೆ. ಮಾನ್ಯ ಸಿದ್ಧರಾಮಯ್ಯ,ಮಾನ್ಯ ಮಲ್ಲಿಕಾರ್ಜುನ ಖರ್ಗೆ,ಮಾನ್ಯ ಸತೀಶ್ ಜಾರಕಿಹೊಳಿ,ಮಾನ್ಯ ಇಬ್ರಾಹಿಂ ರಂತವರು ಇವತ್ತು ಇರೋದ್ರಿಂದ್ಲೇ ಸಂವಿಧಾನ,ಪ್ರಜಾಪ್ರಭುತ್ವ ಉಳಿದಿರೋದು.
- ಮಾನ್ಯ ಮನ್ ಮೋಹನ್ ಸಿಂಗ್ ಭಾರತ ದೇಶದಲ್ಲಿ ಒಂದು ಕ್ರಾಂತಿಕಾರಿ ಸರ್ಕಾರವನ್ನು ಕೊಟ್ಟಂತವರು, ಭಾರತ ದೇಶದ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಒಬ್ಬ ರೈತ ಪ್ರಧಾನಿಯಾದಂತವರು, ಆದರೆ ಮೋದಿ ಅದಾನಿ,ಅಂಬಾನಿಗಳ ಸಾಲ ಮನ್ನಾ ಮಾಡಿ ಶ್ರೀಮಂತರ,ಕಾರ್ಪೋರೇಟ್ ಕಂಪನಿಗಳ ಪರವಾದ ಪ್ರಧಾನಿಯಾದಂತವರು.
ಜಿ ಎಸ್ ಟಿ
- ಹಿಂದೆ ಬಿಜೆಪಿ, ಮನ್ ಮೋಹನ್ ಸರ್ಕಾರ ಇದ್ದಾಗ ಜಿಎಸ್ಟಿ ಬಡವರ ವಿರುದ್ಧ,ರೈತರ ವಿರುದ್ಧ ಅನ್ನೋ ಕಾರಣಕ್ಕೆ ವಿರೋಧಿಸಿತ್ತು, ಆದರೆ ಮೋದಿ,ಬಿಜೆಪಿ ತನ್ನ ಆಡಳಿತದಲ್ಲಿ ಜಿಎಸ್ಟಿ ಜಾರಿಗೆ ತಂದು ಸಂಪೂರ್ಣವಾಗಿ ಬಡವರ ವಿರುದ್ಧವಾಗಿದೆ, ತಿನ್ನುವ ಅನ್ನಕ್ಕೆ 18 ಪರ್ಸೆಂಟ್ ತೆರಿಗ, ಶ್ರೀಮಂತರು ಉಪಯೋಗಿಸುವ ಬಂಗಾರಕ್ಕೆ 5 ಪರ್ಸೆಂಟ್ ತೆರಿಗೆ.
- ನಮ್ಮ ರಾಹುಲ್ ಗಾಂಧಿ ಈಗಾಗ್ಲೆ ಜನರಿಗೆ ಭರವಸೆ ಕೊಟ್ಟಿದಾರೆ, ನನ್ನ ಸರ್ಕಾರ ಅಧಿಕಾರಕ್ಕೆ ಜಿಎಸ್ ಟಿ ಪರಾಮರ್ಶೆ ಮಾಡ್ತೇನೆ,ಬಡವರ ಪರವಾಗಿ ಜಿಎಸ್ ಟಿ ರೂಪಿಸ್ತೇನೆ ಅನ್ನುವಂತ ಮಾತು, ರೈತರಿಗೆ ಪ್ರತ್ಯೇಕ ಬಜೆಟ್,ಕಡು ಬಡವರ ಖಾತೆಗೆ ವರ್ಷಕ್ಕೆ 72000 ರೂ ಇದು ಕಾಂಗ್ರೆಸ್ ಬದ್ಧತೆ.
- 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅನ್ನುವ ಮೋದಿಯವರೆ, ನಿಮ್ಮವ್ವನ್ನ ಹೋಗಿ ಕೇಳಿ ಕಾಂಗ್ರೆಸ್ ಏನು ಮಾಡಿದೆ ಅಂತ ಆಗ ಅವರು ಹೇಳ್ತಾರೆ. ಹಸಿರು ಕ್ರಾಂತಿ,ಕ್ಷೀರ ಕ್ರಾಂತಿ,ಬ್ಯಾಂಕ್ ರಾಷ್ಟ್ರೀಕರಣ,ಗರೀಬಿ ಹಠಾವೋ, ವೈಜ್ಞಾನಿಕ ಕ್ರಾಂತಿ ಇವೆಲ್ಲಾ ನೀವು ಮಾಡಿದ್ದಾ.
- ನೀವು ಎಷ್ಟು ಡ್ಯಾಂ ಕಟ್ಸಿದೀರಿ,ಎಷ್ಟು ಶಾಲೆ ಕಟ್ಸಿದೀರಿ, ಎಷ್ಟು ಊರಿಗೆ ಕರೆಂಟು ಕೊಟ್ಟದೀರಿ, ಎಷ್ಟು ಬ್ಯಾಂಕ್,ಆಸ್ಪತ್ರೆ,ರೋಡು,ರೈಲು, ವಿಮಾನ ಸೆಟಲೈಟ್ ಬಿಟ್ಟಿದೀರಿ, ಯಾಕೆ ಬೊಗಳೆ ಬಿಡ್ತಾ ಇದೀರಾ, ಜನರೇನೂ ಮೂರ್ಖರಲ್ಲ, ನಿಮ್ಮ ಪ್ರತಿ ಸುಳ್ಳು,ಮೋಸವನ್ನ ಗಮನಿಸ್ತಾ ಇದ್ದಾರೆ.
- ಮಾತೆತ್ತಿದರೆ ನಾನು ಚೌಕೀದಾರ್ ಅಂತಿರ್ತೀರಾ, ಮಾನೊಯ ಮೋದಿಯವರೆ, ರಫೇಲ್ ಫೈಲ್ ಕಳ್ಳತನವಾದಾಗ, ನೀರವ್ ಮೋದಿ ದೇಶ ಬಿಟ್ಟು ಹೋಗುವಾಗ ನೀವೇನ್ ಮಾಡ್ತಿದ್ರಿ, ನಿದ್ದೆ ಮಾಡ್ತಿದ್ರಾ, ಅಥವ ಲಾಲಿಪಾಪ್ ತಿನ್ತಿದ್ರಾ.
- ಪುಲ್ವಾಮ ಧಾಳಿಗೆ, ಸೈನಿಕರ ಸಾವಿಗೆ ನೇರವಾಗಿ ನೀವೇ ಕಾರಣ,18 ಚೆಕ್ ಪೋಸ್ಟ್ ದಾಟಿ ಹೇಗೆ ಉಗ್ರಗಾಮಿಗಳು ನಿಮ್ಮಂತ ದಕ್ಷ,ನಿಷ್ಟಾವಂತ ಚೌಕೀದಾರ ಇದ್ದಾಗ ನುಗ್ತಾರೆ. ಗೋವಾದಿಂದ ಒಂದು ಬಿಯರ್ ಬಾಟಲ್ ತರ್ಲಿಕ್ಕೆ ಸಾಧ್ಯ ಆಗೋದಿಲ್ಲ ಅನ್ನೋದಾದ್ರೆ, ಅದು ಹೇಗೆ ಉಗ್ರಗಾಮಿಗಳು,ಅದು ಹೈಲೀ ಸೆಕ್ಯೂರಿಟಿ ಇರೋ ಏರಿಯಾಕ್ಕೆ ಬರ್ತಾರೆ. ನಾನ್ ಹೇಳ್ತೇನೆ ಕೇಳಿ ಮೋದಿಯವರೆ,ನೀವು ಐದು ವರ್ಷಗಳ ಕಾಲ ಜನರಿಗೆ ಏನೂ ಮಾಡ್ಲಿಲ್ಲ ಆದರೆ ಜನರ ಗಮನ ಬೇರೆಡೆಗೆ ಸೆಳೆದು ನಿಮ್ಮ ವೈಫಲ್ಯ ಮುಚ್ಕೋ ಬೇಕು, ಆ ಮೂಲಕ ಜನರ ಮನಸ್ಸಲ್ಲಿ ಕೋಮುವಾದವನ್ನ ಬಿತ್ತಿ ಮತ್ತೆ ಅಧಿಕಾರಕ್ಕೆ ಬರ್ಬೇಕು ಅನ್ನೋ ಮೋಸದ ಅಜೆಂಡಾ,ಕೋಮುವಾದಿ ಅಜೆಂಡಾ, ಹಿಡನ್ ಅಜೆಂಡಾ ನಿಮ್ದಲ್ವಾ ಮೋದಿ ಸಾಹೇಬ್ರಾ.
- ಅನೇಕ ವಿಷಯಗಳ ಬಗ್ಗೆ ಮಾತ್ನಾಡಬಹುದಾದರೂ ಇಲ್ಲಿ ಎಲ್ಲವನ್ನೂ ಹೇಳೋದಕ್ಕೆ ಸಾಧ್ಯ ಆಗಲಾರದು,ಕೊನೆಗೆ ಒಂದು ಮಾತು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಮುಖ್ಯ ಅಲ್ಲ ಪಕ್ಷ ಮುಖ್ಯ,ಜಾತಿ ಮುಖ್ಯ ಅಲ್ಲ ರಾಷ್ಟ್ರ ಮುಖ್ಯ, ಬಡವರು ರೈತರು ಮುಖ್ಯ ಆ ಕಾರಣಕ್ಕೆ ತಾವು ಭತದಾನ ಮಾಡಿ ಕಾಂಗ್ರೆಸ್ ಗೆ ವೋಟ್ ಕೊಡಿ ಅನ್ನೋ ವಿನಮ್ರ ಮನವಿ ನನ್ನದು.
ವಂದನೆಗಳೊಂದಿಗೆ
–ಉದಯಶಂಕರ ಮಾಗಾನಹಳ್ಳಿ
ಅಧ್ಯಕ್ಷರು
ರವಿ ಯುವಶಕ್ತಿ ಪಡೆ
ಹರಪನಹಳ್ಳಿ
9448649486
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಚನ್ನಗಿರಿ | ಕೆ ಹೊಸಳ್ಳಿ ಗ್ರಾಮದ ಶಾಲೆ ಎದುರೇ ಕೆರೆ ; ಸಾವಿನ ಸನಿಹ ಮಕ್ಕಳ ಕಲಿಕೆ : ಕಾಂಪೌಂಡ್ ನಿರ್ಮಿಸಲು ಗ್ರಾಮಸ್ಥರ ಮನವಿಗೆ ಕಿವಿಗೊಡದ ಅಧಿಕಾರಿಗಳು
ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆ ಹೊಸಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಡೆಗೋಡೆ (ಕಾಂಪೌಂಡ್) ಕಾಣದೇ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪ್ರತಿ ದಿನವೂ ಅಪಾಯದ ನಡುವೆಯೇ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಆಟ-ಪಾಠ ಕಾಣುವಂತಾಗಿದೆ ಎಂಬ ಆರೋಪದ ಜೊತೆಗೆ ಕಾಳಜಿಯ ಒತ್ತಾಯ ಕೇಳಿ ಬರುತ್ತಿದೆ.
ಶಾಲೆಯ ಎದುರೇ ಕೆರೆ ಮತ್ತು ಗ್ರಾಮದ ಸಂಪರ್ಕಿಸುವ ರಸ್ತೆ ಜೊತೆಗೆ ವಿದ್ಯುತ್ ಸಂಪರ್ಕವುಳ್ಳ ಟ್ರ್ಯಾನ್ಫರ್ಮರ್ ಹಾಗೂ ಬೋರ್ವೆಲ್ ಇದೆ. ಅಲ್ಲದೇ ತೆರೆದ ಒಳಚರಂಡಿ ಸಹ ಇದೆ. ಹೀಗೆ ಅಪಾಯಕ್ಕೆ ಕಾದು ಕುಳಿತು ಜೀವ ಬಲಿ ಪಡೆಯುವಂತಹ ಪರಿಸ್ಥಿತಿ ಇದ್ದು, ಶಾಲೆಗೆ ತಡೆಗೋಡೆ ಇಲ್ಲದೇ ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿ 20 ರಿಂದ 30 ವಿದ್ಯಾರ್ಥಿಗಳ ಜೀವದ ಪ್ರಶ್ನೆಯಾಗಿ ಉಳಿದಿದೆ.
ಹೀಗೆ ವಿದ್ಯಾರ್ಥಿಗಳು ಆಟದ ವೇಳೆಯಲ್ಲಾಗಲೀ ಅಥವಾ ಶಾಲೆಗೆ ಬರುವಾಗ, ಮನೆಗೆ ಹೋಗುವಾಗ ಈ ಯಾವುದಾದರೂ ಅಪಾಯಕ್ಕೆ ಸಿಲುಕಿದರೆ ಅಮೂಲ್ಯ ಜೀವ ಬಲಿಯಾಗಲಿದೆ. ಅಕ್ಷರ ಜ್ಞಾನ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಶಾಲೆಯೇ ಭವಿಷ್ಯ ಕಟ್ಟಿಕೊಡುವ ಬದಲು ಜೀವ ಬಲಿಪಡೆಯುವ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಹೊಸದಾಗಿ ನಿರ್ಮಾಣವಾಗಬೇಕಿರುವ ಶಾಲಾ ಕಾಂಪೌಂಡ್ 4 ವರ್ಷಗಳೇ ಕಳೆದರೂ ನಿರ್ಮಾಣ ಕಾಣದಂತಾಗಿದೆ ಎಂಬುದು ಈ ಶಾಲೆಯ ಕೆಲ ಹಳೇ ವಿದ್ಯಾರ್ಥಿಗಳ ಮುತುವರ್ಜಿಯಾಗಿದೆ.
ಈ ಶಾಲೆಗೆ ಹಿಂದೆ ಶಾಲಾ ಕಾಂಪೌಂಡ್ ದುರಸ್ತಿಯಲ್ಲಿದ್ದ ಕಾರಣ ಹೊಸ ಕಾಂಪೌಂಡ್ ನಿರ್ಮಾಣಕ್ಕಾಗಿ 2021-22ರ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ -2005 ರ ಮಹಾತ್ಮ ಗಾಂಧಿ ನರೇಗಾ ಕಾಮಗಾರಿಯಡಿ 4 ಲಕ್ಷ ರೂ. ಮಂಜೂರು ಆಗಿತ್ತು. ಸುಮಾರು ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಈ ಶಾಲೆಗೆ ಕಾಂಪೌಂಡ್ ಮರೀಚಿಕೆಯಾಗಿದೆ ಎನ್ನುತ್ತಾರೆ ಹಳೇ ವಿದ್ಯಾರ್ಥಿ ಮಂಜುನಾಥ್ ಆರ್.
“ರಸ್ತೆಯ ಸಂಪರ್ಕಕ್ಕೆ ಹತ್ತಿರವಾಗಿದ್ದು, ಮಕ್ಕಳಿಗೆ ಅಪಘಾತ ಆಗುವ ಸಂದರ್ಭ ಇದೆ ಮತ್ತು ಶಾಲೆಯ ಮುಂಭಾಗದಲ್ಲಿ ಗ್ರಾಮದ ಕೆರೆ ಇದ್ದು ಕೆರೆವು ಸಂಪೂರ್ಣವಾಗಿ ನೀರಿನಿಂದ ತುಂಬಿದೆ ಇದರಿಂದ ಮಕ್ಕಳ ಜೀವಕ್ಕೆ ತೊಂದರೆ ಆಗುವ ಸಂಭವ ಸಹ ಇದೆ. ಈ ಎಲ್ಲ ತೊಂದರೆಗಳಿಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ನಿರ್ಲಕ್ಷತನ ಎಂದು ಹೇಳಬಹುದು. ಶಾಸಕರು ಸಹ ಇದರ ಬಗ್ಗೆ ಹೆಚ್ಚಿನ ಗಮನವಹಿಸಬೇಕಾಗಿದೆ.”
|ಹಳೇ ವಿದ್ಯಾರ್ಥಿ ಮಂಜುನಾಥ್
“ಶಾಲೆಯ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ನಾನೂ ಸಹ ಪಿಡಿಓಗೆ ಸಾಕಷ್ಟು ಮನವಿ ಸಾಕಾಗಿದೆ. ಯಾವುದೇ ಸರಿಯಾದ ಸ್ಪಂದನೆ ಇಲ್ಲ. ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಹಿಂದೆ ಅಡೆ-ತಡೆಯೂ ಉಂಟಾಯಿತು. ಹೀಗಾಗಿ ನರೇಗಾ ಯೋಜನೆಯ ಕಾರ್ಮಿಕರು ನಿರ್ಮಾಣಕ್ಕೆ ಮುಂದಾಗದಂತಾಯಿತು. ಶಾಲೆಗೆ ಕಾಂಪೌಂಡ್ ಇಲ್ಲದೇ ಅಪಾಯದ ವಾತಾವರಣವಿರುವ ಕಾರಣ ಯಾವುದೇ ಪಠ್ಯೇತರ ಚಟುವಟಿಕೆಗಳು ನಡೆಸಲು ಆಗುತ್ತಿಲ್ಲ. ಮಕ್ಕಳ ಜೀವವನ್ನು ನಾನು ಕಾವಲುಗಾರನಾಗಿ ಕಾಯುತ್ತಿದ್ದೇನೆ. ಶಾಲೆಗೆ ಕಾಂಪೌಂಡ್ ಇಲ್ಲದೇ ತೆರೆದ ಪ್ರದೇಶವಾಗಿರುವ ಕಾರಣ ಮದ್ಯ ವ್ಯಸನಿಗಳ ತಾಣವಾಗಿದ್ದು, ದಿನವೂ ಮದ್ಯದ ಬಾಟಲ್, ಪೌಚ್ಗಳ ಸ್ವಚ್ಚಗೊಳಿಸಿ ಶಾಲೆಯೊಳಗೆ ಕರ್ತವ್ಯಕ್ಕೆ ತೆರಳುವಂತಾಗಿದೆ.”
| ಜಯರಾಜ್, ಮುಖ್ಯೋಪಾದ್ಯಾಯರು
“ಇನ್ನೆರಡು ದಿನಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಗೆ
ನರೇಗಾ ಯೋಜನೆಯಡಿಯ ಈ ಕಾಮಗಾರಿ ಕೈಗೊಳ್ಳಲು ಉದ್ಯೋಗ ಖಾತ್ರಿ ಕಾರ್ಡ್ವುಳ್ಳ ಕಾರ್ಮಿಕರು ಮುಂದಾಗುತ್ತಿಲ್ಲ. ಕಾಂಪೌಂಡ್ ನಿರ್ಮಾಣದಲ್ಲಿ ತಡವಾಗುತ್ತಿರುವುದಾಗಲೀ, ಅಡೆ-ತಡೆ ಬಗ್ಗೆಯಾಗಲೀ ನನಗೆ ಯಾವುದೇ ಮಾಹಿತಿ ಇಲ್ಲ. ಇದೀಗ ಶಾಲೆಯ ಹಳೇ ವಿದ್ಯಾರ್ಥಿಗಳು ಸಹಕಾರ ನೀಡಲು ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಗೆ ಬರಲಿದೆ”
| ರಶ್ಮಿ, ಪ್ರಭಾರ ಪಿಡಿಓ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ನಡೆದಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್ ಹಾಗೂ ಮಂಗಳೂರು ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಡಾ.ಕೆ.ಎ.ಓಬಳಪ್ಪ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಡಾ.ಕೆ.ಎ.ಓಬಳಪ್ಪ ಇವರು ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ಅಧಿಸೂಚನೆ ಹೊರಡಿಸಿರುವ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಸಂದರ್ಶನಕ್ಕೂ ಹಾಜರಾಗಿರುತ್ತಾರೆ. ಆದರೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸದೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ.
ಮಾಹಿತಿಹಕ್ಕು ಅಡಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ದೃಢೀಕರಿಸಿ ನೀಡುವಂತೆ ಕೋರಿದಾಗಲೂ ಮಾಹಿತಿ ನೀಡದೆ ನಿರಾಕರಿಸಿರುತ್ತಾರೆ. ಯು.ಜಿ.ಸಿ ನಿಯಮಾವಳಿ ಪ್ರಕಾರ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸದೆ ವಿಷಯವಾರು ಮತ್ತು ಮೀಸಲಾತಿವಾರು 1:10, 1:15 ಅನುಪಾತದವರೆಗೂ ಮನಸ್ಸಿಚ್ಚೆಯಂತೆ ಸಂದರ್ಶನಕ್ಕೆ ಆಹ್ವಾನ ನೀಡಿ, ಕಾನೂನುಬಾಹಿರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ.
ಹೀಗಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸುವರೆಗೂ ಈ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕಾಲೇಜು ಶಿಕ್ಷಣ ಆಯುಕ್ತರು ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರುಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ಸ್ಪಷ್ಟನೆ ನೀಡದೆ ನಿಯಮಬಾಹಿರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲಾಗಿರುತ್ತದೆ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನರೇಗಾ ಕಾರ್ಮಿಕ ಕೆಲಸದ ಸ್ಥಳದಲ್ಲಿ ನಿಧನ : ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ
ಸುದ್ದಿದಿನ,ದಾವಣಗೆರೆ:ನವೆಂಬರ್ 10 ರ ಬೆಳಿಗ್ಗೆ 10 ಗಂಟೆ ಸುಮಾರಿಗೆ, ಹೊನ್ನಾಳಿ ತಾಲ್ಲೂಕು ಹಿರೇಗೋಣಿಗೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇರುವ ಸರ್ವೆ ನಂ 67ರಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕಂದಕ ನಿರ್ಮಾಣ ಕೆಲಸದ ಕೂಲಿ ಕೆಲಸದಲ್ಲಿ ನಿರತರಾಗಿದ್ದ ಜಿಕ್ರಿಯಾ ಸಬಾದ್ ಬಿನ್ ನಿಯಾಸಾಬ್ ಸುಮಾರು ವಯಸ್ಸು 61, ಜಾಬ್ ಕಾರ್ಡ್ ಸಂಖ್ಯೆ ಕೆಎನ್ -12-005-037-004/396, ಹಠಾತ್ತನೆ ಕುಸಿದು ಬಿದ್ದು ಸ್ಥಳದಲ್ಲೇ ನಿಧನರಾಗಿರುವರು.
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕಾಮಗಾರಿ ಸ್ಥಳಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮತ್ತು ಸುರಕ್ಷತೆಯ ಮಹತ್ವವನ್ನು ಒತ್ತಿ ಹೇಳಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮತ್ತು ಅವರಿಗೆ ಎಲ್ಲಾ ಸರ್ಕಾರಿ ಸವಲತ್ತುಗಳು ಮತ್ತು ಸಹಾಯವನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಹೊನ್ನಾಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಮತ್ತು ಹಿರೇಗೋಣಿಗೆರೆ ಗ್ರಾಮ ಪಂಚಾಯತ್ ಪಿಡಿಓ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಕರ್ತವ್ಯ ಲೋಪ ; ಪಿ.ಮಣಿವಣ್ಣನ್, ಕ್ರೈಸ್ ಇ.ಡಿ ಕಾಂತರಾಜು ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಸಚಿವ ಪ್ರಿಯಾಂಕ ಖರ್ಗೆ ಪಂಚಾಯತ್ ರಾಜ್ ಇಲಾಖೆ ನಿರ್ಲಕ್ಷ್ಯ | ದೂರು ನೀಡಿ 6 ತಿಂಗಳಾದರೂ ಯಾವುದೇ ಕ್ರಮವಿಲ್ಲ ; ವಕೀಲ ಡಾ.ಕೆ.ಎ.ಓಬಳಪ್ಪ ಆರೋಪ
-
ದಿನದ ಸುದ್ದಿ5 days agoಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ | 8 ಕುಲಸಚಿವರು, 10 ಹಣಕಾಸು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು
-
ದಿನದ ಸುದ್ದಿ5 days agoಹೊಳಲ್ಕೆರೆ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಖರೀದಿ ವ್ಯವಹಾರ ಪ್ರಾಂಶುಪಾಲ ಡಾ ಎಸ್.ಪಿ ರವಿ ವಿರುದ್ಧ ಲೋಕಾಯುಕ್ತಕ್ಕೆ ವಕೀಲ ಡಾ.ಓಬಳೇಶ್ ದೂರು
-
ದಿನದ ಸುದ್ದಿ2 days agoಕರ್ತವ್ಯ ಲೋಪ | ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು
-
ದಿನದ ಸುದ್ದಿ4 days agoನರೇಗಾ ಕಾರ್ಮಿಕ ಕೆಲಸದ ಸ್ಥಳದಲ್ಲಿ ನಿಧನ : ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ
-
ದಿನದ ಸುದ್ದಿ4 days agoಇದೇ 15 ರಂದು ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

