ಲೈಫ್ ಸ್ಟೈಲ್
ಮಲೇರಿಯಾ: ಮುಂಜಾಗೃತೆ ಅನಿವಾರ್ಯ

ಮಲೇರಿಯಾ ಎಂದ ಕೂಡಲೇ ನೆನಪಾಗುವುದು ಸೊಳ್ಳೆಗಳಿಂದ ಹರಡುವ ರೋಗ. ಹೀಗಂತ ಬಹುತೇಕ ಯಾವ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ಇದು ಅರಿವಿದೆ ಎಂದುಕೊಳ್ಳುತ್ತೇನೆ. ಈ ಬೇಸಿಗೆಯಲ್ಲಿ ಇದ್ಯಾವ ಮಲೇರಿಯಾ ಬಗ್ಗೆ ಹೇಳಹೊರಟಿದ್ದೀರಲ್ಲ ಎಂದುಕೊಳ್ಳಬೇಡಿ. ಇಂದು ಮಲೇರಿಯಾಕ್ಕಾಗಿ ಒಂದು ಮುಂಜಾಗೃತಿಯ ಹೆಜ್ಜೆ ಇಡುವ ದಿನ, ‘ವಿಶ್ವ ಮಲೇರಿಯಾ ದಿನ’.
ಪ್ರತಿವರ್ಷ ಏಪ್ರಿಲ್ 25ರಂದು ‘ವಿಶ್ವ ಮಲೇರಿಯಾ ದಿನ’ ಎಂದು ಆಚರಿಸಲಾಗುತ್ತದೆ.
ಇದಲ್ಲದೇ ಮೇ 1 -7 ನ್ನು ‘ಮಲೇರಿಯಾ ವಿರೋಧಿ ವಾರ’ ಹಾಗೂ ಜೂನ್ 1-30 ನ್ನು ‘ಮಲೇರಿಯಾ ವಿರೋಧಿ ತಿಂಗಳು’ ಎಂಬುದೂ ಆರೋಗ್ಯ ಇಲಾಖೆಯಲ್ಲಿ ಆಚರಣೆಯಲ್ಲಿ ಇದೆ. ಇದಕ್ಕೆಲ್ಲಾ ಕಾರಣ ಇಷ್ಟೆ, ಈ ರೋಗವು ಮಳೆಗಾಲದಲ್ಲಿ ನೀರು ಎಲ್ಲಿಬೇಕಲ್ಲಿ ನಿಂತುಕೊಂಡು ಜುಲೈ ನಿಂದ ನವೆಂಬರ್ ತಿಂಗಳವರೆಗೆ ಮಲೇರಿಯಾಕ್ಕೆ ಬೇಕಿರುವ ಸೊಳ್ಳೆಗಳ ಅತಿ ಹೆಚ್ಚು ಉತ್ಪತ್ತಿಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿ ಮಲೇರಿಯಾಕ್ಕೆ ತುತ್ತಾದರೆ, ಕ್ರಮೇಣ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾದಂತೆ ಮಲೇರಿಯಾ ಹರಡುವಿಕೆಯೂ ಜಾಸ್ತಿಯಾಗುತ್ತದೆ. ಆದರೆ ಅವೆಲ್ಲದಕ್ಕೂ ಮೊದಲೇ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಮಲೇರಿಯಾ ದಿಂದ ನರಳುವಿಕೆಯ ಪ್ರಮಾಣ ಕಡಿಮೆಯಾಗುವುದೆಂಬ ಉದ್ದೇಶವಿದೆ.
ಮಲೇರಿಯಾ ರೋಗವು ಪ್ಲಾಸ್ಮೋಡಿಯಮ್ ಎಂಬ ಪರಾವಲಂಬಿ ಸೂಕ್ಷ್ಮಾಣುಜೀವಿಯಿಂದ ಸೋಂಕಿತವಾದ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯ ಮೂಲಕ ಬರುತ್ತದೆ. ಸೋಂಕಿತ ಸೊಳ್ಳೆಯು ತನ್ನ ದೇಹದಲ್ಲಿ ಮಲೇರಿಯಾಕ್ಕೆ ಕಾರಣವಾಗಿರುವ ಸೂಕ್ಷ್ಮಾಣುಜೀವಿಯನ್ನು ಮನುಷ್ಯನ ದೇಹದೊಳಕ್ಕೆ ಸೇರಿಸುತ್ತದೆ.
ಪ್ಲಾಸ್ಮೋಡಿಯಮ್ ವಿಧಗಳು
- ಪ್ಲಾಸ್ಮೋಡಿಯಮ್ ಫಾಲ್ಸಿಪಾರಮ್
- ಪ್ಲಾಸ್ಮೋಡಿಯಮ್ ವೈವ್ಯಾಕ್ಸ್
- ಪ್ಲಾಸ್ಮೋಡಿಯಮ್ ಮಲೇರಿಯೇ
- ಪ್ಲಾಸ್ಮೋಡಿಯಮ್ ಓವಲೆ
- ಪ್ಲಾಸ್ಮೋಡಿಯಮ್ ನೊಲೆಸಿ
ರೋಗೋತ್ಪತ್ತಿ
ಮಲೇರಿಯಾ ರೋಗಪೀಡಿತ ವ್ಯಕ್ತಿಗೆ ಕಚ್ಚಿದ ಅನಾಫಿಲಿಸ್ ಸೊಳ್ಳೆ ರಕ್ತವನ್ನು ಹೀರಿಕೊಳ್ಳುವಾಗ ರೋಗಿಯ ರಕ್ತದಲ್ಲಿರುವ ಪ್ಲಾಸ್ಮೋಡಿಯಮ್ ಸೂಕ್ಷ್ಮಾಣುಜೀವಿಯ ಒಂದು ಲೈಂಗಿಕ ಪ್ರಕಾರದ ಜೀವಿಯೂ ಸೊಳ್ಳೆಯನ್ನು ಸೇರಿಕೊಳ್ಳುತ್ತದೆ. ನಂತರ ಅದು ಸೊಳ್ಳೆಯ ದೇಹದಲ್ಲೇ ವಿವಿಧ ಪ್ರಕಾರಗಳಾಗಿ ಮಾರ್ಪಾಡುಗೊಂಡು, ನಂತರ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಅದು ಮತ್ತೆ ಆ ವ್ಯಕ್ತಿಯ ರಕ್ತವನ್ನು ಸೇರಿಕೊಂಡು, ನಂತರ ಯಕೃತ್ತು, ಮತ್ತೆ ಪುನಃ ರಕ್ತವನ್ನು ಪ್ರವೇಶಿಸಿ ಕಣಗಳನ್ನು ಹಾನಿಗೊಳಿಸುತ್ತವೆ.
ಗುಣಲಕ್ಷಣಗಳು
- ಚಳಿ-ಜ್ವರ
- ಬೆವರುವಿಕೆ
- ಒಣ ಕೆಮ್ಮು
- ಹೊಟ್ಟೆಯಲ್ಲಿ ಸಂಕಟ, ವಾಂತಿ
- ತಲೆನೋವು
- ಕೈ ಕಾಲುಗಳಲ್ಲಿ ಸೆಳೆತ, ನೋವು
- ಬೆನ್ನು ನೋವು
ರೋಗ ಪರಿಣಾಮಗಳು
- ಸೆರೆಬ್ರಲ್ ಮಲೇರಿಯಾ ಮತ್ತು ಕೋಮಾ
- ಆಮ್ಲದ ಶೇಖರಣೆ
- ಕಿಡ್ನಿಗಳ ವಿಫಲ
- ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುವುದು
- ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗುವುದು
- ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞಾಹೀನ ಸ್ಥಿತಿ ತಲುಪುವುದು
- ರಕ್ತ ಸೋರುವಿಕೆ ಮತ್ತು ರಕ್ತನಾಳಗಳೊಳಗೆ ವಿಪರೀತ ರಕ್ತ ಹೆಪ್ಪುಗಟ್ಟುವಿಕೆ
- ಸ್ನಾಯು ಸೆಳೆತಗಳು
ರೋಗನಿರ್ಣಯ ಮತ್ತು ಚಿಕಿತ್ಸೆ
ರಕ್ತಪರೀಕ್ಷೆ: ರಕ್ತದಲ್ಲಿ ಪ್ಲಾಸ್ಮೋಡಿಯಮ್ ಪರಾವಲಂಬಿ ಜೀವಿ ಇರುವುದನ್ನು ವಿವಿಧ ತಂತ್ರಜ್ಞಾನದ ಪರೀಕ್ಷೆಗಳ ಮೂಲಕ ಮಲೇರಿಯಾ ರೋಗನಿರ್ಣಯ ಮಾಡಲಾಗುವುದು
ರೋಗ ನಿರ್ಣಯವಾದ ನಂತರ ಅದಕ್ಕೆ ಕ್ಲೋರೊಕ್ವಿನ್, ಪ್ರೈಮಕ್ವಿನ್, ಅರ್ಟೆಮಿಸಿನಿನ್, ಮುಂತಾದ ಧಾತುಗಳನ್ನೊಳಗೊಂಡ ಸೂಕ್ತ ಚಿಕಿತ್ಸಾ ಪ್ರಕಾರವನ್ನು ಆಯ್ಕೆ ಮಾಡಿ ಸಲಹೆ ನೀಡಲಾಗುತ್ತದೆ.
ರೋಗ ತಡೆಯುವಿಕೆ
ಈ ರೋಗವನ್ನು ತಡೆಯಲು ಯಾವುದೇ ಲಸಿಕೆಗಳಿಲ್ಲ. ಆದರೆ ರೋಗ ಹರಡುವುದನ್ನು ತಡೆಗಟ್ಟಲು ಹಲವು ಮಾರ್ಗಗಳಿವೆ. ಸೊಳ್ಳೆಗಳನ್ನು ನಿರ್ಮೂಲನೆ ಮಾಡುವುದು
ಸೊಳ್ಳೆಗಳು ಕಡಿಯದಂತೆ ಅಥವಾ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ಸ್ಪ್ರೇ, ಚರ್ಮ ಪೂರ್ತಿ ಮುಚ್ಚಿಕೊಳ್ಳುವಂತೆ ಬಟ್ಟೆಗಳನ್ನು ಧರಿಸುವಂತೆ ಎಚ್ಚರ ವಹಿಸುವುದು
ಮನೆಯೊಳಗೆ ಅಥವಾ ಮನೆಯ ಸುತ್ತ ನೀರು ನಿಲ್ಲುವ ಸ್ಥಳಗಳಿದ್ದಲ್ಲಿ ಅವುಗಳನ್ನು ತೆರವುಗಳಿಸುವುದು. ಕೀಟನಾಶಕ ಡಿಡಿಟಿ ಬಳಕೆ ಮಾಡುವುದು. ಮರಿಸೊಳ್ಳೆಗಳು ಅಥವಾ ಲಾರ್ವಾಗಳು ಉತ್ಪತ್ತಿಯಾಗುವ ಸ್ಥಳಗಳನ್ನು ಸ್ವಚ್ಛಗೊಳಿಸುವುದು. ಮನೆಯಲ್ಲಿ ರಾತ್ರಿ ಮಲಗುವಾಗ ಸೊಳ್ಳೆಪರದೆಗಳನ್ನು ಬಳಸುವುದು. ಕುಡಿಯುವ ನೀರು ಮತ್ತು ಬಳಸುವ ನೀರಿನ ಕಂಟೇನರ್ಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು
ಶಾಲಾ ಕಾಲೇಜುಗಳಲ್ಲಿ ಮಲೇರಿಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ಈ ಮೊದಲು ತಿಳಿಸಿರುವ ಮಲೇರಿಯಾದ ಯಾವುದೇ ಗುಣಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಮಾಲೋಚನೆ ಪಡೆಯಬೇಕು.

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ