Connect with us

ದಿನದ ಸುದ್ದಿ

ನಾಟಿ ವ್ಯದ್ಯನ ನ‌ಕರಾ ಟ್ರಿಟ್ಮೆಂಟ್ ;  ಇವನು ಡಮ್ಮಿ ಡಾಕ್ಟರ್… !

Published

on

ಸುದ್ದಿದಿನ,ವಿಶೇಷ : ವ್ಯದ್ಯೋ ನಾರಾಯಣ ಹರಿ‌ ಅಂತ ಡಾಕ್ಟರನ ಯಾಕ್ಕೆ ಕರೀತಿವಿ ಅಂದ್ರೆ, ದೇವರು ಬಿಟ್ರೆ ಆ ಸ್ಥಾನವನ್ನು ತುಂಬಬಲ್ಲ ಮತ್ತೊಂದು ಸ್ಥಾನವೇ ಈ ಡಾಕ್ಟರ್.ಅಂತಹ ನಾಮಕ್ಕೆ ಇಲ್ಲೊಬ್ಬ ಡಮ್ಮಿ ಡಾಕ್ಟರ್ ಕಳಂಕತಂದಿಟು ಮುದ್ದಾದ ಮಗುವಿನ ಜೀವನದಲ್ಲಿ ಮುಳ್ಳಾಗಿದ್ದಾನೆ. ಡಾಕ್ಟರ್ ಮಾಡಿದ ಕೆಲಸಕ್ಕೆ ಜೀವನ‌ ಪರೀಯಂತ ಹುಡುಗನ ‌ಕೈ ಇಲದಂತೆ ಮಾಡಿ ಅಂಗವಿಕಲನನಾಗಿ ಮಾಡಿದ್ದಾನೆ.

ಈ ಹುಡುಗನ ಹೆಸರು ಆದರ್ಶ. ನಾಟಿವ್ಯದ್ಯನು ಮಾಡ್ಡಿದ ಅವಾಂತರಗಳಿಂದ.ಜೀವನ ಪರಿಯಂತ ಕೈ ಕಳೆದುಕೊಂಡು ತನ್ನ ಆಸೆ ಆಕಾಂಕ್ಷೆ ಆದರ್ಶಗಳು‌ ಇನ್ನು ಮುಂದೆ ಯುವಕನ ಬಾಳಲ್ಲಿ ಕೇವಲ ಕೈ ಚೀಲದ ಕನಸುಗಳಂತಾಗಿದೆ.ತನ್ನ ಸ್ನೇಹಿತರ ಜೊತೆ ಆಟವಾಡಲು ಸಹ ಇವನಿಗೆ ಆಗುತ್ತಿಲ್ಲ.ಇವನ ತರ್ಲೆ ತುಟಾಂಟಗಳು ಹೆತ್ತವರಿಗೆ ದಿನೇ ‌ದಿನೇ‌ ಕ್ಷಿಣಿಸುತ್ತಿದೆ. ಕೇವಲ ನೆನಪುಗಳಾಗಿ ಕಾಡುತ್ತಿದೆ.ಇನ್ನು ಇವನ ಸ್ನೆಹೀತರಿಗಂತು ಇವನ್ನು ಕೈ ಕಳೆದುಕೊಂಡಿದು ಕಾಣದ ಕನಸಾಗಿದೆ.

ಶಾಲಾ ರಜಾದಿನಗಳಲ್ಲಿ ‌ಮಕ್ಕಳ ಆಟ, ತುಟಾಂಟ. ಗಲಾಟೆ,ಹೆತ್ತವರಿಗಂತು ಸಾಕ್ಕಪ‌ ಸಾಕ್ಕು ಈ ರಜಾ ದಿನಗಳು. ಯಾವಾಗ ಮುಗಿದು ಶಾಲೆ ಪ್ರಾರಂಭವಾಗುತ್ತೆ ಅನಿಸ್ಸಿರುತ್ತೆ. ಹೀಗೆ ಮನೆಯವರ ಕೈ ಗೆ ಸಿಗದೆ ಆಟವಾಡುತ್ತಿದ 8 ವರ್ಷದ ಬಾಲಕ‌ ಆದರ್ಶ ಕಾಲು ಜಾರಿ ಬಿಳುತ್ತಾನೆ. ಕೈ ಗೆ ಬಲವಾದ ಪೆಟ್ಟು ಬಿದಿರುವದರಿಂದ ಆದರ್ಶನನ್ನು ಲಿಂಗಸುಗೂರಿನ ಎಲಬು ಮತ್ತು ಕೀಲು‌ ತಜ್ಞ ಡಾ,ಹರ್ಷವರ್ಧನ ಹತ್ತಿರ ಚಕಿತ್ಸೆ ಕೊಡಿಸುತ್ತಾರೆ.ಯಾವುದೇ ಕಾರಣಕ್ಕು ಕೈಗೆ ಹಾಕ್ಕಿದ ಪಟ್ಟಿಯನ್ನು ಬಿಚ್ಚಬಾರದು ಅಂತಾ ಹೇಳಿರುತ್ತಾರೆ.

ನಕಲಿ ವೈದ್ಯನ ಕರಾಮತ್ತು

ಇನ್ನೇನು ರಜಾ ದಿನಗಳು ಮುಗ್ಗಿದು ಶಾಲೆ ಪ್ರಾರಂಭವಾಗುವ ದಿನ ಬಾಲಕ ಬೇಗ ಚೇತರಿಸಿಕೊಳ್ಳಲ್ಲಿ‌ ಅಂತಾ ಹೆತ್ತವರು ನೆರೆ ಹೊರೆಯರ ಮಾತು‌ಕೇಳಿ ದೇವದುರ್ಗ ತಾಲೂಕಿನ ಚೀಚೊಂಡಿ ಗ್ರಾಮದ ಪರಮಣ್ಣ ಬನಗುಂಡಿ ಎಂಬ ನಾಟಿ ವ್ಯದ್ಯನ‌ ಹತ್ತಿರ ಕರೆದುಕೊಂಡು ಹೊಗುತ್ತಾರೆ.
ಅಲ್ಲಿ ಕಾದಿತ್ತು ನೋಡಿ ಗಂಡಾತಂರ.

ಈ ಹುಡುಗನ‌ ಬಾಳಿನಲ್ಲಿ ಎಲ್ಲಿ ಅಡಗಿ ಕುತ್ತಿದನೋ ಈ ನಾಟಿ‌ ವ್ಯದ್ಯ ಪರಮಣ್ಣ .ಬ್ರಹ್ಮ‌ಬರೆದ ವಿಧಿಯನ್ನೆ ಬದಲಾಯಿಸಬಿಟ್ಟ .ಅದು ಯಾವ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದನೋ ಗೊತ್ತಿಲ್ಲ ಯಾವ ಫಾರಿನ ಟ್ರಿಟ್ಮೆಂಟ್ ಕೊಟ್ಟನೋ ಎನ್ನೋ…ಡಾಕ್ಟರ್ ಹಾಕ್ಕಿದ ಪ್ಲಾಸ್ಟರ್ ಬಿಚ್ಚಿ ಅವನ ನಾಟಿ‌ ಔಷಧಿ ಯನ್ನು ಹಾಕ್ಕಿ ಬೀಗಿಯಾಗಿ ಎಳೆದು ಕಟ್ಟಿದ್ದಾನೆ . 8 ವರ್ಷದ ಎಳೆಯ‌ ಕೈ ಗಳು‌ ಮರುದಿನವೇ ಅಡ್ಡ ಪರಿಣಾಮ ಬೀರಿ‌ ಏಕಾಏಕಿ ಕೈ ಗಳು ಬಾವು,ನೊವು ಕಾಣಿಸಿಕೊಂಡಿದೆ.ಹೆತ್ತವರಿಗೆ ಭಯ ಉಟಾಂಗಿ ನಾಟಿ ವ್ಯದ್ಯನನ್ನು ಸಂಪರ್ಕಿಸಿದ್ದಾರೆ.ನಾಟಿ ವೈದ್ಯ ನಾಟಿ ನಾಟಿಯಾಗಿ ಉತ್ತರಿಸಿದ್ದಾನೆ. ಯಾವುದೇ ಕಾರಣಕ್ಕು 21 ದಿನಗಳವರೆಗೆ ಬಿಚ್ಚಬೇಡಿ ಎಂದಿದ್ದಾನೆ‌.ಆದ್ದರೆ ಮಗುವಿಗೆ ನೋವು ತೀವ್ರವಾಗಿ ಕಾಣಿಸಿಕೊಂಡಿದೆ. ಇದನ್ನು ಕಂಡ ಹೆತ್ತವರು ಡಾ,ಹರ್ಷವರ್ಧನ ಹತ್ತಿರ ಕರೆದುಕೊಂಡು ಹೊಗಿದ್ದಾರೆ .ಅಲ್ಲಿ ಕಾದಿತ್ತು‌ ನೋಡಿ ನಾಟಿ ವ್ಯದ್ಯ ನ ತರಲೆ ಚಿಕಿತ್ಸೆ. ನಾಟಿ ವ್ಯದ್ಯ ನ‌ ಪಟ್ಟಿಯನ್ನು ಬಿಚ್ಚಿ ನೋಡಿದ ಡಾ,ಹರ್ಷವರ್ಧನಗೆ ಆ ದೃಶ್ಯವನ್ನು ಕಂಡು ಒಂದು ಕ್ಷಣ ಸಿಡಿಲು ಬಡ್ಡಿದಂತಾಗಿದೆ .ಯಾಕಂದ್ರೆ ಕೈ ಗಳು ರಕ್ತ ಚಲನೆ ಇಲ್ಲದೆ ಕಪ್ಪು ಬಣ್ಣಕ್ಕೆ ತಿರುಗಿ ಕೈ ನರಗಳು ಸತ್ತು ಹೋಗಿವೆ.ಇದರಿಂದ ಭಯ ಭಿತ್ತರಾಗಿ ಬಾಲಕನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಹಾರಾಷ್ಟ್ರ ದ ಮೀರಜ್ ಜೆ.ಎಸ್ ಕೆ ಖಾಸಗಿ ಆಸ್ಪತ್ರೆ ಗೆ ಕರೆದುಕೊಂಡು ಹೊಗಿದ್ದಾರೆ.

ಖಾಸಗಿ ಆಸ್ಪತ್ರೆ ಯಲ್ಲಿ ವೈದ್ಯರು ಹೇಳಿದಂತೆ ನಾಟಿ ಔಷಧಿಯ ಅಡ್ಡಪರಿಣಾಮದಿಂದ ಮಗುವಿನ ನರಗಳು ಸತ್ತುಹೊಗಿದೆ.ಹೀಗೆ ಬಿಟ್ಟರೆ ದೇಹದಲ್ಲಿ ಹರಡಿಕೊಳ್ಳುತದೆ.ಇದರಿಂದ ಮಗುವಿನ‌ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.ಕೈ ಬೇಕು ಅಂದ್ರೆ ಪ್ರಾಣ ಇರಲ್ಲ ಪ್ರಾಣ ಬೇಕು ಅಂದ್ರೆ ಕೈ ಕತ್ತರಿಸಲೆಬೇಕು ಎಂದಾಗ ಅನಿವಾರ್ಯವಾಗಿ ಮಗುವಿನ ಮೋಣ ಕೈ ಕೆಳಗೆ ಕತ್ತರಿಸಲಾಗುತ್ತದೆ.ಮೋದಲೆ ಬಡ ಕುಟುಂಬ ಸುಮಾರ ಎರಡು ಲಕ್ಷ ಕಳೆದುಕೊಂಡು ಸಾಲಗಾರರಾಗಿ ತಿರುಗುತ್ತಿದ್ದಾರೆ.ಇತ್ತಕಡೆ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದರು ಪ್ರಯೋಜನವಾಗಿಲ್ಲ. ವೈದ್ಯನಿಂದ ಯಾವುದೇ ಸಹಾಯವು ಇಲ್ಲ. ಘಟನೆ ನಡೆದ ದಿನದಿಂದ ನಾಟಿ ವ್ಯದ್ಯ ಪರಾರಿಯಾಗ್ಗಿದಾನೆ .ಇನ್ನು ಮಗನ ಚಿಕಿತ್ಸೆಗಾಗಿ ಹೆತ್ತವರು ಕಂಡ ಕಂಡವರ ಹತ್ತಿರ ಕೈ ಚಾಚಿದ್ದಾರೆ. ಸಾಲಕ್ಕಾಗಿ ಮೋರೆ ಹೋಗಿದ್ದಾರೆ.
ಇಂತಹ ನಾಟಿ ವ್ಯದ್ಯರಿಂದ ಅದೆಷ್ಟೋ ಬಡ ಕುಟುಂಬಗಳು ಮೋಸಹೋಗಿದ್ದಾರೆ.ಮುಗ್ದಜನರನ್ನು ಮೋಸ ಮಾಡುವ ಇಂತಹ ವ್ಯದ್ಯರನ್ನು ಬಿಟ್ಟು ಇಗಲಾದರು ಎಚ್ಚರಿಕೆಯಿಂದ ಇರಿ.

ಪತ್ರಕರ್ತ
ರಾಯಚೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2023-24 ನೇ ಸಾಲಿನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‍ಲೈನ್ (ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ 5 ನೇ ತರಗತಿಯಿಂದ 10 ನೇ ತರಗತಿಯವರೆಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಪಿ ಐಡಿಯೊಂದಿಗೆ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ ವಿಳಾಸ: https://shp.karnataka.gov.in ಇಲ್ಲಿ ಸಂದರ್ಶಿಸಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಗಳೂರು | ಸಿಡಿಲು ಬಡಿದು ಇಬ್ಬರು ರೈತರು ಸಾವು

Published

on

ಸುದ್ದಿದಿನ, ದಾವಣಗೆರೆ : ಸಿಡಿಲು ಬಡಿದು, ಇಬ್ಬರು ರೈತರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆಬಂದ ಕಾರಣ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಈ ದುರಂತ ಸಂಭವಿಸಿದೆ. ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಜಿಲ್ಲಾಡಳಿತ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ; ನಾಡಿದ್ದು ವಿಧ್ಯುಕ್ತ ಚಾಲನೆ

Published

on

ಸುದ್ದಿದಿನ, ಬೆಂಗಳೂರು : ಸರ್ಕಾರದ ಗ್ಯಾರಂಟಿ ಘೋಷಣೆಗಳಲ್ಲೊಂದಾದ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿದ್ದು ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಇದೇ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ.

ಈ ಯೋಜನೆಗೆ ರಾಜ್ಯಾದ್ಯಂತ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಜಿಲ್ಲೆಗಳಲ್ಲಿ ಯೋಜನೆಗೆ ಏಕಕಾಲಕ್ಕೆ ಚಾಲನೆ ನೀಡಲಿದ್ದು, ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲಾ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲಾ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು. ಇದರಿಂದ ಶೇಕಡ 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಸ್‌ಗಳಲ್ಲಿ ಶೇ. 50 ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ19 hours ago

ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2023-24 ನೇ ಸಾಲಿನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‍ಲೈನ್ (ರಾಜ್ಯ...

ದಿನದ ಸುದ್ದಿ20 hours ago

ಜಗಳೂರು | ಸಿಡಿಲು ಬಡಿದು ಇಬ್ಬರು ರೈತರು ಸಾವು

ಸುದ್ದಿದಿನ, ದಾವಣಗೆರೆ : ಸಿಡಿಲು ಬಡಿದು, ಇಬ್ಬರು ರೈತರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಜಮೀನಿನಲ್ಲಿ ಕೆಲಸ...

ದಿನದ ಸುದ್ದಿ1 day ago

ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ; ನಾಡಿದ್ದು ವಿಧ್ಯುಕ್ತ ಚಾಲನೆ

ಸುದ್ದಿದಿನ, ಬೆಂಗಳೂರು : ಸರ್ಕಾರದ ಗ್ಯಾರಂಟಿ ಘೋಷಣೆಗಳಲ್ಲೊಂದಾದ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿದ್ದು ವಿಧ್ಯುಕ್ತ...

ದಿನದ ಸುದ್ದಿ1 day ago

ಗೃಹಲಕ್ಷ್ಮಿ ಯೋಜನೆಗೆ 1 ಕೋಟಿಗೂ ಹೆಚ್ಚು ಅರ್ಜಿಗಳ ನಿರೀಕ್ಷೆ : ಸಚಿವ ಕೃಷ್ಣ ಬೈರೇಗೌಡ

ಸುದ್ದಿದಿನ, ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯಡಿ 1 ಕೋಟಿ 30 ಲಕ್ಷ ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ...

ದಿನದ ಸುದ್ದಿ2 days ago

ಶಿಷ್ಯವೇತನಕ್ಕೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ...

ದಿನದ ಸುದ್ದಿ2 days ago

ಗೃಹಜ್ಯೋತಿ ಆಗಸ್ಟ್ 1 ರಂದು ಜಾರಿಗೆ ಸಿದ್ಧತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ’ಗೃಹಜ್ಯೋತಿ’ ಯೋಜನೆ ಆಗಸ್ಟ್ 1 ರಂದು ಹಾಗೂ ಮನೆ ಯಜಮಾನಿಗೆ 2ಸಾವಿರ ರೂಪಾಯಿ ಅವರ ಖಾತೆಗೆ...

ದಿನದ ಸುದ್ದಿ3 days ago

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ...

ದಿನದ ಸುದ್ದಿ3 days ago

ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ...

ದಿನದ ಸುದ್ದಿ3 days ago

ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ...

ದಿನದ ಸುದ್ದಿ3 days ago

ವಿದ್ಯುತ್ ಬಳಕೆ ಶುಲ್ಕ ಹೆಚ್ಚಳವನ್ನು ಮುಂದೂಡಲು ಒತ್ತಾಯ

ಸುದ್ದಿದಿನ ಡೆಸ್ಕ್ : ಆರ್ಥಿಕತೆಯಲ್ಲಿ ಸಾಮಾನ್ಯ ಸ್ಥಿತಿ ಮರಳುವವರೆಗೆ ವಿದ್ಯುತ್ ಬಳಕೆ ಶುಲ್ಕ ಹೆಚ್ಚಳವನ್ನು ಮುಂದೂಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸರ್ಕಾರವನ್ನು ಒತ್ತಾಯಿಸಿದೆ. ಪ್ರಸ್ತುತ...

Trending