Connect with us

ದಿನದ ಸುದ್ದಿ

ದಾವಣಗೆರೆ | ಕನ್ನಡ ಕರುಳಿನ ಭಾಷೆ : ದೊಡ್ಡಬಾತಿ ರಾಜ್ಯೋತ್ಸವದಲ್ಲಿ ಕೊಟ್ರೇಶ್ ಕಮಲಾಪುರ

Published

on

ಸುದ್ದಿದಿನ,ದಾವಣಗೆರೆ : ಕನ್ನಡ ಕರುಳಿನ ಭಾಷೆ. ನಿಖರ ಮತ್ತು ನಿರ್ದಿಷ್ಟ ಅರ್ಥವನ್ನು ಸೂಸುವ ಸ್ಪಷ್ಟ ಭಾಷೆ. ಉಚ್ಛಾರಣೆ ಮೂಲಕ ದೇಹದ ಆರೋಗ್ಯಕ್ಕೂ ಸಹಕಾರಿಯಾಗುವ ಇಂತಹ ಭಾಷೆ ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದು ಉಪನ್ಯಾಸಕ ಕೊಟ್ರೇಶ್ ಕಮಲಾಪುರ ವಿಶ್ಲೇಷಿದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿ ದೊಡ್ಡಬಾತಿ, ಚುಟುಕು ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಘಟಕ, ದಾವಣಗೆರೆ ಸಿರಿಗನ್ನಡ ವೇದಿಕೆ, ಸ್ಫೂರ್ತಿ ಪ್ರಕಾಶನ ತೆಲಿಗಿ – ದಾವಣಗೆರೆ ಹಾಗೂ ಭಾವಸಿರಿ ಪ್ರಕಾಶನ ಅಣಬೇರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ : 17/11/2019 ರ ಭಾನುವಾರ ಬೆಳಗ್ಗೆ 10.30ಕ್ಕೆ ದೊಡ್ಡಬಾತಿ ಗ್ರಾಮದ ಗುಡ್ಡದ ಮೇಲಿನ ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ
64 ನೇ ಕರ್ನಾಟಕ ರಾಜ್ಯೋತ್ಸವ, ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಯ ಮಹತ್ವವನ್ನು ಅರಿತಾಗ ಮಾತ್ರ ನಿಜವಾದ ಅಭಿಮಾನ ಮೂಡುತ್ತದೆ ಎಂದರು.

ಕನ್ನಡ ನಾಡು – ನುಡಿ, ಗಡಿ, ಜಲ, ಭಾಷೆಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳು ಹಲವು ವರುಷಗಳಿಂದ ಇಂದಿಗೂ ಸಮಸ್ಯೆಗಳಾಗಿಯೇ ಉಳಿದಿರುವುದಕ್ಕೆ ನಮ್ಮಲ್ಲಿನ ಸ್ವಾಭಿಮಾನ ಮತ್ತು ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ವಿಷಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚುಸಾಪ ಜಿಲ್ಲಾಧ್ಯಕ್ಷರಾದ ರಾಜಶೇಖರ್ ಗುಂಡಗಟ್ಟಿ ಅವರು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗುವ ರಾಜ್ಯೋತ್ಸವ ಕಾರ್ಯಕ್ರಮಗಳು ಜನಜಾಗೃತಿ ಮೂಡಿಸುವಂತಿರಬೇಕು. ಈ ದಿಸೆಯಲ್ಲಿ ಬಾತಿ ರಾಜ್ಯೋತ್ಸವ ಸಮಿತಿಯು ಪ್ರತಿ ವರ್ಷವೂ ಶಿಸ್ತು ಬದ್ಧವಾದ ಕಾರ್ಯಕ್ರಮ ರೂಪಿಸುತ್ತಿದೆ. ಸಾಧಕರು ಮತ್ತು ಸಮಾಜ ಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿದರು.

ಬಾತಿ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಬಾತಿ ಬಸವರಾಜ್, ಚ. ಷ ಮಲ್ಲಿಕಾರ್ಜುನಪ್ಪ, ವನಿತಾ ಸಾಹಿತ್ಯ ವೇದಿಕೆಯ ಮಲ್ಲಮ್ಮ ನಾಗರಾಜ್, ಕವಿಗಳಾದ ಓಂಕಾರಯ್ಯ ತವನಿಧಿ,,ರೋ. ಬಸವರಾಜ್, ರೇವಣಸಿದ್ದಪ್ಪ, ವಸುಪಾಲಪ್ಪ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಈ ವೇಳೆ ಸಾಧಕರುಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್ ಟಿ ಗಂಗಾಧರ, ಸಮಾಜ ಸೇವಕರುಗಳಾದ ಬಸಪ್ಪ ಕೋಂ ಹನಗವಾಡಿ ಕರಿಬಸಪ್ಪ , ಕೆ. ಎಂ ಚನ್ನಬಸವಯ್ಯ ಹಾಗೂ ಕವಿ ಜೆ. ವಸುಪಾಲಪ್ಪ ಅವರಿಗೆ ಸನ್ಮಾನಿಸಲಾಯಿತು. 2018 ರಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಮಮತ ಕೆ.ಎಂ, ಅಶ್ವಿನಿ ಡಿ. ಎಂ, ಕಾವ್ಯ ಎಸ್, ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಂಗೀತ ದೊಗ್ಗಳ್ಳಿ ಹಾಗೂ ಶ್ರೀರಾಮ ದೊಡ್ಡಬಾತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಧ್ಯಾಹ್ನ 2 ಗಂಟೆಗೆ ಸಿರಿಗನ್ನಡ ವೇದಿಕೆಯ ದಾವಣಗೆರೆ ಜಿಲ್ಲಾಧ್ಯಕ್ಷರಾದ ಶಿವಯೋಗಿ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಾಹಿತಿ ಗಂಗಾಧರ ಬಿ ಎಲ್ ನಿಟ್ಟೂರ್ ಆಶಯ ನುಡಿಯಾಡಿದರು. ಮುಖ್ಯ ಅತಿಥಿಗಳಾಗಿ ಕವಿಗಳಾದ ಎಂ. ಬಸವರಾಜ, ಪಿ. ವಿ. ರವಿಕುಮಾರ್, ಶೋಭ ಮಂಜುನಾಥ, ತಾರೇಶ್ ಅಣಬೇರು, ಹರಪನಹಳ್ಳಿ ತಾಲ್ಲೂಕು ಕರವೇ ಅಧ್ಯಕ್ಷ ನಾಗರಾಜ್ ತೆಲಿಗಿ ಭಾಗವಹಿಸಿದ್ದರು.

ದೊಡ್ಡಬಾತಿ ಶಾಮಿಯಾನ ಬಾತಿ ಕೃಷ್ಣ, ಪಾಪುಗುರು, ವೀರಭದ್ರಪ್ಪ ತೆಲಗಿ, ಸುನೀತ ಪ್ರಕಾಶ್, ಉಮಾದೇವಿ, ಪುಷ್ಪಾ ಹೊನ್ನಾಳಿ, ವೀರೇಶ್ ಬಿಜಿಎಂ, ಅಂಜಿನಪ್ಪ, ಡಾ. ಲೋಕೇಶ್ ಜಗಳೂರು, ಬಾತಿ ಷಣ್ಮುಖ, ಪಕ್ಕೀರೇಶ್ ಕೆಸರಳ್ಳಿ, ರಾಕೇಶ್ ಬಾರಿಮರ ಸೇರಿದಂತೆ ಇತರರು ಕವನ ವಾಚಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

Published

on

  • ರುದ್ರಪ್ಪ ಹನಗವಾಡಿ

ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ ಆಡಳಿತಾವಧಿಯಲ್ಲಿಯೇ ಹಲವು ಹೊಸ ಇಲಾಖೆ ಮತ್ತು ಗಂಗೋತ್ರಿಯಲ್ಲಿನ ಅನೇಕ ಹೊಸ ಕಟ್ಟಡಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಮಾಡಿಸಿದ್ದರು. ಹೀಗಿರುವಾಗ ನಾವು ಫೈನಲ್ ಎಂ.ಎ.ನಲ್ಲಿರುವಾಗ ಪ್ರಥಮ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಗಳಲ್ಲಿ ಸೇರಿಸಿಕೊಳ್ಳುವಾಗ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಬಂದ ಕಾರಣ ಸಮಾಜವಾದಿ ಯುವಜನ ಸಭಾ ವತಿಯಿಂದ ಪ್ರತಿಭಟಿಸಲು ತೀರ್ಮಾನಿಸಲಾಯಿತು.

ಮೊದಲನೆಯದಾಗಿ ವಿಶ್ವವಿದ್ಯಾಲಯದ ಪಿ.ಜಿ. ಗಳಲ್ಲಿ ಪ್ರವೇಶಾವಕಾಶಗಳು, ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವಕಾಶವನ್ನು ಪಡೆಯುತ್ತಿದ್ದರು. ನಾನು 1972-73ನೇ ಸಾಲಿನಲ್ಲಿ ಸೇರಿದಾಗಲೂ ಹಲವು ವಿಷಯಗಳಲ್ಲಿ ಪ್ರವೇಶಾವಕಾಶದ ಕೊನೆಯ ಹಂತದಲ್ಲಿ ಮಂತ್ರಿ ಮಹೋದಯರೋ ಇಲ್ಲ ವಿಶ್ವವಿದ್ಯಾಲಯದಲ್ಲಿನ ಪ್ರೊಫೆಸರ್‌ಗಳ ಶಿಫಾರಸ್ಸಿನಿಂದ ಒಂದೋ ಎರಡೋ ಕಡಿಮೆ ಅಂಕ ಪಡೆದವರಿಗೂ ಸೀಟು ಕೊಡುತ್ತಿದ್ದರು. ಇವೆಲ್ಲ ಬಹಳ ದಿನಗಳ ನಂತರ ತಿಳಿಯುತ್ತಿದ್ದವು. ಆದರೆ 1973-74 ಆರಂಭಿಕ ಪ್ರವೇಶದಲ್ಲಿ ಅನೇಕ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದರೂ ಹಲವಾರು ವ್ಯಕ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ 8-10 ವಿದ್ಯಾರ್ಥಿಗಳು ಹಲವಾರು ಸ್ನಾತಕೋತ್ತರ ಶಾಖೆಗಳಲ್ಲಿ ಸೇರ್ಪಡೆಯಾಗಿದ್ದರು.

ಅವುಗಳ ವಿರುದ್ಧ ಸಮಾಜವಾದಿ ಯುವಜನ ಸಭಾದ ವಿದ್ಯಾರ್ಥಿಗಳು ದೇವನೂರು ಮಹಾದೇವನ ನೇತೃತ್ವದಲ್ಲಿ ಕ್ರಾರ‍್ಡ್ ಹಾಲ್ ಎದುರು ಧರಣಿ ಕೂತಿದ್ದೆವು. ಸಣ್ಣದೊಂದು ಪೆಂಡಾಲ್ ಹಾಕಿಕೊಂಡು ವಿಶ್ವವಿದ್ಯಾಲಯದ ಅತ್ಯುನ್ನತ ಕಲಿಕಾ ಕೇಂದ್ರಗಳಲ್ಲಿ ಕ್ರಮಬದ್ಧವಲ್ಲದ ಪ್ರವೇಶಗಳನ್ನು ರದ್ದುಪಡಿಸಲು ಆಗ್ರಹಿಸಿ ಧರಣಿ ನಡೆಯುತ್ತಿತ್ತು. ಈ ಧರಣಿ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳನ್ನು ಶಿಫಾರಸ್ಸಿನ ಮೇರೆಗೆ ಪ್ರವೇಶ ಪಡೆದಿದ್ದಾರೆ ಎನ್ನುವ ಚರ್ಚೆ ಬಂದು ರಾಜ್ಯಶಾಸ್ತç ವಿಭಾಗದಲ್ಲಿ ಅತ್ಯಂತ ಹೆಚ್ಚು ಅನಧಿಕೃತ ಪ್ರವೇಶ ಆಗಿದ್ದವೆಂದು ತಿಳಿದು ಬಂದಿತ್ತು.

ಉಳಿದ ವಿಭಾಗಗಳಲ್ಲಿ ಒಂದು ಎರಡು ಹೀಗೆ ಇದ್ದರೆ, ಕೆ.ಬಿ.ವೈ. ತೋಟಪ್ಪನವರು ಮುಖ್ಯಸ್ಥರಾಗಿದ್ದ ರಾಜ್ಯಶಾಸ್ತç ವಿಭಾಗದಲ್ಲಿ ಅದು ಹೆಚ್ಚಾಗಿತ್ತು. ಹೀಗೆ ಧರಣಿ ಮಾಡುತ್ತಿದ್ದ ನಮ್ಮಲ್ಲಿಗೆ ಮಹೇಶ ರಾಜ್ಯಶಾಸ್ತç ವಿಭಾಗಕ್ಕೆ ಶಿಫಾರಸ್ಸಿನಲ್ಲೇ ಪ್ರವೇಶ ಪಡೆದವನು, ನಮಗೆಲ್ಲ ಇಡ್ಲಿ ಚಟ್ನಿ ಕಟ್ಟಿಸಿಕೊಂಡು ಬಂದು ಕೊಟ್ಟನು. ಅವನ ವಿರುದ್ಧವೇ ನಾವು ಧರಣಿ ಕೂತಿದ್ದರೂ, ಯಾವ ಭಾವಾವೇಶವೂ ಇಲ್ಲದೆ, ಅವನನ್ನು ನೋಡಿ ನಮಗೆ ಅತ್ಯಾಶ್ಚರ್ಯವಾಗಿತ್ತು. ಎಲ್ಲ ಅನಧಿಕೃತ ಪ್ರವೇಶಾರ್ಥಿಗಳನ್ನು ತೆಗೆದು ಹಾಕಿದರೆ ನನಗೇನು ಬೇಸರವಿಲ್ಲ. ನಮ್ಮಪ್ಪನಿಗೆ ಸ್ವಲ್ಪ ಬೇಜಾರಾಗಬಹುದೆಂದು ಹೇಳಿದ್ದು ಈಗ ನೆನಪಾಗುತ್ತಿದೆ. ನಮ್ಮ ಧರಣಿಯಿಂದಾಗಿ ಈಗಾಗಲೇ ಆಗಿರುವ ಪ್ರವೇಶಾರ್ಥಿಗಳನ್ನು ತೆಗೆದು ಹಾಕಲಿಲ್ಲ. ಮುಂದಿನ ವರ್ಷಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿ ಪ್ರೊಫೆಸರ್‌ಗಳು ಪ್ರವೇಶಗಳಿಗೆ ಅರ್ಹವಾದ ವಿದ್ಯಾರ್ಥಿಗಳ ಅರ್ಜಿಗಳನ್ನು ಕುಲಪತಿಗಳ ಅನುಮೋದನೆ ಪಡೆದು, ನಂತರ ಪ್ರವೇಶಾರ್ಥಿಗಳಿಗೆ ಪ್ರವೇಶ ನೀಡುವ ಪರಿಪಾಲನೆ ಜಾರಿಗೆ ಬಂದಿದ್ದೊಂದು ಎಸ್.ವೈ.ಎಸ್. ಸಂಘಟನೆಯ ಸಾಧನೆ.

ಜೊತೆಗೆ ನಾನೂ ಕೂಡ, ಕಳೆದ ವರ್ಷವಷ್ಟೇ ಪಾರ್ವತಕ್ಕನವರ ಶಿಫಾರಸ್ಸಿನಿಂದ ಮೂರನೇ ಲಿಸ್ಟ್ನಲ್ಲಿ ಸೀಟು ಪಡೆದುಕೊಂಡಿದ್ದು, ಆ ಬಗ್ಗೆ ನನ್ನೊಳಗೆ ಅಪರಾಧಿ ಭಾವ ಇದ್ದೇ ಇತ್ತು. ಆಗ ಇದೊಂದು ದೊಡ್ಡ ಮಟ್ಟದ ಅನ್ಯಾಯವೆಂದು ಯಾರೂ ಪರಿಗಣಿಸದೆ ಮುಚ್ಚಿ ಹೋಯಿತು. ಈಗ ಅಂತಹ ಶಿಫಾರಸ್ಸಿನವರ ಸಂಖ್ಯೆಯೇ ಜಾಸ್ತಿಯಾಗಿ, ಅದರ ವಿರುದ್ಧ ಹೋರಾಟ ರೂಪಿಸುವಂತೆ ಆಗಿದ್ದು, ನಾನೂ ಕೂಡ ಭಾಗವಹಿಸಿದ್ದು ಆ ಕಾಲಘಟ್ಟದ ಎಚ್ಚರಿಕೆಯಲ್ಲಿದ್ದ ಸಂಘಟನೆಯ ಶಕ್ತಿಯಾಗಿತ್ತು.

ನಮ್ಮ ಧರಣಿಯ ವಿವರ ಮತ್ತು ಅನಧಿಕೃತ ಪ್ರವೇಶಾರ್ಥಿಗಳು ಅರ್ಥಶಾಸ್ತ್ರ ವಿಭಾಗದಲ್ಲೂ ಆಗಿರುವ ಬಗ್ಗೆ ಬಂಡಾಯ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವುಗಳ ಪ್ರತಿಗಳನ್ನು ನಾನು ಸ್ವತಃ ಕ್ಲಾಸಿನಲ್ಲಿ ಹಂಚಿದ್ದೆ. ಆದರೆ ನಮ್ಮ ವಿಭಾಗದ ಮುಖ್ಯಸ್ಥರಾದ ಜಿ.ಟಿ. ಹುಚ್ಚಪ್ಪನವರು ಯಾವುದೇ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಅವರು, ಆಗ ತೋರಿದ ದೊಡ್ಡತನ ಮರೆಯಲಾಗಿಲ್ಲ. ಅವರು ಮನಸ್ಸು ಮಾಡಿದ್ದರೆ ನನಗೆ ಶೈಕ್ಷಣಿಕವಾಗಿ ತೊಂದರೆ ಕೊಡಬಹುದಾಗಿತ್ತು. ಆದರೆ ಹಿರಿಯರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪ ಅವರು ದೊಡ್ಡತನದಿಂದಲೇ ನಡೆದುಕೊಂಡಿದ್ದರು. ಗಂಗೋತ್ರಿ ತುಂಬಾ ಎಲ್ಲ ವಿಭಾಗಗಳ ಹೊರಗೆ ಅನಧಿಕೃತ ಪ್ರವೇಶಾರ್ಥಿಗಳ ಕುರಿತು ಘೋಷವಾಕ್ಯಗಳನ್ನು ಬರೆದಿದ್ದೆವು. ವಿಜ್ಞಾನ ಮತ್ತು ರಾಜ್ಯಶಾಸ್ತç ವಿಭಾಗದಲ್ಲಿ ಆಗಿದ್ದ ಪ್ರವೇಶಾರ್ಥಿಗಳ ವಿವರಗಳನ್ನು ಬಾಟನಿ ವಿಭಾಗದಲ್ಲಿ ರೀಡರ್ ಆಗಿದ್ದ ಪ್ರೊ. ರಾಮಲಿಂಗಮ್ ಅವರೊಡನೆ ಇತರೆ ಅಧ್ಯಾಪಕರುಗಳು ಕೂಡ ನಮಗೆ ವಿವರ ನೀಡುತ್ತಿದ್ದರು. ಎಲ್ಲಾ ವಿಭಾಗಗಳ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಗೋಡೆಯ ಮೇಲೂ ಕೂಡ ಬರೆದಿದ್ದೆವು. ಮಾರನೆ ದಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹಾ.ಮಾ. ನಾಯಕ್ ಅವರು ಬಂದು ನೋಡಿ ಇದೆಲ್ಲಾ `ತಮ್ಮ ವಿದ್ಯಾರ್ಥಿ ಮಹಾದೇವನದೇ ಕೈವಾಡವೆಂದು ರೇಗಾಡಿದರೆಂತಲೂ, ಆತನಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದರೆಂದು’ ಆಲನಹಳ್ಳಿ ಕೃಷ್ಣ ಬಂದು ನನ್ನ ಬಳಿ ಹೇಳಿದರು.

ನಾನು ಮಹಾದೇವ ಬಂದಾಕ್ಷಣ ಅವನ ಕನ್ನಡ ವಿಭಾಗದಲ್ಲಿ ಆದ ಬೆಳವಣಿಗೆಯನ್ನು ತಿಳಿಸಿದೆ ಅದಕ್ಕವನು `ನಾವೆಲ್ಲ ಮಾಡುತ್ತಿರುವ ಹೋರಾಟದಲ್ಲಿ ನಿಮ್ಮಂತವರ ಬೆಂಬಲ ತಾತ್ವಿಕವಾಗಿ ಇರುವುದೆಂದು ಭಾವಿಸಿದ್ದೆವು, ಆದರೆ ನೀವು ಆಲನಹಳ್ಳಿ ಕೃಷ್ಣ ಅವರ ಬಳಿ ಆಡಿದ ಮಾತು ಕೇಳಿ ನನಗೆ ಜಿಗುಪ್ಸೆ ಮೂಡಿ ನಿಮ್ಮಂತಹವರ ಕೆಳಗೆ ವಿದ್ಯಾಭ್ಯಾಸ ಮುಂದುವರಿಸಲು ನಾಚಿಕೆಯಾಗುತ್ತದೆ’ ಎಂದು ಪತ್ರ ಬರೆದು ಹಾ.ಮಾ. ನಾಯಕ್ ಮತ್ತು ಪ್ರಜಾವಾಣಿ ಪತ್ರಿಕೆಗೂ ಕಳಿಸಿಕೊಟ್ಟುಬಿಟ್ಟ. ಇದಕ್ಕೆಲ್ಲ ಕಾರಣರಾದ ಆಲನಹಳ್ಳಿ ಅವರಿಗೆ ಪೀಕಲಾಟವಾಯಿತು. ಪೋಸ್ಟ್ ಹಾಕಿದ ಪತ್ರ ಹಾ.ಮಾ.ನಾ.ಗೆ ಮತ್ತು ಪ್ರಜಾವಾಣಿಗೆ ತಲುಪಿದರೂ ಪ್ರಕಟಿಸದಂತೆ ಪ್ರಜಾವಾಣಿಗೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ಹಾ.ಮಾ.ನಾ.ಗೆ ಬರೆದ ಪತ್ರ ತಲುಪಿ ಮಾದೇವನನ್ನು ಕರೆದು ಮಾತಾಡಿಸಿ, ಹಾ.ಮಾ.ನಾ. ನಾವುಗಳು ಮಾಡುತ್ತಿರುವ ಹೋರಾಟದ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲವೆAದು ಹೇಳಿ ಕಳಿಸಿದರೆಂದು ನಂತರ ತಿಳಿಯಿತು. ಹಾಗಾಗಿ ಮಾದೇವ ಎಂ.ಎ. ಪೂರ್ತಿ ಮುಗಿಸುವ ತನಕ ಮತ್ತೇನು ತೊಂದರೆಯಾಗಲಿಲ್ಲ.

ನಮ್ಮ ಸೀನಿಯರ್ ಆಗಿದ್ದ ಬಸವಣ್ಯಪ್ಪ ಆಗಲೇ ಎಂ.ಎ. ಮುಗಿಸಿ ಪರ‍್ವತಕ್ಕನ ಸೋಷಿಯಾಲಜಿ ವಿಭಾಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ ಮಾಡುತ್ತಿದ್ದ. ನಾನು ನನ್ನ ಎಸ್‌ವೈಎಸ್ ಚಟುವಟಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ ವಿಶ್ವವಿದ್ಯಾಲಯದ ವಿಷಯ ಮುದ್ರಿಸಿ ತರಗತಿಯಲ್ಲಿ ಹಂಚಿದ ಬಗ್ಗೆ ತಿಳಿದು, ನನಗೆ ಎಚ್ಚರಿಕೆ ನೀಡಿ ನಿನಗೆ ಎಂ.ಎ.ನಲ್ಲಿ ಥರ್ಡ್ ಕ್ಲಾಸ್ ನೀಡಿ ಎಲ್ಲೂ ನಿನಗೆ ಕೆಲಸವಿದಲ್ಲದಂತೆ ಮಾಡುತ್ತಾರೆಂದು ತಿಳಿಸಿ ಆತಂಕ ವ್ಯಕ್ತಪಡಿಸಿದ್ದ. ಆದರೆ ಅಂತಹದ್ದೇನೂ ನಡೆಯದೆ ಫಲಿತಾಂಶ ಬಂದಾಗ ನಾನು ಎಂ.ಎ. ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿ ಹೊರಬಂದಿದ್ದೆ. ಅದಕ್ಕೆಲ್ಲ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪನವರ ವಿಶಾಲ ಹೃದಯದ ನಡವಳಿಕೆಯೇ ಕಾರಣವಾಗಿತ್ತು.

ಇನ್ನೊಂದು ಪ್ರಕರಣ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸೋದರ ಸಂಬಂಧಿಯಾದ ಡಿ. ವಿಜಯರಾಜೇ ಅರಸ್ (ಡಿ.ವಿ. ಅರಸ್) ಅವರು ನೂತನ ರಿಜಿಸ್ಟಾçರ್ ಆಗಿ ಇದ್ದರು. ಅವರು ಬಿ.ಎ. (ಆರ‍್ಸ್) ಮಾಡಿ ಹಲವು ದೇಶಗಳನ್ನು ಸುತ್ತಿ ಬಂದ ಅನುಭವೀ ಆಡಳಿತಗಾರರಾಗಿದ್ದರು. ಅವರ ಆಡಳಿತ ಮತ್ತು ವೈಯಕ್ತಿಕ ಆಸಕ್ತಿಗೆ ತಕ್ಕಂತೆ ತಮ್ಮ ಛೇಂಬರ್‌ಗೆ ರೆಡ್ ಕಾರ್ಪೆಟ್ ಹಾಕಿಸಿಕೊಂಡದ್ದೊಂದು ದೊಡ್ಡ ಸುದ್ದಿಯಾಗಿತ್ತು. ಅದರ ವಿರುದ್ಧ ಎಸ್.ವೈ.ಎಸ್. ಧರಣಿ ಮಾಡಿ ಎಲ್ಲ ವಿದ್ಯಾರ್ಥಿಗಳಲ್ಲೂ ಚರ್ಚಿಸುವಂತೆ ಮತ್ತೆ ಪತ್ರಿಕೆಗಳಲ್ಲಿ ಬಂದು, ರಿಜಿಸ್ಟಾçರ್ ಅವರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಧರಣಿ ಮಾಡಿದ್ದೆವು. ಈಗ ಯೋಚಿಸಿದರೆ ಆಗ ನಾವು ಮಾಡುತ್ತಿದ್ದ ಸಣ್ಣ ಸಣ್ಣ ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳಿಗೆ ಪ್ರತಿಕ್ರಿಯಿಸುತ್ತಿದ್ದ ವಿದ್ಯಾರ್ಥಿ ಸಮೂಹ ಈಗ ಇಂತಹ ಯಾವುದೇ ಸ್ಪಂದನವನ್ನು ಕಾಣದೆ ಎಲ್ಲರೂ ತಮ್ಮ ತಮ್ಮ ಜಾತಿ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಸಮಾಜದ ಸಮಷ್ಟಿ ಬೆಳವಣಿಗೆಯ ಬಗ್ಗೆ ನಿರುತ್ಸಾಹ ಎದ್ದು ಕಾಣುತ್ತದೆ. ವಿಶ್ವವಿದ್ಯಾಲಯಗಳಲ್ಲಿ ವರ್ಷಗಟ್ಟಲೆ ಅಧ್ಯಾಪಕರಿಲ್ಲದೆ ಇದ್ದರೂ,ಆ ಬಗ್ಗೆ ದಿವ್ಯ ನಿರ್ಲಕ್ಷ್ಯ ದಿಂದ ಇರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲಿ ಸಂಘಟಿತ ಹೋರಾಟಗಳು ಇಲ್ಲವಾಗಿವೆ.

ಈ ಮೇಲಿನ ಎರಡು ಧರಣಿಗಳು ಎಲ್ಲಾ ವಿದ್ಯಾರ್ಥಿ ದೆಸೆಯ ಸಮಾಜವಾದಿ ಯುವಜನ ಸಭಾದ ಸಂಘಟನೆಯ ಮುಖಾಂತರ ನಡೆದವುಗಳು. ವಿದ್ಯಾರ್ಥಿಗಳಾಗಿ ನಾವು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳಿಗೆ ಏನೂ ಮಾಡಲಾರೆವು ಎಂದು ಕೈಚೆಲ್ಲಿ ಕೂರದೆ ಸಂಘಟಿತ ಪ್ರತಿಭಟನೆ ಮಾಡಿದಾಗ ಆಗುವ ಬದಲಾವಣೆಯನ್ನು ಕೂಡ ಕಣ್ಣೆದುರಿಗೆ ತೋರಿಸುವಂತಾಗಿದ್ದವು. ಮುಂದಿನ ದಿನಗಳಲ್ಲಿ ಅಧಿಕಾರಸ್ಥರಿಗೆ ಸರಿಯಾದ ಮಾರ್ಗದಲ್ಲಿ ನಡೆಯಲು ದಿಕ್ಸೂಚಿಯಾಗಿ ನಿಂತವು ಎಂಬುದರಲ್ಲಿ ಎರಡು ಮಾತಿಲ್ಲ.

ಓ ನನ್ನ ಮೈಸೂರೆ !

ನಮ್ಮೂರ ಹಾಲಿವಾಣದ ಮುಳ್ಳುಗಳು
ಓಡಾಡೋ ದಾರಿಯ ಕೊರಕಲುಗಳು
ಒಪ್ಪಾರೆ ನೆರಕೆಯ ಹೋಟೆಲುಗಳ ಕಿಲುಬು ಕಪ್ಪುಗಳು
ಒಟ್ಟಾರೆ ಒಂದೆರಡಲ್ಲ ಹೀಗೆ ನೂರಾರು ಸಿಕ್ಕುಗಳ
ಮಡಿ ಮೈಲಿಗೆ ದಾಟಿ…

ನೇರ ಹರಿಯೋ ರೈಲುಹತ್ತಿ ಮೈಸೂರು ತಲುಪಿದ್ದು
ಮಹಾರಾಜರೇ ಕಟ್ಟಿದ ಕಾಲೇಜು ಮೆಟ್ಟಿದ್ದು
ಅರಮನೆ, ಚಾಮುಂಡಿ ಬೆಟ್ಟ
ಎತ್ತೆತ್ತಲೋ ಕೊಂಡೊಯ್ಯುವ ರಸ್ತೆಗಳು
ಹೌಹಾರುವ ನೋಟಗಳು
ಎಲ್ಲ ಹೊತ್ತೊಗೆದಿತ್ತು ನನ್ನ
ಜನ್ಮ ಜನ್ಮಾಂತರದ ಹೊರೆಯ
ಕಣ್ಣಿಗಂಟಿದಾ ಪೊರೆಯ…

ದಿವ್ಯ ದೇಗುಲದಾ ಒಳಗೆ
ಬೆಳಕ ತೋರೋ ಪಂಡಿತರು
ಕಾಸಿ ಕಾಸಿ ಹಣಿಯೋ ಕುಲುಮೆಗಳು
ಬೆಳ್ಳಿ ಬಂಗಾರದ ಭಂಡಾರಗಳು
ಉAಡು ಉಡಲು ಇತ್ತ
ರಾಜನ ಹೆಸರಿನ ತಂಗುದಾಣ
ಅದುವೇ ಪಂಚಾಮೃತ…

ಇದ್ದವರೆಲ್ಲ, ಇಲ್ಲಿ ನನ್ನಂತವರಲ್ಲ
ಆಗಲೇ ಸಿಗರೇಟು ಹಚ್ಚಿ
ಕಥೆ ಬರೆಯೋ ಮಾದೇವ
ಟರ್ಲಿನ್ ಷರ್ಟನಲ್ಲಿ ಬಂಗಾರದ ಚೈನು ಹಾಕಿ
ವಿಶಾಲ ಹೃದಯ ತೋರೋ ರೆಡ್ಡಿ
ತಾಯಿಗಡುಸಿನ ತಾವು ತೋರೋ ಮಹೇಶ
ಅವಸರದಲ್ಲೂ ಉಡದಂತೆ ಹಿಡಿದು ಒಪ್ಪಿಸೋ ಅರ್ಕೇಶ
ಅಕ್ಷರಗಳನಾಡಿಸಿ ಮಣಿಸೋ ಭಕ್ತ
ಸಮತಟ್ಟಲಿ ಹರಿಯೋ ಹೊಳೆಯಂತೆ ಗೊಟ್ಟಿಗೆರೆ ಶಿವರಾಜ
ವಾರವೆಲ್ಲ ಉಣದಿದ್ದರೂ ಬಣ್ಣಗೆಡದ ರಾಕೆ…

ಇಂತವರೆಲ್ಲರ ಕೂಡಿ ಹಾಕಿ ಮಾತಾಡೋ
ನಂಜುAಡಸ್ವಾಮಿ, ವಕೀಲ ಟಿ.ಎನ್.ಎನ್., ದಾನಿ ಪಿ. ಮಲ್ಲೇಶ್
ಅನಂತರಂಗಾಚಾರ್, ರಾಮದಾಸ್
ನೆಲಮೂಲದ ನೆರವು ತೋರೋ
ನೆಲಮನೆಯ ದೇವೇಗೌಡ
ಆಂದೋಲನದಾಳಕ್ಕೂ ಮುಳುಗಿನಿಂತ
ರಾಜಶೇಖರ ಕೋಟಿ
ಅರೆಜೀವಗೊಂಡವರ
ಹೊರೆಹೊತ್ತು ಬರುವಾ ಕೃಷ್ಣಪ್ಪ
ರಿಪೇರಿಯಲ್ಲೇ ಓಡೋ ಜೀಪಲ್ಲಿ ತೇಜಸ್ವಿ
ಕ್ರಾಂತಿಕವನಗಳ ಕಟ್ಟು ಹೊತ್ತ
ಸಂಕ್ರಮಣದ ಚಂಪಾ
ಸ್ಫೋಟಕ ಸುದ್ಧಿಯ ಪ್ರೊ. ರಾಮಲಿಂಗ
ಯುವಕರ ಕಣ್ಣಲ್ಲಿ ಮಿಂಚು ಹರಿಸೋ
ಅನಂತಮೂರ್ತಿ, ಲಂಕೇಶ, ರಾಮಮೂರ್ತಿ
ವಿಚಾರವಾದಿಗಳ ರಥಕತೆಯ
ರ‍್ಮಲಿಂಗಂ, ಕೊವೂರ್, ಪೆರಿಯಾರ್
ಹೆಚ್. ನರಸಿಂಹಯ್ಯ, ಕುವೆಂಪು, ಬಸವಲಿಂಗಪ್ಪ…

ಬದುಕು ಬರಹಗಳೇ
ರಸವಾಗಿ ಕೊಸರಾಗಿ ಮೈವೆತ್ತ
ಎಲ್. ಬಸವರಾಜು, ಸುಜನಾ
ಹೀಗೆ ಹರಿಯುತ್ತದೆ
ನನ್ನರಿವಿನಾ ಹರವು…
ಬೆರಗಾಗಿ – ಬೆಳಕಾಗಿ
ಕೆನೆಮೊಸರ ಕಡೆದಂತೆ
ಸೊಗಸಾಗಿ ಬೆಳೆದಿದೆ
ಇಂದಿಗೂ ತಲೆದಿಂಬಾಗಿ
ತಲೆ ಎತ್ತಿ ತಿರುಗಾಡುವ
ಅಂಬಾಗಿ…

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. 5 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ, 6ನೇ ಹಂತದ 58 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 57.70 ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಶೇಕಡ 52.24, ಜಾರ್ಖಂಡ್‌ನಲ್ಲಿ ಶೇಕಡ 61.41, ಹರ್ಯಾಣzಲ್ಲಿ ಶೇಕಡ 55.93, ಒಡಿಶಾದಲ್ಲಿ ಶೇಕಡ 59.60, ಉತ್ತರಪ್ರದೇಶದಲ್ಲಿ 52.02 ಮತ್ತು ಪಶ್ಚಿಮಬಂಗಾಳದಲ್ಲಿ 77.99, ದೆಹಲಿಯಲ್ಲಿ 53.73 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 51.35ರಷ್ಟು ಮತದಾನವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು ಲಾಕಪ್ ಡೆತ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ದೂರಿನ ಬೆನ್ನಲ್ಲೇ ಆದಿಲ್‌ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ಕರೆತಂದ ಕೆಲವೇ ನಿಮಿಷದಲ್ಲೇ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಆದಿಲ್ ಸಾವು ಬೆನ್ನಲ್ಲೇ ರೊಚ್ಚಿಗೆದ್ದ ಜನರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending