ದಿನದ ಸುದ್ದಿ
ಜಗತ್ತಿನಲ್ಲಿ ಯಾವ ದೇವರ ಪವಾಡವು ನಡೆಯುವುದಿಲ್ಲ..!
![](https://suddidina.com/wp-content/uploads/2018/09/God-suddidina.jpg)
ಜಗತ್ತಿನಲ್ಲಿ ಯಾವ ದೇವರ ಪವಾಡವುನಡೆಯುವುದಿಲ್ಲ, ಒಂದುವೇಳೆ ಅಂತಹ ಪವಾಡಗಳು ನಡೆದಿದ್ದರೆ ಅದರಲ್ಲಿ ಅಡಗಿರುವುದು ವೈಜ್ಞಾನಿಕ ತಂತ್ರಜ್ಞಾನ, ನಾವು ಇದನ್ನೆಲ್ಲ ನಂಭಿ ಮೂರ್ಖರಾಗುವ ಬದಲಿಗೆ ವೈಜ್ಞಾನಿಕ ಸತ್ಯವನ್ನು ಅರಿಯೋಣ, ದೇವರು ಎಂಬುದು ಕೇವಲ ಮನುವಾದಿ ಸೃಷ್ಟಿ, ಜಗತ್ತನ್ನು ಸೃಷ್ಟಿಸಿದ ದೇವರು ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶದಲ್ಲೂ ಇಲ್ಲ, ಭಾರತದ ಹಿಂದೂಗಳನ್ನು ಮುಕ್ಕೋಟಿ ದೇವತೆಗಳು ರಕ್ಷಿಸಿದರೆ ಇನ್ನಿತರೆ ಧರ್ಮಿಯರನ್ನ, ಜಗತ್ತಿನ ಇತರೆ ದೇಶವಾಸಿಗಳನ್ನ ರಕ್ಷಿಸುವವರು ಯಾರು? ಅಲ್ಲಿ ಮಳೆಸುರಿಸುವವರು ಯಾರು? ಪ್ರಳಯ ಸೃಷ್ಟಿಸುವವರು ಯಾರು?
ಸೂರ್ಯ,ಚಂದ್ರ,ಗಾಳಿ,ನೀರು,ನಕ್ಷತ್ರ,ಸೃಷ್ಟಿಲಯವನ್ನ ನಿಯಂತ್ರಿಸುವವರಾರು ಯಾರು? ಹಿಂದೂಗಳಿಗೆ ಭವಿಷ್ಯ ಹೇಳಲು, ವಾಸ್ತು ಸರಿಮಾಡಲು ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರಹೇಳುವವರು,ಜ್ಯೋತಿಷಿಗಳು,ಪೂಜಾರಿಗಳಿದ್ದಾರೆ ಇಂತವರ್ಯರು ಬೇರೆ ದೇಶಗಳಲ್ಲಿಲ್ಲ ಯಾಕೆ? ಅವರು ಕಾಯಿಲೆ ಬಂದಾಗ ಮೊದಲು ವೈದ್ಯರಬಳಿ ಹೋಗುತ್ತಾರೆ ನಾವು ದೇವರಬಳಿ ಹೋಗುತ್ತೇವೆ, ಕಾಲರ,ಪ್ಲೇಗು ಬಂದರೆ ಅವರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ನಾವು ಅವುಗಳನ್ನೇ ದೇವರೆಂದು ಪೂಜಿಸುತ್ತೇವೆ, ಅವರು ಮಳೆಗಾಗಿ ಕಾಡನ್ನು ಬೆಳೆಸಿದರೆ ನಾವು ಕಪ್ಪೆ,ಕತ್ತೆಗಳು ಮದುವೆ ಮಾಡುತ್ತೇವೆ, ಎಲ್ಲೋ ನಮ್ಮ ನಿಮ್ಮಂತೆ ಜೀವನೋಪಾಯಕ್ಕೆ ಕೆಲಸ ಮಾಡುವವನಿಗೆ ಅವಕಾಶ ಸಿಕ್ಕು ನಟನಾಗುತ್ತಾನೆ ಅವನಲ್ಲಿರುವ ಕಲೆಯನ್ನು ಗೌರವಿಸಬೇಕು, ಪ್ರೋತ್ಸಾಹಿಸಬೇಕು ಅದನ್ನು ಬಿಟ್ಟು ನಾವು ಪೂಜಿಸುತ್ತೇವೆ ನಮ್ಮ ಶ್ರಮದಹಣನೀಡಿ ನಾವೇ ಬೆಳಸಿದವನನ್ನ ನೋಡಲು ಕ್ಯೊ ನಿಲ್ಲುತ್ತೇವೆ , ದೇವರು ಅಷ್ಟೇ,ಎಲ್ಲಿಯೋ ಇದ್ದ ಕಲ್ಲನ್ನು ತಂದು ಗುಡಿಕಟ್ಟಿ ಪೂಜಿಸುತ್ತೇವೆ ನಾವೇ ಕಟ್ಟಿದ ಗುಡಿಗಳು ನಾವೇ ಸೃಷ್ಟಿಸಿದ ದೇವರುಗಳನ್ನು ಕಂಡು ಭಯಬೀಳುತ್ತೇವೆ ಯಾಕೆ?
ಸೂರ್ಯ ಚಂದ್ರ ಗ್ರಹಗಳು ಎಂದು ದೃಢಪಟ್ಟಿದ್ದರೂ ನಮ್ಮಲ್ಲಿರುವ ಮೂಢನಂಬಿಕೆ ನಮ್ಮಿಂದ ಹೋಗಲಿಲ್ಲ ಸಮಾಜಕ್ಕೆ ವೈಜ್ಞಾನಿಕ ಸತ್ಯವನ್ನು ತಿಳಿಸಬೇಕಿದ್ದ ವಿದ್ಯಾವಂತರು ಇಂಜಿನಿಯರ್ , ಡಾಕ್ಟರ್, ವಿಜ್ಞಾನಿಗಳು, ನ್ಯಾಯಾಧೀಶರು ಪರೋಕ್ಷವಾಗಿ ಪ್ರತ್ಯಕ್ಷವಾಗಿ ಈ ಸಮಾಜವನ್ನು ಮೌಢ್ಯಕ್ಕೆ ತಳ್ಳುವ ತಂತ್ರಗಾರಿಕೆ ನಡೆಸುತಿದ್ದಾರೆ ಯಾಕೆ? ಇದರಿಂದ ದೇಶಕ್ಕಾಗಲಿ, ದೇಶವಾಸಿಗಳಿಗಾಗಲಿ ಯಾವಲಾಭವಿದೆ, ಯಾತಕ್ಕಾಗಿ ಈ ಸಮಾಜವನ್ನು ಮನುವಾದಿಗಳು ದೇವರುಗಳ ಹೆಸರಿನಲ್ಲಿ ನಿಯಂತ್ರಣ ಮಾಡುತ್ತಾರೆ? ದೆವ್ವಗಳ ಹೆಸರಿನಲ್ಲಿ ಭಯಪಡಿಸುತ್ತಾರೆ? ಇದರಿಂದ ಪೂಜಾರಿಗಳಿಗೆ ಲಾಭವಿದೆ, ಜ್ಯೋತಿಷಿಗಳಿಗೆ ಲಾಭವಿದೆ, ಯಜ್ಞಯಾಗಮಾಡುವ ಜನಗಳಿಗೆ ಲಾಭವಿದೆ ಇವರೆಲ್ಲಾ ಶೇಕಡಾ 99,9% ಬ್ರಾಹ್ಮಣ ಸಮುದಾಯದಲ್ಲಿ ಸಿಗುತ್ತಾರೆ ಸಮಾಜವನ್ನು ಮೌಢ್ಯಕ್ಕೆ ತಳ್ಳಿ ದರೆ, ಅಜ್ಞಾನದಲ್ಲಿರಿಸಿದರೆ ಲಾಭವಾಗುವುದು ಯಾವಸಮುದಾಯಕ್ಕೆ ಎಂದು ಹೇಳಲು ಇದಕ್ಕಿಂತಲೂ ಹೆಚ್ಚಿನ ಮಾಹಿತಿ ಬೇಕಿಲ್ಲ.
(-ಲೇಖನ : ಹೆಚ್.ಕೆ.ಕೃಷ್ಣಅರಕೆರೆ
ಸಾಮಾಜಿಕ ಕಾರ್ಯಕರ್ತ
ಹೊನ್ನಾಳಿ)
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ4 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ7 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!