Connect with us

ರಾಜಕೀಯ

ಹುತ್ತವ ಬಡಿದರೆ ಹಾವು ಸಾಯಬಲ್ಲುದೇ..!?

Published

on

  • ಹ.ರಾ.ಮಹಿಶ ಬೌದ್ಧ

ನಿರಂಕುಶಾಡಳಿತ ಚುನಾಯಿತವಾದ ಮಾತ್ರಕ್ಕೆ ನಿರಂಕುಶಾಧಿಕಾರವಾಗದಿರಲಾರದು. ನಿರಂಕುಶ ಪ್ರಭುವು ನಮ್ಮವನೇ ಆದ ಮಾತ್ರಕ್ಕೆ ಅವನ ನಿರಂಕುಶಾಡಳಿತಮಾನ್ಯವಾಗಲಾರದು.ನಿರಂಕುಶಾಡಳಿತವನ್ನು ಕಿತ್ತೊಗೆಯುವ ಅಥವಾ ಕೆಳಗಿಳಿಸುವ ಸಾಧ್ಯತೆಯಿಂದ ಅದನ್ನು ಎದುರಿಸುವುದೇ ಮತ್ತು ಇನ್ನೊಂದು ಬಲವಾದ ವಿರೋಧಪಕ್ಷ ಅದರ ಸ್ಥಾನವನ್ನು ಆಕ್ರಮಿಸುವುದೇ ನಿರಂಕುಶಾಡಳಿತದ ವಿರುದ್ಧ ಇರುವ ನಿಜವಾದ ರಕ್ಷಣೆ.

ಬಂಧುಗಳೇ, ಎದೆಷ್ಟೋ ವರ್ಷಗಳ ಹಿಂದೆ ಹೇಳಿರುವ ಬಾಬಾಸಾಹೇಬರ ಈ ಮೇಲಿನ ಮಾತುಗಳು ಇಂದಿನ ದಿನಗಳಲ್ಲಿ‌ ಈ ದೇಶದ ಸ್ಥಿತಿಯನ್ನು ಕಂಡು ನಮ್ಮೆದುರು ನಿಂತು‌ ಇಂದು ಹೇಳುತ್ತಿರುವಂತಿದೆ.. ಗಮನಿಸಿ..!

ಒಂದು ಆಡಳಿತ ಪಕ್ಷವಿದ್ದು ಅದರ ಕಾರ್ಯವೈಖರಿಯನ್ನು ನಿತ್ಯವೂ ಗಮನಿಸುತ್ತಾ ಎಚ್ಚರಿಸಲು ಒಂದು ಸಮರ್ಥ ವಿರೋಧಪಕ್ಷವಿರಬೇಕಾದದ್ದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ನಿಜರೀತಿ. ಆದರೆ ನಮ್ಮ ದೇಶದ ಬಹುಜನರು ರಾಜಕೀಯವಾಗಿ ಅದೆಷ್ಟು‌ ಅಜ್ಞಾನಿಗಳು ಎಂದರೆ ಸ್ವತಂತ್ರ ಭಾರತದ ಆರಂಭದ ವರ್ಷಗಳಿಂದ ನೆನ್ನೆಮೊನ್ನೆಯವರೆಗೂ “ಕಾಂಗ್ರೆಸ್ ಕಾಂಗ್ರೆಸ್” ಎಂದು ಜಪಮಾಡುತ್ತಾ ಕಾಂಗ್ರೆಸ್ ಎಂಬ ಮಾಯಾಜಾಲದಲ್ಲಿ ದೇಶವನ್ನು ಸಿಲುಕಿಸಿ ತಾವೂ ಸಿಕ್ಕಿಕೊಂಡು ನೇತಾಡಿ ಮೌನವಾಗಿ ಸತ್ತರು..! ಅದರ ವಿರುದ್ಧ ಒಂದು ಸಮರ್ಥ ಆಡಳಿತ ಪಕ್ಷವು ತಲೆಯೆತ್ತದಂಥ ಪರಿಸ್ಥಿತಿಯನ್ನು ಕಾಂಗ್ರೆಸ್ನೊಳಗಿನ ಮೆದುಮನುವಾದಿಗಳು ನಯವಾಗಿ ನೋಡಿಕೊಂಡರು..!

ಬಹುಜನರಿಗೆ ಸ್ವತಂತ್ರರಾಜಕೀಯ ಪ್ರಜ್ಞೆಯಿರದೆ ಬರಿ ಓಟ್ ಬ್ಯಾಂಕಾಗಿದ್ದ ಕಾಲದವರೆಗೂ ಇದು ಮುಂದುವರಿಯಿತು. ಬಹುಜನಚಿಂತಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಬಹುಜನರ ಎದೆಯೊಳಗೆ ಸ್ವತಂತ್ರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಬಹುಜನರೆಂದರೆ ಕೇವಲ‌ ಮತಹಾಕುವ ಕುರಿಗಳಲ್ಲ ಆಳುವವರ್ಗದ ಹುಲಿಗಳು ಎಂಬುದನ್ನು ಸಾಬೀತುಪಡಿಸುತ್ತಿದ್ದಂತೆಯೇ ಎಚ್ಚರಗೊಂಡ ಮೆದುಮನುವಾದಿ(ಕೇಂದ್ರ)ಕಾಂಗ್ರೆಸ್ ತನ್ನ ಗರ್ಭದಿಂದ ರಕ್ತಕಾರಿಕೊಂಡು ಹುಟ್ಟಿದ ಬಿಜೆಪಿ ಎಂಬ ಕೂಸನ್ನು ಬುದ್ಧ-ಫುಲೆ-ಅಂಬೇಡ್ಕರ್ವಾದೀ ಸಿದ್ಧಾಂತಕ್ಕೆ ವಿರುದ್ದವಾಗಿ ಒಳಗೊಳಗೆ ಬೆಳೆಸಲು ಮೌನವಾಗಿಯೇ ಪುಷ್ಟಿನೀಡಿತು..!

ಅದು ಬೆಳೆದು ದೊಡ್ಡದಾಗಿ ಅದರ ಕೊಂಬು ಕೋರೆಹಲ್ಲುಗಳು‌‌ ಬಲಿತು ಅದು ರಾಷ್ಟ್ರವನ್ನು ಅರ್ಥಾತ್ ರಾಷ್ಟ್ರದ ಬಹುಜನರನ್ನು ಬಲಿತೆಗೆದುಕೊಳ್ಳುವಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತಿದ್ದಂತೆಯೇ ಕಾಂಗ್ರೆಸ್ ಉಸಿರೆಳೆದು ಇಚ್ಛಾಮರಣಿಯಂತೆ ಆತ್ಮಹತ್ಯೆ ಮಾಡಿಕೊಂಡಿತು..! ಇದರಿಂದಾಗಿ ಈಗ ಈ ಬಿಜೆಪಿ ಎಂಬ ಮುಕ್ತಮನುವಾದಿ ಪಕ್ಷದ ಮುಂದೆಯೂ ಒಂದು ಸಮರ್ಥ ವಿರೋಧಪಕ್ಷವಿಲ್ಲದಂಥಾ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ..!

ಬಿಜೆಪಿಯ ದಿನದಿನದ ಸ್ವೇಚ್ಛಾಚಾರೀ ಸರ್ವಾಧಿಕಾರಿ ನಿರಂಕುಶಾಡಳಿದ ಆಟಾಟೋಪಗಳಿಗೆ ಬೆದರಿ ಅಸಹಾಯಕರಾಗಿ‌ ಹತಾಷರಾಗಿ ದೇಶದ ಪ್ರಜ್ಞಾವಂತ ಜನರು ಇಂದು ಕೈಕೈಹೊಸಕಿಕೊಳ್ಳುತ್ತಾ ಶಾಪಹಾಕುತ್ತಿದ್ದಾರೆ..! ಹಲವು ಅಂಧಭಕ್ತರು‌ ಜೈಕಾರ ಹಾಕುತ್ತಿದ್ದಾರೆ..! ಕೆಲವರು ದೇಶವೆಂಬ ಮನೆಗೆ ಬಿಜೆಪಿ ಹೊತ್ತಿಸಿರುವ ಬೆಂಕಿಯಲ್ಲಿ ಮೈಕೈ ಕಾಯಿಸಿಕೊಂಡು ಬೆಚ್ಚಗಿದ್ದರೆ ಇನ್ನೂ ಕೆಲವರು ಆ ಬೆಂಕಿಯಿಂದ ಬೀಡಿ ಹಚ್ಚಿಕೊಂಡು‌ ಧಮ್ಮು ಎಳೆದು ಭ್ರಮಾನಿಶೆಲ್ಲಿ‌ ತೇಲುತ್ತಿದ್ದಾರೆ..!

ಬಂಧುಗಳೇ, ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತಾ ಸುಡುತ್ತಿರುವ ಸಮಸ್ಯೆಗಳು ಎಲ್ಲರಿಗೂ‌ ಗೊತ್ತಿರುವಂಥದ್ದೇ ಮೊನ್ನೆ Article 370, ಇಂದು Article 14,15 ನಾಳೆ 15/4, 16/4, ನಾಳಿದ್ದು article 17 ಆಮೇಲೆ article 25..! ಮುಂದೆ article 330, 340…!! ಒಟ್ಟಾರೆ ಈ ದೇಶದ ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಹಿಂದುಳಿದ ವರ್ಗಗಳು, ಮಹಿಳೆಯರು ಅರ್ಥಾತ್ ಅಬ್ರಾಹ್ಮಣರ ಸರ್ವತೋಮುಖ ಸರ್ವನಾಶವೇ ಮನುವಾದಿಗಳ ಹಿಡನ್ ಮತ್ತು ಓಪನ್ ಅಜೆಂಡಾ..!! ಇವೆಲ್ಲಾ ಎಲ್ಲರಿಗೂ ಗೊತ್ತಿರುವಂಥದ್ದೇ. ಇನ್ನಾದರೂ ಹುತ್ತವ ಬಡಿಯುವುದನ್ನು ನಿಲ್ಲಿಸಿ ಬಾಬಾಸಾಹೇಬರ ಮಾತುಗಳನ್ನು‌ ಸರಿಯಾಗಿ ಅರ್ಥಮಾಡಿಕೊಂಡು ಇವೆಲ್ಲಾ ಸಮಸ್ಯೆಗಳಿಗೂ ಬಾಬಾಸಾಹೇಬರು ಹೇಳಿದ ತೋರಿದ ಶಾಶ್ವತ ಪರಿಹಾರಗಳ ಕಡೆ ಚಿಂತಿಸೋಣವೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

Published

on

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.

ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

Published

on

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending