ದಿನದ ಸುದ್ದಿ
ಮೈಸೂರು ದಸರಾ | ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ..!
ಸುದ್ದಿದಿನ,ಮೈಸೂರು : ಚಾಮುಂಡಿಬೆಟ್ಟದ ಸನ್ನಿಧಿಯಿಂದ ಹೊರ ಬಂದ ಉತ್ಸವ ಮೂರ್ತಿ ತೆರೆದ ವಾಹನದಲ್ಲಿ ಅರಮನೆಯತ್ತ ಹೊರಟಿದೆ ಉತ್ಸವ ಮೂರ್ತಿ. ಭಕ್ತರಿಂದ ಜೈ ಚಾಮುಂಡಿ ಘೋಷಣೆಗಳು ಮೊಳಗುತ್ತಿವೆ.ಚಾಮುಂಡಿಬೆಟ್ಟದಲ್ಲಿ ಭಕ್ತರ ಸಾಗರೇ ಸೇರಿದೆ.
ಶುಕ್ರವಾರದಂದೇ ವಿಜಯ ದಶಮಿ ಆಚರಣೆ ಹಿನ್ನೆಲೆ ಭಕ್ತರಿಂದ ತುಂಬಿದೆ ಚಾಮುಂಡಿ ಸನ್ನಿಧಿ.
ನಾಡ ದೇವಿ ದರ್ಶನಕ್ಕಾಗಿ ಭಕ್ತರ ಸಾಲು,ಸಾಲು.
ಬೆಳಗ್ಗೆಯಿಂದಲೇ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ ಸಹಸ್ರಾರು ಭಕ್ತರು.
ಈ ಹಿನ್ನೆಲೆಯಲ್ಲಿ ಇಂದು ಮೈಸೂರು ದಸರಾ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.
- 1.ಬಾಗಲಕೋಟೆ ಸ್ತಬ್ದ ಚಿತ್ರ-ಪಟ್ಟದ ಕಲ್ಲು ಕಾಯಕವೇ ಕೈಲಾಸ-ಕೂಡಲಸಂಗಮ
- 2 ಬೆಂಗಳೂರು ಗ್ರಾಮಾಂತರ ಜಿಲ್ಲೆ ಸ್ತಬ್ಧ ಚಿತ್ರ-ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಹಾಗೂ ದೇವನಹಳ್ಳಿ ಕೋಟೆ
- 3.ಬೆಂಗಳೂರು ನಗರ ಜಿಲ್ಲೆಯ ಸ್ತಬ್ಧಚಿತ್ರ-ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ
- 4.ಎನ್.ಸಿ.ಸಿ. ಸ್ತಬ್ಧಚಿತ್ರ-ಪ್ರವಾಹ ಸಂತ್ರಸ್ತರಿಗೆ ನೆರವು ಹಾಗೂ ಕ್ರೀಡೆಗಳು
- 5. ಉನ್ನತ ಶಿಕ್ಷಣ ಇಲಾಖೆ ಸ್ತಬ್ಧಚಿತ್ರ-ವಿದ್ಯಾ ನಿಲಯಗಳು ನಡೆದುಬಂದ ಹಾದಿ
- 6 ಬೆಳಗಾವಿ ಜಿಲ್ಲೆಯ ಸ್ತಬ್ಧಚಿತ್ರ-ಕಿತ್ತೂರಿನ ವೈಭವ
- 7.ಬಳ್ಳಾರಿ ಜಿಲ್ಲೆ ಸ್ತಬ್ಧಚಿತ್ರ-ತುಂಗಾಭದ್ರಾ ಜಿಲ್ಲೆ.
- 8.ಬೀದರ್ ಜಿಲ್ಲೆಯ ಸ್ತಬ್ಧಚಿತ್ರ-ಅನುಭವ ಮಂಟಪ
- 9.ಪ್ರವಾಸೋದ್ಯಮ ಇಲಾಖೆ ಸ್ತಬ್ಧ ಚಿತ್ರ-ಒಂದು ರಾಜ್ಯ ಹಲವು ಜಗತ್ತುಗಳು
- 10.ವಿಜಯಪುರ ಸ್ತಬ್ಧ ಚಿತ್ರ-ಗೋಲಗುಮ್ಮಟ
- 11.ಚಾಮರಾಜನಗರ ಜಿಲ್ಲೆ ಸ್ತಬ್ಧ ಚಿತ್ರ-ಅರಣ್ಯ ಸಂಪತ್ತಿನೊಳಗಿನ ಅಧ್ಯಾತ್ಮಿಕ ಕ್ಷೇತ್ರಗಳು
- 12. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ತಬ್ಧ ಚಿತ್ರ-ಕರ್ನಾಟಕದ ನವರತ್ನಗಳು
- 13. ಚಿತ್ರದುರ್ಗ ಜಿಲ್ಲೆ ಸ್ತಬ್ಧಚಿತ್ರ-ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು-ನಾಯಕಹಟ್ಟಿ ಪುಣ್ಯಕ್ಷೇತ್ರ
- 14. ಚಿಕ್ಕಮಗಳೂರು ಜಿಲ್ಲೆ ಸ್ತಬ್ಧಚಿತ್ರ-ಭೂತಾಯಿ ಕಾಫಿ ಕನ್ಯೆ
- 15.ವಿಧುರಾಶ್ವಥ್ಧ ಪುಣ್ಯಕ್ಷೇತ್ರ ಸ್ತಬ್ಧಚಿತ್ರ
- 16. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸ್ತಬ್ಧಚಿತ್ರ-ಕಾನೂನು ಸೇವೆಗಳು
- 17. ದಾವಣಗೆರೆ ಜಿಲ್ಲೆಯ ಸ್ತಬ್ಧಚಿತ್ರ-ಸ್ಮಾರ್ಟ್ ಸಿಟಿಯತ್ತ
- 18.ದಕ್ಷಿಣ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರ-ಕೋಟಿ ಚೆನ್ನಯ್ಯ ತುಳು ನಾಡ ವೀರರು
- 19. ಧಾರವಾಡ ಜಿಲ್ಲೆ ಸ್ತಬ್ಧ ಚಿತ್ರ-ದ.ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ
- 20. ವಾರ್ತಾ ಇಲಾಖೆ ಸ್ತಬ್ಧ ಚಿತ್ರ-ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
- 21. ಗದಗ ಜಿಲ್ಲೆ ಸ್ತಬ್ಧ ಚಿತ್ರ-ಮರಗಳ ಮರು ನೆಡುವಿಕೆ
- 22. ಕಲ್ಬುರ್ಗಿ ಜಿಲ್ಲೆ ಸ್ತಬ್ಧ ಚಿತ್ರ-ಕಲ್ದುರ್ಗಿಯ ವಿಮಾನ ನಿಲ್ದಾಣ
- 23.ಹಾಸನ ಜಿಲ್ಲೆ ಸ್ತಬ್ಧ ಚಿತ್ರ-ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ
- 24. ಕಾವೇರಿ ನೀರಾವರಿ ನಿಗಮದ ಸ್ತಬ್ಧಚಿತ್ರ-ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು
- 25. ಹಾವೇರಿ ಜಿಲ್ಲೆ ಸ್ತಬ್ಧ ಚಿತ್ರ-ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಭಂಕಾಪುರ ನವಿಲುಧಾಮ
- 26. ಕೋಲಾರ ಜಿಲ್ಲೆ ಸ್ತಬ್ಧ ಚಿತ್ರ-ಜಿಲ್ಲಾ ಪಂಚಾಯತ್ ನಡೆ ಗ್ರಾಮದ ಅಭಿವೃದ್ಧಿ ಕಡೆ
- 27. ಕೊಪ್ಪಳ ಜಿಲ್ಲೆ ಸ್ತಬ್ಧಚಿತ್ರ-ಶ್ರೀ ಕನಕಾಂಚಲ ದೇವಸ್ಥಾನ ಮತ್ತು ಐತಿಹಾಸಿಕ ಬಾವಿ ಕನಕಗಿರಿ
- 28. ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಸ್ತಬ್ಧಚಿತ್ರ-ನಮ್ಮ ಮತ ನಮ್ಮ ಹಕ್ಕು
- 29. ಮಂಡ್ಯ ಜಿಲ್ಲೆ ಸ್ತಬ್ಧಚಿತ್ರ-ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ (ಕೆ.ಆರ್.ಎಸ್. ಅಣೆಕಟ್ಟೆ)
- 30. ಮೈಸೂರು ಜಿಲ್ಲೆ ಸ್ತಬ್ಧಚಿತ್ರ-ಗೋಲ್ಡನ್ ಟೆಂಪಲ್ ಬೈಲಕುಪ್ಪೆ
- 31. ರಾಯಚೂರು ಜಿಲ್ಲೆ ಸ್ತಬ್ಧ ಚಿತ್ರ-ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ
- 32. ರಾಮನಗರ ಜಿಲ್ಲೆ ಸ್ತಬ್ಧ ಚಿತ್ರ-ಭಕ್ತಿ, ನಂಬಿಕೆ, ಕರಕುಶಲ ಇತಿಹಾಸಗಳ ಸಂಗಮ
- 33. ಶಿವಮೊಗ್ಗ ಜಿಲ್ಲೆ ಸ್ತಬ್ಧ ಚಿತ್ರ-ಬಿದನೂರು ಶಿವಪ್ಪ ನಾಯಕ ಸಾಧನೆ
- 34. ತುಮಕೂರು ಜಿಲ್ಲೆ ಸ್ತಬ್ಧಚಿತ್ರ-ಶತಮಾನ ಕಂಡ ಮಹಾಸಂತ ಡಾ. ಶ್ರೀ ಶಿವಕುಮಾರಸ್ವಾಮಿಗಳು
- 35 ಸ್ತಬ್ಧಚಿತ್ರ ಉಪಸಮಿತಿಯ ಸ್ತಬ್ಧಚಿತ್ರ-ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವಿಕೇಂದ್ರೀಕರಣ
- 36. ಉಡುಪಿ ಜಿಲ್ಲೆ ಸ್ತಬ್ಧ ಚಿತ್ರ-ಪರಶುರಾಮ ಸೃಷ್ಟಿಯ ತುಳುನಾಡು
- 37.ಉತ್ತರ ಕನ್ನಡ ಜಿಲ್ಲೆ ಸ್ತಬ್ಧ ಚಿತ್ರ-ಸಿದ್ಧಿ ಜನಾಂಗ ಹಾಗೂ ಪ್ರವಾಸಿ ತಾಣ, ಯಾಣ
- 38 ಯಾದಗಿರಿ ಜಿಲ್ಲೆ ಸ್ತಬ್ಧ ಚಿತ್ರ-ಬಂಜಾರ ಸಂಸ್ಕೃತಿ
- 39. ಆರೋಗ್ಯ ಇಲಾಖೆ ಸ್ತಬ್ಧ ಚಿತ್ರ-ಆರೋಗ್ಯ ಇಲಾಖೆಯ ಸೇವೆಗಳು
- 40.ಅಲ್ಪಸಂಖ್ಯಾತ ಇಲಾಖೆ ಸ್ತಬ್ಧ ಚಿತ್ರ-ಇಲಾಖಾ ಕಾರ್ಯಕ್ರಮಗಳು.
- 41. ಶಿಕ್ಷಣ ಇಲಾಖೆ ಸ್ತಬ್ಧ ಚಿತ್ರ-ಇಲಾಖಾ ಕಾರ್ಯಕ್ರಮಗಳು
- 42. ಕೊಡಗು ಜಿಲ್ಲೆ ಸ್ತಬ್ಧ ಚಿತ್ರ-ಪ್ರವಾಸೋದ್ಯಮ
ಇವಿಷ್ಟು ಸ್ತಬ್ದ ಚಿತ್ರ ಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ!! 1/2#ಜನರಿಗಿಲ್ಲ_ನೆಮ್ಮದಿಯ_ಗ್ಯಾರಂಟಿ pic.twitter.com/iu3tqqEYZ3
— Janata Dal Secular (@JanataDal_S) May 18, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್
ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ
ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.
ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
-
ದಿನದ ಸುದ್ದಿ3 days ago
ವಿಧಾನಪರಿಷತ್ ಚುನಾವಣೆ ; ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
-
ದಿನದ ಸುದ್ದಿ3 days ago
ಪೌರತ್ವ ಪ್ರಮಾಣಪತ್ರ ಹಸ್ತಾಂತರ
-
ದಿನದ ಸುದ್ದಿ2 days ago
ಸಂಗೀತಗಾರರ ಹುದ್ದೆಗಳಿಗೆ ನೇಮಕಾತಿ
-
ದಿನದ ಸುದ್ದಿ3 days ago
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
-
ದಿನದ ಸುದ್ದಿ3 days ago
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ | ಎಸ್ಐಟಿ ಸೂಕ್ತ ತನಿಖೆ ನಡೆಸುತ್ತಿಲ್ಲ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
-
ದಿನದ ಸುದ್ದಿ3 days ago
ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿ ಪ್ರಾರಂಭ