Connect with us

ರಾಜಕೀಯ

ಹುತ್ತವ ಬಡಿದರೆ ಹಾವು ಸಾಯಬಲ್ಲುದೇ..!?

Published

on

  • ಹ.ರಾ.ಮಹಿಶ ಬೌದ್ಧ

ನಿರಂಕುಶಾಡಳಿತ ಚುನಾಯಿತವಾದ ಮಾತ್ರಕ್ಕೆ ನಿರಂಕುಶಾಧಿಕಾರವಾಗದಿರಲಾರದು. ನಿರಂಕುಶ ಪ್ರಭುವು ನಮ್ಮವನೇ ಆದ ಮಾತ್ರಕ್ಕೆ ಅವನ ನಿರಂಕುಶಾಡಳಿತಮಾನ್ಯವಾಗಲಾರದು.ನಿರಂಕುಶಾಡಳಿತವನ್ನು ಕಿತ್ತೊಗೆಯುವ ಅಥವಾ ಕೆಳಗಿಳಿಸುವ ಸಾಧ್ಯತೆಯಿಂದ ಅದನ್ನು ಎದುರಿಸುವುದೇ ಮತ್ತು ಇನ್ನೊಂದು ಬಲವಾದ ವಿರೋಧಪಕ್ಷ ಅದರ ಸ್ಥಾನವನ್ನು ಆಕ್ರಮಿಸುವುದೇ ನಿರಂಕುಶಾಡಳಿತದ ವಿರುದ್ಧ ಇರುವ ನಿಜವಾದ ರಕ್ಷಣೆ.

ಬಂಧುಗಳೇ, ಎದೆಷ್ಟೋ ವರ್ಷಗಳ ಹಿಂದೆ ಹೇಳಿರುವ ಬಾಬಾಸಾಹೇಬರ ಈ ಮೇಲಿನ ಮಾತುಗಳು ಇಂದಿನ ದಿನಗಳಲ್ಲಿ‌ ಈ ದೇಶದ ಸ್ಥಿತಿಯನ್ನು ಕಂಡು ನಮ್ಮೆದುರು ನಿಂತು‌ ಇಂದು ಹೇಳುತ್ತಿರುವಂತಿದೆ.. ಗಮನಿಸಿ..!

ಒಂದು ಆಡಳಿತ ಪಕ್ಷವಿದ್ದು ಅದರ ಕಾರ್ಯವೈಖರಿಯನ್ನು ನಿತ್ಯವೂ ಗಮನಿಸುತ್ತಾ ಎಚ್ಚರಿಸಲು ಒಂದು ಸಮರ್ಥ ವಿರೋಧಪಕ್ಷವಿರಬೇಕಾದದ್ದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ನಿಜರೀತಿ. ಆದರೆ ನಮ್ಮ ದೇಶದ ಬಹುಜನರು ರಾಜಕೀಯವಾಗಿ ಅದೆಷ್ಟು‌ ಅಜ್ಞಾನಿಗಳು ಎಂದರೆ ಸ್ವತಂತ್ರ ಭಾರತದ ಆರಂಭದ ವರ್ಷಗಳಿಂದ ನೆನ್ನೆಮೊನ್ನೆಯವರೆಗೂ “ಕಾಂಗ್ರೆಸ್ ಕಾಂಗ್ರೆಸ್” ಎಂದು ಜಪಮಾಡುತ್ತಾ ಕಾಂಗ್ರೆಸ್ ಎಂಬ ಮಾಯಾಜಾಲದಲ್ಲಿ ದೇಶವನ್ನು ಸಿಲುಕಿಸಿ ತಾವೂ ಸಿಕ್ಕಿಕೊಂಡು ನೇತಾಡಿ ಮೌನವಾಗಿ ಸತ್ತರು..! ಅದರ ವಿರುದ್ಧ ಒಂದು ಸಮರ್ಥ ಆಡಳಿತ ಪಕ್ಷವು ತಲೆಯೆತ್ತದಂಥ ಪರಿಸ್ಥಿತಿಯನ್ನು ಕಾಂಗ್ರೆಸ್ನೊಳಗಿನ ಮೆದುಮನುವಾದಿಗಳು ನಯವಾಗಿ ನೋಡಿಕೊಂಡರು..!

ಬಹುಜನರಿಗೆ ಸ್ವತಂತ್ರರಾಜಕೀಯ ಪ್ರಜ್ಞೆಯಿರದೆ ಬರಿ ಓಟ್ ಬ್ಯಾಂಕಾಗಿದ್ದ ಕಾಲದವರೆಗೂ ಇದು ಮುಂದುವರಿಯಿತು. ಬಹುಜನಚಿಂತಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಬಹುಜನರ ಎದೆಯೊಳಗೆ ಸ್ವತಂತ್ರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಬಹುಜನರೆಂದರೆ ಕೇವಲ‌ ಮತಹಾಕುವ ಕುರಿಗಳಲ್ಲ ಆಳುವವರ್ಗದ ಹುಲಿಗಳು ಎಂಬುದನ್ನು ಸಾಬೀತುಪಡಿಸುತ್ತಿದ್ದಂತೆಯೇ ಎಚ್ಚರಗೊಂಡ ಮೆದುಮನುವಾದಿ(ಕೇಂದ್ರ)ಕಾಂಗ್ರೆಸ್ ತನ್ನ ಗರ್ಭದಿಂದ ರಕ್ತಕಾರಿಕೊಂಡು ಹುಟ್ಟಿದ ಬಿಜೆಪಿ ಎಂಬ ಕೂಸನ್ನು ಬುದ್ಧ-ಫುಲೆ-ಅಂಬೇಡ್ಕರ್ವಾದೀ ಸಿದ್ಧಾಂತಕ್ಕೆ ವಿರುದ್ದವಾಗಿ ಒಳಗೊಳಗೆ ಬೆಳೆಸಲು ಮೌನವಾಗಿಯೇ ಪುಷ್ಟಿನೀಡಿತು..!

ಅದು ಬೆಳೆದು ದೊಡ್ಡದಾಗಿ ಅದರ ಕೊಂಬು ಕೋರೆಹಲ್ಲುಗಳು‌‌ ಬಲಿತು ಅದು ರಾಷ್ಟ್ರವನ್ನು ಅರ್ಥಾತ್ ರಾಷ್ಟ್ರದ ಬಹುಜನರನ್ನು ಬಲಿತೆಗೆದುಕೊಳ್ಳುವಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತಿದ್ದಂತೆಯೇ ಕಾಂಗ್ರೆಸ್ ಉಸಿರೆಳೆದು ಇಚ್ಛಾಮರಣಿಯಂತೆ ಆತ್ಮಹತ್ಯೆ ಮಾಡಿಕೊಂಡಿತು..! ಇದರಿಂದಾಗಿ ಈಗ ಈ ಬಿಜೆಪಿ ಎಂಬ ಮುಕ್ತಮನುವಾದಿ ಪಕ್ಷದ ಮುಂದೆಯೂ ಒಂದು ಸಮರ್ಥ ವಿರೋಧಪಕ್ಷವಿಲ್ಲದಂಥಾ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ..!

ಬಿಜೆಪಿಯ ದಿನದಿನದ ಸ್ವೇಚ್ಛಾಚಾರೀ ಸರ್ವಾಧಿಕಾರಿ ನಿರಂಕುಶಾಡಳಿದ ಆಟಾಟೋಪಗಳಿಗೆ ಬೆದರಿ ಅಸಹಾಯಕರಾಗಿ‌ ಹತಾಷರಾಗಿ ದೇಶದ ಪ್ರಜ್ಞಾವಂತ ಜನರು ಇಂದು ಕೈಕೈಹೊಸಕಿಕೊಳ್ಳುತ್ತಾ ಶಾಪಹಾಕುತ್ತಿದ್ದಾರೆ..! ಹಲವು ಅಂಧಭಕ್ತರು‌ ಜೈಕಾರ ಹಾಕುತ್ತಿದ್ದಾರೆ..! ಕೆಲವರು ದೇಶವೆಂಬ ಮನೆಗೆ ಬಿಜೆಪಿ ಹೊತ್ತಿಸಿರುವ ಬೆಂಕಿಯಲ್ಲಿ ಮೈಕೈ ಕಾಯಿಸಿಕೊಂಡು ಬೆಚ್ಚಗಿದ್ದರೆ ಇನ್ನೂ ಕೆಲವರು ಆ ಬೆಂಕಿಯಿಂದ ಬೀಡಿ ಹಚ್ಚಿಕೊಂಡು‌ ಧಮ್ಮು ಎಳೆದು ಭ್ರಮಾನಿಶೆಲ್ಲಿ‌ ತೇಲುತ್ತಿದ್ದಾರೆ..!

ಬಂಧುಗಳೇ, ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತಾ ಸುಡುತ್ತಿರುವ ಸಮಸ್ಯೆಗಳು ಎಲ್ಲರಿಗೂ‌ ಗೊತ್ತಿರುವಂಥದ್ದೇ ಮೊನ್ನೆ Article 370, ಇಂದು Article 14,15 ನಾಳೆ 15/4, 16/4, ನಾಳಿದ್ದು article 17 ಆಮೇಲೆ article 25..! ಮುಂದೆ article 330, 340…!! ಒಟ್ಟಾರೆ ಈ ದೇಶದ ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಹಿಂದುಳಿದ ವರ್ಗಗಳು, ಮಹಿಳೆಯರು ಅರ್ಥಾತ್ ಅಬ್ರಾಹ್ಮಣರ ಸರ್ವತೋಮುಖ ಸರ್ವನಾಶವೇ ಮನುವಾದಿಗಳ ಹಿಡನ್ ಮತ್ತು ಓಪನ್ ಅಜೆಂಡಾ..!! ಇವೆಲ್ಲಾ ಎಲ್ಲರಿಗೂ ಗೊತ್ತಿರುವಂಥದ್ದೇ. ಇನ್ನಾದರೂ ಹುತ್ತವ ಬಡಿಯುವುದನ್ನು ನಿಲ್ಲಿಸಿ ಬಾಬಾಸಾಹೇಬರ ಮಾತುಗಳನ್ನು‌ ಸರಿಯಾಗಿ ಅರ್ಥಮಾಡಿಕೊಂಡು ಇವೆಲ್ಲಾ ಸಮಸ್ಯೆಗಳಿಗೂ ಬಾಬಾಸಾಹೇಬರು ಹೇಳಿದ ತೋರಿದ ಶಾಶ್ವತ ಪರಿಹಾರಗಳ ಕಡೆ ಚಿಂತಿಸೋಣವೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending