Connect with us

ದಿನದ ಸುದ್ದಿ

ಅನುಚ್ಛೇದ 370 ರದ್ದು | ಒಂದು ವಿಶ್ಲೇಷಣೆ : ಮಿಸ್ ಮಾಡ್ದೆ ಈ ಲೇಖನ ಓದಿ..!

Published

on

ನುಚ್ಛೇದ 370 ರದ್ದು ಪಡಿಸಿರುವುದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಕೊನೆಯಿಲ್ಲದ್ದು. ನನಗೆ ತಿಳಿದಿರುವಷ್ಟು ಮಟ್ಟಿಗೆ ಅನುಚ್ಛೇದ 370 ಹಾಗೂ 35A ರದ್ದಾದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ಭಾರತದೊಂದಿಗಿರುವ ಸಂವಿಧಾನಾತ್ಮಕ ಸಂಬಂಧ ಕಡಿದು ಹೋಗುವುದಿಲ್ಲ. ಯಾಕೆಂದರೆ ಅನುಚ್ಛೇದ 370 ಬರುವ ಮೊದಲೇ ಜಮ್ಮು-ಕಾಶ್ಮೀರ ಸ್ವತಂತ್ರ ಭಾರತದ ಭಾಗವೆಂದು ಗುರುತಿಸಲ್ಪಟ್ಟಿತ್ತು. ನೆನಪಿರಲಿ ಸ್ವಾತಂತ್ರ್ಯ ನಂತರ ದೇಶದಲ್ಲಿದ್ದ ರಾಜ-ಮಹಾರಾಜರುಗಳ ಸಂಸ್ಥಾನ, ರಾಜ್ಯಗಳೆಲ್ಲಾ ಭಾರತದಲ್ಲಿ ವಿಲೀನವಾದ ಮಾದರಿಯಲ್ಲೇ ಜಮ್ಮು-ಕಾಶ್ಮೀರ ಕೂಡಾ ವಿಲೀನವಾಗಿತ್ತು. ಮೈಸೂರು ಸಂಸ್ಥಾನ, ಮಣಿಪುರ, ತೆಹ್ರಿ ಘರ್ವಾಲ್, ಉದಯಪುರ ಮುಂತಾದ 140 ಸಂಸ್ಥಾನಗಳು ಕೂಡಾ ಭಾರತ ಸ್ವಾತಂತ್ರ್ಯ ಸಿಕ್ಕ ತಕ್ಷಣ ಭಾರತದ ರಾಜ್ಯಗಳಾಗಲಿಲ್ಲ. ಅದಕ್ಕಾಗಿ ಸ್ವತಂತ್ರ ಭಾರತದೊಂದಿಗೆ ಈ ಸಂಸ್ಥಾನಗಳು Instrument of Accession (ವಿಲೀನ ಪತ್ರ)ಗಳಿಗೆ ಸಹಿ ಮಾಡಿ, ಸ್ವತಂತ್ರ ಭಾರತವನ್ನು ಅಧಿಕೃತವಾಗಿ ಸೇರಿದ್ದವು. ಈ ಎಲ್ಲಾ ವಿಲೀನ ಪತ್ರಗಳು ಬಹುಷ ಇವತ್ತೂ ಗೃಹ ಇಲಾಖೆಯ ಕಡತಗಳಲ್ಲಿವೆ.

ದೆಹಲಿಯಲ್ಲಿ ನೆಲೆಸಿರುವ RTI ಕಾರ್ಯಕರ್ತ ಹಾಗೂ ಇತಿಹಾಸ ಸಂಶೋಧಕ ವೆಂಕಟೇಶ ನಾಯಕರು ಇದರ ಬಗ್ಗ್ಗೆ ಕೆಲ ವರುಷಗಳ ಹಿಂದೆ ದೀರ್ಘ ಸಂಶೋಧನೆಯೊಂದನ್ನು ಮಾಡಿ, RTI ಮೂಲಕ ಸ್ವಾತಂತ್ಯ ಸಮಯದಲ್ಲಿ ಸಹಿ ಮಾಡಲಾಗಿದ್ದ ಕೆಲ ವಿಲೀನ ಪತ್ರಗಳ ಪ್ರತಿ ಪಡೆದುಕೊಂಡಿದ್ದರು. ಅವರ ಪ್ರಕಾರ ಜಮ್ಮು-ಕಾಶ್ಮೀರ ಹಾಗೂ ಇತರ 140 ಸಂಸ್ಥಾನಗಳು ಸಹಿ ಮಾಡಿರುವ ವಿಲೀನ ಪತ್ರಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಈ ಎಲ್ಲಾ ಸಂಸ್ಥಾನಗಳು ಮೊದಲು ಕೇವಲ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ನಿರ್ಧಾರಗಳನ್ನು ದೇಶಕ್ಕೆ ಬಿಟ್ಟುಕೊಟ್ಟು, ಉಳಿದೆಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದವು. ವಿಲೀನ ಪತ್ರದೊಟ್ಟಿಗೆ ಹೆಚ್ಚಿನ ಸಂಸ್ಥಾನಗಳು ಭಾರತದೊಂದಿಗೆ ತಾಟಸ್ಥ್ಯ ಒಪ್ಪಂದಗಳನ್ನೂ ಮಾಡಿಕೊಂಡಿದ್ದವು. ಅಂದರೆ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಅಧಿಕಾರಗಳ ಹೊರತು ಬೇರೆ ಯಾವುದೇ ವಿಷಯದಲ್ಲಿ ಭಾರತ ಸರ್ಕಾರ ಈ ಸಂಸ್ಥಾನಗಳ ಮೇಲೆ ತನ್ನ ಹಕ್ಕು ಚಲಾಯಿಸುವುದಿಲ್ಲವೆನ್ನೋದು ಈ ತಾಟಸ್ಥ್ಯ ಒಪ್ಪಂದದ ಹೂರಣವಾಗಿತ್ತು. ಹಾಗಾಗಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಈ ಸಂಸ್ಥಾನಗಳಿಗೆ ಪೂರ್ಣ ಸ್ವಾಯತ್ತತೆ ಇತ್ತು, ಬರೀ ಜಮ್ಮು-ಕಾಶ್ಮೀರಕ್ಕೆ ಮಾತ್ರವಲ್ಲ. ಆದರೆ ಮುಂದೆ ಹೆಚ್ಚಿನ ಸಂಸ್ಥಾನಗಳು ತಮ್ಮ ಸ್ವ-ಇಚ್ಛೆಯಿಂದಲೇ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ವಿಲೀನವಾಗಲು ಒಪ್ಪಂದಕ್ಕೆ ಸಹಿ ಹಾಕಿ ಸ್ವತಂತ್ರ ಭಾರತದ ಪರಿಪೂರ್ಣ ಭಾಗವಾದರು.

ಆದರೆ ಜಮ್ಮು-ಕಾಶ್ಮೀರದ ಅಂದಿನ ಯುವರಾಜ, ರಾಜ್ಯದ ಮಹಾರಾಜ ಹರಿಸಿಂಗ್ ತನಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸಿ, ನವೆಂಬರ್ 25, 1949ರಂದು ಒಂದು ಪ್ರಕಟನೆ ಮಾಡಿ, ಶೀಘ್ರದಲ್ಲೇ ಜಾರಿಯಾಗಲಿದ್ದ ಸಂವಿಧಾನ ಎಷ್ಟು ಹಾಗೂ ಯಾವ ಮಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಯುಕ್ತವಾಗಬಹುದೆಂದು ಘೋಷಿಸಿದರು. ಹೀಗಾಗಯೇ ಅನುಚ್ಛೇದ 370 (ಅಂದು ಅನುಚ್ಛೇದ 309) ಜಾರಿಗೆ ಬಂತು. ಇದೆಲ್ಲಾ ಭಾಷಾವಾರು ರಾಜ್ಯಗಳು ಆಗುವ ಮೊದಲು. ಈ ವಿಲೀನ ಪ್ರಕ್ರಿಯೆಯಿಂದಲೇ ಮುಂದೆ ವಿಂಧ್ಯಾ ಪ್ರದೇಶ, ಮತ್ಸ್ಯ ಒಕ್ಕೂಟ, ಪಟಿಯಾಲಾ ಹಾಗೂ ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟ, ತಿರು-ಕೊಚ್ಚಿ (United State of Travancore and Cochin) ಮುಂತಾದ ದೊಡ್ಡ ಒಕ್ಕೂಟಗಳ ಉದಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂಧರ್ಭದಲ್ಲಿ ಈ ರಾಜ್ಯಗಳ ಒಕ್ಕೂಟಗಳು ರದ್ದಾದವು.

ಹಾಗಾಗಿ ಅನುಚ್ಛೇದ 370 ರದ್ದಾದ ಮಾತ್ರಕ್ಕೆ ಜಮ್ಮು-ಕಾಶ್ಮೀರ ಭಾರತದ ಕೈತಪ್ಪಿ ಹೋಗುವುದಿಲ್ಲ. ಅದು ಇನ್ನೂ ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಯಾಕೆಂದರೆ ಜಮ್ಮು-ಕಾಶ್ಮೀರಕ್ಕೆ ಭಾರತ ಒಕ್ಕೂಟದೊಂದಿಗೆ ಅಧಿಕೃತ ಸಂಬಂಧ ಬೆಸೆದಿದ್ದು ಅನುಚ್ಛೇದ 370ದಿಂದಾಗಿ ಅಲ್ಲ ಬದಲಾಗಿ 1947ರಲ್ಲಿ ಸಹಿ ಮಾಡಿದ Instrument of Accessionನಿಂದಾಗಿ. ಆದರೆ ಅನುಚ್ಛೇದ 370 ರದ್ದಾಗಿರುವುದರಿಂದ ಬಿಜೆಪಿಯವರು, ಸಂಘ ಪರಿವಾರ ಹೇಳುವಂತೆ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿರುವ ವಿಶೇಷ ಸ್ಥಾನಮಾನ, ಸ್ವಾಯತ್ತತೆ ಸಂಪೂರ್ಣವಾಗಿ ರದ್ದಾಗಿ, ಅದು ಕೂಡಾ ಇತರ ರಾಜ್ಯಗಳಂತೆಯೇ ಆಗುತ್ತದೆಯೆನ್ನುವುದು ಸತ್ಯವಲ್ಲ. ಯಾಕೆಂದರೆ ಅನುಚ್ಛೇದ 370 ರದ್ದಾದರೆ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಬೆಸೆಯಲು ಉಳಿಯುವ ಏಕೈಕ ಕೊಂಡಿಯೆಂದರೆ 1947ರಲ್ಲಿ ಸಹಿ ಮಾಡಿದ Instrument of Accession. ಈ Instrument of Accession ಪ್ರಕಾರ ಭಾರತ ಸರಕಾರಕ್ಕೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲಿ ಯಾವುದೇ ಹಕ್ಕಿಲ್ಲ.

ಇತರ ಎಲ್ಲಾ ವಿಷಯಗಳನ್ನೂ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯತ್ತತೆ ಇದೆ. ಅಂದರೆ ಕೇವಲ ಅನುಚ್ಛೇದ 370ವನ್ನು ರದ್ದು ಮಾಡಿದರೆ ಜಮ್ಮು-ಕಾಶ್ಮೀರಕ್ಕೆ ಸದ್ಯಕ್ಕಿರುವುದಕ್ಕಿಂತಲೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ. ಅದರಿಂದಾಗಿಯೇ ಕೇಂದ್ರ ಸರಕಾರ ಕೇವಲ ಅನುಚ್ಛೇದ 370ವನ್ನು ರದ್ದು ಮಾಡುವ ದುಸ್ಸಾಹಸಕ್ಕೆ ಕೈಹಾಕಿಲ್ಲ ಬದಲಾಗಿ ಅನುಚ್ಛೇದ 370ನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರವನ್ನು ವಿಭಜಿಸಿ ಲಡಾಖ್ ಕೇಂದ್ರಾಡಾಳಿತ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಂದು ಘೋಷಿಸಿದೆ. ಇದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸಾದರೂ ನ್ಯಾಯಾಂಗ ಹಾಗೂ ಸಂವಿಧಾನದ ಪರೀಕ್ಷೆಗೆ ಒಳಪಡುವುದಂತೂ ಗ್ಯಾರಂಟಿ. ಅನುಚ್ಛೇದ 370 ಎಂದರೆ ಬರೀ ಸ್ವಾಯತ್ತತೆ ಮಾತ್ರವಲ್ಲ. ಅದರಲ್ಲಿ ಅನೇಕ ವಿಸ್ತ್ರತವಾದ ವಿಷಯಗಳು ಅಡಕವಾಗಿವೆ ಹಾಗೂ ಈ ಎಲ್ಲಾ ವಿಷಯಗಳ ವಿಸ್ತ್ರತ ಪರೀಕ್ಷೆ ಸಂವಿಧಾನದ ಪೂರ್ಣ ಪೀಠದ ನೆರಳಿನಲ್ಲಿಯೇ ನಡೆಯಬೇಕು.

ಇದು ಇಷ್ಟಾದರೆ, ನಕಲಿ ರಾಷ್ಟ್ರೀಯವಾದಿಗಳಿಗೆ ಆರ್ಟಿಕಲ್ 370 ಎಂದರೆ ಬರೀ ಜಮ್ಮು-ಕಾಶ್ಮೀರಿಗಳನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯದ ಯಾರೂ ಅಲ್ಲಿ ಜಮೀನನ್ನು ಕೊಳ್ಳುವಂತಿಲ್ಲ ಎಂಬುವುದಕ್ಕೆ ಸೀಮಿತ. ಹೋಗ್ಲಿ ಬಿಡಿ. ನಮ್ಮಿಂದ ಮೂರು ಸಾವಿರಕ್ಕಿಂತಲೂ ಹೆಚ್ಚು ಕಿಲೋಮೀಟರ್ ದೂರವಿರುವ ರಾಜ್ಯದಲ್ಲಿ ಜಮೀನು ಖರೀದಿಸುವ ತುರ್ತು ಹಾಗೂ ಜರೂರತ್ತು ಯಾರಿಗೆ, ಯಾಕಿದೆ ಅಂತಾ ಇನ್ನೊಂದು ಚರ್ಚೆ. ಅಲ್ಲಿ ಆರ್ಟಿಕಲ್ 370 ಇದ್ದಾಗಲೂ ನಮ್ಮಂಥ ಸಾಮಾನ್ಯ ನಾಗರಿಕರಿಗೆ ಏನೂ ತೊಂದರೆಯಾಗಿದ್ದಿಲ್ಲ, ಈವಾಗ ಅದು ರದ್ದಾದರೂ ದೇಶದ ಸಾಮಾನ್ಯ ನಾಗರಿಕರಿಗೆ ಯಾವುದೇ ಲಾಭನೂ ಇಲ್ಲ. ಹಾಗಾಗಿ ಆರ್ಟಿಕಲ್ 370 ರದ್ದಾದ ಕೂಡಲೇ ಅಲ್ಲಿ ಹೊರ ರಾಜ್ಯದ ಎಷ್ಟು ಮಂದಿ ಹೋಗಿ ಜಮೀನನ್ನು ಕೊಂಡುಕೊಳ್ಳುತ್ತಾರೋ ನೋಡೋಣ.

ಆದರೆ ಇಂಥದೊಂದು ನಿಯಮ ಬರೀ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಇದೆ ಎಂದು ಭಕ್ತರು ಮಾತ್ರವಲ್ಲ, ತೊಂಬತ್ತು ಪರ್ಸೆಂಟ್ ಭಾರತನೇ ಎಂದುಕೊಂಡಿದೆ. ಯಾಕೆಂದರೆ ಅವರಿಗೆ ಸಂವಿಧಾನದ ಆರ್ಟಿಕಲ್ 371G, 371A ಹಾಗೂ ಇತರ ಅನುಚ್ಛೇದಗಳ ಬಗ್ಗೆ ಬಗ್ಗೆ ಎಳ್ಳಷ್ಟೂ ಪರಿಜ್ಞಾನವಿಲ್ಲವೆನ್ನೋದು ಸಾರ್ವಕಾಲಿಕ ಸತ್ಯ. ಸದ್ಯಕ್ಕೆ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲೂ ಹೊರಗಿನವರು ಜಮೀನನ್ನು ಖರೀದಿಸುವಂತಿಲ್ಲ ಅಥವಾ ಅಲ್ಲಿನವರು ಹೊರಗಿನವರಿಗೆ ಜಮೀನನ್ನು ಮಾರುವಂತಿಲ್ಲ. ಮೇಘಾಲಯ, ಮಣಿಪುರಗಳ ಹೆಚ್ಚಿನ ಭೂಪ್ರದೇಶದಲ್ಲೂ ಇಂಥದೊಂದು ಕಾನೂನು ಅನ್ವಯವಾಗುತ್ತೆ. ಆದರೆ ಈ ರಾಜ್ಯಗಳ ಬಗ್ಗೆ ಮಾತಾನಾಡಿದರೆ ಮತಗಳು ಸಿಗೋಲ್ಲ. ಸಿಗಬೇಕಾದರೆ ಜಮ್ಮು-ಕಾಶ್ಮೀರದ ಬಗ್ಗೆ ಮಾತಾನಾಡಬೇಕು ಯಾಕೆಂದರೆ ಅದು ಮುಸ್ಲೀಮರ ರಾಜ್ಯ (ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ). ದೇಶದಲ್ಲಿ ಹಿಂದೂಗಳ ಪರವಾಗಿ ಮಾತಾನಾಡುವುದಕ್ಕಿಂತ, ಮುಸ್ಲೀಮರ ವಿರುದ್ದ ಮಾತಾನಾಡಿದರೆ ಹೆಚ್ಚು ಮತಗಳು ಸಿಗಬಲ್ಲವೆನ್ನೋದು ಕಳೆದ ಮೂರು ದಶಕಗಳಲ್ಲಿ ಈ ದೇಶ ಕಂಡುಕೊಂಡಿರುವ ಸತ್ಯ.

ಹಾಗಾಗಿ ನಾವಿವತ್ತು ಅನುಚ್ಛೇದ 370 ಹಾಗೂ 35A ರದ್ದು ಮಾಡಿರುವ ಬಗ್ಗೆ ಹಾಗೂ ಅದರ ಉದ್ದೇಶಗಳ ಬಗ್ಗೆ ಮಾತಾನಾಡುವುದಕ್ಕಿಂತ ಹೆಚ್ಚಾಗಿ ಮಾತಾನಾಡಬೇಕಾಗಿರುವುದು ಇದನ್ನು ರದ್ದು ಮಾಡಿರುವ ರೀತಿ. ಇದೊಂದು Majoritarian Tyranny (ಬಹುಸಂಖ್ಯಾತ ನಿರಂಕುಶ ಪ್ರಭುತ್ವ) ತನ್ನ ಸುಪರ್ಧಿಯಲ್ಲಿರುವ ಅಗಾಧ Brutal Force ಉಪಯೋಗಿಸಿ ತನಗೆ ಬೇಕಾದುದನ್ನು ಮಾಡಬಲ್ಲದೆನ್ನುವುದಕ್ಕೆ ಕ್ಲಾಸಿಕ್ ಉದಾರಹರಣೆ. ಅನುಚ್ಛೇದ 370 ಹಾಗೂ 35A ರದ್ದು ಮಾಡಬೇಕಿತ್ತೇ? ಅದನ್ನು ಸಾಂವಿಧಾನಿಕ ರೀತಿಯಲ್ಲಿ ಮಾಡಬಹುದಿತ್ತು. ಆದರೆ ಈ ಸರಕಾರಕ್ಕೆ ಅನುಚ್ಛೇದ 370 ಹಾಗೂ 35A ರದ್ದು ಮಾಡುವುದಕ್ಕಿಂತ ಹೆಚ್ಚಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೊಂದು ಎಚ್ಚರಿಕೆ ಕೊಡಬೇಕೆನ್ನುವ ಆಸೆಯಿದ್ದಂತೆ ತೋರುತ್ತಿದೆ. ಅಂದರೆ ಈ ದೇಶದಲ್ಲಿ ನಾವು ಬಹುಸಂಖ್ಯಾತರು, ನಮ್ಮ ಸಂಖ್ಯಾಬಲ ಶಾಸನಸಭೆಗಳಲ್ಲಿ ಇದ್ದರೆ, ಈ ಸಂಖ್ಯಾಬಲವನ್ನು ಉಪಯೋಗಿಸಿ, ನಾವು ಅಲ್ಪಸಂಖ್ಯಾತರಾದ ನಿಮ್ಮ ಸಲಹೆ, ಅನುಮತಿಯಿಲ್ಲದೆ ನಮಗೆ ಬೇಕಾದ ಕಾನೂನುಗಳನ್ನು ತರಬಲ್ಲೆವು ಎಂದು ತೋರಿಸಲೇಬೇಕೆಂದು ಪಣತೊಟ್ಟಂತಿದೆ ಈ ಸರಕಾರ. ಉಗ್ರವಾದ, ಪಾಕೀಸ್ಥಾನ ಮುಂತಾದವುಗಳೆಲ್ಲಾ ಸಬೂಬು ಮಾತ್ರ.

ಈ ಕಾರಣದಿಂದಾಗಿಯೇ ಇವತ್ತು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿದ ರೀತಿ ಪ್ರಶ್ನಾರ್ಹ. ರಾಜ್ಯದ ಮೂವರು ಮುಖ್ಯಮಂತ್ರಿಗಳು ಹಾಗೂ ಇತರ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಮನೆಗೊಬ್ಬ್ರರಂತೆ ಸೈನಿಕರನ್ನು ನೇಮಿಸಿ, ಕರ್ಫ್ಯೂ ಹಾಕಿ, ಮಾಧ್ಯಮ, ಅಂತರ್ಜಾಲ, ಮೊಬೈಲ್ಗಳನ್ನು ನಿಷೇಧಿಸಿ, ತುರ್ತು ಪರಿಸ್ಥಿತಿಯನ್ನು ನಿರ್ಮಿಸಿ, ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ಕೂಡಾ ಮಾಡದೇ, ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಂಥದೊಂದು ನಿರ್ಧಾರ ಕೈಗೊಂಡಿದ್ದಾರೆಂದರೆ ಅದರ ಹಿಂದಿನ ಉದ್ದೇಶಗಳೂ ಅನುಮಾನಸ್ಪದ ಹಾಗೂ ಪ್ರಶ್ನಾರ್ಹವೇ. ಇದನ್ನು ರದ್ದು ಮಾಡಲು ಜಮ್ಮು-ಕಾಶ್ಮೀರದ ವಿಧಾನಸಭೆಯ ಅನುಮತಿ ಕೂಡಾ ಅಗತ್ಯವೆಂದು ಸಂವಿಧಾನವೇ ಹೇಳಿದೆ. ಆದರೆ ರಾಜ್ಯ ಸರ್ಕಾರವನ್ನು ಮೊದಲೇ ಬರ್ಖಾಸ್ತುಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದು, ಇವತ್ತು ರಾಜ್ಯಪಾಲರ ಪತ್ರವೇ ವಿಧಾನಸಭೆಯ ಅನುಮತಿಯೆಂದು ಹೇಳಿ, ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವ ನಿರ್ಧಾರ ಎಷ್ಟು ಸರಿ ಹಾಗೂ ಎಷ್ಟು ತಪ್ಪೆಂದು ಮುಂದಿನ ದಿನಗಳಲ್ಲಿ ಈ ದೇಶದ ಸಂವಿಧಾನವೇ ನಿರ್ಧರಿಸಲಿದೆ. ಅನುಚ್ಛೇದ 370 ಹಾಗೂ 35A ಇದ್ದರೆ ಅಥವಾ ರದ್ದಾದರೆ ಅದರ ಹೆಚ್ಚಿನ ಪರಿಣಾಮಗಳನ್ನು ಅನುಭವಿಸುವವರು, ಲಾಭವನ್ನು ಪಡೆಯುವವರು ಇಲ್ಲ ನಷ್ಟ ಅನುಭವಿಸುವವರು ಆ ರಾಜ್ಯದ ಜನರು. ಹಾಗಾಗಿ ಅನುಚ್ಛೇದ 370 ಹಾಗೂ 35A ರದ್ದು ಮಾಡುವ ಮೊದಲು ಅವರ ಜನಮತ ಸಂಗ್ರಹವಾಗಬೇಕಿತ್ತು. ಅದಾಗಲಿಲ್ಲ ಯಾಕೆಂದರೆ ಈ ನಿರ್ಧಾರ ಅಲ್ಲಿನ ಪ್ರಜೆಗಳ ಒಳಿತಿಗಲ್ಲ ಬದಲಾಗಿ ದೆಹಲಿಯಲ್ಲಿ ಸರ್ಕಾರ ನಡೆಸುವವರ ಹಾಗೂ ಅವರ ರಿಮೋಟ್ ಕಂಟ್ರೋಲ್ ಇಟ್ಟುಕೊಂಡಿರುವವರ ಒಳಿತಿಗಾಗಿ. ಇಂಥದೊಂದು Majoritarian Tyranny ಹಾಗೂ Brutal Force ಇಟ್ಟುಕೊಂಡು, ಅಲ್ಲಿನ ಜನರನ್ನು, ನಾಯಕರನ್ನು ಗನ್ಪಾಯಿಂಟ್ನಲ್ಲಿಟ್ಟುಕೊಂಡು ಅನುಚ್ಛೇದ 370 ಹಾಗೂ 35Aನ್ನು ಹಿಂದಿನ ಯಾವುದೇ ಸರ್ಕಾರನೂ ಮಾಡಬಹುದಿತ್ತು. ಅವರು ಮಾಡಲಿಲ್ಲ ಯಾಕೆಂದರೆ ಅದು ಅಸಾಂವಿಧಾನಿ ಅಷ್ಟೇ ಅಲ್ಲ ಪ್ರಜಾಪ್ರಭುತ್ವ ವಿರೋಧಿ ಕೂಡಾ. ಇವತ್ತು ನಾವು ಪ್ರಶ್ನಿಸಬೇಕಾಗಿರುವುದು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವುದಲ್ಲ ಬದಲಾಗಿ ಅದನ್ನು ರದ್ದು ಮಾಡಿದ ಅಸಾಂವಿಧಾನಿಕ, ನಿರಂಕುಶ, ಸರ್ವಾಧಿಕಾರಿ ರೀತಿ.

ಯಾಕೆಂದರೆ ಇವತ್ತು ಜಮ್ಮು-ಕಾಶ್ಮೀರದಲ್ಲಾಗಿರುವುದು ನಾಳೆ ಕರ್ನಾಟಕದಲ್ಲೂ ಆಗಬಹುದು. ಕೇಂದ್ರ ಸರಕಾರ ತನಗೆ ಬೇಕಾದ ಯಾವುದೋ ಒಂದು ನಿರ್ಧಾರವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯ ಸರಕಾರವನ್ನು ಬರ್ಖಾಸ್ತುಗೊಳಿಸಿ, ತಮ್ಮದೇ ಕೈಗೊಂಬೆಯಾಗಿರುವ ರಾಜ್ಯಪಾಲರ ಅನುಮತಿ ಪಡೆದು, ರಾಷ್ಟ್ರಪತಿಯವರ ಅದೇಶದ ಮೂಲಕ ನಮ್ಮ ಮೇಲೆ ಹೇರಬಹುದು. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ. ಆದರೆ ಇಂಥ ಪ್ರಶ್ನೆಗಳನ್ನು ಕೇಳುವವರೆಲ್ಲಾ ದೇಶದ್ರೋಹಿಗಳು, ಪಾಕೀಸ್ಥಾನಿಗಳು, ಜಿಹಾದಿಗಳೆಂದು ಮೊದಲೇ ಫರ್ಮಾನು ಹೊರಡಿಸಲಾಗಿರುವುದರಿಂದ, ಪ್ರಶ್ನೆ ಕೇಳುವವರೂ ತಡವರಿಸುವುದಂತೂ ಗ್ಯಾರಂಟಿ.

Almeida Gladson
(Facebook post)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

Published

on

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.

3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.

5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.

7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.

8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.

9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.

10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.

ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಆಸಕ್ತ...

ದಿನದ ಸುದ್ದಿ4 days ago

ವಸತಿ ಯೋಜನೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ. ಈ...

ದಿನದ ಸುದ್ದಿ5 days ago

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ...

ದಿನದ ಸುದ್ದಿ5 days ago

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ...

ದಿನದ ಸುದ್ದಿ5 days ago

ಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ 12 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ....

ದಿನದ ಸುದ್ದಿ5 days ago

ಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕೃಷಿ ಇಲಾಖೆ ಹಾಗೂ ಆತ್ಮ (ATMA) ಯೋಜನೆಯಡಿ 2026-27ನೇ ಸಾಲಿನ ವಿವಿಧ ಕೃಷಿ ಪ್ರಶಸ್ತಿಗಳಿಗಾಗಿ ದಾವಣಗೆರೆ ಜಿಲ್ಲೆಯ ಅರ್ಹ ಹಾಗೂ ಆಸಕ್ತ ರೈತ ಮತ್ತು ರೈತ...

ಅಂಕಣ7 days ago

ಕವಿತೆ | ದೇವರ ಹೂವು

~ ಡಾ. ಸಿ.ಬಿ.ಐನಳ್ಳಿ ಊಟ ಮಾಟ ವೇಷ ಭಾಷೆ ಪ್ರಾರ್ಥನೆ ಬೇರೆ ಬೇರೆ ಪವಿತ್ರಪಠ್ಯ ಅವನದೊಂದು ನನ್ನದಿನ್ನೊಂದಂತೆ ನದಿ ದಂಡೆಯ ಮೇಲೆ ನೋಟ ಬೆರೆತು ಮಾತು ಮರೆತು...

ದಿನದ ಸುದ್ದಿ7 days ago

ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ

ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ...

ದಿನದ ಸುದ್ದಿ1 week ago

ಆಶ್ರಯ ಯೋಜನೆ – ಆವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್‌ 30...

ದಿನದ ಸುದ್ದಿ1 week ago

ಗರಿಕೆ ಹುಲ್ಲಿನ ಜ್ಯೂಸ್‌ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ

ಗಿರೀಶ್ ಮುತ್ತು ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು...

Trending