Connect with us

ನಿತ್ಯ ಭವಿಷ್ಯ

ಈ ದಿನದ ಭವಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆಯಿಂದ ಸಮಸ್ಯೆಗಳಿಗೆ ಪರಿಹಾರ : 15/08/2019 ಗುರುವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಶಕ್ತಿಯನ್ನು ವಶದಲ್ಲಿ ಇಟ್ಟುಕೊಂಡಿರುವ ಏಕೈಕ ಪ್ರಸಿದ್ಧ ಜ್ಯೋತಿಷ್ಯರು  ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್.  9900494333. ನಿಮ್ಮ ಜೀವನದ ಅನೇಕ ಗುಪ್ತ ಹಾಗೂ ಕಠಿಣ  ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಮಾಡಿಕೊಡಲಾಗುತ್ತದೆ. ಇಂದೇ ಕರೆಮಾಡಿ.

ನಿತ್ಯ ಭವಿಷ್ಯ 

ಮೇಷ ರಾಶಿ

ಈ ದಿನ ಉದ್ಯೋಗದಲ್ಲಿ ಸಭ್ಯತೆಯಿಂದ ತುಂಬಾ ನಾಜೂಕಾಗಿ ವರ್ತನೆಯನ್ನು ಮಾಡುತ್ತೀರಿ. ನಿಮ್ಮ ಪ್ರಿಯತಮ ಜೊತೆ ಆಚೆಕಡೆ ಹೋಗುವುದು ನಿಮ್ಮ ಹವ್ಯಾಸವಾಗಿದೆ. ನಿಮ್ಮ ಪ್ರಯಾಣ ಅನುಕೂಲಕರವಾಗಿರುತ್ತದೆ. ಆದರೆ ಸಂಗಾತಿಯಲ್ಲಿ ಒರಟುತನ ಅಸಮಾಧಾನಗೊಳಿಸುತ್ತದೆ. ಹಣವನ್ನು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ. ಹಾಗೆ ಖರ್ಚು ಮಾಡಿ ನಂತರ ವಿಷಾದಿಸುತ್ತೀರಿ. ಆರೋಗ್ಯದಲ್ಲಿ ಉತ್ತಮ ಏಳಿಗೆಯನ್ನು ಕಾಣುವಿರಿ. ಕುಟುಂಬದಲ್ಲಿ ವಿಷಾದ ಮನಸ್ಥಿತಿಯಿಂದ ಇರುವುದು ಕಾಣುತ್ತದೆ. ಮದುವೆ ವಿಷಯಗಳು ಇದ್ದರೆ ಅವು ನಿಮಗೆ ತೃಪ್ತಿಕರ ವಾಗಿರುವುದಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ನಿಮ್ಮಲ್ಲಿ ಈ ದಿನ ಹೆಚ್ಚು ಚಿಂತನೆ ಮತ್ತು ರಕ್ತದೊತ್ತಡವು ಕಂಡು ಅನಾರೋಗ್ಯ ಉಂಟುಮಾಡಬಹುದು. ನೀವು ಆಕರ್ಷಕ ಪ್ರಕೃತಿಯ ಕಡೆ ಪ್ರಯಾಣವನ್ನು ಈದಿನ ಬೆಳೆಸುವಿರಿ. ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಜೊತೆ ಅತ್ಯಂತ ಕಡಿಮೆಯಲ್ಲಿ ಹೊಂದಿಕೊಳ್ಳುವುದು. ಇಂದು ಸಂಗಾತಿಯು ನಿಮ್ಮ ಜೊತೆ ಚೆನ್ನಾಗಿ ಮಾತನಾಡುತ್ತಾರೆ. ಕುಟುಂಬದವರನ್ನು ಮದುವೆ ವಿಚಾರದಲ್ಲಿ ಸಂಪರ್ಕಿಸಲು ಸಾಧ್ಯ ಆಗುತ್ತಿರುವುದಿಲ್ಲ. ಹಣಕಾಸು ಗಳಿಸಲು ಸ್ನೇಹಿತರ ಅತ್ಯುತ್ತಮ ಸಹಕಾರ ದೊರೆಯುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಉದ್ಯೋಗದಲ್ಲಿ ನೀವು ಆಶವಾದಿ ಗಳಾಗಿದ್ದು ನಿಮ್ಮನ್ನು ನೀವೇ ಪ್ರೇರೇಪಿಸಿ ಕೊಳ್ಳುತ್ತೀರಿ. ಈ ದಿನ ನಿಮ್ಮ ಮನಸ್ಸಿನಲ್ಲಿ ಸೇಡು ಅಸೂಯೆ ನಕಾರಾತ್ಮಕ ಭಾವನೆಗಳು ಉಂಟಾಗಿ ಮನಸ್ಸನ್ನು ಕೆಡಿಸುತ್ತದೆ. ಹಣಕಾಸು ಯೋಜನೆಯನ್ನು ಸ್ನೇಹಿತರೊಂದಿಗೆ ಮಾಡುವುದು ಒಳ್ಳೆಯದಲ್ಲ. ದಾಂಪತ್ಯದಲ್ಲಿ ಸಂಗಾತಿಯ ಅನುಪಸ್ಥಿತಿ ಕಾಡುವ ಸಾಧ್ಯತೆ ಇರುತ್ತದೆ. ವಿವಾಹದ ವಿಷಯದಲ್ಲಿ ಒಳ್ಳೆಯ ಮೆಚ್ಚುಗೆ ಸಿಗುತ್ತದೆ. ಕುಟುಂಬದಲ್ಲಿ ಯಾವಾಗಲೂ ನಿಮ್ಮನ್ನು ಕಡೆಗಣಿಸಿ ಮಾತನಾಡುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಉದ್ಯೋಗದ ಒತ್ತಡ ಹೆಚ್ಚು ಕಾಣದೇ ಇದ್ದರೂ ಮನಸ್ಸಿಗೆ ಆಗಿರುವಂತಹ ಆಘಾತದಿಂದ ನೋವನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ನಿಮಗೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತಾ ಇರುತ್ತಾರೆ. ಇದರಿಂದ ಹಣಕಾಸು ಕೂಡ ಬಹಳಷ್ಟು ವ್ಯಥೆ ಖರ್ಚು ಆಗುತ್ತದೆ. ವೈವಾಹಿಕ ಸಂಬಂಧವು ಒಂದು  ಸಣ್ಣ ವಿಷಯದಿಂದ ದೂರ ಆಗುವ ಸಂಭವ ಈ ದಿನ ಕಾಣುತ್ತದೆ ಹುಷಾರಾಗಿರಿ. ಹಣಕಾಸಿನಲ್ಲಿ ಪದೇಪದೇ ಹೆಚ್ಚು ಖರ್ಚು ಬಂದು ಆರೋಗ್ಯದಲ್ಲಿ ಏರುಪೇರು ಕಂಡು ಮನಸ್ಸಿಗೆ ಆಗುತ್ತಾ ಇರುತ್ತದೆ. ಮದುವೆಗೆ ಒಳ್ಳೆಯ ಸಮಯ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಿರಿಯರು ಹಿಂದೇಟು ಹಾಕುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನೀವು ಮನೆ ಕಟ್ಟುತ್ತಾ ಇದ್ದರೆ ನಿಮಗೆ ಆಗಾಗ ತೊಂದರೆಗಳು ಹಣಕಾಸಿನಲ್ಲಿ ಅಡಚಣೆ ಆರೋಗ್ಯ ವಿಫಲತೆ ಆಗುತ್ತಿರುತ್ತದೆ. ಯಾಕೆಂದರೆ ನಿಮ್ಮ ಮೇಲೆ ಅನೇಕ ರೀತಿಯ ಪ್ರಯೋಗ ದೃಷ್ಟಿಗಳು ನಡೆದಿರಬಹುದು. ಉದ್ಯೋಗದಲ್ಲಿ ಸಂತೋಷದ ನೆನಪುಗಳು ಕಂಡು ಮನಸ್ಸಿಗೆ ಹಿತವೆನಿಸುವುದು. ನಿಮ್ಮ ಸಂಗಾತಿಯಲ್ಲಿ ಕಾಡುವ ಅನಾರೋಗ್ಯ ನಿಮ್ಮ ಮನಸ್ಸಿಗೆ ಆಘಾತ ಉಂಟು ಮಾಡುತ್ತದೆ. ಹಣಕಾಸಿನಲ್ಲಿ ಹೊಸ ಯೋಜನೆಯನ್ನು ಮುಂದುವರಿಸಿ. ಬಾಕಿ ಇರುವ ಮದುವೆ ಕೆಲಸಗಳು ಬೇಗನೆ ಮುಗಿಸುವುದು ಒಳ್ಳೆಯದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ಉದ್ಯೋಗಗಳಲ್ಲಿ ಬಿಡುವಿರದ ಕಾರ್ಯಕ್ರಮಗಳು ನಡೆಯುತ್ತವೆ. ನಿಮ್ಮ ಮನೆ ದೇವರ ಪೂಜೆಯನ್ನು ನೆರವೇರಿಸುವುದು ಶಾಂತಿ ಉಂಟುಮಾಡುತ್ತದೆ. ವ್ಯಾಪಾರದ ಉದ್ದೇಶವಾಗಿ ಕೈಗೊಂಡ ಪ್ರಯಾಣಗಳು ನಿಧಾನ ಆಗುವ ಲಕ್ಷಣ ಇರುತ್ತದೆ. ಬೇರೆಯವರಿಗೆ ನೀಡಿರುವಂತಹ ಹಣಕಾಸು ತುಸು ನಿಧಾನವಾಗಿ ಕೈಸೇರುತ್ತದೆ. ದಾಂಪತ್ಯದಲ್ಲಿ ನಿಮ್ಮ ಸಂಗಾತಿಯು ವಿಶೇಷತೆ ಇರುವ ಕಾಣಿಕೆಯನ್ನು ನೀಡಿ ನಿಮಗೆ ಸಮಾಧಾನ ಪಡಿಸುತ್ತಾರೆ. ವಿವಾಹದಲ್ಲಿ ನೀವು ಎಣಿಸಿದಂತೆ ತೃಪ್ತಿ ಸಿಗುವುದಿಲ್ಲ. ಕುಟುಂಬದ ವಿಷಯಗಳಲ್ಲಿ ಅಸಮಾಧಾನ ಕಾಣುತ್ತಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ಮನುಷ್ಯನು ದಿನಾಲು ಹಣಕಾಸಿನ ಸಂಪಾದನೆ ಮಾಡಬೇಕೆಂದು ಉದ್ಯೋಗವನ್ನು ಮಾಡುತ್ತಾನೆ. ಆದರೆ ದುಡಿಮೆಗಿಂತ ಹಣಕಾಸಿನ ಖರ್ಚು ಯಥೇಚ್ಛವಾಗಿ ಕಂಡರೆ ಬಹಳಷ್ಟು ಯೋಚನೆಯಲ್ಲಿ ಬೀಳುತ್ತಾನೆ. ಕುಟುಂಬದಲ್ಲಿ ಇರುವ ದೀರ್ಘಕಾಲಿಕ ತೊಂದರೆಗಳು ಹೆಚ್ಚಾಗುತ್ತವೆ. ಹೊರತು ಕಡಿಮೆಯಾಗುವುದಿಲ್ಲ. ನಿಮ್ಮನ್ನು ಹೆಚ್ಚು ಸಮಾಧಾನ ಸಂತೋಷ ಗೊಳಿಸಲು ಸಂಗಾತಿಯ ಪ್ರಯತ್ನ ಹೆಚ್ಚಿರುತ್ತದೆ. ಏನು ಮಾಡಬೇಕು ಎಂಬುದನ್ನು ತಿಳಿಯದೆ ಮಾನಸಿಕ ಅನಾರೋಗ್ಯ ಉಂಟಾಗುತ್ತದೆ. ಯಾವುದೇ ಸಂಬಂಧಗಳು ಹುಡುಕಿಕೊಂಡು ಬಂದರು ಮದುವೆ ಕಾರ್ಯಗಳು ಕೈಗೂಡುವುದಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕರಾಶಿ

ಇಂದು ನಿಮಗೆ ಅನೇಕ ಹೊಸ ಆರ್ಥಿಕ ಸ್ಥಿತಿಯನ್ನು ಉದ್ಯೋಗದಲ್ಲಿ ಉಂಟುಮಾಡುತ್ತದೆ. ಈ ದಿನ ಹೆಚ್ಚು ಪ್ರಯಾಣವನ್ನು ಮಾಡಬಾರದು. ಕುಟುಂಬದಲ್ಲಿ ಸಮಸ್ಯೆಗಳಿದ್ದರೆ ಅದರ ಪರಿಹಾರವಾಗಿ ಹುಡುಕಾಟ ನಡೆಸಬೇಕು. ಕೇವಲ ಸಕಾರಾತ್ಮಕ ಆಲೋಚನೆ ಹೊಂದಿರುವ ನಿಮ್ಮ ಮನಸ್ಸಿಗೆ ಶತ್ರುಗಳು ತೊಂದರೆ ಉಂಟು ಮಾಡುತ್ತಾರೆ. ನಿಮ್ಮ ಬಗ್ಗೆ ಸಲ್ಲದ ಅಪವಾದಗಳು ಬರುತ್ತವೆ. ಮದುವೆಯೆಂಬುದು ಪ್ರೀತಿಯಲ್ಲಿ ತೇಲಿ ಬರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗದ ವಿಷಯಗಳು ಲಘುವಾಗಿ ತೆಗೆದುಕೊಂಡು ಆಘಾತ ಮಾಡಿಕೊಳ್ಳಬೇಡಿ. ಅದೃಷ್ಟ ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ. ಸಂಬಂಧಿಗಳು ಹಾಗೂ ನೆರೆಹೊರೆಯರು ವಿವಾಹದ  ವಿಷಯಗಳಿಗೆ ನಿಮ್ಮನ್ನು ಸಂಪರ್ಕಿಸಬಹುದು. ಇಂದು ನೀವು ನಿಮ್ಮ ಅರ್ಧಾಂಗಿ ಗಿಂತ ಬೇರೆಯವರನ್ನು ನೆನಪು ಮಾಡಿಕೊಳ್ಳುತ್ತೀರಿ. ಕುಟುಂಬದಲ್ಲಿ ರಕ್ಷಣೆಯನ್ನು ಮಾಡುವ ಕೆಲಸವನ್ನು ನಡೆಸುತ್ತೀರಿ. ಅಧಿಕ ಶ್ರಮ ಫಲವನ್ನು ನೀಡುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ನಿಮ್ಮ ಅನಾರೋಗ್ಯ ನಿಮಗೆ ಹೆಚ್ಚು ಖರ್ಚು ಉಂಟು ಮಾಡಿಸುತ್ತದೆ. ಹೆಚ್ಚು ಒತ್ತು ಉದ್ಯೋಗದಲ್ಲಿ ಕಾಲಕಳೆದು ನಂತರ ಮನೆಗೆ ಪ್ರಯಾಣ ಮಾಡಿ. ಹಣಕಾಸಿನಲ್ಲಿ ಬೇರೆಯವರನ್ನೂ ನಂಬುವುದರಿಂದ ನಿಮಗೆ ಹೆಚ್ಚು ತೊಂದರೆ  ಆಗುತ್ತದೆ.  ನೀವು ಪ್ರೀತಿಸಿದವರನ್ನು ಮದುವೆಯಾಗಲು ಯೋಗ್ಯರಾಗಿ ಕಾಣುತ್ತೀರಿ. ಕೆಲವರು ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಎಚ್ಚರದಿಂದ ನಡೆಯಬೇಕು ಕುಟುಂಬದಲ್ಲಿ ನಿಮಗೆ ದೂರ ತಳ್ಳುವ ಹಾಗೆ ಕಾಣಿಸುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ಆರೋಗ್ಯದಲ್ಲಿ ನಿಮ್ಮ ವಿಶ್ವಾಸ ಮತ್ತು ಚೈತನ್ಯ ಇಂದು ಅಧಿಕವಾಗಿ ಕಂಡುಬರುತ್ತದೆ. ನೀವು ದಿನಾಲು ಕನಸು ಕಾಣುವಂತಹ ಸಂಗಾತಿಯು ನಿಮ್ಮ ಎದುರುಗಡೆ ಕಾಣಿಸಿಕೊಳ್ಳುತ್ತಾರೆ. ಕುಟುಂಬದಲ್ಲಿ ಧರ್ಮಕಾರ್ಯಗಳು ಮಂಗಳಕರ ಸಮಾರಂಭಗಳು ಮನೆಯಲ್ಲಿ ಕೈಗೊಳ್ಳಲಾಗುವುದು. ಇಂದು ನಿಮಗೆ ಆರ್ಥಿಕ ಲಾಭವನ್ನು ತಂದು ಕೊಡುತ್ತದೆ. ಸ್ನೇಹಿತರ ಜೊತೆ ಮತ್ತು ಸಂಬಂಧಿಗಳ ಜೊತೆ ಹೆಚ್ಚು ಹೊತ್ತು ಮಾತನಾಡಲು ನಿಮ್ಮ ಮನಸ್ಸು ಒಪ್ಪುವುದಿಲ್ಲ. ದಾಂಪತ್ಯದಲ್ಲಿ ರೋಮಾಂಚನಕಾರಿಯಾಗಿ ಇಂದು ಅನುಭವ ಉಂಟಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ನಿಮ್ಮ ಮನೆಯಲ್ಲಿ ಹಣವಿದ್ದರೆ ತಾತ್ಕಾಲಿಕವಾಗಿ ಸಾಲ ಕೇಳುವ ಜನರನ್ನು ನಿರ್ಲಕ್ಷಿಸಬೇಕು. ನಿಮ್ಮ ಬಗ್ಗೆ ದೂರು ನೀಡಲು ಜನರು ನಿಮ್ಮ ಹೆಸರು ಕೆಡಿಸಲು ಪ್ರಯತ್ನ ಮಾಡುತ್ತಾ ಇರುತ್ತಾರೆ. ಕುಟುಂಬದಲ್ಲಿ ಈ ದಿನ ನಿಮಗೆ ಕಾಳಜಿ ಕಾಣುವುದಿಲ್ಲ. ಎಲ್ಲರನ್ನೂ ಮರೆತ ಹಾಗೆ ಸಂಗಾತಿಯ ಜೊತೆ ವಿಶ್ರಾಂತಿಗೆ ತೆರಳುತ್ತಾರೆ. ಆರೋಗ್ಯದಲ್ಲಿ ಗುಣಮಟ್ಟದ ಮಾತ್ರೆಗಳನ್ನು ಈದಿನ ಸೇವಿಸಬೇಕು. ಉತ್ತಮ ಚಟುವಟಿಕೆಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ

Published

on

ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.

ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.

ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.

ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending