ಸಿನಿ ಸುದ್ದಿ
EXCLUSIVE INTERVIEW | ಸ್ಯಾಂಡಲ್ ವುಡ್ ಬ್ಯೂಟಿ ; ‘ಸ್ವರ್ಣಖಡ್ಗಂ’ನ ಮಹಧಾತ್ರಿ ಸಂಜನಾ ಗಲ್ರಾಣಿ

ಬಾಹುಬಲಿ ಚಿತ್ರದ ನಿರ್ಮಾಪಕರಿಂದ ಮತ್ತೊಂದು ಅದ್ದೂರೀ ಕೊಡುಗೆ; ತೆರೆಯ ಮೇಲೆ ಮಹರಾಣಿ ಮಹಧಾತ್ರಿಯಾಗಿ ಮಿಂಚಲಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಗಲ್ರಾಣಿ
ಬಾಹುಬಲಿ ಚಿತ್ರದ ನಿರ್ಮಾಪಕರು, ಹಾಗೂ ಆರ್ಕಾ ಮೀಡಿಯಾ ವರ್ಕ್ಸ್ ಅವರ ಚಿಕ್ಕ ಪರದೆಯ ಮೇಲೆ ಬಹು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ “ಸ್ವರ್ಣ ಖಡ್ಗಂ”. ಭಾರತೀಯ ಟಿ.ವಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹದಿನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ತೆಲುಗಿನ ಖ್ಯಾತ ಸೀರಿಯಲ್ ನಿರ್ದೇಶಕರಾದ ಯತ ಸತ್ಯನಾರಾಯಣ ರವರು ಇದನ್ನು ನಿರ್ದೇಶಿಸಿದ್ದಾರೆ. ಜುಲೈ ಆರರಿಂದ ಪ್ರಾರಂಭವಾಗುತ್ತಿರುವ ಈ ದೊಡ್ಡ ಪ್ರಾಜೆಕ್ಟ್, ಪೌರಾಣಿಕ ಕಥಾ ಹದರ ಒಳಗೊಂಡಿದ್ದು, ಬಾಹುಬಲಿ ಚಿತ್ರದ ತಂತ್ರಜ್ಞರೇ ಇಲ್ಲೂ ಕೆಲಸ ಮಾಡಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.
ಇದು ಸಂಜನಾ ‘ಡ್ರೀಮ್ ರೋಲ್ ‘
ಬಾಹುಬಲಿ ಚಿತ್ರ ನೋಡಿದ ಪ್ರತಿಯೊಬ್ಬ ನಟಿಯೂ, ನಾನು ಆ ಚಿತ್ರದ ಒಂದು ಭಾಗವಾಗಿರ ಬೇಕಿತ್ತು ಎಂದು ಮನಸ್ಸಲೇ ನೆನೆದಿದ್ದುಂಟು. ಆ ಸೌಭಾಗ್ಯ ಈಗ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾರ ಪಾಲಾಗಿದೆ.
‘ಸ್ವರ್ಣ ಖಡ್ಗಂ’ “ನನ್ನಒಂಬತ್ತು ವರ್ಷಗಳ ಸಿನಿ ವೃತ್ತಿಯಲ್ಲಿ ಯೇ ಇದು ಮಹತ್ವಾಕಾಂಕ್ಷೆ ಯ ಪಾತ್ರ. ಯಾವುದೇ ನಟಿಗಾದರೂ ಒಮ್ಮೆ ಯಾದರೂ ಇಂತಹ ಮಹಿಳಾ ಪ್ರಧಾನ ಪಾತ್ರ ದಲ್ಲಿ ಮಿಂಚುವ ಆಸೆ ಇದ್ದೇ ಇರುತ್ತದೆ. ಆ ಸೌಭಾಗ್ಯ ನನ್ನದಾಗಿದೆ ಎನ್ನುತ್ತಾರೆ ಸ್ಯಾಂಡಲ್ವುಡ್ ಬ್ಯೂಟಿ ಸಂಜನಾ.
ಸದ್ಯ ಇದೇ ಸೀರಿಯಲ್ ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ‘ಸುದ್ದಿದಿನ‘ ಕ್ಕೆ ನೀಡಿರುವ Exclusive Interview ನ ಸಂಪೂರ್ಣ ಡೀಟೇಲ್ ಇಲ್ಲಿದೆ.
ಯೋಧ ರಾಜಕುಮಾರಿಯ ಕಸರತ್ತು ಹೇಗಿದೆ ಗೊತ್ತಾ..!
ದಂಡುಪಾಳ್ಯದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಸಂಜನಾ, ಈಗಿನ ತಮ್ಮ ‘ಡ್ರೀಮ್ ರೋಲ್’ಗಾಗಿ ಬಹಳಷ್ಟು ಕಸರತ್ತು ಮಾಡುತ್ತಿದ್ದಾರೆ. ಮಹಾರಾಣಿ ಮಹಧಾತ್ರಿ ಯಾಗಿ ತೆರೆಯ ಮೇಲೆ ಮಿಂಚಲು ಹೊರಟಿರುವ ಸಂಜನಾ, ಈ ಪಾತ್ರಕ್ಕಾಗಿಯೇ ಕತ್ತಿ ವರಸೆ, ಕುದುರೆ ಸವಾರಿ ಯ ವಿಶೇಷ ತರಬೇತಿ ಯನ್ನು ಪಡೆದಿದ್ದಾರೆ.
ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಈಗ “ಸ್ವರ್ಣಖಡ್ಗಂ” ನ ಯೋಧ ರಾಜಕುಮಾರಿ !
ಈ ಮಹಿಳಾ ಪ್ರಧಾನ ಪಾತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಸಂಜನಾ, ದಿನನಿತ್ಯ ಬೆಳಿಗ್ಗೆ 3.30 ಕ್ಕೆ ಎದ್ದು ಸುಮಾರು ಒಂದೂವರೆ ಫಂಟೆಗಳ ಹೈ ಇಂಟೆಂಸಿಟೀ ವರ್ಕ್ ಔಟ್ ಮಾಡಿ, ನಂತರ ಸುಮಾರು ಎರಡೂವರೆ ಘಂಟೆಗಳ ಕಾಲ ಪಾತ್ರಕ್ಕಾಗಿ ರೆಡಿಯಾಗುತ್ತಾ ರಂತೆ.
ಸುಮಾರು 12-14 ತಾಸುಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ತಮ್ಮ ಪಾತ್ರಕ್ಕಾಗಿ 5-6 ಕೆ.ಜಿ ತೂಕದ ಕಾಸ್ಟ್ಯೂಮ್ ಧರಿಸುತ್ತಿದ್ದಾರೆ. ಇನ್ನು ಬಾಹುಬಲಿ ಚಿತ್ರದ ವಸ್ತ್ರ ವಿನ್ಯಾಸಕರೇ ಇಲ್ಲೂ ಕೆಲಸ ಮಾಡುತ್ತಿದ್ದು. ಮಹಾರಾಣಿ ಮಹಧಾತ್ರಿಯ ಲುಕ್ ಬಾಹುಬಲಿಯ ತುಣುಕು ಗಳನ್ನ ನೆನಪಿಸುತ್ತದೆ. ಸೀರಿಯಲ್ ನ ಪ್ರಮೋ ದಲ್ಲಿ ಶ್ವೇತ ಹಂಸದಂತೆ ಒಮ್ಮೆ ಕಣ್ಮನ ಸೆಳೆದರೆ, ಮತ್ತೊಮ್ಮೆ ಯೋಧರಾಣಿಯ ಖಡಕ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ ಸುಂದರಿ ಸಂಜನಾ.
“ಮಹಾರಾಣಿ ಮಹಧಾತ್ರಿ”ಯಾಗಿ ಮಿಂಚಲು ಹೊರಟಿರುವ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾರ ” ಫಿಟ್ನೆಸ್ ಸೀಕ್ರೇಟ್” ನಮ್ಮ ಮುಂದಿನ ಸಂಚಿಕೆಯಲ್ಲಿ ತಪ್ಪದೇ ಓದಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ4 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ7 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು