ಲೈಫ್ ಸ್ಟೈಲ್
ಪೌಂಡ್ ವರ್ಕ್ ಔಟ್ ಎಕ್ಸ್ಪರ್ಟ್ : ನಿಹಾರಿಕಾ ಮ್ಯೂಸಿಕ್ ; ಮ್ಯಾಜಿಕ್..!
ಇದೋ ಬಂದಿದೆ ‘ಪೌಂಡ್’ ಫಿಟ್ನೆಸ್ ಫ್ರೀಕ್ ಗಳ ಹೊಸ ಕ್ರೇಜ್ ಎನ್ನುತ್ತಿದ್ದಾರೆ ಪೌಂಡ್ ಟ್ರೈನರ್ ನಿಹಾರಿಕ
ಸದಾ ಸ್ಲಿಮ್ ಮತ್ತು ಟ್ರಿಮ್ ಆಗಿ ಕಾಣಬೇಕು ಎಂಬುದು ಹೆಂಗುಳೆಯರ ಹಂಬಲ. ಬಳ್ಳಿಯಂತೆ ಬಳಕುವ ಮೈಮಾಟ ಯಾರಿಗೆ ತಾನೇ ಬೇಡ! ಅದಕ್ಕೆಂದೇ ಮಹಿಳೆಯರು ದುಬಾರಿಯಾದರೂ ಮೋಹಕವಾಗಿ ,ಕಾಣಬೇಕು ಎಂದು, ಫಿಟ್ನೆಸ್ ಸೆಂಟರ್ ಗಳ ಮೊರೆ ಹೋಗಿದ್ದಾರೆ.
ಜುಂಬಾ, ಯೋಗ, ಏರಿಯಲ್ ಯೋಗ, ಕಾರ್ಡಿಯೋ, ಜಿಮ್, ಅಂತೆಲ್ಲಾ ಫಿಟ್ ನೆಸ್ ಸೆಂಟರ್ ಗಳ ಮೊರೆ ಹೋಗುತಿತರುವ ಮಹಳಾಮಣಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ.
ಅಮೇರಿಕಾ ದಿಂದ ಭಾರತಕ್ಕೆ ಹಾರಿ ಬಂದಿದೆ ಪೌಂಡ್ ಫಿಟ್ ನೆಸ್ ವರ್ಕ್ ಔಟ್. ಮೂಲತಃ ಅಮೇರಿಕಾ ದವರಾದ ಕ್ರಿಸ್ಟೀನ್ ಮತ್ತು ಖ್ರಿಸಿಟೀನಾ ಎಂಬ ಇಬ್ಬರು ಮಹಿಳೆಯರ ಕೊಡುಗೆ ಈ ‘ಪೌಂಡ್’. ಡ್ರಂಮ್ಮಿಂಗ್(ಡೊಳ್ಳು) ಮುಖಾಂತರ ಇಡೀ ದೇಹಕ್ಕೆ ವ್ಯಾಯಾಮ ಮಾಡಲಾಗುತ್ತದೆ. HIGH INTENSITY INTERNAL TRAINING ಒಳಗೊಂಡಿರುವ ಪೌಂಡ್ ( POUND) ವರ್ಕಔಟ್ ಸದ್ಯ ಇಡೀ ವಿಶ್ವದಲ್ಲಿ ಜನಪ್ರಿಯ ಗೂಂಡಿದೆ. ಈಗಾಗಲೇ ಜಗತ್ತಿನ ಅದೆಷ್ಟೋ ಮಂದಿ ಈ ಪೌಂಡ್ ಮ್ಯಾಜಿಕ್ ಗೆ ಫುಲ್ ಫಿದಾ ಆಗಿದ್ದಾರೆ. ಡ್ರಂ ಕಡ್ಡಿಗಳನ್ನ ನೆಲದ ಮೇಲೆ ಬಾರಿಸುತ್ತಾ ಸಂಗೀತದೊಂದಿಗೆ ಬೆರೆತು ಬೆವರಿಳಿಸುವ ಬಗೆಯೇ ‘ಪೌಂಡ್. ದಿನಕ್ಕೆ 45 ನಿಮಿಷಗಳ ಪೌಂಡ್ ವರ್ಕ ಔಟ್ ಆರಾಮಾಗಿ ತಿಂಗಳಿಗೆ 2-3 kg ತೂಕ ಇಳಿಸುತ್ತದೆ. ಸುಮಾರು 800 calorie ಗಳನ್ನ ಸುಲಭವಾಗಿ ಕರಗಿಸುತ್ತದೆ. ತಿಂಗಳಲ್ಲಿ ‘5-6’ ಸುತ್ತ ಅಳತೆ ಇಳಿಸುತ್ತದೆಯಂತೆ.
ಸಂಗೀತ ದೊಂದಿಗೆ ಡ್ರಮ್ಮಿಂಗ್ ಮಾಡುತ್ತಾ ; ಸ್ಕ್ವಾಟ್, ಕ್ರಾಕ್ ಗಳ ಹೈ ಇಂಟೆಂಸಿಟೀ ವ್ಯಾಯಾಮ ಇದಾಗಿದೆ. ಸೊಂಟದ ಸುತ್ತಳತೆ, ಹಿಪ್ಸ್-ಥೈ ಗಳ ತೂಕ ಇಳಿಸಿಕೊಳ್ಳಲು ಉತ್ತಮ ವ್ಯಾಯಾಮವಂತೆ. ಚರ್ಮಕ್ಕೆ ಉತ್ತಮ ಟೋನಿಂಗ್ ನೀಡುತ್ತದೆ ಎನ್ನುತ್ತಾರೆ ಪೌಂಡ್ ಟ್ರೈನರ್ ಗಳು.
ಭಾರದಲ್ಲಿ ಪೌಂಡ್!
ಇತ್ತೀಚೆಗೆ ಭಾರತಲ್ಲೂ ಹೆಸರು ಮಾಡುತ್ತಿರುವ ‘ಪೌಂಡ್ ವರ್ಕ್ ಔಟ್’ ಗೋವಾ, ಮುಂಬೈ ಚೆನ್ನೈ, ಕೋಲ್ಕತಾದಲ್ಲಿ ಹೆಚ್ಚು ಗಮನ ಸೆಳೆದಿದೆ. ವಿದೇಶಿಯರೇ ಹೆಚ್ಚು ಇರುವ ಗೋವಾ ದಲ್ಲಿ ಇದು ತುಂಬಾ ಫೇಮಸ್. ಬೆಂಗಳೂರಿನಲ್ಲೂ ಶುರುವಾಗಿದೆ ‘ಪೌಂಡ್’ ಕ್ರೇಜ್!
ಏನನ್ನುತ್ತಾರೆ ಪೌಂಡ್ ಎಕ್ಸ್ಪರ್ಟ್
ಬೆಂಗಳೂರಿಗೆ ಪೌಂಡ್ ವರ್ಕ್ ಔಟ್ ಹೊಸತಾಗಿದ್ದು, ಬೆರಳಣಿಕೆ ಅಷ್ಟೇ ಟ್ರೈನರ್ ಗಳು ಲಭ್ಯವಿದ್ದಾರೆ. ಇನ್ನುಳಿದ ಫಿಟ್ ನೆಸ್ ವರ್ಕ್ ಔಟ್ ಗಿಂತಲೂ ವಿಭಿನ್ನವಾಗಿರುವ ‘ಪೌಂಡ್’ ಸಂಗೀತ ಮತ್ತು ವ್ಯಾಯಾಮ ಸಿಹಿ ಮಿಶ್ರಣವಾಗಿದೆ.
ಬೆಂಗಳೂರಿನ ಪೌಂಡ್ ವರ್ಕ್ ಔಟ್ ಎಕ್ಸ್ಪರ್ಟ್
ನಿಹಾರಿಕಾ( ನಿಕ್ಕಿ) ಬೆಂಗಳೂರಿನ ಪೌಂಡ್ ಟ್ರೈನರ್ ಹೀಗನ್ನುತ್ತಾರೆ… ಕಳೆದೆರಡು ವರ್ಷದ ಹಿಂದೆ, ಪ್ರಸವದ ನಂತರ ವಿಪರೀತ ದಡೂತಿ ಆಗಿದ್ದ ನಿಹಾರಿಕಾ. ಈಗ 83 kg ಇಂದ 60 kg ಗೆ ತೂಕ ಇಳಿಸಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಪೌಂಡ್ ವರ್ಕ್ ಔಟ್ ಗೆ ತಮ್ಮನ್ನು
ಅರ್ಪಿಸಿಕೊಂಡಿರುವ ನಿಕ್ಕೀ ,ಬೆಂಗಳೂರಿನ ಕೆಲವೇ ಪೌಂಡ್ ಟ್ರೈನರ್ ಗಳಲ್ಲಿ ಒಬ್ಬರು. Gx ಸೆಂಟರ್ ನಲ್ಲಿ ಪೌಂಡ್ ಟ್ರೈನಿಂಗ್ ಮಗಿಸಿಕೊಂಡು, ಪೌಂಡ್ ಟ್ರೈನರ್ ಆಗಿ ಗುರುತಿಸಿ ಕೊಂಡಿದ್ದಾರೆ 35 ವರ್ಷದ ಈ ಫಿಟ್ ಹೆಣ್ಣು.
“ಪೌಂಡ್ ಕೇವಲ ಸಂಗೀತದೊಂದಿಗಿನ ವ್ಯಾಯಾಮ ವಲ್ಲಇಲ್ಲಿ ಸಂಗೀತವೇ ವ್ಯಾಯಾಮ ವಾಗಿಬಿಡುತ್ತದೆ” ಎನ್ನುತ್ತಾರೆ ನಿಹಾರಿಕಾ.
ಈ ಪೌಂಡ್ ವರ್ಕ್ ಔಟ್ ಈಗ ಕೆಲವೇ ಫಿಟ್ ನೆಸ್ ಸೆಂಟರ್ ಗಳಲ್ಲಿ ಲಭ್ಯವಿದ್ದು.. ಇದರ ಮಹತ್ವ ವನ್ನು ಜನರಿಗೆ ತಲುಪಿಸಸುವ ಆಸೆ ನಿಹಾರಿಕಾರದ್ದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.
54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

ಸುದ್ದಿದಿನ,ಬೆಂಗಳೂರು:ಆರ್ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ರೆಸ್ಟೋರೆಂಟ್ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.
ಬೆಂಗಳೂರಿನ #NativeCooks ಫುಡ್ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಹೌದು, ಹೆಬ್ಬಾಳ, ಆರ್ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್ಬಾಕ್ಸ್ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.
ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್ ಕುಕ್ಸ್ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್. ವೆಜ್ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್ವೆಜ್ ಊಟವನ್ನು 135 ರೂಪಾಯಿಗೆ ಹಾಗೂ ಎಕ್ ಮೀಲ್ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಸದ್ಯಕ್ಕೆ ಹೆಬ್ಬಾಳ, ಆರ್ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ24 hours ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ24 hours ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ24 hours ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್