ದಿನದ ಸುದ್ದಿ
ನಮ್ಮದು ಸ್ವತಂತ್ರ ಧರ್ಮದ ಗುರಿ; ಮುರುಘಾಶರಣರು

ಸುದ್ದಿದಿನ ಚಿತ್ರದುರ್ಗ: ಏಸುಕ್ರಿಸ್ತನ ನಂತರ ಸ್ವಾಭಿಮಾನಕ್ಕಾಗಿ ಕ್ರಾಂತಿ ನಡೆದಿದೆ ಎಂದರೆ ಅದು 12ನೇ ಶತಮಾನದಲ್ಲಿ. ಆಸ್ತಿತ್ವಕ್ಕಾಗಿ ಹೋರಾಟ ನಡೆದಿದೆ ಎಂದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಮಠದ ಅನುಭವ ಮಂಟಪದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ- ಮುನ್ನೋಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರದಲ್ಲಿ ಎಲ್ಲ ಧರ್ಮಗಳಿಗೂ ಸ್ವತಂತ್ರ ಧರ್ಮದ ಸ್ಥಾನಮಾನ ಸಿಕ್ಕಿದೆ. 12ನೇ ಶತಮಾನದಷ್ಟು ಹಳೆಯದಾದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನ ನೀಡುವಲ್ಲಿ ವಿಳಂಬವಾಗುತ್ತಿದೆ. ನಮ್ಮದು ಸ್ವತಂತ್ರ ಧರ್ಮದ ಗುರಿ. ನಾವು ಹಕ್ಕೊತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಸವ ತತ್ವ ಪರಿಪಾಲಕರಲ್ಲಿ ಅನೇಕ ಗೊಂದಲಗಳಿವೆ. ಬಸವಣ್ಣನವರನ್ನು ಮುಂದಿಟ್ಟುಕೊಂಡು ಹೋದ ನಮ್ಮನ್ನು ಪೀಠದಿಂದ ಕೆಳಗಿಳಿಸಲು ಪ್ರಯತ್ನಿಸಿದರು. ಅದಾವುದಕ್ಕೂ ನಾವು ಜಗ್ಗಲಿಲ್ಲ. ಸ್ವತಂತ್ರ ಧರ್ಮದ ವಿಚಾರದಲ್ಲಿ ಬೀದಿ ರಂಪಾಟ ಸಾಕು. ನಾವು ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕಾಗಿದೆ ಎಂದರು.
ಸಿದ್ಧಯ್ಯನಕೋಟೆ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸ್ವತಂತ್ರ ಧರ್ಮದ ವಿಚಾರ ಬಂದಾಗ ಮಠಾಧೀಶರು, ಭಕ್ತರು ಜಾಗೃತರಾಗಬೇಕಿದೆ ಎಂದು ಹೇಳಿದರು.
ದಿನದ ಸುದ್ದಿ
ಅಪಘಾತ | ಗೋವಾಕ್ಕೆ ಹೊರಟಿದ್ದ ದಾವಣಗೆರೆ ಲೇಡಿಸ್ ಕ್ಲಬ್ ನ 13 ಮಂದಿ ದುರ್ಮರಣ

ಸುದ್ದಿದಿನ,ಧಾರವಾಡ: ದಾವಣಗೆರೆಯಿಂದ ಗೋವಾಕ್ಕೆ ಟೆಂಪೋ ಟ್ರಾವೆಲರ್ ನಲ್ಲಿ ಹೋಗುತ್ತಿದ್ದ ಸಂದರ್ಭ, ಟೆಂಪೋ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಒಟ್ಟು 13 ಜನ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಹೊರವಲಯದ ಇಟ್ಟಿಗಟ್ಟಿಯ ಬೈಪಾಸ್ ಹತ್ತಿರ ಬೆಳಗಿನ ಜಾವ ನಡೆದಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ದಾವಣಗೆರೆಯ ಲೇಡಿಸ್ ಕ್ಲಬ್ ನ ವತಿಯಿಂದ ಒಟ್ಟು 13 ಜನ ಮಹಿಳೆಯರು ಗೋವಾಕ್ಕೆ ಹೊರಟಿದ್ದು, ಧಾರವಾಡ ಜಿಲ್ಲೆಯ ಹೊರವಲಯದ ಇಟ್ಟಿಗಟ್ಟಿಯ ಬೈಪಾಸ್ ಹತ್ತಿರ ಬೆಳಗ್ಗೆ 3.30 ರ ಸುಮಾರು ಎದುರಿನಿಂದ ಬಂದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ರಾಜೇಶ್ವರಿ, ಡಾ .ವೀಣಾ ಪ್ರಕಾಶ್, ಮಂಜುಳಾ ಎಂಬುವರು ಹಾಗು ಟಿಪ್ಪರ್ ಚಾಲಕ ಸೇರಿದಂತೆ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಟ್ಟು 13 ಜನ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬುಡಾ ನಿವೇಶನಗಳ ಹರಾಜು : 9.67ಕೋಟಿ ಆದಾಯ

ಸುದ್ದಿದಿನ,ಬಳ್ಳಾರಿ : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ರಾಘವ ಕಲಾಮಂದಿರದಲ್ಲಿ ಪ್ರಾಧಿಕಾರದಲ್ಲಿ ಲಭ್ಯವಿರುವ 49 ವಾಸಯೋಗ್ಯ ಮತ್ತು ವಾಣಿಜ್ಯ ನಿವೇಶನಗಳ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿನ 3 ಖಾಲಿ ಜಾಗದ ಬಹಿರಂಗ ಹರಾಜು ಪ್ರಕ್ರಿಯೆಗೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸೋಮವಾರ ಚಾಲನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಘವ ಕಲಾಮಂದಿರದಲ್ಲಿ ನಡೆದ ವಾಸಯೋಗ್ಯ ನಿವೇಶನ, ವಾಣಿಜ್ಯ ನಿವೇಶನ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿನ ಖಾಲಿ ಜಾಗಗಳ ಬಹಿರಂಗ ಹರಾಜಿನಲ್ಲಿ ಪ್ರಾಧಿಕಾರಕ್ಕೆ ಒಟ್ಟು 9.67 ಕೋಟಿ ರೂಪಾಯಿ ಆದಾಯ ಬಂದಿರುತ್ತದೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಶಂಕರ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಇದ್ದರು. ನಗರದ ಹಲವಡೆಯಿಂದ ಬಂದಿದ್ದ ನೂರಕ್ಕೂ ಹೆಚ್ಚು ಜನರು ತಲಾ 25 ಸಾವಿರ ಮುಂಗಡ ಹಣ ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಕೋವಿಡ್ ನಿಯಮಗಳನ್ನು ಪಾಲಿಸಿ ಹರಾಜು ಪ್ರಕ್ರಿಯೆ ನೆರವೇರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?

- ರಘೋತ್ತಮ ಹೊ.ಬ
ಮೊನ್ನೆ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಶೋಷಿತ ಸಮುದಾಯದ ಒಬ್ಬ ಕಾದಂಬರಿ ಕಾರರ ಕಾದಂಬರಿ ಬಿಡುಗಡೆ ಸಮಾರಂಭ ಅದು. ಪ್ರೇಕ್ಷಕನಾಗಿ ಭಾಷಣ ಕೇಳುತ್ತ ಕುಳಿತಿದ್ದೆ. ಹಾಗೆ ಕುಳಿತು ಭಾಷಣ ಕೇಳಿ ಕಲಿಯುವುದು ಸಾಹಿತ್ಯಾಸಕ್ತನಾಗಿ ನನ್ನ ಹವ್ಯಾಸ. ಅಂದಹಾಗೆ ಅತಿಥಿಗಳೊಬ್ಬರು ಭಾಷಣ ಮಾಡುತ್ತ ದಲಿತರು ಪರ್ಯಾಯ ಸಂಸ್ಕೃತಿ ಕಟ್ಟಿಕೊಳ್ಳುವ ಅಗತ್ಯವಿದೆ ಅಂದರು.
ನನಗೆ ಆಶ್ಚರ್ಯ! ಯಾಕೆಂದರೆ ಆಗಷ್ಟೇ ನಾನು ಬೌದ್ಧ ವಿಹಾರ ಕ್ಕೆ ಹೋಗಿ ವಾರದ ಪ್ರಾರ್ಥನೆ ಮುಗಿಸಿ ಬಂದಿದ್ದೆ. ಈ ನಡುವೆ ಇವರ್ಯಾರು ಪರ್ಯಾಯ ಸಂಸ್ಕೃತಿ ಎಂದು ಹೇಳುತ್ತಿದ್ದಾರಲ್ಲ! ಅಂದಹಾಗೆ ಆ ಭಾಷಣಕಾರರು ತಾವು ಅದ್ಯಾವುದೋ (ಶತಮಾನ) ದಲ್ಲಿ ಮನುವಾದದಿಂದ ಅದೇನೋ ಬರೆದು ವಿಮೋಚನೆ ಗೊಂಡಿದ್ದೇವೆ ಎಂದರು.
ಪಾಪ, ಅವರು ಸನಾತನ ಎಂಬ ಈಚಿನ ಜಾಹೀರಾತೊಂದನ್ನು ನೋಡಿದ ಹಾಗೆ ಕಂಡಿರಲಿಲ್ಲ! ಆದರೂ ದಲಿತರಿಗೆ ಪರ್ಯಾಯ ಸಂಸ್ಕೃತಿ ಎಂದು ಹೇಳುತ್ತಿದ್ದಾರಲ್ಲ? ಹಾಗಿದ್ದರೆ ಲೌಕಿಕ ವಾಗಿ ಇವರು ಗಮನಿಸಿರುವುದಾಸರೂ ಏನು ಎಂದು ಪ್ರಶ್ನೆ ಹಿಡಿದು ಕುಳಿತೆ.
ಹೌದು, ನಾನು ಅಲ್ಲೇ ಹೇಳಿಬಿಡಬಹುದಿತ್ತು. ಆದರೆ ಕಾದಂಬರಿಕಾರರಿಗೆ ಮುಜುಗರ ಆಗಬಹುದು ಎಂದು ಸುಮ್ಮನಾದೆ. ಏಕೆಂದರೆ ದಲಿತರ ಪರ್ಯಾಯ ಸಂಸ್ಕೃತಿ ಅದು ಬೌದ್ಧ ಸಂಸ್ಕೃತಿ ಅಲ್ಲವೆ? ದಲಿತ ಕೇರಿಗಳು ಇಂದು ಬುದ್ಧರ ಹಬ್ಬಗಳು, ಬೌದ್ಧ ಧಾರ್ಮಿಕ ಆಚರಣೆಗಳ ಆಗರವಾಗುತ್ತಿರುವುದನ್ನು ಸದರಿ ಭಾಷಣಕಾರರು ಗಮನಿಸಿಲ್ಲವೆ ಎನಿಸಿತು.
ಸದರಿ ಭಾಷಣಕಾರರು 70 ರ ದಶಕದ ದಲಿತ ಚಳುವಳಿಯ ಸಂದರ್ಭಗಳನ್ನು, ಆ ಸಂದರ್ಭದಲ್ಲಿ ತಿಂದದ್ದು, ಕುಡಿದದ್ದು, ಇಸ್ಪೀಟು ಆಡಿದ್ದು ಎಲ್ಲವನ್ನೂ ಹೇಳಿದರು! ಅರೆ, ಅದು 50 ವರ್ಷಗಳ ಹಿಂದಿನ ಕತೆ. ಮನುಷ್ಯ ಬದಲಾಗಲೇ ಬೇಕಲ್ಲವೆ? ಆ ಬದಲಾದ ಸಂದರ್ಭದಲ್ಲಿ ಈಚಿನ ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳನ್ನು ಆ ಸಾಹಿತಿ ಅಥವಾ ಅವರಂತಹವರು ಯಾಕೆ ಹೇಳುತ್ತಿಲ್ಲ? ಅಥವಾ ಹೇಳಲಿಲ್ಲ?
ಉದಾಹರಣೆಗೆ ಮೊನ್ನೆ ಮೈಸೂರು ಮತ್ತು ಚಾಮರಾಜನಗರಗಳಲ್ಲಿ ನಮ್ಮ ಮಹಿಳೆಯರು ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಿದರು. ಆಗ ಆ ಸಮಾರಂಭಗಳಲ್ಲಿ ಮೈದುಂಬಿಕೊಂಡಿದ್ದು ಬುದ್ಧ ಸಂಸ್ಕೃತಿ. ಸಾವಿತ್ರಿಬಾಯಿ ಫುಲೆಯವರೇನು ದಲಿತರಲ್ಲ. ಕಾನ್ಷೀರಾಮ್ ರವರು ಹೆಕ್ಕಿ ತೆಗೆದ ಬಹುಜನ ಚಳುವಳಿಯಲ್ಲಿ ಬರುವ ಹಿಂದುಳಿದ ವರ್ಗದ ಸಾಧಕಿ ಮಹಿಳೆಯವರು.
ಈ ಕಾರ್ಯಕ್ರಮಗಳ ವರದಿ ಎಲ್ಲಾ ಪತ್ರಿಕೆಗಳಲ್ಲೂ, ಸಾಮಾಜಿಕ ಮಾಧ್ಯಮಗಳಲ್ಲು ರಾರಾಜಿಸಿದೆ. ಪ್ರಶ್ನೆ ಎಂದರೆ ಇದನ್ನೂ ಸದರಿ ಸಾಹಿತಿ ಕಂ ಭಾಷಣಕಾರರು ಗಮನಿಸಿಲ್ಲವೆಂದರೆ..? ದಲಿತರಿಗೆ ಪರ್ಯಾಯ ಸಂಸ್ಕೃತಿ ಹುಡುಕಿಕೊಳ್ಳುವ ಸಲಹೆ ನೀಡುತ್ತಾರೆಂದರೆ..?
ಒಂದು ಸಲಹೆಯೆಂದರೆ, ಯಾರೇ ಆಗಲಿ ಕಾಲದ ಸುತ್ತಾ ಅದಕ್ಕೆ ತಕ್ಕಂತೆ ಹೇಗೆ ಬದಲಾವಣೆ ಆಗುತ್ತಿದೆ, ಏನು ಬದಲಾವಣೆ ಆಗುತ್ತಿದೆ ಎಂಬುದನ್ನು ಗಮನಿಸಬೇಕು. ಹಾಗೆಯೇ ಆ ಬದಲಾವಣೆಗೆ ತಕ್ಕಂತೆ ಅದನ್ನು ಗಮನಿಸಿ ಮಾತನಾಡಬೇಕು, ಬರೆಯಬೇಕು. ಇದರ ಬದಲು ಹಳೆಯ 50 ವರ್ಷ, 60 ವರ್ಷ ಹಿಂದಿನ ಪರಿಸ್ಥಿತಿ ನೆನಪಿಸಿಕೊಂಡು ಮಾತನಾಡಿದರೆ ಅಂತಹವರು update ಆಗಿಲ್ಲ ಎಂದು ಕೊಳ್ಳಬೇಕಾಗುತ್ತದೆ. ದಲಿತರಂತು update ಆಗಿದ್ದಾರೆ, ಆಗುತ್ತಿದ್ದಾರೆ ಅದು ಬೌದ್ಧ ಸಂಸ್ಕೃತಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ಆಂದೋಲನ-ಈ ಜೀವ ಈ ಜೀವನ | ಅಂಗನವಾಡಿ ಕಾರ್ಯಕರ್ತೆಯ ಅಸಾಮಾನ್ಯ ಕರ್ತವ್ಯಪ್ರಜ್ಞೆ..!
-
ಲೈಫ್ ಸ್ಟೈಲ್4 days ago
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ : ವಿವೇಕಾನಂದ
-
ದಿನದ ಸುದ್ದಿ2 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ7 days ago
ಶಹಜಹಾನ್ ಪುರ ಗಡಿಯಲ್ಲಿ ಲಾಠಿ, ವಾಟರ್ ಕ್ಯಾನನ್ಗೆ ಜಗ್ಗದೆ ಕೂತ ರೈತ ಮಕ್ಕಳು
-
ದಿನದ ಸುದ್ದಿ4 days ago
ಹೊಸ ಚರಿತ್ರೆ ಬರೆಯಲಿರುವ ಜನವರಿ-26
-
ದಿನದ ಸುದ್ದಿ4 days ago
ಮೂರೂ ಕೃಷಿ ಕಾಯ್ದೆಗಳ ಜಾರಿಯನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್..!
-
ದಿನದ ಸುದ್ದಿ3 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ದಿನದ ಸುದ್ದಿ3 days ago
ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮಷಿನ್ಗಳು..!