ದಿನದ ಸುದ್ದಿ
ಇಸ್ರೊ ನನ್ನ ಉಸಿರೆಂದು ನಂಬಿದ್ದ ವಿಜ್ಞಾನಿಗೆ ಪೊಲೀಸರು ಕೊಟ್ಟ ಟಾರ್ಚರ್ ಹೇಗಿತ್ತು ಗೊತ್ತಾ?

ಭಾರತವು ಸ್ವದೇಶಿ ನಿರ್ಮಿತ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುತ್ತಿತ್ತು. ಹೊಟ್ಟೆ ಕಿಚ್ಚು ತಾಳಲಾರದೆ ಅಮೆರಿಕ ನಡೆಸಿದ ಗೂಢಚರ್ಯೆ ಕಥಾ ಪ್ರಸಂಗದಲ್ಲಿ ಸಿಕ್ಕಿಬಿದ್ದವರು ಇಸ್ರೊದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್.
ಬಹಳ ತಡವಾಗಿಯಾದರೂ ನಂಬಿ ಅವರಿಗೆ ನ್ಯಾಯ ಸಿಕ್ಕಿದೆ. 50 ಲಕ್ಷ ರೂ. ಪರಿಹಾರ ನೀಡಬೇಕಂದೂ ಸುಪ್ರೀಂ ಕೋರ್ಟ್ ಹೇಳಿದೆ. ನಂಬಿ ಅವರನ್ನು ಈ ಪ್ರಕರಣದಲ್ಲಿ ತಳಕುಹಾಕಿದ್ದಾದರೂ ಹೇಗೆ? ನಂಬಿ ಅವರೇ ಬರೆದಿರುವ ರೆಡಿ ಟು ಫೈರ್ ಪುಸ್ತಕದಲ್ಲಿ ತಮಗಾದ ಅನ್ಯಾಯ ಹಾಗೂ ಪೊಲೀಸರು ಕೊಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಖುದ್ದು ವಿವರಿಸಿದ್ದಾರೆ. ಈ ಕುರಿತು ಸ್ಕ್ರಾಲ್ ಪ್ರಕಟಿಸಿರವ ವರದಿಯ ಕನ್ನಡ ಅವತರಣಿಕೆ ಇಲ್ಲಿದೆ.
ಸತ್ಯ ಮತ್ತು ಧರ್ಮ ಎಂದು ಹೇಳಿಕೊಂಡು ಬಂದ ಇಬ್ಬರು ನನ್ನ ಹಿಂದೆ ನಿಂತುಕೊಂಡರು. ಅವರಿಬ್ಬರು ನನ್ನ ಕುತ್ತಿಗೆ ಹಿಡಿದು ಅದುಮಿ ಕೆಳಗೆ ಕೂರಿಸಲಿದ್ದಾರೆ ಎಂಬುದನ್ನು ತಿಳಿಯಲು ನನಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಅವರಲ್ಲಿ ಹಿರಿಯ ಅಧಿಕಾರಿಯಂತೆ ಕಾಣುತ್ತಿದ್ದ ಒಬ್ಬ ನನ್ನನ್ನು ಹೀಗೆ ಕೇಳಿದ. “ನೀನೊಬ್ಬ ಹಿರಿಯ ವಿಜ್ಞಾನಿ. ಒಬ್ಬ ಬುದ್ದಿವಂತ ವ್ಯವಸ್ಥಾಪಕ. ದೇಶದ ಆಸ್ತಿ. ನೀನ್ಯಾಕೆ ಹೀಗೆ ಮಾಡಿದೆ?
ನಂಬಿ: ನಾನು ಏನು ಮಾಡಿದೆ?
ಅಧಿಕಾರಿ: ಗೂಢಚರ್ಯೆ.
ನಂಬಿ: ಯಾವ ಗೂಢಚರ್ಯೆ?
ಅಧಿಕಾರಿ: ಗಂಟಲು ಸರಿ ಮಾಡಿಕೊಂಡು ಹೇಳಿದ ಮಿಸ್ಟರ್ ನಂಬಿ, ಸಾರಿ ಡಾಕ್ಟರ್ ನಂಬಿ.
ನಂಬಿಎ: ನಾನು ಡಾಕ್ಟರ್ ಅಲ್ಲ ಮಿಸ್ಟರ್ ಸರಿ ಹೊಂದುತ್ತದೆ.
ಅಧಿಕಾರಿ: ಸರಿ ನನಗ್ಯಾಕೊ ಡಾಕ್ಟರ್ ಅನ್ನುವುದೇ ಸೂಕ್ತ ಎನಿಸುತ್ತದೆ. ಮತ್ತೊಮ್ಮೆ ಗಂಟಲು ಸರಿಮಾಡಿಕೊಂಡು ಕೇಳಿದ. ಹೇಳು ಯಾಕೆ ಹೀಗೆ ಮಆಡಿದೆ.
ನಂಬಿ: ದಯವಿಟ್ಟು ಅರ್ಥ ಮಾಡಿಕೊಳ್ಳಿ ನಾನು ಯಾವುದೇ ಅಪರಾಧ ಮಾಡಿಲ್ಲ. ನಿಮಗೆ ನಿಜವಾಗಿ ಏನು ಬೇಕು ಹೇಳಿ?
ಅಧಿಕಾರಿ: ನಿಜ ಬೊಗಳು.. ನೀನು ಒಪ್ಪಿಕೊಂಡ್ಯೋ ಸರಿ. ಇಲ್ದಿದ್ರೆ ನಿನ್ನನ್ನು ಒಪ್ಪಿಸೋದು ಹೇಗೆಂದು ನನಗೆ ಗೊತ್ತು.
ನಂಬಿ: ಅದು ಬೆದರಿಕೆಯ ಮೊದಲ ಹೆಜ್ಜೆಯಾಗಿತ್ತು (ಸ್ವಗತ)
ನಂಬಿ: ನನ್ನ ಅಪರಾಧವಾದರೂ ಏನು?
“ನಿಂಗೆ ಗೊತ್ತಿಲ್ಲವಾ? ಎದ್ದುನಿಂತು ಹೇಳಿದ. ನೀನು ದೇಶದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಮಾರಿದ್ದೀಯ. ಈಗ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡ್ತಿದ್ದೀಯಾ? ಬೊಗಳು ಇದೆಲ್ಲ ಹೇಗೆ ಮಾಡಿದೆ ಅಂತ. ಇದಕ್ಕಾಗಿ ಅವರು ಕೊಟ್ಟ ಇನಾಮು ಎಷ್ಟು ಹೇಳು?
ಅದೇ ಸಮಯಕ್ಕೆ ಮತ್ತೆ ಮೂವರು ಅಧಿಕಾರಿಗಳು ರೂಂನೊಳಗೆ ಬಂದರು. ಅದರಲ್ಲಿ ಒಬ್ಬ ಬೂದಿ ಬಣ್ಣದ ಸಫಾರಿ ಸೂಟ್ ಹಾಕಿದ್ದ. ಅವರು ಇಂಟೆಲಿಜನ್ಸ್ ಬ್ಯೂರೋದ ಮುಖ್ಯಸ್ಥರು ಸಣ್ಣಗೆ ಕುಳ್ಳಗಿದ್ದ ಒಬ್ಬ ಅಧಿಕಾರಿಯು ನನಗೆ ಪರಿಚಯ ಮಾಡಿಸಿದ.
ಸಣ್ಣಗಿದ್ದ ಅಧಿಕಾರಿಯು ಇದ್ದಕ್ಕಿದ್ದಂತೆ ನನ್ನ ಮುಖದ ಮೇಲೆ ತಿವಿದು. ಹೇಳು ಸೂಳೆ ಮಗನೆ? ನಿನಗೆ ಗೊತ್ತಿಲ್ವಾ ನೀನು ಮಾಡಿದ ಅಪರಾಧ ಏನಂತ? ಇಲ್ಲ ನಂಗೆ ಗೊತ್ತಿಲ್ಲ ಎಂದೆ. ಕೆಲವು ಪೇಪರ್ಗಳನ್ನು ನನ್ನ ಮುಖಕ್ಕೆ ಎಸೆದು ಬೋಳಿಮಗನೆ ನೋಡು ನೀನು ಮಾಡಿರುವ ಅನಾಚಾರ ಯಾರ್ಗೂ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ? ಭಾರತದ ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಿದ್ದೀಯಾ? ನಿಂಗೆ ಗೊತ್ತಾ ಇದು ಎಷ್ಟು ದೊಡ್ಡ ಅಪರಾಧ ಹದಿನಾಲ್ಕು ವರ್ಷ ಕಂಬಿ ಎಣಿಸಬೇಕಾಗುತ್ತೆ ಹುಷಾರ್ ಅಂದ.
ಐಬಿಯ ದೊಡ್ಡ ವ್ಯಕ್ತಿ ಎಂದು ಪರಿಚಯಿಸಿದ್ದ ವ್ಯಕ್ತಿ ಕಡೆಗೆ ಬೊಟ್ಟುಮಾಡಿ. ನೋಡು ಅವರು ಈಗಿಂದೀಗಲೇ ದಿಲ್ಲಿಗೆ ಹೊರಡಬೇಕು. ಅವರ ವಿಮಾನಕ್ಕೆ ತಡವಾಗುತ್ತಿದೆ. ಬೇಗ ಒಪ್ಪಿಕೊ. ನಡೆದದ್ದು ಏನೆಂತ ಹೇಳಿಬಿಡು ಎಂದು ಪಿಸುಗುಟ್ಟಿದ.
ಕೆಲವೇ ಹೊತ್ತಿನ ನಂತರ ಗೊತ್ತಾಯಿತು. ಐಬಿಯ ದೊಡ್ಡ ವ್ಯಕ್ತಿ ಎಂದು ಹೇಳಿದ್ದ ವ್ಯಕ್ತಿ ವಾಸ್ತವದಲ್ಲಿ ಇಂಟೆಲಿಜೆನ್ಸ್ ಬ್ಯೂರೊದ ಜಂಟಿ ನಿರ್ದೇಶಕ ಎಂ ಕೆ. ಧರ್.
ನಾನೊಬ್ಬ ನಿರಪರಾಧಿ. ಯಾವ ತಪ್ಪ ಮಾಡಿಲ್ಲ. ನೀವು ನನ್ನನ್ನು ತಪ್ಪು ತಿಳಿದುಕೊಂಡಿದ್ದೀರ ಎಂದು ನಾನು ಮೆಲ್ಲ ಧ್ವನಿಯಲ್ಲೇ ಹೇಳಿದೆ.
ಇಲ್ಲ ಎಂದು ಜೋರಾಗಿ ಅರುಚಿದ ಅಧಿಕಾರಿ, ಬೋಳಿಮಗನೆ ಹೇಳು ಮಾರಿಯಂ ರಶೀದಾಳನ್ನು ಎಲ್ಲಿ ಭೇಟಿಯಾಗಿದ್ದೆ?
ನಂಬಿ: ನಾನು ಯಾವಾಗಲೂ ಭೇಟಿಯಾಗಿಲ್ಲ
ಅಧಿಕಾರಿ: ಬಡವ ರಾಸ್ಕಲ್ ಎಷ್ಟು ಧೈರ್ಯವಿದ್ದರೆ ನನ್ನ ಹತ್ತಿರನೇ ಸುಳ್ಳು ಹೇಳುತ್ತಿದ್ದೀಯಾ? ನೀವಿಬ್ಬರು ಭೇಟಿಯಾಗಿದ್ದಾಗೆ ಮೇರಿಯಂ ಖುದ್ದು ಒಪ್ಪಿಕೊಂಡಿದ್ದಾಳೆ. ನಿಜ ಬೊಗಳು.
ನಂಬಿ: ನೀವು ಹೇಳುತ್ತಿರುವ ಮಾಲ್ಡೀವಿಯಾ ಪ್ರಜೆಯನ್ನು ನಾನು ಎಂದಿಗೂ ಭೇಟಿಯಾಗಿಲ್ಲ. ದಯವಿಟ್ಟು ನನ್ನನ್ನು ನಂಬಿ. ನನಗೆ ಗೊತ್ತೇ ಇಲ್ಲದ ವ್ಯಕ್ತಿಯನ್ನು ನಾನು ಹೇಗೆ ಭೇಟಿಯಾಗಲಿ?
ಅಧಿಕಾರಿ: ನೀನು ನಿಜ ಬೊಗಳಲಿಲ್ಲ ಅಂಧ್ರೆ ಫೌಜಿಯಾಳನ್ನು ಇಲ್ಲಿಗೆ ಕರೆಸುತ್ತೇನೆ. ನೀವಿಬ್ಬರು ಜತೆಯಲ್ಲಿರುವ ಫೋಟೊಗಳು ನಾಳೆ ಪೇಪರ್ನಲ್ಲಿ ಬರುತ್ತವೆ ಸರಿನಾ?
ಮಾರಿಯಂಳನ್ನು ನಾನು ಯಾವಾಗ ಭೇಟಿ ಮಾಡಿದ್ದೆ? ಪೊಲೀಸರು ಯಾಗಿ ಸುಳ್ಳು ಕತೆ ಹೆಣೆಯುತ್ತಿದ್ದಾರೆ ಎಂದು ನನ್ನ ಮನಸ್ಸು ಮಂಥನವಾಗುತ್ತಾಹೋಯಿತು. ಅಷ್ಟರಲ್ಲಿ ಐಬಿಯ ದೊಡ್ಡ ಅಧಿಕಾರಿ ಹಾಗೂ ಆತನ ಸಹಾಯಕ ಅಲ್ಲಿಂದ ಹೊರಟರು. ಮುಖ್ಯ ವಿಚಾರಣಾಧಿಕಾರಿ ಮುಂದುವರಿಸಿದ.
ಅಧಿಕಾರಿ: ನಾವು ಹೇಳುತ್ತಿರುವ ಇಬ್ಬರು ಮಹಿಳೆಯರಷ್ಟೆ ಅಲ್ಲ. ನಿನ್ನ ಸಹೋದ್ಯೋಗಿ ಸಸಿಕುಮಾರನ್ ಕೂಡ ನಿಜ ಒಪ್ಪಿಕೊಂಡಿದ್ದಾನೆ. ನೀನು ನಮ್ಮ ಬಳಿ ಏನೂ ಮುಚ್ಚಿಡಲು ಸಾಧ್ಯವಿಲ್ಲ.
ವಿಷಯ ಕೇಳಿ ನಾನು ಚೇರ್ನಿಂದ ಕುಸಿದುಬಿದ್ದೆ. ಸಸಿಕುಮಾರ್ ಎಲ್ಲ ಒಪ್ಪಿಕೊಂಡಿಬಿಟ್ಟನಾ?
ಅಧಿಕಾರಿ: ನೀನ್ಯಾಕೆ ಇಷ್ಟು ಗಾಬರಿಯಾಗಿದ್ದೀಯಾ? ಮದ್ರಾಸ್, ತಿರುವನಂತಪುರಂನಲ್ಲಿ ನಡೆದ ಎರಡು ಭೇಟಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ನೀನು ಕ್ರಯೋಜನಿಕ್ ಎಂಜಿನ್ನ ಸ್ಕೆಚ್ಗಳನ್ನು ಮಾರಾಟ ಮಾಡಿದ್ದೀಯ ಎಂದು ಸಸಿಕುಮಾರ್ ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಸಿಕುಮಾರ್ ಮಧ್ಯವರ್ತಿಯಾಗಿದ್ದ ಎಂದೂ ಬಾಯ್ಬಿಟ್ಟಿದ್ದಾನೆ. ಹೇಳು ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡೆ?
ನಂಬಿ: ಸಸಿ ನಿಮ್ಮ ಬಳಿ ಏನು ಹೇಳಿದ್ದಾನೋ ಗೊತ್ತಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ ಯಾರನ್ನೂ ಭೇಟಿಯಾಗಿಲ್ಲ.
ಈ ಮಧ್ಯೆ ಒಬ್ಬ ಹುಡುಗ ಅನ್ನ ಸಾಂಬರ್ ತಂದ. ವಿಚಾರಣೆ ನಡೆಸಿದ ವ್ಯಕ್ತಿ ಅಲ್ಲಿಂದ ಹೋದ ಮತ್ತಿಬ್ಬರು ಹೊಸ ವ್ಯಕ್ತಿಗಳು ಬಂದರು.
ಮತ್ತೆ ಅದೇ ಪ್ರಶ್ನೆ ಕೇಳಿದರು. ಹೇಳು ಯಾಕೆ ಹೀಗೆ ಮಾಡಿದೆ? ವಿಚಾರಣೆ ನಡೆಸುವವರು ಹೊಸಬರೇ ಆದರೂ, ಅವರು ಕೇಳಿದ್ದ ಪ್ರಶ್ನೆಗಳೆಲ್ಲಾ ಹಳೆಯವು.
ಅಧಿಕಾರಿ: ವಿಕಾಸ್ ಎಂಜಿನ್ ಹಾಗೂ ಕ್ರಯೋಜನಿಕ್ ಎಂಜಿನ್ ಡ್ರಾಯಿಂಗ್ಗಳನ್ನು ಪಆಕಿಸ್ತಾನಕ್ಕೆ ಏಕೆ ಮಾರಾಟ ಮಾಡಿದೆ?
ನಂಬಿ: ನಿಮಗೆ ರಾಕೆಟ್ ವಿಜ್ಞಾನದ ಬಗ್ಗೆ ಅರಿವಿದೆಯಾ? ಯಾವುದೇ ಡ್ರಾಯಿಂಗ್ಗಳು ಇಸ್ರೊದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಬರೀ ಡ್ರಾಯಿಂಗ್ ಇಟ್ಟುಕೊಂಡು ಯಾವುದೇ ಎಂಜಿನ್ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಅದನ್ನು ತಯಾರಿಸಿದ ವಿಜ್ಞಾನಿಗಳು ಇದ್ದರೆ ಮಾತ್ರ ಅದು ಸಾಧ್ಯವಾಗುತ್ತೆ.
ಅಧಿಕಾರಿ: ಹಾಗಾದ್ರೆ ನೀನು ಡ್ರಾಯಿಂಗ್ಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದ್ದೀಯಾ?
ನಂಬಿ: ಡ್ರಾಯಿಂಗ್ಗಳು, ದಾಖಲೆಗಳಿಗೆ ಯಾರೂ ಕಾಸು ಕೊಡಲ್ಲ. ನೀವು ಹೇಳುತ್ತಿರುವ ವಿಕಾಸ್ ಎಂಜಿನ್ ತಯಾರಿಸಲು ಫ್ರಾನ್ಸ್ನ ವೆರ್ನಾನ್ ಎಂಬಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಫ್ರಾನ್ಸ್ ವಿಜ್ಞಾನಿಗಳೊಂದಿಗೆ ನಾವು 150 ಮಂದಿ ತಂಡ ಒಂದು ಅಧಿಕೃತ ಗುತ್ತಿಗೆ ಮೇರೆಗೆ ಕೆಲಸ ಮಾಡಿದ್ದೇವೆ. ನಿತ್ಯವೂ ಪ್ರಯೋಗಗಳು, ಬದಲಾವಣೆಗಳು ನಡೆಯುತ್ತಲೇ ಇದ್ದವು. ಅಷ್ಟೆಲ್ಲ ಇದ್ದರೂ ಆ ಎಂಜಿನ್ ತಯಾರಿಸಲು ನಮಗೆ ಹದಿನಾರು ವರ್ಷ ಹಿಡಿಯಿತು.
ಈಗ ವಿಚಾರಣೆ ನಡೆಸಿದ ಅಧಿಕಾರಿಗಳು ನನ್ನ ಹೇಳಿಕೆಯನ್ನು ಸ್ವಲ್ಪ ಇಂಪ್ರೂ ಮಾಡಿಕೊಂಡು ತಮ್ಮದೇ ಧಾಟಿಯಲ್ಲಿ ಪ್ರಶ್ನೆ ಕೇಳಲು ಮುಂದಾದರು. ಪಾಕಿಸ್ತಾನದವರು ವಿಕಾಸ್ ಎಂಜಿನ್ಅನ್ನು ನಕಲು ಮಾಡಬೇಕಾದರೆ ನೀನು ನೀಡಿರುವ ಡ್ರಾಯಿಂಗ್ಗಳು ಅವರಿಗೆ ಉಪಯೋಗಕ್ಕೆ ಬರುತ್ತವೆ ಅಲ್ಲವೇ?
ನಂಬಿ: ನನ್ನನ್ನು ನಂಬಿ ಎಂದು ಎಷ್ಟೇ ಬೇಡಿಕೊಂಡರೂ ಅವರು ಕೇಳಲಿಲ್ಲ. ತರ್ಕವಿಲ್ಲದ ಪ್ರಶ್ನೆಗಳು. ತಂತ್ರಜ್ಞಾನ ವೈಜ್ಞಾನಿಕ ಅರಿವಿಲ್ಲದವರ ಬಳಿ ನಾನು ಎಷ್ಟೇ ಬಾಯಿ ಬಡಿದುಕೊಂಡರೂ ಅರ್ಥ ಮಾಡಿಕೊಳ್ಳಲಿಲ್ಲ. ನೀನು ಹೇಳುತ್ತಿರುವುದು ಡ್ರಾಯಿಂಗ್ಗಳೂ ನಿಷ್ಪ್ರಯೋಜಕ. ಹಾಗಾದ್ರೆ ನೀವ್ಯಾಕೆ ಇಟ್ಟುಕೊಡಿದ್ದೀರಾ?
ನಂಬಿ: ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ಡ್ರಾಯಿಂಗ್ಗಳು ಒಂದು ಚಿಕ್ಕ ಪಾತ್ರವಷ್ಟೆ. ಅವಕ್ಕೆ ಯಾರೂ ಕಾಸು ಕೊಡುವುದಿಲ್ಲ. ಪಠ್ಯ ಪುಸ್ತಕದಲ್ಲಿರುವ ರಾಕೆಟ್ ಡ್ರಾಯಿಂಗ್ ನೋಡಿ ರಾಕೆಟ್ ಮಾಡಲು ಸಾಧ್ಯವೇ? ಅದಕ್ಕೆ ಯಾರಾದರೂ ಕಾಸು ಕೊಡುತ್ತಾರಾ?
ಆಗ ಹೊಸ ಅಧಿಕಾರಿಗಳ ತಂಡವೊಂದು ಬಂತು. ಅದರಲ್ಲೊಬ್ಬ ಜೋರು ಧ್ವನಿಯಲ್ಲಿ ಎದ್ದೇಳು ಸೂಳೇಮಗನೆ. ನೀನು ಕೂರಲು ಯೋಗ್ಯ ವ್ಯಕ್ತಿಯಲ್ಲ. ನಿಂತುಕೊಂಡೇ ಮಾತಾಡು ಅಂದ. ನಾನು ನೀರಿಗಾಗಿ ಬೆಳಗ್ಗೆ ಇಂದ ಪರಿಪರಿಯಾಗಿ ಬೇಡಿಕೊಂಡೆ ಆದರೆ ಯಾರೂ ಕೊಡಲಿಲ್ಲ. ನಿನ್ನನ್ನು ಪಠಾಣ್ಕೋಟ್ ಅಥವ ಕಾಶ್ಮೀರದ ಬ್ಲಾಕ್ ಸೆಲ್ನಲ್ಲಿ ಹಾಕಿ ಕೊಂದು ಹಿಮದ ರಾಶಿಯಲ್ಲಲಿ ಹಾಕುವುದಾಗಿ ಅವರು ಬೆದರಿಸಿದರು. ನನ್ನ ದೇಹ ಹಿಮದ ರಾಶಿಯಲ್ಲಿ ಬಿದ್ದಿರುವಂತೆ ಚಿತ್ರವು ಮನಸ್ಸಿನಲ್ಲಿ ಮೂಡಿತು.
ಆ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ 30 ಗಂಟೆಗಳ ಕಾಲ ಅದೇ ಪ್ರಶ್ನೆ. ಅನ್ನ, ನೀರು ಏನೂ ಎಲ್ಲದೆ ನಿತ್ರಾಣನಾಗಿದ್ದೆ. ಸಿಮೆಂಟ್ ನೆಲವಾಗಿದ್ದರಿಂದ ದೇಹವು ತಣ್ಣಗಾಗಿಹೋಯಿತು.
ಹೀಗೇ ಇದ್ದರೆ ಅಧಿಕಾರಿಗಳು ನನ್ನನ್ನು ಮುಗಿಸಿಬಿಡುತ್ತಾರೆ ನಾನು ಈಗ ಹೋರಾಟ ನಡೆಸಲೇಬೇಕೆಂದು ತೀರ್ಮಾನಿಸಿ ಜೋರಾಗಿ ಉಸಿರೆಳೆದುಕೊಂಡು ಎದ್ದು ನಿಂತೆ.
ನಂಬಿ: ನೀವು ಒಂದು ದೊಡ್ಡ ಅಪರಾಧ ಮಾಡುತ್ತಿದ್ದೀರ. ಇದಕ್ಕಾಗಿ ನೀವು ಬಹಳ ದೊಡ್ಡ ಶಿಕ್ಷೆ ಅನುಭವಿಸುತ್ತೀರ. ನಾನು ನಿಮ್ಮನ್ನು ಬಿಡಲ್ಲ ನೆನಪಿಟ್ಟುಕೊಳ್ಳಿ ನಿಮಗೂ ಕುಟುಂಬ ಇದೆ. ಇದನ್ನ ಕೇಳಿಸಿಕೊಂಡ ಅಧಿಕಾರಿ ನೀನು ಇಲ್ಲಿಂದ ಜೀವ ಸಮೇತ ಹೋದರೆ ತಾನೆ ಎಂದು ನಕ್ಕ.
ನಿಮ್ಮನ್ನೆಲ್ಲ ನೆನಪಿಟ್ಟುಕೊಂಡಿದ್ದೇನೆ. ಒಬ್ಬೊಬ್ಬರನ್ನಾಗಿ ಕೊಂದುಬಿಡುತ್ತೇನೆ ಎಂದೆ.
ಅಧಿಕಾರಿಯೊಬ್ಬ ತಣ್ಣನೆ ಧ್ವನಿಯಲ್ಲಿ ಹೇಳಿದ. ಸರ್ ನಾವು ನಮ್ಮ ಡ್ಯೂಟಿ ಮಾಡ್ತಿದ್ದೀವಿ. ತಪ್ಪಿದ್ದರೆ ನಿಮ್ಮ ಚಪ್ಪಲಿಯಲ್ಲಿ ಹೊಡೆಯಿರಿ.
22 ವರ್ಷಗಳಾಗಿವೆ ನನ್ನ ಚಪ್ಪಲಿಯನ್ನು ಹಾಗೇ ಇಟ್ಟಿದ್ದೇನೆ.
ಮತ್ತೆ ಅಧಿಕಾರಿ ನನ್ನನ್ನ ಪ್ರಶ್ನಿಸಿದ. ಹೇಳು ಮಹಮದ್ ಅಸ್ಲಮ್ ಯಾರು?
ನಂಬಿ: ಯಾವ ಅಸ್ಲಂ ನನಗೆ ಗೊತ್ತಿಲ್ಲ.
ಅಧಿಕಾರಿ: ಸರಿ ನಾನು ನೆನಪಿಸುತ್ತೇನೆ. ಮೊಹಮದ್ ಅಸ್ಲಾಂ ಪಾಕಿಸ್ತಾನದ ಅಣು ವಿಜ್ಞಾನಿ. 1985ರಲ್ಲಿ ಆತ ನಿನ್ನನ್ನು ಭೇಟಿಯಾಗಿ ರಾಕೆಟ್ ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದ.
ನಾನು ತಲೆ ಚಚ್ಚಿಕೊಂಡೆ.
ನಂಬಿ: ನನಗೆ ಯಾವ ಅಸ್ಲಂ ಕೂಡ ಗೊತ್ತಿಲ್ಲ. ಆದರೆ, ರಾಕೆಟ್ ಟೆಕ್ನಾಲಜಿ ತಿಳಿಯಲು ಪಾಕಿಸ್ತಾನ ಏಕೆ ಅಣು ವಿಜ್ಞಾನಿ ಕಳಿಸುತ್ತೆ? ಅಬ್ದುಲ್ ಕಲಾಂ ಅವರ ಹತ್ತಿರಾನೋ ಅಥವಾ ಯು ಆರ್ ರಾವ್ ಅವರನ್ನೋ ಸಂಪರ್ಕಿಸಬೇಕಲ್ವಾ? ನಿಮ್ಮ ಕತೆ ನಿಮಗೇ ಒಪ್ಪಿಗೆಯಾಗುತ್ತಾ?
ಆ ಇಬ್ಬರೂ ವ್ಯಕ್ತಿಗಳೂ ತಾವು ಹೇಳಿದ್ದ ಹೇಳಿಕೆ ಎಷ್ಟು ತಮಾಷೆಯಾಗಿತ್ತು ಎಂದುಕೊಂಡರು. ಒಬ್ಬರ ಮುಖ ಒಬ್ರು ನೋಡಿಕೊಂಡು ನಮಗೆ ಅದು ಗೊತ್ತು. ನೀನು ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತೀಯಾ ಎಂಬುದು ನಮಗೆ ಗೊತ್ತಾಗಬೇಕು ಎಂದ.
ಇವರು ಮುಂಚೆಯೇ ಹೆಣೆದಿರುವ ಕತೆಯಲ್ಲಿ ನನ್ನನ್ನು ಸೇರಿಸಿದ್ದಾರೆ. ಇವರೇ ಸೃಷ್ಟಿಸಿದ ಪಾತ್ರಗಳಿಗೆ ನಾನು ಹೆಸರಿಡಬೇಕು ಎಂದು ಆಗ ನನಗೆ ಅರ್ಥವಾಯಿತು. ನನಗೆ ಗೊತ್ತಿಲ್ಲದ ವ್ಯಕ್ತಗಳ ಹೆಸರನ್ನು ಕೇಳುವ ತಂತ್ರ ಮುಂದುವರಿಯುತ್ತಲೇ ಹೋಯಿತು.
ಅಧಿಕಾರಿ: ಮಿಸ್ಟರ್ ನಂಬಿ. ನಮ್ಮನ್ನು ಮೂರ್ಖರೆಂದು ತಿಳಿದಿದ್ದೀಯಾ? ನಮಗೆ 25 ವರ್ಷದ ಅನುಭವ ಇದೆ. ನಿನ್ನಿಂದ ನಿಜ ಕಕ್ಕಿಸುವುದು ಹೇಗೆಂದುನನಗೆ ಗೊತ್ತು. ನಿನ್ನ ನಟ್ಟು ಬೋಲ್ಟು ಬಿಚ್ಚುತ್ತೀವಿ. ರೊಟ್ಟಿಗಾಗಿ ಅಂಗಲಾಚುವಂತೆ ಮಾಡುತ್ತೀವೆ. ಸೂಳೆ ಮಕ್ಕಳಾ ದೇಶದ ಆಸ್ತಿನ ಮಾರ್ಕೊತೀರಾ? ಎಂದು ಕೇಳಿದ.
ಮತ್ತೊಬ್ಬ ಅಧಿಕಾರಿ ಇದ್ದಕ್ಕಿದ್ದಂತೆ ಬಂದ. ಏನೂ ಕೇಳದೆ ದಿಢೀರನೆ ಮುಖದ ಮೇಲೆ ಹೊಡೆದ. ನಮ್ಮಪ್ಪ ಕೂಡ ನನಗೆ ಒಂದೇಟೂ ಹೊಡೆದಿರಲಿಲ್ಲ. ಈತ ಹೊಡೆದದ್ದು ನನಗೆ ದೈಹಿಕ ಹಿಂಸೆಗಿಂತ ಮಾನಸಿಕವಾಗಿ ಘಾಸಿಗೊಳಿಸಿತು.
ನಾನು ಯಾರಿಗೂ ಹೆದರುವುದಿಲ್ಲ. ನಿಜ ಒಪ್ಪಿಕೊಂಡರೆ ಸರಿ ಎಂದು ಅರುಚುತ್ತಿದ್ದ.
ಇನ್ನೊಬ್ಬ ಅಧಿಕಾರಿ ನನ್ನ ಕಿವಿ ಹತ್ತಿರ ಬಂದು ಹೌದು ಎಂದು ಒಪ್ಪಿಕೊ ಎಂದ. ನಾನು ಧೈರ್ಯವಾಗಿ ಇಲ್ಲ ಎಂದು ಹೇಳಿದೆ.
ಕನ್ನಡಕ ಹಾಕಿದ್ದ ಆ ವ್ಯಕ್ತಿ ಒಮ್ಮೆ ನನ್ನನ್ನು ಗುರಾಯಿಸಿ ತನ್ನ ಸಹಾಯಕನೊಂದಿಗೆ ಹೊರಗೆ ನಡೆದ.
ಚುಟ್ಟಾ ಸೇದುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೀನ್ಯಾಕೆ ನಿಜ ಒಪ್ಪಿಕೊಳ್ಳಬಾರದು? ನನಗೆ ನಿಜಕ್ಕೂ ನೀವು ಹೇಳುತ್ತಿರವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ ಎಂದೆ.
ಅಧಿಕಾರಿ ಹೇಳಿದ ನೋಡು. ನಾವು ಹೇಳಿದ ಹೆಸರಿನವರು ಗೊತ್ತಿಲ್ಲ ಎಂದರೆ ಬಿಟ್ಟುಬಿಡು. ನಿನಗೆ ಗೊತ್ತಿರುವ ಯಾರಾದರೂ ಮುಸ್ಲಿಮರ ಹೆಸರು ಹೇಳು ಎಂದ.
ನನಗೆ ಗೊತ್ತಿದ್ದದ್ದು ನನ್ನ ಬಾಲ್ಯದ ಗೆಳೆಯ ಒಬ್ಬ ಮುಸ್ಲಿಂ. ಆತ ಈಚೆಗೆ ಸಿಕ್ಕಿ ಇಸ್ರೊದಲ್ಲಿ ತನ್ನ ಮಗನಿಗೆ ಕೆಲಸ ಕೊಡಿಸು ಎಂದಿದ್ದ. ಎಕ್ಸಾಂ ಬರೆದು ಪಾಸಾದ್ರೆ ನೋಡುವಾ ಎಂದಿದ್ದೆ. ಆತ ಎಕ್ಸಾನಲ್ಲಿ ಫೇಲ್ ಆಗಿದ್ದ.
ಮತ್ತೆ ನೀರಿಗಾಗಿ ಬೇಡಿಕೊಂಡೆ. ಆಗ ಅಧಿಕಾರಿಯೊಬ್ಬ ಹೇಳಿದ. ನೀನು ನಾವು ಹೇಳಿದ ಹೇಳಿಕೆಯನ್ನೇ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನೀರು ಸಿಗಲ್ಲ ಎಂದ. ನನಗೆ ನೀಡುತ್ತಿದ್ದ ಟ್ರೀಟ್ಮೆಂಟ್ ಥರ್ಡ್ ಡಿಗ್ರಿಯವು ಎಂದು ಗೊತ್ತಾಯಿತು. ನಾನು ಧೈರ್ಯವಾಗಿ ಮತ್ತೊಮ್ಮೆಎದ್ದು ನಿಂತು ಹೇಳಿದೆ.
ನನಗೆ ನೀರು ಬೇಡ. ನಾನು ಹೆಚ್ಚು ಹೊತ್ತು ಕೂರುವುದೂ ಇಲ್ಲ. ನಾನೊಬ್ಬ ನಿರಪರಾಧಿ ಎಂದು ನೀವು ಒಪ್ಪುವ ವರೆಗೆ ನಾನು ಅನ್ನಾಹಾರ ಇಲ್ಲದೆ ಇಲ್ಲೇ ನಿಲ್ಲುತ್ತೇನೆ ಎಂದೆ.
ಪೊಲೀಸರು ಕತೆಯನ್ನು ಮುಂಚೆಯೇ ಹೆಣೆದಿದ್ದರು. ನಾನೊಬ್ಬ ಹರಕೆಯ ಕುರಿಯಾಗಿದ್ದೆ. ಅವರು ಬಿಟ್ಟಿದ್ದ ಸ್ಥಳಗಳಲ್ಲಿ ನನು ಹೆಸರು ಸೇರಿಸಬೇಕಿತ್ತು ಅಷ್ಟೆ. 22 ವರ್ಷ ನರಕದಲ್ಲಿ ಕಳೆದೆ.
ಕೃಪೆ: ಸ್ಕ್ರಾಲ್ ಡಾಟ್ ಇನ್

ದಿನದ ಸುದ್ದಿ
ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ

1.03 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಂದ ಸ್ಥಳ ಪರಿಶೀಲನೆ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ಸುದ್ದಿದಿನ,ಬಳ್ಳಾರಿ:ರಾಜ್ಯ ಸರ್ಕಾರವು 2 ವ಼ರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಾರ್ಯಕ್ರಮ ಆಯೋಜನೆ ಕುರಿತಂತೆ, ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
2023 ರ ಮೇ 20 ರಂದು ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದು ಈಗ ಎರಡು ವರ್ಷ ಪೂರೈಸುತ್ತಿದೆ. ಅಂದೇ ಕ್ಯಾಬಿನೆಟ್ ಸಭೆಯಲ್ಲಿ ಪಂಚ ಗ್ಯಾರಂಟಿ ಜಾರಿಗೆ ಕುರಿತಂತೆ ಚರ್ಚಿಸಲಾಗಿತ್ತು. ಪ್ರಥಮವಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷಿö್ಮ ಮತ್ತು ಯುವನಿಧಿ ಸೇರಿದಂತೆ ಹಂತ-ಹAತವಾಗಿ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಗೆಲ್ಲಿಸಿದಂತಹ ಪ್ರಜಾಪ್ರಭುತ್ವದ ಮತದಾರರಿಗೆ ನಮ್ಮ ಸರ್ಕಾರವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 51 ಸಾವಿರ ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕಳೆದ ವಷÀð ಗ್ಯಾರಂಟಿ ಯೋಜನೆಗಳಿಗಾಗಿಯೇ 52.9 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ವರ್ಷ 50.18 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ, ಅಗತ್ಯಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು.
2024-25 ನೇ ಸಾಲಿನಲ್ಲಿ 3,71,000 ಕೋಟಿ ರೂ. ಬಜೆಟ್ ಗಾತ್ರವಿತ್ತು. 2025-26 ನೇ ಸಾಲಿನಲ್ಲಿ ಬಜೆಟ್ ನ ಗಾತ್ರವನ್ನು 4,09,000 ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು 38,000 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನುಡಿದಂತೆ ನಡೆದ ಸರ್ಕಾರ ನಮ್ಮದು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಕೆಆರ್ಡಿಬಿ ಗೆ 5 ಸಾವಿರ ಕೋಟಿ ರೂ
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರ್ಕಾರವು 5 ಸಾವಿರ ಕೋಟಿ ರೂ. ನೀಡಿದೆ. ಈ ಭಾಗದ 371 (ಜೆ) ವಿಶೇಷ ಸ್ಥಾನಮಾನವನ್ನು ನಮ್ಮ ಸರ್ಕಾರವೇ ಜಾರಿಗೊಳಿಸಿದ್ದು ಎಂದು ಮನನ ಮಾಡಿದ ಅವರು, ಕೇಂದ್ರ ಸರ್ಕಾರವು ತಿದ್ದುಪಡಿ ಬಳಿಕ ವಿಶೇಷ ಸ್ಥಾನಮಾನ ನೀಡಲು ಪ್ರತಿಬಿಂಬಿಸಿತ್ತು, ಆದರೆ ಈವರೆಗೆ ಒಂದು ರೂ. ಕೂಡ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸರ್ಕಾರವು ವಸತಿ ಯೋಜನೆಯಡಿ ಒಂದೇ ಒಂದು ಮನೆ ನೀಡಲಾಗಲಿಲ್ಲ, ಈ ಬಾರಿ ವಸತಿ ಯೋಜನೆಯಡಿ ಮನೆ ವಿತರಿಸುವ ಕುರಿತಂತೆ ವಸತಿ ಸಚಿವರು ಪ್ರಸ್ತಾಪಿಸಿದ್ದಾರೆ ಎಂದರು.
1.03 ಲಕ್ಷ ಹಕ್ಕುಪತ್ರ ವಿತರಣೆ
ನಮ್ಮ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದ್ದು, ಇನ್ನುಮುಂದೆಯೂ ನಡೆಯುತ್ತೇವೆ ಎಂದು ಜನರಿಗೆ ತಿಳಿಯಪಡಿಸಲು ಮೇ 20 ರಂದು ನಡೆಯುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಹಾಡಿ, ಹಟ್ಟಿ ಮತ್ತು ತಾಂಡಾ ಪ್ರದೇಶದ ಕನಿಷ್ಠ 1.03 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಇದರಿಂದ ಜನರಿಗೆ ಸೌಲಭ್ಯ ಸಮರ್ಪಿಸುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರುಗಳನ್ನು ಸಹ ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಹೆಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಸಂಸದ ಈ.ತುಕಾರಾಮ್, ಶಾಸಕರಾದ ಹೆಚ್.ಆರ್.ಗವಿಯಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಶ್ರೀನಿವಾಸ ನಾಯ್ಕ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಮೊಹಮದ್ ನೊಂಗ್ಜಾಯ್ ಅಕ್ರಂ ಅಲಿ ಪಾಷಾ, ಎಸ್ಪಿಗಳಾದ ಡಾ.ಶೋಭರಾಣಿ.ವಿ.ಜೆ., ಶ್ರೀಹರಿಬಾಬು ಸೇರಿದಂತೆ ಅನೇಕರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ

- ಗಿರೀಶ್ ಕುಮಾರ್ ಗೌಡ
ಸುದ್ದಿದಿನ,ವಿಜಯನಗರ:ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದು ಕಳೆದೆರಡು ವರ್ಷಗಳಿಂದ 90 ಸಾವಿರ ಕೋಟಿಗೂ ಹೆಚ್ಚು ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಿದೆ. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ದಿಯಲ್ಲಿ ಗಣನೀಯ ಸಾಧನೆ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.
ಅವರು ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ, ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಕಾರ್ಯಕ್ರಮವನ್ನು ಮೇ.20 ರಂದು ಸರ್ಕಾರದಿಂದ ಏರ್ಪಡಿಸಲಾಗಿದ್ದು, ಇದರ ಪೂರ್ವಸಿದ್ದತೆ ಪರಿಶೀಲನೆಗೆ ಆಗಮಿಸಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, 2023 ರ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಪಕ್ಷ ಸರ್ಕಾರ ರಚನೆ ಮಾಡಿತು. ಮೊದಲ ಸಂಪುಟ ಸಭೆಯಲ್ಲಿಯೇ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತೀರ್ಮಾನಿಸಲಾಯಿತು. ಆದರೆ ವಿರೋಧ ಪಕ್ಷದವರು ಇದರಿಂದ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅನೇಕ ಟೀಕೆಯನ್ನು ಮಾಡಿದವು. ಅಂದು ಟೀಕೆ ಮಾಡಿದವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಇಂದು ನಕಲು ಮಾಡುವಂತಾಗಿದೆ. ಈಗ ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ನಿದರ್ಶನ 2024-25 ರಲ್ಲಿ ಸರ್ಕಾರದ ಬಜೆಟ್ ಗಾತ್ರ ರೂ.3,71,000 ಕೋಟಿ, 2025-26 ರಲ್ಲಿ ಇದು ರೂ.4,09,000 ಕೋಟಿರೂಗಳಿಗೆ ಏರಿಕೆಯಾಗಿರುವುದು ಒಂದು ವರ್ಷದಲ್ಲಿ 38,000 ಸಾವಿರ ಕೋಟಿ ರೂಗಳು ಸರ್ಕಾರದ ಹೆಚ್ಚುವರಿ ಆದಾಯವಾಗಿದೆ. ಬಜೆಟ್ ಮಂಡನೆಯನ್ನು ಸಂಗ್ರಹವಾಗುವ ತೆರಿಗೆ ಮತ್ತು ಆದಾಯವನ್ನು ಆಧರಿಸಿ ಬಜೆಟ್ ಸಿದ್ದಪಡಿಸಲಾಗುತ್ತದೆ. ಆದಾಯ ಇಲ್ಲದೇ ಬಜೆಟ್ ಗಾತ್ರ ಹೆಚ್ಚುತ್ತಿರಲಿಲ್ಲ ಎಂದರು.
ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿ ಕೆಲಸಗಳು ಕುಂಠಿತವಾಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಗ್ಯಾರಂಟಿ ಜೊತೆಗೆ ಅಭಿವೃದ್ದಿಗೂ ಅನುದಾನ ನೀಡಿದ್ದು ಅನೇಕ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇನ್ನೂರು, ಮುನ್ನೂರು ಮತ್ತು ಏಳುನೂರು ಕೋಟಿವರೆಗೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಲ್ಲಿಯವರೆಗೆ ಗ್ಯಾರಂಟಿ ಯೋಜನೆಗಳಿಗಾಗಿ ರೂ.90,000 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ. ವಿರೋಧ ಪಕ್ಷದವರು ಅಭಿವೃದ್ದಿಗೆ ಹಣವಿಲ್ಲ ಎಂದು ಹೇಳುತ್ತಿದ್ದು, 2024-25 ರಲ್ಲಿ ಆಸ್ತಿ ಸೃಜನೆಗಾಗಿ ರೂ.51,000 ಕೋಟಿ ವೆಚ್ಚ ಮಾಡಲಾಗಿದೆ. 2025-26 ರಲ್ಲಿ ಆಸ್ತಿ ಸೃಜನೆಗಾಗಿ ರೂ.83,000 ಕೋಟಿ ವರೆಗೆ ವೆಚ್ಚ ಮಾಡುತ್ತಿದ್ದು ಗ್ಯಾರಂಟಿಗೆ ರೂ.50,018 ಕೋಟಿ ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನವನ್ನೂ ಸಹ ಪೂರಕ ಬಜೆಟ್ಲ್ಲಿ ನೀಡಲಾಗುತ್ತದೆ. ಆದರೆ ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆ ಎಂದರು.
ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಬದ್ದ
ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಕೆಕೆಆರ್ಡಿಬಿಗೆ ಕಳೆದ ಬಜೆಟ್ನಲ್ಲಿ ರೂ.5,000 ಕೋಟಿ ರೂಗಳು ನೀಡಿದ್ದು, ಈ ವರ್ಷವೂ ಅಷ್ಟೇ ಅನುದಾನ ನೀಡಲಾಗಿದೆ. ಆದರೆ ಹಿಂದಿನ ಸರ್ಕಾರ ಕೊನೆ ವರ್ಷ ರೂ.3,000 ಕೋಟಿ ರೂಗಳನ್ನು ಕೆಕೆಆರ್ಡಿಬಿಗೆ ನೀಡಿತ್ತು. 371ಜೆ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು ಇದರ ಅಭಿವೃದ್ದಿಗೆ ಕೇಂದ್ರ ಅನುದಾನ ನೀಡಬೇಕಿತ್ತು. ಆದರೆ ಒಂದು ಬಿಡಿಗಾಸು, ಒಂದೇ ಒಂದು ರೂಪಾಯಿಯನ್ನು ನೀಡಿಲ್ಲ ಎಂದರು. ಮೇ.20 ರಂದು ಹೊಸಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ 1,03,000 ಜನರಿಗೆ ಕಂದಾಯ ಇಲಾಖೆಯಿಂದ ಆಸ್ತಿಯ ಹಕ್ಕುಪತ್ರಗಳನ್ನು ನೀಡಲಾಗುತ್ತದೆ. ಕಳೆದೆರಡು ವರ್ಷಗಳಲ್ಲಿ ಸರ್ಕಾರ ಜನರಿಗಾಗಿ ಮಾಡಿದ ಕೆಲಸಗಳನ್ನು ಜನರಿಗೆ ಸಮರ್ಪಣೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನರು ಬರಲಿದ್ದಾರೆ. ಅಂದಾಜು ಮೂರು ಲಕ್ಷಕ್ಕಿಂತ ಹೆಚ್ಚಿನ ಜನರು ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಭಾಗವಹಿಸುತ್ತಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ವಿರೋಧ ಪಕ್ಷದ ನಾಯಕರನ್ನು ಸಹ ಅಹ್ವಾನಿಸಲಾಗಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳ ಸಮನ್ವಯತೆಯಿಂದ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ಖಾನ್, ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಸಚಿವ ಎನ್.ಎಸ್.ಭೋಸರಾಜು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಯೋಜನಾ ಸಚಿವರಾದ ಡಿ.ಸುಧಾಕರ್, ಸಂಸದ ಈ.ತುಕಾರಾಂ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶೀನಿವಾಸ್, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕಂಪ್ಲಿ ಶಾಸಕ ಗಣೇಶ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ಮೊಣಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಬಳ್ಳಾರಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ಮೊಹಮ್ಮದ್ ನೋಂಗ್ಜಾಯ್ ಅಕ್ರಮ್ ಷಾ ಅಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರೀಹರಿಬಾಬು.ಬಿ.ಎಲ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು.
www.suddidina.com | contact : watsapp 9980346243 |

ದಿನದ ಸುದ್ದಿ
ಚನ್ನಗಿರಿ | ರೈತರಿಗೆ, ವ್ಯಾಪಾರಿಗಳಿಗೆ ರಿಯಾಯಿತಿ ದರದಲ್ಲಿ ಗೋದಾಮುಗಳ ಬಾಡಿಗೆ

ಸುದ್ದಿದಿನ,ದಾವಣಗೆರೆ:ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ರಾಜ್ಯಾದ್ಯಂತ 161 ಉಗ್ರಾಣ ಕೇಂದ್ರಗಳ ಮೂಲಕ ರೈತರಿಗೆ, ರೈತ ಉತ್ಪಾದಕ ಸಂಸ್ಥೆ, ಸರ್ಕಾರಿ ಸಂಸ್ಥೆಗಳಿಗೆ ಹಾಗೂ ವ್ಯಾಪಾರಸ್ಥರಿಗೆ, ಇತರೆ ಸಂಘ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಗೋದಾಮುಗಳನ್ನು ಬಾಡಿಗೆಗೆ ನೀಡಲು ಇಚ್ಚಿಸಿದ್ದು, ಕೃಷಿ ಉತ್ಪನ್ನಗಳನ್ನು ವೈಜ್ಞಾನಿಕ ಸರಕು ಸಂಗ್ರಹಣಾ ಸೌಲಭ್ಯ ಒದಗಿಸುತ್ತಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅದರಂತೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಾಗರಪೇಟೆಯಲ್ಲಿ 3 ಗೋದಾಮುಗಳನ್ನು ಸ್ಥಾಪಿಸಿದ್ದು, ಒಟ್ಟಾರೆ 7 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ ಮತ್ತು ಹೊಸಹಳ್ಳಿಯಲ್ಲಿ 2 ಗೋದಾಮುಗಳನ್ನು ಸ್ಥಾಪಿಸಿದ್ದು, ಒಟ್ಟಾರೆ 10108 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲಾಗದೆ. ಆಸಕ್ತಿಯುಳ್ಳವರು ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಪ್ರಾದೇಶಿಕ ವ್ಯವಸ್ಥಾಪಕರು ದೂರವಾಣಿ ಸಂಖ್ಯೆ 7760966953 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
www.suddidina.com | ಸುದ್ದಿದಿನ.ಕಾಂ|ವಾಟ್ಸಾಪ್|9980346243 |

-
ದಿನದ ಸುದ್ದಿ4 days ago
ದೇಶಾದ್ಯಂತ 11 ದಿನಗಳ ಕಾಲ ತಿರಂಗ ಯಾತ್ರೆ
-
ದಿನದ ಸುದ್ದಿ6 days ago
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನೂರು ಉಗ್ರಗಾಮಿಗಳು ಹತ : ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್
-
ದಿನದ ಸುದ್ದಿ4 days ago
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲಾರವು : ಪ್ರಧಾನಿ ನರೇಂದ್ರ ಮೋದಿ
-
ದಿನದ ಸುದ್ದಿ5 days ago
ದಾವಣಗೆರೆ | ಮುಂಗಾರು ವಿಪತ್ತು ನಿರ್ವಹಣೆಗೆ ಸಿದ್ದತೆ, ಸಿಡಿಲಬ್ಬರ ಮುನ್ನೆಚ್ಚರಿಕೆಗೆ ಆಪ್ ಅಳವಡಿಸಿಕೊಳ್ಳಲು ಸಲಹೆ
-
ದಿನದ ಸುದ್ದಿ5 days ago
ದಾವಣಗೆರೆ | ಡಿ.ಇ.ಎಲ್.ಇಡಿ. ದಾಖಲಾತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಇದೇ 15 ರಂದು ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ4 days ago
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
-
ದಿನದ ಸುದ್ದಿ4 days ago
ದಾವಣಗೆರೆ | ವಾಹನ ತಪಾಸಣೆ ವೇಳೆ ಲಾರಿ ಹರಿದು ಪೋಲಿಸ್ ಸಾವು ; ಲಾರಿಯೊಂದಿಗೆ ಚಾಲಕ ಪರಾರಿ