Connect with us

ಸಿನಿ ಸುದ್ದಿ

EXCLUSIVE INTERVIEW | ಸ್ಯಾಂಡಲ್ ವುಡ್ ಬ್ಯೂಟಿ ; ‘ಸ್ವರ್ಣಖಡ್ಗಂ’ನ ಮಹಧಾತ್ರಿ ಸಂಜನಾ ಗಲ್ರಾಣಿ

Published

on

ಸ್ವರ್ಣಖಡ್ಗಂ | ಯೋಧರಾಣಿ ಸಂಜನಾ

ಬಾಹುಬಲಿ ಚಿತ್ರದ ನಿರ್ಮಾಪಕರಿಂದ  ಮತ್ತೊಂದು ಅದ್ದೂರೀ ಕೊಡುಗೆ; ತೆರೆಯ ಮೇಲೆ ಮಹರಾಣಿ ಮಹಧಾತ್ರಿಯಾಗಿ ಮಿಂಚಲಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಗಲ್ರಾಣಿ

ಬಾಹುಬಲಿ ಚಿತ್ರದ ನಿರ್ಮಾಪಕರು, ಹಾಗೂ ಆರ್ಕಾ ಮೀಡಿಯಾ ವರ್ಕ್ಸ್ ಅವರ ಚಿಕ್ಕ ಪರದೆಯ ಮೇಲೆ ಬಹು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ “ಸ್ವರ್ಣ ಖಡ್ಗಂ”. ಭಾರತೀಯ ಟಿ.ವಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹದಿನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ತೆಲುಗಿನ ಖ್ಯಾತ ಸೀರಿಯಲ್ ನಿರ್ದೇಶಕರಾದ ಯತ  ಸತ್ಯನಾರಾಯಣ ರವರು ಇದನ್ನು ನಿರ್ದೇಶಿಸಿದ್ದಾರೆ. ಜುಲೈ ಆರರಿಂದ ಪ್ರಾರಂಭವಾಗುತ್ತಿರುವ ಈ ದೊಡ್ಡ ಪ್ರಾಜೆಕ್ಟ್, ಪೌರಾಣಿಕ ಕಥಾ ಹದರ ಒಳಗೊಂಡಿದ್ದು, ಬಾಹುಬಲಿ ಚಿತ್ರದ ತಂತ್ರಜ್ಞರೇ ಇಲ್ಲೂ ಕೆಲಸ ಮಾಡಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.

ಇದು ಸಂಜನಾ ‘ಡ್ರೀಮ್ ರೋಲ್ ‘

ಬಾಹುಬಲಿ ಚಿತ್ರ ನೋಡಿದ ಪ್ರತಿಯೊಬ್ಬ ನಟಿಯೂ, ನಾನು ಆ ಚಿತ್ರದ ಒಂದು ಭಾಗವಾಗಿರ ಬೇಕಿತ್ತು ಎಂದು ಮನಸ್ಸಲೇ ನೆನೆದಿದ್ದುಂಟು. ಆ ಸೌಭಾಗ್ಯ ಈಗ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾರ ಪಾಲಾಗಿದೆ.

‘ಸ್ವರ್ಣ ಖಡ್ಗಂ’ “ನನ್ನಒಂಬತ್ತು ವರ್ಷಗಳ ಸಿನಿ ವೃತ್ತಿಯಲ್ಲಿ ಯೇ ಇದು ಮಹತ್ವಾಕಾಂಕ್ಷೆ ಯ ಪಾತ್ರ. ಯಾವುದೇ ನಟಿಗಾದರೂ ಒಮ್ಮೆ ಯಾದರೂ ಇಂತಹ ಮಹಿಳಾ ಪ್ರಧಾನ ಪಾತ್ರ ದಲ್ಲಿ ಮಿಂಚುವ ಆಸೆ ಇದ್ದೇ ಇರುತ್ತದೆ. ಆ ಸೌಭಾಗ್ಯ ನನ್ನದಾಗಿದೆ ಎನ್ನುತ್ತಾರೆ ಸ್ಯಾಂಡಲ್ವುಡ್ ಬ್ಯೂಟಿ  ಸಂಜನಾ.

ಸದ್ಯ ಇದೇ ಸೀರಿಯಲ್ ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ‘ಸುದ್ದಿದಿನ‘ ಕ್ಕೆ  ನೀಡಿರುವ Exclusive Interview ನ ಸಂಪೂರ್ಣ ಡೀಟೇಲ್ ಇಲ್ಲಿದೆ.

ಯೋಧ ರಾಜಕುಮಾರಿಯ ಕಸರತ್ತು ಹೇಗಿದೆ ಗೊತ್ತಾ..!

ದಂಡುಪಾಳ್ಯದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಸಂಜನಾ, ಈಗಿನ ತಮ್ಮ ‘ಡ್ರೀಮ್ ರೋಲ್’ಗಾಗಿ ಬಹಳಷ್ಟು ಕಸರತ್ತು ಮಾಡುತ್ತಿದ್ದಾರೆ. ಮಹಾರಾಣಿ ಮಹಧಾತ್ರಿ ಯಾಗಿ ತೆರೆಯ ಮೇಲೆ ಮಿಂಚಲು ಹೊರಟಿರುವ ಸಂಜನಾ, ಈ ಪಾತ್ರಕ್ಕಾಗಿಯೇ ಕತ್ತಿ ವರಸೆ, ಕುದುರೆ ಸವಾರಿ ಯ ವಿಶೇಷ ತರಬೇತಿ ಯನ್ನು ಪಡೆದಿದ್ದಾರೆ.

ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಈಗ “ಸ್ವರ್ಣಖಡ್ಗಂ” ನ ಯೋಧ ರಾಜಕುಮಾರಿ !

ಈ ಮಹಿಳಾ ಪ್ರಧಾನ ಪಾತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಸಂಜನಾ, ದಿನನಿತ್ಯ ಬೆಳಿಗ್ಗೆ 3.30 ಕ್ಕೆ ಎದ್ದು ಸುಮಾರು ಒಂದೂವರೆ ಫಂಟೆಗಳ ಹೈ ಇಂಟೆಂಸಿಟೀ ವರ್ಕ್ ಔಟ್ ಮಾಡಿ, ನಂತರ ಸುಮಾರು ಎರಡೂವರೆ ಘಂಟೆಗಳ ಕಾಲ ಪಾತ್ರಕ್ಕಾಗಿ ರೆಡಿಯಾಗುತ್ತಾ ರಂತೆ.

ಮಹದಾತ್ರಿ ಸಂಜನಾ

ಸುಮಾರು 12-14 ತಾಸುಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ತಮ್ಮ ಪಾತ್ರಕ್ಕಾಗಿ 5-6 ಕೆ.ಜಿ  ತೂಕದ ಕಾಸ್ಟ್ಯೂಮ್ ಧರಿಸುತ್ತಿದ್ದಾರೆ. ಇನ್ನು ಬಾಹುಬಲಿ ಚಿತ್ರದ ವಸ್ತ್ರ ವಿನ್ಯಾಸಕರೇ  ಇಲ್ಲೂ ಕೆಲಸ ಮಾಡುತ್ತಿದ್ದು. ಮಹಾರಾಣಿ ಮಹಧಾತ್ರಿಯ ಲುಕ್ ಬಾಹುಬಲಿಯ ತುಣುಕು ಗಳನ್ನ ನೆನಪಿಸುತ್ತದೆ. ಸೀರಿಯಲ್ ನ ಪ್ರಮೋ ದಲ್ಲಿ ಶ್ವೇತ ಹಂಸದಂತೆ ಒಮ್ಮೆ ಕಣ್ಮನ ಸೆಳೆದರೆ, ಮತ್ತೊಮ್ಮೆ ಯೋಧರಾಣಿಯ ಖಡಕ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ ಸುಂದರಿ ಸಂಜನಾ.

“ಮಹಾರಾಣಿ ಮಹಧಾತ್ರಿ”ಯಾಗಿ ಮಿಂಚಲು ಹೊರಟಿರುವ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾರ ” ಫಿಟ್ನೆಸ್ ಸೀಕ್ರೇಟ್” ನಮ್ಮ ಮುಂದಿನ ಸಂಚಿಕೆಯಲ್ಲಿ ತಪ್ಪದೇ ಓದಿ. 

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಉಪೇಂದ್ರ UI ಸಿನೆಮಾ | ಇತಿಹಾಸ ನಿರ್ಮಿಸಲು ಸಜ್ಜು ; ಹಂಗೇರಿಯಲ್ಲಿ ಮ್ಯೂಸಿಕ್..!

Published

on

“UI” ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ. ಈ ಅದ್ಭುತ ಸಾಧನೆಯು ತನ್ನ ಪ್ರೇಕ್ಷಕರಿಗೆ ಸಾಟಿಯಿಲ್ಲದ ಶ್ರವಣೇಂದ್ರಿಯ ಅನುಭವವನ್ನು ನೀಡುವ ಚಿತ್ರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

“UI” ಗೆ ಹಿನ್ನೆಲೆ ಸಂಗೀತವನ್ನು ಹೆಸರಾಂತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ರಚಿಸುತ್ತಿದ್ದಾರೆ. ಯುರೋಪ್‌ನ ವಿಶ್ವ-ದರ್ಜೆಯ ಬುಡಾಪೆಸ್ಟ್ ಆರ್ಕೆಸ್ಟ್ರಾದೊಂದಿಗಿನ ಅವರ ಸಹಯೋಗವು ಅದರ ಅಸಾಧಾರಣ ಸಂಗೀತ ಪರಾಕ್ರಮ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ, ಇದು ಮಹಾಕಾವ್ಯ ಮತ್ತು ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್ ಅನ್ನು ನೀಡಲು ಹೊಂದಿಸಲಾಗಿದೆ. ಈ ಐತಿಹಾಸಿಕ ಸಹಯೋಗವು ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೊಸ ಮಾನದಂಡವನ್ನು ಹೊಂದಿಸುತ್ತದೆ, ಸಿನಿಮಾ ಸಂಗೀತದ ಗಡಿಗಳನ್ನು ತಳ್ಳುವ ನಮ್ಮ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ.

“UI” ಅನ್ನು ಉಪೇಂದ್ರ ಅವರು ನಿರ್ದೇಶಿಸಿದ್ದಾರೆ, ಅವರ ದೂರದೃಷ್ಟಿಯ ವಿಧಾನವು ಕಥೆ ಹೇಳುವಿಕೆ ಮತ್ತು ಚಲನಚಿತ್ರ ತಯಾರಿಕೆಯಲ್ಲಿ ಸತತವಾಗಿ ಹೊದಿಕೆಯನ್ನು ತಳ್ಳಿದೆ. ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣದ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಮಟ್ಟದ ಸಿನಿಮೀಯ ಶ್ರೇಷ್ಠತೆಯನ್ನು ತರುವ ಭರವಸೆಯನ್ನು ನೀಡುತ್ತದೆ. “ಸರಿಲೇರು ನೀಕೆವ್ವರು,” “ವಿಕ್ರಾಂತ್ ರೋನಾ,” “ಕೆಜಿಎಫ್ – 2,” ಮತ್ತು “ಸಲಾರ್” ನಂತಹ ಅಗ್ರ ಭಾರತೀಯ ಚಲನಚಿತ್ರಗಳು ಈ ಹಿಂದೆ ಬುಡಾಪೆಸ್ಟ್‌ನಲ್ಲಿ ತಮ್ಮ ಸ್ಕೋರ್‌ಗಳನ್ನು ರೆಕಾರ್ಡ್ ಮಾಡಿದ್ದರೆ, “ಯುಐ” ಪೂರ್ಣ 90-ಪೀಸ್ ಅನ್ನು ಬಳಸಿಕೊಳ್ಳುವಲ್ಲಿ ಮೊದಲಿಗರಾಗಿ ನಿಂತಿದೆ. ಅದರ ಹಿನ್ನೆಲೆ ಸ್ಕೋರ್‌ಗಾಗಿ ಆರ್ಕೆಸ್ಟ್ರಾ. ಈ ಸಾಧನೆಯು ಚಲನಚಿತ್ರದ ನವೀನ ವಿಧಾನವನ್ನು ಒತ್ತಿಹೇಳುತ್ತದೆ ಮತ್ತು ಪ್ರೇಕ್ಷಕರಿಗೆ ನಿಜವಾದ ಮಹಾಕಾವ್ಯ ಮತ್ತು ತಲ್ಲೀನಗೊಳಿಸುವ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

“UI” ನ ಇಡೀ ಪ್ರಪಂಚದಾದ್ಯಂತದ ಅಭಿಮಾನಿಗಳೊಂದಿಗೆ ಈ ಅಸಾಮಾನ್ಯ ಸಂಗೀತ ಪ್ರಯಾಣವನ್ನು ಹಂಚಿಕೊಳ್ಳಲು ಎದುರು ನೋಡುತ್ತಿದೆ. “UI” ಬಿಡುಗಡೆಯ ಕುರಿತು ಹೆಚ್ಚಿನ ನವೀಕರಣಗಳಿಗಾಗಿ ಟ್ಯೂನ್ ಮಾಡಿ ಮತ್ತು ಭಾರತೀಯ ಚಿತ್ರರಂಗದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ಭರವಸೆ ನೀಡುವ ಚಲನಚಿತ್ರವನ್ನು ಅನುಭವಿಸಲು ಸಿದ್ಧರಾಗಿ.

“UI” ಮುಂಬರುವ ಕನ್ನಡ ಚಲನಚಿತ್ರವಾಗಿದ್ದು, ಅದರ ಬಲವಾದ ಕಥೆ, ಬೆರಗುಗೊಳಿಸುವ ದೃಶ್ಯಗಳು ಮತ್ತು ಅದ್ಭುತ ಸಂಗೀತದ ಸ್ಕೋರ್‌ನೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣದ ದೂರದೃಷ್ಟಿಯ ಉಪೇಂದ್ರ ನಿರ್ದೇಶಿಸಿದ್ದಾರೆ ಮತ್ತು ಮೆಚ್ಚುಗೆ ಪಡೆದ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತವನ್ನು ಒಳಗೊಂಡಿರುವ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೆಗ್ಗುರುತಾಗಲಿದೆ.

ಮಾಹಿತಿ ಕೃಪೆ : ciniloka.co.in

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜೂನಿಯರ್ ಅಮಿತಾಬ್ ಬಚ್ಚನ್ ನಿಧನ

Published

on

ಸುದ್ದಿದಿನ ಡೆಸ್ಕ್ : ಜೂನಿಯರ್ ಅಮಿತಾಬ್ ಬಚ್ಚನ್, ಜನಪ್ರಿಯ ಕಿರುತೆರೆ ನಟ ಫಿರೋಜ್ ಖಾನ್‌ ಅವರು ಉತ್ತರ ಪ್ರದೇಶದ ಬದೌನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ‘ಭಾಬಿಜಿ ಘರ್ ಪರ್ ಹೈ!’, ‘ಜೀಜಾ ಜಿ ಛತ್ ಪರ್ ಹೈ’, ‘ಸಾಹೇಬ್ ಬೀಬಿ ಔರ್ ಬಾಸ್‌’, ‘ಹಪ್ಪು ಕಿ ಉಲ್ತಾನ್ ಪಲ್ತಾನ್’, ಮತ್ತು ‘ಶಕ್ತಿಮಾನ್’ ಚಿತ್ರಗಳಲ್ಲಿ ಅಭಿನಯಿಸಿದ್ದರು. ಫಿರೋಜ್ ಖಾನ್ ಅವರು ಅಮಿತಾಬ್ ಬಚ್ಚನ್ ಅವರ ಮಿಮಿಕ್ರಿಗೂ ಹೆಸರುವಾಸಿಯಾಗಿದ್ದರು.

ಗಾಯಕ ಅದ್ವಾನ್ ಸಾಮಿ ಅವರ ‘ಥೋಡಿ ಸಿ ತು ಲಿಫ್ಟ್ ಕರ ದೇ’ ಹಾಡಿನಲ್ಲಿ ಭಾಗವಾಗಿದ್ದರು. ಬಾಲಿವುಡ್ ಚಿತ್ರರಂಗ ಇವರಿಗೆ ತೀವ್ರ ಸಂತಾಪಗಳನ್ನು ಸೂಚಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಪ್ರಮುಖ ಸುದ್ದಿಗಳು

  1. ದೇಶಾದ್ಯಂತ 5 ಹಂತಗಳ ಚುನಾವಣೆ ಪೂರ್ಣಗೊಂಡಿದ್ದು, ಇನ್ನು ಎರಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. 6ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
  2. ಹರಿಯಾಣದಲ್ಲಿಂದು ವಿವಿಧ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ, ಮಹೇಂದ್ರಗರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಹರಿಯಾಣದ ಸಿರ್‍ಸಾದಲ್ಲಿ ರೋಡ್ ಶೋ ನಡೆಸಿದರು.
  3. ಸಂತಾಲಿ ಲೇಖಕ ಪಂಡಿತ್ ರಘುನಾಥ್ ಮುರ್ಮು ಅವರ ಜನ್ಮದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿರುವ ಅವರು, ಓಲ್ ಚಿಕಿ ಲಿಪಿಯನ್ನು ಅಭಿವೃದ್ಧಿಪಡಿಸುವ ಮೂಲಕ ಸಂತಾಲಿ ಭಾಷೆಗೆ ಪಂಡಿತ್ ರಘುನಾಥ್ ಮುರ್ಮು ಹೊಸ ಗುರುತು ನೀಡಿದ್ದಾರೆ ಎಂದು ಹೇಳಿದರು.
  4. ಭಗವಾನ್ ಬುದ್ಧನ ಜನ್ಮದಿನದ ಅಂಗವಾಗಿ ಬುದ್ಧ ಪೂರ್ಣಿಮೆಯನ್ನು ಪ್ರಪಂಚದಾದ್ಯಂತ ವಿವಿಧ ಭಾಗಗಳಲ್ಲಿ ಇಂದು ಆಚರಿಸಲಾಗುತ್ತಿದೆ. ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಇದು ಪ್ರಮುಖ ಹಬ್ಬವಾಗಿದೆ.
  5. ಜುಲೈ 4 ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ. ಚುನಾವಣೆ ಘೋಷಣೆಯಾಗುವ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ನಿರೀಕ್ಷೆಗಿಂತ ಹಲವಾರು ತಿಂಗಳುಗಳ ಮುಂಚಿತವಾಗಿಯೇ ರಾಷ್ಟ್ರೀಯ ಚುನಾವಣೆಯನ್ನು ಕರೆದಿದ್ದಾರೆ.
  6. ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.
  7. ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಐಪಿಎಲ್ ಟಿ-20 ಟೂರ್ನಿಯ 2ನೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡ ಮೊದಲನೇ ಕ್ವಾಲಿಫೈಯರ್ ಪಂದ್ಯ ಸೋತ ಹೈದರಾಬಾದ್ ತಂಡದೊಂದಿಗೆ ಫೈನಲ್ ಪ್ರವೇಶಿಸಲು ಸೆಣಸಾಟ ನಡೆಸಲಿದೆ.
  8. ಇಂದು ಬುದ್ಧ ಪೌರ್ಣಿಮೆಯನ್ನು, ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ, ಕರುಣೆ ಮತ್ತು ಶಾಂತಿಯ ಮಂತ್ರವನ್ನು ಸಾರಿದ ಮಹಾಪುರುಷ ಗೌತಮ ಬುದ್ಧನನ್ನು ನೆನೆಯುತ್ತಾ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
  9. ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ 5 ಲಕ್ಷ 35 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಒಟ್ಟು 8 ಲಕ್ಷದ 98 ಸಾವಿರ ಕ್ವಿಂಟಾಲ್ ಬೀಜಗಳ ಪೂರೈಕೆಗೆ, ವ್ಯವಸ್ಥೆ ಮಾಡಲಾಗಿದೆ ಎಂದು, ಸಾಮಾಜಿಕ ಜಾಲತಾಣದಲ್ಲಿ, ಕೃಷಿ ಖಾತೆ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
  10. ಗದಗ ಹಾಗೂ ಹಾವೇರಿ ಜಿಲ್ಲೆಗಳ ವ್ಯಾಪ್ತಿಯ, ವಿವಿಧ ಗ್ರಾಮಗಳಿಗೆ, ಕುಡಿಯುವ ನೀರು ಪೂರೈಸಲು, ಭದ್ರಾ ಜಲಾಶಯದಿಂದ, ತುಂಗಭದ್ರಾ ನದಿಗೆ, ಇದೇ 28ರ ವರೆಗೆ ಪ್ರತಿ ದಿನ, 2 ಸಾವಿರ ಕ್ಯುಸೆಕ್‌ಗಳಂತೆ ಒಟ್ಟು, 11 ಸಾವಿರದ 574 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು, ಭದ್ರಾ ಯೋಜನಾ ವೃತ್ತದ, ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
  11. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡ ಬಳ್ಳಾಪುರದ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ, ದ್ರೌಪದಿದೇವಿ ಕರಗ ಮಹೋತ್ಸವ, ಇಂದು ರಾತ್ರಿ ಜರುಗಲಿದೆ.
  12. ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 42 ಅಂಕ ಏರಿಕೆಯೊಂದಿಗೆ 74 ಸಾವಿರದ 263 ರಲ್ಲಿ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ 20 ಅಂಕ ಏರಿಕೆಯ ನಂತರ 22 ಸಾವಿರದ 618 ರಲ್ಲಿ ವಹಿವಾಟು ನಡೆಸಿದೆ.
  13. ಬೆಲ್ಜಿಯಂನ ಆಂಟ್‌ವರ್ಪ್ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

ರುದ್ರಪ್ಪ ಹನಗವಾಡಿ ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ...

ದಿನದ ಸುದ್ದಿ15 hours ago

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ...

ದಿನದ ಸುದ್ದಿ16 hours ago

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು...

ಕ್ರೀಡೆ22 hours ago

ಮಧ್ಯಾಹ್ನದ ಪ್ರಮುಖ ಸುದ್ದಿಗಳು 

ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು  ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ...

ದಿನದ ಸುದ್ದಿ2 days ago

ಈ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆ

ಸುದ್ದಿದಿನ ಡೆಸ್ಕ್ ; ರಾಜ್ಯದ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ...

ದಿನದ ಸುದ್ದಿ2 days ago

ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮ ತಾಣ : ಡಿಸಿಎಂ ಡಿ.ಕೆ.ಶಿವಕುಮಾರ್

ಸುದ್ದಿದಿನ ಡೆಸ್ಕ್ : ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮ ತಾಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ...

ದಿನದ ಸುದ್ದಿ2 days ago

ಉಪೇಂದ್ರ UI ಸಿನೆಮಾ | ಇತಿಹಾಸ ನಿರ್ಮಿಸಲು ಸಜ್ಜು ; ಹಂಗೇರಿಯಲ್ಲಿ ಮ್ಯೂಸಿಕ್..!

“UI” ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ. ಈ ಅದ್ಭುತ ಸಾಧನೆಯು...

ದಿನದ ಸುದ್ದಿ2 days ago

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ಕಾರ ಸಿದ್ದ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ ಡೆಸ್ಕ್ : ಲೋಕಸಭೆ ಚುನಾವಣೆ ಫಲಿತಾಂಶ ಹೊರಬಂದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ...

ದಿನದ ಸುದ್ದಿ2 days ago

ವಿಧಾನ ಪರಿಷತ್ ಚುನಾವಣೆ | ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಗೆ ಸೂಚನೆ : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

ಸುದ್ದಿದಿನ,ದಾವಣಗೆರೆ : ರಾಜ್ಯ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ತ ಶಿಕ್ಷಕರ ಹಾಗೂ ಪದವೀಧರರ...

ದಿನದ ಸುದ್ದಿ2 days ago

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಭಾರತ ಸರ್ಕಾರದ ಬುಡಕಟ್ಟು ವುವಹಾರಗಳ ಸಚಿವಾಲಯವು 2024-25ನೇ ಸಾಲಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು....

Trending