ದಿನದ ಸುದ್ದಿ
ಮರಿ ಕೋಗಿಲೆ ‘ಜೀವಿತಾ’ಳ ಕುಹೂ ಕುಹೂ!
“ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ” ಅಂತ ನಾದ ಬ್ರಹ್ಮ ಹಂಸಲೇಖ ಹೇಳ್ತಾರೆ. ಆದರೆ ಈ ಮರಿ ಕೋಗಿಲೆಯೊಂದು ಹಾಡು ಎಂದರೆ ಸಾಕು ಪರಮೋತ್ಸಾಹದೊಂದಿಗೆ ಒಂದರ ಮೇಲೊಂದರಂತೆ ಹಾಡಲು ಶುರು ಮಾಡುತ್ತೆ. ಹಾಡು ಕೇಳಿದವರಂತೂ ‘ನಿಲ್ಲಿಸು’ ಎಂಬ ಮಾತೇ ಮರೆತು ತಲೆತೂಗಿ, ಮುತ್ತಿಕ್ಕಿಸಿಕೊಂಡು ಹಾರೈಸಿಕೊಂಡುಬಿಡುತ್ತೆ ಈ ಮರಿ ಕೋಗಿಲೆ.
ಅಂದಹಾಗೆ ಯಾರೀ ಮರಿ ಕೋಗಿಲೆ ಎಂಬ ಕುತೂಹಲದ ಪ್ರಶ್ನೆ ನಿಮ್ಮಲ್ಲೀಗ ಮೂಡಿರ ಬಹುದು. ಅವರೇ ಬೆಣ್ಣೆ ನಗರಿಯ ಬೆಣ್ಣೆಯಂತಹ ದಾವಣಗೆರೆಯ ಜೀವಿತಾ ಮೌನೇಶ್.
ಆಡಿಕೊಂಡು ತುಂಟಾಟ ಮಾಡಿಕೊಂಡು, ಅಪ್ಪ ಅಮ್ಮಂದಿರಿಗೆ ಪ್ರೀತಿಯಿಂದ ಕಾಡುತ್ತಾ ಕುಣಿಯುವ ಈ ಚಿನಕುರುಳಿ ಮರಿಕೋಗಿಲೆಗಿನ್ನೂ ವಯಸ್ಸು ಐದು. ಇಲ್ಲಿನ ತರಳಬಾಳು ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾಳೆ.ಆಡುವುದರ ಜೊತೆಗೆ ಹಾಡುವ ಪ್ರತಿಭೆಯಾಗಿ, ಭವಿಷ್ಯದ ಭರವಸೆಯ ಗಾಯಕಿಯಾಗುವ ಎಲ್ಲ ಲಕ್ಷಣಗಳೂ ಈ ಮರಿ ಕೋಗಿಲೆಗಿವೆ.
“ ಈಕೆ ತನ್ನ ಎರಡು-ಮೂರನೇ ವಯಸ್ಸಿನಲ್ಲೇ ನಾವು ಹೇಳಿಕೊಡುವ, ಟಿವಿ, ಮೊಬೈಲ್ಗಳಲ್ಲಿ ಕೇಳುವ ಹಾಡುಗಳನ್ನು ತನಗಿಷ್ಟ ಬಂದಂತೆ ಮುದ್ದಾಗಿ ಹಾಡುವ ಗೀಳೊಂದನ್ನು ಬೆಳೆಸಿಕೊಂಡಳು. ಅದನ್ನು ಗುರುತಿಸಿ ನಾವು ಸಂಗೀತದ ಜಾಡಿನಲ್ಲಿಯೇ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ.” ಎಂಬುದು ಜೀವಿತಾ ಮೌನೇಶ ಅವರ ತಾಯಿ ಶ್ವೇತಾ ಮೌನೇಶ್ ಹಾಗೂ ತಂದೆ ಡಾ.ಮೌನೇಶ್ ಆಚಾರ್ ಅವರ ಮನದ ಮಾತು.
ಈ ಮರಿಕೋಗಿಲೆಗೆ ಶಾಸ್ರ್ತೀಯ ಸಂಗೀತದ ಅಭ್ಯಾಸ ಬಹುಮುಖ್ಯವಾದ್ದರಿಂದ ‘ಮಾನಸ’ ಎಂಬ ಸಂಗೀತ ಗುರುಗಳಿಂದ ಕರ್ನಾಟಕ ಸಂಗೀತದ ಪಾಠ ಈಗಾಗಲೇ ಶುರುವಾಗಿದ್ದು, ಶ್ರದ್ಧೆಯಿಂದ ದಿನಕ್ಕೊಂದು ಗಂಟೆ ಅಭ್ಯಾಸ ಮಾಡುತ್ತಾಳಂತೆ ಜೀವಿತಾ.
ಜೀ ಟಿವಿಯ ಸರಿಗಮಪ ಲಿಟ್ಲ್ ಚಾಂಪ್ಸ್ 14 ನೇ ಸೀಸನ್ ನಲ್ಲಿ ಸಾವಿರಾರು ಅಭ್ಯರ್ಥಿಗಳೊಟ್ಟಿಗೆ ಸ್ಪರ್ಧಿಸಿ, ಟಾಪ್ 30ರವರೆಗೆ ಟಾಕು ಟೀಕಾಗಿ ಪ್ರವೇಶ ಮಾಡಿದ್ದಳು ಈ ಮರಿ ಕೋಗಿಲೆ ಜೀವಿತಾ ಮೌನೇಶ್.
ಇನ್ನೇನು ಸ್ಪರ್ಧೆ ಆಯ್ಕೆಯಾಗಬೇಕು ಅನ್ನುವಷ್ಟರಲ್ಲಿ ದಿಢೀರನೆ ಕಾಡಿದ ಜ್ವರದಿಂದ ಕರ್ನಾಟಕದ ಮರಿಕೋಗಿಲೆ ಎಂದು ಜನರ ಬಾಯ್ಮಾತಾಗುವಲ್ಲಿ ಸುವರ್ಣ ಅವಕಾಶವೊಂದು ತಪ್ಪಿ ಹೋಯಿತು. ಈ ಮರಿಕೋಗಿಲೆಯು ‘ಕನ್ನಡವೇ ನಮ್ಮಮ್ಮ’, ‘ಅಮ್ಮಾನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಹೇಳುವ ಹಾಡುಗಳಂತೂ ಕೇಳುಗರ ಕೈಕಾಲುಗಳು ತಮಗರಿವಿಲ್ಲದೇ ತಾಳ ಹಾಕಲು ಶುರುಮಾಡುತ್ತವೆ. ಅಂತಹದೊಂದು ತಾಕತ್ತು ಈ ಮರಿ ಕೋಗಿಲೆ ಜೀವಿತಾಳ ಧ್ವನಿಯಲ್ಲಿದೆ.
ದಾವಣಗೆರೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ಈ ಮರಿ ಕೋಗಿಲೆ ಭಾಗವಹಿಸಿ ಹಾಡಲಿಲ್ಲವೆಂದರೆ ಆ ಕಾರ್ಯಕ್ರಮ ಅಪೂರ್ಣವೇ ಸರಿ. ನಗರದಲ್ಲಿ ಸುರೇಶ್ ಬಾಬು ಎಂಬುವವರು ಆಯೋಜಿಸಿದ್ದ, ‘ಕುಹೂ ಕುಹೂ’ ಕ್ಯಾರಿಯೋಕೆ ಸ್ಪರ್ಧೆಯಲ್ಲಿ ಮಧುರವಾಗಿ ಹಾಡಿ ಎರಡನೇ ಬಹುಮಾನಗಿಟ್ಟಿಸಿದ್ದಳು. ಜೀ ಟಿವಿ ಆಯೀಜಿಸಿದ್ದ ‘ದಸರಾ ವಿಶೇಷ’ ಕಾರ್ಯಕ್ರಮದಲ್ಲಿ ಈ ಮರಿ ಬೊಂಬೆ “ ಬೊಂಬೆ ಹೇಳುತೈತೆ” ಎಂಬ ಹಾಡೇಳಿ ಎದುರಿದ್ದವರನ್ನು ವೇದಿಕೆಮೇಲಿದ್ದವರನ್ನು ಮಂತ್ರ ಮುಗ್ಧಗೊಳಿಸಿ ಅವರೆನ್ನೆಲ್ಲಾ ಗಾನಲೋಕಕ್ಕೆ ಕರೆದ್ಯೊಯ್ದಿದ್ದಳು ಎಂದು ಜೀವಿತಾ ಆಭಿಮಾನಿಯೊಬ್ಬರು ಹೇಳುತ್ತಾರೆ.
ಹಾಗೇ, ಶಂಕರ ಹಾಗೂ ಆಯುಶ್ ಟಿವಿಯ ‘ಪ್ಲಾಟ್ ಫಾರಂ ಟು ಪರ್ಪಾರ್ಮ್’ ಎಂಬ ಕಾರ್ಯಕ್ರಮದಲ್ಲಿ ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡ ಹೇಳಿ ರಂಜಿಸಿದ್ದಾಳೆ. ನಂತರ ಚಿತ್ರದುರ್ಗದಲ್ಲಿ ನಡೆದಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಮರಿ ಕೋಗಿಲೆ ಭಾಗವಹಿಸಿದ್ದಾಳೆ. ಅವೆಂದರೆ, ಪಿ.ಬಿ. ಶ್ರೀವಾಸ್ ಹಿಟ್ಸ್, ಕನ್ನಡ ರಾಜ್ಯೋತ್ಸವದ ಹಲವು ಕಾರ್ಯಕ್ರಮಗಳು, ಸಾಹಿತಿ ಚಂಪಾ ಹಾಗೂ ಮುರುಘಾ ಶರಣರ ಎದುರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರ ಪ್ರೀತಿಯ ಮೆಚ್ಚುಗೆ ಪಡೆದವಳಾಗಿದ್ದಾಳೆ ಈ ಮರಿ ಕೋಗಿಲೆ ಜೀವಿತಾ.
ಒಟ್ಟಾರೆ ದಾವಣಗೆರೆಯ ಈ ಮರಿಕೋಗಿಲೆ ಜೀವಿತಾ ಮೌನೇಶ್ ಹಾಡಿಗೊಂದು ಹಾಡ ಹೇಳಿ, ಶೃತಿ, ತಾಳದೊಂದಿಗೆ ಬೆರೆತು ಭಾರತದ ಬಹುದೊಡ್ಡ ಗಾಯಕಿಯಾಗಲಿ ಎಂಬುದೇ ಈ ಕ್ಷಣದ ಅಂಬೋಣ.
ಜೀವಿತಾಳ ಹಾಡು ಮತ್ತು ನಟನೆಯ ವೀಡಿಯೋಗಳನ್ನು ಯೂಟ್ಯೂಬಿನಲ್ಲಿ ನೋಡಲು | jeevitha mounesh ಎಂದು type ಮಾಡಿ.
ಇದುವರೆಗೆ ಜೀವಿತಾ ನೀಡಿರುವ ಕಾರ್ಯಕ್ರಮಗಳು
- Zee Kannadaದಲ್ಲಿ ಬರುವ Sa Re Ga Ma Pa Season – 14 ರಲ್ಲಿ ದಾವಣಗೆರೆಯಲ್ಲಿ ನಡೆದ Audition ನಲ್ಲಿ ಸುಮಾರು 250 ಸ್ಪರ್ದಿಗಳೊಂದಿಗೆ ಭಾಗವಹಿಸಿ select ಆಗಿ, ಕರ್ನಾಟಕದಾದ್ಯಂತ 2.5 ಲಕ್ಷ ಸ್ಪರ್ದಿಗಳಲ್ಲಿ Top30 ವರೆಗೆ select ಆಗಿದ್ದರು.
- 16.6.2017 ರಲ್ಲಿ ನಡೆದ ಜಿಲ್ಲಾ ಮಟ್ಟದ “ಕುಹೂ ಕುಹೂ ದಾವಣಗೆರೆ ಕೋಗಿಲೆ” ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
- 2.3.2018 ರಂದು ನಡೆದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 61ನೇ ಸ್ಮರಣೋತ್ಸವ 2018 ಹಾಗೂ ಶರಣ ಸಂಸ್ಕøತಿ ಉತ್ಸವದಲ್ಲಿ ಹಾಡಿ, ಡಾ|| ಶ್ರೀ ಶಿವಮೂರ್ತಿ ಮುರಘಾಶರಣರಿಂದ ಆಶಿರ್ವಾದ ಮತ್ತು ಗೌರವ ಸಮರ್ಪಣೆಯನ್ನು ಸ್ವೀಕರಿಸಿರುತ್ತಾರೆ.
- 20.11.2017 ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಾವಣಗೆರೆ ಇವರು ನಡೆಸಿದ “ಚಿಗುರು” ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾವಗೀತೆ ಹಾಗೂ ಚಿತ್ರಗೀತೆ ಕಾರ್ಯಕ್ರಮ ನೀಡಿರುತ್ತಾರೆ.
- 1.12.2017 ರಂದು ದಾವಣಗೆರೆ ಜಿಲ್ಲೆ ಹೆಬ್ಬಾಳ ಮಠದಲ್ಲಿ ನಡೆದ 330ನೇ ಕಾರ್ತಿಕ ಮಹೋತ್ಸವದಲ್ಲಿ ವಚನ, ಭಾವಗೀತೆ ಹಾಗು ಚಿತ್ರಗೀತೆ ಕಾರ್ಯಕ್ರಮ ನೀಡಿರುತ್ತಾರೆ.
- 28.11.2017 ರಂದು ದಾವಣಗೆರೆ ಮಹಾನಗರ ಪಾಲಿಕೆ ಇವರು ನಡೆಸಿದ 62ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಚಿತ್ರಗೀತೆ ಹಾಡಿರುತ್ತಾರೆ.
- 12.8.2017 ರಂದು ಶಂಕರ ಹಾಗು ಆಯುಷ್ ಟಿವಿ ಯವರು ನಡೆಸಿದ Platform to Perform ನಲ್ಲಿ ಭಾಗವಹಿಸಿ ಚಿತ್ರಗೀತೆ ಹಾಡಿರುತ್ತಾರೆ.
- 21.9.2017 ರಂದು Zee Kannada ನಡೆಸಿದ ದಸರ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರಗೀತೆ ಹಾಡಿರುತ್ತಾರೆ.
- 2.2.2018 ರಂದು ವನಿತಾ ಸಮಾಜ ಪ್ರೇರಣಾ ರವರು ನಡೆಸಿದ ಕಾರ್ಯಕ್ರಮದಲ್ಲಿ ಚಿತ್ರಗೀತೆಗಳನ್ನು ಹಾಡಿರುತ್ತಾರೆ.
- 7.1.2018 ರಂದು “Davangere Expo 2018” ರಲ್ಲಿ ಚಿತ್ರಗೀತೆಗಳನ್ನು ಹಾಡಿರುತ್ತಾರೆ.
- 21.1.2018 ರಲ್ಲಿ Vasavi Cultural Academy, Chitradurga ಇವರು ಎರ್ಪಡಿಸಿದ ಪಿ.ಬಿ. ಶ್ರಿನಿವಾಸ್ ಹಿಟ್ಸ್ ಅಲ್ಲಿ ಹಾಡಿ ಜನರ ಮೆಚ್ಚುಗೆಯನ್ನ ಪಡೆದಿರುತ್ತಾರೆ.
- 28.12.2017 ರಲ್ಲಿ ದಾವಣಗೆರೆಯಲ್ಲಿ ಸಿ.ಅಶ್ವತ್ ಅವರ ಗೌರವಾರ್ಪಣೆ ಕಾರ್ಯಕ್ರಮ ಗುರುನಮನ ದಲ್ಲಿ ಭಾಗವಹಿಸಿದ ಅತೀ ಕಿರಿಯ ಗಾಯಕಿಯಾಗಿರುತ್ತಾರೆ.
- 26.11.2017 ರಂದು GMIT ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ “ನಂದಿತ” ರವರೊಂದಿಗೆ ಸ್ಟೆಜ್ ಶೇರ್ ಮಾಡಿ ಚಿತ್ರಗೀತೆಯನ್ನು ಹಾಡಿ ಅವರ ಮೆಚ್ಚುಗೆ ಪಡೆದಿರುತ್ತಾರೆ.
- ಶಾಲೆಯಲ್ಲಿ ನಡೆಯುವ ಎಲ್ಲಾ ಸಿಂಗಿಂಗ್ Competition ನಲ್ಲಿ ಪ್ರತೀ ಬಾರಿಯು ಮೊದಲ ಬಹುಮಾನ ಗಳಿಸಿರುತ್ತಾರೆ.
- 28.12.2016 ರಲ್ಲಿ ದಾವಣಗೆರೆಯಲ್ಲಿ ಸಿ.ಅಶ್ವತ್ ಅವರ ಗೌರವಾರ್ಪಣೆ ಕಾರ್ಯಕ್ರಮ ಗುರುನಮನ ದಲ್ಲಿ ಭಾಗವಹಿಸಿದ ಅತೀ ಕಿರಿಯ ಗಾಯಕಿಯಾಗಿರುತ್ತಾರೆ.
- ಇವರು ಹಾಡಿರುವ ಗೀತೆಗಳು facebook ನಲ್ಲಿ 1.7 ಸಾವಿರಕ್ಕೂ ಹೆಚ್ಚು view ಗಳು ಹಾಗು ಮೆಚ್ಚುಗೆಗಳು ಸಿಕ್ಕಿವೆ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401

ದಿನದ ಸುದ್ದಿ
ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ್ವಾಮಿ.ಜಿ.ಎಂ.ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ9 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ9 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

