Connect with us

ದಿನದ ಸುದ್ದಿ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಬರಹ ರೂಪ : ಮಿಸ್ ಮಾಡ್ದೆ ಓದಿ

Published

on

ಯುದ್ದೋನ್ಮಾದ ಸ್ಥಿತಿಯಲ್ಲಿ ನಾವುಗಳು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನೂ ಪೂರ್ತಿಯಾಗಿ ಕೇಳಿಕೊಳ್ಳಬೇಕಿದೆ. ನಮ್ಮ ಯೋಧ ಅಭಿನಂದನ್ ಬಿಡುಗಡೆಯ ಬಗ್ಗೆ ಮಾತ್ರ ಹೇಳಿರುವ ಮಾಧ್ಯಮಗಳು, ವಿಂಗ್ ಕಮಾಂಡರ್ ಯಾಕಾಗಿ ಬಂಧನಕ್ಕೊಳಗಾದ ? ಯೋಧನ ಬಂಧನಕ್ಕೆ ಭಾರತದ ಮಾಧ್ಯಮಗಳು ಹೇಗೆ ಕಾರಣವಾದವು ಎಂಬುದನ್ನೂ ಇಮ್ರಾನ್ ಖಾನ್ ಹೇಳಿದ್ದಾರೆ. ಯುದ್ದ ಬಯಸುವವರು ನಿಮ್ಮ ಶತ್ರುವಿನ ಮಾತುಗಳಿಗೂ ಒಮ್ಮೆ ಕಿವಿಯಾಗಬೇಕಿದೆ. ಮಾಧ್ಯಮಗಳು ಎಲ್ಲವನ್ನೂ ಹೇಳುವುದಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಹೆಮ್ಮೆಯ ಯೋಧ ಅಭಿನಂದನ್ ಬಿಡುಗಡೆಯ ಹೊತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಬರಹ ರೂಪ ಇಲ್ಲಿದೆ.

ಇಮ್ರಾನ್ ಖಾನ್ ಭಾಷಣ

ನಾನು ಪ್ರತಿಪಕ್ಷದ ನಾಯಕರಿಗೆ ಅಭಿವಂದನೆ ಸೂಚಿಸುತ್ತಾ, ಇವತ್ತು ಪಾಕಿಸ್ತಾನ ಎದುರಿಸುತ್ತಿರುವ ಗಂಭೀರ ಸಮಸ್ಯೆಯ ಸಂಧರ್ಭದಲ್ಲಿ ನಾವೆಲ್ಲರೂ ಒಟ್ಟಾಗಿರೋದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದೇನೆ.

ಮಾನ್ಯ ಸ್ಪೀಕರ್ ರವರೇ,

ಹಿಂದೂಸ್ತಾನ ಒಂದು ಹೆಜ್ಜೆ ನಮ್ಮ ಕಡೆ ಇಟ್ಟರೆ ನಾವು ಎರಡು ಹೆಜ್ಜೆ ಅವರ ಕಡೆ ಮುಂದಡಿ ಇಡುತ್ತೇವೆ ಎಂದು ನಾನು ಅಂದು ಘೋಷಿಸಿದ್ದೆ. ಅಂದು ಅಂದರೆ 26 ಜುಲೈಯಂದು ನಾನಿನ್ನೂ ಕೂಡಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿರಲಿಲ್ಲ. ಇರಲಿ, ಇದರ ಹೊರತಾಗಿ ಬಡತನ ನಿರ್ಮೂಲನೆ ಮಾಡುವುದು ನನ್ನ ಗುರಿಯಾಗಿತ್ತು. ಈ ದೇಶದಲ್ಲಿ ಒಂದಷ್ಟು ಜನ ಶ್ರೀಮಂತರಾಗಿದ್ದಾರೆ. ಒಂದಷ್ಟು ಜನ ಹಸಿವೆಯಿಂದ ಬಳಲುವ ಬಡತನದಲ್ಲಿದ್ದಾರೆ. ಈ ಅಸಮಾನತೆಯನ್ನು ನಾವು ಸರಿದೂಗಿಸಬೇಕಿದೆ. ಚೀನಾ ಅದನ್ನು ಯಶಸ್ವಿಯಾಗಿ ಮಾಡಿ ತೋರಿಸಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಚೀನಾ ಯಾವ ರೀತಿ ಮೂಲಸೌಕರ್ಯದಲ್ಲಿ ಅಭಿವೃದ್ದಿ ಹೊಂದಿದೆಯೋ ಅದೇ ರೀತಿ ಕೋಟ್ಯಾಂತರ ಜನರನ್ನು ಹಸಿವಿನಿಂದ ಮುಕ್ತಗೊಳಿಸಿದೆ.

ಚೀನಾದ ಮತ್ತೊಂದು ಸಾಧನೆಯೆಂದರೆ ತನ್ನ ನೆರೆಹೊರೆಯ ದೇಶಗಳ ಮಧ್ಯೆ ಇದ್ದ ಸಮಸ್ಯೆಗಳನ್ನು ಬಹಳ ಪ್ರಭುದ್ದವಾಗಿ ನಿರ್ವಹಿಸಿರುವುದು. ಕಳೆದ 15 ವರ್ಷಗಳಲ್ಲಿ ಅಮೇರಿಕಾವು ಅಫ್ಘಾನಿಸ್ತಾನಕ್ಕೆ ಭಯೋತ್ಪಾಧನೆಯ ಮೇಲೆಯೇ ಒಂದು ಟ್ರಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ. ಆದರೆ ಚೀನಾ ಮಾತ್ರ ಆ ಸಂಧರ್ಭದಲ್ಲಿ ಅಭೂತಪೂರ್ವ ಅಭಿವೃದ್ದಿ ಕಡೆಗೆ ಮಾತ್ರ ಗಮನ ನೀಡಿತು. ರೈಲು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಿಕೊಂಡಿತು. ಆದ್ದರಿಂದ ಯಾರು ಏನೇ ಮಾಡುತ್ತಿರಲಿ, ನಾವು ದೇಶವಾಗಿ ಅಭಿವೃದ್ದಿಯಲ್ಲಿ ಮುಂದುವರೆಯುವುದು ಈಗಿನ ಪ್ರಾಮುಖ್ಯತೆಯಾಗಿದೆ.

ನಾನು ಭಾರತದ ಜೊತೆ ಈ ಹಿಂದಿನಿಂದಲೂ ಸಂಪರ್ಕದಲ್ಲಿದ್ದೆ. ನಾವು ವಿದೇಶಾಂಗ ಸಚಿವರ ಮಾತುಕತೆ ನಡೆಸಬೇಕಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದೆ. ಭಾರತದ ಪ್ರಧಾನಿ ಮೋದಿಯವರು ನಮ್ಮ ಪತ್ರಕ್ಕೆ ಉತ್ತಮ ಸ್ಪಂದನೆಯನ್ನೇ ಕೊಡಲಿಲ್ಲ. ಯಾಕೆ ನಮ್ಮ ಪತ್ರಕ್ಕೆ ಸ್ಪಂದನೆ ನೀಡಿಲ್ಲ ಎಂದು ನಮಗೆ ನಂತರ ಮನವರಿಕೆಯಾಯ್ತು. ಯಾಕೆಂದರೆ ಹಿಂದೂಸ್ತಾನದಲ್ಲಿ ಚುನಾವಣೆ ಬರುತ್ತಿದೆ. ಬಹುಶಃ ಚುನಾವಣೆಯ ಸಂದರ್ಭದಲ್ಲಿ ಮಾತುಕತೆ ಬೇಡ, ಚುನಾವಣೆಯ ನಂತರ ಮಾಡೋಣಾ ಎಂಬ ಕಾರಣಕ್ಕಾಗಿ ಮೋದಿಯವರು ಸ್ಪಂದನೆ ನೀಡದಿರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದೂ ಸುಳ್ಳಾಯ್ತು.

ಮಾನ್ಯ ಸ್ಪೀಕರ್ ರವರೆ,
ಭಾರತದ ಚುನಾವಣೆಗೂ ಮೊದಲು ನಮ್ಮ ಜೊತೆ ಭಾರತ ಮಾತನಾಡಬಹುದು ಎಂದು ನಾವು ಅಂದುಕೊಂಡಿದ್ದೆವು. ಯಾಕೆಂದರೆ ನಾವು ಮಾತುಕತೆಯ ಮೇಲೆ ನಂಬಿಕೆ ಇರಿಸಿದವರಾಗಿದ್ದೆವು. ಆದರೂ ನಮಗೆ ಅನುಮಾನ ಇತ್ತು. ಚುನಾವಣೆಗೂ ಮೊದಲು ಭಾರತದಲ್ಲಿ ಏನಾದರೊಂದು ದೊಡ್ಡ ಘಟನೆಯಾಗುತ್ತದೆ. ಆ ಘಟನೆಯನ್ನು ಚುನಾವಣೆಗಾಗಿ ಬಳಸಲಾಗುತ್ತದೆ ಎಂಬ ಅನುಮಾನ ನನಗೆ ಬಂದಿತ್ತು. ನಾನು ಹೀಗೆ ಅನುಮಾನಿಸುತ್ತಿರುವಾಗಲೇ ಪುಲ್ವಾಮಾ ಘಟನೆ ನಡೆಯಿತು. ಪುಲ್ವಾಮ ಘಟನೆ ನಡೆದು ಅರ್ಧ ಗಂಟೆಯೂ ಆಗಿರಲಿಲ್ಲ. ಆಗಲೇ ಭಾರತವು ಪಾಕಿಸ್ತಾನದತ್ತಾ ಬೆರಳು ತೋರಿಸಿತು. ಈ ಘಟನೆ ನಡೆದ ಸಮಯ ಸಂದರ್ಭ ಯಾವುದು ಎಂಬುದನ್ನೂ ನಾವು ನೋಡಬೇಕಾಗುತ್ತದೆ. ನಮಗೆ ಅತ್ಯಂತ ಪ್ರಮುಖವಾದ ಸೌದಿ ಅರೇಭಿಯಾ ಬೇಟಿ ಇತ್ತು. ಸೌದಿ ಅರೇಬಿಯಾ ಜೊತೆ ಹಲವು ಒಪ್ಪದಗಳಿಗೆ ನಾವು ಸಹಿ ಹಾಕಬೇಕಿತ್ತು.

ನಮಗೆ ಸಿಕ್ಕಂತಹ ಅಭೂತಪೂರ್ವ ಅವಕಾಶವನ್ನು ನಾವು ಈ ರೀತಿಯ ಕೃತ್ಯ ಮಾಡಿ ನಮಗೆ ನಾವೇ ಹಾಳುಗೆಡವಿ ಮಾಡುವುದಾದರೂ ಏನಿದೆ ? ನಮಗೆ ಇದರಿಂದ ಏನು ಸಿಗುತ್ತದೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಅಥವಾ ಪಾಕಿಸ್ತಾನ ಈ ಘಟನೆಯಿಂದ ಲಾಭ ಮಾಡಿಕೊಳ್ಳುವುದಾದರೂ ಏನನ್ನು ? ಆ ಕಾರಣದಿಂದಲೇ ನಾನು ಭಾರತವನ್ನು ಉದ್ದೇಶಿಸಿ ಮಾತನಾಡಿದೆ. ನೀವು ನಮಗೆ ಯಾವುದೇ ರೀತಿಯ ಮಾಹಿತಿಗಳನ್ನು ನೀಡಿದ ಸಂದರ್ಭದಲ್ಲಿ ನಾವು ಆರೋಪಿಗಳ ಪತ್ತೆಗೆ ಕೆಲಸ ಶುರು ಮಾಡುತ್ತೇವೆ ಎಂದು ಘೋಷಿಸಿದ್ದೆ. ಆದರೆ ಭಾರತ ತನ್ನ ಆರೋಪಕ್ಕೆ ಪೂರಕವಾದ ಮಾಹಿತಿ ರವಾನಿಸಲಿಲ್ಲ.

ಈ ಸದನದಲ್ಲಿ ಇರುವ ಎಲ್ಲಾ ಪಕ್ಷಗಳೂ ಕೂಡಾ ಪಾಕಿಸ್ತಾನದೊಳಗಡೆ ಸಶಸ್ತ್ರ ಹೋರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಶನಲ್ ಅ್ಯಕ್ಷನ್ ಪ್ಲ್ಯಾನ್ ಗೆ ಸಹಿ ಹಾಕಿದ್ದೇವೆ. ನಾವು ಸಹಿ ಹಾಕಿದಂತೆ ಯಾವುದೇ ಸಶಸ್ತ್ರ ಹೋರಾಟವನ್ನು ನಾವು ಬೆಂಬಲಿಸುವುದಿಲ್ಲ. ಆದ್ದರಿಂದಲೇ ನೀವು ಮಾಹಿತಿ ಕೊಟ್ಟರೆ ನಾವು ಆರೋಪಿಗಳ ಪತ್ತೆಗೆ ಕೆಲಸ ಮಾಡುತ್ತೇವೆ ಎಂದು ಭಾರತಕ್ಕೆ ಕೇಳಿಕೊಂಡಿದ್ದೆವು. ಆದರೆ ಅದ್ಯಾವುದನ್ನೂ ಭಾರತ ಮಾಡದೇ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಿಸಿತು.

ನಾನು ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಧ್ಯಮಗಳನ್ನು ಅಭಿನಂದಿಸುತ್ತೇನೆ. ಈ ವಿಷಮ ಪರಿಸ್ಥಿತಿಯಲ್ಲಿ ಪಾಕ್ ಮಾಧ್ಯಮಗಳು ಬಹಳ ಸಂಯಮದಿಂದ, ಜವಾಬ್ದಾರಿಯಿಂದ ವರ್ತಿಸಿದವು. ಕಳೆದ 15 ವರ್ಷಗಳಿಂದ ಪಾಕ್ ಮಾಧ್ಯಮಗಳು ಹಲವು ಬಾಂಬ್ ಸಂಘರ್ಷಗಳನ್ನು ಕಂಡಿದೆ. ಬಾಂಬಿನಿಂದ ಎಷ್ಟು ಪ್ರಾಣಹಾನಿಯಾಗುತ್ತದೆ ? ಆಸ್ಪತ್ರೆಯಲ್ಲಿ ಎಷ್ಟು ಜೀವಕ್ಕಾಗಿ ನರಳಬೇಕಾಗುತ್ತದೆ ? ಆಸ್ತಿಪಾಸ್ತಿ ಪ್ರಾಣಹಾನಿಯನ್ನು ಪಾಕ್ ಮಾಧ್ಯಮಗಳು ಕಣ್ಣಾರೆ ಕಂಡಿದ್ದವು. ಆದ್ದರಿಂದ ಪಾಕ್ ಮಾಧ್ಯಮಗಳು ಯುದ್ದವನ್ನು ಬಯಸದೇ ಬಹಳ ಪ್ರಭುದ್ದವಾದ ವರ್ತನೆಯನ್ನು ತೋರಿಸಿದವು.

ಆದರೆ ನಾನು ಬಹಳ ಬೇಜಾರಿನಿಂದ ಒಂದು ಮಾತನ್ನು ಹೇಳಬೇಕಾಗುತ್ತದೆ. ಹಿಂದೂಸ್ತಾನ್ ಮಾಧ್ಯಮಗಳು ಯಾವ ರೀತಿ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಾಣ ಮಾಡಿದವು ಎಂದರೆ, ಪಾಕಿಸ್ಥಾನದಲ್ಲಿ ಈಗ ಏನಾದರೂ ಆಗಿಯೇ ಬಿಡುತ್ತದೆ ಎಂದು ನಮಗೇ ಅನುಮಾನ ಬರಲಾರಂಭಿಸಿತು. ನೀವೇನಾದರೂ ಮುಂದುವರೆದರೆ ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸರ್ವಸನ್ನದ್ದವಾಗಿದೆ ಎಂಬ ವಿಶ್ವಾಸ ನನಗಿತ್ತು.

ಎರಡು ದಿನದ ಹಿಂದೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಅಂತರರಾಷ್ಟ್ರೀಯ ಕಾನೂನನ್ನು ಭಾರತ ಉಲ್ಲಂಘಿಸಿತು. ಯು ಎನ್ ಚಾರ್ಟರ್ ನ ಉಲ್ಲಂಘನೆ ಮಾಡಿತು. ಪುಲ್ವಾಮಾದ ಬಗ್ಗೆ ಯಾವುದೇ ಮಾಹಿತಿ ನೀಡದೇ ಪಾಕಿಸ್ತಾನಕ್ಕೆ ದಾಳಿ ಮಾಡುವ ಹಿಂದೆ ಭಾರತದ ಚುನಾವಣೆಯಿದೆ ಎಂಬುದು ನಮಗೆ ಮನವರಿಕೆಯಾಗಿದೆ. ಪಾಕಿಸ್ಥಾನವು ಪುಲ್ವಾಮ ಘಟನೆ ಸಂಬಂಧ ಏನೆಲ್ಲಾ ಸಹಕಾರವನ್ನು ಭಾರತಕ್ಕೆ ನೀಡಬೇಕೋ ಅದನ್ನು ನೀಡಲು ಸಿದ್ದವಿತ್ತು. ಮತ್ತೊಂದು ಕಡೆ ಪಾಕಿಸ್ತಾನ ಅಫ್ಘಾನಿಸ್ತಾನದ ಸಮಸ್ಯೆಯಿದೆ. ಪಾಕಿಸ್ತಾನ ಮಾತುಕತೆಯ ಮೂಲಕ ಅದನ್ನೂ ಪರಿಹರಿಸಲು ಅವಕಾಶ ಸಿಕ್ಕಿದಾಗ ಮಾಡಿದ್ದೇವೆ. ಈ ರೀತಿಯ ಪ್ರಯತ್ನದಿಂದಾಗಿಯೇ ಮಾತುಕತೆ ಯಶಸ್ವಿಯಾಗಿದೆ. ಈಗ ನಮಗೆ ಭಾರತ ಒಂದು ರೀತಿಯ ಬೆದರಿಕೆ ಒಡ್ಡುತ್ತಿದೆ.

ಹೌದು. ಪಾಕಿಸ್ತಾನದ ಮೇಲೆ ದಾಳಿಯಾಗಿದೆ. ನಮಗೆ 3.30 ರ ವೇಳೆಗೆ ಪಾಕಿಸ್ತಾನದ ಮೇಲೆ ದಾಳಿಯಾಗಿದೆ ಎಂದು ತಿಳಿಯಿತು. ಸೇನಾ ಮುಖ್ಯಸ್ಥ, ವಾಯುಸೇನಾ ಮುಖ್ಯಸ್ಥರ ಜೊತೆ ತಕ್ಷಣ ಮಾತನಾಡಿದೆ. ನಾವು ಭಾರತಕ್ಕೆ ಪ್ರತ್ಯುತ್ತರ ಕೊಡುವುದೋ? ಬೇಡ್ವೋ ? ಎಂಬ ಬಗ್ಗೆ ಚರ್ಚೆ ಮಾಡಿದೆವು. ಏನಾದರೂ ಸಾವು ನೋವುಗಳು ಸಭಂಭವಿಸಿದೆಯೇ ? ಆಸ್ತಿಪಾಸ್ತಿ ನಷ್ಠವಾಗಿದೆಯೇ ಎಂದು ಸೇನಾಧಿಕಾರಿಗಳನ್ನು ಕೇಳಿದೆ. ಯಾವುದೇ ಸಾವುನೋವುಗಳು ಆಗಿಲ್ಲ ಎಂದು ಸೇನಾಧಿಕಾರಿಗಳು ನನಗೆ ಮಾಹಿತಿ ನೀಡಿದರು.

ಆದ್ದರಿಂದ ನಾವು ಭಾರತದ ದಾಳಿಗೆ ಪ್ರತಿಕ್ರಿಯೆ ನೀಡದೇ ಸುಮ್ಮನಿರುವ ಇರುವ ಮಹತ್ವದ ನಿರ್ಧಾರಕ್ಕೆ ಬಂದೆವು. ಪಾಕಿಸ್ತಾನಕ್ಕೆ ದಾಳಿಯಾದ್ರೂ ಸುಮ್ಮನಿದ್ದೀರಿ ಯಾಕೆ ಎಂದು ನನ್ನ ರಾಷ್ಟ್ರದ ಜನರ ಪ್ರಶ್ನೆಯಾಗಿತ್ತು. ಆದರೆ “ದಾಳಿಯಿಂದ ಯಾವುದೇ ಸಾವು ನೋವುಗಳು ಆಗದೇ ಇರುವಾಗ ಪ್ರತಿದಾಳಿ ಮಾಡಿ ಸಾವುನೋವುಗಳನ್ನು ಸೃಷ್ಟಿಸುವುದು ತಪ್ಪಾಗುತ್ತದೆ”. ಆದ್ದರಿಂದ ಒಂದು ಜವಾಬ್ದಾರಿಯುತ ಪ್ರಭುತ್ವವಾಗಿ ಯಾವುದೇ ಪ್ರತ್ಯುತ್ತರವನ್ನು ಕೊಡದೇ ಇರೋದಕ್ಕೆ ನಾವು ನಿರ್ಧರಿಸಿದೆವು.

ಆದರೆ ಭಾರತ ಯುದ್ದೋನ್ಮಾದ ಸ್ಥಿತಿಯಲ್ಲಿತ್ತು. ಮರುದಿನ ನಾವು ಭಾರತದ ಮೇಲೆ ದಾಳಿ ಮಾಡಿದೆವು. ನಮಗೂ ದಾಳಿ ಮಾಡುವ ಸಾಮರ್ಥ್ಯ ಇದೆ. ನೀವು ದಾಳಿ ಮಾಡಿದರೆ ಅದಕ್ಕೆ ಉತ್ತರ ನೀಡಲು ನಾವು ಸಿದ್ದರಿದ್ದೇವೆ ಎಂದು ತೋರಿಸಿಕೊಡುವುದಕ್ಕಾಗಿ ಈ ದಾಳಿ ಮಾಡಬೇಕಾಯಿತು. ಅದೊಂದೇ ಕಾರಣಕ್ಕಾಗಿ ನಾವು ದಾಳಿ ನಡೆಸಿದೆವು. ನಮ್ಮ ದಾಳಿ ಯಾವುದೇ ನಷ್ಠದ ಗುರಿಯನ್ನು ಹೊಂದಿರಲಿಲ್ಲ. ಯಾವುದೇ ಜೀವಹಾನಿಯ ಟಾರ್ಗೆಟ್ ದಾಳಿ ಅದಾಗಿರಲಿಲ್ಲ. ಭಾರತದ ಯುದ್ದ ವಿಮಾನವನ್ನು ಹಿಮ್ಮೆಟ್ಟಿಸುವ ಸಂದರ್ಭ ದಲ್ಲಿ ಭಾರತದ ವಿಮಾನ ಪತನವಾಯ್ತು. ಇದಾದ ಬಳಿಕ ನಿನ್ನೆಯೂ ಸಂಜೆ ನಾನು ನರೇಂದ್ರ ಮೋದಿಗೆ ಸಂಪರ್ಕ ಸಾಧಿಸಲು ದೂರವಾಣಿ ಕರೆ ಮಾಡಿದೆ.

ಯಾಕೆಂದರೆ ನಾವು ಯಾರೊಂದಿಗೂ ಶತೃತ್ವವನ್ನು ಬೆಳೆಸಲು ಇಷ್ಟಪಡುವುದಿಲ್ಲ ಎಂದು ಹೇಳಬೇಕಿತ್ತು. ಆದರೆ ಮೋದಿಯವರು ಸಂಪರ್ಕಕ್ಕೆ ಸಿಗಲಿಲ್ಲ. ಅವರ ಹೆದರಿಸುವ ತಂತ್ರಗಾರಿಕೆಗಳಿಗೆ ನಾವು ಬೆದರಿಲ್ಲ ಎನ್ನುವುದನ್ನೂ ಈ ವೇದಿಕೆಯ ಮೂಲಕ ಸ್ಪಷ್ಟಪಡಿಸುತ್ತೇನೆ. ನಮ್ಮಲ್ಲಿ ಸದೃಢವಾದ ಸೇನಾ ಸಶಸ್ತ್ರಬಲವಿದೆ. ಮಾತುಕತೆ ಮಾಡದೇ ಇರುವಂತಹ ಭಾರತದ ಮನಸ್ಥಿತಿ ನಮ್ಮದಲ್ಲ. ನಮ್ಮ ವಿದೇಶಾಂಗ ಸಚಿವರೂ ನಿನ್ನೆ ಜಗತ್ತಿನ ಹಲವು ದೇಶಗಳ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಮಾತುಕತೆಗಳು ಶಾಂತಿಯ ಉದ್ದೇಶವನ್ನು ಮಾತ್ರ ಹೊಂದಿದೆ.

ಮಾನ್ಯ ಸ್ಪೀಕರ್ ರವರೇ,
ಈ ಎಲ್ಲಾ ಘಟನೆಗಳು, ಸಮಸ್ಯೆಗಳಿಗೆ ಮೂಲ ಕಾರಣ‌‌ ಕಾಶ್ಮೀರ. ಭಾರತವನ್ನು ನಾನು ಕೇಳುತ್ತಿದ್ದೇನೆ. ಕಾಶ್ಮೀರ ವಿಷಯದಲ್ಲಿ ನಿಮ್ಮನ್ನು ನಾಗರಿಕರು ಪ್ರಶ್ನೆಯೇ ಮಾಡಬಾರದೇ ? ಹಲವು ವರ್ಷಗಳಿಂದ ಕಾಶ್ಮೀರದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಿಮ್ಮ ವ್ಯವಸ್ಥೆಯ ಅಪರೇಷನ್ ಗಳಿಂದ, ತಂತ್ರಗಾರಿಕೆಗಳಿಂದ ಕಾಶ್ಮೀರದ ಜನ ಹೈರಾಣಾಗಿದ್ದಾರೆ.

ಹಿಂದೂಸ್ತಾನದ ಹೋರಾಟಗಾರರೊಬ್ಬರ ( ಬಹುಶಃ ಭಗತ್ ಸಿಂಗ್) ಮಾತನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ. ನೀವು ನಮ್ಮನ್ನು ಜೈಲಿಗೆ ಹಾಕಬಹುದೇ ಹೊರತು ನಮ್ಮ ಸಿದ್ದಾಂತಗಳನ್ನು ಜೈಲಿಗೆ ಹಾಕಲಾಗಲ್ಲ. ಕಾಶ್ಮೀರದಲ್ಲೊಂದು ಪ್ರತ್ಯೇಕತಾ ಚಳುವಳಿಯಿದೆ. ನೀವು ಎಷ್ಟೇ ಹತ್ತಿಕ್ಕಿದರೂ ಅದು ಬೆಳೆಯುತ್ತಿದೆ. 20 ವರ್ಷದ ಹಿಂದೆ ನಾನು ಹಿಂದೂಸ್ತಾನದ ಕಾಂಕ್ಲೇವ್ ನಲ್ಲಿ ಭಾಗಿಯಾಗಿದ್ದೆ. ಆ ಸಮಾವೇಶದಲ್ಲಿ ಕಾಶ್ಮೀರದ ನಾಯಕರು ಯಾರೂ ಕೂಡಾ ಭಾರತದ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಈಗಲೂ ಕೂಡಾ ಕಾಶ್ಮೀರದ ಯಾವೊಬ್ಬ ನಾಯಕನೂ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. ಕಾಶ್ಮೀರದ ಮೇಲೆ ಭಾರತದ ದಾಳಿಯಿಂದಾಗಿ ಅಲ್ಲಿ ಆಜಾದಿ ಹೊರತುಪಡಿಸಿ ಬೇರೆ ಧ್ವನಿ ಕೇಳುತ್ತಿಲ್ಲ. ಅವರಿಗೆ ಆಜಾದಿ ಬೇಕಾಗಿದೆ.

ನಾನು ಹಿಂದೂಸ್ತಾನಿಯರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯಾವ ಸಾಕ್ಷ್ಯವೂ ಇಲ್ಲದೆ ನೀವು ಪಾಕಿಸ್ತಾನದತ್ತಾ ಬೆರಳು ತೋರಿಸಿದಿರಿ. ಆದರೆ ನೀವು ಉತ್ತರ ಕಂಡುಕೊಳ್ಳಿ. ನಿಮ್ಮದೇ ದೇಶದ ಯುವಕನೊಬ್ಬ ಭಯೋತ್ಪಾದಕನಾಗಿ ಮಾನವ ಬಾಂಬ್ ಆಗಿ ಪರಿವರ್ತನೆಗೊಳ್ಳಲು ಕಾರಣವಾದ ಅಂಶಗಳು ಯಾವುದು ? ಅದಕ್ಕೆ ಕಾರಣರು ಯಾರು ? ನಿಮ್ಮದೇ ಯುವಕ ಬಾಂಬ್ ಕಟ್ಟಿಕೊಂಡು ಸೇನೆಯನ್ನೇ ಟಾರ್ಗೆಟ್ ಯಾಕೆ ಮಾಡಿದ ? ಯಾವ ಮನಸ್ಥಿತಿಗೆ ಆತ ತಲುಪಿರಬಹುದು ? ಹಿಂದೂಸ್ತಾನದ ಜನ ಇದನ್ನು ಯೋಚಿಸಿ ಉತ್ತರ ಕಂಡುಕೊಳ್ಳಬೇಕಿದೆ.

ಭಾರತದ ಏಕಮುಖ ನೀತಿಯಿಂದಾಗಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಐನ್ ಸ್ಟೈನ್ ಥಿಯರಿಯಾಗಿರುವ ಡಿಫಿನೇಷನ್ ಆಫ್ ಇನ್ಸೇನಿಟಿಯಂತೆ ಮಾಡಿದ್ದನ್ನೇ ಪುನರಾವರ್ತನೆ ಮಾಡಿ ಹೊಸ ಫಲಿತಾಂಶ ಬಯಸೋದು ಎಂಬಂತಾಗಿದೆ. ನಾನು ಅರ್ಥಮಾಡಿಕೊಂಡಂತೆ ಕಾಶ್ಮೀರದ ಭವಿಷ್ಯದ ಬಗ್ಗೆ ಭಾರತದಲ್ಲಿ ಈಗ ಆರೋಗ್ಯಕರ ಚರ್ಚೆಯ ಅವಶ್ಯಕತೆಯಿದೆ. ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕಾಶ್ಮೀರದ ಪರಿಸ್ಥಿತಿ ಹೀಗೇ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುತ್ತೆ. ಅದರ ಹೊಣೆಯನ್ನೂ ಪಾಕಿಸ್ತಾನದ ಮೇಲೆ ಹೊರಿಸುತ್ತಾರೆ. ಯಾವುದೇ ಸಾಕ್ಷ್ಯ ಇಲ್ಲದೇ ಪಾಕಿಸ್ತಾನದ ಮೇಲೆ ಕ್ರಮಕ್ಕೆ ಒತ್ತಡ ಹೇರಲಾಗುತ್ತದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ತೀವ್ರವಾದದ ಹೆಸರಿಗೆ ಕಟ್ಟಲಾಗುತ್ತದೆ. ಈ ರೀತಿಯ ಭಯೋತ್ಪಾದಕ ದಾಳಿಗಳಿಗೆ ಧರ್ಮದ ಹೆಸರನ್ನು ಸೇರಿಸಲಾಗುತ್ತಿದೆ.

ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಈ ಜಗತ್ತಿಗೆ ಆತ್ಮಾಹುತಿ ದಾಳಿಯನ್ನು ಮೊದಲು ಪರಿಚಯಿಸಿದ್ದು ತಮಿಳು ಟೈಗರ್ಸ್. ಅವರು ಹಿಂದೂಗಳು. ಅವರ ಆತ್ಮಾಹುತಿ ದಾಳಿಗೆ ಹಿಂದೂ ಧರ್ಮ ಕಾರಣವಲ್ಲ. ವ್ಯವಸ್ಥೆಯಿಂದ ಹತಾಶೆಗೊಂಡಿರುವುದೇ ಆತ್ಮಾಹುತಿಯಂತಹ ಕೆಲಸಗಳಿಗೆ ಕೈ ಹಾಕಲು ಪ್ರೇರೇಪಿಸುತ್ತದೆ. ಆತನ ಒಳಗಿರುವ ತುಮುಲ, ಆಕ್ರೋಶ, ಹತಾಶೆಗಳು ಆತನನ್ನು ಮಾನವ ಬಾಂಬ್ ಆಗಿ ಪರಿವರ್ತನೆ ಮಾಡುತ್ತದೆ.

ನಾನು ಇಂಡಿಯಾವನ್ನು ಕ್ರಿಕೆಟ್ ನ ಕಾರಣದಿಂದಾಗಿ ಹತ್ತಿರದಿಂದ ಬಲ್ಲೆ. ನನಗೆ ಹಿಂದೂಸ್ತಾನದಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಕಾಶ್ಮೀರದಲ್ಲಿ ವ್ಯವಸ್ಥೆ ಏನು ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟು ಭಾರತದ ಜನ ಬುದ್ದಿವಂತರಿದ್ದಾರೆ. ಈಗ ಇರುವ ಸರಕಾರ ಯಾಕೆ ಯುದ್ದವನ್ನು ಬಯಸುತ್ತಿದೆ ಎಂಬುದನ್ನೂ ಹಿಂದೂಸ್ತಾನದ ಜನ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಬಹಳಷ್ಟು ಹಿಂದೂಸ್ತಾನಿಗಳೇ ಯುದ್ದದ ವಿರುದ್ದ ಇದ್ದಾರೆ. ದುರಂತವೆಂದರೆ ಟಿವಿಗಳಲ್ಲಿ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಿಸಲಾಗಿದೆ. ಪಾಕಿಸ್ತಾನದ ಮಾಧ್ಯಮಗಳು ನೋಡಿದಷ್ಟು ಯುದ್ದ, ಸಾವುನೋವುಗಳನ್ನು ಭಾರತೀಯ ಮಾಧ್ಯಮಗಳು ನೋಡಿದ್ದರೆ ಬಹುಷಃ ಅವರೂ ಕೂಡಾ ಯುದ್ದವನ್ನು ಬಯಸುತ್ತಿರಲಿಲ್ಲ. ಯುದ್ದದಲ್ಲಿ ಯಾರಿಗೂ ಗೆಲುವಿಲ್ಲ ಎಂಬುದನ್ನು ಭಾರತದ ಮಾಧ್ಯಮಗಳು ತಿಳಿಯಬೇಕು. ಎರಡೂ ಸಶಸ್ತ್ರ ಬಲಾಬಲ ಹೊಂದಿದ ರಾಷ್ಟ್ರಗಳ ಮಧ್ಯೆ ಯುದ್ದವನ್ನು ಯೋಚಿಸಲೇಬಾರದು.

ಭಾರತ ಮತ್ತು ನಮ್ಮ ಮಧ್ಯೆ ತಪ್ಪು ಲೆಕ್ಕಾಚಾರ ನಡೆಯಬಾರದು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆಯೂ ಈ ರೀತಿ ತಪ್ಪು ಲೆಕ್ಕಾಚಾರ ಇತ್ತು. ಜಗತ್ತಿನ ಪವರ್ ಫುಲ್ ರಾಷ್ಟ್ರಕ್ಕೂ ಕೂಡಾ ಅಫ್ಘಾನಿಸ್ಥಾನದ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ. ಈಗ ಅವರೂ ಮಾತುಕತೆ ಬಂದಿರೋದರಿಂದ ಸರಿಯಾಗುತ್ತಿದೆ. ಯುದ್ದ ಎನ್ನುವುದು ಸಮಸ್ಯೆಗೆ ಪರಿಹಾರವಲ್ಲ. ಭಾರತ ಯುದ್ದದ ಪರಿಸ್ಥಿತಿ ನಿರ್ಮಾಣ ಮಾಡಿದ್ರೆ ನಾವು ಪ್ರತ್ಯುತ್ತರ ಕೊಡಬೇಕಾಗುತ್ತದೆ. ಇದು ಮುಂದುವರೆದು ಎಲ್ಲಿಯವರೆಗೆ ಹೋಗಬಹುದು ?

ಪಾಕಿಸ್ತಾನವು ಅಣ್ವಸ್ತ್ರದ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಭಾರತದ ರಾಜಕಾರಣಿಗಳು ಹೇಳುತ್ತಾರೆ. ನ್ಯೂಕ್ಲಿಯರ್ ಬ್ಲಾಕ್ ಮೇಲ್ ಅನ್ನುವುದರ ಅರ್ಥ ಏನು ? ನಮ್ಮಲ್ಲಿ ನ್ಯೂಕ್ಲಿಯರ್ ವೆಪನ್ ಇದೆ ಅನ್ನೊ ಕಾರಣಕ್ಕಾಗಿ ನಾವು ಭಾರತಕ್ಕೆ ಸವಾಲೊಡುತ್ತಿದ್ದೇವೆ ಎಂದರ್ಥವೇ ?

ಮಾನ್ಯ ಸ್ಪೀಕರ್ ರವರೇ,
ನಾನು ಸಂಸತ್ತಿನಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಪಾಕಿಸ್ತಾನ ಶಾಂತಿ ಬಯಸುವ ರಾಷ್ಟ್ರವಾಗಿದೆ. ಶಾಂತಿ ಇದ್ದರೆ ಅಭಿವೃದ್ದಿಯಾಗುತ್ತೆ. ಅಭಿವೃದ್ದಿಯಾದರೆ ಉದ್ಯೋಗ ಸೃಷ್ಟಿಯಾಗುತ್ತೆ. ಆ ಮೂಲಕ ದೇಶ ಆರ್ಥಿಕವಾಗಿಯೂ ಬಲಿಷ್ಠವಾಗುತ್ತದೆ. ಯುದ್ದ ಎನ್ನುವುದು ಪಾಕಿಸ್ತಾನಕ್ಕಾಗಲೀ, ಭಾರತಕ್ಕಾಗಿ ಲಾಭ ತಂದುಕೊಡುವುದಿಲ್ಲ. ಈ ಕಾರಣಕ್ಕಾಗಿ ನಾನು ನಿನ್ನೆಯೂ ನರೇಂದ್ರ ಮೋದಿ ಹತ್ರ ಮಾತನಾಡಲು ಪ್ರಯತ್ನಿಸಿದೆ. ಶಾಂತಿಗಾಗಿ ಇದನ್ನೆಲ್ಲಾ ಮಾಡಲು ಪ್ರಯತ್ನಿಸಿದೆನೇ ಹೊರತು ಅದು ನಮ್ಮ ದೌರ್ಬಲ್ಯವಲ್ಲ. ಪಾಕಿಸ್ತಾನದ ಈ ನಡೆ ತಪ್ಪು ಸಂದೇಶ ರವಾನಿಸಬಾರದು.

ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕಿದೆ. ಸ್ವಾತಂತ್ರ ಪೂರ್ವದಲ್ಲಿ ಬಹದೂರ್ ಷಾ ಝಫರ್ ಮತ್ತು ಟಿಪ್ಪುವನ್ನು ಈ ದೇಶ ಕಂಡಿದೆ. ಬಹದೂರ್ ಷಾ ಝಫರ್ ಗೆ ಗುಲಾಮಗಿರಿ ಮತ್ತು ಸಾವಿನ ಆಯ್ಕೆಯನ್ನು ಇಟ್ಟಾಗ ಅವರು ಗುಲಾಮಗಿರಿಯನ್ನು ಆಯ್ಕೆ ಮಾಡಿಕೊಂಡರು. ಮತ್ತೊಂದೆಡೆ ಟಿಪ್ಪು ಸುಲ್ತಾನ್ ಕೂಡಾ ಇದ್ದರು. ಸಾವು ಮತ್ತು ಗುಲಾಮಗಿರಿಯ ಆಯ್ಕೆ ಟಿಪ್ಪುವಿಗೆ ಎದುರಾದಾಗ ಟಿಪ್ಪು ಸಾವನ್ನು ಒಪ್ಪಿಕೊಂಡ. ಈ ನೆಲದ ಹೀರೋ ಟಿಪ್ಪು ಸುಲ್ತಾನ್ ಆಗಿರುತ್ತಾರೆ.

ನಾವೂ ಕೂಡಾ ಪುಟ್ಟ ರಾಷ್ಟ್ರವಾದರೂ ಸ್ವತಂತ್ರದ ಪರವೇ ಇರುತ್ತೇವೆ. ಗುಲಾಮಗಿರಿಯನ್ನು ಒಪ್ಪಲ್ಲ. ಆದ್ದರಿಂದ ಭಾರತ ಮತ್ತು ಮೋದಿಗೆ ಹೇಳಲು ಬಯಸುವುದೇನೆಂದರೆ, ಇದು ಹೀಗೆ ಮುಂದುವರೆಯುವುದು ಬೇಡ. ನನಗೂ ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳು ಗೊತ್ತು. ನಿನ್ನೆ ರಾತ್ರಿ ಭಾರತದ ಸೈನಿಕರು ಮಿಸೈಲ್ ದಾಳಿ ಮಾಡಲು ಮುಂದಾದಾಗ ಅದನ್ನು ನಮ್ಮ ಸೈನಿಕರು ಹೇಗೆ ವಿಫಲಗೊಳಿಸಿದ್ರು ಎಂಬುದನ್ನೂ ನೋಡಿದ್ದೇನೆ. ಆದ್ದರಿಂದಲೇ ಸಂಸತ್ತಿನ ಮೂಲಕ ಭಾರತಕ್ಕೆ ಮನವಿ ಮಾಡುತ್ತಿದ್ದೇವೆ – ಇದನ್ನು ಹೀಗೆ ಇನ್ನು ಮುಂದುವರೆಸಬೇಡಿ.

ನಿಮ್ಮ‌ಕ್ರಿಯೆಗೆ ಪ್ರತಿಕ್ರಿಯೆ ಕೊಡುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗುತ್ತದೆ. ಎರಡು ಸಮಬಲದ ಸಶಸ್ತ್ರವನ್ನು ಹೊಂದಿರುವ ರಾಷ್ಟ್ರಗಳು ಯುದ್ದದ ಬಗ್ಗೆ ಯೋಚಿಸಬಾರದು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಕೂಡಾ ಕಾರ್ಯತತ್ಪರವಾಗಬೇಕು.
ನಾನು ಹೇಳೋದನ್ನು ಮರೆತುಬಿಟ್ಟೆ. ಭಾರತ ಸೈನಿಕ ನಮ್ಮ ವಶದಲ್ಲಿ ಇದ್ದಾನೆ. ನಾವು ಶಾಂತಿಯ ದ್ಯೋತಕವಾಗಿ ನಮ್ಮ ವಶದಲ್ಲಿರುವ ಭಾರತದ ಸೈನಿಕನನ್ನು ನಾಳೆ ಬಿಡುಗಡೆಗೊಳಿಸುತ್ತೇವೆ.

ಬರಹ ರೂಪ : ನವೀನ್ ಸೂರಿಂಜೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲ ಪರಿಶ್ಟಿಷ್ಟ ವರ್ಗದ ವಸತಿ ಶಾಲೆಗಳಿಗೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸೌಧ ಮುಂಭಾಗದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ, ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬಜೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಹಣ ನಿಗದಿಮಾಡಿತ್ತು ಎಂದರು.

ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಯಾಗದ ಹೊರತು, ಸಮಾನತೆ ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ರಾಜಾನಹಳ್ಳಿ ವಾಲ್ಮೀಕಿ ಸಮುದಾಯ ಮಠದ ಜಗದ್ಗುರು ಪ್ರಸನ್ನಾನಂದಪುರಿ, ಸಚಿವರಾದ ಸತೀಶ್ ಜಾರಕಿಹೊಳ್ಳಿ, ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್ ಮೊದಲಾದವರು ಹಾಜರಿದ್ದರು.

ವಾಲ್ಮೀಕಿ ಪ್ರಶಸ್ತಿ

ಜಾನುವಾರು ರಕ್ಷಣೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಹೋರಾಟ ಮಾಡಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಡಾ. ಎಸ್. ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಮೂಲದ ಕೆ.ಎಸ್. ಮೃತ್ಯುಂಜಯ,ವಿಜಯನಗರ ಜಿಲ್ಲೆಯ ರತ್ಮಮ್ಮ ಬಿ. ಸೋಗಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಪ್ರಶಸ್ತಿ, 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂಪಾಯಿ ನಗದು ಒಳಗೊಂಡಿದೆ.

ರಾಜ್ಯದಲ್ಲಿ ವಾಲ್ಮೀಕಿ ಜಯಂತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ, ಬದುಕಿನ ಮೌಲ್ಯಗಳನ್ನು ಬಿಂಬಿಸುವ ರಾಮಾಯಣ ಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿ ಸದಾ ಸ್ಮರಣೀಯರಾಗಿದ್ದಾರೆ ಎಂದರು.

ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಮಹರ್ಷಿಗಳ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸಂದೇಶವನ್ನು ಅರಿಯಬೇಕಿದೆ ಎಂದರು.

ಹಾಸನದಲ್ಲಿಂದು ಆಯೋಜಿಸಲಾಗಿದ್ದ ಆಕರ್ಷಕ ಮೆರವಣಿಗೆಗೆ ಶಾಸಕ ಸ್ವರೂಪ ಪ್ರಕಾಶ್ ಚಾಲನೆ ನೀಡಿದರು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.
ಕೋಲಾರದಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ, ನಂತರ ಡೊಳ್ಳು ಹೊಡೆಯುವ ಮೂಲಕ ಬೃಹತ್ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಿದರು.

ಚಿತ್ರದುರ್ಗದಲ್ಲಿ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ನಡೆಯಿತು. ಹಾವೇರಿಯಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪು ನಮನ ಸಲ್ಲಿಸಿದರು.

ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೋಫೆಸರ್ ಸುರೇಶ್ ನಾಡಗೌಡ ಮಾತನಾಡಿ, ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರವಾರದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ರಾಮಾಯಣದಲ್ಲಿ ಪರಿಸರಕ್ಕೆ ಮಹತ್ವ ನೀಡಿದ್ದು, ಅದರಂತೆಯೇ ಉತ್ತರಕನ್ನಡ ಜಿಲ್ಲೆಯಲ್ಲಿನ ವನ್ಯ ಸಂಪತನ್ನು ಕಾಪಾಡಲು ಜನತೆ ಕಾಳಜಿ ತೋರಬೇಕು ಎಂದು ಹೇಳಿದರು.
ಬೆಳಗಾವಿಯಲ್ಲೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಜಯಂತಿ ಆಚರಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನಡೆಸ್ಕ್:ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿ ಇಂದು. ಈ ಹಿನ್ನೆಲೆಯಲ್ಲಿ ವಿವಿಧೆಡೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ.

ಮಹರ್ಷಿ ವಾಲ್ಮೀಕಿಯನ್ನು ’ಆದಿ ಕವಿ’ ಅಥವಾ ಸಂಸ್ಕೃತ ಭಾಷೆಯ ಮೊದಲ ಕವಿ ಎಂದು ಹೇಳಲಾಗುತ್ತದೆ. ಹಲವೆಡೆ ಜಯಂತಿಯ ಅಂಗವಾಗಿ ಶೋಭಾ ಯಾತ್ರೆ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ಸರ್ಕಾರ 2024 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಿಸಿದೆ.

ಜಾನುವಾರುಗಳ ಸಂತತಿಯ ಸಂರಕ್ಷಣೆಯಲ್ಲಿ ತೊಡಗಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಿಲಾರಿ ಜೋಗಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣದ ಹೋರಾಟಗಾರ್ತಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಡಾ.ರತ್ನಮ್ಮ.ಎಸ್, ಗುಡ್ಡಗಾಡು ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಬೆಳಗಾವಿಯ ಗಾಂಧಿನಗರದ ರಾಜಶೇಖರ ತಳವಾರ, ಪರಿಶಿಷ್ಟ ಪಂಗಡ ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಕುರಿತು ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ನಿವಾಸಿಯಾದ ಕೆ.ಎಸ್.ಮೃತ್ಯುಂಜಯ, ರಂಗಭೂಮಿ ಕಲಾವಿದೆಯಾದ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿಯವರಾದ ರತ್ನಮ್ಮ ಬಿ ಸೋಗಿ ಅವರಿಗೆ ಈ ಸಾಲಿನ ಪ್ರಶಸ್ತಿಗಳನ್ನು ಇಂದು ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಾತಿ ಪ್ರಮಾಣಪತ್ರ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Published

on

ಸುದ್ದಿದಿನಡೆಸ್ಕ್:ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇಂದು ಪರಿಶಿಷ್ಟ ಪಂಗಡದ ಸಮುದಾಯಗಳ ಸಭೆ ನಡೆಸಲಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಹಿನ್ನಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆಯಾಗಬಾರದೆಂದು ಸೂಚಿಸಿದ್ದಾರೆ.

ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಸುಮಾರು 89 ಕೋಟಿ 63 ಲಕ್ಷ ರೂಪಾಯಿಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂಪಾಯಿಗಳನ್ನು ವಾಪಸ್ಸು ಪಡೆಯಲಾಗಿದೆ. ಉಳಿದ 84 ಕೋಟಿ 63 ಲಕ್ಷ ರೂಪಾಯಿಗಳಲ್ಲಿ 71 ಕೋಟಿ 54 ಲಕ್ಷ ರೂಪಾಯಿಗಳನ್ನು ವಸೂಲು ಮಾಡಲಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ13 hours ago

ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲ ಪರಿಶ್ಟಿಷ್ಟ ವರ್ಗದ ವಸತಿ ಶಾಲೆಗಳಿಗೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನಸೌಧ ಮುಂಭಾಗದಲ್ಲಿರುವ ವಾಲ್ಮೀಕಿ...

ದಿನದ ಸುದ್ದಿ18 hours ago

ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ

ಸುದ್ದಿದಿನಡೆಸ್ಕ್:ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿ ಇಂದು. ಈ ಹಿನ್ನೆಲೆಯಲ್ಲಿ ವಿವಿಧೆಡೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಹರ್ಷಿ ವಾಲ್ಮೀಕಿಯನ್ನು ’ಆದಿ ಕವಿ’ ಅಥವಾ ಸಂಸ್ಕೃತ ಭಾಷೆಯ ಮೊದಲ...

ದಿನದ ಸುದ್ದಿ2 days ago

ಜಾತಿ ಪ್ರಮಾಣಪತ್ರ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಸುದ್ದಿದಿನಡೆಸ್ಕ್:ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ...

ದಿನದ ಸುದ್ದಿ2 days ago

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

ಸುದ್ದಿದಿನಡೆಸ್ಕ್:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ವಿಧಾನಸಭಾ...

ದಿನದ ಸುದ್ದಿ3 days ago

ಅಕ್ಟೋಬರ್ 20 ರಂದು ಬೃಹತ್ ಉದ್ಯೋಗ ಮೇಳ

ಸುದ್ದಿದಿನ,ದಾವಣಗೆರೆ:ಎನ್‍ಐಇಎಲ್‍ಟಿ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಸಹಕಾರದೊಂದಿಗೆ ಅಕ್ಟೋಬರ್ 20 ರಂದು ಬೆಂಗಳೂರು ನಗರ ಜಿಲ್ಲೆಯ ಕೆಎಲ್‍ಎಫ್ ಸಂಸ್ಥೆಯ ಎಸ್.ನಿಜಲಿಂಗಪ್ಪ ಮಹಾವಿದ್ಯಾಲಯ, #1040, 28ನೇ ಕ್ರಾಸ್...

ದಿನದ ಸುದ್ದಿ4 days ago

ಯಲ್ಲಮ್ಮನ ಸವದತ್ತಿ ಕ್ಷೇತ್ರಾಭಿವೃದ್ಧಿಗೆ ಆದ್ಯತೆ : ಸಿಎಂ ಸಿದ್ದರಾಮಯ್ಯ ಭರವಸೆ

ಸುದ್ದಿದಿನಡೆಸ್ಕ್:ಯಲ್ಲಮ್ಮನ ಗುಡ್ಡವಿರುವ ಸವದತ್ತಿ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಾಂತರ ಭಕ್ತಾದಿಗಳು ಭೇಟಿ ನೀಡುತ್ತಾರೆ. ಅವರಿಗೆ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ...

ದಿನದ ಸುದ್ದಿ6 days ago

ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ : ಡಿಸಿಎಂ ಡಿ.ಕೆ.ಶಿವಕುಮಾರ್

ಸುದ್ದಿದಿನ,ಬೆಂಗಳೂರು:ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯವಾಗಿದ್ದು ತೆರಿಗೆ ತಾರತಮ್ಯ ಖಂಡಿಸಿ “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಪ್ರತಿಭಟನೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ...

ದಿನದ ಸುದ್ದಿ6 days ago

ಮೈಸೂರು ದಸರಾ | ಅಂಬಾರಿ ಹೊತ್ತ ಅಭಿಮನ್ಯು ಜಂಬೂ ಸವಾರಿ

ಸುದ್ದಿದಿನಡೆಸ್ಕ್:ಮೈಸೂರು ದಸರಾ ಅಂಗವಾಗಿ ಶನಿವಾರ ವಿಜಯದಶಮಿಯಂದು ಅದ್ಧೂರಿ ಜಂಬೂ ಸವಾರಿ ನಡೆಯಿತು. ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾದಾಗಿನಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಮೈಸೂರಿನ ಜಂಬೂಸವಾರಿಯಲ್ಲಿ...

ದಿನದ ಸುದ್ದಿ6 days ago

ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಭಾರೀ‌ ಮಳೆ

ಸುದ್ದಿದಿನಡೆಸ್ಕ್:ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆಯಾಗಲಿದೆ. ಇಂದು ಮಧ್ಯಾಹ್ನದಿಂದಲೇ ನಗರದ ಹಲವೆಡೆ ಜಿಟಿಜಿಟಿ ಮಳೆ ಶುರುವಾಗಿದೆ. ಜೊತೆಗೆ ಮುಂದಿನ 7...

ದಿನದ ಸುದ್ದಿ7 days ago

ನಾಡಿನೆಲ್ಲೆಡೆ ಆಯುಧಪೂಜೆ ಸಡಗರ; ಮೈಸೂರು ಅರಮನೆಯಲ್ಲಿ ಪಟ್ಟದ ಹಸು, ಆನೆ, ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ

ಸುದ್ದಿದಿನಡೆಸ್ಕ್:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನವಾದ ಇಂದು ಸಾಂಪ್ರದಾಯಿಕವಾಗಿ ಆಯುಧಪೂಜೆ ನೆರವೇರಿತು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ...

Trending