ದಿನದ ಸುದ್ದಿ
ನಾಟಿ ವ್ಯದ್ಯನ ನಕರಾ ಟ್ರಿಟ್ಮೆಂಟ್ ; ಇವನು ಡಮ್ಮಿ ಡಾಕ್ಟರ್… !
ಸುದ್ದಿದಿನ,ವಿಶೇಷ : ವ್ಯದ್ಯೋ ನಾರಾಯಣ ಹರಿ ಅಂತ ಡಾಕ್ಟರನ ಯಾಕ್ಕೆ ಕರೀತಿವಿ ಅಂದ್ರೆ, ದೇವರು ಬಿಟ್ರೆ ಆ ಸ್ಥಾನವನ್ನು ತುಂಬಬಲ್ಲ ಮತ್ತೊಂದು ಸ್ಥಾನವೇ ಈ ಡಾಕ್ಟರ್.ಅಂತಹ ನಾಮಕ್ಕೆ ಇಲ್ಲೊಬ್ಬ ಡಮ್ಮಿ ಡಾಕ್ಟರ್ ಕಳಂಕತಂದಿಟು ಮುದ್ದಾದ ಮಗುವಿನ ಜೀವನದಲ್ಲಿ ಮುಳ್ಳಾಗಿದ್ದಾನೆ. ಡಾಕ್ಟರ್ ಮಾಡಿದ ಕೆಲಸಕ್ಕೆ ಜೀವನ ಪರೀಯಂತ ಹುಡುಗನ ಕೈ ಇಲದಂತೆ ಮಾಡಿ ಅಂಗವಿಕಲನನಾಗಿ ಮಾಡಿದ್ದಾನೆ.
ಈ ಹುಡುಗನ ಹೆಸರು ಆದರ್ಶ. ನಾಟಿವ್ಯದ್ಯನು ಮಾಡ್ಡಿದ ಅವಾಂತರಗಳಿಂದ.ಜೀವನ ಪರಿಯಂತ ಕೈ ಕಳೆದುಕೊಂಡು ತನ್ನ ಆಸೆ ಆಕಾಂಕ್ಷೆ ಆದರ್ಶಗಳು ಇನ್ನು ಮುಂದೆ ಯುವಕನ ಬಾಳಲ್ಲಿ ಕೇವಲ ಕೈ ಚೀಲದ ಕನಸುಗಳಂತಾಗಿದೆ.ತನ್ನ ಸ್ನೇಹಿತರ ಜೊತೆ ಆಟವಾಡಲು ಸಹ ಇವನಿಗೆ ಆಗುತ್ತಿಲ್ಲ.ಇವನ ತರ್ಲೆ ತುಟಾಂಟಗಳು ಹೆತ್ತವರಿಗೆ ದಿನೇ ದಿನೇ ಕ್ಷಿಣಿಸುತ್ತಿದೆ. ಕೇವಲ ನೆನಪುಗಳಾಗಿ ಕಾಡುತ್ತಿದೆ.ಇನ್ನು ಇವನ ಸ್ನೆಹೀತರಿಗಂತು ಇವನ್ನು ಕೈ ಕಳೆದುಕೊಂಡಿದು ಕಾಣದ ಕನಸಾಗಿದೆ.
ಶಾಲಾ ರಜಾದಿನಗಳಲ್ಲಿ ಮಕ್ಕಳ ಆಟ, ತುಟಾಂಟ. ಗಲಾಟೆ,ಹೆತ್ತವರಿಗಂತು ಸಾಕ್ಕಪ ಸಾಕ್ಕು ಈ ರಜಾ ದಿನಗಳು. ಯಾವಾಗ ಮುಗಿದು ಶಾಲೆ ಪ್ರಾರಂಭವಾಗುತ್ತೆ ಅನಿಸ್ಸಿರುತ್ತೆ. ಹೀಗೆ ಮನೆಯವರ ಕೈ ಗೆ ಸಿಗದೆ ಆಟವಾಡುತ್ತಿದ 8 ವರ್ಷದ ಬಾಲಕ ಆದರ್ಶ ಕಾಲು ಜಾರಿ ಬಿಳುತ್ತಾನೆ. ಕೈ ಗೆ ಬಲವಾದ ಪೆಟ್ಟು ಬಿದಿರುವದರಿಂದ ಆದರ್ಶನನ್ನು ಲಿಂಗಸುಗೂರಿನ ಎಲಬು ಮತ್ತು ಕೀಲು ತಜ್ಞ ಡಾ,ಹರ್ಷವರ್ಧನ ಹತ್ತಿರ ಚಕಿತ್ಸೆ ಕೊಡಿಸುತ್ತಾರೆ.ಯಾವುದೇ ಕಾರಣಕ್ಕು ಕೈಗೆ ಹಾಕ್ಕಿದ ಪಟ್ಟಿಯನ್ನು ಬಿಚ್ಚಬಾರದು ಅಂತಾ ಹೇಳಿರುತ್ತಾರೆ.
ಇನ್ನೇನು ರಜಾ ದಿನಗಳು ಮುಗ್ಗಿದು ಶಾಲೆ ಪ್ರಾರಂಭವಾಗುವ ದಿನ ಬಾಲಕ ಬೇಗ ಚೇತರಿಸಿಕೊಳ್ಳಲ್ಲಿ ಅಂತಾ ಹೆತ್ತವರು ನೆರೆ ಹೊರೆಯರ ಮಾತುಕೇಳಿ ದೇವದುರ್ಗ ತಾಲೂಕಿನ ಚೀಚೊಂಡಿ ಗ್ರಾಮದ ಪರಮಣ್ಣ ಬನಗುಂಡಿ ಎಂಬ ನಾಟಿ ವ್ಯದ್ಯನ ಹತ್ತಿರ ಕರೆದುಕೊಂಡು ಹೊಗುತ್ತಾರೆ.
ಅಲ್ಲಿ ಕಾದಿತ್ತು ನೋಡಿ ಗಂಡಾತಂರ.
ಈ ಹುಡುಗನ ಬಾಳಿನಲ್ಲಿ ಎಲ್ಲಿ ಅಡಗಿ ಕುತ್ತಿದನೋ ಈ ನಾಟಿ ವ್ಯದ್ಯ ಪರಮಣ್ಣ .ಬ್ರಹ್ಮಬರೆದ ವಿಧಿಯನ್ನೆ ಬದಲಾಯಿಸಬಿಟ್ಟ .ಅದು ಯಾವ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದನೋ ಗೊತ್ತಿಲ್ಲ ಯಾವ ಫಾರಿನ ಟ್ರಿಟ್ಮೆಂಟ್ ಕೊಟ್ಟನೋ ಎನ್ನೋ…ಡಾಕ್ಟರ್ ಹಾಕ್ಕಿದ ಪ್ಲಾಸ್ಟರ್ ಬಿಚ್ಚಿ ಅವನ ನಾಟಿ ಔಷಧಿ ಯನ್ನು ಹಾಕ್ಕಿ ಬೀಗಿಯಾಗಿ ಎಳೆದು ಕಟ್ಟಿದ್ದಾನೆ . 8 ವರ್ಷದ ಎಳೆಯ ಕೈ ಗಳು ಮರುದಿನವೇ ಅಡ್ಡ ಪರಿಣಾಮ ಬೀರಿ ಏಕಾಏಕಿ ಕೈ ಗಳು ಬಾವು,ನೊವು ಕಾಣಿಸಿಕೊಂಡಿದೆ.ಹೆತ್ತವರಿಗೆ ಭಯ ಉಟಾಂಗಿ ನಾಟಿ ವ್ಯದ್ಯನನ್ನು ಸಂಪರ್ಕಿಸಿದ್ದಾರೆ.ನಾಟಿ ವೈದ್ಯ ನಾಟಿ ನಾಟಿಯಾಗಿ ಉತ್ತರಿಸಿದ್ದಾನೆ. ಯಾವುದೇ ಕಾರಣಕ್ಕು 21 ದಿನಗಳವರೆಗೆ ಬಿಚ್ಚಬೇಡಿ ಎಂದಿದ್ದಾನೆ.ಆದ್ದರೆ ಮಗುವಿಗೆ ನೋವು ತೀವ್ರವಾಗಿ ಕಾಣಿಸಿಕೊಂಡಿದೆ. ಇದನ್ನು ಕಂಡ ಹೆತ್ತವರು ಡಾ,ಹರ್ಷವರ್ಧನ ಹತ್ತಿರ ಕರೆದುಕೊಂಡು ಹೊಗಿದ್ದಾರೆ .ಅಲ್ಲಿ ಕಾದಿತ್ತು ನೋಡಿ ನಾಟಿ ವ್ಯದ್ಯ ನ ತರಲೆ ಚಿಕಿತ್ಸೆ. ನಾಟಿ ವ್ಯದ್ಯ ನ ಪಟ್ಟಿಯನ್ನು ಬಿಚ್ಚಿ ನೋಡಿದ ಡಾ,ಹರ್ಷವರ್ಧನಗೆ ಆ ದೃಶ್ಯವನ್ನು ಕಂಡು ಒಂದು ಕ್ಷಣ ಸಿಡಿಲು ಬಡ್ಡಿದಂತಾಗಿದೆ .ಯಾಕಂದ್ರೆ ಕೈ ಗಳು ರಕ್ತ ಚಲನೆ ಇಲ್ಲದೆ ಕಪ್ಪು ಬಣ್ಣಕ್ಕೆ ತಿರುಗಿ ಕೈ ನರಗಳು ಸತ್ತು ಹೋಗಿವೆ.ಇದರಿಂದ ಭಯ ಭಿತ್ತರಾಗಿ ಬಾಲಕನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಹಾರಾಷ್ಟ್ರ ದ ಮೀರಜ್ ಜೆ.ಎಸ್ ಕೆ ಖಾಸಗಿ ಆಸ್ಪತ್ರೆ ಗೆ ಕರೆದುಕೊಂಡು ಹೊಗಿದ್ದಾರೆ.
ಖಾಸಗಿ ಆಸ್ಪತ್ರೆ ಯಲ್ಲಿ ವೈದ್ಯರು ಹೇಳಿದಂತೆ ನಾಟಿ ಔಷಧಿಯ ಅಡ್ಡಪರಿಣಾಮದಿಂದ ಮಗುವಿನ ನರಗಳು ಸತ್ತುಹೊಗಿದೆ.ಹೀಗೆ ಬಿಟ್ಟರೆ ದೇಹದಲ್ಲಿ ಹರಡಿಕೊಳ್ಳುತದೆ.ಇದರಿಂದ ಮಗುವಿನ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.ಕೈ ಬೇಕು ಅಂದ್ರೆ ಪ್ರಾಣ ಇರಲ್ಲ ಪ್ರಾಣ ಬೇಕು ಅಂದ್ರೆ ಕೈ ಕತ್ತರಿಸಲೆಬೇಕು ಎಂದಾಗ ಅನಿವಾರ್ಯವಾಗಿ ಮಗುವಿನ ಮೋಣ ಕೈ ಕೆಳಗೆ ಕತ್ತರಿಸಲಾಗುತ್ತದೆ.ಮೋದಲೆ ಬಡ ಕುಟುಂಬ ಸುಮಾರ ಎರಡು ಲಕ್ಷ ಕಳೆದುಕೊಂಡು ಸಾಲಗಾರರಾಗಿ ತಿರುಗುತ್ತಿದ್ದಾರೆ.ಇತ್ತಕಡೆ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದರು ಪ್ರಯೋಜನವಾಗಿಲ್ಲ. ವೈದ್ಯನಿಂದ ಯಾವುದೇ ಸಹಾಯವು ಇಲ್ಲ. ಘಟನೆ ನಡೆದ ದಿನದಿಂದ ನಾಟಿ ವ್ಯದ್ಯ ಪರಾರಿಯಾಗ್ಗಿದಾನೆ .ಇನ್ನು ಮಗನ ಚಿಕಿತ್ಸೆಗಾಗಿ ಹೆತ್ತವರು ಕಂಡ ಕಂಡವರ ಹತ್ತಿರ ಕೈ ಚಾಚಿದ್ದಾರೆ. ಸಾಲಕ್ಕಾಗಿ ಮೋರೆ ಹೋಗಿದ್ದಾರೆ.
ಇಂತಹ ನಾಟಿ ವ್ಯದ್ಯರಿಂದ ಅದೆಷ್ಟೋ ಬಡ ಕುಟುಂಬಗಳು ಮೋಸಹೋಗಿದ್ದಾರೆ.ಮುಗ್ದಜನರನ್ನು ಮೋಸ ಮಾಡುವ ಇಂತಹ ವ್ಯದ್ಯರನ್ನು ಬಿಟ್ಟು ಇಗಲಾದರು ಎಚ್ಚರಿಕೆಯಿಂದ ಇರಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!