Connect with us

ರಾಜಕೀಯ

ಬರಿದಾದ ಖಜಾನೆ-ಮೋದಿ ಸರ್ಕಾರದ ಬಳುವಳಿ

Published

on

  • ಮೋದಿ ಸರ್ಕಾರದ ಆಡಳಿತಾವಧಿಯ ಕಡೆಯ ವರ್ಷದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ಕಮ್ಮಿಯೆಂದರೂ ರೂ. 1.75 ಲಕ್ಷ ಕೋಟಿಗಳಷ್ಟು ಕೊರತೆ ಉಂಟಾಗಿದೆ. ಇದು ಒಟ್ಟು ಜಿಡಿಪಿಯ ಶೇ. 1 ಕ್ಕೆ ಹತ್ತಿರ ಇದೆ. ಈ ಮೊತ್ತದ ಪ್ರಮಾಣ ಎಷ್ಟೆಂದರೆ ಇದರಿಂದ ಮೋದಿ ಸರಕಾರ ಕೊನೆಯ ಬಜೆಟಿನಲ್ಲಿ ಸಣ್ಣ ರೈತರಿಗೆಂದು ಪ್ರಕಟಿಸಿದ ವಾರ್ಷಿಕ 6000 ರೂ. ಆದಾಯ ಬೆಂಬಲವನ್ನು ಅವರಿಗೆ ಮಾತ್ರವಲ್ಲ ದೇಶದ ಎಲ್ಲ ಕುಟುಂಬಗಳಿಗೂ ಕೊಡಬಹುದು. ಅಥವ 15 ಕೋಟಿ ಕುಟುಂಬಗಳಿಗೆ ಅಂದರೆ ನಮ್ಮ ದೇಶದ ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರತಿ ತಿಂಗಳು ರೂ.1000 ದಂತೆ ಒಂದಿಲ್ಲೊಂದು ರೀತಿಯಲ್ಲಿ ಆದಾಯ ಬೆಂಬಲ ಕೊಡಬಹುದಾಗಿತ್ತು ಈ ಹಿನ್ನೆಲೆಯಲ್ಲಿ ದೇಶದ ಮುಂದಿರುವ ಪ್ರಶ್ನೆ- ಮೇ ತಿಂಗಳ ಕೊನೆಯಲ್ಲಿ ಬಲಿಷ್ಟ ಹಿತಾಸಕ್ತಿಗಳನ್ನು ಎದುರಿಸಿ ನಿಲ್ಲಬಲ್ಲ ಮತ್ತು ಜನಪರವಾದ ಪರ್ಯಾಯವನ್ನು ದಿಟ್ಟತನದಿಂದ ಆಯ್ದುಕೊಳ್ಳಬಲ್ಲ ಒಂದು ಮಜಬೂತ್ ಸರಕಾರ ಬರುವುದೇ ಎಂಬುದು.

ಪ್ರೊ. ಸುರಜಿತ್ ಮಜುಂದಾರ್

1 ಏಪ್ರಿಲ್ 2019 ರಂದು ಹಣಕಾಸು ಸಚಿವಾಲಯ ಮಾರ್ಚ್ 2019 ರ ಜಿಎಸ್‌ಟಿ ಸಂಗ್ರಹದ ಬಗ್ಗೆ ಹೇಳಿಕೆ ನೀಡಿದ್ದು ಅದು ಪ್ರಸಕ್ತ ಹಣಕಾಸು ವರ್ಷದ ಕಡೆಯ ತಿಂಗಳು ಆಗಿದೆ. ಈ ಹೇಳಿಕೆ ಪ್ರಕಾರ ಮಾರ್ಚ್ ತಿಂಗಳಲ್ಲಿ ಸಂಗ್ರಹವಾದ ರೂ. 1,06,577 ಕೋಟಿ ಜಿಎಸ್‌ಟಿ ಕಾರ್ಯರೂಪಕ್ಕೆ ಬಂದನಂತರ ಗಳಿಸಿರುವ ಅತ್ಯದಿಕ ಮೊತ್ತವಾಗಿದೆ. ಆದರೆ ಈ ವಿಷಯದಲ್ಲಿ ಮರೆಮಾಚುತ್ತಿರುವ ಸಂಗತಿಯೆಂದರೆ ಫೆಬ್ರುವರಿ 1, 2019 ರಂದು ಮಂಡಿಸಿದ ಬಜೆಟ್‌ನಲ್ಲಿ ಪರಿಷ್ಕರಿಸಿದ ಜಿಎಸ್‌ಟಿ ಆದಾಯದ ಪುನರ್ ಅಂದಾಜಿಗಿಂತಲೂ ಬಹಳ ಕಡಿಮೆಯಿದೆ. ವಾಸ್ತವವಾಗಿ ಈ ಪರಿಷ್ಕೃತ ಅಂದಾಜೇ ಕಳೆದ ವರ್ಷದ ಬಜೆಟಿನಲ್ಲಿ ಇರಿಸಿಕೊಂಡಿದ್ದ ಗುರಿಗಿಂತ ಒಂದು ಲಕ್ಷ ಕೋಟಿ ರೂ. ಕಡಿಮೆಯಾಗಿದೆ.

ಕೇಂದ್ರ ಸರ್ಕಾರದ ಕಂಟ್ರೊಲರ್ ಜನರಲ್ ಆಫ್ ಅಕೌಂಟ್ಸ್ ಅವರ ವೆಬ್‌ಸೈಟ್‌ನಲ್ಲಿ ಫೆಬುವರಿ 2019 ರ ವರೆಗಿನ ಲೆಕ್ಕದ ವಿವರವನ್ನು ಪ್ರಕಟಿಸಲಾಗಿದೆ. ಇದರಂತೆ ಜಿಎಸ್‌ಟಿಯ ಎಲ್ಲಾ ಆದಾಯಗಳ ಮೊತ್ತ ಫೆಬ್ರವರಿ ೨೦೧೯ ಕ್ಕೆ ರೂ. 5,26,680 ಕೋಟಿ, ಈ ಬಜೆಟಿನ ಪರಿಷ್ಕೃತ ಅಂದಾಜು ರೂ. 6,43,900 ಕೋಟಿ, ಅಂದರೆ ಆದಾಯ ಗಳಿಕೆಯ ಗುರಿಗಿಂತ ರೂ.1,17,220 ಕೋಟಿ ಕಡಿಮೆ ಮತ್ತು ಕಳೆದ ಬಜೆಟ್‌ನಲ್ಲಿ ಮಂಡಿಸಿದ ಅಂದಾಜು ರೂ.7,43,900 ಕೋಟಿ.

ಅಂದರೆ ಒಟ್ಟು ಸಂಗ್ರಹವಾಗಿರುವ ಮೊತ್ತ ಪರಿಷ್ಕೃತ ಅಂದಾಜಿನ ಗುರಿ ಮುಟ್ಟಿರುವುದಿಲ್ಲ. ಮಾರ್ಚ್ ತಿಂಗಳಲ್ಲಿ ಸಂಗ್ರಹಿಸಿದ ದಾಖಲೆ ಆದಾಯದಲ್ಲಿ 51,209 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದು ಮತ್ತು ಉಳಿದ ರೂ. 55,368 ಕೋಟಿ ಯಲ್ಲಿ ಜಿಎಸ್‌ಟಿ ಪರಿಹಾರಕ್ಕಾಗಿ ಇಟ್ಟಿರುವ ರೂ. 8000 ಕೋಟಿ ಸೇರಿರುತ್ತದೆ. ಈ ಎಲ್ಲವನ್ನೂ ಕೇಂದ್ರದ ಲೆಕ್ಕಕ್ಕೆ ಸೇರಿಸಿದರೂ ಮೊತ್ತ ರೂ5,82,048 ಕೋಟಿ ಆಗುತ್ತದಷ್ಟೇ. ಒಟ್ಟು ಕೇಂದ್ರ ಸರ್ಕಾರದ ಸಂಗ್ರಹಿಸಿರುವ ಜಿಎಸ್‌ಟಿ ತೆರಿಗೆ ಸಂಗ್ರಹ 5,82,048 ಕೋಟಿಯಾಗಿದ್ದು. ಇದು ಪರಿಷ್ಕೃತ ಬಜೆಟ್ ಅಂದಾಜಿಗಿಂತ ರೂ.61,852 ಕೋಟಿ ಕಡಿಮೆಯಾಗಿದ್ದರೆ, ಮೂಲ ಬಜೆಟ್‌ಗಿಂತ ರೂ. 1.62 ಲಕ್ಷ ಕೋಟಿ ಕಡಿಮೆಯಾಗಿದೆ.

ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿನ ತೀವ್ರ ಕೊರತೆ ಕೇಂದ್ರ ಸರ್ಕಾರದ ಅಪ್ರತ್ಯಕ್ಷ ತೆರಿಗೆ ಸಂಗ್ರಹವನ್ನು ತೀವ್ರವಾಗಿ ತಟ್ಟುತ್ತದೆ, ಏಕೆಂದರೆ ಇದು ಅಪ್ರತ್ಯಕ್ಷ ತೆರಿಗೆ ಆದಾಯಗಳ ಬಹುಮುಖ್ಯವಾದ ಭಾಗವಾಗಿದೆ. 2018-19ಪರಿಷ್ಕೃತ ಅಂದಾಜಿನ ಪ್ರಕಾರ ಜಿಎಸ್‌ಟಿ ಒಟ್ಟು ಅಪ್ರತ್ಯಕ್ಷ ತೆರಿಗೆ ಸಂಪನ್ಮೂಲದ ಶೇ. 60 ಭಾಗವಾಗಿದೆ. ಉಳಿದ ಅಪ್ರತ್ಯಕ್ಷ ತೆರಿಗೆ ಸಂಗ್ರಹವೂ ತೃಪ್ತಿಕರವಾಗಿಲ್ಲವೆಂದು ಕಂಡು ಬರುತ್ತಿದೆ.

ಎಪ್ರಿಲ್ 2018ರಿಂದ-ಫೆಬ್ರುವರಿ 2019ರ ಅಂಕಿಅಂಶಗಳನ್ನು ಗಮನಿಸಿದರೆ ನಾಮಿನಲ್ ಜಿಡಿಪಿ ಹಿಂದಿನ ಸಾಲಿಗಿಂತ ಶೇ. 11.5 ಹೆಚ್ಚಳ ಸಾಧಿಸಿದ್ದರೂ, ಈ 11 ತಿಂಗಳ ಅವಧಿಯಲ್ಲಿ (ಏಪ್ರಿಲ್- ಫೆಬ್ರವರಿ) ಹಿಂದಿನ ಹಣಕಾಸು ವರ್ಷದ ಅದೇ 11ತಿಂಗಳ ಆದಾಯದೊಂದಿಗೆ ಹೋಲಿಸಿದರೆ ಅಪ್ರತ್ಯಕ್ಷ ತೆರಿಗೆ ಹೆಚ್ಚಳ ಕೇವಲ ಶೇ2%ಆಗಿದೆ. ಆದ್ದರಿಂದ ಮಾರ್ಚ್ 2019ರ ಈ ‘ಬೃಹತ್’ ಹೆಚ್ಚಳ ಸಹಾ ಒಟ್ಟಾರೆ ಕೊರತೆಯನ್ನು ಕಡಿಮೆ ಮಾಡುವುದಿಲ್ಲ. ಮಾರ್ಚ್ ತಿಂಗಳಿನಲ್ಲಿ ಅಪ್ರತ್ಯಕ್ಷ ತೆರಿಗೆಗಳ ಸಂಗ್ರಹದಲ್ಲಿ 20% ಆಗಿದ್ದರೂ ಕೂಡ, ಒಟ್ಟಾರೆ ಕೊರತೆ 1 ಲಕ್ಷ ಕೋಟಿ ರೂ. ಮೀರಲಿದೆ ಮತ್ತು ಮೂಲ ಬಜೆಟ್‌ಗಿಂತ 2 ಲಕ್ಷ ಕೋಟಿಗಳಿಗಿಂತ ಹೆಚ್ಚಾಗಲಿದೆ.

ನಿಚ್ಚಳವಾಗಿ ಜಿಎಸ್‌ಟಿ ಮೂಲಕ ಅಪ್ರತ್ಯಕ್ಷ ತೆರಿಗೆ ಆದಾಯ ಹೆಚ್ಚುವುದೆಂಬ ಆಶಯ ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ನೇರ ತೆರಿಗೆ ಸಂಗ್ರಹವೂ ಹೆಚ್ಚಾಗಿರುವುದಿಲ್ಲ. ಕಾರ್ಪೋರೇಟ್ ತೆರಿಗೆ ಸಂಗ್ರಹ ಪರಿಷ್ಕೃತ ಬಜೆಟ್ ಅಂದಾಜಿನಂತೆ ಇರಬೇಕಾದರೆ ಮಾರ್ಚ್ 2018 ಗಿಂತ ಮಾರ್ಚ್ 2019 ರಲ್ಲಿ 22.74% ಹೆಚ್ಚಳ ಕಾಣಬೇಕಿದೆ. ಎಪರಿಲ್-ಫೆಬ್ರುವರಿ ಅವಧಿಯಲ್ಲಿ ಕಾಣ ಬಂದಿರುವ ಹೆಚ್ಚಳದ ಪ್ರಮಾಣ ೧೫.೪೩, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಣೆ ಆಗಬೇಕಿದೆ.

ವೈಯುಕ್ತಿಕ ವರಮಾನ ತೆರಿಗೆ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷದ ಬಜೆಟ್ ಬಹಳ ಆಶಾದಾಯಕ ಅಂದಾಜು ಮಾಡಿತ್ತು, ಇದನ್ನು ಈ ಬಾರಿಯ ಪರಿಷ್ಕೃತ ಅಂದಾಜಿನಲ್ಲೂ ಉಳಿಸಿಕೊಳ್ಳಲಾಗಿದೆ. ಆದರೆ ನೋಟ್‌ರದ್ಧತಿಯ ನಂತರ ಸತತವಾಗಿ ಎರಡನೇಯ ವರ್ಷವೂ ಈ ಬಾಬ್ತಿನ ಸಂಪನಮೂಲ ಸಂಗ್ರಹ ಮೂಲ ಬಜೆಟ್/ ಪರಿಷ್ಕೃತ ಅಂದಾಜಿನ ಹತ್ತಿರವೂ ಬರುವಂತಿಲ್ಲ. ಎಪ್ರಿಲ್-ಫೆಬ್ರವರಿ 11 ತಿಂಗಳ ಅವಧಿಯಲ್ಲಿನ ಸಂಗ್ರಹವನ್ನು ಗಮನಿಸಿದರೆ, ಕನಿಷ್ಠ ರೂ. 50,000 ಕೋಟಿ ಕೊರತೆ ತೋರಿಸಲಿದೆ. ಇದರ ಫಲಿತಾಂಶವೆಂದರೆ, ಒಟ್ಟು ವರಮಾನ ತೆರಿಗೆ ಜಿಡಿಪಿಯ ಕೇವಲ 2.5% ಮಾತ್ರ ಆಗಬಹುದು. ಅಂದರೆ ಅದೇ ನಿಧಾನಗತಿಯ ಏರಿಕೆ.

ತೆರಿಗೆ ತೆರಬೇಕಾದ ಶ್ರೀಮಂತ ವಿಭಾಗಗಳ ಆದಾಯಗಳಲ್ಲಿ ತ್ವರಿತ ಹೆಚ್ಚಳವಾಗಿದ್ದರೂ, ನೊಟುರದ್ಧತಿಯ ನಂತರವೂ ವರಮಾನ ತೆರಿಗೆಯ ಆದಾಯದ ಸಂಗ್ರಹದ ಏರಿಕೆಯ ಗತಿ ಮಾತ್ರ ಹಿಂದಿನಂತೆಯೇ ನಿಧಾನವಾಗಿಯೇ ಇದೆ.

ನೋಟುರದ್ಧತಿ ಕ್ರಮದಿಂದಾಗಿ ತೆರಿಗೆ ರಿಟರ್ನ್ ಸಲ್ಲಿಸುವರ ಸಂಖ್ಯೆ ಹೆಚ್ಚಾಗಿದೆ ಎಂದು ಸರಕಾರೀ ಪ್ರಚಾರಯಂತ್ರ ಸಾರುತ್ತಿದೆ. ವಾಸ್ತವವಾಗಿ ಈ ಪ್ರವೃತ್ತಿ ನೋಟುರದ್ಧತಿಯ ಮೊದಲೇ ಕಂಡು ಬಂದಿತ್ತು. ಈಗ ಇದೇ ರೀತಿಯ ಕತೆಯನ್ನು ಜಿಎಸ್‌ಟಿ ಬಗ್ಗೆಯೂ ಹೇಳಲಾಗುತ್ತಿದೆ. ಈ ಅಂಕಿ ಅಂಶಗಳು ಮರೆಮಾಚುತ್ತಿರುವ ಸಂಗತಿಯೆಂದರೆ, ತೆರಿಗೆ ಬಲೆಯಲ್ಲಿನ ಸಂಖ್ಯೆಗಳಿಗೂ ಮತ್ತು ತೆರಿಗೆ ಆದಾಯಕ್ಕೂ ಯಾವುದೇ ನೇರ ಸಂಬಂಧವಿಲ್ಲವೆಂಬುದು.

ವರಮಾನ ತೆರಿಗೆ ರಿಟರ್ನ್ ಸಲ್ಲಿಸುವ ಶೇ. 90 ರಷ್ಟು ಜನ ಯಾವ ತೆರಿಗೆಯನ್ನು ಕಟ್ಟಿರುವುದಿಲ್ಲ ಅಥವಾ ಬಹಳ ಕಡಿಮೆ ತೆರಿಗೆ ಕಟ್ಟುತ್ತಾರೆ ಮತ್ತು 57% ತೆರಿಗೆ ಮೊತ್ತ ಸಂಬಳಗಳ ಮೂಲದಿಂದ ಬರುತ್ತಿದೆ, ವ್ಯಾಪಾರ-ವ್ಯವಹಾರಗಳ ಮೂಲದಿಂದ ಬರುವ ತೆರಿಗೆ ಆದಾಯಗಳ ಪ್ರಮಾಣ ಇದರ ಅರ್ಧದಷ್ಟು ಮಾತ್ರ. ಈ ಅಂಶಗಳನ್ನು ಗಮನಿಸಿ- ಆದಾಯ ತೆರಿಗೆ ಇಲಾಖೆ ಡಿಸೆಂಬರ್ 2018ರ ವರೆಗೆ 37 ಕೋಟಿ ವ್ಯಕ್ತಿಗಳಿಗೆ ವ್ಯಕ್ತಿಗಳಿಗೆ ಪಾನ್ ಕಾರ್ಡ್ ಅಂದರೆ ತೆರಿಗೆದಾರರ ಶಾಶ್ವತ ಅಕೌಂಟ್ ಸಂಖ್ಯೆ ನೀಡಿದೆ.

ಇದು ತೆರಿಗೆ ರಿಟರ್ನ್ ಸಲ್ಲಿಸುವವರ ಸಂಖ್ಯೆಯ 5 ಪಟ್ಟಿಗಿಂತಲೂ ಹೆಚ್ಚು ಮತ್ತು ದೇಶದ ಒಟ್ಟು ದುಡಿಮೆಗಾರರ 75% ದಷ್ಟು!ಆದ್ದರಿಂದ ಮೋದಿ ಸರ್ಕಾರದ ಆಡಳಿತಾವಧಿಯ ಕಡೆಯ ವರ್ಷದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ರೂ. 1.5 ಲಕ್ಷ ಕೋಟಿ ಕೊರತೆಯಿರುವುದು ಕೇವಲ ಎರಡು ತಿಂಗಳ ಹಿಂದಿನ ಪರಿಷ್ಕೃತ ಅಂದಾಜಿನಲ್ಲಿ ವ್ಯಕ್ತವಾಗಿದೆ. ಈ ಪರಿಷ್ಕೃತ ಅಂದಾಜು ಈ ಹಣಕಾಸು ವರ್ಷಧ ಆರಂಭದ ಅಂದಾಜಿಗಿಂತ 23,000 ಕೋಟಿ ರೂ.ಗಳಷ್ಟು ಕಡಿಮೆಯಿರುವುದರಿಂದ ಒಟ್ಟು ತೆರಿಗೆ ಆದಾಯ ಸಂಗ್ರಹಣೆಯಲ್ಲಿ ಒಟ್ಟು ಕೊರತೆ ಕಮ್ಮಿಯೆಂದರೂ ರೂ. 1.75 ಲಕ್ಷ ಕೋಟಿಗಳಷ್ಟಾಗುತ್ತದೆ.

ಇದು ಒಟ್ಟು ಜಿಡಿಪಿಯ ಶೇ. 1 ಕ್ಕೆ ಹತ್ತಿರ ಇದೆ. ಈ ಮೊತ್ತದ ಪ್ರಮಾಣ ಎಷ್ಟೆಂದರೆ ಇದರಿಂದ ಮೋದಿ ಸರಕಾರ ಅದರ ಕೊನೆಯ ಬಜೆಟಿನಲ್ಲಿ ಸಣ್ಣ ರೈತರಿಗೆಂದು ಪ್ರಕಟಿಸಿದ ವಾರ್ಷಿಕ 6000 ರೂ. ಆದಾಯ ಬೆಂಬಲವನ್ನು ಅವರಿಗೆ ಮಾತ್ರವಲ್ಲ ದೇಶದ ಎಲ್ಲ ಕುಟುಂಬಗಳಿಗೂ ಕೊಡಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ೧೫ ಕೋಟಿ ಕುಟುಂಬಗಳಿಗೆ ಅಂದರೆ ನಮ್ಮ ದೇಶದ ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರತಿ ತಿಂಗಳು ರೂ. 1000 ದಂತೆ ಒಂದಿಲ್ಲೊಂದು ರೀತಿಯಲ್ಲಿ ಆದಾಯ ಬೆಂಬಲ ಕೊಡಬಹುದಾಗಿತ್ತು. ಕಡಿಮೆ ತೆರಿಗೆ ಸಂಗ್ರಹದಿಂದ ರಾಜ್ಯಗಳ ಪಾಲು ಸಹಿತ ಕಡಿತಗೊಳ್ಳಲಿದೆ. ಇದರೊಂದಿಗೆ ಜಿಎಸ್‌ಟಿ ತೆರಿಗೆ ಸಂಗ್ರಹದ ಕೊರತೆ ರಾಜ್ಯ ಸರ್ಕಾರಗಳಿಗೆ ತೀವ್ರ ಹೊಡೆತ ನೀಡಲಿದೆ.

2018-19 ರ ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಿರುವುದರ ಅರ್ಥ, ವಿತ್ತೀಯ ಕೊರತೆ ಅಂದಾಜಿಗಿಂತ ಬಹಳ ಹೆಚ್ಚಿದೆ ಅಥವಾ ಮಾರ್ಚ್ ತಿಂಗಳಲ್ಲಿ ತೀವ್ರ ವೆಚ್ಚಗಳನ್ನು ತೀವ್ರವಾಗಿ ಕಡಿತ ಮಾಡಲಾಗಿದೆ ಎಂದೇ ಆಗುತ್ತದೆ. ಫೆಬ್ರವರಿ ತಿಂಗಳ ವರೆಗಿನ ಆದಾಯ ಮತ್ತು ಖರ್ಚಿನ ಪ್ರವೃತ್ತಿಯನ್ನು ನೋಡಿದಾಗ, ಹಣಕಾಸು ವರ್ಷ ಮುಗಿಯುವ ಒಂದು ತಿಂಗಳ ಹಿಂದೆಯೇ ಬಜೆಟ್ ಅಂದಾಜಿಗಿಂತ ೩೪% ಹೆಚ್ಚಾಗಿರುವುದು, ಅಥವ ಜಿಡಿಪಿಯ 4.5% ರಷ್ಟು ಆಗಿರುವುದು ಕಂಡು ಬರುತ್ತದೆ.

ಈ ಹಿನ್ನೆಲೆಯಲ್ಲಿ, ಮೇ ತಿಂಗಳ ಕೊನೆಯಲ್ಲಿ ಬರಲಿರುವ ಹೊಸ ಸರ್ಕಾರದ ಮುಂದಿರುವ ಸವಾಲೆಂದರೆ ವಿತ್ತೀಯ ಕೊರತೆಯನ್ನು ಜಿಡಿಪಿಯ 3% ಮಿತಿಯಲ್ಲಿಡಬೇಕು ಎಂಬ ಎಫ್‌ಆರ್‌ಬಿಎಂ ಕಾಯ್ದೆ ಹೇರಿರುವ ವಿಚಾರಹೀನ ಗೀಳನ್ನು ತ್ಯಜಿಸುವುದು, ಮತ್ತು ಶ್ರೀಮಂತರಿಂದ, ಸಂಪತ್ತುಳ್ಳವರಿಂದ ಹಾಗೂ ಬೃಹತ್ ಉದ್ದಿಮೆಗಳಿಂದ ಮುಲಾಜಿಲ್ಲದೆ ತೆರಿಗೆ ಸಂಗ್ರಹಿಸುವುದು. ಈ ಮೂಲಕ, ತೆರಿಗೆಗಳ್ಳತನ ತಮ್ಮ ದಿಂಬುಗಳ ಅಡಿಯಲ್ಲಿ ನೋಟಿನ ಕಂತೆಗಳನ್ನು ಬಚ್ಚಿಟ್ಟರಿಗಿಂತ ಹೆಚ್ಚಾಗಿ, ಬಹುಪಾಲು ತೆರಿಗೆ ಬಲೆಯಲ್ಲಿರುವವರಿಂದಲೇ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಆದಾಯ ತೆರಿಗೆ ಮತ್ತು ಜಿಎಸ್‌ಟ್ ಸಂಗ್ರಹದಲ್ಲಿ ಕಂಡು ಬಂದಿರುವ ಪ್ರವೃತ್ತಿ ಕೂಡ ಇಂತಹುದೇ.

ಇದರ ಬದಲಾಗಿ ಹೊಸ ಸರಕಾರಕ್ಕೆ ಇರುವ ಏಕೈಕ ದಾರಿಯೆಂದರೆ, ಒಂದು ತೀವ್ರತರದ ಮಿತವ್ಯಯ ಎಂದು ಹೇಳುವ ದಾರಿ. ಅಂದರೆ ಜನಸಾಮಾನ್ಯರಿಗಾಗಿ ಮಾಡುವ ವೆಚ್ಚಗಳನ್ನು ಕಡಿತಗೊಳಿಸುವುದು. ಕಳೆದ ಒಂದು ದಶಕದಲ್ಲಿ ಬಂದ ಸರಕಾರಗಳು ಇದನ್ನೇ ಅನುಸರಿಸಿವೆ. ಇದು ಜನಸಾಮಾನ್ಯರ ಬದುಕನ್ನು ನರಕಗೊಳಿಸಿರುವ ದಾರಿ. ಮೋದಿ ಸರ್ಕಾರ ಮತ್ತೆ ಬಂದರೆ ಇದೇ ದಾರಿಯನ್ನು ಮುಂದುವರೆಸುತ್ತದೆ ಎಂಬುದು ಖಡಾಖಂಡಿತ.

ಆದ್ದರಿಂದಲೇ, ಜನಸಾಮಾನ್ಯರ ಮೇಲೆ ಇನ್ನೂ ಹೆಚ್ಚಿನ ದಾಳಿಯನ್ನು ತಪ್ಪಿಸಬೇಕಾದರೆ ಈ ಮೋದಿ ಸರ್ಕಾರವನ್ನು ಸೋಲಿಸುವುದು ಆದ್ಯ ಕರ್ತವ್ಯವಾಗಬೇಕು. ಆದರೆ ಪ್ರಶ್ನೆಯಿರುವುದು-ದೇಶಕ್ಕೆ ಒಂದು ನಿಜವಾಗಿಯೂ ಹೊಸ ಸರ್ಕಾರ ಬರುವುದೇ, ಬಲಿಷ್ಟ ಹಿತಾಸಕ್ತಿಗಳನ್ನು ಎದುರಿಸಿ ನಿಲ್ಲಬಲ್ಲ ಮತ್ತು ಜನಪರವಾದ ಒಂದು ಧೀರ ಪರ್ಯಾಯವನ್ನು ಆಯ್ದುಕೊಳ್ಳಬಲ್ಲ ಒಂದು ಮಜಬೂತ್ ಸರಕಾರ ಬರುವುದೇ ಎಂಬುದು.

(ಕೃಪೆ-ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಅನುವಾದ : ಎಂ.ಜಿ.ವೆಂಕಟೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

Published

on

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ ಖಾತೆ ಆಂದೋಲನವನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

Published

on

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ.

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಇದೇ ತಿಂಗಳ 9 ಕ್ಕೆ ಮುಂದೂಡಿದೆ.

ಇದೇ ವೇಳೆ ಮಧ್ಯಂತರ ಆದೇಶವನ್ನು ನ್ಯಾಯಾಲಯ ವಿಸ್ತರಿಸಿದೆ. ಇದೇ 9 ರಂದು ಎ.ಜೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದು, ಇದೇ 12 ರಂದು ಮುಖ್ಯಮಂತ್ರಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ಹೇಳಿ ನ್ಯಾಯಾಲಯದ ಕಲಾಪ ಮುಂದೂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ10 hours ago

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ...

ದಿನದ ಸುದ್ದಿ10 hours ago

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ...

ದಿನದ ಸುದ್ದಿ18 hours ago

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ...

ದಿನದ ಸುದ್ದಿ1 day ago

ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಂ.ಎಂ.ಟಿ.ಎಂ 1, ಡಿಎಂಎಂ 20, ಸಿಒಪಿಎ 20, ವೆಲ್ಡರ್ 34 ಹಾಗೂ ರೋಬೊಟಿಕ್ಸ 12 ಖಾಲಿ ಇರುವ...

ದಿನದ ಸುದ್ದಿ1 day ago

ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಯುವಜನರನ್ನು ಸ್ವಾವಲಂಭಿಯಾಗಿ ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಪರಿಶಿಷ್ಟ...

ದಿನದ ಸುದ್ದಿ2 days ago

ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು

ಸುದ್ದಿದಿನಡೆಸ್ಕ್:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು...

ದಿನದ ಸುದ್ದಿ4 days ago

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ...

ದಿನದ ಸುದ್ದಿ5 days ago

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ...

ದಿನದ ಸುದ್ದಿ5 days ago

KPSC | 2 ತಿಂಗಳೊಳಗೆ ಮರು ಪರೀಕ್ಷೆ

ಸುದ್ದಿದಿನಡೆಸ್ಕ್:ಇತ್ತೀಚಿನ ಕೆ.ಪಿ.ಎಸ್.ಸಿ. ಗಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ, ಅಸಮರ್ಪಕ ಕನ್ನಡಾನುವಾದ ಹಿನ್ನೆಲೆ, ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ, 2 ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ, ಕರ್ನಾಟಕ ಲೋಕ...

ದಿನದ ಸುದ್ದಿ5 days ago

ADITYA-L1 | ಇಸ್ರೋ ಆದಿತ್ಯ ಎಲ್-1 ನೌಕೆ ಉಡಾವಣೆಗೆ ಒಂದು ವರ್ಷ; ಸೂರ್ಯನ ಅಧ್ಯಯನದಲ್ಲಿ ಮಹತ್ವದ ಪ್ರಗತಿ

ಸುದ್ದಿದಿನಡೆಸ್ಕ್:ಇಸ್ರೋದಿಂದ ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. 2023ರ ಸೆಪ್ಟೆಂಬರ್ 2 ರಂದು ಉಡಾವಣೆಗೊಂಡಿರುವ ಎಲ್-1ನೌಕೆ ಕಕ್ಷೆ ತಲುಪಿದ್ದು, ಭೂಮಿಯಿಂದ ಸುಮಾರು...

Trending