Connect with us

ದಿನದ ಸುದ್ದಿ

ರೆಡ್‌ಬಸ್‌ನಿಂದ ವರ್ಷಾಂತ್ಯದ ಅಭಿಯಾನಕ್ಕೆ ಚಾಲನೆ; ಅದೃಷ್ಟವಂತ ಗ್ರಾಹಕರು ಒಂದು ಗ್ರಾಂ ಚಿನ್ನ ಗೆಲ್ಲುವ ಅವಕಾಶ

Published

on

  • ವರ್ಷಾಂತ್ಯದ ಈ ಅಭಿಯಾನವು ಒಂದು ಗ್ರಾಂ ಚಿನ್ನ ಗೆಲ್ಲುವ ಅವಕಾಶ ನೀಡಿದೆ.
  • ಚಿನ್ನದ ವಿಜೇತರನ್ನು ಪ್ರತಿನಿತ್ಯ ಪ್ರಕಟಿಸಲಾಗುತ್ತದೆ; ಎಲ್ಲ ಗ್ರಾಹಕರು 50 ರೂ. ನಿಶ್ಚಿತ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.

ಸುದ್ದಿದಿನ,ಬೆಂಗಳೂರು: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಭಾರತದ ಅತ್ಯಂತ ದೊಡ್ಡ ಆನ್‌ಲೈನ್ ಬಸ್ ಟಿಕೆಟಿಂಗ್ ಪ್ಲಾಟ್‌ಫಾರಂ ರೆಡ್‌ಬಸ್ ತನ್ನ ವರ್ಷಾಂತ್ಯದ ಅಭಿಯಾನವನ್ನು ವಿಶೇಷ ಕೊಡುಗೆಯೊಂದಿಗೆ ಪ್ರಕಟಿಸಿದ್ದು ಇದು ಡಿಸೆಂಬರ್ 20 ರಿಂದ ಜನವರಿ 16,2022ರವರೆಗೆ ಅವರ ಟಿಕೆಟ್‌ಗಳನ್ನು ಬುಕ್ ಮಾಡುವ ಅದೃಷ್ಟವಂತ ಗ್ರಾಹಕರಿಗೆ ಒಂದು ಗ್ರಾಮ್ ಚಿನ್ನ ಗೆಲ್ಲುವ ಅವಕಾಶ ಕಲ್ಪಿಸಿದೆ.

ಈ ಗೋಲ್ಡನ್ ಟಿಕೆಟ್ ಆಫರ್ ಅನ್ನು ಕರ್ನಾಟಕದಲ್ಲಿ ರೆಡ್‌ಬಸ್ ಪ್ಲಾಟ್‌ಫಾರಂನಲ್ಲಿ ಅವರ ಸೀಟುಗಳನ್ನು ಖಾಸಗಿ ಬಸ್‌ಗಳಲ್ಲಿ ಬುಕ್ ಮಾಡುವವರಿಗೆ ನೀಡಲಾಗುತ್ತಿದೆ. ಈ 28 ದಿನಗಳ ಅವಧಿಯಲ್ಲಿ ರೆಡ್‌ಬಸ್‌ನಲ್ಲಿ ಖಾಸಗಿ ಬಸ್ ಆಪರೇಟರ್‌ಗಳೊಂದಿಗೆ ಟಿಕೆಟ್ ಬುಕ್ ಮಾಡುವ ಎಲ್ಲ ಗ್ರಾಹಕರು ಒಂದು ಗ್ರಾಂ ಚಿನ್ನ ಗೆಲ್ಲುವ ಅವಕಾಶ ಪಡೆಯುತ್ತಾರೆ.

ಇದಲ್ಲದೆ ಪ್ರತಿ ಪ್ರಯಾಣಿಕರೂ ಈ ಅವಧಿಯಲ್ಲಿ ಅವರ ರೆಡ್‌ಬಸ್ ವ್ಯಾಲೆಟ್‌ಗಳಲ್ಲಿ 50ರೂ. ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಕೊಡುಗೆ ಪಡೆಯಲು ಪ್ರಯಾಣಿಕರು ಅವರ ಬಸ್ ಟಿಕೆಟ್‌ಗಳನ್ನು ರೆಡ್‌ಬಸ್‌ನಲ್ಲಿ ಕಾಯ್ದಿರಿಸುವಾಗ `ಗೋಲ್ಡನ್ ಟಿಕೆಟ್’ ಆಫರ್ ಕೋಡ್ ಅನ್ನು ನಮೂದಿಸಬೇಕು.

ಈ ಅಭಿಯಾನ ಪ್ರಾರಂಭ ಕುರಿತು ರೆಡ್‌ಬಸ್‌ನ ಎಸ್.ವಿ.ಪಿ ಮತ್ತು ಹೆಡ್ ಆಫ್ ಮಾರ್ಕೆಟಿಂಗ್ ಪಲ್ಲವಿ ಛೋಪ್ರಾ, “ವರ್ಷಾಂತ್ಯ ಮತ್ತು ಹೊಸ ವರ್ಷದ ಪ್ರಾರಂಭವು ಪ್ರಯಾಣಿಕರು ಹಾಗೂ ಬಸ್ ಆಪರೇಟರ್‌ಗಳಿಗೆ ಅತ್ಯಂತ ನಿರೀಕ್ಷೆಯ ಅವಧಿಗಳಲ್ಲಿ ಒಂದಾಗಿವೆ.

ಹಬ್ಬದ ಋತುವಿನ ಆರಂಭದಿಂದ ಪ್ರಯಾಣವು ಕ್ರಮೇಣ ಸ್ಥಿರವಾಗಿ ಹೆಚ್ಚಳ ಕಾಣುತ್ತಿದೆ ಮತ್ತು ನಮ್ಮ ಗೋಲ್ಡನ್ ಟಿಕೆಟ್ ಕೊಡುಗೆಯ ಅಭಿಯಾನವು ವಿಶ್ವಾಸ ಮೂಡಿಸುವಲ್ಲಿ ಮತ್ತು ಪ್ರಯಾಣಿಕರನ್ನು ಅತ್ಯಂತ ಅಗತ್ಯವಾದ ವರ್ಷಾಂತ್ಯದ ಬ್ರೇಕ್ ಪಡೆಯುವಲ್ಲಿ ಬಹಳ ದೂರ ಸಾಗಲಿದೆ.

ಅದೃಷ್ಟವಂತ ಗ್ರಾಹಕರಿಗೆ 28 ದಿನಗಳ ಕಾಲ ಪ್ರತಿದಿನವೂ ಒಂದು ಗ್ರಾಂ ಚಿನ್ನವನ್ನು ನೀಡುವ ಮೂಲಕ ಸ್ಮರಣೀಯ ಸಂದರ್ಭವಾಗಿಸಲಿದೆ. ನಾವು ನಮ್ಮ ಗ್ರಾಹಕರಿಗೆ ಅತ್ಯಂತ ಸಂತೋಷದ ಮತ್ತು ಸುರಕ್ಷಿತ ರಜಾದಿನಗಳು ಮತ್ತು ಮಹತ್ತರ ವರ್ಷವನ್ನು ಹಾರೈಸುತ್ತೇವೆ” ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending