Connect with us

ದಿನದ ಸುದ್ದಿ

ಕೊರೋನಾ ಭಯಬಿಡಿ, ಶಿಕ್ಷಣದ ಕಡೆಗೆ ನಡಿ

Published

on

  • ಹೆಚ್.ಎಂ.ಸಂತೋಷ್,ಎಐವೈಎಫ್, ರಾಜ್ಯ ಕಾರ್ಯದರ್ಶಿ, ಹರಪನಹಳ್ಳಿ

ಕೊರೋನ ಸೋಂಕಿನ ಭಯದಿಂದಲೇ ಬದುಕುವ ಬದಲು, ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಬದುಕಲು ಮುಂದಾಗಬೇಕೆಂಬ ಆಲೋಚನೆಗಳು ಈಗ ಸಮುದಾಯದಲ್ಲಿ ಮೂಡುತ್ತಿವೆ. ಸರಕಾರವೂ ಕೂಡ ಕರೋನದೊಂದಿಗೆ ಬದುಕುವುದನ್ನು ಕಲಿಯಬೇಕು ಎಂಬುದನ್ನು ಹೇಳುತ್ತಿದೆ.ಈ ಹಿನ್ನಲೆಯಲ್ಲಿ ದೇಶದ ಆರ್ಥಿಕ ಚಟುವಟಿಕೆ ಪುನ್ಸಶ್ಚೇನ ನೀಡುವ ಕಾರ್ಯವೂ ಆರಂಭವಾಗಿದೆ.

ಹಂತ, ಹಂತವಾಗಿ ಎಲ್ಲಾ ರಂಗಗಳಲ್ಲೂ ಸಡಿಲಿಕೆ ಕಂಡುಬರುತ್ತಿದೆ. ಇದೆ ಸಂದರ್ಭದಲ್ಲಿ ಶಿಕ್ಷಣ ಚಟುವಟಿಕೆ ನಡೆಸಬೇಕೆ?, ಬೇಡವೇ? ಎಂಬ ಪ್ರಶ್ನೆಗಳು ಸರಕಾರಕ್ಕೂ, ಪೋಷಕರಲ್ಲಿ ಮೂಡಿಬರುತ್ತಿದೆ.

ಕರೋನ ಸೋಂಕಿನ ಕಾರಣದಿಂದ ಈಗಾಲೇ ಪ್ರರೀಕ್ಷೆಗಳನ್ನು ಎದುರಿಸದೆ ಮಕ್ಕಳು ಮುಂದಿನ ಹಂತಕ್ಕೆ ತಲುಪಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳ ಪುನರ್ ಆರಂಭವು ಉಳಿದ ಕ್ಷೇತ್ರದಂತೆ ಸರಳವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದೇನೋ ನಿಜ ಆದರೆ ಆರಂಭಿಸದಿರಲು ಆಗುವುದಿಲ್ಲ.

ಕೆಲವರು ಸಧ್ಯ ಶೈಕ್ಷಣಿಕ ಚಟುವಟಿಕೆ ಆರಂಭಿಸದಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಪೋಷಕರು ಬಹಳ ಗೊಂದಲಕ್ಕೆ ಒಳಗಾಗಿದ್ದಾರೆ. ಶಾಲೆ-ಕಾಲೇಜುಗಳು ಪ್ರಾರಂಭವಾದರೆ ಎಲ್ಲಿ ಮಕ್ಕಳಿಗೆ ಸೋಂಕು ಹರಡಿಬಿಡುತ್ತೋ ಅನ್ನೋ ಭಯವಿದ್ದರು, ಆರಂಭವಾಗದಿದ್ದರೆ ಮಕ್ಕಳ ಭವಿಷ್ಯದ ಏನಾಗುತ್ತೋ ಅನ್ನೋ ಚಿಂತೆಯೂ ಅವರಲ್ಲಿ ಕಾಡುತ್ತಿದೆ.

ಇಂದು ಶಿಕ್ಷಣದ ವಿಚಾರಕ್ಕೆ ಹಲವಾರು ಅಭಿಪ್ರಾಯಗಳು ಬರತೊಡಗಿವೆ. ಅದರಲ್ಲಿ ಶೈಕ್ಷಣಿಕ ವರ್ಷದ ಕಡಿತಗೊಳಿಸುವೆ, ವಾರ್ಷಿಕ ಪಠ್ಯಗಳ ಕಡಿತಗೊಳಿಸುವಿಕೆ ಮಾಡಬೇಕು ಎಂಬುದು ಒಂದಾದರೆ, ಕೆಲವರು ಆನ್‍ಲೈನ್ ತರಗತಿಯ ಮೂಲಕ ತರಗತಿಗಳನ್ನು ಪ್ರಾರಂಭಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ.

ಇವುಗಳಲ್ಲಿ ಯಾವುದು ಮಕ್ಕಳ ಭವಿಷ್ಯವನ್ನು ರೂಪಿಸಲು ಉತ್ತಮ ಎಂಬುದರ ಕುರಿತುಯಾರಲ್ಲೂ ಸ್ಪಷ್ಟತೆ ಇಲ್ಲ. ಶೈಕ್ಷಣಿಕ ಅವಧಿಯ ಕಡಿತಗೊಳಿಸುವುದು ಮತ್ತು ಪಠ್ಯಕ್ರಮ ಕಡಿತಗೊಳಿಸುವುದು ಹೆಚ್ಚು ಸೂಕ್ತವಲ್ಲ, ಜೂನ್ ತಿಂಗಳ ಆರಂಭದಲ್ಲೆ ಶೈಕ್ಷಣಿಕ ಆರಂಭವಾಗಬೇಕಿತ್ತು ಆದರೆ ಇನ್ನೂ ಆರಂಭಿಸಿಲ್ಲ, ಆರಂಭಿಸುವ ಚರ್ಚೆಗಳು ಇನ್ನೂ ನಡೆಯುತ್ತಿವೆ.

ಶಾಲೆ- ಕಾಲೇಜು ಆರಂಭ ತಡವಾದಷ್ಟು ಮಕ್ಕಳ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅನುಕೂಲಸ್ಥ ವಿದ್ಯಾವಂತ ಪೋಷಕರು ತಮ್ಮ ಮಕ್ಕಳ ಕಲಿಕೆಯನ್ನು ಸ್ವತಹ ತಾವೇ ಹೇಳಿಕೊಡುವ ಅಥವಾ ಇನ್ಯಾವುದೋ ಮಾರ್ಗದಲ್ಲಿ ಕಲಿಸುತ್ತಿರುತ್ತಾರೆ.

ಆದರೆ ದುಡಿಯುವ ವರ್ಗದವರ ಮಕ್ಕಳ ಸ್ಥಿತಿ ಹೀಗಿರಿರಲು ಸಾಧ್ಯವೇ ಇಲ್ಲ. ಈ ಮಕ್ಕಳು ಶಾಲೆಗಳ ಪ್ರಾರಂಭ ತಡವಾದಷ್ಟು ಕಲಿಕೆಯ ಮೇಲೆ ನಿರಾಸಕ್ತರಾಗುವುದೆ ಹೆಚ್ಚು. ಇನ್ನು ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಿಸಿದಾಗ ಶಿಕ್ಷಕರು ನೇರವಾಗಿ ಮಕ್ಕಳಿಗೆ ನೂತನ ತರಗತಿಯ ಪಠ್ಯ ಚಟುವಟಿಕೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ.

ಈಗಾಲೇ ಮಕ್ಕಳು ಬಹುದಿನಗಳಿಂದ ಕಲಿಕಾ ಚಟುವಟಿಕೆಗಳಿಂದ ದೂರ ಉಳಿದಿರುವುದರಿಂದ ಹಿಂದಿನ ತರಗತಿಯ ಕಲಿಕೆಯ ಫಲಗಳನ್ನು ಅರಿಯದೆ, ನೇರವಾಗಿ ಹೊಸ ವಿಷಯಗಳ ಕಲಿಕೆಗೆ ತೊಡಗಿಸುವುದು ಸೂಕ್ತವಲ್ಲ.

ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಶೈಕ್ಷಣಿಕ ಚಟುವಟಿಕೆಗೆ ಪ್ರಾರಂಭದ ಕುರಿತು ಚರ್ಚಿಸುವು ಸೂಕ್ತವಾಗುತ್ತದೆ. ಆನ್‍ಲೈನ್ ತರಗತಿಗಳ ಬಗ್ಗೆ ದೊಡ್ಡ ಮಟ್ಟದ ಅಭಿಪ್ರಾಯ ಬರುತ್ತಿದೆ.

ಇಂದಿನ ಮಾಧ್ಯಮಗಳಲ್ಲಿ ಆನ್‍ಲೈನ್ ಕಲಿಕೆಯನ್ನು ಬಿಂಬಿಸುತ್ತಿರುವುದನ್ನು ನೋಡಿದರೆ, ಈ ಪರಿಸ್ಥಿತಿಯಲ್ಲಿ ಇದೆ ಪರ್ಯಾಯ ಎಂಬ ಅಭಿಪ್ರಾಯ ಮೂಡದಿರಲು ಸಾಧ್ಯವಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಬೋಧನೆ ಮತ್ತು ಕಲಿಕೆ ಎಂದರೆ ಯಾಂತ್ರಿಕ ಪ್ರಕ್ರಿಯೆ ಅಲ್ಲ. ಮಕ್ಕಳು ನೇರ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಕಲಿಯೂವುದಕ್ಕೂ, ಶಿಕ್ಷಕರ ಮೇಲ್ವಿಚಾರಣೆ ಇಲ್ಲದೆ ಕಲಿಯುವುದಕ್ಕೂ ವ್ಯಾತ್ಯಾಸವಿದೆ.

ಈ ರೀತಿ ಕಲಿಕೆಗಳು ದೊಡ್ಡ ಹಂತದ ತರಗತಿಗಳಿಗೆ ಅಂದರೆ ಕಲಿಕೆಯಲ್ಲಿ ಸ್ವ ಆಸಕ್ತಿ ವಹಿಸುವ ಹಂತದವರಿಗೆ ಉತ್ತಮವೇ ಹೊರತು, ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ತರಗತಿಗಳಿಗೆ ಉತ್ತಮ ಕಲಿಕಾ ವಿಧಾನವಲ್ಲ. ಅಲ್ಲದೆ ತಂತ್ರಜ್ಞಾನವನ್ನು ಅನುಸರಿಸುವಷ್ಟು ಮಟ್ಟಿಗೆ ನಮ್ಮ ದೇಶದ ಸಮಾಜಿಕ ಮತ್ತು ಆರ್ಥಿಕ ಪರಿಸ್ಥಿಗಳು ಇವೆಯೇ? ಎಂಬುದನ್ನು ಗಮನಿಸಬೇಕು.

ಇಂದಿಗೂ ಶಾಲೆಗಳು ಉನ್ನತಿಕರಣ ಗೊಳ್ಳದಿರುವಾಗ, ಆನ್‍ಲೈನ್ ತರಗತಿ ಪ್ರಸ್ತಾಪ ಹಾಸ್ಯಾಸ್ಪದವಾಗುತ್ತದೆ.
ಇನ್ನೂ ಶಾಲೆಗಳು ಪ್ರಾರಂಭವಾದರೆ, ಮಕ್ಕಳು ಶಾಲೆಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಷ್ಟು ಪರಿಸರ ಇದೆಯೇ? ವರ್ಗಕೋಣೆಗಳು ಅಂತರ ಕಾಯ್ದುಕೊಂಡು ಕಲಿಕೆಗೆ ಪ್ರೋತ್ಸಾಹ ನೀಡಬಲ್ಲವೇ? ಅಂತರ ಕಾಯ್ದುಕೊಳ್ಳುವಷ್ಟು ಮಕ್ಕಳ – ಶಿಕ್ಷಕರ ಅನುಪಾತ ನಿರ್ಮಿಸಲು ಸಾಧ್ಯವೇ? ಮಕ್ಕಳು ದೈಹಿಕ ಅಂತರ ಕಾಯ್ದುಕೊಳ್ಳುವಷ್ಟು ಜಾಗೃತರಾಗಿರುತ್ತಾರೆಯೇ?

ಊಟ, ಆಟ, ಪಾಠಗಳಲ್ಲಿ ಸದಾ ಅಂತರ ಕಾಯ್ದುಕೊಳ್ಳುವಂತೆ ಮಕ್ಕಳನ್ನು ಗಮನಿಸುತ್ತಿರಲು ಸಾಧ್ಯವೇ? ಶಾಲೆಯಅವಧಿ ಮುಗಿದ ಬಳಿಕ ಮಕ್ಕಳು ಮನೆಗೆ ತೆರಳುವಾಗಲೂ ಈ ಇದೆ ಕ್ರಮಗಳನ್ನು ಅನುಸರಿಸುತ್ತಾರೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಶೈಕ್ಷಣಿಕ ಚಟುವಟಿಕೆ ಆರಂಭ ಮಾಡಲು ಸಾಧ್ಯವಿದೆ.
ಹಾಗಾದರೆ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಏನೂ ಮಾಡಬಹುದು.

ಮೊದಲು ಸರಕಾರ ಈ ಸಮಸ್ಯೆಯ ಪರಿಹಾರಕ್ಕೆ ಬಹುದೊಡ್ಡ ಮಾನವ ಶಕ್ತಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು.ಈಗಿರುವ ಶಿಕ್ಷಕರು ಮತ್ತು ಶಾಲೆಗಳ ಸಂಖ್ಯೆಗಳಿಂದ ದೈಹಿಕ ಅಂತರ ಕಾಯ್ದುಕೊಳ್ಳುವಷ್ಟರ ಮಟ್ಟಿಗೆ ವಾತವಾರಣ ಇಲ್ಲ ಎಂಬುದಂತು ಸತ್ಯ. ಸರಕಾರವು ಪ್ರಾಥಮಿಕ ಹಂತದ ಮಕ್ಕಳಿಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ 15:1 ಮಾತ್ರ ಇರುವಂತೆ, ಮಾಧ್ಯಮಿಕ ಹಂತಗಳಲ್ಲಿ ಗರಿಷ್ಟ ವೆಂದರೂ 25:1 ಅನುಪಾತದಂತೆ ನೋಡಿಕೊಳ್ಳಬೇಕು.

ಇದರಲ್ಲಿ ಎರಡು ಸಮಸ್ಯೆಗಳು ಉದ್ಬವಿಸುತ್ತವೆ ಮೊದಲನೆಯದು ಶಿಕ್ಷಕರು, ಎರಡನೆಯದು ವರ್ಗಕೋಣೆಗಳು. ಇವುಗಳನ್ನು ಹೇಗೆ ಸೃಷ್ಟಿಸುಬೇಕು?, ಎಂಬುದು ಸರಕಾರಕ್ಕೆ ಸವಾಲು ಎದುರಾಗುತ್ತದೆ.
ಮೊದಲನೆಯದು ಶಿಕ್ಷಕರ ಸಮಸ್ಯೆಗೆ ಸಂಬಂಧಿಸಿದಂತೆ ಸರಕಾರವು ಈಗಾಗಲೇ ಶಿಕ್ಷಕ ತರಬೇತಿ ಪೂರ್ಣಗೊಳಿಸಿದ ಡಿ.ಇಡಿ ಮತ್ತು ಬಿ.ಇಡಿ ನಿರುದ್ಯೋಗಿ ಯುವಕರನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳವುದು ಉತ್ತಮ.

ಈಗಾಗಲೇ ಕೆಲವರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಹೊರಗಿದ್ದಾರೆ. ಸರಕಾರ ಇವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೀವನ ನಿರ್ವಹಣೆಗೆ ಸಹಾಯವಾಗುಂತಹ ಯೋಜನೆ ರೂಪಿಸಿದರೆ ಸಧ್ಯದ ಸಂದರ್ಭಕ್ಕೆ ಎದುರಾಗುವ ಮಾನವ ಸಂಪನೂಲ್ಮದ ಸಮಸ್ಯೆ ನಿವಾರಣೆಯಾಗುತ್ತದೆ.

ಎರಡನೇ ಸಮಸ್ಯೆ ಕಟ್ಟಡದ ಸಮಸ್ಯೆ, ಕಿರಿಯ ಪ್ರಾಥಮಿಕ ತರಗತಿಯ ಮಕ್ಕಳು ಅಂದರೆ 1 ರಿಂದ 4ನೇ ತರಗತಿಯ ಮಕ್ಕಳಿಗೆ ಅವರ ಮನೆಯ ಸುತ್ತು ಮುತ್ತಲಿರುವ ನೆರಳಿರುವ ಪ್ರದೇಶದಲ್ಲಿ ಸ್ವಚ್ಚತೆಗೆ ಮಹತ್ವ ನೀಡಿರುವ ಸ್ಥಳದಲ್ಲಿ ಕಲಿಸುವ ಕಾರ್ಯ ಆರಂಭಿಸಬಹುದು. ಇದು ಸೂಕ್ತವಲ್ಲದಿದ್ದರು ಇಂದು ಶಾಲೆಗಳನ್ನು ಪ್ರಾರಂಭವೇ ಮಾಡದಿರವುದರ ಬದಲು ಶೈಕ್ಷಣಿಕ ಚಟುವಟಿಕೆಯ ಪ್ರಾರಂಭಕ್ಕೆ ಬದಾರಿಯಾಗುತ್ತದೆ.

ಇನ್ನೂ ಉನ್ನತ ಹಂತದ ಮಕ್ಕಳಿಗೆ ಖಾಲಿ ಉಳಿದ ತರಗತಿಗಳನ್ನು ಸೇರಿಸಿ ಮಕ್ಕಳ ಸಂಖ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ತರಗತಿಗಳನ್ನು ಪ್ರಾರಂಭಿಸಬಹುದು. ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳಲ್ಲಿ ಜಾಗೃತಿ ಇರುವುದರಿಂದ ಬೋಧಕರೆ ಎಚ್ಚರಿಸುತ್ತ ತರಗತಿಗಳನ್ನು ಆರಂಭಿಸಬಹುದು.

ಶಿಕ್ಷಣ ಕೇಂದ್ರಗಳು ಸ್ವಚ್ಚವಾಗಿರುವಂತೆ ಇತರೆ ಮುನ್ನಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು, ಜೊತೆಗೆ ಎಚ್ಚರ ತಪ್ಪಂದತೆ ಜಾಗೃತಿ ವಹಿಸಿದರೆ ಸಾಕಾಗುತ್ತದೆ. ಕರೋನದ ಭಯದಿಂದಲೇ ನಾವು ಮಕ್ಕಳ ಭವಿಷ್ಯವನ್ನು ಕುಟಿಂತಗೊಳಿಸುವ ಬದಲು ಪರ್ಯಾಯ ಮಾರ್ಗದೆಡೆಗೆ ಸಾಗುವುದು ಉತ್ತಮ. ಎಚ್ಚರಿಕೆಯ ಕ್ರಮಗಳಿಂದ ಮಕ್ಕಳ ಹಕ್ಕುಗಳನ್ನು ಒದಗಿಸಲು ಅವಕಾಶವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದ ವಿಶ್ಲೇಷಣೆ

ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ (Commerce)

ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

Published

on

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending