Connect with us

ದಿನದ ಸುದ್ದಿ

ರೇಪಿಸ್ಟ್ ಸ್ವಾಮೀಜಿ ಮಠಕ್ಕೆ ಆಪ್ತೆ ಜತೆ ಬಂದಿದ್ರಾ ಮಾಜಿ ಸಿಎಂ?

Published

on

ಸುದ್ದಿದಿನ ಡೆಸ್ಕ್: ಅತ್ಯಾಚಾರ ಆರೋಪ ಎದುರಿಸುತ್ತಿರುವ ಪಾಂಡವಪುರದ ಚಂದ್ರೆ ಗ್ರಾಮದ ಸಮೀಪವಿರುವ ಶ್ರೀ ಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಮಠದ ವಿದ್ಯಾಹಂಸ ಭಾರತೀ ಸ್ವಾಮೀಜಿ ಈಗ ಮಾತನಾಡುವರ ಬಾಯಲ್ಲಿ ಆಹಾರ ವಾಗಿದ್ದಾರೆ.
ಒಂದು ಪ್ರಭಾವಿ ಸಮುದಾಯಕ್ಕೆ ಸೇರಿದ ಕಾರಣ ಈ ಸುದ್ದಿ ಬಹುತೇಕ ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ.
ಚಂದ್ರೆ ಗ್ರಾಮದ ಸುಮರು 50 ಎಕರೆ ಪ್ರದೇಶದಲ್ಲಿ ಮಠ ಕಟ್ಟಿಕೊಂಡು ತನ್ನದೇ ಸಾಮ್ರಾಜ್ಯ ನಡೆಸುತ್ತಿರುವ ಈ ಸ್ವಾಮೀಜಿ ಸನ್ನಿಧಾನಕ್ಕೆ ಮಾಜಿ ಮುಖ್ಯಮಂತ್ರಿಯೊಬ್ಬರು ಹಾಗೂ ಅವರಿಗೆ ಆಪ್ತರಾಗಿದ್ದ ಸಂಸದೆಯೊಬ್ಬರು ತಡರಾತ್ರಿಯಲ್ಲಿ ಭೇಟಿ ನೀಡುತ್ತಿದ್ದರು ಎಂದು ಊರಿನವರು ಹೇಳುತ್ತಿದ್ದಾರೆ. ಧಾರಾವಾಹಿ ನಟಿಯರು, ಸಿನಿಮಾ ನಟಿಯರು, ಪತ್ರಕರ್ತರೂ ಕೂಡ ಭೇಟಿ ನೀಡುತ್ತಲೇ ಇರುತ್ತಾರೆ. ಮಾಧ್ಯಮಗಳು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಮಠಕ್ಕೆ ನಾಯಿಗಳೇ ಕಾವಲುಗಾರರು ಎಂದು ಚಂದ್ರ ಗ್ರಾಮದ ಜನ ಹೇಳುತ್ತಾರೆ.
ಮೈಸೂರಿನ ಪತ್ರಕರ್ತ ರಾಜೇಶ್ ಬೋರೆ ಎಂಬುವರೇ ತಮ್ಮ ಪತ್ನಿ ಮೇಲೆ ಸ್ವಾಮೀಜಿ ಅತ್ಯಾಚಾರ ಎಸಗಲು ಕುಮ್ಮಕ್ಕು ನೀಡಿದರು ಎಂದು ತಿಳಿದುಬಂದಿದೆ. ಇಷ್ಟೆಲ್ಲ ತನ್ನ ಕಣ್ಮುಂದೆಯೇ ನಡೆಯುತ್ತಿದ್ದರೂ, ಸುಮ್ಮನಿದ್ದ ಬೋರೆ ಈ ಸ್ವಾಮೀಜಿಯ ಪರಮ ಭಕ್ತ. ತನಗಿದ್ದ ವೈವಾಹಿಕ ಸಮಸ್ಯೆ ಹಾಗೂ ಹಣಕಾಸಿನ ತೊಂದರೆ ಸ್ವಾಮೀಜಿ ಪೂಜೆಯಿಂದ ಸರಿಹೋಗುತ್ತದೆ ಎಂದು ಈತ ನಂಬಿದ್ದನಂತೆ.
ಅಂದಹಾಗೆ ವಿದ್ಯಾಹಂಸ ಸ್ವಾಮೀಜಿಯ ಮೂಲ ಹೆಸರು ರಘುರಾಂ ಭಟ್. ಚಿತ್ರದುರ್ಗದ ರಂಗಯ್ಯನ ಬಾಗಿಲು ಬಳಿ ಇರುವ ವಾಸವಿ ಶಾಲೆ ಹತ್ತಿರ ಮನೆ. ಅಪ್ಪ ಪೊಲೀಸ್. ಕುಡಿತದ ದಾಸನಾಗಿದ್ದ ಅಪ್ಪ ತೀರಿಹೋದ ನಂತರ ದೊಡ್ಡಣ್ಣನಿಗೆ ಕೆಲಸ ಸಿಕ್ಕಿತು. ಎರಡನೇಯವ ರಘುರಾಂ ಆಧ್ಯಾತ್ಮದ ದಾರಿ ಹಿಡಿದು ಉಡುಪಿಯ ಪಾಲುಮಾರು ಮಠ ಸೇರಿದ. ಅಲ್ಲಿಂದ ಹೊರಬಂದು ತಾನೇ ಒಂದು ಮಠ ಸ್ಥಾಪಿಸುವ ನಿರ್ಧಾರಕ್ಕೆ ಬಂದ. ಮೈಸೂರಿನಲ್ಲಿ ಒಂದು ಹುಡುಗಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿರುವ ಈತ, ಆಕೆಯಿಂದ ವಿಚ್ಛೇದನ ಪಡೆದು ಪ್ರಭಾವಿಗಳ ನೆರವಿನಿಂದ ಪಾಂಡವಪುರದ ಚಂದ್ರೆ ಗ್ರಾಮದ ಬಳಿ ಮಠ ಕಟ್ಟಿದ ಎಂದು ತಿಳಿದುಬಂದಿದೆ.

ಹೊಡೆದಿದ್ದರು

ಚಿತ್ರದುರ್ಗದಲ್ಲಿರುವಾಗಲೇ ಈತ ಪೂಜೆ ಹೆಸರಿನಲ್ಲಿ ಅರ್ಧ ರಾತ್ರಿಯಲ್ಲಿ ಭಕ್ತರ ಮನೆ ಬಾಗಿಲು ತಟ್ಟುತ್ತಿದ್ದ. ಹೀಗೆ ಭಕ್ತರೊಬ್ಬರ ಮನೆ ಬಾಗಿಲು ತಟ್ಟಿ ಅವರ ಕೈ ಹಿಡಿದು ಎಳೆದ ಕಾರಣ ಆತನಿಗೆ  ಹೊಡೆದು ಹೊರಕಳಿಸಲಾಗಿತ್ತು ಎನ್ನಲಾಗಿದೆ.

ಕೈ ನಾಯಕನ ಪತ್ನಿ ಜತೆ ಅಸಭ್ಯ ವರ್ತನೆ

ಮೈಸೂರಿನಲ್ಲಿ ಚಾರ್ತುರ್ಮಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ಪೂಜೆ ಮಾಡುವ ನೆಪದಲ್ಲಿ ಅವರ ಪತ್ನಿ ಜತೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ನನ್ನನ್ನು ತಬ್ಬಿಕೊಂಡರೆ ನಿನಗೆ ಶಕ್ತಿ ಬರುತ್ತದೆ ಎಂದು ಹೇಳಿದ್ದ ಸ್ವಾಮೀಜಿಗೆ ಬೈದು ಹೊರಗೆ ಕಳುಹಿಸಿದ್ದರು ಎನ್ನಲಾಗಿದೆ.

ಬೇಕಾದಾಗ ಲಿಂಗ ಬದಲಾಯಿಸುತ್ತಾನಂತೆ

ವಿದ್ಯಾಹಂಸ ಸ್ವಾಮೀಜಿ ತನಗೆ ಬೇಕಾದಾಗ ಲಿಂಗ ಬದಲಾಯಿಸಿ ಗಂಡು/ಹೆಣ್ಣಿನ ಅವತಾರ ತಾಳುತ್ತಾನಂತೆ. ಹೆಣ್ಣಾದಾಗ ಆತನ ದೇಹದ ಆಕಾರಗಳೂ ಬದಲಾಗುತ್ತವೆಯಂತೆ. ಅಲ್ಲದೇ ಹೆಣ್ಣನಂತೆ ನಡೆಯುವುದು, ಮಾತನಾಡುವುದನ್ನೂ ಮಾಡುತ್ತಾನಂತೆ. ಹಾಗಾಗಿ ಅರ್ಧ ನಾರೀಶ್ವರ ರೂಪ ಸ್ವಾಮೀಜಿ ಎಂದೂ ಇವನನ್ನು ಕರೆಯುತ್ತಾರೆ.

ಶಾಸಕ ರಾಮ್‍ದಾಸ್‍ಗೂ ನಂಬಿಕೆ ದ್ರೋಹ

ಈ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ ಎಂದು ನಂಬಿ ಶಾಸಕ ರಾಮದಾಸ್, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಸೇರಿದಂತೆ ಹಲವರು ಮೈಸೂರಿನಲ್ಲಿ ಚಾತುರ್ಮಾಸ ಪೂಜೆ ನಡೆಸಲು ಆಹ್ವಾನಿಸಿದ್ದರು. ಈಗ ಅತ್ಯಾಚಾರದ ವಿಷಯದಲ್ಲಿ ಸಿಕ್ಕು ಅವರೆಲ್ಲರ ನಂಬಿಕೆಗೂ ಸ್ವಾಮೀಜಿ ದ್ರೋಹ ಬಗೆದಿದ್ದಾರೆ.

ಬಟ್ಟೆ ಬಿಚ್ಚಿ ಬೆಂಕಿಗೆ ಹಾಕಿದ್ದ

ಪತ್ರಕರ್ತ ಬೋರೆ ಮನೆಗೆ ತಡರಾತ್ರಿ ಬಂದ ಸ್ವಾಮೀಜಿ ಬಾಗಿಲು ತಟ್ಟಿದ್ದಾನೆ. ಪತಿ ಬಂದಿರಬೇಕು ಎಂದು ಬಾಗಿಲು ತೆಗೆದಾಗ ಕಂಡಿದ್ದು ಸ್ವಾಮೀಜಿ ಹಾಗೂ ಅವನ ಪಟಾಲಂ.
ಸ್ವಾಮೀಜಿಗೆ ಸಹಕರಿಸುವಂತೆ ಪತಿ ಹೇಳಿದ್ದರಿಂದ ಜತೆಗಿದ್ದ ಅವರ ಪತ್ನಿಯನ್ನು ತಬ್ಬಿಕೊಳ್ಳಲು ಸ್ವಾಮೀಜಿ ಯತ್ನಿಸಿದ. ಬಿಡಿಸಿಕೊಂಡಾಗ ಕೋಪಗೊಂಡ ಸ್ವಾಮೀಜಿ ಆಕೆಯ ಬಟ್ಟೆ ಬಿಚ್ಚಿ ಬೆಂಕಿಗೆ ಹಾಕಿದ್ದ. ಚಾಕು ತೋರಿಸಿ ಕೊಲ್ಲುವುದಾಗಿಯೂ ಹೆದರಿಸಿದ. ದರದರನೆ ಕಾರಿನೊಳಗೆ ಎಳೆದುಕೊಂಡು ತನ್ನ ತೊಡೆ ಮೇಲೆ ಕುಳಿತುಕೊಳ್ಳುವಂತೆ ಹೇಳಿದ. ಅದಕ್ಕೆ ಒಪ್ಪದಿದ್ದಾಗ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಸಂತ್ರಸ್ತ ಮಹಿಳೆಯು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending