ರಾಜಕೀಯ
ಸ್ಥಳೀಯ ಸಂಸ್ಥೆ ಚುನಾವಣೆ: ಮದ್ದೂರಿನಲ್ಲಿ ಪ್ರಾಬಲ್ಯ ಸಾಧಿಸಿದ ಜೆಡಿಎಸ್

ಸುದ್ದಿದಿನ ವಿಶೇಷ: ಮದ್ದೂರು ಇತಿಹಾಸದಲ್ಲಿ ಪುರಸಭಾ ಚುನಾವಣೆಯಲ್ಲಿ 50ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಓಟಿಂಗ್ ನಡೆದಿತ್ತು. ಮಾಜಿ ಪುರಸಭಾ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಮರ್ ಬಾಬು ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕೃಷ್ಣ ರವರು ತೀವ್ರ ಪೈಪೋಟಿ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕ್ಷೇತ್ರದ ಮತದಾರರು ಪಕ್ಷೇತರ ಅಭ್ಯರ್ಥಿಯ ಕೈ ಹಿಡಿದಿದ್ದಾರೆ.
ಅದೃಷ್ಟದ ಫಲಿತಾಂಶ
ಮದೂರುಪುರಸಭಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 8ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ರತ್ನಾ ತಿಮ್ಮಯ್ಯ ರವರು ಜಯಶೀಲ ರಾಗಿದ್ದಾರೆ. Éಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಲತಾ ವೆಂಕಟೇಶ್ ರವರು 286ಮತಗಳನ್ನು ಪಡೆದಿದ್ದರು ಮತ್ತು ಪಕ್ಷೇತರ ಅಭ್ಯರ್ಥಿಯು ಸಹ 286ಮತಗಳನ್ನು ಪಡೆದಿದ್ದರು ಆದರೆ ಚುನಾವಣೆ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಡಬ್ಬದಲ್ಲಿ ಚೀಟಿಯನ್ನು ಹಾಕಿ ಎತ್ತುವ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
2018 ನೇ ಮದ್ದೂರು ಪುರಸಭೆ ಚುನಾವಣೆ ವಿಜೇತರ ಪಟ್ಟಿ
1ನೇ ವಾರ್ಡ್ ವಿಜೇತರ ಹೆಸರು :/ಎಸ್ ಮಹೇಶ್ -ಪಡೆದ ಮತಗಳು560 -(ಪಕ್ಷ ಜೆಡಿಎಸ್ )
2 ನೇ ವಾರ್ಡ್ ವಿಜೇತರ ಹೆಸರು : ಶೋಭಾ ಮರಿ ಪಡೆದ ಮತಗಳು442 ಅಂತರ -(ಪಕ್ಷ ಪಕ್ಷೇತರ )
3 ನೇ ವಾರ್ಡ್ ವಿಜೇತರ ಹೆಸರು : ಬಸವರಾಜ -ಪಡೆದ ಮತಗಳು402 ಅಂತರ – (ಪಕ್ಷ ಜೆಡಿಎಸ್ )
4 ನೇ ವಾರ್ಡ್ ವಿಜೇತರ ಹೆಸರು : .ಪ್ರಿಯಾಂಕಾ ಅಪ್ಪುಗೌಡ -ಪಡೆದ ಮತಗಳು368 – (ಪಕ್ಷ ಪಕ್ಷೇತರ )
5 ನೇ ವಾರ್ಡ್ ವಿಜೇತರ ಹೆಸರು : ಕೋಕಿಲಾ ಅರುಣ್ -ಪಡೆದ ಮತಗಳು 613- ( ಪಕ್ಷ ಕಾಂಗ್ರೆಸ್ )
6 ನೇ ವಾರ್ಡ್ ವಿಜೇತರ ಹೆಸರು : ಕೆ. ಪ್ರಮಿಳಾ -ಪಡೆದ ಮತಗಳು356 – (ಪಕ್ಷ ಜೆಡಿಎಸ್ )
7 ನೇ ವಾರ್ಡ್ ವಿಜೇತರ ಹೆಸರು : ಸಚಿನ್ ಪಡೆದ ಮತಗಳು 210 -( ಪಕ್ಷ ಪಕ್ಷೇತರ )
8 ನೇ ವಾರ್ಡ್ ರಲ್ಲಿ ಸಮಬಲ ಸಾಧಿಸಿದ್ದು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿಗಳು ಇಬ್ಬರ ಹೆಸರನ್ನು ಬರೆದು ಒಂದು ಪಟ್ಟಿಯಲ್ಲಿ ಹಾಕಿ ಕಣ್ಣಿಗೆ ಬಟ್ಟೆ ಕಟ್ಟಿ ಯತಿ ಸುವ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ಲಾಟರಿಯಲ್ಲಿ ಆಯ್ಕೆಯಾದರು.
9 ನೇ ವಾರ್ಡ್ ವಿಜೇತರ ಹೆಸರು : ಶೋಭಾರಾಣಿ ಚಂದ್ರು -ಪಡೆದ ಮತಗಳು 304 (ಪಕ್ಷ ಜೆಡಿಎಸ್ )
10ನೇ ವಾರ್ಡ್ ವಿಜೇತರ ಹೆಸರು : ಕೇಬಲ್ ಸುರೇಶ್ ಪಡೆದ ಮತಗಳು863 – ( ಪಕ್ಷ ಜೆಡಿಎಸ್ )
11 ನೇ ವಾರ್ಡ್ ವಿಜೇತರ ಹೆಸರು : ಕಮಲ್ನಾಥ್ -ಪಡೆದ ಮತಗಳು 284- ( ಪಕ್ಷ ಕಾಂಗ್ರೆಸ್ )
12 ನೇ ವಾರ್ಡ್ ವಿಜೇತರ ಹೆಸರು : ಎಚ್ ವಿ ಸುಮಿತ್ರಾ ಪಡೆದ ಮತ 269 -ಅಂತರ-( ಪಕ್ಷ ಜೆಡಿಎಸ್ )
13 ನೇ ವಾರ್ಡ್ ವಿಜೇತರ ಹೆಸರು : ಪಿ ಸಿದ್ದರಾಜು ಪಡೆದ ಮತ 250ಅಂತರ- ( ಪಕ್ಷ )
14 ನೇ ವಾರ್ಡ್ ವಿಜೇತರ ಹೆಸರು : ಆಯುಷಾ ಪಡೆದ ಮತಗಳ 639 -( ಪಕ್ಷ ಜೆಡಿಎಸ್ )
15 ನೇ ವಾರ್ಡ್ ವಿಜೇತರ ಹೆಸರು : ಸಬ್ರಿನ್ ತಾಜ್ ಪಡೆದ ಮತಗಳು 303–( ಪಕ್ಷ ಕಾಂಗ್ರೆಸ್ )
16ನೇ ವಾರ್ಡ್ ವಿಜೇತರ ಹೆಸರು : ಕ್ಕೆ ವನಿತಾ ಪಡೆದ ಮತಗಳು 314– -( ಪಕ್ಷ ಜೆಡಿಎಸ್ )
17ನೇ ವಾರ್ಡ್ ವಿಜೇತರ ಹೆಸರು : ಎಂಐ ಪ್ರವೀಣ್ ಪಡೆದ ಮತಗಳು 353 –( ಪಕ್ಷ ಜೆಡಿಎಸ್ )
18ನೇ ವಾರ್ಡ್ ವಿಜೇತರ ಹೆಸರು : ಎಂಕೆ ಮನೋಜ್ ಕುಮಾರ್ ಪಡೆದ ಮತ 303- –( ಪಕ್ಷ ಪಕ್ಷೇತರ )
19ನೇ ವಾರ್ಡ್ ವಿಜೇತರ ಹೆಸರು : ಆದಿಲ್ ಆಲಿಖಾನ್ ಪಡೆದ ಮತ 396 ಅಂತರ —(ಪಕ್ಷ ಜೆಡಿಎಸ್ )
20ನೇ ವಾರ್ಡ್ ವಿಜೇತರ ಹೆಸರು : ಟಿಆರ್ ಪ್ರಸನ್ನ ಕುಮಾರ್ ಅವಿರೋಧ ಆಯ್ಕೆ
21ನೇ ವಾರ್ಡ್ ವಿಜೇತರ ಹೆಸರು : ಸರ್ವಮಂಗಳ ಪಡೆದ ಮತಗಳು 673 ( ಪಕ್ಷ ಜೆಡಿಎಸ್ )
22ನೇ ವಾರ್ಡ್ ವಿಜೇತರ ಹೆಸರು : ಸಿ ನಂದೀಶ್ ಪಡೆದ ಮತಗಳು ಅಂತರ—-( ಪಕ್ಷ ಕಾಂಗ್ರೆಸ್ )
23ನೇ ವಾರ್ಡ್ ವಿಜೇತರ ಹೆಸರು ಲತಾ ಕೆ ಪಡೆದ ಮತಗಳು 560 ಅಂತರ—( ಪಕ್ಷ ಬಿಜೆಪಿ )
ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಿಜೇತ ಪಕ್ಷಗಳ ವಿವರ
ಜೆಡಿಎಸ್ -12
ಕಾಂಗ್ರೆಸ್ -4
ಬಿಜೆಪಿ -1
ಪಕ್ಷೇತರ -6
ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್

ಸುದ್ದಿದಿನ, ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆ ಗದ್ದುಕೆ ಹಿಡಿದಿದ್ದಕ್ಕೆ ಸಂಸದ ಜಿಎಂ ಸಿದ್ದೇಶ್ವರ ಹರ್ಷ ವ್ಯಕ್ತಪಡಿಸಿದ್ದು, ವರಿಷ್ಠರ ನಿರ್ಧಾರದಂತೆ ಎಸ್ ಟಿ ವೀರೇಶ್ ಅವರನ್ನ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ | ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
ಬುಧವಾರ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಮನೆ ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಅವರ ವೈಯಕ್ತಿ ವಿಚಾರವಾಗಿದೆ. ನಾವು ಯಾರಿಗೂ ಯಾವ ಆಮಿಷ ಒಡ್ಡಿಲ್ಲ. ಸ್ವತ: ಅವರೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಿನಿ ಅಂತ ಬಂದಿದ್ದರು, ಹಾಗಾಗಿ ಅವರನ್ನ ಬಿಜೆಪಿಗೆ ಸೇರಿಸಿಕೊಂಡಿದ್ದೇವೆ. ಇನ್ನು ಯಾರಾದರೂ ಬಿಜೆಪಿ ಸೇರ್ತಾರ ಎಂಬ ವರದಿಗಾರರ ಪ್ರಶ್ನೆಗೆ ಸಿದ್ದೇಶ್ವರ್ ಅವರು ‘ವೇಟ್ ಆ್ಯಂಡ್ ಸೀ ಎಂದು ಅಚ್ಚರಿ ಮೂಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ
ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್

ಸುದ್ದಿದಿನ,ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಯತಲ್ಲಿ ಬಿಜೆಪಿಯು ಭರ್ಜರಿ ಗೆಲುವು ಪಡೆಯಿತು. ಮೇಯರ್ ಆಗಿ ಬಿಜೆಪಿಯ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾದರು.
29 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯು ದಾವಣಗೆರೆ ಪಾಲಿಕೆ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್ 22 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ | ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು

ಸುದ್ದಿದಿನ, ದಾವಣಗೆರೆ : ಕಾಂಗ್ರೆಸ್ ನ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಗೈರು ಹಾಜರಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕರ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮತದಾನ ನಡೆಯಿತು.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಎಸ್. ಟಿ. ವೀರೇಶ್, ಕಾಂಗ್ರೆಸ್ ನಿಂದ ಗಡಿಗುಡಾಳ್ ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಸಂಸದ ಜಿ ಎಂ ಸಿದ್ದೇಶ್ವರ್ , ಸಚಿವ ಆರ್ ಶಂಕರ್, ಚಿದಾನಂದಗೌಡ ಸೇರಿದಂತೆ ಬಿಜೆಪಿ ಪಕ್ಷದ 29 ಸದಸ್ಯರು ಇದ್ದರು. ಕಾಂಗ್ರೆಸ್ ನ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮೂವರು ಎಂ ಎಲ್ ಸಿ ಗಳಾದ ಕೆಸಿ ಕೊಂಡಯ್ಯ, ರಘು ಆಚಾರ್ , ಯುಬಿ ವೆಂಕಟೇಶ್ ಗೈರಾಗಿದ್ದರು. ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಸೇರಿದಂತೆ ಮಹಾನಗರ ಪಾಲಿಕೆ 22 ಸದಸ್ಯರು ಹಾಜರಿದ್ದರು.
ಶಾಸಕ ಶಾಮನೂರು ಶಿವಶಂಕರಪ್ಪ ಆಪ್ತರಾಗಿದ್ದ ಶಿವಕುಮಾರ್ ದೇವರಮನಿ ಮಂಗಳವಾರ (ಫೆ.23) ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತವಾಗಿತ್ತು. ಇದರ ನಡುವೆ ಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರ ಅನುಪಸ್ಥಿತಿಯಲ್ಲಿ ಚುನಾವಣೆ ನೆಡೆದಿದ್ದರಿಂದ ಬಿಜೆಪಿಗೆ ಗೆಲುವು ಸುಲಭವಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ7 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ7 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್7 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!
-
ರಾಜಕೀಯ4 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು