Connect with us

ದಿನದ ಸುದ್ದಿ

ಅನುಚ್ಛೇದ 370 ರದ್ದು | ಒಂದು ವಿಶ್ಲೇಷಣೆ : ಮಿಸ್ ಮಾಡ್ದೆ ಈ ಲೇಖನ ಓದಿ..!

Published

on

ನುಚ್ಛೇದ 370 ರದ್ದು ಪಡಿಸಿರುವುದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಕೊನೆಯಿಲ್ಲದ್ದು. ನನಗೆ ತಿಳಿದಿರುವಷ್ಟು ಮಟ್ಟಿಗೆ ಅನುಚ್ಛೇದ 370 ಹಾಗೂ 35A ರದ್ದಾದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ಭಾರತದೊಂದಿಗಿರುವ ಸಂವಿಧಾನಾತ್ಮಕ ಸಂಬಂಧ ಕಡಿದು ಹೋಗುವುದಿಲ್ಲ. ಯಾಕೆಂದರೆ ಅನುಚ್ಛೇದ 370 ಬರುವ ಮೊದಲೇ ಜಮ್ಮು-ಕಾಶ್ಮೀರ ಸ್ವತಂತ್ರ ಭಾರತದ ಭಾಗವೆಂದು ಗುರುತಿಸಲ್ಪಟ್ಟಿತ್ತು. ನೆನಪಿರಲಿ ಸ್ವಾತಂತ್ರ್ಯ ನಂತರ ದೇಶದಲ್ಲಿದ್ದ ರಾಜ-ಮಹಾರಾಜರುಗಳ ಸಂಸ್ಥಾನ, ರಾಜ್ಯಗಳೆಲ್ಲಾ ಭಾರತದಲ್ಲಿ ವಿಲೀನವಾದ ಮಾದರಿಯಲ್ಲೇ ಜಮ್ಮು-ಕಾಶ್ಮೀರ ಕೂಡಾ ವಿಲೀನವಾಗಿತ್ತು. ಮೈಸೂರು ಸಂಸ್ಥಾನ, ಮಣಿಪುರ, ತೆಹ್ರಿ ಘರ್ವಾಲ್, ಉದಯಪುರ ಮುಂತಾದ 140 ಸಂಸ್ಥಾನಗಳು ಕೂಡಾ ಭಾರತ ಸ್ವಾತಂತ್ರ್ಯ ಸಿಕ್ಕ ತಕ್ಷಣ ಭಾರತದ ರಾಜ್ಯಗಳಾಗಲಿಲ್ಲ. ಅದಕ್ಕಾಗಿ ಸ್ವತಂತ್ರ ಭಾರತದೊಂದಿಗೆ ಈ ಸಂಸ್ಥಾನಗಳು Instrument of Accession (ವಿಲೀನ ಪತ್ರ)ಗಳಿಗೆ ಸಹಿ ಮಾಡಿ, ಸ್ವತಂತ್ರ ಭಾರತವನ್ನು ಅಧಿಕೃತವಾಗಿ ಸೇರಿದ್ದವು. ಈ ಎಲ್ಲಾ ವಿಲೀನ ಪತ್ರಗಳು ಬಹುಷ ಇವತ್ತೂ ಗೃಹ ಇಲಾಖೆಯ ಕಡತಗಳಲ್ಲಿವೆ.

ದೆಹಲಿಯಲ್ಲಿ ನೆಲೆಸಿರುವ RTI ಕಾರ್ಯಕರ್ತ ಹಾಗೂ ಇತಿಹಾಸ ಸಂಶೋಧಕ ವೆಂಕಟೇಶ ನಾಯಕರು ಇದರ ಬಗ್ಗ್ಗೆ ಕೆಲ ವರುಷಗಳ ಹಿಂದೆ ದೀರ್ಘ ಸಂಶೋಧನೆಯೊಂದನ್ನು ಮಾಡಿ, RTI ಮೂಲಕ ಸ್ವಾತಂತ್ಯ ಸಮಯದಲ್ಲಿ ಸಹಿ ಮಾಡಲಾಗಿದ್ದ ಕೆಲ ವಿಲೀನ ಪತ್ರಗಳ ಪ್ರತಿ ಪಡೆದುಕೊಂಡಿದ್ದರು. ಅವರ ಪ್ರಕಾರ ಜಮ್ಮು-ಕಾಶ್ಮೀರ ಹಾಗೂ ಇತರ 140 ಸಂಸ್ಥಾನಗಳು ಸಹಿ ಮಾಡಿರುವ ವಿಲೀನ ಪತ್ರಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಈ ಎಲ್ಲಾ ಸಂಸ್ಥಾನಗಳು ಮೊದಲು ಕೇವಲ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ನಿರ್ಧಾರಗಳನ್ನು ದೇಶಕ್ಕೆ ಬಿಟ್ಟುಕೊಟ್ಟು, ಉಳಿದೆಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದವು. ವಿಲೀನ ಪತ್ರದೊಟ್ಟಿಗೆ ಹೆಚ್ಚಿನ ಸಂಸ್ಥಾನಗಳು ಭಾರತದೊಂದಿಗೆ ತಾಟಸ್ಥ್ಯ ಒಪ್ಪಂದಗಳನ್ನೂ ಮಾಡಿಕೊಂಡಿದ್ದವು. ಅಂದರೆ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಅಧಿಕಾರಗಳ ಹೊರತು ಬೇರೆ ಯಾವುದೇ ವಿಷಯದಲ್ಲಿ ಭಾರತ ಸರ್ಕಾರ ಈ ಸಂಸ್ಥಾನಗಳ ಮೇಲೆ ತನ್ನ ಹಕ್ಕು ಚಲಾಯಿಸುವುದಿಲ್ಲವೆನ್ನೋದು ಈ ತಾಟಸ್ಥ್ಯ ಒಪ್ಪಂದದ ಹೂರಣವಾಗಿತ್ತು. ಹಾಗಾಗಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಈ ಸಂಸ್ಥಾನಗಳಿಗೆ ಪೂರ್ಣ ಸ್ವಾಯತ್ತತೆ ಇತ್ತು, ಬರೀ ಜಮ್ಮು-ಕಾಶ್ಮೀರಕ್ಕೆ ಮಾತ್ರವಲ್ಲ. ಆದರೆ ಮುಂದೆ ಹೆಚ್ಚಿನ ಸಂಸ್ಥಾನಗಳು ತಮ್ಮ ಸ್ವ-ಇಚ್ಛೆಯಿಂದಲೇ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ವಿಲೀನವಾಗಲು ಒಪ್ಪಂದಕ್ಕೆ ಸಹಿ ಹಾಕಿ ಸ್ವತಂತ್ರ ಭಾರತದ ಪರಿಪೂರ್ಣ ಭಾಗವಾದರು.

ಆದರೆ ಜಮ್ಮು-ಕಾಶ್ಮೀರದ ಅಂದಿನ ಯುವರಾಜ, ರಾಜ್ಯದ ಮಹಾರಾಜ ಹರಿಸಿಂಗ್ ತನಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸಿ, ನವೆಂಬರ್ 25, 1949ರಂದು ಒಂದು ಪ್ರಕಟನೆ ಮಾಡಿ, ಶೀಘ್ರದಲ್ಲೇ ಜಾರಿಯಾಗಲಿದ್ದ ಸಂವಿಧಾನ ಎಷ್ಟು ಹಾಗೂ ಯಾವ ಮಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಯುಕ್ತವಾಗಬಹುದೆಂದು ಘೋಷಿಸಿದರು. ಹೀಗಾಗಯೇ ಅನುಚ್ಛೇದ 370 (ಅಂದು ಅನುಚ್ಛೇದ 309) ಜಾರಿಗೆ ಬಂತು. ಇದೆಲ್ಲಾ ಭಾಷಾವಾರು ರಾಜ್ಯಗಳು ಆಗುವ ಮೊದಲು. ಈ ವಿಲೀನ ಪ್ರಕ್ರಿಯೆಯಿಂದಲೇ ಮುಂದೆ ವಿಂಧ್ಯಾ ಪ್ರದೇಶ, ಮತ್ಸ್ಯ ಒಕ್ಕೂಟ, ಪಟಿಯಾಲಾ ಹಾಗೂ ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟ, ತಿರು-ಕೊಚ್ಚಿ (United State of Travancore and Cochin) ಮುಂತಾದ ದೊಡ್ಡ ಒಕ್ಕೂಟಗಳ ಉದಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂಧರ್ಭದಲ್ಲಿ ಈ ರಾಜ್ಯಗಳ ಒಕ್ಕೂಟಗಳು ರದ್ದಾದವು.

ಹಾಗಾಗಿ ಅನುಚ್ಛೇದ 370 ರದ್ದಾದ ಮಾತ್ರಕ್ಕೆ ಜಮ್ಮು-ಕಾಶ್ಮೀರ ಭಾರತದ ಕೈತಪ್ಪಿ ಹೋಗುವುದಿಲ್ಲ. ಅದು ಇನ್ನೂ ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಯಾಕೆಂದರೆ ಜಮ್ಮು-ಕಾಶ್ಮೀರಕ್ಕೆ ಭಾರತ ಒಕ್ಕೂಟದೊಂದಿಗೆ ಅಧಿಕೃತ ಸಂಬಂಧ ಬೆಸೆದಿದ್ದು ಅನುಚ್ಛೇದ 370ದಿಂದಾಗಿ ಅಲ್ಲ ಬದಲಾಗಿ 1947ರಲ್ಲಿ ಸಹಿ ಮಾಡಿದ Instrument of Accessionನಿಂದಾಗಿ. ಆದರೆ ಅನುಚ್ಛೇದ 370 ರದ್ದಾಗಿರುವುದರಿಂದ ಬಿಜೆಪಿಯವರು, ಸಂಘ ಪರಿವಾರ ಹೇಳುವಂತೆ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿರುವ ವಿಶೇಷ ಸ್ಥಾನಮಾನ, ಸ್ವಾಯತ್ತತೆ ಸಂಪೂರ್ಣವಾಗಿ ರದ್ದಾಗಿ, ಅದು ಕೂಡಾ ಇತರ ರಾಜ್ಯಗಳಂತೆಯೇ ಆಗುತ್ತದೆಯೆನ್ನುವುದು ಸತ್ಯವಲ್ಲ. ಯಾಕೆಂದರೆ ಅನುಚ್ಛೇದ 370 ರದ್ದಾದರೆ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಬೆಸೆಯಲು ಉಳಿಯುವ ಏಕೈಕ ಕೊಂಡಿಯೆಂದರೆ 1947ರಲ್ಲಿ ಸಹಿ ಮಾಡಿದ Instrument of Accession. ಈ Instrument of Accession ಪ್ರಕಾರ ಭಾರತ ಸರಕಾರಕ್ಕೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲಿ ಯಾವುದೇ ಹಕ್ಕಿಲ್ಲ.

ಇತರ ಎಲ್ಲಾ ವಿಷಯಗಳನ್ನೂ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯತ್ತತೆ ಇದೆ. ಅಂದರೆ ಕೇವಲ ಅನುಚ್ಛೇದ 370ವನ್ನು ರದ್ದು ಮಾಡಿದರೆ ಜಮ್ಮು-ಕಾಶ್ಮೀರಕ್ಕೆ ಸದ್ಯಕ್ಕಿರುವುದಕ್ಕಿಂತಲೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ. ಅದರಿಂದಾಗಿಯೇ ಕೇಂದ್ರ ಸರಕಾರ ಕೇವಲ ಅನುಚ್ಛೇದ 370ವನ್ನು ರದ್ದು ಮಾಡುವ ದುಸ್ಸಾಹಸಕ್ಕೆ ಕೈಹಾಕಿಲ್ಲ ಬದಲಾಗಿ ಅನುಚ್ಛೇದ 370ನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರವನ್ನು ವಿಭಜಿಸಿ ಲಡಾಖ್ ಕೇಂದ್ರಾಡಾಳಿತ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಂದು ಘೋಷಿಸಿದೆ. ಇದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸಾದರೂ ನ್ಯಾಯಾಂಗ ಹಾಗೂ ಸಂವಿಧಾನದ ಪರೀಕ್ಷೆಗೆ ಒಳಪಡುವುದಂತೂ ಗ್ಯಾರಂಟಿ. ಅನುಚ್ಛೇದ 370 ಎಂದರೆ ಬರೀ ಸ್ವಾಯತ್ತತೆ ಮಾತ್ರವಲ್ಲ. ಅದರಲ್ಲಿ ಅನೇಕ ವಿಸ್ತ್ರತವಾದ ವಿಷಯಗಳು ಅಡಕವಾಗಿವೆ ಹಾಗೂ ಈ ಎಲ್ಲಾ ವಿಷಯಗಳ ವಿಸ್ತ್ರತ ಪರೀಕ್ಷೆ ಸಂವಿಧಾನದ ಪೂರ್ಣ ಪೀಠದ ನೆರಳಿನಲ್ಲಿಯೇ ನಡೆಯಬೇಕು.

ಇದು ಇಷ್ಟಾದರೆ, ನಕಲಿ ರಾಷ್ಟ್ರೀಯವಾದಿಗಳಿಗೆ ಆರ್ಟಿಕಲ್ 370 ಎಂದರೆ ಬರೀ ಜಮ್ಮು-ಕಾಶ್ಮೀರಿಗಳನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯದ ಯಾರೂ ಅಲ್ಲಿ ಜಮೀನನ್ನು ಕೊಳ್ಳುವಂತಿಲ್ಲ ಎಂಬುವುದಕ್ಕೆ ಸೀಮಿತ. ಹೋಗ್ಲಿ ಬಿಡಿ. ನಮ್ಮಿಂದ ಮೂರು ಸಾವಿರಕ್ಕಿಂತಲೂ ಹೆಚ್ಚು ಕಿಲೋಮೀಟರ್ ದೂರವಿರುವ ರಾಜ್ಯದಲ್ಲಿ ಜಮೀನು ಖರೀದಿಸುವ ತುರ್ತು ಹಾಗೂ ಜರೂರತ್ತು ಯಾರಿಗೆ, ಯಾಕಿದೆ ಅಂತಾ ಇನ್ನೊಂದು ಚರ್ಚೆ. ಅಲ್ಲಿ ಆರ್ಟಿಕಲ್ 370 ಇದ್ದಾಗಲೂ ನಮ್ಮಂಥ ಸಾಮಾನ್ಯ ನಾಗರಿಕರಿಗೆ ಏನೂ ತೊಂದರೆಯಾಗಿದ್ದಿಲ್ಲ, ಈವಾಗ ಅದು ರದ್ದಾದರೂ ದೇಶದ ಸಾಮಾನ್ಯ ನಾಗರಿಕರಿಗೆ ಯಾವುದೇ ಲಾಭನೂ ಇಲ್ಲ. ಹಾಗಾಗಿ ಆರ್ಟಿಕಲ್ 370 ರದ್ದಾದ ಕೂಡಲೇ ಅಲ್ಲಿ ಹೊರ ರಾಜ್ಯದ ಎಷ್ಟು ಮಂದಿ ಹೋಗಿ ಜಮೀನನ್ನು ಕೊಂಡುಕೊಳ್ಳುತ್ತಾರೋ ನೋಡೋಣ.

ಆದರೆ ಇಂಥದೊಂದು ನಿಯಮ ಬರೀ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಇದೆ ಎಂದು ಭಕ್ತರು ಮಾತ್ರವಲ್ಲ, ತೊಂಬತ್ತು ಪರ್ಸೆಂಟ್ ಭಾರತನೇ ಎಂದುಕೊಂಡಿದೆ. ಯಾಕೆಂದರೆ ಅವರಿಗೆ ಸಂವಿಧಾನದ ಆರ್ಟಿಕಲ್ 371G, 371A ಹಾಗೂ ಇತರ ಅನುಚ್ಛೇದಗಳ ಬಗ್ಗೆ ಬಗ್ಗೆ ಎಳ್ಳಷ್ಟೂ ಪರಿಜ್ಞಾನವಿಲ್ಲವೆನ್ನೋದು ಸಾರ್ವಕಾಲಿಕ ಸತ್ಯ. ಸದ್ಯಕ್ಕೆ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲೂ ಹೊರಗಿನವರು ಜಮೀನನ್ನು ಖರೀದಿಸುವಂತಿಲ್ಲ ಅಥವಾ ಅಲ್ಲಿನವರು ಹೊರಗಿನವರಿಗೆ ಜಮೀನನ್ನು ಮಾರುವಂತಿಲ್ಲ. ಮೇಘಾಲಯ, ಮಣಿಪುರಗಳ ಹೆಚ್ಚಿನ ಭೂಪ್ರದೇಶದಲ್ಲೂ ಇಂಥದೊಂದು ಕಾನೂನು ಅನ್ವಯವಾಗುತ್ತೆ. ಆದರೆ ಈ ರಾಜ್ಯಗಳ ಬಗ್ಗೆ ಮಾತಾನಾಡಿದರೆ ಮತಗಳು ಸಿಗೋಲ್ಲ. ಸಿಗಬೇಕಾದರೆ ಜಮ್ಮು-ಕಾಶ್ಮೀರದ ಬಗ್ಗೆ ಮಾತಾನಾಡಬೇಕು ಯಾಕೆಂದರೆ ಅದು ಮುಸ್ಲೀಮರ ರಾಜ್ಯ (ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ). ದೇಶದಲ್ಲಿ ಹಿಂದೂಗಳ ಪರವಾಗಿ ಮಾತಾನಾಡುವುದಕ್ಕಿಂತ, ಮುಸ್ಲೀಮರ ವಿರುದ್ದ ಮಾತಾನಾಡಿದರೆ ಹೆಚ್ಚು ಮತಗಳು ಸಿಗಬಲ್ಲವೆನ್ನೋದು ಕಳೆದ ಮೂರು ದಶಕಗಳಲ್ಲಿ ಈ ದೇಶ ಕಂಡುಕೊಂಡಿರುವ ಸತ್ಯ.

ಹಾಗಾಗಿ ನಾವಿವತ್ತು ಅನುಚ್ಛೇದ 370 ಹಾಗೂ 35A ರದ್ದು ಮಾಡಿರುವ ಬಗ್ಗೆ ಹಾಗೂ ಅದರ ಉದ್ದೇಶಗಳ ಬಗ್ಗೆ ಮಾತಾನಾಡುವುದಕ್ಕಿಂತ ಹೆಚ್ಚಾಗಿ ಮಾತಾನಾಡಬೇಕಾಗಿರುವುದು ಇದನ್ನು ರದ್ದು ಮಾಡಿರುವ ರೀತಿ. ಇದೊಂದು Majoritarian Tyranny (ಬಹುಸಂಖ್ಯಾತ ನಿರಂಕುಶ ಪ್ರಭುತ್ವ) ತನ್ನ ಸುಪರ್ಧಿಯಲ್ಲಿರುವ ಅಗಾಧ Brutal Force ಉಪಯೋಗಿಸಿ ತನಗೆ ಬೇಕಾದುದನ್ನು ಮಾಡಬಲ್ಲದೆನ್ನುವುದಕ್ಕೆ ಕ್ಲಾಸಿಕ್ ಉದಾರಹರಣೆ. ಅನುಚ್ಛೇದ 370 ಹಾಗೂ 35A ರದ್ದು ಮಾಡಬೇಕಿತ್ತೇ? ಅದನ್ನು ಸಾಂವಿಧಾನಿಕ ರೀತಿಯಲ್ಲಿ ಮಾಡಬಹುದಿತ್ತು. ಆದರೆ ಈ ಸರಕಾರಕ್ಕೆ ಅನುಚ್ಛೇದ 370 ಹಾಗೂ 35A ರದ್ದು ಮಾಡುವುದಕ್ಕಿಂತ ಹೆಚ್ಚಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೊಂದು ಎಚ್ಚರಿಕೆ ಕೊಡಬೇಕೆನ್ನುವ ಆಸೆಯಿದ್ದಂತೆ ತೋರುತ್ತಿದೆ. ಅಂದರೆ ಈ ದೇಶದಲ್ಲಿ ನಾವು ಬಹುಸಂಖ್ಯಾತರು, ನಮ್ಮ ಸಂಖ್ಯಾಬಲ ಶಾಸನಸಭೆಗಳಲ್ಲಿ ಇದ್ದರೆ, ಈ ಸಂಖ್ಯಾಬಲವನ್ನು ಉಪಯೋಗಿಸಿ, ನಾವು ಅಲ್ಪಸಂಖ್ಯಾತರಾದ ನಿಮ್ಮ ಸಲಹೆ, ಅನುಮತಿಯಿಲ್ಲದೆ ನಮಗೆ ಬೇಕಾದ ಕಾನೂನುಗಳನ್ನು ತರಬಲ್ಲೆವು ಎಂದು ತೋರಿಸಲೇಬೇಕೆಂದು ಪಣತೊಟ್ಟಂತಿದೆ ಈ ಸರಕಾರ. ಉಗ್ರವಾದ, ಪಾಕೀಸ್ಥಾನ ಮುಂತಾದವುಗಳೆಲ್ಲಾ ಸಬೂಬು ಮಾತ್ರ.

ಈ ಕಾರಣದಿಂದಾಗಿಯೇ ಇವತ್ತು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿದ ರೀತಿ ಪ್ರಶ್ನಾರ್ಹ. ರಾಜ್ಯದ ಮೂವರು ಮುಖ್ಯಮಂತ್ರಿಗಳು ಹಾಗೂ ಇತರ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಮನೆಗೊಬ್ಬ್ರರಂತೆ ಸೈನಿಕರನ್ನು ನೇಮಿಸಿ, ಕರ್ಫ್ಯೂ ಹಾಕಿ, ಮಾಧ್ಯಮ, ಅಂತರ್ಜಾಲ, ಮೊಬೈಲ್ಗಳನ್ನು ನಿಷೇಧಿಸಿ, ತುರ್ತು ಪರಿಸ್ಥಿತಿಯನ್ನು ನಿರ್ಮಿಸಿ, ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ಕೂಡಾ ಮಾಡದೇ, ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಂಥದೊಂದು ನಿರ್ಧಾರ ಕೈಗೊಂಡಿದ್ದಾರೆಂದರೆ ಅದರ ಹಿಂದಿನ ಉದ್ದೇಶಗಳೂ ಅನುಮಾನಸ್ಪದ ಹಾಗೂ ಪ್ರಶ್ನಾರ್ಹವೇ. ಇದನ್ನು ರದ್ದು ಮಾಡಲು ಜಮ್ಮು-ಕಾಶ್ಮೀರದ ವಿಧಾನಸಭೆಯ ಅನುಮತಿ ಕೂಡಾ ಅಗತ್ಯವೆಂದು ಸಂವಿಧಾನವೇ ಹೇಳಿದೆ. ಆದರೆ ರಾಜ್ಯ ಸರ್ಕಾರವನ್ನು ಮೊದಲೇ ಬರ್ಖಾಸ್ತುಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದು, ಇವತ್ತು ರಾಜ್ಯಪಾಲರ ಪತ್ರವೇ ವಿಧಾನಸಭೆಯ ಅನುಮತಿಯೆಂದು ಹೇಳಿ, ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವ ನಿರ್ಧಾರ ಎಷ್ಟು ಸರಿ ಹಾಗೂ ಎಷ್ಟು ತಪ್ಪೆಂದು ಮುಂದಿನ ದಿನಗಳಲ್ಲಿ ಈ ದೇಶದ ಸಂವಿಧಾನವೇ ನಿರ್ಧರಿಸಲಿದೆ. ಅನುಚ್ಛೇದ 370 ಹಾಗೂ 35A ಇದ್ದರೆ ಅಥವಾ ರದ್ದಾದರೆ ಅದರ ಹೆಚ್ಚಿನ ಪರಿಣಾಮಗಳನ್ನು ಅನುಭವಿಸುವವರು, ಲಾಭವನ್ನು ಪಡೆಯುವವರು ಇಲ್ಲ ನಷ್ಟ ಅನುಭವಿಸುವವರು ಆ ರಾಜ್ಯದ ಜನರು. ಹಾಗಾಗಿ ಅನುಚ್ಛೇದ 370 ಹಾಗೂ 35A ರದ್ದು ಮಾಡುವ ಮೊದಲು ಅವರ ಜನಮತ ಸಂಗ್ರಹವಾಗಬೇಕಿತ್ತು. ಅದಾಗಲಿಲ್ಲ ಯಾಕೆಂದರೆ ಈ ನಿರ್ಧಾರ ಅಲ್ಲಿನ ಪ್ರಜೆಗಳ ಒಳಿತಿಗಲ್ಲ ಬದಲಾಗಿ ದೆಹಲಿಯಲ್ಲಿ ಸರ್ಕಾರ ನಡೆಸುವವರ ಹಾಗೂ ಅವರ ರಿಮೋಟ್ ಕಂಟ್ರೋಲ್ ಇಟ್ಟುಕೊಂಡಿರುವವರ ಒಳಿತಿಗಾಗಿ. ಇಂಥದೊಂದು Majoritarian Tyranny ಹಾಗೂ Brutal Force ಇಟ್ಟುಕೊಂಡು, ಅಲ್ಲಿನ ಜನರನ್ನು, ನಾಯಕರನ್ನು ಗನ್ಪಾಯಿಂಟ್ನಲ್ಲಿಟ್ಟುಕೊಂಡು ಅನುಚ್ಛೇದ 370 ಹಾಗೂ 35Aನ್ನು ಹಿಂದಿನ ಯಾವುದೇ ಸರ್ಕಾರನೂ ಮಾಡಬಹುದಿತ್ತು. ಅವರು ಮಾಡಲಿಲ್ಲ ಯಾಕೆಂದರೆ ಅದು ಅಸಾಂವಿಧಾನಿ ಅಷ್ಟೇ ಅಲ್ಲ ಪ್ರಜಾಪ್ರಭುತ್ವ ವಿರೋಧಿ ಕೂಡಾ. ಇವತ್ತು ನಾವು ಪ್ರಶ್ನಿಸಬೇಕಾಗಿರುವುದು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವುದಲ್ಲ ಬದಲಾಗಿ ಅದನ್ನು ರದ್ದು ಮಾಡಿದ ಅಸಾಂವಿಧಾನಿಕ, ನಿರಂಕುಶ, ಸರ್ವಾಧಿಕಾರಿ ರೀತಿ.

ಯಾಕೆಂದರೆ ಇವತ್ತು ಜಮ್ಮು-ಕಾಶ್ಮೀರದಲ್ಲಾಗಿರುವುದು ನಾಳೆ ಕರ್ನಾಟಕದಲ್ಲೂ ಆಗಬಹುದು. ಕೇಂದ್ರ ಸರಕಾರ ತನಗೆ ಬೇಕಾದ ಯಾವುದೋ ಒಂದು ನಿರ್ಧಾರವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯ ಸರಕಾರವನ್ನು ಬರ್ಖಾಸ್ತುಗೊಳಿಸಿ, ತಮ್ಮದೇ ಕೈಗೊಂಬೆಯಾಗಿರುವ ರಾಜ್ಯಪಾಲರ ಅನುಮತಿ ಪಡೆದು, ರಾಷ್ಟ್ರಪತಿಯವರ ಅದೇಶದ ಮೂಲಕ ನಮ್ಮ ಮೇಲೆ ಹೇರಬಹುದು. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ. ಆದರೆ ಇಂಥ ಪ್ರಶ್ನೆಗಳನ್ನು ಕೇಳುವವರೆಲ್ಲಾ ದೇಶದ್ರೋಹಿಗಳು, ಪಾಕೀಸ್ಥಾನಿಗಳು, ಜಿಹಾದಿಗಳೆಂದು ಮೊದಲೇ ಫರ್ಮಾನು ಹೊರಡಿಸಲಾಗಿರುವುದರಿಂದ, ಪ್ರಶ್ನೆ ಕೇಳುವವರೂ ತಡವರಿಸುವುದಂತೂ ಗ್ಯಾರಂಟಿ.

Almeida Gladson
(Facebook post)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಕ್ರೀಡೆ19 hours ago

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ...

ದಿನದ ಸುದ್ದಿ19 hours ago

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ...

ದಿನದ ಸುದ್ದಿ20 hours ago

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ20 hours ago

HEAVY RAIN | ಮೂರು ದಿನ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ

ಸುದ್ದಿದಿನಡೆಸ್ಕ್:ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ,...

ದಿನದ ಸುದ್ದಿ20 hours ago

ಇಂದು – ನಾಳೆ ಹಾವೇರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿದಿನಡೆಸ್ಕ್:ಇಂದು ಮತ್ತು ನಾಳೆ, ಹಾವೇರಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕಡ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ಮತ್ತು...

ದಿನದ ಸುದ್ದಿ22 hours ago

ಯುವಕರಿಗೆ ಶಿಕ್ಷಣ, ಕೌಶಲ್ಯ ಹೆಚ್ಚಿಸುವ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ

ಸುದ್ದಿದಿನಡೆಸ್ಕ್:ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ನವದೆಹಲಿಯಲ್ಲಿ ನಿನ್ನೆ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ ನೀಡಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ...

ದಿನದ ಸುದ್ದಿ22 hours ago

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ...

ದಿನದ ಸುದ್ದಿ1 day ago

ದಾವಣಗೆರೆ | ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..

ಸುದ್ದಿದಿನ,ದಾವಣಗೆರೆ:ಜಲಸಿರಿ ಕಾಮಗಾರಿ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಎಫ್.15 ರಂಗನಾಥ ಫೀಡರ್ ವ್ಯಾಪ್ತಿಯ ವಿದ್ಯಾನಗರ ಕೊನೆ ಬಸ್ ನಿಲ್ದಾಣದಿಂದ...

ದಿನದ ಸುದ್ದಿ1 day ago

ದಾವಣಗೆರೆ | ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ಸುದ್ದಿದಿನ,ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್...

ದಿನದ ಸುದ್ದಿ1 day ago

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ. 2024 ರ ಜನವರಿಯಿಂದ ಜುಲೈ 23 ರ ವರೆಗಿನ...

Trending