Connect with us

ರಾಜಕೀಯ

ಹೆಚ್.ಬಿ. ಮಂಜಪ್ಪ ಮತ್ತು ಲೋಕಸಭಾ ಚುನಾವಣೆ

Published

on

ಮಾನ್ಯರೆ,

2019 ರ ಲೋಕಸ‌ಭಾ ಚುನಾವಣೆ ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನಡೆಯುವ ಈ ಚುನಾವಣೆ ಭಾರತದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ತರವಾದ ಚುನಾವಣೆ ಅನ್ನುವಂತದ್ದು.

ಈ ಚುನಾವಣೆಯಲ್ಲಿ ಕುರುಬರಿಗೆ ಟಿಕೆಟ್ ಕೊಟ್ಟಿದ್ದಾರೆ,ಲಿಗಾಯತರಿಗೆ ಟಿಕೆಟ್ ಕೊಟ್ಟಿದ್ದಾರೆ ಅನ್ನೋದು ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇವತ್ತು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದು ಬೇರ ಬೇರೆ ಕ್ಷೇತ್ತಗಳಲ್ಲಿ ಲಿಂಗಾಯತರಿಗೆ,ನಾಯಕರಿಗೆ,
ದಲಿತರಿಗೆ ಬೇರೆ ಬೇರೆ ಸಮುದಾಯದವರಿಗೆ ಅವಕಾಶ ಸಿಕ್ಕಿರುವಂತದ್ದು ನಮಗೆಲ್ಲಾ ತಿಳಿದಿರುವಂತದ್ದು..

ಜಾತಿ ವ್ಯವಸ್ಥೆ ಅದೊಂದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ

  • ಹೆಚ್ ಬಿ ಮಂಜಪ್ಟ ನಮ್ಮ ಪಕ್ಷದ ಅಭ್ಯರ್ಥಿಯೇನು ಕುರುಬರಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದವರೇನಲ್ಲ, ಜಾತಿ ವ್ಯವಸ್ಥೆ ಇದೆ ಅನಿವಾರ್ಯವಾಗಿ ಒಂದು ಜಾತಿಯಲ್ಲಿ ಹುಟ್ಟಿದ್ದಾರೆ.
  • ಹೆಚ್ ಬಿ ಮಂಜಪ್ಪ ಒಳ್ಳೆಯ ಮಾತುಗಾರ,ಪ್ರಗತಿ ಪರವಾಗಿ ಚಿಂತನೆ ಮಾಡುವಂತ ನಾಯಕ ದೇಶದ ರೈತರ ಉಳಿವಿಗಾಗಿ,ಅಭಿವೃದ್ಧಿಗಾಗಿ ಇಂತವರ ಆಯ್ಕೆ ಸೂಕ್ತವಾಗಿರುವಂತದ್ದು.ಬಿಜೆಪಿ ಅಭ್ಯರ್ಥಿ ಮಾನ್ಯ ಸಿದ್ದೇಶ್ ರವರ ಚಿಂತನೆ,ವೈಫಲ್ಯಗಳನ್ನ ನಾವು ಜನರಿಗೆ ತಿಳಿಸಬೇಕಾಗುತ್ತದೆ.
  • ಬಿಜೆಪಿ ಹೇಳಿ ಕೇಳಿ ವೈದಿಕರ ಪಕ್ಷ, ಸಂವಿಧಾನವನ್ನ ನಾಶ ಮಾಡ್ಲಿಕ್ಕಾಗೀನೆ ಹುಟ್ಟಿದಂತ ಪಕ್ಷ, ಇವತ್ತು ಸಂವಿಧಾನದ ನಾಶ ಅಂದರೆ ಭಾರತದ ಪರಂಪರೆಯ ನಾಶ, ಭಾರತದ ಸಂಸ್ಕೃತಿಯ ನಾಶ,ಲಿಂಗಾಯತರೂ ಸೇರಿದಂತೆ ಎಲ್ಲಾ ಹಿಂದುಳಿದ ದಲಿತ ಅಲ್ಪಸಂಖ್ಯಾತರ ನಾಶ, ಭಾರತದ ದ್ರಾವಿಡ ಸಂಸ್ಕೃತಿಯ ನಾಶ ಅನ್ನುವಂತದ್ದು.
  • ಬಿಜೆಪಿಯಲ್ಲಿ ಯಾವ ಲಿಂಗಾಯತರಿಗೂ ಗೌರವ ಇಲ್ಲ,ಕರ್ನಾಟಕದಲ್ಲಿ ಬಿಜೆಪಿಯ ಬಲ ಅಂದರೇ ಲಿಂಗಾಯತರು,ಆರು ಜನ ಸಂಸದರಿದ್ದರೂ ಕೂಡ ಒಬ್ಬರಿಗೂ ಮಂತ್ರಿ ಸ್ಥಾನ ಇಲ್ಲ, ಸ್ವತಃ ಮಾನ್ಯ ಸಿದ್ದೇಶ್ ರವರಿಗೇ ಮಂತ್ರಿ ಸ್ಥಾನ ಕೊಟ್ಟು ಸಡನ್ ಆಗಿ ಕಸಿದ್ಕೊಂಡಂತವರು ಕಾರಣ ಮಾನ್ಯ ಸಿದ್ದೇಶ್ ವೈದಿಕ ಅಲ್ಲ, ಒಬ್ಬ ಶೂದ್ರ ಆ ಕಾರಣಕ್ಕೆ ಅವರಿಗೆ ಬಿಜೆಪಿ ಅವಮಾನಿಸಿದ್ದು.
  • ಸ್ವತಃ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೇ ಗೌರವ ಇಲ್ಲ, ಯಡಿಯೂರಪ್ಪ ಲಿಂಗಾಯತ ನಾಯಕನಾಗಿದ್ದಕ್ಕೇ ಬಿಜೆಪಿಯಲ್ಲಿ ಮುಖ್ಯಮಂತ್ರಿಯಿಂದ ಕೆಳಗಿಳಿಸಿದ್ದು,ಮತ್ತೆ ಮುಖ್ಯಮಂತ್ರಿಯಾಗದಂತೆ ತಂತ್ರಗಳನ್ನ ರೂಪಿಸಿದ್ದು. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದಾರೆ ಅನ್ನಬಹುದು, ಅದಕ್ಕಿಂತ ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ ಇದ್ದಾರೆ ಅನ್ನುವಂತದ್ದು.
  • ನಮಗೆ ಸಿದ್ದೇಶ್ ಅಭ್ಯರ್ಥಿ ಇರಬಹುದು, ನಮ್ಮ ಮತ ಸಿದ್ದೇಶ್ ವಿರುದ್ಧ ಅಲ್ಲ ಮಾನ್ಯ ನರೇಂದ್ರ ಮೋದಿಯ ವಿರುದ್ಧ,ಬಿಜೆಪಿಯ ವಿರುದ್ಧ ಸಂವಿಧಾನ ನಾಶ ಮಾಡುವವರ ವಿರುದ್ಧ,ಭಾರತೀಯರ ಸಾಂಸ್ಕೃತಿಕ ಬದುಕನ್ನ ನಾಶ ಮಾಡುವವರ ವಿರುದ್ಧ.
  • ಸಿದ್ಧರಾಮಯ್ಯ ಕುರುಬ ಸಮುದಾಯದಲ್ಲಿ ಹುಟ್ಟಿದಂತವರು ಇವತ್ತು ಕೇವಲ ಕುರುಬರಿಗೆ ರೈತರ ಸಾಲ ಮನ್ನಾ ಮಾಡ್ಲಿಲ್ಲ,ಕೇವಲ ಕುರುಬರಿಗೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡ್ಲಿಲ್ಲ,ಕೇವಲ ಕುರುಬರ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕೊಡ್ಲಿಲ್ಲ,ಹಾಲು ಮೊಟ್ಟೆ,ಬಟ್ಟೆ ಪುಸ್ತಕ ಕೊಡ್ಲಿಲ್ಲ. ಮಾನ್ಯ ಸಿದ್ಧರಾಮಯ್ಯ ಬಸವ ಜಯಂತಿಯಂದು ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಸವಣ್ಣ ಕಂಡ ಸಮ ಸಮಾಜದ ಉಳಿವಿಗಾಗಿ ಕಾರ್ಯಕ್ರಮ ರೂಪಿಸಿದಂತವರು, ನಾಡಿನದಲಿತರ,ಹಿಂದುಳಿದವರ(ಲಿಂಗಾಯತರೂ ಹಿಂದುಳಿದವರೆ,3rd B ) ಅಲ್ಪಸಂಖ್ಯಾತರ ರೈತರ ಪರವಾಗಿ ಕಾರ್ಯಕ್ರಮ ರುಪಿಸಿದಂತವರು,ರೈತರ ಪರವಾಗಿ,ಮಹಿಳೆಯರ ಪರವಾಗಿ,ವಿದ್ಯಾರ್ಥಿಗಳ ಪರವಾಗಿ ಕಾರ್ಯಕ್ರಮ ಕೊಟ್ಟಂಥವರು.
  • ಮಾನ್ಯ ಸಿದ್ಧರಾಮಯ್ಯನಂತಹ ರಾಜಕಾರಣಿ ಕರ್ನಾಟಕದ,ಭಾರತದ ರಾಜಕಾರಣದಲ್ಲಿ ಹುಟ್ಟಿರೋದ್ರಿಂದ್ಲೆ ಇವತ್ತು ಮೋದಿಯಂತವರು,ಬಿಜೆಪಿ ಸಂವಿಧಾನವನ್ನ ಮುಟ್ಲಿಕ್ಕೂ ಕೂಡ ಹೆದರುತ್ತೆ. ಮಾನ್ಯ ಸಿದ್ಧರಾಮಯ್ಯ,ಮಾನ್ಯ ಮಲ್ಲಿಕಾರ್ಜುನ ಖರ್ಗೆ,ಮಾನ್ಯ ಸತೀಶ್ ಜಾರಕಿಹೊಳಿ,ಮಾನ್ಯ ಇಬ್ರಾಹಿಂ ರಂತವರು ಇವತ್ತು ಇರೋದ್ರಿಂದ್ಲೇ ಸಂವಿಧಾನ,ಪ್ರಜಾಪ್ರಭುತ್ವ ಉಳಿದಿರೋದು.
  • ಮಾನ್ಯ ಮನ್ ಮೋಹನ್ ಸಿಂಗ್ ಭಾರತ ದೇಶದಲ್ಲಿ ಒಂದು ಕ್ರಾಂತಿಕಾರಿ ಸರ್ಕಾರವನ್ನು ಕೊಟ್ಟಂತವರು, ಭಾರತ ದೇಶದ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಒಬ್ಬ ರೈತ ಪ್ರಧಾನಿಯಾದಂತವರು, ಆದರೆ ಮೋದಿ ಅದಾನಿ,ಅಂಬಾನಿಗಳ ಸಾಲ ಮನ್ನಾ ಮಾಡಿ ಶ್ರೀಮಂತರ,ಕಾರ್ಪೋರೇಟ್ ಕಂಪನಿಗಳ ಪರವಾದ ಪ್ರಧಾನಿಯಾದಂತವರು.

ಜಿ ಎಸ್ ಟಿ

  • ಹಿಂದೆ ಬಿಜೆಪಿ, ಮನ್ ಮೋಹನ್ ಸರ್ಕಾರ ಇದ್ದಾಗ ಜಿಎಸ್ಟಿ ಬಡವರ ವಿರುದ್ಧ,ರೈತರ ವಿರುದ್ಧ ಅನ್ನೋ ಕಾರಣಕ್ಕೆ ವಿರೋಧಿಸಿತ್ತು, ಆದರೆ ಮೋದಿ,ಬಿಜೆಪಿ ತನ್ನ ಆಡಳಿತದಲ್ಲಿ ಜಿಎಸ್ಟಿ ಜಾರಿಗೆ ತಂದು ಸಂಪೂರ್ಣವಾಗಿ ಬಡವರ ವಿರುದ್ಧವಾಗಿದೆ, ತಿನ್ನುವ ಅನ್ನಕ್ಕೆ 18 ಪರ್ಸೆಂಟ್ ತೆರಿಗ, ಶ್ರೀಮಂತರು ಉಪಯೋಗಿಸುವ ಬಂಗಾರಕ್ಕೆ 5 ಪರ್ಸೆಂಟ್ ತೆರಿಗೆ.
  • ನಮ್ಮ ರಾಹುಲ್ ಗಾಂಧಿ ಈಗಾಗ್ಲೆ ಜನರಿಗೆ ಭರವಸೆ ಕೊಟ್ಟಿದಾರೆ, ನನ್ನ ಸರ್ಕಾರ ಅಧಿಕಾರಕ್ಕೆ ಜಿಎಸ್ ಟಿ ಪರಾಮರ್ಶೆ ಮಾಡ್ತೇನೆ,ಬಡವರ ಪರವಾಗಿ ಜಿಎಸ್ ಟಿ ರೂಪಿಸ್ತೇನೆ ಅನ್ನುವಂತ ಮಾತು, ರೈತರಿಗೆ ಪ್ರತ್ಯೇಕ ಬಜೆಟ್,ಕಡು ಬಡವರ ಖಾತೆಗೆ ವರ್ಷಕ್ಕೆ 72000 ರೂ ಇದು ಕಾಂಗ್ರೆಸ್ ಬದ್ಧತೆ.
  • 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅನ್ನುವ ಮೋದಿಯವರೆ, ನಿಮ್ಮವ್ವನ್ನ ಹೋಗಿ ಕೇಳಿ ಕಾಂಗ್ರೆಸ್ ಏನು ಮಾಡಿದೆ ಅಂತ ಆಗ ಅವರು ಹೇಳ್ತಾರೆ. ಹಸಿರು ಕ್ರಾಂತಿ,ಕ್ಷೀರ ಕ್ರಾಂತಿ,ಬ್ಯಾಂಕ್ ರಾಷ್ಟ್ರೀಕರಣ,ಗರೀಬಿ ಹಠಾವೋ, ವೈಜ್ಞಾನಿಕ ಕ್ರಾಂತಿ ಇವೆಲ್ಲಾ ನೀವು ಮಾಡಿದ್ದಾ.
  • ನೀವು ಎಷ್ಟು ಡ್ಯಾಂ ಕಟ್ಸಿದೀರಿ,ಎಷ್ಟು ಶಾಲೆ ಕಟ್ಸಿದೀರಿ, ಎಷ್ಟು ಊರಿಗೆ ಕರೆಂಟು ಕೊಟ್ಟದೀರಿ, ಎಷ್ಟು ಬ್ಯಾಂಕ್,ಆಸ್ಪತ್ರೆ,ರೋಡು,ರೈಲು, ವಿಮಾನ ಸೆಟಲೈಟ್ ಬಿಟ್ಟಿದೀರಿ, ಯಾಕೆ ಬೊಗಳೆ ಬಿಡ್ತಾ ಇದೀರಾ, ಜನರೇನೂ ಮೂರ್ಖರಲ್ಲ, ನಿಮ್ಮ ಪ್ರತಿ ಸುಳ್ಳು,ಮೋಸವನ್ನ ಗಮನಿಸ್ತಾ ಇದ್ದಾರೆ.
  • ಮಾತೆತ್ತಿದರೆ ನಾನು ಚೌಕೀದಾರ್ ಅಂತಿರ್ತೀರಾ, ಮಾನೊಯ ಮೋದಿಯವರೆ, ರಫೇಲ್ ಫೈಲ್ ಕಳ್ಳತನವಾದಾಗ, ನೀರವ್ ಮೋದಿ ದೇಶ ಬಿಟ್ಟು ಹೋಗುವಾಗ ನೀವೇನ್ ಮಾಡ್ತಿದ್ರಿ, ನಿದ್ದೆ ಮಾಡ್ತಿದ್ರಾ, ಅಥವ ಲಾಲಿಪಾಪ್ ತಿನ್ತಿದ್ರಾ.
  • ಪುಲ್ವಾಮ ಧಾಳಿಗೆ, ಸೈನಿಕರ ಸಾವಿಗೆ ನೇರವಾಗಿ ನೀವೇ ಕಾರಣ,18 ಚೆಕ್ ಪೋಸ್ಟ್ ದಾಟಿ ಹೇಗೆ ಉಗ್ರಗಾಮಿಗಳು ನಿಮ್ಮಂತ ದಕ್ಷ,ನಿಷ್ಟಾವಂತ ಚೌಕೀದಾರ ಇದ್ದಾಗ ನುಗ್ತಾರೆ. ಗೋವಾದಿಂದ ಒಂದು ಬಿಯರ್ ಬಾಟಲ್ ತರ್ಲಿಕ್ಕೆ ಸಾಧ್ಯ ಆಗೋದಿಲ್ಲ ಅನ್ನೋದಾದ್ರೆ, ಅದು ಹೇಗೆ ಉಗ್ರಗಾಮಿಗಳು,ಅದು ಹೈಲೀ ಸೆಕ್ಯೂರಿಟಿ ಇರೋ ಏರಿಯಾಕ್ಕೆ ಬರ್ತಾರೆ. ನಾನ್ ಹೇಳ್ತೇನೆ ಕೇಳಿ ಮೋದಿಯವರೆ,ನೀವು ಐದು ವರ್ಷಗಳ ಕಾಲ ಜನರಿಗೆ ಏನೂ ಮಾಡ್ಲಿಲ್ಲ ಆದರೆ ಜನರ ಗಮನ ಬೇರೆಡೆಗೆ ಸೆಳೆದು ನಿಮ್ಮ ವೈಫಲ್ಯ ಮುಚ್ಕೋ ಬೇಕು, ಆ ಮೂಲಕ ಜನರ ಮನಸ್ಸಲ್ಲಿ ಕೋಮುವಾದವನ್ನ ಬಿತ್ತಿ ಮತ್ತೆ ಅಧಿಕಾರಕ್ಕೆ ಬರ್ಬೇಕು ಅನ್ನೋ ಮೋಸದ ಅಜೆಂಡಾ,ಕೋಮುವಾದಿ ಅಜೆಂಡಾ, ಹಿಡನ್ ಅಜೆಂಡಾ ನಿಮ್ದಲ್ವಾ ಮೋದಿ ಸಾಹೇಬ್ರಾ.
  • ಅನೇಕ ವಿಷಯಗಳ ಬಗ್ಗೆ ಮಾತ್ನಾಡಬಹುದಾದರೂ ಇಲ್ಲಿ ಎಲ್ಲವನ್ನೂ ಹೇಳೋದಕ್ಕೆ ಸಾಧ್ಯ ಆಗಲಾರದು,ಕೊನೆಗೆ ಒಂದು ಮಾತು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಮುಖ್ಯ ಅಲ್ಲ ಪಕ್ಷ ಮುಖ್ಯ,ಜಾತಿ ಮುಖ್ಯ ಅಲ್ಲ ರಾಷ್ಟ್ರ ಮುಖ್ಯ, ಬಡವರು ರೈತರು ಮುಖ್ಯ ಆ ಕಾರಣಕ್ಕೆ ತಾವು ಭತದಾನ ಮಾಡಿ ಕಾಂಗ್ರೆಸ್ ಗೆ ವೋಟ್ ಕೊಡಿ ಅನ್ನೋ ವಿನಮ್ರ ಮನವಿ ನನ್ನದು.

ವಂದನೆಗಳೊಂದಿಗೆ

ಉದಯಶಂಕರ ಮಾಗಾನಹಳ್ಳಿ
ಅಧ್ಯಕ್ಷರು
ರವಿ ಯುವಶಕ್ತಿ ಪಡೆ
ಹರಪನಹಳ್ಳಿ
9448649486

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ8 hours ago

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕಳೆದ...

ದಿನದ ಸುದ್ದಿ9 hours ago

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು...

ದಿನದ ಸುದ್ದಿ9 hours ago

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ. ಅದೇ ರೀತಿ...

ದಿನದ ಸುದ್ದಿ9 hours ago

ದೀನ ದಯಾಳ್ ಅಂತ್ಯೋದಯ ಯೋಜನೆ ; ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಹೊನ್ನಾಳಿ ಪಟ್ಟಣದ ಸಾರ್ವಜನಿಕರಿಗೆ ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪ್ರಸಕ್ತ ಸಾಲಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ, ವ್ಯಕ್ತಿಗತ ಉದ್ಯಮಶೀಲತೆ...

ದಿನದ ಸುದ್ದಿ10 hours ago

ಐತಿಹಾಸಿಕ, ಪಾರಂಪರಿಕ ದೇವಾಲಯಗಳು ಶಾಸನಗಳು, ವೀರಗಲ್ಲು, ಸ್ಮಾರಕಗಳ ಸಂರಕ್ಷಣೆ ; ಸಾರ್ವಜನಿಕರ ಸಹಕಾರ ಅಗತ್ಯ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಇತಿಹಾಸದ ಶಾಸನಗಳು, ದೇವಾಲಯಗಳು, ಸ್ಮಾರಕಗಳು ಸೇರಿದಂತೆ ಸ್ಥಳಗಳಿದ್ದಲ್ಲಿ ಸಾರ್ವಜನಿಕರು ತಮ್ಮ ತಾಲ್ಲೂಕು, ಊರು, ಗ್ರಾಮಗಳಲ್ಲಿ ವಿನಾಶದ ಸ್ಥಿತಿಯಲ್ಲಿರುವ ದೇವಾಲಯಗಳು, ಶಾಸನಗಳು, ವೀರಗಲ್ಲುಗಳು, ಕೋಟೆಗಳು,...

ದಿನದ ಸುದ್ದಿ11 hours ago

ಪ್ರಥಮ ಪಿ.ಯು.ಸಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ ; ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜು, ಕೊಂಡಜ್ಜಿ ಗ್ರಾಮದಲ್ಲಿನ ಮೊರಾರ್ಜಿ...

ದಿನದ ಸುದ್ದಿ14 hours ago

ಮುಂದಿನ ವರ್ಷದಿಂದ 10ನೇ ತರಗತಿಗೆ ಕೃಪಾಂಕ ರದ್ದು ; ಸಚಿವ ಮಧುಬಂಗಾರಪ್ಪ

ಸುದ್ದಿದಿನ, ಚಿಕ್ಕಮಗಳೂರು : ಪರೀಕ್ಷೆಯಲ್ಲಿ ಪಾವಿತ್ರತೆ ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಈ ವರ್ಷ ಹತ್ತನೆ ತರಗತಿ ವಿಧ್ಯಾರ್ಥಿಗಳಿಗೆ ಶೇಕಡ 20 ರಷ್ಟು ಕೃಪಾಂಕಗಳನ್ನು ನೀಡಲಾಗಿದೆ. ಇದು...

ದಿನದ ಸುದ್ದಿ1 day ago

ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭ; ಕೃಷಿ ಚಟುವಟಿಕೆ ಆರಂಭ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ ಒಂದು ವಾರ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ,...

ದಿನದ ಸುದ್ದಿ1 day ago

ಮೇಲ್ಮನೆಯ ಆರು ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಪ್ರಗತಿಯಲ್ಲಿ ; ಕಣದಲ್ಲಿ 103 ಅಭ್ಯರ್ಥಿಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಕಾರ್ಯ ಆರಂಭಗೊಂಡಿದೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು...

ದಿನದ ಸುದ್ದಿ1 day ago

ವಸತಿ ಶಾಲೆಯಲ್ಲಿನ 7, 8 ಮತ್ತು 9ನೇ ತರಗತಿಗಳಲ್ಲಿನ ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ...

Trending