ದಿನದ ಸುದ್ದಿ
ಹಣವಿಲ್ಲದ ಮಾಜಿ ಜಿಲ್ಲಾಧಿಕಾರಿ ಎಂ.ಪಿ. ಆಗಿದ್ದು..!
![](https://suddidina.com/wp-content/uploads/2024/06/Sasikanth_Senthil_suddidina.jpg)
- ಈ. ಬಸವರಾಜು
ಹುಟ್ಟಿದ್ದು ತಮಿಳನಾಡಿನ ದಲಿತ ಕುಟುಂಬದಲ್ಲಿ. ಪ್ರತಿಭಾಶಾಲಿ. ಶಾಲೆಯಲ್ಲಿ ಕಾಲೇಜಿನಲ್ಲಿ ಯಾವಾಗಲೂ ಮೊದಲಿಗ. ಏನಾದರೂ ಸಾದಿಸಬೇಕೆಂದು ಐ. ಎ. ಎಸ್. ಬರೆದು ಜನರಲ್ ಮೆರಿಟ್ಟು 9ನೆಯ ರ್ಯಾಂಕ ಪಡೆದ ದಲಿತ ಯುವಕ.
ಕರ್ನಾಟಕ ಕೆಡರ್ ಆಯ್ಕೆ ಮಾಡಿಕೊಂಡು ಉಡಪಿಯ ಜಿಲ್ಲಾಧಿಕಾರಿಯಾಗಿ ಬಂದವರೇ ಸಸಿಕಾಂತ ಸೆಂತಿಲ್ ಎಂಬ ಐದುವರೆ ಅಡಿಯ, ಕಪ್ಪು ಬಣ್ಣದ, ಬಟ್ಟಲುಗಣ್ಣುಗಳ, ದೊಗಲೆ ಪ್ಯಾಂಟಿನ ತರುಣ ಜಿಲ್ಲಾಧಿಕಾರಿ .
ತನ್ನಂತೆ ಕನಸಿರುವವಳೊಂದಿಗೆ ಸ್ನೆಹ, ಮದುವೆ. ದೊಡ್ಡ ದೊಡ್ಡ ಕಣ್ಣುಗಳಲ್ಲಿರುವ ಕನಸಿಗೆ ರೆಕ್ಕೆ ಪುಕ್ಕ ಕಟ್ಟಲಾಗದು ಇಂತಹ ವ್ಯವಸ್ಥೆಯಲ್ಲಿ ಎಂಬ ಯೋಚನೆ ಬಲವಾಗಲಾರಂಭಿಸಿತು. “ಯಾಕೋ ಮಿಸ್ ಹೋಡಿತಿದೆ. ನಾನೆಂದುಕೊಂಡಂತೆ ಡಿ. ಸಿ. ಆಗಿರಲಾರೆ, ನನಗೆ ಅಸಹಾಯಕತೆ ಅನುಭವ ಆಗುತ್ತಿದೆ. ಇಡೀ ವ್ಯವಸ್ಥೆಯ ಹಿಂದಿರುವುದೇ ರಾಜಕಾರಣ. ಅದನ್ನೇ ಸರಿಪಡಿಸಬೇಕು”.
ಹೇಗೆ? ಹೇಗೆ ??
“ಮಕ್ಕಳಿದ್ದರೆ ನಮ್ಮ ಕನಸಿಗೆ ತೊಡಕಾಗುವರು. ಮಕ್ಕಳು ಬೇಡ. ನಾನು ರಾಜೀನಾಮೆ ಸಲ್ಲಿಸುತ್ತೇನೆ. ನೀನು ಕೆಲಸ ಮಾಡು ನಿನ್ನ ಸಂಬಳದಲ್ಲಿ ನನ್ನನ್ನು ಸಾಕು. ನಾನು ಡಿ.ಸಿ.ಯಾಗಿ ಗಳಿಸಿದ್ದು ಇದೊಂದು ಬುಲೆಟ್. ಇದನ್ನು ಯಾರಿಗಾದರು ಕೊಟ್ಟು ಬಿಡು. ಡಿ. ಸಿ. ಕೆಲಸವೇ ಬೇಡವೆನ್ನುವುದಾದರೆ ಅದರ ಸಂಬಳದಿಂದ ಕೊಂಡ ಈ ವಾಹನವು ಬೇಡ, ಅದನ್ನೂ ಕೊಟ್ಟು ಬಿಡು” ಎಂದು ಸೂಟಕೇಸ ಹಿಡಿದು ಡಿ. ಸಿ. ಬಂಗ್ಲೆಯಿಂದ ಹೊರಬಿದ್ದರು ಕಲೆಕ್ಟರ್ ಸಾಹೇಬರು.
ಹೊರಬಂದ ಡಿ. ಸಿ. ಗೆ ಬಲೆ ಬೀಸಲಾರಂಭಿಸಿದವು ರಾಜಕೀಯ ಪಕ್ಷಗಳು. ‘ಜಾತಿ ಧರ್ಮಗಳ ಆಧಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳು ಬೇಡ’. ನೆಲಕಚ್ಚಿದ ಪಕ್ಷವನ್ನು ಮೆಲೆತ್ತುವುದೆ ಚಾಲೇಂಜ. ತಮೀಳನಾಡಿನಲ್ಲಿ ಕಾಂಗ್ರೆಸ್ ನೆಲ ಕಚ್ಚಿದ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ನೀಡಿದ ಪಕ್ಷ, ಕೆಳಗೆ ಬಿದ್ದವರನ್ನು ಎತ್ತಿಕೊಳ್ಳುವುದೇ ಚಾಲೇಂಜ್ ಎಂದು ಕಾಂಗ್ರೆಸ್ ಸೇರಿದರು.
ತಮೀಳನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಂಬಲಅಸಾಧ್ಯವಾದ ಸ್ಥಾನವನ್ನು ದೂರಕಿಸಿಕೊಟ್ಟು ರಾಹುಲ್ ಗಾಂಧಿಯವರ ಕಣ್ಣಿಗೆ ಬಿದ್ದರು. ಅವರ ನೆಚ್ಚಿನವರಾಗಿ ಬಿಟ್ಟರು. “ಕರ್ನಾಟಕದಲ್ಲಿ ನಿಮ್ಮ ಚಾಣಾಕ್ಷತನವನ್ನು ತೋರಿಸಿರಿ, ವಾರ್ ರೂಮ ಹೆಡ್ ಆಗಿರಿ.” ಎಂದರು ರಾಹುಲ್ ಗಾಂಧಿ. ತಮ್ಮ ಕೈ ಚಳಕ ತೋರಿಸಿದರು ಕರ್ನಾಟಕದಲ್ಲಿ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಲೋಕಸಭೆಯ ಚುನಾವಣೆ ಬಂತು “ದೆಹಲಿಗೆ ಬಂದು ವಾರ್ ರೂಂ ನೋಡಿ ಕೊಳ್ಳಿ”. ಎಂದಿತು ಪಕ್ಷ. “ಆಯಿತು” ಎಂದರು.
ಚುನಾವಣೆಗೆ ನಾಲ್ಕು ದಿನ ಇರುವಾಗ “ತಿರುವಳ್ಳುರು ಕ್ಷೇತ್ರದಲ್ಲಿ ನೀವು ಅಭ್ಯರ್ಥಿ, ನೆಕ್ಸ್ಟ ಫ್ಲೈಟ ಹತ್ತಿ ತಿರುವಳ್ಳುರಿಗೆ ಹೋಗಿ” ಎಂದಿತು ಹೈ ಕಮಾಂಡ. “ವಿಮಾನ ಟಿಕಿಟ್ ಬುಕ್ ಮಾಡಿಸು” ಎಂದರು ಹೆಂಡತಿಗೆ ಸಸಿಕಾಂತ.
ಕೈಯಲ್ಲಿ ಕಾಸಿಲ್ಲ. ‘ಕಾಸಿಲ್ಲದೆ ಕೈಲಾಸ ಇಲ್ಲ’. ದೇವರು ಮಾಡಿದ ಹಾಗೆ ಎಂದು ಹೆಂಡತಿಯ ಉಳಿತಾಯದ ಹಣದಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದರು. ಅಲ್ಪ ಸ್ವಲ್ಪ ಹಣವಿದ್ದರೂ ಅದು ಹೆಂಡತಿಯ ಸಂಬಳದ ಹಣ. ತಿಂಗಳು ತಿಂಗಳ ತಮಗೆ ಬರುವ ಪಿಂಚಣಿ ಹಣ. ಮಕ್ಕಳಿಲ್ಲ ಮರಿಯಿಲ್ಲ, ಆಧಾಯಕ್ಕೆ ಮತ್ತೊಂದು ದಾರಿಯಿಲ್ಲ. ‘ಮುಪ್ಪಿನಲ್ಲಿ ಆಸರೆಯಾಗಲಿ’ ಎಂದು ಸಂಬಳದಲ್ಲಿ ಉಳಿತಾಯ ಮಾಡಿದ ಹಣ ‘ಮ್ಯೂಚುವಲ್ ಫಂಡ’ ನಲ್ಲಿದೆ. ಇಂದಿನ ಕಾಲದಲ್ಲಿ ಉಳಿತಾಯದ ಹಣದಲ್ಲಿ ಚುನಾವಣೆ ಮಾಡುಲಾದೀತೆ?
ಕಾಂಗ್ರೆಸ್ ಪಕ್ಷದ ಬ್ಯಾಂಕ ಖಾತೆಗಳನ್ನು ಮೋದಿ ಮುಟ್ಟುಗೋಲು ಹಾಕಿದ್ದರು. ‘ನೀವೆ ಹಣ ಹೊಂದಿಸಿಕೊಂಡು ಗೆದ್ದು ಬನ್ನಿ ಎಂದಿತ್ತು’ ಕಾಂಗ್ರೆಸ್ ಪಕ್ಷ. “ಜೀವನದಲ್ಲಿ ಯಾರೆದರೂ ಕೈ ಚಾಚಿಲ್ಲ, ಚಾಚುವುದು ಇಲ್ಲ” ಎಂದು ಬಿಟ್ಟರು ಮಾಜಿ ಜಿಲ್ಲಾಧಿಕಾರಿ. ನಾವು ಗೆಳೆಯರೊಂದಿಗೆ ‘ನೋಡೋಣ’ ಎಂದು ಚುನಾವಣಾ ಪ್ರಚಾರಕ್ಕೆ ಹೋದೆವು. ಅಲ್ಲಿ ಕಂಡದ್ದು ಅದ್ಭುತ ಉತ್ಸಾಹ. “ಕಲೆಕ್ಟರ ಗೆದ್ದಂತೆ ಆದರೆ ನಾವು ಚಿಂತಿಸುತ್ತಿರುವುದು ೫ ಲಕ್ಷದ ಅಂತರವನ್ನು” ಎಂದಿದ್ದರು ಮಿತ್ರ ಪಕ್ಷವಾದ ಡಿ. ಎಮ್. ಕೆ. ಯ ಜಿಲ್ಲಾ ಅಧ್ಯಕ್ಷರು.
“ಕರ್ಚಿಗೇನು ಮಾಡತೀರಿ” ಎಂದೆ. “ಎನು ಮಾಡುವುದು ಮಾರಲು ಉರಲ್ಲೊಂದು ಮನೆಯಿದೆ ಯಾರು ತಗೆದುಕೊಳ್ಳುತ್ತಿಲ್ಲ.” ಎಂದರು. ಕಣ್ಣೀರು ಬಂತು. ಬೆಂಗಳೂರಿಗೆ ಹಿಂದಿರುಗಿದೆವು.
ಇಂದು ಸಂತಿಲ್ ಗೆದ್ದಿದ್ದಾರೆ ಮತಗಳ ಅಂತರ 4.79.000
ಶುಭಾಶಯಗಳು ಕಲೆಕ್ಟರ ಸಾಹೇಬರೆ.
ಬಡವರೂ, ಹಿಂದುಳಿದವರೂ, ಧರ್ಮವಂತರೂ ಸಹ ರಾಜಕೀಯ ಮಾಡಬಹುದು ಎಂಬ ಭರವಸೆಯನ್ನು ಸಸಿಕಾಂತ ಸೆಂತಿಲ್ಲ ಸಿದ್ದಪಡಿಸಿದ್ದಾರೆ. ಕೃಪೆ : (ಈ. ಬಸವರಾಜು ಫೇಸ್ ಬುಕ್ ಪೇಜ್ ನಿಂದ )
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!