Connect with us

ಭಾವ ಭೈರಾಗಿ

ಕುರ‍್ಡ

Published

on

ಲೇಖಕಿ : ಶಾಂತಾ ಜಯಾನಂದ್
  • ಶಾಂತಾ ಜಯಾನಂದ್

ಯಾರಾದ್ರು ರಸ್ತೆಯಲ್ಲಿ ಸಡನ್ ಆಗಿ ಅಡ್ಡ ಬಂದ್ರೆ ಅಥವಾ ಅಪ್ಪಿ ತಪ್ಪಿ ಏನಾದ್ರೂ ಮಾಡಿದ್ರೆ, ಏ, ಕುರ‍್ಡ ಕಣ್ ಕಾಣೋಕಿಲ್ವಾ? ಎಂಬ ಮೊದಲಿಕೆಯ ಮಾತು ಎಲ್ಲೆಡೆ ಸರ್ವೇ ಸಾಮಾನ್ಯ ಅದನ್ನ ಬಹಳ ಸರಿ ಯೋಚಿಸ್ತೇನೆ ಮಾರ್ಕೆಟ್‌ನಲ್ಲೋ ಶಾಪಿಂಗ್ ನಲ್ಲೋ ಪಡ್ಡೆ ಹುಡುಗ್ರು ಡಿಕ್ಕಿ ಹೊಡ್ಕಂಡು ಹೋದ್ರೆ ಕಣ್ ಕಾಣಲ್ವಾ.

ಕುರುಡನ ಹಾಗೆ ನುಗ್‌ತ್ತಾನೆ ಎನ್ನುವಂತಹ ಮಾತಿದೆ.  ಪಾಪ, ನಾನು ನೋಡ್ದಂಗೆ ನಿಜವಾದ ಕಣ್ಣಿಲ್ಲದವರೂ ಯಾರಿಗೂ ತೊಂದ್ರೆ ಕೊಡದೆ ಬರೀ ಶಬ್ಧಗಳನ್ನ ಗ್ರಹಿಸ್ತಾ ಕೋಲನ್ನ ಹಿಡಿದೂ, ಅಥವಾ ಅವರವರೇ ಕೈ ಹಿಡಿದೊ, ರಸ್ತೆ ದಾಟುತ್ತಾರೆ.  ಯಾವುದೇ ರೀತಿಯ ತಲೆಹರಟೆಯಿಂದ ವರ್ತಿಸುವುದಿಲ್ಲ.

ಆದರೂ ಯಾರಾದರೂ ಈ ರೀತಿಯ ತಲೆಹರಟೆ, ತರಲೆಗಳನ್ನು ಮಾಡಿದಾಗ ಕುರ‍್ಡ ಕಣ್ ಕೊಟ್ಟಾ| ಅಂತಾನೊ ಆ ಕುರಡ ನನ್ನ ಮಗ, ಹಂಗ್ ಮಾಡ್ದಾ, ಹೀಂಗ್ ಮಾಡ್ದಾ, ಅಂತ ಮಾತುಗಳು.

ಹೌದು ಈ ಕುರುಡುತನ, ಎಂಬುದು ಹೀಗೇ? ಅಲ್ವಾ.  ಹುಟ್ಟು ಕುರುಡ ಮಧ್ಯದಲ್ಲಿ ಯಾವುದೋ ಕಾರಣಕ್ಕಾಗಿ ಕುರುಡಾದವರೋ, ಯಾವುದೋ ಅಪಘಾತದಲ್ಲಿ ಕಣ್ಣು ಕಳೆದುಕೊಂಡವರು, ಬೆಂಕಿಯ ಆಘಾತ, ಕಡೆಗೆ ಸಕ್ಕರೆ ಕಾಯಿಲೆ ಹೆಚ್ಚಾಗಿ ಸಹ ಕಣ್ಣು ಕಳೆದುಕೊಂಡವರೊ, ಆದರೇ ಹುಟ್ಟು ಕುರುಡನ ಕಥೆ ಹೆಂಗೆ ಕತ್ತಲೊಳಗೆ ಕೈ ಆಡಿದಂತೆ, ಏನೂ ಇಲ್ಲ, ಶೂನ್ಯ, ಶೂನ್ಯ ಬರೀ ಶೂನ್ಯ, ದೇವರು ಏನೋ ಒಂದು ಸಿಕ್ಸ್ತ್ ಸೆನ್ಸ್ ಕೊಟ್ಟರ‍್ತಾನೋ, ಸ್ಪರ್ಶ ಜ್ಞಾನ, ಶಬ್ದಗ್ರಹಣ ವಾತಾವರಣದ ವ್ಯತ್ಯಾಸ, ಮುಂತದವುಗಳಿಂದ ಅಂತ ಸಂದರ್ಭವನ್ನು ನಿರ್ಧರಿಸಬೇಕಾಗುತ್ತದೆ.

ಹುಟ್ಟು ಕುರುಡರಿಗೆ ಪ್ರಪಂಚದ ಕಲ್ಪನೆಯೇ ಇರುವುದಿಲ್ಲ ಅಲ್ವಾ; ನಾನು ಕಲ್ಪನೆ ಮಾಡಿಕೊಂಡು ಕಣ್ಮುಚ್ಚಿ ಮನೆಯಲ್ಲಿ ಓಡಾಡಲು ಹೋಗಿ, ಮಂಚಕ್ಕೆ ಸರಿಯಾಗಿ ತಾಗಿ ಎಡವಿದ್ದು ಉಂಟು, ಮೂತಿ ಹೊಡೆದು ಹೋಗುವ ಹಾಗೆ ಈ ಕತ್ತಲು ಅಂದರೆ ಭಯ ಹುಟ್ಟಿಸುವಂತೆ, ಯಾವಾಗಲೂ ಕಿವಿ, ಅಲರ್ಟ್ ಆಗಿರಲೇಬೇಕು.  ನಮಗೆ ತಿಳಿದ ಭಾಗ, ನಮ್ಮ ಮನೆ, ನಮ್ಮ ಕೊಠಡಿ, ಮುಂತಾದ ಕಡೆ, ಓಡಾಡಲೂ ಹೇಗೆ ಎಡವಿ ಬಿದ್ದು, ನಮಗೆ ಅಬ್ಭಾ, ಈ ಅಂಧರು ಹೇಗೆ ಓಡಾಡುತ್ತಾರೆ.

ಒಂದು ನಿಮಿಷ ಅವರ ಸ್ಥಾನದಲ್ಲಿ ನಿಂತು ಕಲ್ಪಿಸಿಕೊಳ್ಳಲು ಆಗುವುದಿಲ್ಲ.  ನಾನು ಸಹ ಬಿಗಿಯಾಗಿ ಕಣ್ಮುಚ್ಚಿ ಶೂನ್ಯದಲ್ಲಿ ಕೈಯಾಡಿಸಿಕೊಂಡು ಓಡಾಡಿ ನೋಡಿದ್ದುಂಟು.  ಇನ್ನೊಂದು ಈ ಪ್ರಾಣಿ ಗಳು ಕುರುಡಾದ್ರೆ ಏನ್ಮಾಡ್ತವೋ ಅಂತ ನಮ್ಮ ಮನೆ, ನಾಯಿಯನ್ನೇ ದಿಟ್ಟುಸುತ್ತೇನೆ.  ಅಂಧ ಮಕ್ಕಳ ಆಶ್ರಮ ಅದು ಇದು ಅಂತ, ಬಹಳಷ್ಟು ಅಂಧ ಮಕ್ಕಳಶಾಲೆ ಎಲ್ಲಾ ಉಂಟು.  ಆದರೆ, ನನಗನ್ನಿಸುತ್ತೆ ನಮ್ಮಗಳ ಜೊತೆಯೋ ಅವರನ್ನ ಬೆಳೆಸುತ್ತಾ ಮನೆಯವರೇ ಜವಾಬ್ದಾರಿ ಇರಿಸಿಕೊಂಡು ಏಕೆ ಒಟ್ಟಿಗೆ ಬಾಳ್ವೆ ಮಾಡಬಾರದು, ಇಲ್ಲಿ ಬಡವರ ಸಿರಿವಂತರ ಪ್ರಶ್ನೆ ಅಲ್ಲ.

ಬಡವರು ಬೇರೆ ಮಕ್ಕಳನ್ನು ಬಡತನ ಇದೆ ಎಂದು ಸಾಕುವುದಿಲ್ವೇ, ಹಾಗೇ, ಶಾಲೆಗೆ ಕಳಿಸಲಿ, ಏಕೆ ಹೀಗೆ, ಅನಾಥ ಆಶ್ರಮಕ್ಕೆ ಸೇರಿಸ್ತಾರೋ ತಿಳಿಯುವುದಿಲ್ಲ.  ಅವರೇನೋ, ಅನಾಥರಲ್ಲವಲ್ಲ ಬೆಂಗಳೂರಿನ ಹಲವು ಬೀದಿಗಳಲ್ಲಿ (ಬೇರೆ ಬೇರೆ ಊರುಗಳಲ್ಲೂ ಸಹ ಇರಬಹುದು), ಮೈಕ್ ಇಟ್ಕೊಂಡು, ಹಾಡೇಳಿಕೊಂಡು ಪಾಪ ಒಂದು ಬೇರೆ ರೀತಿಯ ಬಿಕ್ಷೆ ಅನ್ನಿಸುತ್ತದೆ.  ಹಾಡೇಳುತ್ತಾ ಇರುತ್ತಾರೆ.

ಯಾಕ್ರೀ ಹೆತ್ತವರೇ ಇಷ್ಟೇ ಬಡತನ ಇರಲಿ, ಶ್ರೀಮಂತಿಕೆ ಇರಲಿ, ನೀವು ಹೆತ್ತ ಮಕ್ಕಳನ್ನು ನೀವು ಸಾಕುವುದಿಲ್ವಾ?  ಕುರುಡರಾದ ತಕ್ಷಣ ಈ ರೀತಿ ಏಕೆ ಆಶ್ರಮಕ್ಕೆ ಸೇರಿಸ್ತೀರಾ?  ಅಂತ, ಗಟ್ಟಿಸಿ ಕೇಳಬೇಕೆನಿಸುತ್ತದೆ.  ಹಾಗೆ ಕೈಲಾದಷ್ಟು ವೈದ್ಯರ ಸಹಾಯ ಪಡೆದು ಅವರಿಗೆ ದೃಷ್ಟಿ ಕೊಡಿಸಲು ಪ್ರಯತ್ನಸಿ ಅಂತ ಅನ್ನಬೇಕೆನಿಸುತ್ತದೆ.

ಜಗತ್ತಿನ ಪ್ರಕೃತಿ ಸೌಂದರ್ಯವಾದ “ಸ್ವಿಜ್ಜರ್‌ಲ್ಯಾಂಡ್” ಗೆ ಹೋಗಿದ್ದೆವು.  ಪ್ರಕೃತಿ ಸೌಂದರ್ಯವನ್ನು ನೋಡು, ಮನಸ್ಸು ಗಾಳಿ ತುಂಬಿದ ಬೆಲೂನಿನಂತೆ ಹಾರಾಡುತ್ತಿತ್ತು ಸಲ್ವಾ ದೈವ ಸೃಷ್ಟಿಯೋ ಅಂತ, ಆ ಹಿಮಾಚ್ಛಾದಿತ ಪರ್ವತಗಳು ಸ್ವಲ್ಪ ಬಿಸಿಲಿಗೆ ಹೀಗೆ, ಯಾಕೋ ಸಡನ್ ಆಗಿ ಕುರುಡರ ನೆನಪಾಯ್ತು.  ದೇವ್ರೆ, ಖಂಡಿತ, ಈ ಜಗತ್ತಿನಲ್ಲಿ ಕುರುಡರನ್ನು ಮಾತ್ರ ಸೃಷ್ಠಿಸಬೇಡಪ್ಪಾ – ದೇವ್ರೇ ಅಂತ ಕಾಣದ ದೇವರಲ್ಲಿ ಮೊರೆ ಇಟ್ಟಿದ್ದು ಸತ್ಯ, ನಾನು ಸಹ ಬೆಂಗಳೂರಿಗೆ ಬಂದ ತಕ್ಷಣ ನಾರಾಯಣ ನೇತ್ರಾಲಯಕ್ಕೆ ನೇತ್ರದಾನಕ್ಕೆ ಬರೆಸಿ ರಿಜಿಸ್ಟರ್ ಮಾಡಿ ಬಂದು ಒಂದು ನಿಟ್ಟುಸಿರಿಟ್ಟಿದ್ದಂತೂ ನಿಜ.

ಮಕ್ಕಳ ಕೈಯಲ್ಲಿ ಕಾರ್ಡನ್ನು ತೋರಿಸಿ, ನಾನು ಸತ್ತ ನಂತರ ದಯವಿಟ್ಟು ನನ್ನ ನೇತ್ರದಾನ ಮಾಡಿ ಎಂದು ಹೇಳಿದ್ದು ಅತ್ಯಂತ ಪ್ರಕೃತಿ ಪ್ರಿಯಳಾದ ನನಗೆ ಅದಕ್ಕೆಂದೇ ಬಹಳಷ್ಟು ಪ್ರವಾಸಗಳನ್ನು ಕೈಗೊಳ್ಳುವ ನನಗೆ ಆ ಸೌಂದರ್ಯದಲ್ಲಿ ಮೈಮರೆಯುವ ಹುಚ್ಚು.  ಅಂಧರಿಗೆ ಹೇಗೆ, ಇದರ ಕಲ್ಪನೆಯನ್ನು ಹೇಳಲು ಸಾಧ್ಯವಿಲ್ಲ ಅಲ್ವಾ?  ಅನ್ನಿಸುತ್ತದೆ.  ಯಾವುದೇ ಕುಳಿ ಗಾಳಿ, ಪ್ರಕೃತಿ ಸುವಾಸನೆಯನ್ನು ಆಸ್ವಾದಿಸಿದರೂ ಆ ಕಲ್ಪನೆಯ ಚಿತ್ರ ಬರಲು ಸಾಧ್ಯವೇ ಇಲ್ಲ.

“ಕುರುಡ ಆನೆ ಮುಟ್ಟಿದಂತೆ” ಎಂಬ ಗಾದೆ ಮಾತು ಸತ್ಯ,  ಇಲ್ಲಿ ಇನ್ನೊಂದು ಮಾತು ಅಂದ್ರೆ, ಇಷ್ಟು ಹುಟ್ಟು ಕುರುಡರ ಕಥೆ ಆದ್ರೆ, ಮಧ್ಯದಲ್ಲಿ ಅಪಘಾತದಲ್ಲೋ ಅಥವಾ ಆರೋಗ್ಯದ ಕಾರಣದಿಂದಲೋ ಕಣ್ಣು (ದೃಷ್ಠಿಹೀನ) ಹೋದರೆ, ಅವರು ಮೊದಲು ಕಂಡ, ಬೆಳಕು, ಕತ್ತಲೆ, ಸೂರ್ಯ, ಚಂದ್ರ, ನೀರು ಬಣ್ಣಗಳು ಎಲ್ಲವೂ ಸಹ ನೆನಪಿಗೆ ಬರುತ್ತದೆ ಅಲ್ವಾ? ನಾವು ಏನನ್ನಾದರೂ ಹೇಳಿದರೇ ಕಲ್ಪಿಸಿಕೊಳ್ಳುವಷ್ಟಾದರೂ, ಇರುತ್ತದೆ.

ಆದರೆ ಹುಟ್ಟು ಅಂಧಕಾರ ಬಹಳ ಭಯಂಕರ ಬಿಡ್ರಿ.  ನ್ಯಾಯದೇವತೆಯು ಕಣ್ಣೆಗೆ ಬಟ್ಟೆ ಕಟ್ಟಿ ಅಂಧ ಕಾನೂನು ಅಂತಾರೆ.  ಕಾನೂನು ಏನು ತಿಳಿಯದೇ ತೀರ್ಪು ಕೊಡುತ್ತೆ ಅಂತಾನಾ? ಇನ್ನು ಪ್ರೇಮ ರಾಗ, ನಮ್ಮ ಶೃಂಗಾರ ಸೌಂದರ್ಯಗಳಲ್ಲಂತೂ ಕಣ್ಣು ಸರಿಯಾಗಿ ಕಾಣದಿದ್ದರೇ, ಕನ್ನಡಕ ಬಂತು ಎಷ್ಟು ಸಂಶೋಧನೆಗಳನ್ನು ಮಾಡಿ, ಅವರ ದೃಷ್ಠಿ ದೋಷಕ್ಕೆ ಕಾರಣವಾದ ಮಸೂರ, ತೆಳು ಗಾಜು ಕಣ್ಣಿಗೆ ಹಾಕೇ ಇಲ್ಲ ಎನ್ನುವಂತಹ ಕನ್ನಡಕಗಳು ಬಂದವು.

ಅಬ್ಬಾ ಈಗ ಕನ್ನಡಕ ಇಲ್ಲ ಲೆನ್ಸ್ ಬಂತು.  ಆ ಕಣ್ಣ ಗುಡ್ಡೆಗೆ ಲೆನ್ಸ್ ಹಾಕುವುದು ಮನಸ್ಸಿನ ವಿಜ್ಞಾನಿಗಳ ವೈದ್ಯ ತಂಡದ ಚಮತ್ಕಾರಕ್ಕೇ ತಲೆದೂಗಲೇ ಬೇಕು.  ಹೋ ಈಗಂತೂ, 10 ನಿಮಿಷದಲ್ಲಿ ಲೇಸರ್ ಆಪರೇಷನ್, ಕಣ್ಣಿನ ರೆಟಿನಾವನ್ನೇ ಸರಿಪಡಿಸಿ ಹೋಗಿ ಆರಾಮವಾಗಿ ಹತ್ತು ನಿಮಿಷದಲ್ಲೇ ಓಡಾಡಿಕೊಂಡಿರುವಂತೆ ಮಾಡುತ್ತಾರೆ.  ಗ್ರೇಟ್ ಅಲ್ವಾ?  ನಿಜಕ್ಕೂ ಕಣ್ಣಿನ ವಿಷಯದಲ್ಲಿ ಏನೇನೋ ಅದ್ಭುತಗಳು ಬಂದಿವೆ.  ಸತ್ತ ಮನುಷ್ಯನ ಕಣ್ಣನ್ನು ತೆಗೆದು, ಒಬ್ಬ ಅಂಧನಿಗೆ ಜೋಡಿಸಿ ಅವನಿಗೆ ದೃಷ್ಠ ಬರುವಂತೆ, ಮಾಡುವುದು, ವಿಜ್ಞಾನದ ಅದ್ಭುತಗಳಲ್ಲಿ ಒಂದು.

ವಯಸ್ಸಾದ ಮೇಲೆ ಸಹ ಕಣ್ಣು ಕಾಣುವಂತಹ ಅನೇಕ ಸಲ್ಯೂಷನ್‌ಗಳನ್ನು ವೈದ್ಯ ವಿಜ್ಞಾನಿಗಳ ಲೋಕ ಕಂಡು ಹಿಡಿದದ್ದು ಅದ್ಭುತವೇ ಸರಿ.  ಇಲ್ಲಿ ನಮ್ಮ ನೇತ್ರ ತಜ್ಞ ಮೋದಿಯವರನ್ನು ಸಹ ನೆನೆಯಲೇ ಬೇಕು.  ಎಷ್ಟು ಜನರಿಗೆ ದೃಷ್ಠಿ ನೀಡಿದ್ದಾರೋ,  ಕಣ್ಣೆ ಎಲ್ಲಾ,  ನಿನ್ನ ಕೈಗನ್ನಡಿಯಲ್ಲಿ, ಚೆಲುವೆಯ ಅಂದದ ಮೊಗಕೆ, ಕಣ್ಣು ಕಣ್ಣು  ಕಲೆತಾಗ, ಹೀಗೆ ಕಣ್ಣಿನ ಬಗ್ಗೆ ಅನೇಕ ಹಾಡುಗಳನ್ನೇ ನೂರಾರು ಉದಾಹರಿಸಬಹುದಾಗಿದೆ.

ಕವಿಯ ಕಲ್ಪನೆಯಲ್ಲಿ ಮುಖದ ಚೆಲುವಿಗೆ ಕಣ್ಣೆ ಸಾಕು.  ನಮ್ಮ ಡಿಂಡಿಮ ಕವಿಯು “ಕಮಲೇ ಕಮಲೋತ್ಪತ್ತಿಃ” ಎಂದು ಕಮಲದಂತಹ ಮುಖದಲ್ಲಿ ಉತ್ಪತ್ತಿಯಾದಂತಹ ಕಮಲಗಳು ಎಂಥ ಕಣ್ಣುಗಳು, ಎಂಬಂತಹ ಅರ್ಥ ಕೊಡುತ್ತದೆ.  ಯಾವುದೇ ಕಾವ್ಯ ಓದುವಾಗ ಹೆಣ್ಣಿನ ಬಣ್ಣನೆ ಇದ್ದರೆ ಅದಕ್ಕೆ ಕಣ್ಣೇ ಕಾರಣ.  ಇನ್ನು ಎಲ್ಲಾ ಭಾವನೆಗಳನ್ನು ಮನುಷ್ಯನು ತನ್ನ ಕಣ್ಣುಗಳಿಂದಲೇ ವ್ಯಕ್ತಪಡಿಸುವುದು.

ದುಃಖ, ಸಂತೋಷ, ಪ್ರೇಮ, ಕಾಮ, ತುಂಟಾಟ, ನವರಸಗಳನ್ನು ಸಹ ಕಣ್ಣಿನಿಂದಲೇ ವ್ಯಕ್ತಪಡಿಸಲು ಸಾಧ್ಯ ಅಲ್ಲವೇ?  ಅಂತಹ ಕಣ್ಣೇ ಇಲ್ಲ ಅಂದ್ರೆ ಹೇಗಲ್ವಾ ದೇವರೇ ಅಂತ, ನಮ್ಮ ಕಣ್ಣಿನ ವೈದ್ಯರಿಗೆ, ನಿಜವಾಗ್ಲೂ ಎರಡು ಕೈ ಎತ್ತಿ ಮುಗಿಯಬೇಕು.  ವೈದ್ಯರುಗಳು ಕಣ್ಣಿನ ಬಗ್ಗೆ ವಿಶೇಷವಾಗಿ ಓದಿ, ದೃಷ್ಠಿ ದಾನದಂತಹ ಅದ್ಭುತ ಚಮತ್ಕಾರದ ಆಪರೇಷನ್ ಮಾಡಿ ದೃಷ್ಠಿ ಬರುವಂತೆ ಮಾಡುತ್ತಾರೆ ಎಂದ್ರೆ ಅಬ್ಬಾ! ಮನುಷ್ಯನ ಬುದ್ದಿವಂತಿಕೆಗೆ ವೈದ್ಯ ಲೋಕಕ್ಕೆ ಭೇಷ್ ಅಂತ ಅನ್ನಲೇಬೇಕು.  ವಯಸ್ಸಾದವರಿಗೆ ಕಣ್ಣಿನ ಪೊರೆ, ತೆಗೆದು ಮಾಡುವ ಆಪರೇಷನ್, ಕಣ್ಣಿನ ದೃಷ್ಠಿಯನ್ನು ಹೊಳಪು ಬರಿಸುವುದು, ಏನೀ ವಿಸ್ಮಯವೇ?

ನಾನು, ಮೊದಲು ಅಂದುಕೊಳ್ಳುತ್ತಾ ಇದ್ದೆ, ಪುಣ್ಯಾತ್ಮ ಅಲ್ವಾ? ಇನ್ನು ಹುಟ್ಟು ಅಂಧಕಾರದಲ್ಲಿರುವವರು ಎಲ್ಲಾ ಸ್ಪರ್ಶ ಜ್ಞಾನದಿಂದಲೇ ತಿಳಿಯಬೇಕಲ್ಲವೇ? ಅದಕ್ಕೆ ಓದು ಬರಹದ ಕಲ್ಪನೆಯಲ್ಲಿ ಬ್ರೈಲ್ ಲಿಪಿ ಕಂಡು ಹಿಡಿದ “ಲೂಯಿಸ್ ಬ್ರೈಲ್” ಫ್ರೆಂಚ್ ಶಿಕ್ಷಣ ತಜ್ಞರನ್ನು ಜ್ಞಾಪಿಸಿಕೊಳ್ಳಲೇ ಬೇಕು.  ಅಲ್ಲಿಂದ ಆರಂಭವಾದ ಬ್ರೈಲ್ ಆಕ್ಟ್, ಕುರುಡರಿಗೆ ಉಪಯುಕ್ತವಾದಂತಹ ಎಷ್ಟೋ ಸಂಗತಿಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ.

ಅವರಿಗೆ ಕಣ್ಣು ಗ್ರಹಣ ಶಕ್ತಿ ಬಹಳ ಸೂಕ್ಷ್ಮವಾಗಿರುವುದರಿಂದ ಇರಬೇಕು.  ಬಹಳಷ್ಟು ಕುರುಡರು ಸಂಗೀತಗಾರರಾಗಿ ತಮ್ಮ ಜೀವಿತವನ್ನು ಕಳೆದಿದ್ದಾರೆ ಎಂದು ಹೇಳಬಹುದು.  ಹಿಂದೆ ಸಿಡುಬು ರೋಗದಂತಹ ಮಾರಕ (ಅಮ್ಮ) ಬಂದರೂ ಸಹ ಈ ದೃಷ್ಟಿ ಮಾಂಧ್ಯತೆ, ಬರುತ್ತಲಿತ್ತು.  ಆ ಸಿಡುಬಿನ ಭೀಕರ ಪರಿಣಾಮದಿಂದ ಅಂಧಕಾರವಾಗ್ತ ಇತ್ತು.  ಈಗ ಬಹಳಷ್ಟು ಅಂಧ ಮಕ್ಕಳು ನೃತ್ಯ ಪ್ರಕಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಏನೋ ಒಟ್ಟಿನಲ್ಲಿ ಅಂಧರ ಬಗ್ಗೆ ಯೋಚಿಸುತ್ತಿದ್ದರೆ, ಬಹಳಷ್ಟು ಚಿಂತನೆಗಳು ತಲೆಯಲ್ಲಿ ತುಂಬುತ್ತವೆ.  ಅವರನ್ನು ಅಂಧರೆಂದು, ಗುರುತಿಸಲಿ, ಅವರಿಗೇ ಯಾರು ತೊಂದರೆ ಕೊಡದಿರಲಿ ಎಂಬ ಕಾರಣಕ್ಕಾಗಿಯೇ ಕಪ್ಪು ಗ್ಲಾಸಿನ ಕನ್ನಡಕವೇನೋ ಚಾಲ್ತಿಯಲ್ಲಿವೆ.

ಹಾಗೆ ಸ್ಪರ್ಶ ಜ್ಞಾನ ತಿಳಿಯಲು ವಾಕಿಂಗ್ ಸ್ಟಿಕ್‌ನಂತಹ ಕೋಲು ಸಹ ಇದೆ. ಹಾಗೇ ನಾವು ಸರ‍್ಯನ ಕಣ್ಣಿಗೆ ತಡೆಯೊಡ್ಡಲು, ಹಾಗೇ ಫ್ಯಾಶನ್‌ಗೆ ಸಹ ಕಪ್ಪು ಕನ್ನಡಕವನ್ನು ಧರಿಸುತ್ತೇವೆ.  ಆಗ ಸಹ ಏನೋ ನಾನೂನೂ ಕುರ‍್ಡನಾ? ಅನ್ನುವ ಮಾತು, ನನಗೇ ಯಾರಾದರೂ ಆ ಮಾತೆತ್ತಿದರೆ ತುಂಬವೇ ಕೋಪ ಬರುತ್ತೆ.  ಬಹಳಷ್ಟು ಕುರುಡರ ಬಗ್ಗೆ ಚಿತ್ರಗಳೂ ಸಹ ಬಂದಿವೆ.  ಮನಮುಟ್ಟುವಷ್ಟು ಪರಿಣಾಮಕಾರಿಯಾದಂತಹ ಚಲನ ಚಿತ್ರಗಳನ್ನು ನೋಡಿದ್ದು, ನನಗೆ ನೆನಪಿಲ್ಲ.

ಹಾಂ, ಅಂದ ಹಾಗೆ ನನಗೆ ನೆನಪಾಯ್ತು ಪ್ರಾಣ , ಪಕ್ಷಿಗಳ ಕುರುಡಿನ ಬಗ್ಗೆ ಯೋಚಿಸ್ತಾ ಇದ್ದೆ.  ನನಗೇ ತಿಳಿದಿಲ್ಲ.  ಒಂದು ಘಟನೆಯಂತೂ ನೆನಪಿದೆ, ಒಂದ್ಸಾರಿ ನಮ್ಮ ಮನೆಯಲ್ಲಿ ಅಮ್ಮ ಮೀನು ಸಾರು ಮಾಡಿ ಇಟ್ಟಿದ್ರು, ಅದರ ವಾಸನೆಗೆ ಬೆಕ್ಕು ಬಂದಿತ್ತು, ಅಡಿಗೆ ಮನೆಯಲ್ಲಿ ಯಾರು ಇಲ್ಲದಾಗ, ಆ ಬೆಕ್ಕು ಹೋಗಿ ಆ ಸಾರಿನ ಪಾತ್ರೆಗೆ ಮುಖ ಹಾಕಿ ಸಾರು ಖಾಲಿ ಮಾಡಿದೆ.  ಚಿಕ್ಕ ಬಾಯಿಯ ಪಾತ್ರೆ ಅದು ಪೂರ್ತಿ ಸಾರನ್ನು ತಿಂದ ನಂತರ ತಲೆ ಎತ್ತಲು ಹೋಗಿದೆ.

ಆಚೆ ಬರಲು ಆಗಿಲ್ಲ, ಪಾತ್ರೆ ಸಮೇತ ಹೊರಗೆ ಬಂದು ದಾಂಧಲೆ ಎಬ್ಬಿಸ್ತಾ ಇತ್ತು.  ನಾವೆಲ್ಲಾ ಹೋದ ಗಾಬರಿಗೆ, ಸಿಕ್ಕ ಸಿಕ್ಕೆಲ್ಲಾ ಕಡೆ, ಓಡೋಗಿ ಗೋಡೆಗೆ ಡ್ಯಾಷ್ ಹೊಡೆದು, ಹೇಗ್ಹೇಗೋ ಓಡಾಡ್ತಾ ಇತ್ತು.  ಕಡೇಗೆ ಅದನ್ನ ಹಿಡಿದು ಪಾತ್ರೆ ಹೊರ ತೆಗೆದು ಅದರ ಮುಖ ಕ್ಲೀನ್ ಮಾಡಿ ಬಿಡುವಾಗ ಸಾಕೋ ಸಾಕಾಯ್ತು.  ಹೀಗೆ ಇನ್ನು ಕಣ್ಣಿಲ್ಲದ ಪ್ರಾಣ ಗಳ ಕಥೆ ಹೇಗೇ ಅಂತ.

ಅಂತೂ ಯಾವಗಲೂ ಪ್ರಕೃತಿಯ ಸೌಂದರ್ಯ, ಹೂವು ಬೆಟ್ಟ-ಗುಡ್ಡ, ಕಾಡು-ಮೇಡು, ಮೋಡ ಎಲ್ಲಾ ಬಗೆಯ ಪ್ರಕೃತಿಯ ವೈಚಿತ್ರ್ಯಗಳನ್ನು ಕಾಣುವಾಗ, ಆನಂದಿಸುವಾಗ, ಭಾವಾವೇಶಕ್ಕೆ ಒಳಗಾದಾಗ, ಇಲ್ಲಿ ಇನ್ನೊಂದು ವಿಷಯ ಪ್ರೀತಿ ಕುರುಡು ಅನ್ನುವಂತಹ ಮಾತಿದೆ.  ಬಹುಶಃ ಈ ಮಾತು, ಏಕೆ ಬಂದಿರಬಹುದು ಅಂದ್ರೆ, ಪ್ರೀತಿ ಎಂಬುದು ಭಾವಕ್ಕೆ ಭಾವನೆಗಳಿಗೆ ಸಂಬಂಧಪಟ್ಟಿದ್ದು ಎನಿಸುತ್ತೆ.  ಅದಕ್ಕೆ ಕಾಣುವಿಕೆ ಮುಖ್ಯವಲ್ಲ ಅನ್ನಿಸುತ್ತೆ.  ಭಾವಕ್ಕೆ ಭಾವಸ್ಪಂದನೆ ಉಂಟಾಗಬೇಕು.  ಆದ್ದರಿಂದ ಪ್ರೀತಿಯನ್ನು ಕುರುಡುತನಕ್ಕೆ “love is blind“ ಅಂತ ಹೇಳ್ತಾರೆ ಅಂತ ಕಾಣುತ್ತೆ ಒಟ್ಟಿನಲ್ಲಿ ನನ್ನದು ದೇವನಲ್ಲಿ ಒಂದೇ ಒಂದು ಮನಃಪೂರ್ವಕ ಪ್ರಾರ್ಥನೆ.
ಇಂತಹ ಸುಂದರ
ಸೃಷ್ಠಿಯ ಸೃಷ್ಠಿಸಿದ
ಹೇ, ಭಗವಂತಾ
ಅಂಧರ ಸೃಷ್ಠಿಸಬೇಡ
ಈ ಜಗದೊಳು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending