ದಿನದ ಸುದ್ದಿ
ಮೈಸೂರು ದಸರಾ | ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ..!
![](https://suddidina.com/wp-content/uploads/2018/10/Mysore-dasara-suddidina73.jpg)
ಸುದ್ದಿದಿನ,ಮೈಸೂರು : ಚಾಮುಂಡಿಬೆಟ್ಟದ ಸನ್ನಿಧಿಯಿಂದ ಹೊರ ಬಂದ ಉತ್ಸವ ಮೂರ್ತಿ ತೆರೆದ ವಾಹನದಲ್ಲಿ ಅರಮನೆಯತ್ತ ಹೊರಟಿದೆ ಉತ್ಸವ ಮೂರ್ತಿ. ಭಕ್ತರಿಂದ ಜೈ ಚಾಮುಂಡಿ ಘೋಷಣೆಗಳು ಮೊಳಗುತ್ತಿವೆ.ಚಾಮುಂಡಿಬೆಟ್ಟದಲ್ಲಿ ಭಕ್ತರ ಸಾಗರೇ ಸೇರಿದೆ.
ಶುಕ್ರವಾರದಂದೇ ವಿಜಯ ದಶಮಿ ಆಚರಣೆ ಹಿನ್ನೆಲೆ ಭಕ್ತರಿಂದ ತುಂಬಿದೆ ಚಾಮುಂಡಿ ಸನ್ನಿಧಿ.
ನಾಡ ದೇವಿ ದರ್ಶನಕ್ಕಾಗಿ ಭಕ್ತರ ಸಾಲು,ಸಾಲು.
ಬೆಳಗ್ಗೆಯಿಂದಲೇ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ ಸಹಸ್ರಾರು ಭಕ್ತರು.
ಈ ಹಿನ್ನೆಲೆಯಲ್ಲಿ ಇಂದು ಮೈಸೂರು ದಸರಾ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.
- 1.ಬಾಗಲಕೋಟೆ ಸ್ತಬ್ದ ಚಿತ್ರ-ಪಟ್ಟದ ಕಲ್ಲು ಕಾಯಕವೇ ಕೈಲಾಸ-ಕೂಡಲಸಂಗಮ
- 2 ಬೆಂಗಳೂರು ಗ್ರಾಮಾಂತರ ಜಿಲ್ಲೆ ಸ್ತಬ್ಧ ಚಿತ್ರ-ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಹಾಗೂ ದೇವನಹಳ್ಳಿ ಕೋಟೆ
- 3.ಬೆಂಗಳೂರು ನಗರ ಜಿಲ್ಲೆಯ ಸ್ತಬ್ಧಚಿತ್ರ-ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ
- 4.ಎನ್.ಸಿ.ಸಿ. ಸ್ತಬ್ಧಚಿತ್ರ-ಪ್ರವಾಹ ಸಂತ್ರಸ್ತರಿಗೆ ನೆರವು ಹಾಗೂ ಕ್ರೀಡೆಗಳು
- 5. ಉನ್ನತ ಶಿಕ್ಷಣ ಇಲಾಖೆ ಸ್ತಬ್ಧಚಿತ್ರ-ವಿದ್ಯಾ ನಿಲಯಗಳು ನಡೆದುಬಂದ ಹಾದಿ
- 6 ಬೆಳಗಾವಿ ಜಿಲ್ಲೆಯ ಸ್ತಬ್ಧಚಿತ್ರ-ಕಿತ್ತೂರಿನ ವೈಭವ
- 7.ಬಳ್ಳಾರಿ ಜಿಲ್ಲೆ ಸ್ತಬ್ಧಚಿತ್ರ-ತುಂಗಾಭದ್ರಾ ಜಿಲ್ಲೆ.
- 8.ಬೀದರ್ ಜಿಲ್ಲೆಯ ಸ್ತಬ್ಧಚಿತ್ರ-ಅನುಭವ ಮಂಟಪ
- 9.ಪ್ರವಾಸೋದ್ಯಮ ಇಲಾಖೆ ಸ್ತಬ್ಧ ಚಿತ್ರ-ಒಂದು ರಾಜ್ಯ ಹಲವು ಜಗತ್ತುಗಳು
- 10.ವಿಜಯಪುರ ಸ್ತಬ್ಧ ಚಿತ್ರ-ಗೋಲಗುಮ್ಮಟ
- 11.ಚಾಮರಾಜನಗರ ಜಿಲ್ಲೆ ಸ್ತಬ್ಧ ಚಿತ್ರ-ಅರಣ್ಯ ಸಂಪತ್ತಿನೊಳಗಿನ ಅಧ್ಯಾತ್ಮಿಕ ಕ್ಷೇತ್ರಗಳು
- 12. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ತಬ್ಧ ಚಿತ್ರ-ಕರ್ನಾಟಕದ ನವರತ್ನಗಳು
- 13. ಚಿತ್ರದುರ್ಗ ಜಿಲ್ಲೆ ಸ್ತಬ್ಧಚಿತ್ರ-ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು-ನಾಯಕಹಟ್ಟಿ ಪುಣ್ಯಕ್ಷೇತ್ರ
- 14. ಚಿಕ್ಕಮಗಳೂರು ಜಿಲ್ಲೆ ಸ್ತಬ್ಧಚಿತ್ರ-ಭೂತಾಯಿ ಕಾಫಿ ಕನ್ಯೆ
- 15.ವಿಧುರಾಶ್ವಥ್ಧ ಪುಣ್ಯಕ್ಷೇತ್ರ ಸ್ತಬ್ಧಚಿತ್ರ
- 16. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸ್ತಬ್ಧಚಿತ್ರ-ಕಾನೂನು ಸೇವೆಗಳು
- 17. ದಾವಣಗೆರೆ ಜಿಲ್ಲೆಯ ಸ್ತಬ್ಧಚಿತ್ರ-ಸ್ಮಾರ್ಟ್ ಸಿಟಿಯತ್ತ
- 18.ದಕ್ಷಿಣ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರ-ಕೋಟಿ ಚೆನ್ನಯ್ಯ ತುಳು ನಾಡ ವೀರರು
- 19. ಧಾರವಾಡ ಜಿಲ್ಲೆ ಸ್ತಬ್ಧ ಚಿತ್ರ-ದ.ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ
- 20. ವಾರ್ತಾ ಇಲಾಖೆ ಸ್ತಬ್ಧ ಚಿತ್ರ-ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
- 21. ಗದಗ ಜಿಲ್ಲೆ ಸ್ತಬ್ಧ ಚಿತ್ರ-ಮರಗಳ ಮರು ನೆಡುವಿಕೆ
- 22. ಕಲ್ಬುರ್ಗಿ ಜಿಲ್ಲೆ ಸ್ತಬ್ಧ ಚಿತ್ರ-ಕಲ್ದುರ್ಗಿಯ ವಿಮಾನ ನಿಲ್ದಾಣ
- 23.ಹಾಸನ ಜಿಲ್ಲೆ ಸ್ತಬ್ಧ ಚಿತ್ರ-ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ
- 24. ಕಾವೇರಿ ನೀರಾವರಿ ನಿಗಮದ ಸ್ತಬ್ಧಚಿತ್ರ-ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು
- 25. ಹಾವೇರಿ ಜಿಲ್ಲೆ ಸ್ತಬ್ಧ ಚಿತ್ರ-ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಭಂಕಾಪುರ ನವಿಲುಧಾಮ
- 26. ಕೋಲಾರ ಜಿಲ್ಲೆ ಸ್ತಬ್ಧ ಚಿತ್ರ-ಜಿಲ್ಲಾ ಪಂಚಾಯತ್ ನಡೆ ಗ್ರಾಮದ ಅಭಿವೃದ್ಧಿ ಕಡೆ
- 27. ಕೊಪ್ಪಳ ಜಿಲ್ಲೆ ಸ್ತಬ್ಧಚಿತ್ರ-ಶ್ರೀ ಕನಕಾಂಚಲ ದೇವಸ್ಥಾನ ಮತ್ತು ಐತಿಹಾಸಿಕ ಬಾವಿ ಕನಕಗಿರಿ
- 28. ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಸ್ತಬ್ಧಚಿತ್ರ-ನಮ್ಮ ಮತ ನಮ್ಮ ಹಕ್ಕು
- 29. ಮಂಡ್ಯ ಜಿಲ್ಲೆ ಸ್ತಬ್ಧಚಿತ್ರ-ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ (ಕೆ.ಆರ್.ಎಸ್. ಅಣೆಕಟ್ಟೆ)
- 30. ಮೈಸೂರು ಜಿಲ್ಲೆ ಸ್ತಬ್ಧಚಿತ್ರ-ಗೋಲ್ಡನ್ ಟೆಂಪಲ್ ಬೈಲಕುಪ್ಪೆ
- 31. ರಾಯಚೂರು ಜಿಲ್ಲೆ ಸ್ತಬ್ಧ ಚಿತ್ರ-ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ
- 32. ರಾಮನಗರ ಜಿಲ್ಲೆ ಸ್ತಬ್ಧ ಚಿತ್ರ-ಭಕ್ತಿ, ನಂಬಿಕೆ, ಕರಕುಶಲ ಇತಿಹಾಸಗಳ ಸಂಗಮ
- 33. ಶಿವಮೊಗ್ಗ ಜಿಲ್ಲೆ ಸ್ತಬ್ಧ ಚಿತ್ರ-ಬಿದನೂರು ಶಿವಪ್ಪ ನಾಯಕ ಸಾಧನೆ
- 34. ತುಮಕೂರು ಜಿಲ್ಲೆ ಸ್ತಬ್ಧಚಿತ್ರ-ಶತಮಾನ ಕಂಡ ಮಹಾಸಂತ ಡಾ. ಶ್ರೀ ಶಿವಕುಮಾರಸ್ವಾಮಿಗಳು
- 35 ಸ್ತಬ್ಧಚಿತ್ರ ಉಪಸಮಿತಿಯ ಸ್ತಬ್ಧಚಿತ್ರ-ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವಿಕೇಂದ್ರೀಕರಣ
- 36. ಉಡುಪಿ ಜಿಲ್ಲೆ ಸ್ತಬ್ಧ ಚಿತ್ರ-ಪರಶುರಾಮ ಸೃಷ್ಟಿಯ ತುಳುನಾಡು
- 37.ಉತ್ತರ ಕನ್ನಡ ಜಿಲ್ಲೆ ಸ್ತಬ್ಧ ಚಿತ್ರ-ಸಿದ್ಧಿ ಜನಾಂಗ ಹಾಗೂ ಪ್ರವಾಸಿ ತಾಣ, ಯಾಣ
- 38 ಯಾದಗಿರಿ ಜಿಲ್ಲೆ ಸ್ತಬ್ಧ ಚಿತ್ರ-ಬಂಜಾರ ಸಂಸ್ಕೃತಿ
- 39. ಆರೋಗ್ಯ ಇಲಾಖೆ ಸ್ತಬ್ಧ ಚಿತ್ರ-ಆರೋಗ್ಯ ಇಲಾಖೆಯ ಸೇವೆಗಳು
- 40.ಅಲ್ಪಸಂಖ್ಯಾತ ಇಲಾಖೆ ಸ್ತಬ್ಧ ಚಿತ್ರ-ಇಲಾಖಾ ಕಾರ್ಯಕ್ರಮಗಳು.
- 41. ಶಿಕ್ಷಣ ಇಲಾಖೆ ಸ್ತಬ್ಧ ಚಿತ್ರ-ಇಲಾಖಾ ಕಾರ್ಯಕ್ರಮಗಳು
- 42. ಕೊಡಗು ಜಿಲ್ಲೆ ಸ್ತಬ್ಧ ಚಿತ್ರ-ಪ್ರವಾಸೋದ್ಯಮ
ಇವಿಷ್ಟು ಸ್ತಬ್ದ ಚಿತ್ರ ಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!