ಸಿನಿ ಸುದ್ದಿ
ಮಾದಕ ಸೇವನೆಗೆ ದಾಸರಾಗಿರೋ ಯುವಜನತೆಗೆ ‘ಟಗರು ಡಾಲಿ’ ಏನಂದ್ರು ಗೊತ್ತಾ..?

ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಭಿಯಾನದ ಕುರಿತು 5 k ಮ್ಯಾರಥನ್ ಕಾರ್ಯಕ್ರಮನ್ನು ಕೋರಮಂಗಲದ ಲಕ್ಷ್ಮಿ ದೇವಿ ಮೈದಾನದಲ್ಲಿ ಆಗ್ನೇಯ ವಿಭಾಗ ಪೊಲೀಸರು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ, ಈಶ್ಯಾನ ವಿಭಾಗದ ಡಿಸಿಪಿ ಬೋರ್ ಲಿಂಗಯ್ಯ , ಚಿತ್ರ ನಟ ಧನಜಯ್ ಅಲಿಯಾಸ್, ಸಿಂಧು ಲೋಕ್ ನಾಥ್, ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ SAY NO TO DRUGS ಎಂಬ ಧ್ಯೆಯ ವ್ಯಾಕದೂಂದಿಗೆ
ರಾಮಲಿಂಗಾರೆಡ್ಡಿ ರಿಂದ 5 k ಮ್ಯಾರಥನ್ ಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಟ ಧನಂಜಯ್ ಮಾತನಾಡಿ, ಕೋರಮಂಗಲ ಪೊಲೀಸರು ಜಾಗೃತಿ ಮೂಡಿಸಿರೋದು ಸಂತಸದ ವಿಷಯವಾಗಿದೆ. ಮಾದಕ ವಸ್ರುಗಳು ಈಗ ಬೇರೆ ಬೇರೆ ರೀತಿಯಲ್ಲಿ ಸಿಗ್ತುತ್ತಿವೆ. ಅದಕ್ಕೆ ಕಡಿವಾಣ ಹಾಕೋದು ಕಷ್ಟವಾಗಿದೆ. ಇದು ಯುವ ಜನತೆಯಲ್ಲಿ ಒಂದು ಫ್ಯಾಷನ್ ಆಗಿದೆ.
ಆದ್ದರಿಂದ ಅವರು ಮಾದಕವಸ್ತುಗಳ ಸೇವನೆಯನ್ನು ಬಿಟ್ಟು, ಇನ್ನಿತರ ಒಳ್ಳೆ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಬೇಕು ಆಗ ತನ್ನಿಂತಾನೆ ಮಾದಕ ಸೇವನೆ ಸ್ವಲ್ಪವಾದ್ರು ಕಡಿಮೆ ಆಗುತ್ತೆ ಎಂದರು.
ನಂತರ ನಟಿ ಸಿಂಧೂ ಲೋಕನಾಥ್ ಮಾತನಾಡಿ
ಇದು ಒಳ್ಳೆಯ ಕ್ಯಾಂಪೇನ್ ಆಗಿದೆ. ಈಗ ಸ್ಕೂಲಿನ ಮಕ್ಕಳು ಮಾದಕ ವಸ್ತುಗಳ ದಾಸರಾಗ್ತಿದ್ದಾರೆ. ಹಾಗೇ ಮಾರಾಟ ಕೂಡಾ ಮಾಡ್ತಿದ್ದಾರೆ.ಬಕೋರಮಂಗಲ ಪೊಲೀಸ್ರು ಈ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಕ್ಕಳಿಗೆ ಪೋಷಕರು ಮೊದಲು ಜಾಗೃತಿ ಮೂಡಿಸಬೇಕು.
ಆಗ ಡ್ರಗ್ಸ್ ಗೆ ನೋ ಅಂತಾರೆ. ಲೈಪ್ ಗೆ ಎಸ್ ಅಂತಾರೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?

ಸುದ್ದಿದಿನ,ಬೆಂಗಳೂರು : ಸೀಸನ್ ಮೂರರ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶ್ರೀ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇತ್ತೀಚಿಗೆ ಕೆಲದಿನಗಳಿಂದ ಅತೀವ ಖಿನ್ನತೆಯಿಂದ ಬಳಲುತ್ತಿದ್ದರು.
ಮಾದನಾಯಕನಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಗತಿ ಬಡಾವಣೆಯ ಅಪಾರ್ಟ್ಮೆಂಟ್ ನಲ್ಲಿ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಅಂದಹಾಗೇ ಈ ಹಿಂದೆಯೂ ನಟಿ ಜಯಶ್ರೀ ಆತ್ಮಹತ್ಯೆಗೆ ಯತ್ನಿಸಿದ್ದರು. ಆನಂತ್ರ ಅವರು ಸಾವಿನಿಂದ ಬಚಾವ್ ಆಗಿದ್ದರು. ಆದ್ರೇ ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅದರಿಂದ ಹೊರಬರಲು ಆಗುತ್ತಿಲ್ಲ ನನಗೆ ದಯಾಮರಣ ಕೊಡಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಬಂದು ಕೆಲವು ದಿನಗಳ ಹಿಂದೆ ಕೇಳಿಕೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ

- ಮತ್ತೆ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ: ಬಟ್ಟಲು ಕಣ್ಣಿನ ಚೆಲುವೆ
- ಮ್ಯಾಂಚೆಸ್ಟರ್ ಬೆಡಗಿ ಸಿಕ್ತು ಬಿಗ್ ಆಫರ್
ವಿಶೇಷ ವರದಿ :ಈಶ್ವರ್ ಸಿರಿಗೇರಿ
ಸುದ್ದಿದಿನ ಡೆಸ್ಕ್ : ಮಾತೃ ಆಸೆ ಕೊನೆಗೂ ನನಸು ಮಾಡಿದ ಮ್ಯಾಂಚೆಸ್ಟರ್ ಹುಡುಗಿ ಈ ಸಿನಿ ಪಯಣವೇ ಒಂದು ರೀತಿಯ ನಿಂತ ನೀರಲ್ಲ ಎಂಬ ಸಾಕ್ಷಿಗೆ ಮೆಚ್ಚುಗೆ ಪಾತ್ರರಾದ ಬಿಂದುಶ್ರೀ ಅವರು ನೋಡಿದ ಕೂಡಲೇ ಪ್ರಸಿದ್ಧಿ ಎಂಬ ಮಾತು ಸುಳ್ಳಲ್ಲ. ಕಲರ್ ಫುಲ್ ಪಯಣದಲ್ಲಿ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಯಶಸ್ಸಿಯಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ ಈ ಬಟ್ಟಲು ಕಣ್ಣಿನ ಚೆಲುವೆ ಮ್ಯಾಂಚೆಸ್ಟರ್ ಸ್ಟಾರ್ ಬೆಡಗಿಯಾಗಿ ತಮ್ಮದೇ ಆದ ನೆಲೆಗೆ ಸಾಕ್ಷಿಯಾಗಿದ್ದಾರೆ. ಅದು ಏನೇ ಆಗಲಿ ಬಾಲ್ಯದಲ್ಲಿ ಸಿಕ್ಕ ಹಲವಾರು ಅವಕಾಶಗಳನ್ನು ಬಹಳ ಅದ್ಭತವಾಗಿ ಕಲರ್ ಫುಲ್ ಪ್ರತಿಭೆಗೆ ಅದರಲ್ಲೂ ಕನ್ನಡದಲ್ಲಿ ಮಿಚ್ಚಿದ್ದು ಕನ್ನಡಿಗರ ಹೆಮ್ಮೆ.
ಪ್ಯಾಶನ್ ನಿಂದ ನಟನಾ ವೃತ್ತಿಗೆ ಪಯಣ
ಪಕ್ಕ ಹಳಿ ಸೊಗಡಿನ ಚಿತ್ರಕ್ಕೆ ಸಿಕ್ತು ಇಷ್ಟು ದಿನಗಳ ನಂತರ ಅದ್ಭತ ಆಫರ್ಗಳು, ಈ ಸಾಲುಗಳ ಯಶಸ್ಸು ಬೆನ್ನಿಗೆ ಇದ್ದರು ಸಹ ಒಳ್ಳೆಯ ಚಿತ್ರಕಥೆಗೆ ಏಳಿ ಮಾಡಿಸಿದ ಈ ಸ್ಪೂರಧ್ರೂಪಿ ಚೆಲುವೆ. ಇನ್ನೂ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಹೋಗಿದ್ದು ಇತಿಹಾಸವೇ ಆದರೂ ಈ ಸಾಲಿಗೆ ಬಿಂದುಶ್ರೀ ಎಂಬ ನವ ಕಲರ್ ಫುಲ್ಗೆ ಹಾಗೂ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ವೇಟಿಂಗ್ ಅಂತ ಹೇಳಬಹುದು.
ಮ್ಯಾಂಚೆಸ್ಟರ್ ಬೆಡಗಿಗೆ ಸಿನಿ ಲೋಕದಲ್ಲಿ ಸಂಸ್ಕೃತಿಯೇ ಬಿಂಬ
ಬಿಂದುಶ್ರೀ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಹುಡುಗಿ. ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”, ”ಶಿವಪ್ಪ ನಾಯಕ”,”ಪ್ರೀತ್ಸೋದ್ ತಪ್ಪಾ” ಸೇರಿದಂತೆ ಅನೇಕ ರೀತಿಯ ಸುಮಾರು ಮೂವತ್ತು ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು ಸುಳ್ಳಲ್ಲ. ಬೆಳ್ಳಿತೆರೆಯ ಜತೆಗೆ ಕಿರುತೆರೆಯಲ್ಲೂ ಇವರ ಪಯಣ ಅದ್ಭತ ಅಂತ ಹೇಳಬಹುದು. ಇನ್ನೋಂದು ವಿಚಾರ “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ಬಣ ಹಚ್ಚಿದ್ದಾರೆ. ಬಣದ ಜತೆಗೆ ಅಧ್ಯಯನ ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್ ಎಂಜಿನಿಯರ್. ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ್ಯಾಂಕ್ ಎಂಬುದು ವಿಶೇಷ.
ಬಣ್ಣಕ್ಕೂಸೈ, ಟೆಕ್ಕಿಗೂ ಸೈ
ಬೆಂಗಳೂರು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಸೇವೆ ಮಾಡಿದ್ದಾರೆ ಹಾಗೂ ಇವರ ತಾಯಿ ಶಾಸ್ತ್ರೀಯ ಸಂಗೀತ ಹಿನ್ನಲೆಯ ಅವರು. ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ರೆಡಿಯಾಗಿದ್ದಾರೆ. ಈ ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ನಟನೆ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಸೈ ಎನ್ನುವುದು. ಬೇರೆ ರೀತಿಯ ಕಥೆಗೆ ಪಾತ್ರ ಮಾಡಲಾರೆ” ಎಂಬುದು ಬಿಂದುಶ್ರೀ ಅವರ ಅಭಿಪ್ರಾಯ.
ಮಹಿಷಾಸುರ ಸಿನೆಮಾವೇ ಮತ್ತೆ ಕಲರ್ ಫುಲ್ ಆಗಲು ಕಾರಣ
ಇತ್ತೀಚೆಗೆ ತೆರೆಕಂಡ ಬಹಳ ಪೌರಾಣಿಕ ಸಿನಿಮಾವಾದ ಬಿಂದುಶ್ರೀ ಅವರ ಬಾಲ್ಯದಲ್ಲಿ 30 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಜತೆಯಲ್ಲಿ ಅದರಲ್ಲೂ ಪ್ರಮುಖ ಹಳ್ಳಿ ಹುಡುಗಿಯಾಗಿ ಮಹಿಷಾಸುರ ಚಿತ್ರದಲ್ಲಿ ನಟಿಸಿದ್ದಾರೆ.
ಎಕ್ಸ್ ಲೆಂಟ್ ಆಗಿ ನಟನೆ ಮಾಡಿದ್ದಾರೆ ಇವರ ವಿಶೇಷ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಂದು ರಾಜ್ಯಾದ್ಯಾತ ಬಿಡುಗಡೆಯಾಗಲಿದೆ ಎಂಬುದು ಬಿಂದುಶ್ರೀ ಅವರ ಅಭಿಪ್ರಾಯ. ಇನ್ನೂ ಸದ್ಯದಲ್ಲೇ “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಪ್ರಸ್ತುತವಾಗಿ ಬಿಂದುಶ್ರೀ ಮೂರು ಕಥೆ ಗಳನ್ನು ರೆಡಿ ಅಂಥ ಹೇಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಸಿನಿ ಸುದ್ದಿ
ಬಾಂಬೆ ಹೀರೋಹಿನ್ ಗಳು ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ ಅಂದವರಿಗೆ ಹೀಗಂದ್ರು ನಟಿ ಕೃತ್ತಿಕಾ ರವೀಂದ್ರ..!

ನಟಿ ಕೃತಿಕ ರವೀಂದ್ರ ಬಿಗ್ ಬಾಸ್ ರಿಯಾಲಿಟಿ ಶೋನ ಕಂಟೆಸ್ಟ್ಟೆಂಟ್ ಕೂಡ. ಇವರು ಇತ್ತೀಚಿಗೆ ಸಿನೆಮಾವೊಂದರಲ್ಲಿ ನಟಿಸಲು ಸಂಭಾವನೆ ವಿಷಯವಾಗಿ ನಡೆದ ಘಟನೆಯೊಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೀಗಿದೆ ಆ ಬರಹ.
ಇದೇನ ಸಭ್ಯತೆ, ಇದೇನ ಸಂಸ್ಕೃತಿ !
ಇತ್ತೀಚೆಗೆ ಒಂದು ಕರೆ ಬಂದಿತ್ತು. ಒಂದು ಸಿನೆಮಾ ಮಾತುಕತೆ. ಅದ್ಭುತ ಕಥೆ ಅಲ್ಲದಿದ್ದರೂ ಮಾಡಲಸಾಧ್ಯ ಅನ್ನಿಸುವಂಥದ್ದಲ್ಲ. ನಾನು ಗಮನಿಸಿರುವ ಹಾಗೆ,ಸಂಭಾವನೆ ಕಥೆಗಿಂತ ಮುಖ್ಯ ಎಂಬುವುದು ವಿಷಾದಕರ ಸಂಗತಿ. ಇಲ್ಲಿಯೂ ಸಂಭಾವನೆಯ ವಿಷಯ ಬಂದಾಗ ನಾನು ಸುತ್ತಿ ಬಳಸಿ ಮಾತನಾಡದೇ ನೇರವಾಗಿ “ಇಷ್ಟು” ಕೊಟ್ಟರೆ ಸಂತೋಷ. ಆಗಲಿಲ್ಲ ಅಂದ್ರೆ ನಿಮ್ಮ “budjet” ಹೇಳಿ. ಇಬ್ಬರಿಗೂ ಹೊಂದಿಕೆಯಾದಲ್ಲಿ ಮುಂದುವರಿಯೋಣ ಅಂದೆ. 2 ದಿನ ಬಿಟ್ಟು ಕರೆ ಬಂತು. ಅವರು ಹೇಳಿದ ಸಂಭಾವನೆ ನನಗೆ ಹೊಂದಿಕೆಯಾಗದಿದ್ದರಿಂದ “ಕ್ಷಮಿಸಿ, ಇಷ್ಟು ಸಂಭಾವನೆಗೆ ಕೆಲಸ ಮಾಡೋದಕ್ಕೆ ನಂಗೆ ಕಷ್ಟ ಆಗತ್ತೆ” ಅಂದೆ.
ವಿಷಯ ಇದಲ್ಲ. ನನ್ನ ನೇರನುಡಿಯಿಂದ ಮುಖಭಂಗಗೊಂಡ ಆಸಾಮಿ ಮಾತನ್ನ ಅಷ್ಟಕ್ಕೇ ನಿಲ್ಲಿಸದೇ “ ನಾನು ನನ್ನ ಸಿನೆಮಾಗಳಿಗೆ ಬಾಂಬೆಯಿಂದಲೇ ಹೀರೋಯಿನ್ ಗಳನ್ನ ಕರೆಸೋದು. ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ. ಕನ್ನಡದವರನ್ನ ನನ್ನ ಸಿನೆಮಾಗಳಿಗೆ ತಗೊಳಲ್ಲ” ಅಂದ.
ನಾನು “ ಒಹ್ ತಾವು ಕನ್ನಡದವರನ್ನೇ ತಗೋಳಲ್ವ? ಹೆಂಗೆ ಸರ್. ಕನ್ನಡದವರಾಗಿ ಕನ್ನಡದವರಿಗೆ ಅವಕಾಶಗಳನ್ನ ಕೊಡಲ್ವಾ?” ಅಂದೆ.
ಆಸಾಮಿ ” ಅಯ್ಯೋ ಹಾಗಲ್ಲ ಮೇಡಂ. ಅಷ್ಟು ಕಡಿಮೆಗೆ ಅಲ್ಲಿಂದ ಬಂದು ಕೆಲಸ ಮಾಡಿ ಹೋಗ್ತಾರೆ ” ಅಂದ.
So basically, ಬಾಂಬೆ ಇಂದ ಹೀರೋಯಿನ್ಗಳನ್ನ ಕರೆಸೋದು, ಇಲ್ಲಿಯವರನ್ನ ಗಣನೆಗೆ ತಗೊಳ್ದೆ ಇರೋದು ಇದೇಲ್ಲಕ್ಕೂ ಸಂಭಾವನೆ ಕಾರಣ. ನಾನು ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡಿದೀನಿ ಗೆಳೆಯರೇ. ಸಂಭಾವನೆನೇ ತಗೊಳ್ದೆ ಕೂಡ ಮಾಡಿದೀನಿ. ಇನ್ನು ವಿಪರ್ಯಾಸ ಅಂದ್ರೆ ಸಂಭಾವನೆ ಸಿಗದೇ ಮೋಸ ಕೂಡ ಹೋಗಿದೀನಿ. ಇವೆಲ್ಲಾ ನಂಗೆ ಒಳ್ಳೆ ಅನುಭವಗಳನ್ನ ಕೊಟ್ಟಿದೆ. (ಕೊಡ್ತಾ ಇದೆ)
ಆದ್ರೆ ಒಂದು ಬೇಡಿಕೆ. ಕಡಿಮೆ ಸಂಭಾವನೆಗೆ ಬರೋ ಕನ್ನಡದವರನ್ನೇ ಬೆಳೆಸಿ. ಅವಕಾಶಗಳನ್ನ ಕೊಡಿ. ಬಾಂಬೆ,ಅಲ್ಲಿ- ಇಲ್ಲಿ ಇರೋ ಹುಡುಗಿಯರನ್ನೇ ನೀವಾಳಿಸಿ ಬಿಸಾಕೋ ಅಂಥ ಅದ್ಭುತ ಪ್ರತಿಭೆಗಳು ನಮ್ಮ ಕನ್ನಡದಲ್ಲಿದ್ದಾರೆ. ಒಂದು ಚಿಕ್ಕ ಅವಕಾಶ ಬಹುಷಃ ಅವರ ಜೀವನವನ್ನೇ ಬದಲಾಯಿಸಬಹುದು. ಅನ್ಯಾಯ ಮಾಡಬೇಡಿ ಅಷ್ಟೇ. ನನಗೂ ಕೂಡ.
– ಕೃತ್ತಿಕಾ ರವೀಂದ್ರ
https://m.facebook.com/story.php?story_fbid=4255085074519185&id=100000532021557
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ದಾವಣಗೆರೆ | 120 ಕೋಟಿ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ
-
ದಿನದ ಸುದ್ದಿ6 days ago
ಕೆಎಸ್ಆರ್ಟಿಸಿ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ
-
ದಿನದ ಸುದ್ದಿ5 days ago
ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!
-
ದಿನದ ಸುದ್ದಿ7 days ago
ಚನ್ನಗಿರಿ | ಕುಟುಂಬಸ್ಥರ ಜಮೀನು ವ್ಯಾಜ್ಯ ; ‘ನ್ಯಾಯ ಕೊಡಿ ಇಲ್ಲಾ ವಿಷ ಕೊಡಿ’ : ತೇಜಸ್ವಿ ಪಟೀಲ್ ನೇತೃತ್ವದಲ್ಲಿ ಪ್ರತಿಭಟನೆ
-
ದಿನದ ಸುದ್ದಿ6 days ago
ಜಿಎಸ್ ಟಿ ಪರಿಹಾರದಲ್ಲಿ ರಾಜ್ಯಕ್ಕೆ ಅಂದಾಜು 27 ಸಾವಿರ ಕೋಟಿ ಖೋತಾ ಆಗಬಹುದು : ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ದಾವಣಗೆರೆ | ಕೆಎಸ್ಆರ್ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ ಉದ್ಘಾಟನೆ
-
ದಿನದ ಸುದ್ದಿ5 days ago
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!
-
ದಿನದ ಸುದ್ದಿ7 days ago
ಈ ಶೈಕ್ಷಣಿಕ ವರ್ಷದಿಂದ ಹೊಸ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಕ್ರಮ : ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ