Connect with us

ನೆಲದನಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ

Published

on

ರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಸರ್ಕಾರವು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಖಂಡಿತವಾಗಿಯೂ ಇದು ಗೌರವ ಸಲ್ಲಿಸುವ ಕೆಲಸ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹೇಗಾಗಿದೆಯೆಂದರೆ ಸರ್ಕಾರಗಳು ಜಯಂತಿಗಳನ್ನು ಆಚರಿಸುವುದು ಎಂದರೆ ಆಯಾ ಮಹಾನ್ ವ್ಯಕ್ತಿಗಳು ಹುಟ್ಟಿದ ಜಾತಿಗಳನ್ನು ತುಷ್ಟೀಕರಣ ಮಾಡಲು ಮಾತ್ರ ಎಂಬಂತಾಗಿದೆ. ಬಸವ ಜಯಂತಿ ಲಿಂಗಾಯತರಿಗೆ, ವಾಲ್ಮೀಕಿ ಜಯಂತಿ ವಾಲ್ಮೀಕಿ ನಾಯಕರಿಗೆ, ಕನಕ ಜಯಂತಿ ಕುರುಬರಿಗೆ, ಕೆಂಪೇಗೌಡ ಜಯಂತಿ ಒಕ್ಕಲಿಗ ಗೌಡರಿಗೆ, ಅಂಬೇಡ್ಕರ್ ಜಯಂತಿ ದಲಿತರಿಗೆ, ಟಿಪ್ಪೂ ಜಯಂತಿ ಮುಸ್ಲಿಮರಿಗೆ ಹಾಗೂ ನಾರಾಯಣ ಗುರುಗಳ ಜಯಂತಿ ಈಡಿಗ, ಬಿಲ್ಲವ ದೀವರಿಗೆ… ಹೀಗೆ ಜಯಂತಿಗಳು ಜಾತಿಗಳಿಗೆ ಸೀಮಿತಗೊಂಡಿರುವುದು ನಾವಿರುವ ಕಾಲದ ವಿಪರ‍್ಯಾಸವೂ ಹೌದು ನಮ್ಮ ಸಮಾಜದ ಅನಾರೋಗ್ಯದ ಸ್ಥಿತಿಯೂ ಹೌದು.

ಯಾಕೆ ಈ ಮಾತನ್ನು ಹೇಳಬೇಕಾಯಿತೆಂದರೆ ಮೇಲೆ ಹೇಳಿದ ಮಹಾನ್ ವ್ಯಕ್ತಿಗಳೆಲ್ಲರೂ ತಮ್ಮ ಬದುಕಿನಲ್ಲಿ ಶ್ರಮಿಸಿದ್ದು ಜಾತಿ-ಮತ-ಲಿಂಗ ಬೇಧಗಳನ್ನು ದೂರ ಮಾಡಿ ಮನುಷ್ಯರೆಲ್ಲರೂ ಒಂದೇ ಆಗಿ ಬಾಳಬೇಕಾದ ಒಂದು ಸಮಾಜದ ಸಾಕಾರಕ್ಕಾಗಿ ಎಂಬುದು ಎಲ್ಲರೂ ಬಲ್ಲ ಸಂಗತಿ. ಇದಕ್ಕೆ ನಾರಾಯಣ ಗುರುಗಳೂ ಹೊರತಲ್ಲ. 19ನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಬದುಕಿ ಹೋದ ಮಹಾನ್ ಸಂತರಾದ ನಾರಾಯಣ ಗುರುಗಳ ಬದುಕು ಮತ್ತು ಅವರು ತಮ್ಮ ಅನುಯಾಯಿಗೊಳಗೂಡಿ ಕೈಕೊಂಡಿದ್ದಂತಹ ಕೈಂಕರ್ಯಗಳನ್ನು ನೋಡಿದಾಗ ಈ ಸತ್ಯ ತಿಳಿಯುತ್ತದೆ. ಇಂದು ಆಚರಿಸಲಾಗುತ್ತಿರುವ ನಾರಾಯಣ ಗುರುಗಳ ಜಯಂತಿಯ ಸಂದರ್ಭದಲ್ಲಿ ಅವರ ಬದುಕು, ತಮ್ಮ ಪ್ರಯತ್ನಗಳಿಂದ ಸಮಾಜದಲ್ಲಿ ಉಂಟು ಮಾಡಿದ ಬದಲಾವಣೆ ಹಾಗೂ ಅವರು ಪ್ರತಿಪಾದಿಸಿದ ಸೋಶಿಯಲ್ ಫಿಲಾಸಫಿಯ ಸ್ಥೂಲ ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶವಾಗಿದೆ.

ನಾರಾಯಣ ಗುರುಗಳು ಕೇರಳದ ತಿರುವನಂತಪುರದಿಂದ ಉತ್ತರಕ್ಕೆ ಏಳು ಮೈಲಿ ದೂರದಲ್ಲಿರುವ ಚೆಂಬಳಾಂತಿ ಎಂಬ ಹಳ್ಳಿಯ ಮಧ್ಯಮ ವರ್ಗದ ದಂಪತಿಗಳಾದ ಮಾಡನಾಶಾನ್ ಮತ್ತು ಕುಟ್ಟಿಯಮ್ಮರ ನಾಲ್ಕನೆಯ ಮಗನಾಗಿ 1854ರ ಆಗಸ್ಟ್ 20ರಂದು ಜನಿಸಿದರು. ಅಂದು ’ಅಸ್ಪೃಶ್ಯ’ ಎಂದು ಪರಿಗಣಿಸಲ್ಪಟ್ಟಿದ್ದ ಈಳವ ಸಮುದಾಯದ (ಕರ್ನಾಟಕದಲ್ಲಿರುವ ಬಿಲ್ಲವ, ನಾಮಧಾರಿ, ಹಳೇಪೈಕ ಯಾ ದೀವರು ಸಮುದಾಯಗಳು ಮತ್ತು ಈಳವರ ಮೂಲಗಳು ಒಂದೇ ಎಂದು ಮಾನವ ಶಾಸ್ತ್ರಜ್ಞ ಎಡ್ಗರ್ ಥರ‍್ಸ್ಟ್‌ನ್ ದಾಖಲಿಸಿದ್ದಾರೆ) ಈ ದಂಪತಿಗಳು ರೈತರಾಗಿದ್ದರಲ್ಲದೇ ಆಯುರ್ವೇದ ವೈದ್ಯ ಅಥವಾ ನಾಟಿ ವೈದ್ಯ ಬಲ್ಲವರಾಗಿದ್ದರು. ಕೆಲ ಕಾಲ ಊರಿನ ಶಾಲೆಯಲ್ಲಿ ಮೇಸ್ಟ್ರಾಗಿದ್ದರಿಂದ ಅವರಿಗೆ ಆಶಾನ್ (ಅಂದರೆ ಮೇಸ್ಟ್ರು ಎಂದು) ಎಂಬ ಉಪನಾಮವೂ ಸೇರಿಕೊಂಡಿತ್ತು. ಇಂತಹ ಕುಟುಂಬದಲ್ಲಿ ಜನಿಸಿದ ನಾರಾಯಣ ( ಅವರ ಬಾಲ್ಯದಲ್ಲಿ ಎಲ್ಲರೂ ಪ್ರೀತಿಯಿಂದ ’ನಾಣೂ’ ಎಂದೇ ಕರೆಯುತ್ತಿದ್ದರು) ಮುಂದೆ ಇಡೀ ಕೇರಳದ ಲಕ್ಷಾಂತರ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತಾನೆಂದು ಯಾರೂ ಊಹಿಸಿರಲಿಲ್ಲ. ನಾರಾಯಣ ಗುರುಗಳು ಜನಿಸಿದ 19ನೆ ಶತಮಾನದ ಆದಿಯಲ್ಲಿ ಕೇರಳದಲ್ಲಿದ್ದ ಜಾತಿ ವ್ಯವಸ್ಥೆ ಎಂತಹ ಅಸಹ್ಯಕರವಾಗಿತ್ತು ಎಂದರೆ ಆ ಸಂದರ್ಭದಲ್ಲಿ ಒಮ್ಮೆ ಕೇರಳವನ್ನು ಸಂದರ್ಶಿಸಿದ ಸ್ವಾಮಿ ವಿವೇಕಾನಂದರು ಈ ಕೇರಳವು ಜಾತಿ ಜಾತಿಗಳ ಕಿತ್ತಾಟದಿಂದಾಗಿ ಒಂದು ಹುಚ್ಚಾಸ್ಪತ್ರೆ (ಮೆಂಟಲ್ ಅಸಿಲಮ್) ಆಗಿಬಿಟ್ಟಿದೆ ಎಂದು ಉದ್ಘರಿಸಿದ್ದರು. ಇಡೀ ಕೇರಳವು ಕೂಪ ಮಂಡೂಕಗಳಾಗಿದ್ದ ಜಾತಿಗಳಿಂದಾಗಿ, ಗಾಢಾಂಧಕಾರ ಆವರಿಸಿಕೊಂಡಿತ್ತು.

ಇಂತಹ ಪರಿಸ್ಥಿತಿ ಉದ್ಭವಿಸಿದ್ದದಾದರೂ ಹೇಗೆ?

ಕೇರಳದಲ್ಲಿ ಕ್ರಿ.ಶ. 5ನೇ ಶತಮಾನದ ನಂತರದಲ್ಲಿ ಉತ್ತರ ಭಾರತದಿಂದ ಬ್ರಾಹ್ಮಣರ ಪ್ರವೇಶವಾಗುತ್ತದೆ. ಅದುವರೆಗೂ ಅಲ್ಲಿ ನಾನಾ ವೃತ್ತಿಗಳಲ್ಲಿ ತೊಡಗಿಕೊಂಡಿದ್ದ ಜಾತಿಗಳು ಇದ್ದವೇ ವಿನಃ ಅವುಗಳ ನಡುವೆ ಏಣಿಶ್ರೇಣಿ, ತಾರತಮ್ಯಗಳು ಇರಲಿಲ್ಲ. ಕೆಲವು ಕುಲಗಳು ಆಳ್ವಿಕೆ ನಡೆಸುತ್ತಿದ್ದರು. ಪುಲಯ ಮತ್ತು ಪರಯ ಎಂದು ಕರೆಯಲಾಗುವ ಹೊಲೆಯ ಸಮುದಾಯಗಳು ಕೃಷಿ ಸಮುದಾಯಗಳಾಗಿದ್ದವು. ಈಳವರು, ನಾಯರ್ ಮುಂತಾದವರು ಕೃಷಿಯೊಂದಿಗೆ ವ್ಯಾಪಾರ, ವೈದ್ಯ ವೃತ್ತಿಗಳ ಜೊತೆಗೆ ಸೇನೆಯಲ್ಲಿ ಸೇನಾನಿಗಳಾಗಿ ತೊಡಗಿದ್ದರು. ಯಾವಾಗ ತಮ್ಮನ್ನು ನಂಬೂದರಿಗಳು ಎಂದು ಹೇಳಿಕೊಂಡ ಬ್ರಾಹ್ಮಣರು ನೆಲೆಯೂರಿದರೋ ಆಗ ಇಡೀ ಸಾಮಾಜಿಕ ವ್ಯವಸ್ಥೆಯೇ ವಿರೂಪಗೊಂಡಿತು. ತಾವು ’ಚಂದ್ರ ವಂಶ’, ’ಸೂರ್ಯ ವಂಶ’ ಹಾಗೂ ’ಅಗ್ನಿ ವಂಶದವರು’ ಎಂದೂ, ಬ್ರಹ್ಮನ ಮುಖದಿಂದ ಹುಟ್ಟಿದವರೆಂದೂ ಹೇಳುತ್ತಾ, ರಾಜರನ್ನು ಹೊಗಳಿ ಅಟ್ಟಕ್ಕೇರಿಸಿ ತಾವು ಪರಮ ’ಜ್ಞಾನಿ’ಗಳು ಎಂದು ಹೇಳುತ್ತಾ, ಜನರಿಗೆ ಅರ್ಥವಾಗದ ಸೊ ಕಾಲ್ಡ್ ದೇವಭಾಷೆ ಸಂಸ್ಕೃತ ಶ್ಲೋಕಗಳನ್ನು ಉಚ್ಛರಿಸುತ್ತಾ ರಾಜರನ್ನೂ, ಜನರನ್ನೂ ಮಂಗ ಮಾಡುತ್ತಾ ತಾವು ಸಮಾಜದ ಉಚ್ಛ ಹಂತದಲ್ಲಿ ಸ್ಥಾನ ಪಡೆಯುತ್ತಾ ಹೋದರು.

ರಾಜರು ನೀಡುವ ಉಂಬಳಿಗಳಿಂದಾಗಿ ಉಳುಮೆ ಮಾಡುವ ಭೂಮಿಯೆಲ್ಲಾ ನಂಬೂದರಿಗಳ ಪಾಲಾಯಿತು. ಬರಬರುತ್ತಾ ಬರಿ ಕೈಯಲ್ಲಿ ಬಂದವರು ರಾಜರ ಸಮಕ್ಕೆ ನಿಂತರಲ್ಲದೇ ತಾವೂ ರಾಜ್ಯಾಡಳಿತ ನಡೆಸಲು ಆರಂಭಿಸಿದರು. ಪರಿಣಾಮವಾಗಿ ಈ ಮೊದಲಿನ ಬಹುತೇಕ ಕೃಷಿಕರು ತಮ್ಮ ನೆಲ ಕಳೆದುಕೊಂಡು ’ಅಸ್ಪೃಶ್ಯತೆ’ಗೆ ನೂಕಲ್ಪಟ್ಟರು. ಈ ಹಂತದಲ್ಲಿ ಮಲಬಾರ್ ಪ್ರಾಂತ್ಯದ ಎಲ್ಲಾ ಭೂಮಾಲೀಕರೂ ನಂಬೂದರಿಗಳೇ ಆಗಿದ್ದರು. ಇವರು ಸಮಾಜದಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಹೇರಿದರು. ಕ್ಷತ್ರಿಯರು, ಬ್ರಾಹ್ಮಣರಲ್ಲದೇ ನಾಯರ್‌ಗಳನ್ನು ತಮಗಿಂತ ಕೆಳಗಿರಿಸಿಕೊಂಡರೂ, ಕೆಲವು ಅನುಕೂಲ ನೀಡಿ ಮಿಕ್ಕ ಜಾತಿಗಳಿಗಿಂತ ಮೇಲಿರಿಸಿಕೊಂಡರು. ಬ್ರಾಹ್ಮಣ ದಂಪತಿಗಳ ಮೊದಲ ಮಗನಿಗೆ ಮಾತ್ರ ಬ್ರಾಹ್ಮಣ ಕನ್ಯೆ, ನಂತರದ ಗಂಡು ಮಕ್ಕಳಿಗೆ ನಾಯರ್ ಕನ್ಯೆಯನ್ನು ತಂದುಕೊಂಡರೂ ಇವರಿಗೆ ಹುಟ್ಟುವ ಮಕ್ಕಳಿಗೆ ಯಾವುದೇ ಆಸ್ತಿ ಮತ್ತಿತರ ಹಕ್ಕಿಲ್ಲದಂತೆ ನೋಡಿಕೊಂಡರು. ಇಂತಹ ಒಂದು ಏರ್ಪಾಡಿನ ಮೂಲಕ ಕ್ಷತ್ರಿಯರು, ಬ್ರಾಹ್ಮಣರು ಹಾಗೂ ನಾಯರ್‌ಗಳನ್ನೊಳಗೊಂಡಂತೆ ’ಸವರ್ಣೀಯ’ರು ಎಂದು ಕರೆದುಕೊಂಡ ಒಂದು ಪಂಗಡವೂ, ಈಳವ, ತೀಯ ಮತ್ತು ಹೊಲೆಯ ಜಾತಿಗೆ ಸೇರಿದವರನ್ನು ’ಅವರ್ಣೀಯ’ರೆಂದು ಕರೆದು ಮತ್ತೊಂದು ಪಂಗಡವೂ ಉಂಟಾಗಿ ಸಮಾಜ ಇಬ್ಭಾಗವಾಯಿತು. ’ಅಸ್ಪೃಶ್ಯ’ ಅವರ್ಣೀಯರ ಬದುಕು ಪಾತಾಳಕ್ಕೆ ನೂಕಲ್ಪಟ್ಟಿತು. ಇವರು ಸವರ್ಣೀಯ ವ್ಯಕ್ತಿಗಳೆದುರು ಹೀನಾಯವಾಗಿ ಬದುಕಬೇಕಾಯಿತು. ಹಗಲಿನ ಇಳಿಹೊತ್ತಿನಲ್ಲಿ ಈಳವರಾಗಲೀ, ಹೊಲೆಯರಾಗಲೀ ಅವರ್ಣೀಯರಿಗೆ ಕಾಣಿಸಿಕೊಳ್ಳುವಂತಿಲ್ಲ.

ಯಾಕೆಂದರೆ ಇವರ ನೆರಳು ಬಿದ್ದು ಮೈಲಿಗೆಯಾಗಿಬಿಡುತ್ತದೆ! ಅವರ್ಣೀಯ ಮಹಿಳೆಯರು ಕುಪ್ಪಸ ಧರಿಸುವಂತಿಲ್ಲ. ಅವರ್ಣೀಯರ ಮೇಲೆ ಹೇರಲಾಗಿದ್ದ ಸುಮಾರು 200 ತರದ ವಿವಿಧ ತೆರಿಗೆಗಳಲ್ಲಿ ಈಳವ ಹೆಣ್ಣು ಮಕ್ಕಳ ಮೊಲೆಗಳ ಗಾತ್ರವನ್ನಾಧರಿಸಿದ ತೆರಿಗೆಯೂ ಇತ್ತು. ಮೊಲೆಗಳು ದೊಡ್ಡದಿದ್ದರೆ ಹೆಚ್ಚು ತೆರಿಗೆಯನ್ನು ಬ್ರಾಹ್ಮಣ ಭೂಮಾಲೀಕರಿಗೆ ಪಾವತಿಸಬೇಕು! ತಪ್ಪಿದರೆ ಕಠಿಣ ಶಿಕ್ಷೆ. ಕೆಲವೊಮ್ಮೆ ಮರಣ ದಂಡಣೆಯೂ ಆದೀತು! ಈ ಮೊಲೆಗಳ ಮೇಲಿನ ಕ್ರೂರವಾದ ತೆರಿಗೆಯನ್ನು ಪ್ರತಿರೋಧಿಸುವ ಸಲುವಾಗಿ 19ನೆಯ ಶತಮಾನದ ಆದಿಯಲ್ಲಿ ತಿರುವಾಂಕೂರಿನ ಚೆರ್ತಳ ಎಂಬ ಊರಿನ ಈಳವರ ಬಡ ಕುಡುಂಬವೊಂದರ ಹುಡುಗಿ, ನಂಗೇಲಾ ಎಂಬಾಕೆ ತನ್ನ ಮೊಲೆಗಳನ್ನೇ ಕತ್ತರಿಸಿ ಹಾಕಿ ಬಾಳೆ ಎಲೆಯ ಮೇಲಿಟ್ಟು ತೆರಿಗೆ ವಸೂಲಿಗೆ ಬಂದವರಿಗೆ ಅರ್ಪಿಸಿ, ತಾನು ರಕ್ತಸ್ರಾವದಿಂದ ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆಯೂ ನಡೆದಿತ್ತು. ನೇಕಾರರು ಬಟ್ಟೆ ನೇಯ್ದರೆ ತೆರಿಗೆ. ಬೆಸ್ತರು ಮೀನು ಹಿಡಿದರೆ ತೆರಿಗೆ, ಗಾಣಿಗರು ಎಣ್ಣೆ ತೆಗೆದರೆ ತೆರಿಗೆ, ರೈತರು ಹೆಂಡ ಇಳಿಸಿದರೆ ತೆರಿಗೆ… ಹೀಗೆ ತೆರಿಗೆಯ ವಿಷವರ್ತುಲದಿಂದ ಯಾರೂ ಏಳಿಗೆಯಾಗದಂತೆ ಬ್ರಾಹ್ಮಣ ಭೂಮಾಲೀಕರು ಜನರನ್ನು ನಿರ್ಬಂಧಿಸಿಟ್ಟಿದ್ದರು. ಇನ್ನು ಅವರ್ಣೀಯ ಜಾತಿಗಳ ಜನರು ಸವರ್ಣೀಯರೆದುರು ಮಾತಾಡುವಾಗ ನಾನು ಎಂದು ಬಳಸಬೇಕಾದೆಡೆಯಲ್ಲೆಲ್ಲಾ ’ನಿಮ್ಮ ಗುಲಾಮ ಎಂದೇ ಬಳಸಬೇಕಾಗಿತ್ತು. ಒಬ್ಬ ಚೋಟುದ್ದದ ಬ್ರಾಹ್ಮಣ ಬಾಲಕನಿಗೂ ಒಬ್ಬ ವಯಸ್ಸಾದ ಈಳವ ಅಥವಾ ಪರಯನಾದವನು ‘ದಣೇರಾ’ ಎಂದೇ ಕರೆಯಬೇಕಾಗಿತ್ತು! ಇಷ್ಟೇ ಅಲ್ಲ. ಬ್ರಾಹ್ಮಣರು ಸ್ಥಾಪಿಸಿದ್ದ ದೇವಸ್ಥಾನಗಳ ಒಳಗೆ ಅವರ್ಣೀಯರಿಗೆ ಪ್ರವೇಶವಿರಲಿಲ್ಲ. 8 ನೇ ಶತಮಾನದ ಅದ್ವೈತವಾದಿ ಶಂಕರಾಚಾರ್ಯ ಸ್ಥಾಪಿಸಿದ್ದ ವೈಕಂನ ಶಿವಾಲಯದ ಮುಂಭಾಗದ ರಸ್ತೆಯಲ್ಲೂ ಇವರಿಗೆ ಪ್ರವೇಶ ನಿಷೇಧಿಸಿ ದೊಡ್ಡ ಬೋರ್ಡ್ ಹಾಕಿದ್ದರು. ಸ್ವತಃ ಶಂಕರಾಚಾರ್ಯರೇ ಈ ರೀತಿಯಾಗಿ ಆದೇಶಿಸಿದ್ದಾರೆಂದು ಹೇಳುತ್ತಿದ್ದರು. ಸುಮಾರು ಐದನೇ ನೇ ಶತಮಾನದಿಂದ 19ನೇ ಶತಮಾನದವರೆಗಿನ 1400 ವರ್ಷಗಳ ಅವಧಿಯಲ್ಲಿ ಕೇರಳ ರಾಜ್ಯವು ಬ್ರಾಹ್ಮಣಶಾಹಿಯ ಕಪಿಮುಷ್ಠಿಯಲಿ ಜಾತಿಭೇಧದ ಕೆಸರಿನಲ್ಲಿ ಹೂತು, ಅಲ್ಲಿನ ತಳ ಸಮುದಾಯಗಳು ಮೇಲೇಳದ ಸ್ಥಿತಿಯಲ್ಲಿ ಇದ್ದವು. ಆದರೆ ತುಳಿಸಿಕೊಂಡ ಸಮುದಾಯಗಳೂ ಆಗಾಗ ಪ್ರತಿರೋಧ ತೋರುತ್ತಲೇ ಇದ್ದವು.

ಅಂತಹ ಪ್ರತಿರೋಧ ಎದುರಾದಾಗಲೇಲ್ಲಾ ಅದನ್ನು ಬರ್ಬರವಾಗಿ ಹತ್ತಿಕ್ಕುವ ಕೆಲಸ ನಡೆಯುತ್ತಿತ್ತು. ಉದಾಹರಣೆಗೆ ೧೮೦೦ರಲ್ಲಿ ವೈಕಂ ದೇವಾಲಯದ ರಸ್ತೆಯಲ್ಲಿ ನಿರ್ಭಂಧ ಮುರಿದು ಒಳ ಪ್ರವೇಶಿಸಲು ಯತ್ನಿಸಿದ 200 ಈಳವ ಯುವಕರ ಮೇಲೆ ಕುದುರೆ ಮೇಲಿಂದ ಬಂದ ಬ್ರಾಹ್ಮಣ ದಿವಾನನು ಮನಸಿಗೆ ಬಂದಂತೆ ಖಡ್ಗ ಬೀಸಿ ಅನೇಕರ ಪ್ರಾಣವನ್ನೇ ತೆಗೆದಿದ್ದ. ಇದು ಈಳವರಲ್ಲಿ ಭಯಭೀತಿಯನ್ನೇ ಸೃಷ್ಟಿಸಿತ್ತು.
ಈ ಮಟ್ಟಿಗಿನ ದಮನ, ದೌರ್ಜನ್ಯಗಳು ತಾಂಡವವಾಡುತ್ತಿದ್ದಾಗ ಈ ಸಮುದಾಯಗಳ ಪಾಲಿಗೆ ಆಶಾಕಿರಣವಾಗಿ ಮೂಡಿ ಬಂದವರೇ ನಾರಾಯಣ ಗುರು. ಕೌಟುಂಬಿಕ ಹಿನ್ನೆಲೆ ಉತ್ತಮವಾಗಿದ್ದ ಕಾರಣ ನಾಣುಗೆ ಉತ್ತಮ ಶಿಕ್ಷಣವೂ ದೊರೆಯಿತು. ಸಂಸ್ಕೃತ ಭಾಷೆಯನ್ನೂ ಬಹುಬೇಗನೆ ಕಲಿತು ಲೀಲಾಜಾಲವಾಗಿ ಸಂಸ್ಕೃತ ಮತ್ತು ಮಲೆಯಾಳಂನಲ್ಲಿ ಕಾವ್ಯ ರಚಿಸಲೂ ತೊಡಗಿದ್ದರು. ಇದೇ ಹೊತ್ತಿನಲ್ಲಿ ಬಾಲಕ ನಾಣು ತುಳಿತಕ್ಕೊಳಗಾದವರನ್ನು ನೋಡಿ ಅನುಕಂಪ ಬೆಳೆಸಿಕೊಳ್ಳುವ ಅತ್ಯಂತ ಸಹೃದಯಿ ವಿದ್ಯಾರ್ಥಿಯಾಗಿಯೂ ಬೆಳೆಯತೊಡಗಿದ್ದ. ತನ್ನ ಈಳವ ಸಮುದಾಯದ ಮೇಲಿನ ಬ್ರಾಹ್ಮಣ ಮತ್ತು ನಾಯರ್‌ಗಳ ದೌರ್ಜನ್ಯ ಅವನನ್ನು ಎಷ್ಟು ಕಾಡುತ್ತದೆಯೋ, ತನ್ನ ಸಮುದಾಯದವರು ತಮಗಿಂತ ಕೆಳಸ್ತರದ ಹೊಲೆಯರನ್ನು, ಪರರನ್ನು, ನಾಯಡಿಗಳನ್ನು ಕಂಡರೆ ಮೈಲಿಗೆ ಎಂದು ಮೈಲಿ ದೂರ ಓಡುವುದೂ ಬಾಲಕ ನಾಣುವನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ನಾಣು ಎಂತಹ ಕಿಡಿಗೇಡಿಯೆಂದರೆ ಬೇಕೆಂದರೇ ಹೊಲೆಯರನ್ನು ಮುಟ್ಟಿಸಿಕೊಂಡು ತನ್ನವರ ಬಳಿ ಬಂದು ನಿಲ್ಲುತ್ತಿದ್ದ. ಒಮ್ಮೆ ಹೊಲೆಯರ ಗುಡಿಸಿಲೊಂದರಳಗೆ ನುಗ್ಗಿ, ಉಕ್ಕಿ ಹೋಗುತ್ತಿದ್ದ ಅನ್ನದ ಪಾತ್ರೆಯನ್ನು ಇಳಿಸಿ ಬಂದಾಗ ಕುಟ್ಟಿ ಅಮ್ಮನೇ ‘ಹೊಲೆಯರ ಮನೆಗೆ ಹೋಗಿ ಮೈಲಿಗೆಯಾದೆಯಲ್ಲ’ ಎಂದಿದ್ದಕ್ಕೆ ಆ ಕೂಡಲೇ ನಾಣು ಓಡಿ ಬಂದು ತನ್ನ ಅಮ್ಮನನ್ನು ತಬ್ಬಿಕೊಂಡು, ‘ಈಗ ನೀನೂ ಮೈಲಿಗೆಯಾದೆ ನೋಡು’ ಎಂದು ಹೇಳಿ ನಗಲು ತೊಡಗಿದ್ದನಂತೆ.

ಇನ್ನೊಂದು ಘಟನೆ

ವಿದ್ಯಾರ್ಥಿಯಾಗಿದ್ದ ನಾಣು ಒಬ್ಬ ಹೊಲೆಯ ಜಾತಿಯ ಹುಡುಗಿಯ ಹಿಂದೆ ಯಾವಾಗಲೂ ಹೋಗುತ್ತಿದ್ದುದನ್ನು ಕಂಡು ಸಹಪಾಠಿಗಳಿಗೆ ಒಂಥರಾ ಗುಮಾನಿಯಾಗಿತ್ತು, ಒಂಥರದ ಅಸಮಧಾನವೂ ಆಗಿತ್ತು. ಒಂದು ದಿನ ’ನೋಡೇ ಬಿಡೋಣ’ ಎಂದು ಅವರೆಲ್ಲಾ ನಾಣುವನ್ನು ಫಾಲೋ ಮಾಡುತ್ತಾರೆ. ನಾಣು ಆ ಹುಡುಗಿಯೊಂದಿಗೆ ಸೀದಾ ಅವಳ ಮನೆಯೊಳಕ್ಕೆ ಹೋಗುತ್ತಾನೆ. ಒಳಗೆ ಏನು ನಡೆಯುತ್ತಿದೆ ಎಂಬ ಕುತೂಹಲದಿಂದ ಸಹಪಾಠಿಗಳು ಇಣುಕಿ ನೋಡಿದರೆ ಅಲ್ಲಿ ಕಂಡಿದ್ದೇನು? ತೀವ್ರ ಕುಷ್ಠ ರೋಗದಿಂದ ಬಳಲುತ್ತಾ ಮಲಗಿರುವ ಆ ಹೊಲೆಯರ ಹುಡುಗಿಯ ತಂದೆಯ ಮೈಯನ್ನು ಸ್ವಚ್ಛಗೊಳಿಸಿ, ಶುಷ್ರೂಷೆ ಮಾಡುತ್ತಿರುವ ’ವೈದ್ಯ’ ನಾಣು! ತಮ್ಮ ತಂದೆ ಮತ್ತು ಮಾವನಿಂದ ಕಲಿತುಕೊಂಡಿದ್ದ ಆಯುರ್ವೆದ ವಿದ್ಯೆಯ ಸಹಾಯದಿಂದ ನಾಣು ಅನಾರೋಗ್ಯ ಪೀಡಿತರಿಗೆ ಜಾತಿ-ಕುಲ ಭೇಧವಿಲ್ಲದೇ ಆರೈಕೆ ಮಾಡುತ್ತಿದ್ದ.

ಇಂತಹ ನಾಣು ಕ್ರಮೇಣ ಧಾರ್ಮಿಕ ತತ್ವಚಿಂತನೆಯಲ್ಲಿ ತೊಡಗಿದ. ವೇದಾಂತ, ಉಪನಿಷತ್ತುಗಳನ್ನೋದುತ್ತಾ ಅದ್ವೈತ ತತ್ವದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ ಹೋದ. ಕೊನೆಗೆ ತನ್ನ ಹೆಂಡತಿಗೆ ತನ್ನ ಬದುಕಿನ ಉದ್ದೇಶವನ್ನು ತಿಳಿಸಿ, ಒಪ್ಪಿಸಿ ಸಂಸಾರದ ಬಂಧನಗಳನ್ನೆಲ್ಲಾ ಕಳಚಿಕೊಂಡು ಯೋಗಿಯಾಗಿ, ಅವಧೂತನಾಗಿ ಕಾಡು ಮೇಡು, ಗವಿಗಳಲ್ಲಿ ಅಲೆದು, ವರ್ಷಗಟ್ಟಲೆ ಆಳವಾದ ಚಿಂತನೆ, ಅಧ್ಯಯನ ನಡೆಸುತ್ತಾ, ಇದುವರೆಗೆ ನಾಣುವಾಗಿದ್ದ ನಾರಾಯಣನು ಮುಂದೆ ಗುರುವಾಗಿ ಜನರೆದುರು ಕಾಣಿಸಿಕೊಳ್ಳುತ್ತಾರೆ. ಇವರಲ್ಲಿದ್ದ ಆಧ್ಯಾತ್ಮಿಕ ತಿಳುವಳಿಕೆ, ಅಗಾಧ ಜ್ಞಾನ ಮತ್ತು ಖಾಯಿಲೆಗಳನ್ನು ವಾಸಿ ಮಾಡುವ ಶಕ್ತಿ ಕಂಡ ಜನರು ಇವರ ಮೇಲೆ ಭಕ್ತಿ, ಗೌರವ ತೋರತೊಡಗುತ್ತಾರೆ. ತಮ್ಮ ಕಷ್ಟ ಕೋಟಲೆಗಳನ್ನು ಹೇಳಿಕೊಂಡು ಸಾಂತ್ವನ, ಪರಿಹಾರಗಳನ್ನು ಪಡೆಯತೊಡಗುತ್ತಾರೆ. ಈ ಹೊತ್ತಿಗಾಗಲೇ ಸಮಾಜದಲ್ಲಿರುವ ತನ್ನ ’ಅಸ್ಪೃಷ್ಯ’ ಸಮುದಾಯಗಳ ಸ್ಥಿತಿಯ ಸಂಪೂರ್ಣ ಅರಿವಿದ್ದ ನಾರಾಯಣ ಗುರುಗಳು ಈ ಜನರ ಬದುಕಿನಲ್ಲಿ ಹೊಸ ಅರಿವು ಮೂಡಿಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುತ್ತಾರೆ. ಈ ನಿಟ್ಟಿನಲ್ಲಿ ಅವರು ಮಾಡುವ ಮೊದಲ ಕೆಲಸವೆಂದರೆ ಧಾರ್ಮಿಕ ಕ್ರಾಂತಿ!
‘ಗುರುಗಳೇ ನಮ್ಮನ್ನು ದೇವಸ್ಥಾನಗಳ ಒಳಗೆ ಬಿಡುತ್ತಿಲ್ಲ. ನಾವು ದೇವರನ್ನು ಕಾಣುವುದು ಬೇಡವೇ?’ ಎಂದು ತನ್ನ ಬಳಿ ತೋಡಿಕೊಂಡ ’ಅಸ್ಪೃಶ್ಯ’ ಜನರಿಗೆ ಗುರು ದೇವರನ್ನು ತೋರುತ್ತಾರೆ. ಅದೂ ಗುರುಗಳು ತೋರಿದೆಡೆಯಲ್ಲಿ ಈ ಜನರೇ ಕಟ್ಟಿಕೊಳ್ಳುವ ದೇವಸ್ಥಾನಗಳಲ್ಲಿ. ಮತ್ತು ಪರಿಪಾಠ ಎಂದರೆ ಬ್ರಾಹ್ಮಣರು ಮಾತ್ರವೇ ದೇವರನ್ನು ಸ್ಥಾಪಿಸಲು ಸಾಧ್ಯ, ಅವರು ಮಾತ್ರವೇ ದೇವಸ್ಥಾನಗಳನ್ನು ಕಟ್ಟಿ ಪೂಜಾರಿಕೆ ನಡೆಸಲು ಸಾಧ್ಯ ಎಂಬುದು ಅದುವರೆಗೆ ಇದ್ದ ಬಲವಾದ ನಂಬಿಕೆ. ಆದರೆ ಗುರುಗಳು ಮುಂದೆ ಕೈಕೊಂಡ ಕೆಲಸಗಳು ಈ ನಂಬಿಕೆಯನ್ನು ಬುಡಮೇಲು ಮಾಡುತ್ತವೆ.

ನಾರಾಯಣ ಗುರುಗಳು 1888ರಲ್ಲಿ ಅರವೀಪ್ಪುರಂನಲ್ಲಿ ಮೊದಲ ದೇವಸ್ಥಾನವೊಂದನ್ನು ಭಕ್ತರ ಮೂಲಕ ನಿರ್ಮಿಸುತ್ತಾರೆ. ಅದು ತೀರಾ ಸರಳವಾದ ಒಂದು ಸಣ್ಣ ಮಂಟಪದಂತಹ ದೇಗುಲವಾಗಿತ್ತು. ದೇಗುಲವೇನೋ ನಿರ್ಮಾಣವಾಯಿತು. ಆದರೆ ದೇವರ ಮೂರ್ತಿ ಎಲ್ಲಿ ಎಂಬ ಪ್ರಶ್ನೆ ಎದುರಾಯಿತು. ಇದಕ್ಕಾಗಿ ಒಂದರೆಕ್ಷಣ ಯೋಚಿಸಿ, ಪಕ್ಕದಲ್ಲಿಯೇ ಇದ್ದ ಹೊಳೆಯಲ್ಲಿ ಒಂದು ಮುಳುಗು ಹಾಕಿದ ಗುರುಗಳು ಸುಮಾರು ಹೊತ್ತಿನ ನಂತರ ಒಂದು ಲಿಂಗದಾಕಾರದ ಕಲ್ಲನ್ನು ಎತ್ತಿಕೊಂಡು ಬಂದು ಅಲ್ಲಿ ಇಟ್ಟರು. ’ಇವನೇ ನಿಮ್ಮ ಶಿವ’ ಎಂದರು. ಅಲ್ಲಿಗೆ ದೇವರೂ ಬಂದಾಯಿತು! ಹೀಗೆ ಕೇರಳದಾದ್ಯಂತ, ನೆರೆಯ ಶ್ರೀಲಂಕಾ ಮತ್ತು ಕರ್ನಾಟಕದಲ್ಲಿಯೂ ಸೇರಿದಂತೆ 39 ದೇವಸ್ಥಾನಗಳನ್ನು ಸ್ಥಾಪಿಸಿ ’ ನಡೆಯಿರಿ ಈಗ ನಿಮ್ಮ ದೇವರನ್ನು ನೀವೇ ಪೂಜಿಸಿಕೊಳ್ಳಿ’ ಎಂದರು. ಇದರಿಂದ ಪುರೋಹಿತಿಕೆ ನಡೆಸುತ್ತಿದ್ದವರಿಗೆ ಇನ್ನಿಲ್ಲದ ಕೋಪ ಬಂದಿತು. ಬಾರದೇ ಇರುತ್ತದೆಯೇ? ‘ಅರೇ, ದೇವರನ್ನು ಗುತ್ತಿಗೆ ಹಿಡಿದ ನಮ್ಮ ದೈವದತ್ತ ಅಧಿಕಾರವನ್ನೇ ಧಿಕ್ಕರಿಸಿ ಕೀಳು ಜನರಿಗಾಗಿ ದೇವರನ್ನು ಸ್ಥಾಪಿಸುತ್ತಿರುವ ನಿನ್ನಿಂದಾಗಿ ನಮ್ಮ ಶಿವ ಮೈಲಿಗೆಯಾಗಿಬಿಟ್ಟ, ನೀನು ದೇವರನ್ನೇ ಮಲಿನಗೊಳಿಸಿದೆ’ ಎಂದು ಬುಸುಗುಡಹತ್ತಿದ ನಂಬೂದರಿ ಬ್ರಾಹ್ಮಣರಿಗೆ, ನಾರಾಯಣ ಗುರುಗಳು ’ನೋಡಿ, ನಾನು ಸ್ಥಾಪಿಸಿದ ಈ ಶಿವ ನಂಬೂದರಿಗಳ ಶಿವನಲ್ಲ. ಇವನು ಈಳವರ ಶಿವ. ಮೈಲಿಗೆಯಾದ ಜನರಿಗೆ ಮೈಲಿಗೆಯಾದ ಶಿವನೇ ಇರಲಿ, ನಿಮಗೇನೂ ಸಮಸ್ಯೆ ಇಲ್ಲವಲ್ಲ’ ಎಂದು ಶಾಂತವಾಗಿಯೇ ಉತ್ತರಿಸಿ ಬಾಯಿ ಮುಚ್ಚಿಸಿದರು. ಹೀಗೆ ನಾರಾಯಣ ಗುರುಗಳು ನಡೆಸಿದ ದೇವಸ್ಥಾನಗಳ ಸ್ಥಾಪನೆ ಆ ಕಾಲಕ್ಕೆ, ದೇವರಲ್ಲಿ ನಂಬಿಕೆ ಇರಿಸಿದ್ದ ಜನರ ಪಾಲಿಗೆ ದೊಡ್ಡ ಕ್ರಾಂತಿಕಾರಿ ನಡೆಯೇ ಆಗಿತ್ತು. ಮತ್ತೆ ಇಲ್ಲಿ ಯಾವುದೇ ದುಬಾರಿ ಹೋಮ, ಹವನಗಳಿಗೆ ಅವಕಾಶವಿರಲಿಲ್ಲ.
ಈ ಹೊತ್ತಿಗೆ ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾ ಕೆಲಸವನ್ನು ಕಂಡು, ಇವರ ಸಮಾಜ ಬದ್ಧತೆಗೆ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಮಾರು ಹೋಗಿ ಇವರೊಂದಿಗೆ ಡಾ.ಪಲ್ಪು, ಕುಮಾರನ್ ಆಶಾನ್, ಟಿ.ಕೆ.ಮಾಧವನ್ ಮತ್ತು ಸಹೋದರನ್ ಅಯ್ಯಪ್ಪನ್ ಮೊದಲಾದ ನಾಯಕರು ಸೇರಿಕೊಳ್ಳುತ್ತಾರೆ. ಇವರೆಲ್ಲರ ಸಂಗಮ ಹಾಗೂ ಸಮಷ್ಟಿ ಕಾರ್ಯಗಳಿಂದ ನಾರಾಯಣ ಗುರುಗಳು ಆರಂಭಿಸಿದ ಚಳುವಳಿ ವ್ಯಾಪಕತೆಯನ್ನೂ ಪಡೆಯಿತಲ್ಲದೇ ಅಸಂಖ್ಯ ಶೋಷಿತರ ಬದುಕಿನಲ್ಲಿ ಅಭೂತಪೂರ್ವ ಬದಲಾವಣೆಗೆ ನಾಂದಿ ಹಾಡಿತು.

ಡಾ. ಪಲ್ಪು ಆರ್ಥಿಕವಾಗಿ ಕೊಂಚ ಉತ್ತಮ ಮಟ್ಟದ ಈಳವ ಕುಟುಂಬದಿಂದ ಬಂದಿದ್ದು ಆ ಕಾಲದಲ್ಲೇ ಮೆಡಿಕಲ್ ಓದಿ, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಆದರೂ ಸಹ ಅವರಿಗೆ ಕೇರಳದಲ್ಲಿ ’ಅಸ್ಪೃಶ್ಯ ಈಳವ ಜಾತಿಯವನು’ ಎಂಬ ಕಾರಣಕ್ಕೆ ವೈದ್ಯರಾಗಲು ಅವಕಾಶ ನೀಡಿರಲಿಲ್ಲ. ನಂತರ ಅವರು ಮದ್ರಾಸ್ ಮೆಡಿಕಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿ ಮೈಸೂರಿನಲ್ಲಿ ನಿಯೋಜಿಸಲ್ಪಟ್ಟಿದ್ದರು. ತನ್ನಂತವರಿಗೇ ಇಂತಹ ತಾರತಮ್ಯ ಎಸಗುವಾಗ ಇನ್ನು ಸಾಮಾನ್ಯ ಈಳವರ ಸ್ಥಿತಿ ಏನಾಗಬಾರದು ಎಂದು ಚಿಂತಿತರಾಗಿದ್ದ ಡಾ.ಪಲ್ಪು ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳುವ ಯೋಚನೆಯಲ್ಲಿದ್ದರು. ಸ್ವಲ್ಪ ಸಮಯದಲ್ಲಿ ಅವರು ಮೈಸೂರಿನ ಅರಸರೊಂದಿಗೆ ಸಖ್ಯ ಬೆಳೆಸಿಕೊಂಡು ಅವರ ಆಪ್ತ ಸಲಹೆಗಾರರೂ ಆಗಿದ್ದರು. ಇದೇ ಸಮಯದಲ್ಲಿ ಮೈಸೂರಿಗೆ ಬಂದಿದ್ದ ಸ್ವಾಮಿ ವಿವೇಕಾನಂದರೊಂದಿಗೆ ಡಾ. ಪಲ್ಪುರವರು ಕೇರಳದಲ್ಲಿರುವ ಜಾತಿ ವೈಷಮ್ಯವನ್ನು ಪ್ರಸ್ತಾಪಿಸಿದಾಗ ವಿವೇಕಾನಂದರು, ’ಇದಕ್ಕೆ ಒಂದು ಆಧ್ಯಾತ್ಮಿಕ ಸುಧಾರಣಾ ಚಳುವಳಿಯ ಜೊತೆಯಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. ಆ ಮೂಲಕವೇ ಇತರೆ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಸಾಧ್ಯ’ ಎಂಬ ಸಲಹೆ ನೀಡಿದ್ದರು. ಈ ಸಲಹೆಯನ್ನಾಧರಿಸಿ ಡಾ.ಪಲ್ಪು ಅವರು ಅರಸಿಕೊಂಡು ಹೋದಾಗ ಸಿಕ್ಕಿದ್ದೇ ನಾರಾಯಣ ಗುರುಗಳು. ಡಾ.ಪಲ್ಪು ಅವರ ಭೇಟಿಯು ನಾರಾಯಣ ಗುರುಗಳಿಗೂ ಆನೆ ಬಲವನ್ನು ತಂದಿತೆಂದೇ ಹೇಳಬೇಕು. ಗುರುಗಳು ಮತ್ತು ಡಾ. ಪಲ್ಪು ಅವರು ಕೇರಳದ ಸಾಮಾಜಿಕ ಪರಿಸ್ಥಿತಿಯನ್ನು ಆಳವಾಗಿ ಚರ್ಚಿಸಿ ತಮ್ಮ ಈಳವ ಸಮಾಜದ ಜೊತೆಗೆ ಇಡೀ ಸಮಾಜದಲ್ಲಿ ಸುಧಾರಣೆಗಳಿಗೆ ತರಬೇಕಾದ ಸೂಕ್ತ ರೂಪುರೇಷೆಯೊಂದನ್ನು ಸಿದ್ಧಪಡಿಸಿದರು. ಇದರ ಫಲವಾಗಿ 1903ಲ್ಲಿ ಅಸ್ತಿತ್ವಕ್ಕೆ ಬಂದದ್ದೇ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಅಥವಾ SNDPಯೋಗಂ ಸಂಸ್ಥೆ. ಅಂದಿನ ಬ್ರಿಟಿಷರ ಕಂಪನಿ ಕಾಯ್ದೆಯಡಿ ಒಂದು ಉದ್ಯಮ ಕಂಪನಿಯಾಗಿ ಈ ಸಂಸ್ಥೆ ಸ್ವತಃ ಗುರುಗಳ ಅಧ್ಯಕ್ಷತೆಯೊಂದಿಗೆ ಆರಂಭಗೊಂಡಿತು. ಈ ಹೊತ್ತಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಕಾವ್ಯ ರಚನೆಗೆ ತೊಡಗಿ ಅಸಾಧಾರಣ ಪ್ರತಿಭೆ ತೋರಿದ್ದ ಕವಿ ಕುಮಾರನ್ ಆಶಾನ್ ಅವರನ್ನೂ ಮೈಸೂರಿನ ದಿವಾನರ ಸಹಾದೊಂದಿಗೆ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಡಾ.ಪಲ್ಪು ನೆರವಾಗಿದ್ದರು. ಡಾ. ಪಲ್ಪು ಮತ್ತು ಕುಮಾರನ್ ಆಶಾನ್ ಎಸ್‌ಎನ್‌ಡಿಪಿಯ ಆರಂಭದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು.

ಗುರುಗಳು ನಡೆಸಿದ ಶಿಕ್ಷಣ ಕ್ರಾಂತಿ !

ಮುಂದೆ ಹಲವಾರು ವರ್ಷಗಳ ಕಾಲ ನಾರಾಯಣ ಗುರುಗಳು ನಡೆಸಿದ ಸುಧಾರಣಾ ಕಾರ್ಯಗಳು SNDP ಮುಖಾಂತರವೇ ನಡೆದವು. ಮುಖ್ಯವಾಗಿ ಎಲ್ಲೆಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಲಾಗುತ್ತದೆಯೋ ಅಲ್ಲಿ ಗ್ರಂಥಾಲಯಗಳಿರಬೇಕು, ಹತ್ತಿರದಲ್ಲಿ ಶಾಲೆಗಳನ್ನು ತೆರೆಯಬೇಕು. ಜ್ಞಾನಾರ್ಜನೆಗೆ ಅವಕಾಶವಿರಬೇಕು. ಆದ್ಯಾತ್ಮಿಕ ತಿಳಿವಳಿಕೆ ನೀಡಬೇಕು. ಜನರನ್ನು ಕಂದಾಚಾರಗಳಿಂದ ಹೊರತರಬೇಕು. ಮದುವೆಗಳನ್ನು ಸರಳವಾಗಿ ನಡೆಸಲು ಪ್ರೇರೇಪಿಸಬೇಕು, ಮುಂತಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಇದರ ವತಿಯಿಂದ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸರ್ಕಾರ ನಡೆಸುತ್ತಿದ್ದ ಶಾಲೆಗಳಲ್ಲಿ ಈಳವರಿಗಾಗಲೀ ಹೊಲೆಯರಿಗಾಗಲೀ ಪ್ರವೇಶ ನೀಡುತ್ತಿರಲಿಲ್ಲ. ಈ ತಾರತಮ್ಯದ ವಿರುದ್ಧವೂ ಜಾಗೃತಿ ಮೂಡಿಸಿ ಸರ್ಕಾರಿ ಶಾಲೆಗಳಿಗೆ ಈ ಜನರು ಪ್ರವೇಶ ಪಡೆಯುವಂತೆ ಮಾಡುವಲ್ಲಿ ಸಫಲವಾಗುತ್ತದೆ ಧರ್ಮ ಪರಿಪಾಲನ ಸಂಸ್ಥೆ. ಈ ಸಂದರ್ಭದಲ್ಲಿಯೇ ಜನರನ್ನು ಶಿಕ್ಷಣ ಮತ್ತು ಉದ್ದಿಮೆಗಳತ್ತ ಮುಖ ಮಾಡುವಂತೆ ಹುರಿದುಂಬಿಸಲು ಗುರುಗಳು ನೀಡಿದ ಘೋಷಣೆ – “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಮತ್ತು ಉದ್ದಿಮೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ” ಈ ಘೋಷಣೆ ಸೂಜಿಗಲ್ಲಿನಂತೆ ಜನರನ್ನು ಸೆಳೆಯಿತು. SNDP ಯ ಬೆಂಬಲವೂ ಸೇರಿಕೊಂಡು ಸಹಸ್ರ ಸಹಸ್ರ ಸಂಖ್ಯೆಯ ಈಳವರು, ಹೊಲೆಯರು, ತೀಯರು ಮೊದಲಾದ ಎಲ್ಲಾ ಶಿಕ್ಷಣ ವಂಚಿತರಾರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸತೊಡಗಿದರು, ವಯಸ್ಕರಿಗಾಗಿ ಗುರುಗಳು ರಾತ್ರಿ ಶಾಲೆಗಳನ್ನೂ ನಡೆಸಿದರು. ಶಿವಗಿರಿಯಲ್ಲಿ ಕುರುಬರ ಮಕ್ಕಳಿಗಾಗಿ, ಚೆಂಬಳಾಂತಿಯಲ್ಲಿ ಹೊಲೆಯರ ಮಕ್ಕಳಿಗಾಗಿ ಮತ್ತು ವೆಟ್ಟೂರಿನಲ್ಲಿ ಪರಯ ಜಾತಿಯ ಮಕ್ಕಳಿಗಾಗಿ… ಹೀಗೆ 42 ಕಡೆಗಳಲ್ಲಿ ರಾತ್ರಿ ಶಾಲೆಗಳನ್ನು ತೆರೆದರು. ಎಲ್ಲದರ ಪರಿಣಾಮವಾಗಿ ಒಂದು ಶಿಕ್ಷಣ ಕ್ರಾಂತಿಯೇ ನಡೆದು ಹೋಯಿತು. ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿಯುವ ಮೂಲಕ ಶತ ಶತಮಾನಗಳಿಂದ ಯಾವ ಜನರನ್ನು ಕಾಲ ಕಸಕ್ಕಿಂತ ಕಡೆಯಾಗಿ, ವಿದ್ಯೆಯ ಹತ್ತಿರವೂ ಸುಳಿಯದಂತೆ ಮಾಡಲಾಗಿತ್ತೋ ಆ ಸಮುದಾಯಗಳ ಜನರು ನಾರಾಯಣ ಗುರುಗಳ ಈ ಶೈಕ್ಷಣಿಕ ಕಾರ್ಯಕ್ರಮಗಳಿಂದ ಜ್ಞಾನಾರ್ಜನೆಯಲ್ಲಿ ತೊಡಗಿದ್ದರು. ಹೀಗೆ ಜ್ಞಾನ ಪಡೆದುಕೊಂಡವರಲ್ಲಿ ಎಷ್ಟೋ ಜನರು ನಾರಾಯಣ ಗುರುಗಳ ಅನುಯಾಯಿಗಳೂ ಆಗಿ ಅವರ ಸಾಮಾಜಿಕ ಸುಧಾರಣೆಯ ಕೆಲಸದಲ್ಲಿ ಭಾಗಿಯಾದರು. ಈಳವ ಸಮಾಜದಲ್ಲಿ ಕೆಲವರು ಹೆಂಡ ಇಳಿಸುವ ಕೆಲಸವನ್ನೂ ಮಾಡುತ್ತಿದ್ದುದರಿಂದ ಅದರ ಸಾಮಾಜಿಕ ಪರಿಣಾಮವನ್ನು ಮನಗಂಡು ಆ ಕೆಲಸವನ್ನು ಬಿಡುವಂತೆ ತಿಳಿಸಿದರು.

ಪರ್ಯಾಯವಾಗಿ ಅನೇಕ ಬಗೆಯ ಸ್ವಯಂ ಉದ್ಯೋಗಗಳನ್ನು ನಡೆಸಲು ಪ್ರೇರೇಪಿಸಿದರು. ತೆಂಗಿನ ನಾರಿನ ಕೈಗಾರಿಕೆ, ಗುಡಿ ಕೈಗಾರಿಕೆಗಳ ತರಬೇತಿಗಳನ್ನು ವೈತ್ತಿಪರ ಶಿಕ್ಷಣವಾಗಿ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನೀಡಿದರು. ಈ ಎಲ್ಲಾ ಕೆಲಸಗಳಿಗೆ ಪೂರಕವಾಗಿ ಸಂಸ್ಥೆ ನಡೆಸುತ್ತಿದ್ದ, ಸ್ವಾಮಿ ವಿವೇಕಾನಂದರ ಸ್ಮರಣಾರ್ಥದ ’ವಿವೇಕೋದಯಂ’ ಎಂಬ ಹೆಸರಿನ ಪತ್ರಿಕೆ ತಳ ಸಮುದಾಯಗಳಲ್ಲಿ ವೈಚಾರಿಕ ಜಾಗೃತಿಯ ದೊಂದಿಯಾಗಿ ಕೆಲಸ ಮಾಡಿತು. ಈ ಹೊತ್ತಿಗಾಗಲೇ ಕೇರಳದ ಸಾಹಿತ್ಯ ವಲಯದಲ್ಲಿ ಅಪಾರ ಹೆಸರು ಗಳಿಸಿದ್ದ ’ಕ್ರಾಂತಿ ಕವಿ’ ಕುಮಾರನ್ ಆಶಾನ್ ಈ ಪತ್ರಿಕೆಯ ಸಂಪಾದಕರೂ ಆಗಿದ್ದರು ಪರಿಣಾಮವಾಗಿ ಈಳವ ಸಮುದಾಯ ಮತ್ತು ಇತರ ತಳ ಸಮುದಾಯಗಳು ಎಸ್‌ಎನ್‌ಡಿಪಿಯ ಸಮರ್ಥ ನಾಯಕತ್ವದಲ್ಲಿ ಎಚ್ಚೆತ್ತುಕೊಳ್ಳಲು ಸಾಧ್ಯವಾಯಿತು. ಕುಮಾರನ್ ಆಶಾನ್ ಅವರು ರಚಿಸಿದ ’ದುರವಸ್ಥ’, ’ಚಾಂಡಾಲ ಬಿಕ್ಕುಣಿ’, ’ಕರುಣಾ’ ಮೊದಲಾದ ಖಂಡಕಾವ್ಯಗಳು ಮಲಯಾಳ ಸಾಹಿತ್ಯದಲ್ಲೇ ಸಂಚಲನ ಮೂಡಿಸಿದ್ದವು. ಆ ಕಾಲದ ಕೇರಳದ ಜಾತಿ ಅಸ್ಪೃಶ್ಯತೆ, ಬೌದ್ಧ ತತ್ವಗಳೇ ಆಶಾನರ ಸಾಹಿತ್ಯ ರಚನೆಗಳ ವಸ್ತು ವಿಷಯಗಳಾಗಿ ಅಪಾರ ಜನಮನ್ನಣೆ ಗಳಿಸಿದ್ದವು.
ಈ ಸಮಯಕ್ಕೆ ಒಂದು ಘಟನೆ ನಡೆಯಿತು. ಕೊಟ್ಟಾಯಂ ತಾಲ್ಲೂಕಿನ ವೈಕಂನಲ್ಲಿರುವ ಶಿವ ದೇವಾಲಯ ಎದುರಿನ ರಸ್ತೆಯಲ್ಲಿ ನಾರಾಯಣ ಗುರುಗಳು ಹಾಗೂ ಕುಮಾರನ್ ಆಶಾನ್ ನಡೆದು ಬರುವಾಗ ಅವರನ್ನು ಬ್ರಾಹ್ಮಣರು ನಿರ್ಬಂಧಿಸಿ, ’ನೀವು ಇಲ್ಲಿ ಬರುವಂತಿಲ್ಲ. ಇದು ಸವರ್ಣೀಯರಿಗೆ ಮಾತ್ರ ಅವಕಾಶವಿರುವ ಮಾರ್ಗ’ ಎಂದು ಅಪಮಾನಿಸಿ ಕಳಿಸಿದರು. ಇದೇ ಶಿವಾಲಯದ ಪ್ರವೇಶದ ವಿಷಯದಲ್ಲಿ ನೂರು ವರ್ಷಗಳ ಹಿಂದೆ ಈಳವ ಯುವಕರ ಮಾರಣ ಹೋಮವೂ ನಡೆದಿತ್ತಲ್ಲ. ಈ ಸಲ ತಮ್ಮ ಗುರುಗಳಿಗೇ ಆದ ಅಪಮಾನವನ್ನು ಸಹಿಸಿ ಸುಮ್ಮನಿರಲು ಈಳವರು ಮತ್ತು ಹೊಲೆಯರು ಸಿದ್ಧರಿರಲಿಲ್ಲ. ನಂತರ ಈ ಬಗ್ಗೆ ಕುಮಾರನ್ ಆಶಾನ್ ಧ್ವನಿ ಎತ್ತಿದರೂ ಅದಕ್ಕೆ ಸಮಾಧಾನಕರವಾದ ಪ್ರತಿಕ್ರಿಯೆ ದೊರೆಯಲಿಲ್ಲ. ಆಗ ಇದನ್ನೊಂದು ಗಂಭೀರ ವಿಷಯವಾಗಿ ಕೈಗೆತ್ತಿಕೊಂಡು ಬೃಹತ್ ಚಳುವಳಿ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು ನಾರಾಯಣ ಗುರುಗಳ ಮತ್ತೊಬ್ಬ ಅನುಯಾಯಿ ಟಿ.ಕೆ.ಮಾಧವನ್. ಗುರುಗಳೊಂದಿಗೆ ಸುಧೀರ್ಘ ಮಾತುಕತೆ ನಡೆಸಿ ಅವರ ಮಾರ್ಗದರ್ಶನದೊಂದಿಗೆ ಐತಿಹಾಸಿಕ ವೈಕಂ ಸತ್ಯಾಗ್ರಹ ಚಳುವಳಿ ಆರಂಭವಾಗಿಯೇ ಬಿಟ್ಟಿತು. ಈ ಹೊತ್ತಿಗಗಲೇ ಎಸ್‌ಎನ್‌ಡಿಪಿಯ ಅಸಂಖ್ಯ ಸಂಸ್ಥೆಯ ಮೂಲಕ ಸುಸಂಘಟಿತರಾಗಿದ್ದ ಈಳವರು ಮತ್ತು ಹೊಲೆಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ’ದೇವಸ್ಥಾನ ಪ್ರವೇಶ’ ಸತ್ಯಾಗ್ರಹದಲ್ಲಿ ಧುಮುಕತೊಡಗಿದರು. ಇದನ್ನು ಕೇವಲ ಕೇರಳಕ್ಕೆ ಸೀಮಿತಗೊಳಿಸದೇ ಹಾಗೂ ಕೇವಲ ರಸ್ತೆ ಮತ್ತು ದೇವಸ್ಥಾನ ಪ್ರವೇಶಕ್ಕೆ ಮಾತ್ರ ಸೀಮಿತಗೊಳಿಸದೇ ಕೇರಳದ ಒಟ್ಟಾರೆ ಜಾತಿ ತಾರತಮ್ಯದ ವ್ಯವಸ್ಥೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ದೃಷ್ಟಿಯಿಂದ ಮಾಧವನ್ ಅವರು ಯೋಚಿಸಿ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹಾತ್ಮಾ ಗಾಂಧೀಜಿಯರನ್ನೂ ಚಳವಳಿಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಇದುವರೆಗೆ ನಾರಾಯಣ ಗುರುಗಳ ಮುಂದಾಳತ್ವದಲ್ಲಿ ರಾಜ್ಯದಲ್ಲಿ ನಡೆದಿರುವ ಶೈಕ್ಷಣಿಕ ಕ್ರಾಂತಿಯನ್ನೂ ವಿವರಿಸಿದು. ಕೊನೆಗೆ ಈ ಚಳವಳಿಯ ಮಹತ್ವ ಗ್ರಹಿಸಿದ ಗಾಂಧೀಜಿ ಅದಕ್ಕೆ ಸಮ್ಮಿತಿಸಿ ತಮ್ಮ ಅನುಯಾಯಿ ಕಾಂಗ್ರೆಸಿಗರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿದರಲ್ಲದೇ ತಾವೇ ಖುದ್ದಾಗಿಯೂ ನಾರಾಯಣ ಗುರುಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. 1924ರ ಮಾರ್ಚ್ 30ರಂದು ಆರಂಭಗೊಂಡ ಸತ್ಯಾಗ್ರಹ ವರ್ಷ ಕಾಲ ನಡೆಯಿತು. ಈ ಸಂದರ್ಭದಲ್ಲಿ ಸತ್ಯಾಗ್ರಹಿಗಳು ನಿರಶನ ನಡೆಸುತ್ತಿದ್ದಾಗ, ನಾರಾಯಣ ಗುರುಗಳು, ‘ಯಾಕೆ ಉಪವಾಸ ಮಾಡುತ್ತೀರಿ. ಉಪವಾಸದಿಂದ ಬಳಲ ಬೇಡಿ. ದೇವಸ್ಥಾನದ ಹಾಕಿರುವ ಬಾಗಿಲುಗಳನ್ನು ಎಗರಿಕೊಂಡು ದೇವಸ್ಥಾನದ ಒಳ ಪ್ರವೇಶಿಸಿ, ಅಲ್ಲಿ ಪ್ರಸಾದ ನೀಡುವ ಸಾಲಿನಲ್ಲಿ ಸವರ್ಣೀಯರೊಂದಿಗೆ ಕುಳಿತುಕೊಳ್ಳಿ, ಹಿಂದೆ ಮುಂದೆ ನೋಡದೇ ಧೈರ್ಯದಿಂದ ಮುನ್ನುಗ್ಗಿ ಆದರೆ ಹಿಂಸೆಗೆ ಮಾತ್ರ ಇಳಿಯಬೇಡಿ’ಎಂದು ನಾರಾಯಣ ಗುರುಗಳು ನೀಡಿದ್ದ ಹೇಳಿಕೆಯನ್ನು ಹಿಂಸೆಗೆ ಪ್ರಚೋದನೆ ಎಂದು ಗಾಂಧೀಜಿಯವರು ತಪ್ಪಾಗಿ ಭಾವಿಸಿ ಸಣ್ಣ ಭಿನ್ನಾಭಿಪ್ರಾಯವೂ ಇಬ್ಬರ ನಡುವೆ ಬಂದಿತ್ತಾದರೂ ಅದು ಬಹು ಕಾಲ ಉಳಿಯಲಿಲ್ಲ. ಸತ್ಯಾಗ್ರಹಕ್ಕೆ ಕೇರಳದಿಂದಾಚೆಯಿಂದಲೂ ಹರಿದು ಬರತೊಡಗಿದ ಬೆಂಬಲವನ್ನು ಗಾಂಧೀಜಿಯವರು ನಿರಾಕರಿಸಲು ಮನವಿ ಮಾಡಿದರು. ಈ ಹೊತ್ತಿಗೆ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಗೆ ಮುನ್ನುಡಿ ಬರೆದಿದ್ದ ಪರೆಯಾರ್ ರಾಮಸ್ವಾಮಿಯವರು ಗಾಂಧೀಜಿಯವರ ಮನವಿಯನ್ನು ಮೀರಿಯೂ, ಬಂದು ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾಧವನ್ ಅವರೊಂದಿಗೆ ಜೈಲನ್ನೂ ಸೇರಿದರು. ಹೀಗೆ ಎರಡು ಸಲ ಇದರಲ್ಲಿ ಜೈಲು ಸೇರಿದ ಪೆರಿಯಾರ್ ಅವರನ್ನು ’ವೈಕಂ ವೀರನ್ ಎಂದು ಮುಂದೆ ಗೌರವಿಸಲಾಯಿತು ಕೂಡಾ. ಗಾಂಧೀಜಿಯವರು ಈ ಸತ್ಯಾಗ್ರಹ ಸವರ್ಣೀಯರಲ್ಲಿ ಬದಲಾವಣೆ ತರಲಿ ಎಂಬ ಆಶಯದಿಂದ ಸವರ್ಣ ಜಾಥಾಕ್ಕೆ ಕರೆ ನೀಡಿದರು. ಇದಕ್ಕೆ ಓಗೊಟ್ಟು ನಾಯರ್ ಜಾತಿಯ ಸಾವಿರಾರು ಜನರು ತಮ್ಮ ಜಾತಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಗೆ ನಡೆಸಿ ಈಳವ-ಹೊಲೆಯರ ಹೋರಾಟಕ್ಕೆ ಬೆಂಬಲಿಸಿದರು.

ನಂಬೂದರಿಪಾದ್‌ರಂತರಹ ಬ್ರಾಹ್ಮಣರೂ ಪಾಲ್ಗೊಂಡರು. ಆದರೆ ಈ ನಡುವೆ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಗಾಂಧೀಜಿಯವರು ಮಾತುಕತೆ ನಡೆಸಲು ಹೋದಾಗ ಮಾತ್ರ ನಂಬೂದರಿ ಬ್ರಾಹ್ಮಣರು ಗಾಂಧೀಜಿ ಬೇಕಾದರೆ ಇಲ್ಲಿಗೇ ಬರಲಿ ಎಂದು ತನ್ನ ಮನೆಗೆ ಕರೆಸಿಕೊಂಡು ಒಳ ಕರೆಯದೇ, ಕೀಳು ಜಾತಿಯವರನ್ನು ಮುಟ್ಟಿ ಗಾಂಧೀಜಿ ಕೂಡಾ ಮಲಿನವಾಗಿದ್ದಾರೆಂದು ಹೇಳಿ ಮನೆಯ ಅಂಗಳದಲ್ಲೇ ಕೂರಿಸಿ ಮಾತಾಡಿದ್ದರು. ಈ ಮಾತುಕತೆಯಲ್ಲಿ ಗಾಂಧೀಜಿಯವರ ಯಾವ ಸಂಧಾನ ಪ್ರಸ್ತಾಪಗಳಿಗೂ ಸೊಪ್ಪು ಹಾಕದೇ ಅಪಮಾನಿಸಿ ಕಳಿಸಿದ್ದರು. ಆದರೆ ಚಳುವಳಿ ದಿನೇ ದಿನೇ ಬಲಗೊಳ್ಳುತ್ತಾ, ಮಾಧವನ್ ಅವರ ಸಂಘಟನಾ ಶಕ್ತಿ, ನಾರಾಯಣ ಗುರುಗಳ ಹತ್ತಿರದ ಮಾರ್ಗದರ್ಶನ, ಮಹಾತ್ಮಾ ಗಾಂಧಿ, ಪೆರಿಯಾರ್ ಅಂತವರ ಪಾಲ್ಗೊಳ್ಳುವಿಕೆಯಿಂದ ಬಲ ಪಡೆದುಕೊಂಡಿತು. ದಿವಾನನಾಗಿದ್ದ ರಾಘವ ಐಯರ್‌ನ ಅಸಡ್ಡಾಳತನತನದ ಹೊರತಾಗಿಯೂ 1925ರಲ್ಲಿ ಆಡಳಿತ ವರ್ಗ ತಲೆಬಾಗಲೇ ಬೇಕಾಯಿತು. 1931ರಲ್ಲಿ ಗುರುವಯೂರಿನಲ್ಲಿಯೂ ಇದೇ ಬಗೆಯ ಚಳವಳಿ ನಡೆಯಿತು. ಎಲ್ಲದರ ಪರಿಣಾಮವಾಗಿ ಮುಂದೆ 1936ರಲ್ಲಿ ತಿರುವಾಂಕೂರಿನ ರಾಜನು, ಇಡೀ ರಾಜ್ಯದಲ್ಲಿ ಯಾವುದೇ ದೇವಸ್ಥಾನಗಳಿಗೆ ಯಾವುದೇ ಜಾತಿಯವರು ಭೇಧವಿಲ್ಲದೇ ಪ್ರವೇಶಿಸಬಹುದು ಎಂದು ಘೋಷಣೆ ಹೊರಡಿಸಿದನು. ಇಂತಹ ಒಂದು ಘೋಷಣೆ ದೇಶದ ಇತಿಹಾಸದಲ್ಲಿಯೇ ಮೊದಲನೆಯದಾಗಿತ್ತು. ವೈಕಂ ಸತ್ಯಾಗ್ರಹದ ಮೂಲಕ ಟಿ.ಕೆ.ಮಾಧವನ್ ಎಷ್ಟು ದೊಡ್ಡ ನಾಯಕರಾದರೆಂದರೆ ಅಲ್ಲಿಂದ ಅವರನ್ನು ’ಈಳವರ ರಾಜಕೀಯ ಪಿತಾಮಹ’ ಎಂದೇ ಕರೆಯಲಾಗುತ್ತಿದೆ. ಮಾತ್ರವಲ್ಲ ಈ ಮೊದಲು ಮೇಲ್ಜಾತಿ ಭೂಮಾಲೀಕರ ಪಕ್ಷವಾಗಿದ್ದ ಕಾಂಗ್ರೆಸ್ ಕೇರಳದಲ್ಲಿ, ಈ ಅಸ್ಪೃಷ್ಯತೆ ಹೋರಾಟದ ಮೂಲಕ ದೊಡ್ಡ ಸಂಖ್ಯೆಯ ಈಳವ, ಹೊಲೆಯ, ಪರಯ ಮುಂತಾದ ಸಮುದಾಯಗಳ ಬೆಂಬಲದೊಂದಿಗೆ ಮಾಸ್ ಪಕ್ಷವಾಗಿ ಬೆಂಬಲ ಪಡೆದು ತನ್ನ ನೆಲೆ ಕಂಡುಕೊಂಡಿತು.

ನಾರಾಯಣ ಗುರುಗಳು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ ಕಾಣಿಸಿಕೊಂಡರೂ ತಮ್ಮ ಚಿಂತನೆ ಮತ್ತು ಕೆಲಸಗಳ ಮೂಲಕ ತಾವೊಬ್ಬ ಅದ್ವಿತೀಯ ಸಮಾಜ ಸುಧಾರಕೆಂಬುದನ್ನು ಸಾಧಿಸಿ ತೋರಿಸಿದರು. ಕುಸಿದು ಕುಳಿತಿದ್ದ ಜನತೆಯಲ್ಲಿ ಸ್ವಾಭಿಮಾನ ತುಂಬಿದರು, ಅರಿವಿನ ಬೆಳಕು ತೋರಿದರು. ಅವರು ಮಲಯಾಳಂ ಮತ್ತು ಸಂಸ್ಕೃತಗಳಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಆತ್ಮೋಪದೇಶ ಶತಕಂ, ದರ್ಶನ ಮಾಲಾ, ವೇದಾಂತ ಸೂತ್ರಗಳಂತಹ ಆಧ್ಯಾತ್ಮಿಕತೆ ಬೋಧೆಯ ಕೃತಿಗಳೊಂದಿಗೆ ’ಜಾತಿ ನಿರ್ಣಯ’, ’ಜಾತಿ ಲಕ್ಷಣ’ದಂತಹ ಅವರ ಬರೆಹಗಳು ಗುರುಗಳ ಸಾಮಾಜಿಕ ದೃಷ್ಟಿಕೋನವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಎಲ್ಲಾ ಧರ್ಮಗಳ ಗುರಿಯೂ ಒಂದೇ. ಬೇರೆ ಬೇರೆ ದಿಕ್ಕಿನಿಂದ ಹರಿಯುವ ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವುದು ಹೀಗಾಗಿ ’ಮನುಷ್ಯನಾದವನಿಗೆ ಇರುವುದು ಒಂದೇ ಧರ್ಮ’ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳು ತಮ್ಮ ‘ಆತ್ಮೋಪದೇಶ ಶತಕಂ’ ಕೃತಿಯಲ್ಲಿ ಹೀಗೆ ಹೇಳಿದ್ದಾರೆ:
“ಯಾವ ಧರ್ಮವೂ ಯಾವ ಮತ್ತೊಂದು ಧರ್ಮವನ್ನೂ ಹೊಡೆದಾಡುವ ಮೂಲಕ ಸೋಲಿಸಲು ಸಾಧ್ಯವಿಲ್ಲ. ಈ ಸತ್ಯ ತಿಳಿಯದೇ ಹೋದವರು ಮಾತ್ರವೇ ಮತ್ತೊಂದು ಧರ್ಮದ ವಿರುದ್ಧ ವಾದಿಸುತ್ತಾರೆ. ಅಂತವರು ಹಗೆತನ ಬೆಳೆಸಿಕೊಂಡು ವಿನಾಕಾರಣ ಹೊಡೆದಾಡಿ ಕೊನೆಗೆ ನಿಷ್ಫಲವಾಗಿ ನಾಶವಾಗುತ್ತಾರೆ. ಇದನ್ನು ಎಲ್ಲರೂ ಅರಿಯಬೇಕು”. ಇಂತಹ ಮಾನವೀಯ ಚಿಂತನೆಯಿದ್ದ ಗುರುಗಳು 1924ರಲ್ಲಿ ಅಲವಾಯಿನಲ್ಲಿರುವ ತಮ್ಮ ಅದ್ವೈತ ಆಶ್ರಮದಲ್ಲಿ ಧರ್ಮ ಸಮ್ಮೇಳನವನ್ನು ಆಯೋಜಿಸಿದರು. ಈ ಧರ್ಮ ಸಮ್ಮೇಳನಕ್ಕೆ ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ, ಪಾರ್ಸಿ ಧರ್ಮಗಳ ಗುರುಗಳು, ಸ್ವಾಮೀಜಿಗಳು ಮತ್ತು ಆಧ್ಯಾತ್ಮಿಕ ಚಿಂತಕರುಗಳನ್ನು ಆಹ್ವಾನಿಸುತ್ತಾರೆ. ಈ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಅವರು ಬರೆದಿದ್ದ ಒಕ್ಕಣೆ ಹೀಗಿತ್ತು; *”ಮತ್ತೊಬ್ಬರಿಂದ ತಿಳಿದುಕೊಳ್ಳಲು ಹಾಗೂ ಮತ್ತೊಬ್ಬರಿಗೆ ತಿಳಿಸಲು. ವಾದಿಸಿ ಅಳಿಯಲು ಅಲ್ಲ”* ಭಾರತದ ಇತಿಹಾಸದಲ್ಲೇ ಇಂತಹ ಒಂದು ಧರ್ಮ ಸಮ್ಮೇಳನ ಈ ಹಿಂದೆ ನಡೆದಿರಲಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.
ಸ್ವತಃ ಜಾತಿ ಭೇದಕ್ಕೆ ತುತ್ತಾಗಿದ್ದ ನಾರಾಯಣ ಗುರುಗಳ ಫಿಲಾಸಫಿಯಲ್ಲಿ ಮುಖ್ಯವಾದದ್ದು ಜಾತಿ ತಾರತಮ್ಯದ ವಿರುದ್ಧದ ಚಿಂತನೆ. ಬಾಲ್ಯದಿಂದಲೂ ಜಾತಿ ತಾರತಮ್ಯಕ್ಕೆ ಪ್ರತಿರೋಧ ಒಡ್ಡುತ್ತಲೇ ಬಂದಿದ್ದ ಗುರುಗಳು ತಮ್ಮ ವೇದ ಉಪನಿಷತ್ತುಗಳ ಆಳವಾದ ಅಧ್ಯಯನದ ಮೂಲಕ ಅನುಸರಿಸಿದ ಅದ್ವೈತ ಮಾರ್ಗವನ್ನೂ ಇದೇ ಜಾತಿ ತಾರತಮ್ಯ ವಿರೋಧಿ ನೆಲೆಯಲ್ಲಿಯೇ ಕಟ್ಟಿಕೊಂಡರೆಂಬುದು ವಿಶೇಷವಾದುದು. ಎಂಟನೇ ಶತಮಾನದಲ್ಲಿ ಇದೇ ನೆಲದಲ್ಲಿ ಹುಟ್ಟಿದ್ದ ಆದಿ ಶಂಕರರು ಇದೇ ಅದ್ವೈತ ಬೋಧಿಸಿ ಅಂತಿವಾಗಿ ಅವರ ಚಿಂತನೆಗಳು ಧಾರ್ಮಿಕ ಅಸಹಿಷ್ಣುತೆಯನ್ನೂ, ಜಾತಿ ತಾರತಮ್ಯವನ್ನೂ ನೆಲೆಗೊಳಿಸಿದ್ದರೆ ಅದೇ ಅದ್ವೈತದ ಮೂಲಕ ’ಅಸ್ಪೃಶ್ಯ’ನಾಗಿದ್ದ ನಾರಾಯಣ ಗುರು ಜಾತಿಭೇಧ ಹೊಡೆದು ಹಾಕಲು ಶ್ರಮಿಸಿದ ಪರಿ ಅನನ್ಯವಾದುದು. ಹೀಗೆಂದೇ ಅವರು ತಮ್ಮ ’ಜಾತಿ ನಿರ್ಣಯಂ’ ನಲ್ಲಿ ಹೀಗೆನ್ನುತ್ತಾರೆ.

ಮಾನವ ಪ್ರಬೇಧದಲ್ಲಿ
ಒಬ್ಬ ಬ್ರಾಹ್ಮಣ ಹುಟ್ಟುತ್ತಾನೆ
ಒಬ್ಬ ಪರಯನೂ ಹುಟ್ಟುತ್ತಾನೆ. ಹಾಗಿದ್ದರೆ ಜಾತಿ ಭಿನ್ನತೆ ಎಲ್ಲಿ?
ಮನುಷ್ಯ ಜೀವಿಗಳಲ್ಲಿ?
ಪರಯ ಮಹಿಳೆಯ ಗರ್ಭದಲ್ಲಿ
ಮಹಾನ್ ಋಷಿ ಪರಾಷರ ಜನಿಸಿದ್ದ
ವೇದಗಳ ರಹಸ್ಯಗಳನ್ನು
ಚಿಕ್ಕ ವಚನಗಳಲ್ಲಿ ಹೇಳಿದ ಋಷಿಯೂ
ಬೆಸ್ತನ ಮಗಳೊಬ್ಬನ ಮಗನೇ
ಮನುಷ್ಯ ಪ್ರಬೇಧದೊಳಗೆ
ಮನುಷ್ಯ ಮನುಷ್ಯನ ನಡುವೆ ಭೇಧವೆಲ್ಲಿ?
ತೋರಿಕೆಯ ಭಿನ್ನತೆ
ವ್ಯಕ್ತಿ ವ್ಯಕ್ತಿ ನಡುವೆ ಮಾತ್ರವೇ”.

ಒಂದು ತತ್ವ ದರ್ಶನವಾಗಿ ಅದ್ವೈತವು ಭಾವನಾವಾದಿ ದರ್ಶನ ಮತ್ತು ವೇದಗಳ ಪ್ರಾಮಣ್ಯವನ್ನು ಎತ್ತಿ ಹಿಡಿಯುವ ದರ್ಶನ. ವೇದಪ್ರಾಮಣ್ಯವನ್ನು ಒಪ್ಪದ ಸಾಂಖ್ಯ, ಲೋಕಾಯತದಂತಹ ದರ್ಶನಗಳೂ ಭಾರತದಲ್ಲಿದ್ದವು. ಆದರೆ ’ಆತ್ಮ ಪರಮಾತ್ಮ ಒಂದೇ’ ಎಂದೆನ್ನುವ ಆಸ್ತಿಕವಾದಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತಲೇ ಈ ಮಾನವ ಸಮಾಜದ ವಾಸ್ತವಿಕ ಜ್ವಲಂತ ಸಮಸ್ಯೆಗಳಿಗೆ ಬೆನ್ನು ತೋರದೇ, ತಮ್ಮ ಆಧ್ಯಾತ್ಮಿಕ, ಧಾರ್ಮಿಕ ಕೆಲಸಗಳ ಪರಿಧಿಯೊಳಗೆ ಅವುಗಳನ್ನೂ ತಂದುಕೊಂಡು ಒಂದು ಸಾಮಾಜಿಕ ಫಿಲಾಸಫಿಯನ್ನು ಮಾದರಿಯಾಗಿ ಮುಂದಿಟ್ಟ ಮಹಾನ್ ಸಾಧನೆ ನಾರಾಯಣ ಗುರುಗಳದ್ದು. ಬುದ್ಧ, ಬಸವ, ವಿವೇಕಾನಂದ, ಬಾಬಾಸಾಹೇಬ್ ಅಂಬೇಡ್ಕರ್, ಕುವೆಂಪು ಮೊದಲಾದವರೆಲ್ಲರೂ ಇದೇ ಸಾಲಿನಲ್ಲಿ ನಿಲ್ಲುವವರು. ನಾರಾಯಣ ಗುರುಗಳ ಈ ಪ್ರಯತ್ನದಲ್ಲಿ ಕೈ ಜೋಡಿಸಿದ ಮತೊಬ್ಬ ಅನುಯಾಯಿ ಹಾಗೂ ಅಪ್ರತಿಮ ಚಿಂತಕ ಸಹೋದರನ್ ಅಯ್ಯಪ್ಪನ್ ಕುಡಾ ಈಳವನಾಗಿದ್ದು ಸಾಮಾಜಿಕ ಏಣಿಶ್ರೇಣಿಯಲ್ಲಿ ಅವರಿಗಿಂತ ಕೆಳಗಿರುವ ಹೊಲೆಯ, ಪರಯ ಮುಂತಾದವರ ಏಳಿಗೆಗೆ ಪ್ರಯತ್ನ ಪಡುತ್ತಿದ್ದರು. ಇದಕ್ಕಾಗಿ ’ಸಹೋದರನ್ ಸಂಘಟನ್’ (ಸೋದರ ಸಂಘ) ಎಂಬ ಸಂಘಟನೆ ಕಟ್ಟಿಕೊಂಡು ಅಂತರ್ಜಾತಿ ಮದುವೆಗಳನ್ನು ಮಾಡಿಸುತ್ತಾ, ಸಹಪಂಕ್ತಿ ಭೋಜನಗಳನ್ನು ಏರ್ಪಡಿಸುತ್ತಾ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಹೋದರತೆ ಮೂಡಿಸಲು ಯತ್ನಿಸುತ್ತಾ ತೊಡಗಿಸಿಕೊಂಡಿದ್ದ ಸಹೋದರನ್ ಐಯಪ್ಪನ್ ಕೊಚಿನ್ ಪ್ರದೇಶದ ಈಳವರ ಮೊದಲ ಪದವೀಧರನಾಗಿದ್ದರು. ಅಸ್ಪೃಷ್ಯ ಎಂದೆನಿಸಿಕೊಂಡಿದ್ದ ಎಲ್ಲಾ ಜಾತಿಯವರೂ ಒಂದಾಗಿ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂಬುದು ಅವರ ಹೆಬ್ಬಯಕೆ. ಆದರೆ ಒಂದು ಹಂತದಲ್ಲಿ ತನ್ನ ಈಳವ ಸಮುದಾಯದಿಂದಲೇ ಇವರ ಪ್ರಯತ್ನಗಳಿಗೆ ವಿರೋಧ ವ್ಯಕ್ತವಾಗುತ್ತದೆ. ಆಗ ಅಯ್ಯಪ್ಪನ್ ನೇರವಾಗಿ ನಾರಾಯಣ ಗುರುಗಳ ಬಳಿ ಧಾವಿಸಿ ತನ್ನ ನೋವನ್ನು ಹೇಳಿಕೊಳ್ಳುತ್ತಾರೆ. ಆಗ ತಾವೂ ನೊಂದುಕೊಂಡ ಗುರುಗಳು ಐಯಪ್ಪನ್ ಅವರನ್ನು ಸನಿಹ ಕರೆದು, ಸಮಾಧಾನಿಸಿ, ಲಿಖಿತ ರೂಪದಲ್ಲಿ ನೀಡಿದ ಒಂದು ಸಂದೇಶದಲ್ಲಿ ಸಹೋದರ ಐಯಪ್ಪನ್ ನಡೆಸಿಕೊಂಡು ಬಂದ ಕೆಲಸಗಳಿಗೆ ತಮ್ಮ ಬೆಂಬಲ ನೀಡುತ್ತಾರೆ. ಅವರು ನೀಡಿದ ಆ ಸಂದೇಶದಲ್ಲಿ, “ಧರ್ಮ, ಭಾಷೆ, ಸಂಪ್ರದಾಯ, ಜಾತಿ, ಉಡುಗೆತೊಡುಗೆ ಏನೇ ಇರಲಿ ಎಲ್ಲರೂ ಮನುಷ್ಯ ಜೀವಿಗಳೇ ಆಗಿರುವುದರಿಂದ ಅಂತರ್ಜಾತಿ, ಅಂತರ್‌ಧರ್ಮ ಮದುವೆಗಳಿಗೆ ವಿರೋಧವಿರಕೂಡದು” ಎಂದಿರುತ್ತದೆ. ಗುರುಗಳು ನೀಡಿದ ಈ ಸಂದೇಶವು ಮುಂದೆ ಬಹು ಪ್ರಖ್ಯಾತವಾಗಿ ಗುರುಗಳ ಹಲವು ವಿಶ್ವ ಸಂದೇಶಗಳಲ್ಲಿ ಒಂದಾಯಿತು . ಈ ಸಂದೇಶ ನೀಡಿದ ಗುರುಗಳು ಐಯಪ್ಪನ್‌ನನ್ನುದ್ದೇಶಿಸಿ, ಐಯಪ್ಪನ್, ನೀನು ಏಸು ಕ್ರಿಸ್ತನಂತೆ ಸಹನೆಯನ್ನು ಗಳಿಸಿಕೊಳ್ಳಬೇಕು ಎಂದರು. ಸಹೋದರನ್ ಐಯಪ್ಪನ್ ಇದನ್ನು ಶಿರಸಾವಹಿಸ ಪಾಲಿಸಿದ್ದಲ್ಲೇ ಮುಂದೆ ಕೇರಳದ ಎಡಪಂಥೀಯ ಚಳುವಳಿಗೆ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ರೀತಿಯಲ್ಲಿ ಸಮಾಜದ ತುಳಿತಕ್ಕೊಳಗಾದ ಜನವರ್ಗಗಳ ಪರವಾಗಿ ತಮ್ಮ ಬದುಕಿನಿಡೀ ಚಿಂತಿಸಿ, ವ್ಯಕ್ತಿಯೊಳಗಿನ ಶಕ್ತಿಯಾಗಿ, ಒಂದು ಸಂಘಟನೆಯಾಗಿ, ಚಳುವಳಿಯೇ ಆಗಿ ಜೀವಿಸಿದ ನಾರಾಯಣ ಗುರುಗಳ ಪ್ರಯತ್ನಗಳೆಲ್ಲವೂ ಅವರ ಜೀವಿತಾವಧಿಯಲ್ಲೇ ಫಲ ನೀಡಲಿಲ್ಲ. 1928ರ ಸೆಪ್ಟೆಂಬರ್ 20ರಂದು ಗುರುಗಳು ಸಮಾಧಿ ಸ್ಥಿತಿ ತಲುಪಿದರು. ಅವರು ನಡೆಸಿಕೊಂಡು ಬಂದ ಚಳುವಳಿ ಮುಂದುವರೆಯಿತು, ಅವರು ಜಾಗೃತಗೊಳಿಸಿದ ಪ್ರಜ್ಞೆ ಕೇರಳ ಸಮಾಜವನ್ನು ವಿವೇಕಾನಂದರು ಹೇಳಿದ್ದ ’ಹುಚ್ಚಾಸ್ಪತ್ರೆ’ಯ ಸ್ಥಿತಿಯಿಂದ ನಾಗರಿಕ, ಸುಶಿಕ್ಷಿತ ಸಮಾಜವಾಗಿ ಪರಿವರ್ತಿಸಲು ಕಾರಣವಾಯಿತು. ಕೇರಳದ ನೆಲದಲ್ಲಿ ರಾಷ್ಟ್ರೀಯ ಚಳುವಳಿಯ ಕಾವು ಕಾಂಗ್ರೆಸ್ ನೇತೃತ್ವದಲ್ಲಿ ಬಲ ಪಡೆಯಲು ಹಾಗೂ ಕಮ್ಯುನಿಷ್ಟ್ ಪಕ್ಷವು ಬಹುಸಂಖ್ಯಾತ ಈಳವ ಮತ್ತಿತರ ’ಅಸ್ಪೃಶ್ಯ’ರೆಂದು ಮೂಲೆಗುಂಪಾಗಿದ್ದ ಸಮುದಾಯಗಳ ಮತ್ತು ಮುಸ್ಲಿಂ, ಕ್ರೈಸ್ತ ಧರ್ಮೀಯರ ಬೆಂಬಲ ಪಡೆಯಲು ’ನಾರಾಯಣ ಗುರು’ ಮೂಡಿಸಿದ ಜಾಗೃತಿ ಅಡಿಗಲ್ಲಾಯಿತು. ಗುರುಗಳ ಹಲವು ಅನುಯಾಯಿಗಳು – ಅವರಲ್ಲಿ ಬ್ರಾಹ್ಮಣ, ನಾಯರ್, ಈಳವ, ಪರಹ, ಮುಂತಾದ ಹಲವು ಜಾತಿ ಮತಗಳವರೂ ಇದ್ದಾರೆ – ಗುರುಗಳ ಆಧ್ಯಾತ್ಮಿಕ ಚಿಂತನಗಳನ್ನು ಮುಂದೆ ಕೊಂಡಯ್ದರು. ಇವರಲ್ಲಿ ಡಾ.ಪಲ್ಪು ಅವರ ಹಿರಿಮಗ ನಟರಾಜ ಗುರುಗಳೂ ಒಬ್ಬ ಪ್ರಮುಖ ಆಧ್ಯಾತ್ಮಿಕ ಚಿಂತಕರಾಗಿದ್ದರು.
ನಾರಾಯಣ ಗುರುಗಳು ತಮ್ಮ ಬದುಕು, ಸಂಘಟನೆ, ಕೆಲಸಗಳ ಮೂಲಕ ಪ್ರತಿಪಾದಿಸಿ ಸಾಮಾಜಿಕ ಫಿಲಾಸಫಿಯನ್ನು ಅರ್ಥಮಾಡಿಕೊಳ್ಳಬೇಕಾದ ಜರೂರು ಇಂದು ಪ್ರತಿಯೊಬ್ಬರಿಗೂ ಇದೆ. ಧರ್ಮ ಧರ್ಮಗಳ ನಡುವೆ ನಂಜು ಸಾಧಿಸುವ, ಜಾತಿ ಜಾತಿಗಳ ನಡುವೆ ಸಾಮರಸ್ಯ ಸ್ಥಾಪಿಸದೇ ಮತ್ತಷ್ಟು ಕಂದಕವನ್ನೇ ತೋಡುತ್ತಿರುವ ರಾಜಕಾರಣಗಳ ಇಂದಿನ ಕಾಲದಲ್ಲಿ ಗುರುಗಳ ಈ ’ಮನುಷ್ಯ ಧರ್ಮ, ಮನುಷ್ಯ ಜಾತಿಯ ಫಿಲಾಸಫಿಗೆ ಮಹತ್ವದ ಸ್ಥಾನವಿದೆ.

(-ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಉಡುಪಿ)

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

ಅಂತರಂಗ

ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ

Published

on

  • ರುದ್ರಪ್ಪ ಹನಗವಾಡಿ

ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.

ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.

ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.

ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.

ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.

ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.

ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.

ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.

ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.

ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.

ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.

ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.

ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.

ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243

ಮುಂದುವರಿಯುವುದು

Continue Reading

ದಿನದ ಸುದ್ದಿ

ಮೊಹರಂ : ಜನತೆಯ ಧರ್ಮ

Published

on

ಚರ್ಚೆಯಲ್ಲಿ ರಹಮತ್ ತರೀಕೆರೆ
  • ಡಾ.ರಹಮತ್ ತರೀಕೆರೆ

ಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು.

ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು ‘ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ’ ಎಂದು ಹಾಡಿರುವುದುಂಟು. ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಉತ್ತರ ಕರ್ನಾಟದಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರಹಬ್ಬವಾಯಿತು. ಹೀಗಾಗಿ ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ನಡೆಯುತ್ತದೆ.

ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ,ಮೆರವಣಿಗೆ, ವಿಶೇಷ ಆಹಾರಗಳ ಆಯಾಮಗಳಿವೆ. ಇದರ ಫಲವಾಗಿ ಕರ್ನಾಟಕದಲ್ಲಿ ಹಾಡು ಕಟ್ಟುವ ಸಾವಿರಾರು ಶಾಹಿರರೂ ಗಾಯಕರೂ ಇದ್ದಾರೆ. ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ ಮಾಡುವ, ಹುಲಿವೇಷ, ಅಚೊಳ್ಳಿಸೋಗು, ಭಡಂಗ್‍ವೇಷ ಹಾಕುವ ಹರಕೆ ಕಲಾವಿದರಿದ್ದಾರೆ. ನಾನು ಕಂಡಂತೆ,
ಬೀಳಗಿ, ಕೆರೂರ ಕುದುರೆಮೋತಿ ಅಗಸನೂರ , ಆಯನೂರು ಯರಗುಪ್ಪಿ ಗೋಕಾಕಫಾಲ್ಸ ಮುದಗಲ್ ಮೊಹರಂ ವಿಶಿಷ್ಟವಾದವು. ಪ್ರತಿಯೊಂದೂ ಊರು ತನ್ನದೇ ಆಚರಣೆಯನ್ನು ರೂಢಿಸಿಕೊಂಡಿದೆ.

ಅಗಸನೂರಿನಲ್ಲಿ ಹತ್ತು ದಿನಗಳ ಕಾಲ ಚಪ್ಪಲಿ ತೊಡುವುದಿಲ್ಲ. ಮಂಚದಲ್ಲಿ ಮಲಗುವುದಿಲ್ಲ. ಬೀಳಗಿಯಲ್ಲಿ ತೇರಿನಂಥ ರಚನೆಗೆ ಹಿಲಾಲುಗಳನ್ನು ಸಿಕ್ಕಿಸಿ ಉರಿವವೃಕ್ಷವನ್ನೇ ಸೃಷ್ಟಿಸುತ್ತಾರೆ. ಆಯನೂರಲ್ಲಿ ಯಜೀದನ ಸಂಕೇತವಾಗಿ ರಾವಣನ ಪ್ರತಿಕೃತಿ ಸುಡುತ್ತಾರೆ; ಅಗಸನೂರಿ ನಲ್ಲಿ ಅಲಾವಿಯ ಸುತ್ತ ಮಾಡುವ ಹೆಜ್ಜೆ ನೃತ್ಯವು ಅಪೂರ್ವವಾಗಿದೆ. ಕುದುರೆಮೋತಿ, ಹೊಸಪೇಟೆ, ಗಜೇಂದ್ರಗಡಗಳು ಹುಲಿವೇಷಕ್ಕೆ ಹೆಸರಾಗಿವೆ; ಮುದಗಲ್ಲಿನಲ್ಲಿ ಅಗಲಿದ ಹಸನ- ಹುಸೇನರ ಮಿಲನವಾ ಗುವ ಆಚರಣೆ ಕಣ್ತುಂಬಿಕೊಳ್ಳಲು ಕೋಟೆಯ ಹೊರಗೆ ಸಾವಿರಾರು ಜನ ಸೇರುತ್ತಾರೆ. ಇಂಡಿ ಕಡೆ ಭಡಂಗ್ ಎನ್ನುವ ಹರಕೆವೇಷ ಹಾಕುತ್ತಾರೆ; ಬಾಗಲಕೋಟೆ-ವಿಜಯಪುರ ಸೀಮೆಯಲ್ಲಿ ಆಫ್ರಿಕನ್ ಸಿದ್ದಿಗಳನ್ನು ನೆನಪಿಸುವ ಅಚೊಳ್ಳಿ- ಬಿಚೊಳ್ಳಿ ಸೋಗುಗಳಿವೆ.

ಈ ಸೋಗಿಗೆ ಮುಖಕ್ಕೆ ಕಪ್ಪುಮಸಿ ಬಳಿದು, ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸುತ್ತಾರೆ. ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯೂ ಇದೆ. ಮುಸ್ಲಿಮೇತರ ಕುಟುಂಬಗಳು ಐದು ಜನ ಫಕೀರರಿಗೆ ಕರೆದು ಬಿನ್ನಹ ಮಾಡಿಸಿದಲ್ಲದೆ ತಾವು ಉಣ್ಣುವುದಿಲ್ಲ. ಚೋಂಗೆ, ಮಾಲ್ದಿ ಎಂಬ ಸಿಹಿ ಅಡುಗೆ, ಶರಬತ್ತು ಹಾಗೂ ಮೊಸರನ್ನ ಮೊಹರಂ ಮುಖ್ಯ ಅಡುಗೆಗಳು. ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾದ್ದರಿಂದ, ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ. ಇಂಡಿ ಮತ್ತು ಸೇಡಂ ಭಾಗದಲ್ಲಿ ಕುರಿಬ್ಯಾಟೆ ಕೊಡುವ ಪದ್ಧತಿಯಿದೆ. ಹೀಗೆ ಉತ್ತರ ಕರ್ನಾಟಕದ ಮೊಹರಂ ಬಹುರೂಪಿಯಾಗಿದೆ.

ದೂರದ ಇರಾಕಿನಲ್ಲಿ ಸಾವಿರಾರು ವರ್ಷದ ಹಿಂದೆ ನಡೆದ ಒಂದು ಮಾನವ ದುರಂತವನ್ನು, ತಮ್ಮ ಬೀದಿಯಲ್ಲಿ ನಿನ್ನೆ ಮೊನ್ನೆ ಸಂಭವಿಸಿದ್ದು ಎಂದು ಇನ್ನೊಂದು ದೇಶಕ್ಕೆ, ಕಾಲಕ್ಕೆ ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದ ಜನಸಮುದಾಯ ಭಾವಿಸಿ ಮಿಡಿಯುವುದೇ ಸೋಜಿಗ. ಇದು ಜನಪದ ಮನಸ್ಸಿನ ಮಾನವೀಯ ಗುಣ. ಇಲ್ಲಿ ಚರಿತ್ರೆಯನ್ನು ಸಮಕಾಲೀನಗೊಳಿಸುವ ಗುಣವೂ ಇದೆ. ವಿಶೇಷವೆಂದರೆ, ಕರ್ಬಲಾ ಹಾಡುಗಳಿಗೆ ದುರಂತದ ವಸ್ತುವಿಗೆ ಸ್ಥಳೀಯ ದುರಂತ ಘಟನೆಗಳೂ ಸೇರಿಕೊಳ್ಳುವುದು. ಬಸ್ಸು ಕಾಲುವೆಗೆ ಉರುಳಿ ಜನ ಸತ್ತದ್ದು, ಎತ್ತುಗಳನ್ನು ರಕ್ಷಣೆ ಮಾಡುತ್ತ ರೈತ ಕಳ್ಳರ ಕೈಲಿ ಕೊಲೆಯಾಗಿದ್ದು, ದುಷ್ಟನಿಂದ ತನ್ನನ್ನು ಕಾಪಾಡಿಕೊಳ್ಳುವ ಅವಸರದಲ್ಲಿ ತಾಯೊಬ್ಬಳು ಕೂಸನ್ನು ಕಳೆದುಕೊಂಡಿದ್ದು, ಗೆಳೆಯನ ಮಡದಿಯನ್ನು ಪ್ರೇಮಿಸಿ ಸ್ವಹತ್ಯೆ ಮಾಡಿಕೊಂಡಿದ್ದು – ಇವೂ ಮೊಹರಂ ಹಾಡುಗಳ ವಸ್ತುಗಳಾಗಿವೆ. ಬೀಳಗಿ ತಾಲ್ಲೂಕಿನ ರೊಳ್ಳಿಯಲ್ಲಿ ಆಲಮಟ್ಟಿ ಡ್ಯಾಂನ ನೀರಿನಲ್ಲಿ ಊರು ಮನೆ ಜಮೀನು ಮುಳುಗಡೆಯಾದ ದುಃಖವನ್ನು ಕೇಳುವವರ ಎದೆಕಲಕುವಂತೆ ಹಾಡಾಗಿ ಹಾಡಿದ್ದರು.

ಮೊಹರಂ ಹಾಡುಪರಂಪರೆ, ಭಾರತೀಯ ಗುರುಪರಂಪರೆಯ ಭಾಗವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಇರುವಂತೆ, ಇಲ್ಲೂ ಹಾಡಿಕೆ ಕಲಿಯುವ ಶಿಷ್ಯರು ಗುರುವಿನಿಂದ ದೀಕ್ಷೆ ಪಡೆದು ಜತೆಯಲ್ಲಿ ಹಾಡುತ್ತ, ಒಂದು ದಿನ ಗುರುವಿನ ಅನುಮತಿಯಿಂದ ಸ್ವತಂತ್ರವಾಗಿ ಹಾಡುತ್ತಾರೆ; ಹಾಡಿನಲ್ಲಿ ಗುರುವಿನ ಹೆಸರನ್ನು ಸ್ಮರಿಸುತ್ತಾರೆ; ಬೇರೆ ಬೇರೆ ತಂಡಗಳು ಪರಸ್ಪರ ಎದುರಾಗಿ, ಜಿದ್ದಾಜಿದ್ದಿ ಸವಾಲ್- ಜವಾಬ್ ನಡೆಸುತ್ತಾರೆ.

ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸವಾಲ್ ಜವಾಬ್ ಹಾಡಿಕೆಯ ಸ್ಪರ್ಧೆ ನಡೆಯುತ್ತದೆ. ಅದೊಂದು ಬೌದ್ಧಿಕ ಕದನ. ಇದರಲ್ಲಿ ಸೋತವರು ಸಾಯುವ ತನಕ ಹಾಡಿಕೆಗೆ ವಿದಾಯ ಹೇಳಿದ್ದುಂಟು; ಗೆದ್ದವರು ಪದಕ ಧರಿಸಿ, ಜನರಿಂದ ಆಹೇರಿ ಪಡೆದು, ಹೊಲವನ್ನು ಭಕ್ಷೀಸಾಗಿ ಪಡೆದದ್ದುಂಟು. ವೆಂಕಟಬೇನೂರಿನ (ಕಲಬುರ್ಗಿ) ಕಾಕಿಪೀರಾ, ಕದರಮಂಡಲಗಿಯ (ಬ್ಯಾಡಗಿ) ಅಲ್ಲಾಭಕ್ಷ್, ಹುಲಕುಂದದ (ರಾಮದುರ್ಗ) ಭೀಮಕವಿ, ನಿಡಗುಂದದ (ಚಿಂಚೋಳಿ) ಕೆರೂರ ನದಾಫಸಾಬ್ (ಬದಾಮಿ)ಬಸವಂತರಾವ್, ಗೋಕಾಕದ ಭರಮಣ್ಣ ಬೂಶಿ, ಸತ್ತೂರಿನ ಇಮಾಂಸಾಬ್ ಪ್ರಸಿದ್ಧ ಶಾಹಿರರು. ಇಂಡಿ, ಸೇಡಂ, ಬೀಳಗಿ ಭಾಗದಲ್ಲಿ ಮಹಿಳೆಯರು ಗುಂಪಾಗಿ ಕುಳಿತು ಶೋಕಗೀತೆಗಳನ್ನು ಹಾಡುತ್ತಾರೆ. ಈ ಗೀತೆಗಳ ವಸ್ತು, ಅಸಘರನೆಂಬ ಕೂಸಿನ ಸಾವು, ಅಭಿಮನ್ಯುವಿನ ಹಾಗೆ ಚಿಕ್ಕ ಹುಡುಗನಾದ ಕಾಸೀಮ್‌ನನ್ನು ರಣರಂಗಕ್ಕೆ ಕಳಿಸಿಕೊಡುವುದು, ಕಾಸೀಮನ ಮರಣ, ಅವನ ಎಳೆಹೆಂಡತಿ ಸಕೀನಾಳನ್ನು ವಿಧವೆಯಾಗಿಸುವುದು, ಅವಳ ಪ್ರಲಾಪ ಇತ್ಯಾದಿ.

ಮೊಹರಂ ಹಾಡುಗಾರರು ಇಸ್ಲಾಮಿನ ಚರಿತ್ರೆ ಪುರಾಣಗಳಂತೆ, ಮಹಾಭಾರತ, ರಾಮಾಯಣ, ಶಿವಪುರಾಣಗಳಲ್ಲಿಯೂ ಪರಿಣತಿ ಪಡೆದಿದ್ದಾರೆ. ಅವರ ಹಾಡುಗಳಲ್ಲಿ ಯಜೀದ್- ಹುಸೇನರ ಕದನದ ಚರಿತ್ರೆಯು ದೇಸಿ ಪುರಾಣಗಳ ಜತೆ ಬೆರೆತುಬಿಡುತ್ತದೆ. ಬಾಗೇವಾಡಿ ತಾಲ್ಲೂಕಿನಲ್ಲಿ ಪೈಗಂಬರನ್ನು ರಾಮನನ್ನಾಗಿ, ಬೀಬೀ ಫಾತಿಮಾರನ್ನು ಸೀತೆಯನ್ನಾಗಿ, ಹಸನ-ಹುಸೇನರನ್ನು ಲವ-ಕುಶರನ್ನಾಗಿ ಸಮೀಕರಿಸಿ ಹಾಡುತ್ತಾರೆ. ಈ ಹಾಡುಗಳಲ್ಲಿ ಪೈಗಂಬರರನ್ನು ಶರಣ ಎಂದೇ ಕರೆಯಲಾಗಿದೆ. ಬಸವಣ್ಣ, ಮಹದೇವ ಹಾಗೂ ಪೈಗಂಬರ್ ಒಟ್ಟಿಗೇ ಇರುವ ಮಂತ್ರವನ್ನು ಅನೇಕ ಮೊಹರಂ ಮಸೀದಿಯ ತಲೆಬಾಗಿಲಲ್ಲಿ ಕೆತ್ತಲಾಗಿದೆ. ಇಲ್ಲಿರುವ ತತ್ವವೆಂದರೆ, ಲೋಕಹಿತ ಬಯಸುವ ಲೋಕದ ಸಮಸ್ತ ದಾರ್ಶನಿಕರೂ ದೈವಗಳೂ ಮೂಲತಃ ಒಂದೇ ಎಂಬುದು.

ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ. ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನು ಬೆರೆಸುತ್ತದೆ; ಬೇರೆ ಬೇರೆ ಮತಧರ್ಮದ ಕಥನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ. ಇದು ಭಾರತದ ನಿಜವಾದ ಸಾಂಸ್ಕೃತಿಕ ಪ್ರತಿಭೆ. ಮಧ್ಯಕಾಲೀನ ದೊರೆಗಳು ರಾಜ್ಯವಿಸ್ತರಣೆಗಾಗಿ ಮಾಡಿದ ರಾಜಕೀಯ ಯುದ್ಧಗಳನ್ನೇ ಇರಿಸಿಕೊಂಡು ಚರಿತ್ರೆ ಮತ್ತು ವರ್ತ ಮಾನವನ್ನು ನೋಡುವವರಿಗೆ, ಜನ ಕಟ್ಟುವ ಈ ಸೃಜನಶೀಲ ಪರಂಪರೆ ತಿಳಿಯುವುದಿಲ್ಲ. ಮೊಹರಂ ತಾಳಿರುವ ಬಹುರೂಪವು ಸಂಪ್ರದಾಯವಾದಿಗಳನ್ನು ಕಂಗೆಡಿಸುತ್ತದೆ. ‘ಇದೆಂತಹ ಧರ್ಮ; ಎಲ್ಲ ಕಲಬೆರಕೆಯಾಗಿದೆ’ ಎಂದವರು ಗೊಣಗುವರು. ಆದರೆ ಸಾಮಾನ್ಯ ಜನ ಧರ್ಮ, ಜಾತಿಗಳನ್ನು ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೂಪುಗೊಂಡಿದೆ. ‘ಪ್ರಧಾನ’ ಧರ್ಮಗಳು ಸಂಘರ್ಷಕ್ಕೆ ಕಾಲು ಕೆರೆಯುತ್ತಿವೆ; ಪರಸ್ಪರ ಸಂವಾದ ಮಾಡುವ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ, ಧರ್ಮಗಳ ನಡುವೆ, ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.

ಪಟ: ಕವಿ ಕೆರೂರ ನದಾಫ ಸಾಹೇಬರೊಡನೆ; ಅಚೊಳ್ಳಿ ಬಿಚೊಳ್ಳಿ ಸೋಗುಗಾರ; ಹುಲಿವೇಷದ ಹರಕೆ ಹುಬ್ಬಳ್ಳಿ; ಕರ್ಬಲಾ‌ ಕದನದಲ್ಲಿ ಕಾಸಿಮಲಿ ಸಾವು ಚಿತ್ರ; ಅಬ್ಬಾಸ ಅಲಿ ಸಮಾಧಿಯೆದುರು (ಕರ್ಬಲಾ, ಇರಾಕ್); ಹುಲಿವೇಷಕ್ಕೆ ಬಣ್ಣಗಾರಿಕೆ; ಹೆಜ್ಜಕುಣಿತ ಕುಷ್ಟಗಿ; ಕರ್ಬಲಾ ನಗರದಲ್ಲಿ ಶೋಕಾಚರಣೆ ( ಬರಹಕೃಪೆ:ನಿವೃತ್ತ ಪ್ರೊಫೆಸರ್ ರಹಮತ್ ತರೀಕೆರೆ, ಫೇಸ್ಬುಕ್ ನಿಂದ)ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading
Advertisement

Title

ಕ್ರೀಡೆ16 hours ago

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ...

ದಿನದ ಸುದ್ದಿ16 hours ago

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ...

ದಿನದ ಸುದ್ದಿ17 hours ago

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ17 hours ago

HEAVY RAIN | ಮೂರು ದಿನ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ

ಸುದ್ದಿದಿನಡೆಸ್ಕ್:ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ,...

ದಿನದ ಸುದ್ದಿ17 hours ago

ಇಂದು – ನಾಳೆ ಹಾವೇರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿದಿನಡೆಸ್ಕ್:ಇಂದು ಮತ್ತು ನಾಳೆ, ಹಾವೇರಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕಡ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ಮತ್ತು...

ದಿನದ ಸುದ್ದಿ19 hours ago

ಯುವಕರಿಗೆ ಶಿಕ್ಷಣ, ಕೌಶಲ್ಯ ಹೆಚ್ಚಿಸುವ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ

ಸುದ್ದಿದಿನಡೆಸ್ಕ್:ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ನವದೆಹಲಿಯಲ್ಲಿ ನಿನ್ನೆ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ ನೀಡಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ...

ದಿನದ ಸುದ್ದಿ19 hours ago

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ...

ದಿನದ ಸುದ್ದಿ1 day ago

ದಾವಣಗೆರೆ | ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..

ಸುದ್ದಿದಿನ,ದಾವಣಗೆರೆ:ಜಲಸಿರಿ ಕಾಮಗಾರಿ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಎಫ್.15 ರಂಗನಾಥ ಫೀಡರ್ ವ್ಯಾಪ್ತಿಯ ವಿದ್ಯಾನಗರ ಕೊನೆ ಬಸ್ ನಿಲ್ದಾಣದಿಂದ...

ದಿನದ ಸುದ್ದಿ1 day ago

ದಾವಣಗೆರೆ | ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ಸುದ್ದಿದಿನ,ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್...

ದಿನದ ಸುದ್ದಿ1 day ago

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ. 2024 ರ ಜನವರಿಯಿಂದ ಜುಲೈ 23 ರ ವರೆಗಿನ...

Trending